ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಈ ಹಿಂದೆಯೇ ಹೇಳಿದಂತೆ ತಪ್ಪುಗಳ ಲಿಸ್ಟ್ ಬಂದಾಗ ಅದನ್ನು ಸರಿಪಡಿಸುವುದು ನನಗೆ ತುಂಬಾ ಖುಷಿಯ ಕೆಲಸ ನಮ್ಮ ಪಾಲಿಸಿ ಸೇವಾ ವಿಭಾಗದಲ್ಲಿ ಸಂಭವಿಸಬಹುದಾದ ತಪ್ಪುಗಳ ಪಟ್ಟಿಗಳನ್ನು ಸರಿಪಡಿಸಿದ್ದಾಗಿತ್ತು ಕೆಲವೊಮ್ಮೆ ಪ್ರೀಮಿಯಂ ಗೆ ಹಣ ಅಡ್ಜಸ್ಟ್ ಮಾಡಲು ಸಾಧ್ಯವಾಗದೆ ಬಂದ ಹಣವನ್ನು ಡೆಪಾಸಿಟ್ ಅಂತ ಯಾವುದಕ್ಕೂ ಅಕೌಂಟ್ ಮಾಡದೆ ಇಟ್ಟು ಬಿಡುವ ವ್ಯವಸ್ಥೆ ಇತ್ತು .ಆ ರೀತಿ ಇಟ್ಟ ಡೆಪಾಸಿಟ್ ಗಳು ನಾನು ಪಾಲಿಸಿ ಸೇವಾ ವಿಭಾಗದಲ್ಲಿದ್ದಾಗ ಸ್ವಲ್ಪ ಹೆಚ್ಚಿನ ಸಂಖ್ಯೆ ಹಾಗೂ ಹೆಚ್ಚಿನ ಮೊತ್ತದಲ್ಲಿಯೇ ಇದ್ದವು. ಅದು ಏಕೆ ಆ ರೀತಿ ಪ್ರೀಮಿಯಂ  ಅಡ್ಜಸ್ಟ್ ಆಗಲಿಲ್ಲ ಎಂಬುದನ್ನು ಕಂಡುಕೊಂಡು, ಬೇಕಾದ ಕಡೆ ಪಾಲಿಸಿ ದಾರರ ಜೊತೆ ಪತ್ರ ವ್ಯವಹಾರ ಅಥವಾ ಫೋನ್ ನಲ್ಲಿ ಹೇಳಿ ಕಡಿಮೆ ಇದ್ದ ಮೊತ್ತ ಕಟ್ಟಿಸಿ ಅದನ್ನು ಸರಿ ಮಾಡಬೇಕಿತ್ತು. ಕೆಲವೊಮ್ಮೆ ಹೆಚ್ಚು ಹಣ ಉಳಿದುಕೊಳ್ಳುತ್ತಲೂ ಇತ್ತು .ಅವುಗಳನ್ನು ಸಹ ವಾಪಸ್ಸು ಮಾಡಬೇಕಿತ್ತು. ಆ ರೀತಿ ಹೆಚ್ಚುವರಿ ಇದ್ದ ಹಣ ನೂರು ರೂಪಾಯಿಗಿಂತ ಹೆಚ್ಚು ಇದ್ದಲ್ಲಿ ಚೆಕ್ ಮೂಲಕ ವಾಪಸ್ಸು ನೂರು ರೂಪಾಯಿಯ ಒಳಗೆ ಇದ್ದಲ್ಲಿ ಮನಿ ಆರ್ಡರ್ ಮೂಲಕ ಹಿಂದಿರುಗಿಸಬೇಕಿತ್ತು. ಒಂದಷ್ಟು ದಿನ ಪಟ್ಟು ಹಿಡಿದು ಆ ಕೆಲಸದ ಬಗ್ಗೆ ಗಮನ ಹರಿಸಿದ್ದರಿಂದ ಎಲ್ಲಾ ಕೇಸ್ ಗಳು ಇತ್ಯರ್ಥವಾಗಿ ಡೆಪಾಸಿಟ್ ಜೀರೋ ಅಂದರೆ ನಿಲ್ ಆಗಿ ಅದಕ್ಕೂ ಸಹ ನಮಗೆ ವಿಭಾಗಿಯ ಕಚೇರಿಯಿಂದ ಒಂದು ಪ್ರಮಾಣ ಪತ್ರ ಬಂದಿತ್ತು.

