Category: ಕಾವ್ಯಯಾನ

ಕಾವ್ಯಯಾನ

ಪಡಸಾಲೆ

ಕವಿತೆ ಪಡಸಾಲೆ ಮಂಜೇಶ್ ದೇವಗಳ್ಳಿ ಹಟ್ಟಿ ಮುಂದೆ ಹಜ್ಜಾರದಗಲ ಸೂರಡಿ ನೆಲೆಕಂದಯ್ಯನ ಬಳಗ ಬೆರೆತು ಬೆಳೆದ ಜಗ್ಗುಲಿಮನೆಯೊಡೆಯಗೆ ನೆರಳಾಗಿ ತುಸು ನೆಮ್ಮದಿನೆರೆಹೊರೆ ಜನರ ಜೊತೆಗೂಡಿ ಕಳೆದ ಇರುಳುನೆತ್ತಿ ಬಿಸಿಲಿಗೆ ಜಡಿ ಮಳೆಗೆ ಆಸರೆಯ ಗೂಡುಕಣ್ಣಾಮುಚ್ಚಾಲೆ ಚೌಕಬಾರ ಆಣೆಕಲ್ಲ ಆಟವುಕಡ್ಡಿ ಬಳಪದಲಿ ಗೀಜಿ ಸುಣ್ಣದ ಕಲ್ಲ ಅಕ್ಷರವುಬೀಸೊಕಲ್ಲ ಬೀಸಿ ಸೇರ ತುಂಬಿ ಅಳೆದ ಜೋಳಪಡಸಾಲೆಯೊಂದು ಬದುಕ ಕಟ್ಟಿದ ಶಾಲೆಯು ! ************************************

ಸಾವು…!

ಕವಿತೆ ಸಾವು…! –ಕಾಂತರಾಜು ಕನಕಪುರ ……ರವರು ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹು ಬೆಲೆಕೇಳುವ ಆಸ್ಪತ್ರೆಯಮುಖ್ಯ ವೈದ್ಯರಿಂದ ಹೇಳಿಕೆ…! ಮಾಧ್ಯಮಗಳಲಿ…..ರವರು ಬಹು ಅಂಗಾಂಗಳವೈಫಲ್ಯದ ಕಾರಣ ಮರಣ ಹೊಂದಿದರುಎಂಬ ಎಕ್ಸ್ಲೂಸೀವ್ ಸುದ್ದಿ…! ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳ ತುಂಬಾ…..ರವರ ಇರದಿದ್ದ ಗುಣಗಾನದ ಜಡಿಮಳೆಜೊತೆಯಲ್ಲಿ…..ರವರ ಸಹವರ್ತಿಗಳಿಂದ ನೆನಪುಗಳಮೆಲುಕು ಹಾಕುವಿಕೆಯ ಹಿಮ್ಮೇಳ…! ನಮಗೆ ತಿಳಿದಿರುವಂತೆ…..ರವರ ಬಹು ಅಂಗಗಳು ವಿಫಲಗೊಂಡು….ರವರು ಸತ್ತು ಬಹುಕಾಲವಾಯಿತಲ್ಲ…! ಅಧಿಕಾರದಮಲಿನಲಿ ತೇಲಾಡುತಿರುವಾಗಸಂಕಟದ ಆರ್ತನಾದ ಕೇಳದ ….ರವರಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…! ಕಡು ಕಷ್ಟ ಪಡುವವರ ಕಡೆಗೆಕಿರುನೋಟವನ್ನೂ ಹರಿಸದ …..ರವರಕಣ್ಣುಗಳು ಇಂಗಿಹೋಗಿ ಬಹಳ […]

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಅದ್ಭುತ ನಿರ್ದೇಶಕ

ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!

