Category: ಕಾವ್ಯಯಾನ

ಕಾವ್ಯಯಾನ

ಹೇಳು ಸಿವನೆ

ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು […]

ಗಜಲ್

ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ […]

ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!?

ಕವಿತೆ ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? ಶೀಲಾ ಸುರೇಶ್ ಕೊರಳುಬ್ಬಿಸಿ ಬಿಕ್ಕುತ್ತಲೇಕಾಯಬೇಕು ಸೆರಗೆಳೆವಸಖನಿಗಾಗಿ…ಬಂದವನೆದುರು ನಾಚಿಕೆಯಸೋಗಾಕಿಬಿನ್ನಾಣದ ನಡೆಹೊತ್ತುಬೆನ್ನಾಕಿ ನಿಂತಿದ್ದುಜಿನುಗಿದ ಹನಿ ಕಾಣದಿರಲೆಂದು ತಡಮಾಡಲೇ ಇಲ್ಲಮುಖತಿರುಗಿಸಿತಡಕಾಡಿದ್ದು ದೀಪವಾರಿಸಲೆಂದುಹುಚ್ಚಾಟಗಳ ಸಹಿಸಿಯೂಕಾದಿದ್ದು ಪೂರೈಸಿದಬಯಕೆ ತಂದ ಹಣವೆಷ್ಟೆಂದು ಬೆತ್ತಲಾದ ದೇಹಕ್ಕೆಮುಚ್ಚಲಾರದ ನೋಟುಗಳುಗಹಗಹಿಸಿ ನಕ್ಕಗಂತೂಮಡುಗಟ್ಟಿದ ಮೌನಕದತೆರೆದು ಬೀದಿಬದಿಯ ಕೊನೆಯಲ್ಲಿಮತ್ತೆ ಬೆಂಕಿಯಾಗಿತ್ತು ಸುಕ್ಕುಗಟ್ಟಿದ ನೆರಿಗೆಹಾಸಿಗೆ ಹೊದಿಕೆಸರಿಪಡಿಸಿನಡುಗುವ ಮೈಯನ್ನೊಮ್ಮೆಕೊಡವಿ ಬಿಗಿಯಾಗಿಸಿನಗೆಯಾದಳು ಸೆರಗಚಾಚಿ…. ಹೋಗಿಬರುವ ನಾಲ್ಕುಗಾಲಿಗಳು ಬೆಳಕನಾರಿಸಲೆ ಇಲ್ಲ.‌‌.ತೂರಾಡುತ್ತಲೇ ಬಂದುಗಪ್ಪೆಂದು ಬಡಿದ ವಾಸನೆಎಸೆದ ಕಾಸು ಮಡಿಲುತುಂಬಲಿಲ್ಲಹಸಿವನೀಗಿಸಲೂ ಇಲ್ಲಸೋತ ದೇಹ ಕುಸಿದುಕಣ್ಣೀರಾದದ್ದು ಕಂದನಕನಸಿಗೆ ನೀರಾಕುವುದೇಗೆಂದು ತಿಳಿಯದೆ. ಕೆಂಪು ಹೂವಿಗೆ ಸೋತುಹರಿಸಿದ್ದು ಕೆಂಪು […]

ಗಜ಼ಲ್

ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ […]

ಗುಲಾಬಿ ಮುಖ

ಕವಿತೆ ಗುಲಾಬಿ ಮುಖ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಚೆನ್ನ ಮಲ್ಲಿಕಾಜು೯ನನಮುರಿದ ಅಲುಗು ಎದೆಯಲ್ಲಿನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ? ನಿನ್ನ ಪದ ಪದಗಳುಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದುಎದೆಯಲ್ಲಿ ಮುರಿದ ಅಲುಗುಗಳಾದರೂನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ … ನಿನ್ನ ನಾಲಗೆ ಚೂರಿಯಾದರೂನನ್ನ ಹೃದಯ ಕೇಕಾಗಿಯೇ ಇರುತ್ತದೆತುಂಡು ತುಂಡುಗಳು ಬಾಯ್ತೆರೆದುನೀನು ನನ್ನ ಎದೆಯಲ್ಲಿ ಹುಟ್ಟಿದದಿನವನ್ನು ನೆನಪಿಸಿಕೊಳ್ಳುತ್ತನಿನ್ನ ಮುಂದೆ‘ಹ್ಯಾಪಿ ಬತ್೯ಡೇ […]

ಪ್ರೀತಿಯೆಂದರೆ

ಪ್ರೀತಿಯೆಂದರೆ ಅರುಣಾ ನರೇಂದ್ರ ಪ್ರೀತಿ ಎಂದರೆಬೇರೇನೂ ಅಲ್ಲಅದು ನಿನ್ನ ನೋಟಕಣ್ಣರೆಪ್ಪೆಗಳ ಹುಡುಕಾಟ ಪ್ರೀತಿ ಎಂದರೆನಾನು ನಿನ್ನ ನೀನು ನನ್ನತಿಳಿದುಕೊಳ್ಳುವುದುಸೆಳೆದುಕೊಳ್ಳುವುದು ಪ್ರೀತಿ ಎಂದರೆಒಣಗಿದ ಮರಚಿಗುರುವುದುಹೂ ಅರಳುವುದು ಪ್ರೀತಿಯೆಂದರೆನನಗೆ ನೀನು ನಿನಗೆ ನಾನುಗಂಧ ತೇಯುವುದುಗಾಳಿಯಲಿ ತೂರುವುದು ಪ್ರೀತಿ ಎಂದರೆನಿನಗಾಗಿ ಬರೆದಕವಿತೆಯ ಸ್ವಗತಕಡಲಿನ ಮೊರೆತ *******************************

ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ […]