ಮತ್ತೊಂದು ಹೆಚ್ಚು ತಪ್ಪುಗಳಾಗುತ್ತಿದ್ದ ಕ್ಷೇತ್ರ ಎಂದರೆ ಪೆನ್ಷನ್.ಅನ್ಯುಯಿಟಿ ವಿಭಾಗ. ಅಲ್ಲಿ ಪಾಲಿಸಿಗಳ ಮಾಹಿತಿಗಳು ಕೆಲವೊಮ್ಮೆ ತಪ್ಪಾಗಿ ಫೀಡ್ ಆಗಿದ್ದರಿಂದ ಕೆಲವೊಂದು ಕಡೆ ತಾಳೆ ಆಗದೆ ಅವು ಎರರ್ ಪಟ್ಟಿಯಲ್ಲಿ ಬರುತ್ತಿತ್ತು . ಫೈಲ್ಗಳನ್ನು ತರಿಸಿ ಪ್ರೊಪೋಸಲ್ ನಲ್ಲಿ ಇದ್ದ ಹಾಗೆ ಎಲ್ಲಾ ಮಾಹಿತಿಗಳನ್ನು ತಿದ್ದಿ ಮಾಹಿತಿ ಪೂರ ಸರಿಯಾದ ಮೇಲೆ ಪೆನ್ಷನ್ ಸೆಟಲ್ ಮಾಡಲು ಆಗುತ್ತಿತ್ತು .ಆ ರೀತಿ 600ಕ್ಕೂ ಹೆಚ್ಚು  ಎರರ್ ಗಳು ಇದ್ದವು. ಈ ಕೆಲಸ ಪಾಲಿಸಿ ಸೇವಾ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ದಾವಾ ವಿಭಾಗಕ್ಕೆ ಸಂಬಂಧಿಸಿದ್ದು. ಆಗ ಆ ವಿಭಾಗದ ಅಧಿಕಾರಿ ಆಗಿದ್ದವರು ಎಸ್ ಆರ್ ಮುರಳಿ. ಈ ಹಿಂದೆ ನಾನು ವಿಭಾಗೀಯ ಕಚೇರಿಯಲ್ಲಿ ಇದ್ದಾಗ ನನ್ನ ಎಚ್ ಜಿ ಎ ಆಗಿದ್ದವರು. ಅವರು ಈ ವಿಷಯದಲ್ಲಿ ನನ್ನ ಸಹಕಾರ ಕೋರಿದಾಗ ನನಗೆ ಇಷ್ಟದ ಕೆಲಸವೂ ಆದ್ದರಿಂದ ಅವರೊಂದಿಗೆ ಸೇರಿ ಆ ಪಟ್ಟಿಯನ್ನು ಸಹ ಪೂರ್ತಿ ಸರಿ ಮಾಡಿದ್ದೆವು.

ಈ ಹಂತದಲ್ಲೇ ನಮ್ಮ ನಿಗಮದ ಕೆಲಸಗಳನ್ನು ಡಿಜಿಟೀಕರಣ ಮಾಡುವ ಯೋಜನೆ ಆರಂಭವಾಗಿದ್ದು. ಇದು ಸಹ ಒಂದು ಬೃಹತ್ ಯೋಜನೆ.  ಆದರೆ ಇಡೀ ನಿಗಮದ ಕಾರ್ಯ ವೈಖರಿಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಆಗಿತ್ತು ಇದರಿಂದ.

