Category: ಕಾವ್ಯಯಾನ

ಕಾವ್ಯಯಾನ

ಸುರೇಶ ತಂಗೋಡ-ಹಸ್ತಾಂತರ…

ಕಾವ್ಯ ಸಂಗಾತಿ ಸುರೇಶ ತಂಗೋಡ ಹಸ್ತಾಂತರ ಕಂದ ಮಲಗಿರುವಾಗಲೇಕಣ್ಮರೆಯಾಗುವಧಾವಂತದ ಬದುಕಿನಲಿಅವರಪ್ಪನ ಪ್ರೀತಿ ಸಿಗದ ಮಗುವಿಗೆತಂದೆಯ ಪ್ರೀತಿಯ ನೀಡು ಆತ್ಮಸಖಿ. ತಾಯಿಯೊಟ್ಟಿಗೆ ತಂದೆಯಾಗಿಅವನ ಬೇಕು-ಬೇಡಿಕೆಗಳನ್ನುಪೂರೈಸು.ಅವನಿಗೆ ಮಾತ್ರ ಅಪ್ಪನ ನೆನಪಾಗದಂತೆನಲಿಯುವಂತೆ ಮಾಡು. ಪಾಲಕರ ಸಭೆಗೆ ನೀನೆ ಹೋಗುತಂದೆ ಬಂದಿಲ್ಲವೆಂಬಬೇಜಾರು ಅವನಿಗಾಗದಂತೆನೋಡಿಕೊ.ಹೊಡೆದು-ಬಡಿದು ಬುದ್ಧಿ ಹೇಳದಿರುಮಾತಿನಲ್ಲಿ ಮನವರಿಕೆ ಮಾಡಿಸು. ತಂದೆಯ ಕೆಲಸದ ಬಗ್ಗೆಪೂರ್ತಿ ಏನನ್ನೂ ಹೇಳದಿರು…ಅವನದೀಗ ಬಾಲ್ಯ .ಬಾಲ್ಯದಿ ಬದುಕಲು ಬಿಡು.ಅದಕ್ಕೆ ಇದೋ ಮಗನ ಮೇಲಿನ ತಂದೆಯಜವಾಬ್ದಾರಿಯನ್ನು ನಿನಗೆ .ಹಸ್ತಾಂತರಿಸುತ್ತಿದ್ದೇನೆ ಹರ್ಷದಿಒಪ್ಪಿಸಿಕೊ ಸಂಗಾತಿ. ಸುರೇಶ ತಂಗೋಡ

Back To Top