Category: ಕಾವ್ಯಯಾನ

ಕಾವ್ಯಯಾನ

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಕಾವ್ಯಯಾನ

ದುಃಖವ ನೇವರಿಸುವೆನೊಮ್ಮೆ ನಾಗರಾಜ್ ಹರಪನಹಳ್ಳಿ ನಿನ್ನ ಬೆರಳ ಹಿಡಿದು ಮಾತಾಡಿಸುವೆಅವುಗಳಿಗೆ ಅಂಟಿದ ದುಃಖವಸಂತೈಸಿ ನೇವರಿಸುವೆನೊಮ್ಮ ಉಸಿರೇ ನೀ ನನ್ನವಳು ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆನಾವಿಬ್ಬರೂ ಮಾತಾಡುವಾಗ ಬೆಳಕೇ ನೀ ನನ್ನವಳು ನಿನ್ನ ಕಿವಿಯೋಲೆಯ ವೈಯ್ಯಾರವ-ನೊಮ್ಮೆ ಹಿಡಿದು ಮಾತಾಡಿಸುವೆನಮ್ಮಿಬ್ಬರ ಮಾತಿನ ಮಧ್ಯೆನೀವೇಕೆ ಇಣುಕುವುದೆಂದುಜೋರು ಮಾಡುವೆ ..ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆಅವುಗಳ ಪ್ರಶ್ನಿಸುವೆ ಒಲವೇ ನೀ ನನ್ನವಳು ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆಅಪ್ತ ಮಾತಿನ […]

ಶಾಯರಿ

ಶಾಯರಿ ಭಾರತಿ ರವೀಂದ್ರ ಕವಿತೆ ನೀನೇಕೆನಲ್ಲನ ನಯನದಿ ಕುಳಿತೆ,ದಿಟ್ಟಿಸಿ ನೋಡಲಾರೆದೃಷ್ಟಿ ತಾಕಿತು ಪಾಪ. ಅಂಗಳದಿ ಬಿಡಿಸಿದಬಣ್ಣ ಬಣ್ಣದ ಚಿತ್ತಾರದಲಿ ನಿನ್ನನ್ನೇಹುಡುಕುತಿದ್ದೆಆದ್ರೆ ಬೆರಳಿಗಂಟಿದ ರಂಗ ವಲ್ಲಿ ಯಲ್ಲಿ ನಿನಿದ್ದೆ ಅಷ್ಟ್ಯಾಕೆ ಕನಸು ಕಾಣ್ತಿ ಹುಚ್ಚಖೋಡಿ ಮನಸಾಅವ್ ನೋಡಿ ನಕ್ಕಿದ್ದುನಿನಗಲ್ಲ. ನಿನ್ನ ಪಕ್ಕ ಇರೋ ಕೆಂಪನೆ ನಿನ್ನ ಗೆಳತಿನ್ನ ನೋಡಿ. ಪಿರೂತಿ ಅನ್ನೋದುಎದ್ಯಾಗ್ ನೆಟ್ಟಿದ ಚೂರಿಹಾಂಗಹಂಗ್ ಬಿಟ್ಟರ ಚುಚ್ಚುತಾನ ಇರತೈತಿತೆಗಿದ್ರ. ಮನುಷ್ಯಾ ಸತ್ತಹೋಗ್ತಾನ

ಟಂಕಾಗಳು

ಟಂಕಾಗಳು ಕೆ. ಸುನಂದಾ ಹಸಿದ ಹೊಟ್ಟೆಅರಸು ವೇಷ ; ಖಾಲಿಊಟದ ತಟ್ಟೆಜೀವನ ಸಾಗಿಸಲುಬೀದಿ ನಾಟಕದಾಟ** ನಡೆ ನುಡಿಯುಒಂದಾಗಲು ; ಜೀವನಸಾರ್ಥಕವಾಯ್ತುಕಪಟ ಮೋಸಗಳುಅಧಃಪತನ ವಾಯ್ತು** ನಾನೇ ಎಂಬುದುಅಹಂಕಾರ ; ನನ್ನದೇಎಂದರೆ ನಾಶಜೀವನ ನಡೆಸಲುಅರಿತು ಸಾಗಬೇಕು** ಜೀವನದಲ್ಲಿಸತ್ಯಕ್ಕೆ ; ಸಾವೇ ಇಲ್ಲಅಸತ್ಯ ಬೇಡಸಂಸ್ಕಾರ ವಂತರಿಗೆಜಯ ಕಟ್ಟಿಟ್ಟ ಬುತ್ತಿ** ಸಾವಿರ ಜನಸೇರಿ ಆಡುವ ಮಾತುಲೆಕ್ಕಕ್ಕೆ ಅಲ್ಲಆತ್ಮನ ನಿರ್ಧಾರವುಒಳಿತಿಗೆ ದಾರಿಯು** ಜೀವನ ಸಾರಕೆಲಸ ಮಾಡಿ ತಿನ್ನುಅನ್ಯರನೆಂದೂತಿರಸ್ಕರಿಸದಿರುಒಳಿತಿನ ಗುಟ್ಟಿದು** ಆಡದೇ ಮಾಡುಕೆಲಸ ಕೈ ಬಿಡದುಹಂಬಲವೇಕೆಫಲ ಅವನ ಇಚ್ಛೆನಿಷ್ಕಾಮ ಕರ್ಮ ಸಾಕು* ಸತ್ಯದ ನುಡಿಕೊನೆವರೆಗೆ ನಡಿಅಸತ್ಯ […]

