ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕತ್ತಲಿನಲಿ ನ್ಯಾಯ

ಸಾಯಬಣ್ಣ ಮಾದರ

Woman bank worker suffers burn injuries after acid attack in Ghaziabad

ಎಳೆಯ ಬಾರದೆಕ್ಕೆ
ಅವರ ಕರಳು ಬಳ್ಳಿಗಳನ್ನು
ಕ್ರೀಯಗೆ ಪ್ರತಿಕ್ರೀಯೇ ?
ಆಗುವದ್ಯಾವಾಗಿನ್ನು
ಎಷ್ಟು ದಿನವಂತೆ
ಕೂಗುವಿರಿ ದಿಕ್ಕಾರ
ಮೇಲಿನವರ ಕುರ್ಚಿಗಳಿಗೆ
ಕಿವಿ ಕುರುಡ
ಮನಿಷಾಗೆ ಸಿಗುವುದೇ
ಕತ್ತಲಿನಲ್ಲಿರುವ
ನ್ಯಾಯ ಬೆಳಕು !!

ಜೋಳದ ಹೊಲದ ದಂಟುಗಳೆ
ಕಣ್ಣೀರುಗೈದವು
ಯೋನಿಯಿಂದರಿದ ರಕ್ತ
ಮಡುಗಟ್ಟಿತ್ತಲ
ಕೂಗಲು ಬಾರದಂತೆ
ನಾಲಿಗೆ ಸೀಳಿ
ಅಟ್ಟಹಾಸ ಗೈದರಲ್ಲ
ಸಬಲರು
ಆಗಬೇಕಲ್ಲವೇ ಅವರಿಗೂ
ಆ ನೋವು

ಜಾತಿ ಬಲವಿದ್ದರೆ
ಮಾಡುವರು ಎನ್ಕೌಂಟರ್
ಸುಡುವರು ದಮನಿತರನ್ನು
ನಡುರಾತ್ರೀ ಹಗಲು !!

ನಾಟ್ಯದವರು ಬಸಿರಾದರು
ದೇಶದ ದೊರೆ
ಕುಣಿದಾಡುವನು ಹಿರಿ ಹಿರಿ ಹಿಗ್ಗಿ
ಬೆನ್ನು ಮೂಳೆ ಮುರಿದು
ಯೋನಿ ಹರಿದರು
ಇವರಿಗೆ
ಕನಿಕರಿಸದವನು !!

ಭಯ
ಭರವಸೆ ಕಳೆದುಕೊಂಡರೆ
ಹಾವೇ ಹಗ್ಗ
ಭಯ ಬುಗ್ಗೆಯ
ಚಿಲುಮೆ ಹುಟ್ಟಿಸಿ
ನ್ಯಾಯ ದೀಪಕ್ಕೆ
ಬತ್ತಿ ಹತ್ತಿಸಿ
ಕಣ್ಣಿಗೆ ಕಣ್ಣು ಕಳೆಯಲು
ಸಿದ್ದರಾಗ ಬೇಕಲ್ಲವೆ
ನಾವು !!

*********************************

About The Author

3 thoughts on “ಕತ್ತಲಿನಲಿ ನ್ಯಾಯ”

Leave a Reply

You cannot copy content of this page

Scroll to Top