​LIC ಯಲ್ಲಿ ದಾಖಲೆಗಳ ಡಿಜಿಟಲೀಕರಣ ಮತ್ತು ಸ್ಕ್ಯಾನಿಂಗ್ ಯೋಜನೆ 2008 – 2010 ರ ಅವಧಿಯಲ್ಲಿ ದೇಶಾದ್ಯಂತ ಹಂತ-ಹಂತವಾಗಿ ಪ್ರಾರಂಭವಾಯಿತು.
​ಪಾಲಿಸಿ ದಾಖಲೆಗಳನ್ನು ಕಾಗದದ ರೂಪದಿಂದ ಡಿಜಿಟಲ್ ರೂಪಕ್ಕೆ ಬದಲಾಯಿಸಲು EDMS (Enterprise Document Management System) ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು.

ಮೊದಲನೆಯ ಹಂತ ದಾಖಲೆಗಳ ವರ್ಗಿಕರಣ ಮತ್ತು ಸಿದ್ಧತೆ ಶಾಖೆಗಳಲ್ಲಿ ಇರುವ ಹಳೆಯ ಪಾಲಿಸಿ ಫೈಲ್ ಗಳು ಲೈನ್ ದಾಖಲೆಗಳು ಮತ್ತು ಹೊಸ ಪ್ರಪೋಸಲ್ ಫಾರಂ ಗಳನ್ನು ವರ್ಗೀಕರಿಸಿ ಪಿನ್ ಅಥವಾ ಟ್ಯಾಗ್ ತೆಗೆದು ಸ್ಕ್ಯಾನಿಂಗ್ ಗೆ ಸಿದ್ಧಪಡಿಸಲಾಯಿತು.

ಎರಡನೆಯ ಹಂತದಲ್ಲಿ ಇಡಿಎಂಎಸ್(EDMS)   ಪೋರ್ಟಲ್ ಮೂಲಕ ಸ್ಕ್ಯಾನಿಂಗ್ ವಿಶೇಷ ಹಾಯ್ ಸ್ಪೀಡ್ ಡಾಕ್ಯುಮೆಂಟ್ ಸ್ಕ್ಯಾನರ್ ಗಳನ್ನು ಬಳಸಿ ಪಾಲಿಸಿ ಪತ್ರಗಳು ವೈದ್ಯಕೀಯ ವರದಿಗಳು ವಯಸ್ಸಿನ ದಾಖಲೆ ಮತ್ತು ಕೆ ವೈ ಸಿ ಪತ್ರಗಳನ್ನು ಇ ಡಿ ಎಂ ಎಸ್ ತಂತ್ರಾಂಶಕ್ಕೆ ಸ್ಕ್ಯಾನ್ ಮಾಡಲಾಯಿತು.

ಮೂರನೆಯ ಹಂತದಲ್ಲಿ ಇಂಡಾಕ್ಸಿಂಗ್ ಮತ್ತು ಪರಿಶೀಲನೆ ಪ್ರತಿ ಸ್ಕ್ಯಾನ್ ಮಾಡಿದ ದಾಖಲೆಗೂ ಸೂಕ್ತ ಪಾಲಿಸಿ ಸಂಖ್ಯೆ ಮತ್ತು ದಾಖಲೆಯ ಪ್ರಕಾರವನ್ನು ಟ್ಯಾಗ್ ಮಾಡಿ ಡೇಟಾ ಸರಿಯಾಗಿದೆಯೇ ಎಂದು ತಾಳೆ ನೋಡಲಾಯಿತು.

ನಾಲ್ಕನೆಯ ಹಂತದಲ್ಲಿ ಕೇಂದ್ರೀಕೃತ ಸರ್ವರ್ ನಲ್ಲಿ ಸಂಗ್ರಹಣೆ ಮಾಡಲಾಯಿತು ಆದ ದಾಖಲೆಗಳನ್ನು ನಿಗಮದ ಕೇಂದ್ರೀಕೃತ ಭದ್ರತಾ ಸರ್ವರ್ ನಲ್ಲಿ ಭದ್ರವಾಗಿ ಸಂಗ್ರಹಿಸಲಾಯಿತು ಇದರಿಂದಾಗಿ ಯಾವುದೇ ಶಾಖೆಯಿಂದ ಸಿಬ್ಬಂದಿ ಕ್ಷಣಾರ್ಧದಲ್ಲಿ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಾಯಿತು.