ನವನವೋನ್ಮೇಶಶಾಲಿನಿ !

ಕವಿತೆ ನವನವೋನ್ಮೇಶಶಾಲಿನಿ ! ಕಾತ್ಯಾಯಿನಿ ಕುಂಜಿಬೆಟ್ಟು ಕವನ ಹುಟ್ಟುತ್ತಿಲ್ಲನವಮಾಸ ಉರುಳಿದರೂಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬುಬಸಿರಿಯ ಹಾಗೆ ಅಂಗಾತಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ ನಾಳೆ ಮೋಡಗಳ ಗಭ೯ ಸೀಳಿಕೊಂಡುನೇಸರ ಹುಟ್ಟುತ್ತಾನೆಕಾಳುಗಳು ಕಣ್ತೆರೆದುಕವಿತೆಗಳನ್ನು ಹೆರುತ್ತವೆಕಿರಣಗಳು ಆಟಿಕೆಗಳಾಗುತ್ತವೆಸುರುಳಿ ಸುಳಿವ ಕೋಮಲ ಬೆರಳುಗಳಿಗೆಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲುಕಾಯುತ್ತವೆಎಲ್ಲ ನಾಮ೯ಲ್ ಡೆಲಿವರಿ ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡುಮುಸಿಮುಸಿ ಎಂತೆಂಥ ಭಾಸ ಭವಭೂತಿ ಬೋಜಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…ಭಾಸನು ಕಾಲಕ್ಕೆ ದಾಸನಾಗಿಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿಕಾಲ ತಾನು ಹೆತ್ತದ್ದನ್ನೇ ತಾನೇ […]

ಒಳ್ಳೆಯ ದಿನವೆಂದರೆ…

ವಿಲಿಯಂ ಬ್ಲೇಕ್ ನ Holy Thursday ಅನುವಾದ: ವಿಠ್ಠಲ ದಳವಾಯಿ ಕಂಪಿಸುವ ದನಿಯು ಹಾಡೇ?ಅದು ಸಂತಸದ ಪದವಾಗಿ ಬದಲಾದೀತೆ?ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆಇದು ಬಡವರ ಭೂಮಿಯೇ ಹೌದು! ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲಬದುಕು ಪೂರಾ ಕಲ್ಲು ಮುಳ್ಳಿನ ಹಾದಿಎಂದಿಗೆ ಕೊನೆ ಮಾಗಿ ಚಳಿಯ ತೇದಿ? ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆತುತ್ತು ಉಣಿಸಲೂ ಕೈಯೇಳದಿದ್ದರೆಈ ನೆಲ ಭವ್ಯ, ಪವಿತ್ರ ಎನ್ನಬಹುದೇ? ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆಎಲ್ಲೆಡೆಗೂ […]

ಗಜಲ್

ಗಜಲ್ ರತ್ನರಾಯ ಮಲ್ಲ ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆಮುಖಂಡರುಗಳ ಓಡಾಟವು ಹೆಚ್ಚಾಗುತಿದೆ ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತುಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರುಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ ಊರು ಉದ್ಧಾರದ ಮಾತುಗಳು ಕೇಳುತಿವೆದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ ******************************

ಗಜಲ್

ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ […]

ಅಪ್ಪನ ಕೊನೇ ಪತ್ರ.!

ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. […]

ನೀಳ್ಗೆರೆ

ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! […]

Back To Top