Category: ಕಾವ್ಯಯಾನ

ಕಾವ್ಯಯಾನ

ಪ್ರೀತಿಯೆಂದರೆ

ಪ್ರೀತಿಯೆಂದರೆ ಅರುಣಾ ನರೇಂದ್ರ ಪ್ರೀತಿ ಎಂದರೆಬೇರೇನೂ ಅಲ್ಲಅದು ನಿನ್ನ ನೋಟಕಣ್ಣರೆಪ್ಪೆಗಳ ಹುಡುಕಾಟ ಪ್ರೀತಿ ಎಂದರೆನಾನು ನಿನ್ನ ನೀನು ನನ್ನತಿಳಿದುಕೊಳ್ಳುವುದುಸೆಳೆದುಕೊಳ್ಳುವುದು ಪ್ರೀತಿ ಎಂದರೆಒಣಗಿದ ಮರಚಿಗುರುವುದುಹೂ ಅರಳುವುದು ಪ್ರೀತಿಯೆಂದರೆನನಗೆ ನೀನು ನಿನಗೆ ನಾನುಗಂಧ ತೇಯುವುದುಗಾಳಿಯಲಿ ತೂರುವುದು ಪ್ರೀತಿ ಎಂದರೆನಿನಗಾಗಿ ಬರೆದಕವಿತೆಯ ಸ್ವಗತಕಡಲಿನ ಮೊರೆತ *******************************

ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ […]

ಒಲವಧಾರೆ ಜಯಶ್ರೀ.ಭ.ಭಂಡಾರಿ. ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತುಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆಕಂಗ್ಲೀಷಿನಲ್ಲಿ‌ ಏನೋ ಉಲಿಯಿತುಒರಟು ದನಿ.. ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋನಂಟಿನ ಗಂಟು ಶುರುವಾಯಿತುಹೀಗೆ‌ ಬಂದ ನೀನು ಹಾಗೆ ಹೋಗುವೆಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ. ಮನದ ಕಾಮನ ಬಿಲ್ಲು ಕಮಾನು ಕಟ್ಟೀತುಅಂದುಕೊಂಡಿರಲಿಲ್ಲ ಆಗಂತುಕನೆ..ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ. ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆಒಂದೇ ದೋಣಿಯಲಿ ಸಾಗುವದು ಸಾಧುವೆ.ಹಂಬಲದ ಹರಿಗೋಲು […]

ಪ್ರೇಮಮೂರುತಿ ಆಶಾ ಆರ್ ಸುರಿಗೇನಹಳ್ಳಿ ಬಿಕ್ಕುತ್ತಿದ್ದವು..ಮೌನವೊದ್ದು,ಸೊರಗುತ್ತಿದ್ದ ಕನಸುಗಳು..ಹಗಲು-ರಾತ್ರಿಗಳ ಪರಿವಿಲ್ಲದೆ,ಏರುತ್ತಿದ್ದ ನಶೆಗೂ..ನಿಶೆಯ ಗಾಢ ಮೌನವೇಒಲವ ಆಲಿಂಗನ. ಮಡುಗಟ್ಟಿದ ನೋವುಗಳುಅಧರಗಳ ಕಂಪಿಸಿತೋಯಿಸುವಾಗ..ವಿರಹಕ್ಕಾಗಿ ಚಡಪಡಿಕೆಯೊ?ಸನಿಹಕ್ಕಾಗಿ ಬೇಡಿಕೆಯೊ?ಅಶ್ರುವಿಗೂ ಗೊಂದಲ ಮೂಡಿಉರುಳುರುಳಿ ಸತ್ತವು.. ನೋವುಗಳೊ? ನೆನಪುಗಳೊ?ಖಾಲಿಯಾದ ದುಃಖ,ಉಳಿಸಿದ್ದೇನೆಂಬುದೇ ಗುಟ್ಟುಬಯಸಿದ್ದು ಮಾಯಾಜಿಂಕೆಯಂತೆಸರಿಯುತ್ತಲೇ ಇತ್ತು.. ಒಲವಾಂಕುರ ಜಿನುಗುತಾಪುಟಿ ಪುಟಿದು ನೆಗೆವಾಗಅವಳ ಒದ್ದಾಟವೆಲ್ಲಾನಿರರ್ಥಕವಾಗಿ..ಒಲುಮೆಯ ಘಮಲುಬಿಡದೆ ಪಸರಿಸುತಿತ್ತು.. ಆ ನೋವು-ನಲಿವ ಮಂಥನದಲೂನೋವಿನದೆ ಮೇಲುಗೈ ಆದಾಗವಿಷಕಂಠನಂತವಳುದಿನವೂ ನೊವನುಣ್ಣುತಾಭರವಸೆಯ ದೀವಿಗೆ ಬೆಳಗುತಾಒಲವ ದೀಪವಚ್ಚುವಪ್ರೇಮಮೂರುತಿಯಾದಳು..ದೀಪದ ಬೆಳಕಲಿಬದುಕಿನ ಸತ್ಯವ ಕಂಡಳು..! ********************************

