Category: ಕಾವ್ಯಯಾನ

ಕಾವ್ಯಯಾನ

ಅರಿವೇ ಗುರು

ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. **************************************

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ‌ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ […]

ಗಜಲ್

ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ […]

ಗಜಲ್‌

ಗಜಲ್‌ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ […]

ಕನಸಿನ ಕೊನೆ

ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ […]

ನೆರಳಿಲ್ಲದ ಜೀವ

ಕವಿತೆ ನೆರಳಿಲ್ಲದ ಜೀವ  ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು […]

ಕನಸುಗಳ ದೊಂಬರಾಟ

ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ‌ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ […]

ಆಧುನಿಕ ವಚನಗಳು

ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ […]

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ […]

Back To Top