Category: ಕಾವ್ಯಯಾನ

ಕಾವ್ಯಯಾನ

ಮೂಗು ಮತ್ತು ಮಾಸ್ಕು

ಎಲ್ಲೇನನ್ನು ಮಾಡಿದರೂ
ಇವನ ಮೂಗು ಹಾಕಿಬಿಡುತ್ತದೆ ಹಾಜರಿ
ಎಲ್ಲವನೂ ಸೆಳೆದು ಬಿಡುತ್ತದೆ
ಮನೆಯ ಗುಟ್ಟೆಲ್ಲ ಇವನ ಮೂಗಿನಡಿಯಲ್ಲಿ

ಕಾಯುವ ಕಷ್ಟ.

ಕವಿತೆ ಕಾಯುವ ಕಷ್ಟ. ಅಬ್ಳಿ,ಹೆಗಡೆ ಈ ‘ಹಡಿಲು ಬಿದ್ದ’ನೆಲ,ಈ ದಟ್ಟ ಕತ್ತಲು,ಈ ಮೌನ,ಈ,,ಖಾಲಿ ಹಾಳೆ,ಕಾಯುತ್ತಿವೆ….ಉತ್ತು ಬಿತ್ತುವವರ.ಉಳುವದೆಂದರೆ….ಬೇಕಾಬಿಟ್ಟಿ ಅಗೆಯುವದಲ್ಲ.ಮೊದಲು ಒದ್ದೆ-ಯಾಗಿಸಬೇಕುಗಟ್ಟಿ ಮೇಲ್ಪದರ.ಗುದ್ದಲಿ,ಪಿಕಾಸಿಗಿಂತನೇಗಿಲಾದರೆ ಸಲೀಸು-ಭೇದಿಸಿ ಒಳಗಿಳಿಯಲು.ತೀರ ಆಳಕ್ಕೂ ಇಳಿಯದೆಹಿತವಾಗಿ,ಹದವಾಗಿ,ಸಾವಕಾಶ,ನಾಜೂಕಾಗಿ-ಸಾಗುವಾಗಿನಖುಷಿಯೇ ಬೇರೆ.ಆಮೇಲೆ…ಬಿತ್ತಿದಂತೇ ಬೆಳೆ.ನೆಲದೊಳಗೊಂದು ಬೀಜ,ಕತ್ತಲೊಳಗೊಂದುಬೆಳಕ ಸಣ್ಣ ಕಿಡಿ,ಮೌನದೊಳಗೊಂದುಪಿಸು ಮಾತು,ಹಾಳೆಯ ಖಾಲಿ-ಯಲ್ಲೊಂದು ಅಕ್ಷರಮೊಳೆಯುವ ಕನಸ ಖುಷಿ.ಮೊದ,ಮೊದಲುನೋವಾದರೂ,ಕೊನೆ,ಕೊನೆಗೆ….‘ಆಹಾ’ ಸುಖದ ನರಳಿಕೆ.ಆ ಒಂದು ಕ಼ಣಕ್ಕಾಗಿಕಾಯುತ್ತಿವೆ..–ಈ,,ನೆಲ,ಈ..ಕತ್ತಲು,ಈ..ಮೌನ,ಈ..ಖಾಲಿ’ಹಾಳೆ’?,ಮೊದಲ ಮಳೆಯಾಗುವಮೊದಲು ಉಳುವವರಿಗಾಗಿಕಾಯುತ್ತಿವೆ ಎದೆತೆರೆದುಅಂಗಾತ ಮಲಗಿ…!!! ******************************

ದೇವರು ಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ದೇವರುಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ಜೋಕಾಲಿ ನಿಲ್ಲುವುದೆಲ್ಲಿ?

ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಯಾಗಲೋ ನಿರ್ಲಿಪ್ತಲೋಕದಲಿ ಲುಪ್ತ ಅವನುಚಿಮ್ಮಿ ಚೆಲ್ಲುವ ಕಾರಂಜಿ ನಾನುಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ ಗಳಿಸುವುದಕಾಗಿ ಬದುಕುವ ಜೀವ ಅವನುಬದುಕ ಉಳಿಸಲು ಹೆಣಗುವ ಆತ್ಮ ನಾನುಯಂತ್ರವಾಗಲೋ ಜೀವಸುಧೆಯಾಗಲೋ ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೆ? **********************************

ಮಳೆ

ಕವಿತೆ ಮಳೆ ಮಾಲತಿ ಶಶಿಧರ್ ಆಗಿಂದಲೂ ಮಳೆಯೆಂದರೆಎಲ್ಲಿಲ್ಲದ ಹುಚ್ಚುಬರುತ್ತಿದ್ದ ಹಾಗೆಮೈಮೇಲಿನ ಪ್ರಜ್ಞೆಕಳೆದುಕೊಂಡುತೋಳುಗಳ ಚಾಚಿನನ್ನುದ್ದ ಅಗಲಆಳಕ್ಕೆ ಇಳಿಸಿಕೊಳ್ಳುವಷ್ಟು ಈ ಮಳೆಯದ್ದೊಂತರತಕರಾರುಬಂದರೆ ಪ್ರವಾಹಬರದಿರೆ ಬರ ಉಕ್ಕಿದ ಪ್ರವಾಹಕ್ಕೆಸಿಕ್ಕಿದ ಕಾರಿನ ಟೈರ್ ನಂತೆ ತೇಲುವುದುಬರದಲ್ಲಿ ಬರಡು ನೆಲದಂತೆಬಿರುಕು ಬಿಡುವುದು ಹೃದಯ ಎಂದೋ ಒಂದು ದಿನಸಮಾಧಾನದಲಿ ಬಂದ ಮಳೆತುಟಿ ಕಟಿ, ಎದೆ ಬೆನ್ನುಹೊಟ್ಟೆ ಹೊಕ್ಕಳುಮೀನಖಂಡ ತೊಡೆಗಳನ್ನೆಲ್ಲಾಹಾಗೆ ಮೃದುವಾಗಿ ಸೋಕಿಹೊರಟುಬಿಡುತ್ತದೆ ಆಮೇಲೆ ಅದು ಬಾನು ನಾ ಭೂಮಿಆದರೂ ಸೆಳೆತಅಯಸ್ಕಾಂತ ದಗೆ ಚಳಿ ಯಾವುದರಲ್ಲೂಸಮಯ ಸರಿಯುವುದೇ ಇಲ್ಲಾಸದಾ ಅದಕ್ಕಾಗೇ ಕಾಯೋನನ್ನೆದೆಯ ಕೇರಿ ಕೇರಿಯಲ್ಲೂಅದರದ್ದೇ ಜಾತ್ರೆ.. ******************************

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ […]

ಅನೂಹ್ಯ.