ಲಂಕೇಶರ ಅವ್ವ ಕವಿತೆ –

ಇಡೀ ಕವಿತೆಯ ಶರೀರ …ರಚನೆ, ಅದರ ಹೂರಣ ,ತರ್ಕ, ವಾದ, ಪ್ರೀತಿ, ಹೋಲಿಕೆ, ಅವ್ವನ ಪರ ಸಮರ್ಥನೆ…ಎಲ್ಲವೂ ಭಿನ್ನ. ಅವ್ವನನ್ನು ಅವಳ ಪ್ರತಿಭೆ, ಶಕ್ತಿ, ‌ಕಸುವು, ಪ್ರೀತಿ, ಸಿಟ್ಟು, ದೌರ್ಬಲ್ಯ, ಕಣ್ಣೀರು, ಸಿಟ್ಟು, ಬಂಡಾಯ ಎಲ್ಲವನ್ನು ಕವಿ ಲಂಕೇಶ್ ಹಿಡಿದಿಡುತ್ತಾರೆ. ಕನ್ನಡದ ಕವಿತಾ ರಚನೆಗೆ , ವ್ಯಕ್ತಿಯ ಮೂರ್ತಿಯನ್ನು ಕಟೆದು ನಿಲ್ಲಿಸಿ, ಜೀವ ತುಂಬುವುದು ಹೇಗೆ , ನಮ್ಮೆದುರಿನ ಜೀವವನ್ನು , ಜೀವನವನ್ನು ಬದುಕಿ ಓಡಾಡಿದಂತೆ ಚಿತ್ರಿಸುವ ಕಲಾತ್ಮಕತೆ ಸಾಧಿಸಿ ಗೆಲ್ಲುವುದು ಪಿ.ಲಂಕೇಶರಂಥ ಪ್ರತಿಭೆಗೆ ಸಾಧ್ಯ

ನಿನ್ನನೇ ಪ್ರೀತಿಸುವೆ

ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ
ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು.
ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು
ನಾನಿನ್ನು ಪ್ರೀತಿಸುತಿರುವೆ ನಿನ್ನನೇ ಬಯಸಿ

ಸತ್ತು ಹೋಗುವುದೇ ಸಾವಲ್ಲ!

ಜೀವವೇ ಆಗಿರುವ ಪ್ರಾಣಸಖಿ
ತಾತ್ಸಾರದಲಿ ಬೆನ್ನ ತಿರುಗಿಸಿ
ಮಾತು ಬಿಡುವುದೂ…
ಸಾವೇ.

ಜೋಡಿ ಬಾಗಿಲು

ನಾಟಕ, ನಾಟಕದೊಳಗೆ ನಾಟಕ
ಮಾಯೆಯೋ ನಿಜವೋ
ಕರ್ಮವೋ ಛಾಯೆಯೋ
ನಿಜ ಸೂತ್ರದಾರನ ಹುಡುಕಾಟ
ಮನೆಯೊಳಗೇ ನಡೆದಿದೆ

ಕವಿತೆ ಮೂಕವಾಗಿದೆ

ಶೋಷಿತರ ಬೆವರ ಹನಿ ಹರಿಯುವಂತೆ
ಬಾರುಕೋಲಿನ ಹೊಡೆತಕ್ಕೆ ಸಿಕ್ಕ ಕೋಣದಂತೆ
ಸುಳಿಗೆ ಸಿಕ್ಕ ದೋಣಿಯಂತೆ ವಿಲವಿಲನೆ ಒದ್ದಾಡಿ
ನನ್ನ ಕವಿತೆ ಮೂಕವಾಗಿದೆ

ಒಂಟಿ ಮರ

ಅಪ್ಪಳಿಸಿದ ಜಡಿಮಳೆಗೆ
ಎದೆಯೊಡ್ಡಿದೆ ಹೆಮ್ಮರ
ಎಲೆ-ಎಲೆಯಲಿ ಅನುರಣಿಸಿದೆ
ಖಗ-ಮೃಗಗಳ ಚೀತ್ಕಾರ

Back To Top