ಕವಿತೆ
ಅರ್ಪಣೆ
ಬಿ ಅರುಣ್ ಕುಮಾರ್
ದುರಿತ ಕಾಲದ ಅಬ್ಬರದ
ನಡುವೆ , ಸದ್ದು ಮಾಡಿದೆ
ಸಮೂಹ ಮಾಧ್ಯಮ.
ಸಾಹಿತ್ಯದ ಹೊಸ ಮಜಲಿನ
ಹುಡುಕಾಟ, ಮನೆ ಮಾಡಿದೆ
ವೆಬಿನಾರ್ ನ ಜಪ.
ಯೂಟ್ಯೂಬ್ ಫೇಸ್ ಬುಕ್
ಲೈವ್ ಮಂತ್ರದ ತಾಕಲಾಟಕೆ
ಬುದ್ಧಿಗೆ ಕುಮ್ಮಕ್ಕು ಕೊಟ್ಟು
ಗಂಟೆ ಬಾರಿಸಲೇಬೇಕು .
ಬುಟ್ಟಿಯೊಳಗಿನ ಹಾವಿನಂತೆ
ಫೀಡ್ ಬ್ಯಾಕ್ ಕನವರಿಕೆ .
ಇ-ಪ್ರಮಾಣ ಪತ್ರದ ಪ್ರಸಾದ
ಪಡೆದಾಗಲೇ ಕೃತಾರ್ಥ .
ಆನ್ ಲೈನ್ ಗೋಷ್ಠಿಗಳಲ್ಲಿ
ನಟರಾಜನ ಪುಟ ನರ್ತನ .
ಪ್ರಶಂಸೆ ,ಅಭಿನಂದನಾ ಪತ್ರ
ಸಹಿ ಮಾಡುವ ತವಕ .
ದಿನಕ್ಕೊಂದು ವಸ್ತುವಿನ ಆಮಿಷ
ವಾಟ್ಸಪ್ ಟೆಲಿಗ್ರಾಂಗಳಲ್ಲಿ.!!
ಕವಿ ಬದುಕಿನ ಪ್ರಶ್ನೆ ?
ಉಸಿರಾಗಬೇಕು ಸತ್ಯ ಸತ್ಯ .
ಮತ್ತೆ, ಇನ್ನು ಈ ಕಾವ್ಯಾಭಿಷೇಕಕ್ಕೆ
ಸಾಕ್ಷಿ ಕರೋನಾ! ನಿನಗೆ
ದೀರ್ಘದಂಡ ನಮಸ್ಕಾರ.
-*****************************