ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತೋರಣಕೆ ಮಾವು ಬೇವು ಬೇಕು
ಇಂದು ಬೆಳಿಗ್ಗೆ ನನ್ನವಳ ಆಜ್ಞೆ
ಹುಡುಕುತ್ತ ಹೊರಟೆ ಕಾಂಕ್ರಿಟು
ಕಾಡಿನಲಿ ಸಿಮೆಂಟ್ ರಸ್ತೆ
ಎಂದೋ ಒಮ್ಮೆ ಇಲ್ಲಿ
ಅವುಗಳನ್ನು ನೋಡಿದ ನೆನಪು
ಗಡ ಬಡಿಸಿ ಹೋದೆ ಸ್ಥಳಕ್ಕೆ
ಮರಗಳು ಧರೆಗೆ ಉರುಳಿದ್ದವು
ಅಲ್ಲಿ ಗುಡಿ ಮಸಿದೆ ಕಟ್ಟುತಿದ್ದರು
ಬಡಿಗ ಕೊಂಬೆ ಕೊರೆಯುತ್ತಿದ್ದ
ನನಗೆ ಕಸಿವಿಸಿ ಸಂಕಟ
ಮರಗಳು ಅಳಲಿಲ್ಲ
ಮರದಲ್ಲಿನ ದೇವರ ಕೊಂದು
ಕಲ್ಲು ಗೋಡೆಯಲ್ಲಿ ಹುಡುಕುವರು
ಸುಡು ಸುಡು ಬಿಸಿಲು
ಬೆಂಕಿ ಬೇಗೆ ತಾಪ
ಅಂದು ಈ ಮರಗಳ ಕೆಳಗೆ
ತಂಪು ಮಜ್ಜಿಗೆ ಕುಡಿದ ನೆನಪು
ಅಲ್ಲಿ ಒಬ್ಬ ಬೇವು ಮಾವು
ತಪ್ಪಲು ಮಾರುತ್ತಿದ್ದ
ತೂಕ ಮಾಡಿ ಎಲೆ ಎಣಿಸಿ
ಕೊಂಡು ಮನೆಗೆ ಬಂದೆ
ದೊಡ್ಡ ಶಹರ ದಡ್ಡ ಜನರು
ಯುಗಾದಿ ದೀಪಾವಳಿಯಲ್ಲಿ
ಗಿಡ ಮರಗಳ ನೆನಪು
ನನ್ನ ದೀರ್ಘ ಆಯುಷ್ಯಕ್ಕೆ
ನನ್ನವಳು ವರ್ಷಕೊಮ್ಮೆ
ಹುಡುಕಿ ಅರಳಿ ಮರಕೆ
ಸುತ್ತು ಹೊಡೆಯುತ್ತಾಳೆ
ಕೊನೆಗೂ ಬೇವು ಮಾವು
ಸಿಕ್ಕ ಸಂತಸ ನೆಮ್ಮದಿ
ಸಂಭ್ರಮದ ಯುಗಾದಿ


About The Author

10 thoughts on “ಯುಗಾದಿ ವಿಶೇಷ”

  1. ಯುಗಾದಿಯ ಸಡಗರದಲ್ಲಿ … ಬೇವು -ಮಾವನ್ನು ಸವಿಯುವ ತಯಾರಿಯ ನಡುವೆ
    ವಾಸ್ತವದ ಚಿತ್ರಣವನ್ನು ಮೂಡಿಸಿದ್ದೀರಿ… ಸರ್

    ಸುಶಿ

    1. ಗಿಡ ಮರಗಳ ಪೋಷಿಸಿದರೆ , ಅವು ನಮ್ಮ ರಕ್ಷಣೆ ಮಾಡುತ್ತವೆ.

  2. ಎಷ್ಟು ಸುಂದರ ಕಾಳಜಿ ಸೃಷ್ಟಿಯ ರಕ್ಷಣೆ ಕಾಡು ಸಸ್ಯ ವಿನಾಶ

  3. ನಿಜ ಗಿಡಗಳೆಲ್ಲ ನಾಶ,
    ಬೆವು ಮಾವು ….. ಆರೋಗ್ಯಕ್ಕೆ ಒಳ್ಳೆಯದು….

    ಅಕ್ಕಮಹಾದೇವಿ

  4. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅತ್ಯಂತ ಆಪ್ತವಾದ ಕವನ ಸರ್

  5. ಯುಗದ ಆದಿಯ ನೈ್ಜ ಚಿತ್ರಣ.ಬಹಳ
    ಮುಂದುವರೆದು ಏನು ಮಾಡಿದ್ದವೆ.ತಂತ್ರಜ್ಞಾನದ ಆವಿಷ್ಕಾರದ ಅನಾಹುತದ ನಡುವೆ ನೈ್ಜ ಉಸಿರಿಲ್ಲಾ.ನೈಜ ಪರಿಸರವಿಲ್ಲಾ.ಇವುಗಳಲ್ಲಿ ನಮ್ಮ.ಸಂತಸ ಸಡಗರ.ಸಂಭ್ರಮ. ನವೋಲ್ಲಸ
    ಕ್ಷಣಗಳ ಅನಾವಣವೆ ಕವಿ ಸಂವೇದನೆ.
    ಡಾ.ಕಸ್ತೂರಿ ದಳವಾಯಿ. ಗದಗ

Leave a Reply

You cannot copy content of this page

Scroll to Top