ಇದರಿಂದಾದ ಮುಖ್ಯ ಪ್ರಯೋಜನಗಳು:
​ಸೇವೆಗಳ ವೇಗ: ಪಾಲಿಸಿ ಸಾಲ (Policy Loan), ಸರ್ವಿಸ್ಸಿಂಗ್, ಮತ್ತು ಕ್ಲೈಮ್‌ಗಳ (Claim Settlement) ಪ್ರಕ್ರಿಯೆ ಅತ್ಯಂತ ವೇಗವಾಗಿ ಪೂರ್ಣಗೊಳ್ಳಲು ನೆರವಾಯಿತು.
​ದಾಖಲೆಗಳ ಭದ್ರತೆ: ಹಳೆಯ ಕಾಗದದ ಫೈಲ್‌ಗಳು ಹಾಳಾಗುವುದು ಅಥವಾ ಕಳೆದುಹೋಗುವ ಅಪಾಯ ತಪ್ಪಿತು.
​Any Branch Servicing: ಗ್ರಾಹಕರು ದೇಶದ ಯಾವುದೇ LIC ಶಾಖೆಗೆ ಹೋದರೂ ಅವರ ಪಾಲಿಸಿ ದಾಖಲೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ತಕ್ಷಣ ಪರಿಶೀಲಿಸಲು ಸಾಧ್ಯವಾಯಿತು.
​ಪ್ರಸ್ತುತ ಹೊಸ ಪ್ರಪೋಸಲ್ ಫಾರ್ಮ್‌ಗಳು ಮತ್ತು ದಾಖಲೆಗಳನ್ನು e-KYC ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯ ಮೂಲಕ ನೇರವಾಗಿ ಡಿಜಿಟಲ್ ರೂಪದಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ.

ಇದೊಂದು ಬೃಹತ್ ಯೋಜನೆ ಎಂದು ಮೊದಲೇ ಹೇಳಿದ್ದೆ. ಸಾವಿರಗಳ ಗಟ್ಟಲೆ ಕೆಲವೊಂದು ದೊಡ್ಡ ಶಾಖೆಗಳಲ್ಲಿ ಲಕ್ಷಗಟ್ಟಲೆ ಇರುವ ದಾಖಲೆಗಳನ್ನು ಈ ರೀತಿ ಸ್ಕ್ಯಾನಿಂಗ್ ಗೆ ಸಿದ್ಧ ಮಾಡುವ ಕೆಲಸ ಶಾಖೆಗಳಿಗೆ. ಆದರೆ ಅದಕ್ಕೆಂದು ಹೆಚ್ಚುವರಿ ಸಿಬ್ಬಂದಿಯನ್ನೇನು ಕೊಟ್ಟಿರಲಿಲ್ಲ. ಇರುವ ಸಿಬ್ಬಂದಿಗಳನ್ನೇ ಪಾನಲ್ ತರಹ ಮಾಡಿ ಕೆಲಸಕ್ಕೆ ನಿಯೋಜಿಸಿ ತುಂಬಾ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಲಾಯಿತು. ಈ ಸಮಯದಲ್ಲಿ ನಮಗೆ ಇದ್ದ ಅಧಿಕಾರಿ ಹಂಸಿನಿ ಎನ್ನುವವರು.  ಇದನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದರು ಎಂದೇ ಹೇಳಬಹುದು.

