Category: ಕಾವ್ಯಯಾನ

ಕಾವ್ಯಯಾನ

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವುಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ ಮರುಳ ಸಾಕಿನ್ನೂ ಲೋಕದ […]

ಗಜಲ್

ಗಝಲ್ ರಜಿಯಾ ಬಳಬಟ್ಟಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಲೇಬೇಕೀಗ.ಬಂದ ಹಿಸಾಬು ಮುಗಿಯದಿದ್ದರೂ ಮರಳಲೇಬೇಕೀಗ. ಅರಿತವರಾರೋ ತಿರುಗಿಬಿದ್ದವರಾರೋ ಬಂಧ ದೂರಾದಾಗ,ಎಲ್ಲ ಕೊಂಡಿಗಳ ಕಳಚಿ ಹೊರಳಲೇ ಬೇಕೀಗ. ನನ್ನ ನಿನ್ನ ಮಾತು ಅದೆಷ್ಟು ಬಾಕಿ ಉಳಿದರೇನೀಗ,ಗಾಡಿಯ ಪೆಟ್ರೋಲು ತೀರಿದಾಗ ನಡೆದು ಹೋಗಲೇಬೇಕೀಗ. ಅದೆಷ್ಟು ಕಸ ಮುಸುರೆಯ ತಾಣವಾದರೇನೀಗ,ಮೂಗು ಮುಚ್ಚಿ ಕೈ ಬಿಡಿಸಿ ಹೆಜ್ಜೆ ಹಾಕಲೇಬೇಕೀಗ. ನಿನ್ನ ಪ್ರೀತಿಯ ಹಂಬಲಿಸಿ ಅದೆಷ್ಟು ಮಿಡಿದರೇನೀಗ,ಅಗಲಿಕೆಯನು ಬೆನ್ನಿಗಂಟಿಸಿ ರಾಜಿ ಚಡಪಡಿಸುವ ದಿನಗಳೇ ಎಲ್ಲ ಈಗ ******************************************

ಅರ್ಪಣೆ

ಕವಿತೆ ಅರ್ಪಣೆ ದುರಿತ ಕಾಲದ ಅಬ್ಬರದನಡುವೆ , ಸದ್ದು ಮಾಡಿದೆಸಮೂಹ ಮಾಧ್ಯಮ. ಸಾಹಿತ್ಯದ ಹೊಸ ಮಜಲಿನಹುಡುಕಾಟ, ಮನೆ ಮಾಡಿದೆವೆಬಿನಾರ್ ನ ಜಪ. ಯೂಟ್ಯೂಬ್ ಫೇಸ್ ಬುಕ್ಲೈವ್ ಮಂತ್ರದ ತಾಕಲಾಟಕೆಬುದ್ಧಿಗೆ ಕುಮ್ಮಕ್ಕು ಕೊಟ್ಟುಗಂಟೆ ಬಾರಿಸಲೇಬೇಕು . ಬುಟ್ಟಿಯೊಳಗಿನ ಹಾವಿನಂತೆಫೀಡ್ ಬ್ಯಾಕ್ ಕನವರಿಕೆ .ಇ-ಪ್ರಮಾಣ ಪತ್ರದ ಪ್ರಸಾದಪಡೆದಾಗಲೇ ಕೃತಾರ್ಥ . ಆನ್ ಲೈನ್ ಗೋಷ್ಠಿಗಳಲ್ಲಿನಟರಾಜನ ಪುಟ ನರ್ತನ .ಪ್ರಶಂಸೆ ,ಅಭಿನಂದನಾ ಪತ್ರಸಹಿ ಮಾಡುವ ತವಕ . ದಿನಕ್ಕೊಂದು ವಸ್ತುವಿನ ಆಮಿಷವಾಟ್ಸಪ್ ಟೆಲಿಗ್ರಾಂಗಳಲ್ಲಿ.!!ಕವಿ ಬದುಕಿನ ಪ್ರಶ್ನೆ ?ಉಸಿರಾಗಬೇಕು ಸತ್ಯ ಸತ್ಯ . […]

