ಅರ್ಪಣೆ

ಕವಿತೆ

ಅರ್ಪಣೆ

ಬಿ ಅರುಣ್ ಕುಮಾರ್

ದುರಿತ ಕಾಲದ ಅಬ್ಬರದ
ನಡುವೆ , ಸದ್ದು ಮಾಡಿದೆ
ಸಮೂಹ ಮಾಧ್ಯಮ.

ಸಾಹಿತ್ಯದ ಹೊಸ ಮಜಲಿನ
ಹುಡುಕಾಟ, ಮನೆ ಮಾಡಿದೆ
ವೆಬಿನಾರ್ ನ ಜಪ.

ಯೂಟ್ಯೂಬ್ ಫೇಸ್ ಬುಕ್
ಲೈವ್ ಮಂತ್ರದ ತಾಕಲಾಟಕೆ
ಬುದ್ಧಿಗೆ ಕುಮ್ಮಕ್ಕು ಕೊಟ್ಟು
ಗಂಟೆ ಬಾರಿಸಲೇಬೇಕು .

ಬುಟ್ಟಿಯೊಳಗಿನ ಹಾವಿನಂತೆ
ಫೀಡ್ ಬ್ಯಾಕ್ ಕನವರಿಕೆ .
ಇ-ಪ್ರಮಾಣ ಪತ್ರದ ಪ್ರಸಾದ
ಪಡೆದಾಗಲೇ ಕೃತಾರ್ಥ .

ಆನ್ ಲೈನ್ ಗೋಷ್ಠಿಗಳಲ್ಲಿ
ನಟರಾಜನ ಪುಟ ನರ್ತನ .
ಪ್ರಶಂಸೆ ,ಅಭಿನಂದನಾ ಪತ್ರ
ಸಹಿ ಮಾಡುವ ತವಕ .

ದಿನಕ್ಕೊಂದು ವಸ್ತುವಿನ ಆಮಿಷ
ವಾಟ್ಸಪ್ ಟೆಲಿಗ್ರಾಂಗಳಲ್ಲಿ.!!
ಕವಿ ಬದುಕಿನ ಪ್ರಶ್ನೆ ?
ಉಸಿರಾಗಬೇಕು ಸತ್ಯ ಸತ್ಯ .

ಮತ್ತೆ, ಇನ್ನು ಈ ಕಾವ್ಯಾಭಿಷೇಕಕ್ಕೆ
ಸಾಕ್ಷಿ ಕರೋನಾ! ನಿನಗೆ
ದೀರ್ಘದಂಡ ನಮಸ್ಕಾರ.

-*****************************

Leave a Reply

Back To Top