ಆದರೆ ಮೊದ-ಮೊದಲು ಆರಂಭಿಕ ತೊಂದರೆಗಳು ಬಹಳಷ್ಟು ಬಂದವು ಕೆಲವೊಂದು ಡಾಕೆಟ್ ಗಳು ಸಿಗುತ್ತಿರಲಿಲ್ಲ.  ಇಡಿಎಂಎಸ್ ಇಮೇಜ್ ಸಹ ಇರುತ್ತಿರಲಿಲ್ಲ. ಪಾಲಿಸಿ ಸೇವೆಗಾಗಿ ಬಂದ ಪಾಲಿಸಿದಾರರಿಗೆ ಸಮರ್ಪಕ ಕಾರಣ ನೀಡಲು ಆಗುತ್ತಿರಲಿಲ್ಲ ಆದರೆ ಇವೆಲ್ಲ ಕೆಲ ದಿನಗಳು ಮಾತ್ರ. ನಂತರ ಇದು ತುಂಬಾ ಪ್ರಾಯೋಗಿಕವಾಗಿ ಅನುಕೂಲಕ್ಕೆ ಬಂತು. ಈಗಂತೂ ದೇಶದ ಯಾವ ಮೂಲೆಯಲ್ಲಿ ಪಾಲಿಸಿ ಸೇವೆ ನಡೆಯುತ್ತಿದ್ದರೂ ಬೇರೆ ಯಾವುದೇ ಶಾಖೆಯಲ್ಲಿ ಪ್ರೀಮಿಯಂ ಕಟ್ಟುವುದು ಸಾಲ ತೆಗೆದುಕೊಳ್ಳುವುದು ನಾಮಿನಿ ಬದಲಾಯಿಸುವುದು ಕೆಲವೊಂದು ಸೀಮಿತ ಪಾಲಿಸಿಗಳಿಗೆ ದಾವಾ ಮೊತ್ತವನ್ನು ಪಡೆಯುವುದು ಸಹ ಸಾಧ್ಯವಾಗುತ್ತಿದೆ.

ಇದಿಷ್ಟು ಕಚೇರಿಯ ಒಳಗಿನ ವಿಷಯಗಳು. ಆದರೆ ಇದೇ ಅವಧಿಯಲ್ಲಿ ನಾನು ಮತ್ತೊಮ್ಮೆ ಹೈದರಾಬಾದ್ ನ ತರಬೇತಿಗೆ ಹೋಗಿ ಬಂದಿದ್ದು. ವಿಭಾಗಿಯ ಕಚೇರಿಯ ನಮ್ಮದೇ ಕಾರ್ಮಿಕ ಸಂಘದ ಮಂಜುಳಾ ಮತ್ತು ಇನ್ನೊಬ್ಬ  ಸ್ಟೆನೋಗ್ರಾಫರ್ ಮಂಜುಳಾ ಜೊತೆಗೆ ನನ್ನನ್ನು ತರಬೇತಿಗೆ ಹಾಕಿದ್ದರು. ಒಳ್ಳೆಯ ಕಂಪನಿ ತುಂಬಾ ಚೆನ್ನಾಗಿ ಇತ್ತು. ಈ ವೇಳೆಗೆ ತರಬೇತಿಯ ಅವಧಿಯನ್ನು ಮೂರು ದಿನಗಳಿಗೆ ಇಳಿಸಿದ್ದರು.  ಆಗ ಮೈಸೂರಿನಿಂದ ನೇರ ರೈಲು ಇರಲಿಲ್ಲ ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಇದ್ದದ್ದು ಬೆಳಿಗ್ಗೆ ಹನ್ನೆರಡು ಗಂಟೆಗೆ ಹೊರಟು ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಅಲ್ಲಿ ರಾಮಕೃಷ್ಣ ಹೋಟೆಲ್ ನಲ್ಲಿ ಊಟ ಮಾಡಿ ಯಾವುದೋ ಒಂದು ಪುಟ್ಟ ಮಾಲ್ ನಲ್ಲಿ ಸುತ್ತಾಡಿ ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲದೆ ಒಂದು ದಿನ ಮುಂಚೆ ಹೋಗುವ ಅನುಕೂಲ ಇರಲಿಲ್ಲ. ಬೆಳಗ್ಗೆ ಹೋದ ತಕ್ಷಣವೇ ತರಬೇತಿ ಆರಂಭವಾಗಿತ್ತು ಹಾಗೂ ನಾಲ್ಕನೆಯ ದಿನ ತರಬೇತಿ ಮುಗಿದ ತಕ್ಷಣವೇ ಮೈಸೂರಿನ ರೈಲು ಹತ್ತಬೇಕಿತ್ತು ಹಾಗಾಗಿ ಬಹಳಷ್ಟು ಜಾಗಗಳನ್ನು ನೋಡಲಿಲ್ಲ. ಬೆಳಿಗ್ಗೆ ಬೇಗ ಎದ್ದು ತರಬೇತಿ ಆರಂಭವಾಗುವ ಮೊದಲೇ ಬಿರ್ಲಾ ಮಂದಿರ ಅನ್ನು ನೋಡಿಕೊಂಡು ಬಂದಿದ್ದೆವು. ಇನ್ನುಳಿದ ಮೂರು ದಿನ ಬೇಗಂ ಪೇಟ್ ಚಾರ್ಮಿನಾರ್ ಇಲ್ಲೆಲ್ಲ ಸುತ್ತಿ ಒಂದಷ್ಟು ಶಾಪಿಂಗ್ ಮಾಡಿದ್ದು ಅಷ್ಟೇ. ಆ ಬಾರಿ ನಾನೇನು ಹೆಚ್ಚು ಖರೀದಿಸಲಿಲ್ಲ ಯಾಕೋ ಏನೋ ಬೇಡ ಎನಿಸಿತ್ತು ಆಗ.

