ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಜುಗಲ್ಬಂಧಿ

ಬುದ್ದನ ಧಾಷ್ಟ್ರ್ಯದ ನುಡಿಕೇಳಿ
ಜುಗಲ್ಬಂದಿಗಿಳಿದೆ

ಪ್ರಶ್ನಿಸಿದೆ…
ನಿತ್ಯ ನರಳಾಟದ ವಾರ್ಧಕ್ಯ
ಸ್ವರವನಾಲಿಸಿ
ಥೂ…ಪೀಡೆ …..!
ಉಗಿದಿದ್ದೇವೆ..
ತೆಗಳಿದ್ದೇವೆ…

ಬುದ್ದ ನಸುನಕ್ಕ…
ದುರ್ಮಾರ್ಗಿಗಳ
ದುಃಖಕ್ಕೂ ಬೆಲೆನೀಡು
ಸತ್ವವನರಿವ ತತ್ವಬೋಧಿಸಿ
ಜಗವ ಸುತ್ತೊಮ್ಮೆ…

ಕಲ್ಮಷದ ಮನಸುಗಳು
ಪಾಚಿಗಟ್ಟಿವೆ…!
ಆಸೆ,ಮೋಹಗಳನು
ಸನ್ಮಾರ್ಗದ ಪೀನಾಯಿಲ್
ಹಾಕಿ ತೊಳೆಯೋ
ಎಂದರುಹಿರಿದ….

ಮೋಹಾಪಾಶಕ್ಕೆ ಒಳಗಾಗಿ
ಜೇಡರ ಬಲೆಯಲ್ಲಿ
ಸಿಲುಕಿ ನರಳಾಡುವ
ತಿಲದ ಸುಖವಿದಷ್ಟೆ…

ಹಳಸಾದ
ಮನಗಳ ತಿಕ್ಕಿ
ತೊಳೆವ ಕಾರ್ಯ
ಮಾಡಲೆಂದೆ
ಹೊರಟಿದ್ದೇನೆ
ಅರ್ಧ ರಾತ್ರಿಯಲಿ….!

ನಾನೆಂದೆ…
ಈ ಮನಗಳು
ಬದಲಾಗುವುದೇ….?
ಈ ಜಗ ಬದಲಾಗುವುದೇ…?
ಇದೆ ಚಿಂತೆಯಲ್ಲಿ
ಅರವತ್ತು ವಸಂತಗಳನ್ನು
ಜುಗಲ್ಬಂಧಿಯಲ್ಲಿ
ಕಳೆದಿದ್ದೇನೆ
ಉತ್ತರ ಮಾತ್ರ
ಅಗೋಚರವಾಗಿದೆ…


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top