ಒಲವಧಾರೆ ಜಯಶ್ರೀ.ಭ.ಭಂಡಾರಿ. ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತುಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆಕಂಗ್ಲೀಷಿನಲ್ಲಿ‌ ಏನೋ ಉಲಿಯಿತುಒರಟು ದನಿ.. ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋನಂಟಿನ ಗಂಟು ಶುರುವಾಯಿತುಹೀಗೆ‌ ಬಂದ ನೀನು ಹಾಗೆ ಹೋಗುವೆಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ. ಮನದ ಕಾಮನ ಬಿಲ್ಲು ಕಮಾನು ಕಟ್ಟೀತುಅಂದುಕೊಂಡಿರಲಿಲ್ಲ ಆಗಂತುಕನೆ..ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ. ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆಒಂದೇ ದೋಣಿಯಲಿ ಸಾಗುವದು ಸಾಧುವೆ.ಹಂಬಲದ ಹರಿಗೋಲು […]

ಪ್ರೇಮಮೂರುತಿ ಆಶಾ ಆರ್ ಸುರಿಗೇನಹಳ್ಳಿ ಬಿಕ್ಕುತ್ತಿದ್ದವು..ಮೌನವೊದ್ದು,ಸೊರಗುತ್ತಿದ್ದ ಕನಸುಗಳು..ಹಗಲು-ರಾತ್ರಿಗಳ ಪರಿವಿಲ್ಲದೆ,ಏರುತ್ತಿದ್ದ ನಶೆಗೂ..ನಿಶೆಯ ಗಾಢ ಮೌನವೇಒಲವ ಆಲಿಂಗನ. ಮಡುಗಟ್ಟಿದ ನೋವುಗಳುಅಧರಗಳ ಕಂಪಿಸಿತೋಯಿಸುವಾಗ..ವಿರಹಕ್ಕಾಗಿ ಚಡಪಡಿಕೆಯೊ?ಸನಿಹಕ್ಕಾಗಿ ಬೇಡಿಕೆಯೊ?ಅಶ್ರುವಿಗೂ ಗೊಂದಲ ಮೂಡಿಉರುಳುರುಳಿ ಸತ್ತವು.. ನೋವುಗಳೊ? ನೆನಪುಗಳೊ?ಖಾಲಿಯಾದ ದುಃಖ,ಉಳಿಸಿದ್ದೇನೆಂಬುದೇ ಗುಟ್ಟುಬಯಸಿದ್ದು ಮಾಯಾಜಿಂಕೆಯಂತೆಸರಿಯುತ್ತಲೇ ಇತ್ತು.. ಒಲವಾಂಕುರ ಜಿನುಗುತಾಪುಟಿ ಪುಟಿದು ನೆಗೆವಾಗಅವಳ ಒದ್ದಾಟವೆಲ್ಲಾನಿರರ್ಥಕವಾಗಿ..ಒಲುಮೆಯ ಘಮಲುಬಿಡದೆ ಪಸರಿಸುತಿತ್ತು.. ಆ ನೋವು-ನಲಿವ ಮಂಥನದಲೂನೋವಿನದೆ ಮೇಲುಗೈ ಆದಾಗವಿಷಕಂಠನಂತವಳುದಿನವೂ ನೊವನುಣ್ಣುತಾಭರವಸೆಯ ದೀವಿಗೆ ಬೆಳಗುತಾಒಲವ ದೀಪವಚ್ಚುವಪ್ರೇಮಮೂರುತಿಯಾದಳು..ದೀಪದ ಬೆಳಕಲಿಬದುಕಿನ ಸತ್ಯವ ಕಂಡಳು..! ********************************

ಹರಿಯೇ ಪ್ರೇಮಗಂಗೆ…. ವಿನುತಾ ಹಂಚಿನಮನಿ ಅಂದು ನೀನೂರಿದ ಪ್ರೀತಿಯ ಬೀಜಚೆಂದದಿ ಬೇರೂರಿ ಮನದಲಿ ಬೆಳೆದಿತ್ತುಕೊಂದು ಹಾಕಿದರೂ ನೀ ಕೈಯಾರೆ ಕಿತ್ತುಮತ್ತೆ ಮತ್ತೆ ಚಿಗುರಿ ಕೊನರಿ ಕೊನೆಗೆಸತ್ತುಹೋಗುವ ಬದಲು ಜೀವ ಹಿಡಿದುಸುಪ್ತವಾಗಿದೆ ನೆಲದಾಳದಲಿ ಉಳಿದು ಅಂದು ನೀನುರಿಸಿದ ಒಲವ ದೀವಿಗೆಗೆಲುವಾಗಿ ಉರಿದು ಬೆಳಕ ಚೆಲ್ಲಿತ್ತುಬಿರುಗಾಳಿಯ ಹೊಡೆತ ಸಹಿಸಿತ್ತುನಿನ್ನ ಪ್ರೀತಿಯ ತೈಲವಿಲ್ಲದೆ ಇಂದುಉರಿಯುವ ಛಲ ಬಿಡದೆ ಮುರುಟಿಬರಿ ಬತ್ತಿ ಸುಟ್ಟು ಹೋಗುತಿದೆ ಕರಟಿ ಅಂದು ನೀ ಹರಿಸಿದ ಪ್ರೇಮಗಂಗೆರಭಸದಿಂದ ಮೈದುಂಬಿ ಹರಿದಿತ್ತುನಿನ್ನ ಸೇರುವ ಆಸೆಯಲಿ ಸಾಗಿತ್ತುಭರವಸೆ ಕಾಣದಿರಲು ತಡವರಿಸಿದೆಅಡೆತಡೆಗಳಿಗೆ ಬೇಸತ್ತು […]

Back To Top