ಮತ್ತೊಂದು ಮುಖ್ಯವಾದ ಘಟನೆ ನಡೆದದ್ದು ಅಂದರೆ ಆಫೀಸಿನ ಪಕ್ಕದ ಬೀದಿಯಲ್ಲಿ ಒಂದು ಸಂಗೀತ ಶಾಲೆ ಆರಂಭವಾದ್ದು. ಒಂದು ದಿನ ಬೋರ್ಡ್ ನೋಡಿದ್ದೆ. ಅಲ್ಲಿ ಹೋಗಿ ದೇವರನಾಮ ಕಲಿಯುವ ಆಸೆ ನನಗೆ ಗೆಳತಿಯರಿಗೆ ಹೇಳಿದಾಗ ಒಂದು ಐದು ಜನ ತಾವೂ ಕಲಿಯಲು ಸಿದ್ದರಾದರು. ವಾರದಲ್ಲಿ ಎರಡು ದಿನ ಸಂಜೆ ಆಫೀಸ್ ಮುಗಿದ ನಂತರ ಅಲ್ಲಿ ಹೋಗಿ ಹೇಳಿಸಿಕೊಂಡು ಹೋಗುವುದು ಎಂದು ನಿರ್ಧಾರವಾಯಿತು. ಒಂದಷ್ಟು ಹಾಡುಗಳನ್ನು ಕಲಿತೂ ಆಯಿತು. ಅಷ್ಟರಲ್ಲಿ ನನ್ನ ಸಂಗೀತ ಕಲಿಯುವ ಚಿಕ್ಕಂದಿನ ಆಸೆಗೆ ಕೊಂಬು ಬಂದಿತ್ತು. ಸಂಗೀತ ಟೀಚರ್ ಅಂಬಿಕಾ ಅವರು ಈಗಲೂ ಕಲಿಯಬಹುದು ಎಂದು ಪ್ರೋತ್ಸಾಹ ಕೊಟ್ಟಿದ್ದರಿಂದ ಶಾಸ್ತ್ರೀಯ ಸಂಗೀತ ಕ್ಲಾಸಿಗೆ ನಾನು ಮತ್ತು ಗೆಳತಿ ವೈದೇಹಿ ಸೇರಿಕೊಂಡೆವು. ಅದೆಷ್ಟುಓ ದಿನ ಆದ್ಮೇಲೆ ಗೆಳತಿಯರು ಬಿಟ್ಟು ದೇವರನಾಮದ ಕ್ಲಾಸ್ ಕಥೆ ಮುಗಿಯಿತು. ಆದರೆ ನಾನು ಮತ್ತು ವೈದೇಹಿ ಶಾಸ್ತ್ರೀಯ ಸಂಗೀತದ ಕ್ಲಾಸ್ಗೆ ನಿಯಮಿತವಾಗಿ ಹೋಗುತ್ತಿದ್ದೆವು.