ದೈವನಿಹನು

ಕವಿತೆ ದೈವನಿಹನು ದಯಾನಂದ ಕೆ ಚಂದ್ರಶೇಖರಯ್ಯ ಗುಡಿ ಗುಂಡಾರಗಳ ಕಟ್ಟಿನಾಮಫಲಕದೊಳು ವೈಭವಿಸಿದಿರೇನು?ಮಡಿಯ ಮಾಡಿ ಹೂವು ಹಣ್ಣು ಕಾಯಿಡಿದು ಗುಡಿಯಹೊಕ್ಕಿರೇನು ? ಕಲ್ಲಾಗಿ ಕುಳಿತ ಅವನಿಗೆಕ್ಷೀರಾಭಿಷೇಕವ ಮಾಡಿರೇನು?ನಿರ್ವಿಕಾರ ಪರಮಶಿವನಿಗೆಮೃಷ್ಟಾನ್ನವ ಉಣ ಬಡಿಸಿದರೇನು? ಜಡನೀವನು, ಹಸಿವಿರದವನುಉಸಿರಿರದವನು ಹೆಸರರಿರದವನು,ನಿರ್ವೀಕಾರ ಅಗೋಚರನಿವನುಅವರವರ ಭಾವದಲಿ ನೆಲೆಸಿಹನು, ಎಮ್ಮ ಶಿವ ಹೃದಯಶಿವಆತ್ಮಸಾಕ್ಷಾತ್ಕರದೊಳು ನೆಲಸಿಹನು, ಕರುಣಿಯಲಿ ತ್ಯಾಗದಲಿ,ಮನುಷತ್ವದಲಿ ದೈವನಿಹನು *******************

ಅವಳೆಂದರೆ?

ಕವಿತೆ ಅವಳೆಂದರೆ? ಪವಿತ್ರ.ಎಂ. ಅವಳೆಂದರೆ ಹಾಗೆಯಮ್ಮಅವಳಿರುವೆಂದರೆ ನಲಿವುಅವಳಿರುವೆಂದರೆ ಮರುಳುಅವಳಿರುವೆಡೆ ನಗೆ ಹೊನಲುಅವಳಿಂದಲೆ ಜಗವುಅವಳಿರದಿರೆ ಅಳಿವು ಅವಳು ಅಬಲೆ ಎಂದೆ ನೀನುಮೇಲರಗಿ ಒಸಕಿ ಹಿಸುಕಿಸಾವಮನೆಗೆ ಆಹುತಿ ಆಗಿಸಿನೋವ ನೋಡುತಾ ಹೇಗೆನಿಂತೆ?ಅದೇಗೆ ನಿಂತೆಮರುಕವಿರದೆ ಮೃಗವಾದೆಯ ಅವಳೊಡಲ ಆಸರೆಯ ಮರೆತೆಯಾಮರುಗಟ್ಟಿತೆ ಹೃದಯಮನವಿಹುದು ಮನುಜನಿಗೆಅದಕಾಗೆ ಅವ ಮನುಜಎಲ್ಲ ಮರೆತೆಯಲ್ಲ ಇಂದುಪಿಶಾಚಿಗೂ ಮಿಗಿಲಾದ ರಕ್ಕಸ ಕರುಳುಹಿಂಡೊ ಕೃತ್ಯವೆಸಗಿಕಾರ್ಕೋಟ ವಿಷವ ಕಾರಿಪುರುಷ ಪೌರುಷವೆಂದು ತೋರಿಅವಳೆದೆಯ ಬಗೆದೆಯಲ್ಲಮೃಗಕು ಕೀಳು ಮರುಕವಿರದ ಮಾನವಕಾಮಾಂಧ ದಾನವ ರುದಿರ ಹರಿವಾಗ ಕರಗಲಿಲ್ಲಅವಳಾರ್ತ ಕೂಗು ಕೇಳಲಿಲ್ಲಅಂದೂ ಇತ್ತು ಯುದ್ಧದಮಲುಇಂದಿಗೂ ಅದರದೇ ಘಾಟುನಾಗರೀಕ ನಗೆಪಾಟಲುಬಗೆ […]

