ನಿಮ್ಮೊಂದಿಗೆ

ನಿಮ್ಮೊಂದಿಗೆ

ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ    ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ  ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ  ಮಾಲತಿ ಯವರವರೆಗು ಹರಡಿದ ವಿಶಾಲ […]

ಹಸಿವು

ಕವಿತೆ ಹಸಿವು  ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ  ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ  ಕರುಳು ಹಿಂಡುವ ಕಥನ  ಜಗದಿ ಹಸಿವಿನ ಮರಣ ಮೃದಂಗ  ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ  ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ  ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ  ಎಂಥಾ ವಿಚಿತ್ರ […]

ಮತ್ತೆ ಹುಟ್ಟಲಿ ದುರ್ಗಿ…

ಕವಿತೆ ಮತ್ತೆ ಹುಟ್ಟಲಿ ದುರ್ಗಿ… ಮಹಿಷನ ಪೂಜಿಸಿದರೇನಂತೆತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲಬ್ರಹ್ಮನಿಂದ ವರಪಡೆದರೇನಂತೆಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲಹುಣ್ಣಿಮೆಯೋ ಮಹಾಲಯವೋಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲಕೊನೆಗೆಮಹಿಳೆಯೋರ್ವಳ ರೋಷಕ್ಕೆಪುರುಷನೊಬ್ಬನ ಅಹಂಕಾರಕ್ಕೆಅಲಂಕಾರಿಕ ಅಂತ್ಯ…ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತುಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆಮಹಿಷಾಸುರನ ಪ್ರಾಣ ಹಾರಿತ್ತು…. ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?ಬಣ್ಣ,ವೇಷ, ವಾಸನೆಗಳ ಈಜಗ?ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆಮತ್ತೆ ಮತ್ತೆ ನಗ್ನವಾಗುತ್ತಲೇ ಇದೆಪುರುಷನೊಳಗಿನಮೃಗಮರಳಿ ಬಾ ದುರ್ಗಾಮಾತೆ …ರಕ್ತ ಬೀಜಾಸುರರಿವರುಅಬಲೆಯರ ಹುಡುಕುವರುಹೇಡಿಗಳಂತೆ ಹೊಂಚುವರು,ಒಬ್ಬಳ ಮೇಲೆ ಹಲವು ಹತ್ತು ಜನರುಕಾಮಾಂಧರಾಗಿ ಎರಗಿ ಭೋಗಿಸಿಸಾಯಿಸಿ,ಅಡಗುತ್ತ […]

ಇಲ್ಲೆ ಎಲ್ಲಾ..

ಕವಿತೆ ಇಲ್ಲೆ ಎಲ್ಲಾ.. ಜ್ಯೋತಿ ಡಿ.ಬೊಮ್ಮಾ ಬಿಡು ಮನವೆ ಕೊರಗುವದುನಿನಗಾರಿಲ್ಲ ಇಲ್ಲಿ ಆಪ್ತ ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರನಿನಗೆ ನೀನೆ ಆಗು ಪರಮಾಪ್ತ ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ ನೆಮ್ಮದಿಯ ಬೆಂಬತ್ತಿ ಓಡೋಡದಿರುದ್ಯಾನದಲ್ಲೆ ಅಡಗಿರುವದದು ಮರೆಯದಿರು ಕೋಪ ಅಸೂಯೆಗಳು ಚಿಗುರದಂತೆ ತಡೆಪ್ರೀತಿ ಕರುಣೆಗಳು ಹಂಚುತ್ತ ನಡೆ ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲತನ್ನ ತಾ ಅರಿತವನಿಗೆ ಇಲ್ಲೆ […]

ನಡುವೆ ಸುಳಿಯುವ ಆತ್ಮ!

ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ […]

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು […]

ಮರ ಕಡಿಯುವಾ ನೋಟ

ಅನುವಾದಿತ ಕವಿತೆ ಮರ ಕಡಿಯುವಾ ನೋಟ ಇಂಗ್ಲೀಷ್ ಮೂಲ: Clifford Dymont ಕನ್ನಡಕ್ಕೆ: ಗಣೇಶ್ ವಿ. ನೂರಾರು ವರುಷಗಳ ಹಿರಿದಾದ ಮರವನ್ನುಕಡಿಯುತಿಹ ಕಟುಕನನು ನೋಡುತ್ತ ನಿಂತೆಥಳಥಳನೆ ಹೊಳೆಯುವ ಆ ಕತ್ತಿಯ ಅಲಗುಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ ಗಡಗಡ ನಡುಗುವ ಮರದ ಬುಡದಿಂದಚಕ್ಕೆಗಳು ಚಿಮ್ಮಿದವು  ಸಕಲ ದಿಕ್ಕುಗಳಲಿಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿಮರವು ರೋದಿಸುತಲಿತ್ತು ಸಾವಿನಾ ಸಮಯದಲಿ ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತುಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆನೋಡನೋಡುತಿರುವಂತೆ ಬೆಳೆದಿದ್ದ ಆ ಮರವುಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು. ತೂಗಾಡುವಾ ಕತ್ತಿ […]