ಹರಿಯೇ ಪ್ರೇಮಗಂಗೆ…. ವಿನುತಾ ಹಂಚಿನಮನಿ ಅಂದು ನೀನೂರಿದ ಪ್ರೀತಿಯ ಬೀಜಚೆಂದದಿ ಬೇರೂರಿ ಮನದಲಿ ಬೆಳೆದಿತ್ತುಕೊಂದು ಹಾಕಿದರೂ ನೀ ಕೈಯಾರೆ ಕಿತ್ತುಮತ್ತೆ ಮತ್ತೆ ಚಿಗುರಿ ಕೊನರಿ ಕೊನೆಗೆಸತ್ತುಹೋಗುವ ಬದಲು ಜೀವ ಹಿಡಿದುಸುಪ್ತವಾಗಿದೆ ನೆಲದಾಳದಲಿ ಉಳಿದು ಅಂದು ನೀನುರಿಸಿದ ಒಲವ ದೀವಿಗೆಗೆಲುವಾಗಿ ಉರಿದು ಬೆಳಕ ಚೆಲ್ಲಿತ್ತುಬಿರುಗಾಳಿಯ ಹೊಡೆತ ಸಹಿಸಿತ್ತುನಿನ್ನ ಪ್ರೀತಿಯ ತೈಲವಿಲ್ಲದೆ ಇಂದುಉರಿಯುವ ಛಲ ಬಿಡದೆ ಮುರುಟಿಬರಿ ಬತ್ತಿ ಸುಟ್ಟು ಹೋಗುತಿದೆ ಕರಟಿ ಅಂದು ನೀ ಹರಿಸಿದ ಪ್ರೇಮಗಂಗೆರಭಸದಿಂದ ಮೈದುಂಬಿ ಹರಿದಿತ್ತುನಿನ್ನ ಸೇರುವ ಆಸೆಯಲಿ ಸಾಗಿತ್ತುಭರವಸೆ ಕಾಣದಿರಲು ತಡವರಿಸಿದೆಅಡೆತಡೆಗಳಿಗೆ ಬೇಸತ್ತು […]

ವ್ಯಾಲೆಂಟನ್ಸ ಡೇ ಹನಿಗಳು ನಾಗರಾಜ್ ಹರಪನಹಳ್ಳಿ ೧-ಅವಳ ಎದೆ ಬಗೆದುನೋಡಿಅಲ್ಲಿ ಸಿಗುವುದು ಇನಿಇನಿ ಎಂದರೆ ಬೇರಾರೂ ಅಲ್ಲಅದು ಇಬ್ಬನಿಯ ಹನಿ -೨- ಏಕಾಂತದಲಿಸುಮ್ಮನಿದ್ದರೂಪಿಸುಗುಟ್ಟಿದಂತಾಗುವುದುಪ್ರೇಮ -೩- ನೀನು dp ಕಾಣದಂತೆಮಾಡಬಹುದುಮೆಸ್ಸೆಜ್ ಸಹ ಮಾಡದಿರಬಹುದುಅಂತಿಮವಾಗಿ ನಿನ್ನ ಬಿಂಬದನೆನಹು ನಾನೇ -೪-ನಿನ್ನ ಹೃದಯವನ್ನುಕೇಳುಅದರ ಮಾತ ಆಲಿಸುಅಲ್ಲಿನ ಪಿಸುಮಾತು ಇನಿ -೫-ಏನಾದರೂ ಏನಂತೆಗೋಡೆ ಕಟ್ಟಿಆಣೆ ಮಾಡಿಸಿಕೊಂಡುತಡೆದಿರಬಹುದು ನಿನ್ನನಿನ್ನ ಮೊದಲ ಮತ್ತುಕೊನೆಯ ಆಯ್ಕೆನಾನೇ ….ಹಾಗೆಂದು ನೀ ಹೇಳಿದಮಾತುನನ್ನ ಸುತ್ತ ಗಿರಕಿ ಹೊಡೆಯುತ್ತಿದೆ -೬-ಪ್ರೇಮಿಸುವುದ ಕಲಿಸಿನೀ ಹಠಾತ್ಹೊರಟು ಹೋಗಬಹುದು ಎಂದುನಾ ಕನಸಲ್ಲೂ ಯೋಚಿಸಿರಲಿಲ್ಲಹಾಗೆ ಹೋರಟು ಹೋದಮೇಲೆಇಷ್ಟು […]