ಮುಗುಳು

ಕವಿತೆ ಮುಗುಳು ಎಸ್ ನಾಗಶ್ರೀ ಏನೂ ಹೇಳದೆಯೂತಿಳಿದು ಹೋಗುವುದುನಿನಗೆ ಮಾತ್ರವೇ ಹೇಳುಅರೆಬರೆ ಉಳಿದ ಭಾವಗಳಚಿಲ್ಲರೆ ಮೂಟೆಕಟ್ಟಿಸಂತೆಯೊಳಗೆ ಸೋರಿಹೋಗುವಮುಸ್ಸಂಜೆಯೊಂದರಲ್ಲಿಮೆಲ್ಲ ಮೂಡುವ ಮುಗುಳು ಆಗಸದಲಿ ಬಿದಿಗೆ ಚಂದ್ರಎಂದೋ ಮರೆತ ಹಾಡೊಂದುಪಲ್ಲವಿಸುವುದು ಮಂದ್ರದಲಿತೀರದ ಉಸುಕಲ್ಲಿಮರಳುಗೂಡಿನ ಹೊಸಕನಸುಕೊಚ್ಚಿಹೋಗುವ ಹಲವಲ್ಲಿಶೋಕವೂ ಸೇರಿದ್ದು ನೋಡು ಮತ್ತೆ ಮತ್ತೆ ನಗುವೊಂದುಎದೆಯೊಳಗೆ ಹುಟ್ಟುವುದುಬೇಲಿಹೂವಿನ ರಂಗುಬಂಧನವ ಮರೆಸುವುದುಸಣ್ಣಗಿನ ಮಿಡುಕು ಧೈರ್ಯದಲಿಅಡಗಿಹೊಸದೊಂದು ಆಸೆಪ್ರತಿದಿನದ ಕಡೆಗೆಬದುಕಿದ್ದರೆ ಹೀಗೆ ಸಾಕುಮೌನಕೂ ನಗೆಯ ಬೆಳಕು ***************

ನಿರಾಕರಣೆ

ಕವಿತೆ ನಿರಾಕರಣೆ ಕಾವ್ಯ ಎಸ್. ನನ್ನ ಮರೆತ ಹೊನ್ನ ಮೆತ್ತ ಹೊತ್ತುನನ್ನ ತೊರೆದು ಯೋಚಿಸಿದಆ ಘಳಿಗೆಗಳ ಚಲನಗಳುಕಳಚುತ್ತಿವೆ, ಇಂದು-ನಾಳೆಗಳ ಅಂಗಿಯಯಾರ ಕತ್ತಲು ಯಾರ ಒಡಲ್ಲಲ್ಲಿಜಿನುಗಿ ಹಾವಾಗುತ್ತಿರುವುದೋಕಡಲ ತುಂಬೆಲ್ಲ ಬರುವ ನಿನ್ನ ನೆನಪಿನಆರಿದ ಮಲ್ಲಿಗೆಯ ಕೆಂಡಗಳುಎಷ್ಟು ಹೊತ್ತು ಸುಡಬಲ್ಲವು ನನ್ನಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲುಬೇಕ ಸಮಯದ ಎಲ್ಲೆಗಳುಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿಹರಿದು ಹೋಗಲಿಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನತೋಳಲ್ಲಿ […]

ಧಿಕ್ಕಾರ… ಧಿಕ್ಕಾರ…!!

ಕವಿತೆ ಧಿಕ್ಕಾರ… ಧಿಕ್ಕಾರ…!! ಡಾ. ಮಲ್ಲಿನಾಥ ಎಸ್. ತಳವಾರ ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರುತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರುಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳುಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ […]

ಸ್ವಗತ

ಕವಿತೆ ಸ್ವಗತ ಮಮತಾ ಶಂಕರ್ ದೂರದಲ್ಲಿ ನಾನು ನೀನುಒಂದಾಗಿ ಕಂಡರೂ ಒಂದಾಗದ ನಿಜದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ ನೀನು ಒಮ್ಮೊಮ್ಮೆ ಉರಿಯೆದ್ದುಸುರಿಸುವೆ ಕೆಂಡ ಮೈಮನಗಳಿಗೆ ;ನಾನೋ ಹಪಹಪಿಸುವೆ ಒಂದೆರಡುತಂಪನಿಗಳಿಗೆಹುಚ್ಚೆದ್ದು ಮಳೆ ಸುರಿಸುವೆ ಅದೆಒಲವೆಂದು ಬಾನೆದೆಯ ಸೀಳಿ ;ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆಬಿಕ್ಕಳಿಸುತ ನಾನಿಲ್ಲಿ…… ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನುನಿನಗುಂಟೆ ಈ ಒಡಲೊಳಗಿಂದಕಣಕಣವು ನೋವಾಗಿ ಚಿಗುರಿ ಮರಹೂ ಕಾಯಿ ಹಣ್ಣಾಗುವ […]

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

Back To Top