ಕವಿತೆ
ದೈವನಿಹನು

ದಯಾನಂದ ಕೆ ಚಂದ್ರಶೇಖರಯ್ಯ
ಗುಡಿ ಗುಂಡಾರಗಳ ಕಟ್ಟಿ
ನಾಮಫಲಕದೊಳು ವೈಭವಿಸಿದಿರೇನು?
ಮಡಿಯ ಮಾಡಿ ಹೂವು ಹಣ್ಣು ಕಾಯಿಡಿದು ಗುಡಿಯಹೊಕ್ಕಿರೇನು ?
ಕಲ್ಲಾಗಿ ಕುಳಿತ ಅವನಿಗೆ
ಕ್ಷೀರಾಭಿಷೇಕವ ಮಾಡಿರೇನು?
ನಿರ್ವಿಕಾರ ಪರಮಶಿವನಿಗೆ
ಮೃಷ್ಟಾನ್ನವ ಉಣ ಬಡಿಸಿದರೇನು?
ಜಡನೀವನು, ಹಸಿವಿರದವನು
ಉಸಿರಿರದವನು ಹೆಸರರಿರದವನು,
ನಿರ್ವೀಕಾರ ಅಗೋಚರನಿವನು
ಅವರವರ ಭಾವದಲಿ ನೆಲೆಸಿಹನು,
ಎಮ್ಮ ಶಿವ ಹೃದಯಶಿವ
ಆತ್ಮಸಾಕ್ಷಾತ್ಕರದೊಳು ನೆಲಸಿಹನು, ಕರುಣಿಯಲಿ ತ್ಯಾಗದಲಿ,
ಮನುಷತ್ವದಲಿ ದೈವನಿಹನು
*******************