ಭಾವದಲೆಯಲಿ ಪ್ರೇಮರಾಗ ಅನಿತಾ ಪಿ. ಪೂಜಾರಿ ತಾಕೊಡೆ ಒಲವೇ ಹೀಗೆ ತರವೇಮೀಟು ಪ್ರೇಮ ಭಾವಗಳಾ… ಬಾನಲ್ಲಿ ನೋಡು ಮೇಘಗಳಾಬಾರೋ ಮಳೆಯಾಗುವಾ…. ಒಲವೇ ಹೀಗೆ ತರವೇಮೀಟು ಪ್ರೇಮ ಭಾವಗಳಾ…ಒಲವೇ…. ಆ ಬಾನಿಗೆಂದೂ ಈ ಭೂಮಿಯೊಲವುಹೂಮಳೆಯ ಜೊತೆ ಸೇರಿ ತಂಪಾಗುವಾಮಳೆಬಿಸಿಲ ಚೆಲುವು ಹದವಾಗುತಿರಲುಬಾರೋ ರಂಗಾಗುವಾ ||ಒಲವೇ|| ಮುಗಿಲಾಚೆ ನೋಡು ಗಿರಿಹಕ್ಕಿ ಸಾಲುನಾವೂನೂ ಅದರಂತೆ ಹಗುರಾಗುವಾಕರಿಮೋಡ ಸರಿದು ತಿಳಿಯಾಗುತಿರಲುಬಾರೋ ಹಿತವಾಗುವಾ ||ಒಲವೇ|| ಜೊತೆಯಾಗಿ ಬೆಸೆದ ಕನಸೊಂದು ಉಂಟುನೀನಿರದೆ ಎಂದೂ ನನಸಾಗದುಈ ಬಂಧ ಅನುದಿನವೂ ಉಸಿರಾಗುತಿರಲಿಬಾರೋ ಬದುಕಾಗುವಾ ||ಒಲವೇ|| ****************************************

ಪ್ರೀತಿಯ ಪಿಸುಮಾತು ಸರಿತಾ ಮಧು ಹೇಳಿಬಿಡಲೇನು ಮನದ ಇಂಗಿತವಸುತ್ತು ಬಳಸುವುದೇನು ನಿನ್ನೊಡನೆ ಬೆನ್ನಿಗಾತು ಕುಳಿತು ಪಿಸುಗುಟ್ಟುವಚಡಪಡಿಕೆ , ಬಚ್ಚಿಟ್ಟ ಮಾತುಗಳಿವುಉಳಿದ ಕಾರಣವೇನೋ ತಿಳಿದಿಲ್ಲಕೊಪ್ಪರಿಗೆಯಷ್ಟು ಕನವರಿಕೆಗಳಿವೆ ನಿನ್ನ ಪ್ರೀತಿಯಲ್ಲಿ ಬಂಧಿ ನಾನುಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆಹೃದಯಾಂತರಾಳದಲ್ಲಿ ಖೈದಿಯಾಗಿರುವೆನುಖುಲಾಸೆಯ ಗೊಡವೆ ಎನಗಿಲ್ಲ ದೂರದಿ ಮುಗುಳುನಗೆ ಹೊತ್ತರಜನೀಶನೂ ಮತ್ಸರದಿ ಇಣುಕುತಿಹನುನಮ್ಮೊಲವಿನ ಗಾಢತೆಗೆ ಸಾಕ್ಷಿಯಾಗಿಮನದಿಚ್ಚೆಯ ಮನ್ನಿಸೊಮ್ಮೆ ನನ್ನಿನಿಯ ಮನಸಿನ ಜಪವೂ ನಿನ್ನದೇ ಸದಾಗಮನಿಸದೆ ದೂರ ಸರಿಯುವ ಇರಾದೆ ಏಕೆ?ನಿನ್ನ ಪ್ರೇಮ ಸಾನಿಧ್ಯದ ಹೊರತುಬೇರೆ ಬಿಡಾರವೇನಿದೆ ನನಗೆ ಹೇಳಿಬಿಡಲೇನು ಮನದ ಇಂಗಿತವಸುತ್ತು ಬಳಸುವುದೇನು ನಿನ್ನೊಡನೆಅನುಗಾಲಕೂ ಒಲವ […]