ಈ ನಡುವೆ ಮೈಸೂರು ಸಿಲ್ಕ್ ಫ್ಯಾಕ್ಟರಿಯವರು ಹಾಗೂ ಚಾಮುಂಡಿ ಸಿಲ್ಕ್ ಫ್ಯಾಕ್ಟರಿ ಅವರು ನಮ್ಮ ಶಾಖೆಯ ಆವರಣದಲ್ಲಿ ಸ್ಟಾಲ್ ಹಾಕಿದ್ದು ಮತ್ತು ಕಂತಿನಲ್ಲಿ ಸೀರೆ ಕೊಳ್ಳಲು ಅನುವು ಮಾಡಿ ಕೊಟ್ಟಿದ್ದು ಒಂದು ವಿಶೇಷ ಸಂಗತಿ. ನಮ್ಮದೇ ಕಟ್ಟಡದಲ್ಲಿ ಕೆಳಗಡೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವಲಯ ಕಛೇರಿ ಇತ್ತು ಹಾಗೂ ನಮ್ಮ ಮೇಲಿನ ಎರಡನೆಯ ಫ್ಲೋರ್ ನಲ್ಲಿ ರಾಜ್ಯ ವಿಮಾ ಘಟಕ ಹಾಗೂ ಹಿಂದುಳಿದ ವರ್ಗದವರ ಕಚೇರಿ ಇತ್ತು ಎಲ್ಲಾ ಸಿಬ್ಬಂದಿಗಳಿಗೂ ಇದರಿಂದ ಅನುಕೂಲವಾಯಿತು. ಆ ಸಂಸ್ಥೆಗಳವರ ಸೇಲ್ ಸಹ ಚೆನ್ನಾಗಿ ಆಯಿತು . ಹಾಗೆಲ್ಲ ಕರೆದು ಕರೆದು ಕಂತಿನಲ್ಲಿ ಕೊಟ್ಟು ನಮ್ಮ ಕಚೇರಿಗೆ ಬಂದು ಸ್ಟಾಲ್ ಹಾಕುತ್ತಿದ್ದ ಮೈಸೂರು ಸಿಲ್ಕ್ ನ ಉತ್ಪಾದನೆ ಈಗ ಬಾರಿ ಇಳಿಮುಖವಾಗಿದ್ದು ಕೊಳ್ಳುತ್ತೇನೆ ಎಂದರೂ ಸಹ ಸೀರೆಗಳು ಸಿಗುತ್ತಿಲ್ಲ .ಎಂತಹ ವಿಪರ್ಯಾಸ ನೋಡಿ. ಅದರ ಬೆಲೆಗಳು ಮುಗಿಲೆತ್ತರ ಆದರೂ ಕೊಳ್ಳಲು ಜನ ಮುಗಿ ಬೀಳುತ್ತಾರೆ. ಆದರೆ ಸಮರ್ಪಕವಾದ ವ್ಯವಸ್ಥೆಯೇ ಇಲ್ಲ.    

ಅಷ್ಟರಲ್ಲಿ ಮತ್ತೊಂದು ಕುತೂಹಲಕಾರಿ ಕೆಲಸ ನನ್ನ ಪಾಲಿಗೆ. ಏನದು? ಮುಂದಿನ ವಾರ ತಿಳಿದುಕೊಳ್ಳೋಣ.      


About The Author

Leave a Reply

You cannot copy content of this page

Scroll to Top