ನೆನಪಾಗುತ್ತಾರೆ

ಕವಿತೆ ನೆನಪಾಗುತ್ತಾರೆ ಡಾ.ಯ.ಮಾ.ಯಾಕೊಳ್ಳಿ ನೆನಪಾಗುತ್ತಾರೆಈ ಇವರುಬಿಸಿಲು ತಾವುಂಡು ಬೆಳದಿಂಗಳಬೆಳೆಯ ಬೆಳೆದವರುಕತ್ತಲೆಯ ಗಾಡಾಂಧಕಾರದೊಳಗೆಯುಬೆಳಕು ಪಂಜನು ಹಿಡಿದುಬೆಳಗ ಹಂಚಿದವರು ಕರುಣೆ ಪ್ರೀತಿ‌ ಮಾತ್ರಇಲ್ಲಿ ಬದುಕ ಉಳಿಸಬಹುದುಎಂದು‌ ಬಲವಾಗಿ ನಂಬಿಅದರ ಬೀಜವನೆ ಬಿತ್ತಿದವರುಅಂಗುಲಿಮಾಲನ ಕ್ರೂರ ಎದೆಯೊಳಗುಪ್ರೀತಿ ಅರಳಿಸಬಹುದೆಂದುತಿಳಿದವರು ವಸ್ತ್ರ ವಡವೆ ಅಧಿಕಾರ ಅಂತಸ್ತುಎಲ್ಲವನು ಧಿಕ್ಕರಿಸಿಮನುಷ್ಯತ್ವಕ್ಕಿಂತ‌ ಮಿಗಿಲಾದುದಿಲ್ಲವೆಂದವರು ನುಡಿಯಹದನ ಕಿಂತ ನಡೆಯ ಬೆಳಕಹರಡಿದವರು ನಮ್ಮ ನಡುವೆ ಎಲ್ಕವೂನಿಂತಂತೆನಿಸಿರುವಾಗಮುಚ್ಚಿದ ಬೀಗವ ತಗೆಯವಕೊಂಡಿಯಂತಿವರುಮತ್ತೆ‌ ಮತ್ತೆ ನೆನಪಾಗುತ್ತಾರೆ ಬಂಧಗಳನು ಒಗ್ಗೂಡಿಸುವಮಂತ್ರದಂಡದಂತೆ!ಮರೆಯದೆ ಹೋಗಬೇಕಿದೆಅಲ್ಲಿಗೆರಾಜ್ಯ ಬಿಟ್ಟವರ,ತುಂಡು‌ಬಟ್ಟೆ ತೊಟ್ಟವರಎಲ್ಲ ನಮ್ಮವನೆಂದವರಅಕ್ಷರದ ಬಲವಿಡಿದುಸಮಾನತೆಯಹೊತ್ತಗೆಯನಿತ್ತವರ ಬಳಿಗೆ…ಮತ್ತೆ‌ಮತ್ತೆ ನೆನಪಾಗುವಅವರದೆ ಆಸರೆಗೆ *************************** ಡಾ.ವೈ.ಎಂ.ಯಾಕೊಳ್ಳಿ

ಅಂಕಣ ಬರಹ  ಕಬ್ಬಿಗರ ಅಬ್ಬಿ  ನಿಮಗೆ ತಿಳಿಸಾರು ಗೊತ್ತೇ? ಅದೊಂದು ಕೋಣೆ, ರಸಾವಿಷ್ಕಾರದ ಕೋಣೆ ಅದು!. ಅದನ್ನು ಜನರು ಈ ಕೋಣೆಯನ್ನು ಮನೆ ಅಂತಲೇ ಕರೆಯೋದಕ್ಕೆ, ಬಹುಷಃ ಈ ಕೋಣೆಯ ತಾಯ್ತನವೇ ಕಾರಣ ಅನ್ಸುತ್ತೆ. ಮಗುವಿಗೆ ಅಮ್ಮ ಊಡುವ ಎದೆ ಹಾಲಿನ ಹಾಗೆಯೇ, ಈ ಕೋಣೆ ಮನೆ ಮಂದಿಗೆಲ್ಲ ಉಣಿಸುವುದು ಬದುಕು. ‘ಅಡುಗೆ ಮನೆ’ ಯಲ್ಲಿ ಜೀವಜಲ ಬಿಂದುವಾಗಿ ಹರಿಯುತ್ತೆ. ಹಸಿರು ತರಕಾರಿಗಳು ನೆಲಹಾಸಿನಲ್ಲಿ ತಣ್ಣಗೆ ಕಾಯುತ್ತವೆ. ನೆಲದೊಳಗೆ ಬೇರಿಳಿಸಿ ಪಿಷ್ಟಅಹಾರ ಸಂಗ್ರಹಿಸಿ ಬಲಿತ ಗಡ್ಡೆಗಳೂ ಜತೆಗೆ. […]

ಯಾರು ಹೊಣೆ ?

ಕಥೆ ಯಾರು ಹೊಣೆ ? ಎಂ.ಆರ್.ಅನಸೂಯ ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ  ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು  ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ  ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ   ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ […]

Back To Top