ಕವಿತೆ ಅನೂಹ್ಯ. ಅಬ್ಳಿ, ಹೆಗಡೆ ಮೈಮೇಲೆ ಬೇಸಿಗೆಯ ಬಿಸಿಲಕೆಂಡದ ಮಳೆ ಸುರಿಯುತ್ತಿದ್ದರೂಸ್ವಲ್ಪವೂ ವಿಚಲಿತವಾಗದೇ..ಎದೆ ತುಂಬ ಕಾಲ್ತುಳಿತದಸಣ್ಣಪುಟ್ಟ ರಕ್ತ ಸಿಕ್ತಗಾಯಗಳನ್ನೂ ಲೆಕ್ಕಿಸದೇ….ಅಂಗಾತ ಮಲಗಿರುವ ನನ್ನನೆಚ್ಚಿನ ಕಾಲು ಹಾದಿ ನನಗಾಗಿನನಗಷ್ಟೇ ನಾನೇ ನಿರ್ಮಿಸಿಕೊಂಡಿದ್ದು ಸರಳ,ಸುಂದರಗುರಿ ತಲುಪಲಷ್ಟೇ..!ಭಾರೀ ವಾಹನಗಳೋಡಾಡುವಗಟ್ಟಿಮುಟ್ಟಾದ ದಾಂಬರುರಸ್ತೆ ಇದಲ್ಲ.ವಿಲಾಸಿ,ದುಬಾರಿಕಾರುಗಳೋಡಾಡುವಮಿರಿ,ಮಿರಿ ಮಿಂಚುವರಾಜ ಮಾರ್ಗವೂ ಇದಲ್ಲ.ಜನ ನಿಬಿಡ ರಸ್ತೆಯಂತೂಇದಲ್ಲವೇ ಅಲ್ಲ.ಯಾವಾಗಲೋ ಅಪರೂಪಕ್ಕೊಮ್ಮೆನನ್ನೊಟ್ಟಿಗೆನನ್ನವರೆಂದು ಕೊಂಡವರ,ಅಥವಾ ನನ್ನವರೆಂದುಕೊಂಡುಸಿದ್ಧ ಪ್ರಸಿದ್ಧರೊಟ್ಟಗೆನಡೆವಾಗ..ಅವರ ಚಪ್ಪಲಿಯಧರ್ಪದ ಪದಾಘಾತಕ್ಕೆಆದ,ಕಾಲ ಕ್ರಮೇಣ ಮಾಯಬಹುದಾದ ಸಣ್ಣ,ಪುಟ್ಟಗಾಯಗಳಿದ್ದರೂ ನಿರಾತಂಕವಾಗಿ,ನೋವ ಸಹಿಸಿ,ಗಮ್ಯದೆಡೆ ತಲುಪಿಸುವಧ್ಯೇಯದೊಡನೆ ಅಂಗಾತಮಲಗಿ ನಿಟ್ಟುಸಿರು ಬಿಡುತ್ತಿರುವನನ್ನ ಅಚ್ಚುಮೆಚ್ಚಿನ ಸುಂದರಕಾಲು ಹಾದಿಯ ಮಧ್ಯೆಇದ್ದಕ್ಕಿದ್ದಂತೆ…ಗೋಚರಿಸಿತೊಂದುಪಾತರಗಿತ್ತಿಯ ಹೆಣ.ಸುತ್ತ ತಿನ್ನಲು ಮುಗಿಬಿದ್ದಕಟ್ಟಿರುವೆಗಳ […]

ಹನಿಗಳು

ಹನಿಗಳು ಸುವಿಧಾ ಹಡಿನಬಾಳ ೧) ಮೌನ ಮಾತಾಗುವ ವೇಳೆನೀ ಹೋದೆ ದೂರಎದೆಯಂತರಾಳದಲಿನೆನಪು ಬಲು ಭಾರ ೨) ಮಗು ನಿನಗೆ ಕೋಪಮಹಾ ಶತ್ರುವಂತೆಅದಕೆ ನಿನ್ನ ಮನಉರಿವ ಕುಲುಮೆಯಂತೆ ೩) ಬೆಕ್ಕೊಂದು ಕಣ್ಣು ಮುಚ್ಚಿಹಾಲು ಕುಡಿವಂತೆಸುತ್ತೆಲ್ಲ ಅವ್ಯವಹಾರಅನಾಚಾರನಡೆಯುತಿಹುದಂತೆ ೪) ನನ್ನ ಒಲವಿನ‌ ‌ಕವಿತೆನೀನೆಲ್ಲಿ ಅವಿತು ನಿಂತೆನಕ್ಷತ್ರವನೆಣಿಸುತ ಕುಳಿತೆಬಂದೆ ಮತ್ತೆ ಬೆಳಕಿನಂತೆ ೫) ಎದೆಯ ಗೂಡೆಂಬಗುಬ್ಬಚ್ಚಿ ಗೂಡಲ್ಲಿಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆನೀ ಒತ್ತಿದ ಮುತ್ತಿನ ಮೊಹರುಹಾರಲು ಕಲಿಸಿದ ಹಾಗೆ ೬) ಬಡತನ ನಿವಾರಣೆಗೆಂದುಹತ್ತಾರು ಯೋಜನೆವೋಟ್ ಬ್ಯಾಂಕ್ ರಾಜಕಾರಣದಿಂದಖಾಲಿ ಸರ್ಕಾರದ ಖಜಾನೆ ೭) […]

Back To Top