ಓ…ಪ್ರೇಮವೇ. ಶಿವಲೀಲಾ ಹುಣಸಗಿ ನಿನ್ನೆದೆಯ ಕುಲುಮೆಯಲಿ ಬೆಂದದ್ದೆ ಬಂತುಬಚ್ಚಿಟ್ಟ ಪ್ರೇಮವನೀಗ ಖಗಗಳು ಬಿಚ್ಚಿಟ್ಟುಬಾನಲಿ ಕಾಮನಬಿಲ್ಲು ಮೂಡಿದಂತಾತುಪ್ರೇಮದ ತಂಗಾಳಿಗೆ ಹೃದಯ ಸಿಕ್ಕು.ಕಂಗಳ ಭಾಷೆಗೆ ವಿರಹದ ಸ್ಪರ್ಶವಾತು…ಓ ಬೆಸುಗೆಯ ಹೊಂಗನಸಿನ ಹೊದಿಕೆಗೆತಾರೆಗಳೇ ಚಪ್ಪರವಾಗಿ ಮಿನುಗಿದಂತೆಪನ್ನಿರು ಹನಿಸುತ ಆವರಿಸಿದಂತೆಲ್ಲಗುಡಿಸಲೊಂದು ಸ್ವರ್ಗವಾದಂತಾತು…ಓ ನಿನ್ನ ಪ್ರೀತಿಯ ಘಮಲಿನ ಸೆಳೆತಕ್ಕೇಹೂಬನಗಳು ಭಾರವಾಗಿ ಒರಗಿವೆನಿನ್ನೂಸಿರಲವಿತ ಹಿಡಿ ಪ್ರೀತಿಯುನನ್ನೆದೆಯಲಿ ಬೆಚ್ಚಗೆ ನಲುಗಿದೆ….ಓ ತುತ್ತುಕೂಳಿಗೂ ತತ್ತರಿಸಿದರೂ ಭಯವಿಲ್ಲಬದುಕು ರಸ್ತೆಯಂಚಲ್ಲಿದ್ದರು ಕೊರಗಿಲ್ಲನಿನ್ನೊರತು ಜಗದೊಳು ನನಗೇನು ಬೇಕಿಲ್ಲಬೇಡಿಬಂದರಿಗೆಲ್ಲ ದಕ್ಕಿತೇ ಈ ಪ್ರೀತಿ?…ಓ ಶೋಕೇಸಿನಲ್ಲಿಟ್ಟು ಮುಟ್ಟುವವರಿಗೇಪ್ರೇಮದ ಬಿಸಿಯುಸಿರು ತಟ್ಟಿತೇನಿಷ್ಕಲ್ಮಶ ಪ್ರೇಮದಲಿ ಮನಸ ಹೊಸೆದುಸಾರಬೇಕಿದೆ ನಿಜಾರ್ಥದ […]

ಪ್ರೇಮ ಪತ್ರ ಸ್ಮಿತಾ ರಾಘವೇಂದ್ರ ಕಣ್ಣಿಗೊಂದು ಕನ್ನಡಕ ಏರಿಸಿಕೊಂಡುಅದರ ಪ್ರೇಮ್ ಹಿಡಿದುಮೇಲೆ ಕೆಳಗೆ ಮಾಡುತ್ತಹಳೆಯ ಟ್ರಂಕಿನ ಬಂಗಾರದಭದ್ರತೆಯಿಂದ ಹೊರಬಂದಓಲೆ. ಕೊರಳ ಸುತ್ತಿ ಎದೆಯ ಮಿದುವಿನಲಿಮಿಸುಕಾಡಿಆಗಾಗ ಚುಚ್ಚಿ ಕೊಳ್ಳುವ ಸರಮತ್ತೆ,,,ಜೊತೆಯಾದ ಪ್ರೇಮ. ಎಂದೋ ಸಿಕ್ಕ ಮತ್ತೀಗಸಿಗಬೇಕಾದ ಪ್ರತೀಕ್ಷೆ. ಜೀಕುವ ಉತ್ಸಾಹದಲಿಆಗ ತಾನೇ ಕಣ್ ಬಿಟ್ಟ ಕರುಅದುರುವ ಕಾಲುಗಳುಜಾರಿ ಮುಗ್ಗರಿಸಿ,ಏನು ಬೇಕಾದರೂ ಘಟಿಸಬಹುದು,ಕ್ಷಣದ ಕವಲಿನಲಿಹಾಲು ಹಾಲಾಹಲ. ಕೇರಿ ಕೆರೆ ಕುಂಟೆಗಳಲಿಸುಳಿದಾಡಿದ ಒಲವ ಘಮ,ಊರ ಕೊನೆಯ ಬಸ್ಸಿನಲಿಬಂದಿಳಿದ ನೆನಪುಗಳು-ತುಂಬಿಕೊಂಡ ಜೋಳಿಗೆಯತುದಿಗೊಂದು ತೂತು.ಕೊರೆದಿದ್ದು ಯಾರು!?ಆರೋಪ ಪ್ರತ್ಯಾರೋಪ,ಹೆಕ್ಕಿಕೊಂಡರು ಯಾರೋಉಳಿದದ್ದು ಮೌನ. ಅದೆಂತಹ ವಿಧಾಯ ಹೇಳುಮತ್ತೆ […]

Back To Top