ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ವನಜ ಮಹಾಲಿಂಗಯ್ಯ ಮಾದಾಪುರ.

ಜೀವನ ಸಂಗಾತಿ ವನಜ ಮಹಾಲಿಂಗಯ್ಯ ಮಾದಾಪುರ. “ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್‌ಗಾಗಿ ಇಡೀ ಕುಟುಂಬವೇ ಬಲಿಯಾಗಬೇಕಾ? ಈ ಪ್ರಶ್ನೆ ಇಂದು ಪ್ರತಿಯೊಬ್ಬ ಪೋಷಕರು ಮತ್ತು ಯುವಕರು ಯೋಚಿಸಬೇಕಾಗಿದೆ. ನಿಜವಾದ ಸಮಸ್ಯೆ ಏನು? “ನಾವು ಕಲಿಯಬೇಕಾದ ಪಾಠ”:“ಪೋಷಕರಿಗೆ” :ಮಕ್ಕಳಿಗೆ ಎಲ್ಲವನ್ನೂ ಕೊಡಿಸುವುದೇ ಪ್ರೀತಿಯಲ್ಲ. “ಇಲ್ಲ” ಎನ್ನಲು ಕಲಿಸಿ, ಹಣದ ಮೌಲ್ಯ, ಕಷ್ಟದ ಅರ್ಥ ತಿಳಿಸಿ. ಪ್ರತಿದಿನ ಅವರೊಂದಿಗೆ ಸ್ವಲ್ಪ ಸಮಯ ಮನಸ್ಸು ಬಿಚ್ಚಿ ಮಾತನಾಡಿ.“ಯುವಕರಿಗೆ” ಯುವತಿಯರಿಗೆ “:ನಿಮ್ಮ ಜೀವನ ಒಂದು ಫೋನ್‌ಗಿಂತ, ಒಂದು ವಸ್ತುವಿಗಿಂತ ಸಾವಿರ ಪಟ್ಟು ದೊಡ್ಡದು. ಸೋಲು, ನಿರಾಸೆ ಜೀವನದ ಒಂದು ಭಾಗ. ನಿಮಗೆ ಏನಾದರೂ ತೀವ್ರ ಬೇಸರ, ಒತ್ತಡ, ಹತಾಶೆ ಅನಿಸಿದರೆ ಒಬ್ಬಂಟಿಯಾಗಿ ಇರಬೇಡಿ. ನಿಮ್ಮ ದುಷ್ಟ ಕೆಟ್ಟದಾಗಿ ಚಟಗಳನ್ನು ಬಿಟ್ಟು, ತಂದೆ ತಾಯಿಯ ಮಾತು ಕೇಳಿ, ಕೆಟ್ಟುಹೋದಾಗ ನಿಮ್ಮನ್ನು ಎಲ್ಲರೂ ದೂರ ತಳ್ಳುತ್ತಾರೆ,. ನಿಮ್ಮನ್ನು ಬಿಟ್ಟುಕೊಡದ ಜೀವಗಳು ಅಂದ್ರೆ ಅದು ಅಪ್ಪ ಅಮ್ಮ. ಅವ್ರಿಗೆ ಸುಳ್ಳು ಹೇಳಿ ಮೋಸ ಮಾಡಿ ಹಾಳಾಗಬೇಡಿ. “ನೆನಪಿಡಿ, ಸಹಾಯ ಯಾವಾಗಲೂ ಲಭ್ಯವಿದೆ”:ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಮಾನಸಿಕ ಒತ್ತಡ, ನಕಾರಾತ್ಮಕ ಯೋಚನೆಗಳು ಕಾಡುತ್ತಿದ್ದರೆ ದಯವಿಟ್ಟು ತಕ್ಷಣ ಮಾತನಾಡಿ:ಹತ್ತಿರದ ಆಪ್ತ ಸಮಾಲೋಚಕರು, ವೈದ್ಯರು ಅಥವಾ ನಿಮ್ಮ ನಂಬಿಕೆಯ ವ್ಯಕ್ತಿಯೊಂದಿಗೆ ಮಾತನಾಡಿ.ಒಂದು ಕ್ಷಣದ ಕೋಪ, ಒಂದು ಕ್ಷಣದ ನಿರ್ಧಾರ ಇಡೀ ಕುಟುಂಬವನ್ನೇ ಮುಗಿಸಿಬಿಡುತ್ತದೆ. ದಯವಿಟ್ಟು ಜೀವನವನ್ನು ಪ್ರೀತಿಸಿ.ಇಂತಹ ಸುದ್ದಿಗಳನ್ನು ಸೆನ್ಸೇಷನಲ್ ಆಗಿ ಹಂಚಿಕೊಳ್ಳುವ ಬದಲು, ಅದರ ಹಿಂದಿನ ಮಾನಸಿಕ ಆರೋಗ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳೋಣ. ವನಜ ಮಹಾಲಿಂಗಯ್ಯ ಮಾದಾಪುರ.

“ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ವನಜ ಮಹಾಲಿಂಗಯ್ಯ ಮಾದಾಪುರ. Read Post »

ಕಾವ್ಯಯಾನ

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಂಗಳೂರು “ವಿಕೋಪ” ಮಾನವೀಯತೆಯೇಮಾನವನ ನಿಜ ಧರ್ಮವಯ್ಯ,!ಅಶಾಂತಿ ಅನೀತಿ ಅಸಹಿಷ್ಣುತೆಯಾವ ರೀತಿಯ ಧರ್ಮವಯ್ಯ,!      ದೇವಾಲಯ ಮಸ್ಜಿದ್     ಕೆಡವುದೇ ಅಧರ್ಮವಯ್ಯ,?!     ಧರ್ಮ ಧರ್ಮಗಳ ಮಧ್ಯೆ     ಕಂದಕ ಸೃಷ್ಟಿಸುವುದು ಕೆಡುಕಯ್ಯ,! ಕೆಡುಕೇ ಅಧರ್ಮ ಹಾದಿಯುಸಮಾಜಕ್ಕೆ ಮಾರಕ ಕಳಂಕವಯ್ಯ!,ದುರಾಡಳಿತೆಯ ತಂತ್ರವುಲೋಕ ಅವಸಾನದ ಲಕ್ಷಣವಯ್ಯ,! ಕಣ್ಣಾರೆ ಕಂಡ ಸತ್ಯವಿದುಮುಂದೆ ಎಚ್ಚರಿಕೆಯಿಂದ ಬಾಳಯ್ಯ,!ಪ್ರಕೃತಿ ವಿಕೋಪವು ಇದಲ್ಲಪರಮಾತ್ಮನ ತಾಳ್ಮೆಯ ಲೋಪವಯ್ಯ.!       ಹಮೀದ್ ಹಸನ್ ಮಂಗಳೂರು.

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿ ಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ ಗಜಲ್ ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆಗಜಲ್ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿ ಮಠ ಅವರ ಗಜಲ್ Read Post »

ಪುಸ್ತಕ ಸಂಗಾತಿ

ಮಾಲಾ.ಮ.ಅಕ್ಕಿಶೆಟ್ಟಿ ಅವರ ಕೃತಿ “ಸ್ವಾವಲಂಬಿ ಬದುಕಿನಾಚೆ” ಅವಲೋಕನ ಸಾವಿತ್ರಿ ಶ್ಯಾನುಭಾಗ

ಪುಸ್ತಕ ಸಂಗಾತಿ ಸಾವಿತ್ರಿ ಶ್ಯಾನುಭಾಗ ಮಾಲಾ.ಮ.ಅಕ್ಕಿಶೆಟ್ಟಿ “ಸ್ವಾವಲಂಬಿ ಬದುಕಿನಾಚೆ” ಪುಸ್ತಕ: ಸ್ವಾವಲಂಬಿ ಬದುಕಿನಾಚೆಲೇಖಕರು :ಮಾಲಾ.ಮ.ಅಕ್ಕಿಶೆಟ್ಟಿಬೆಲೆ:೧೭೦ಪುಟ:೧೨೮+೧೬ಪ್ರಕಾಶನ:ಎಸ್‌,ಎಲ್.ಎನ್.ಪಬ್ಲಿಕೇಷನ್ ಬುದ್ಧಿವಂತನಾದವನು ಬೇರೆಯವರ ಅನುಭವಗಳಿಂದ ತಾನು ಕಲಿಯುತ್ತಾನೆ.ಕೆಲವರಿಗೆ ಬೇರೆಯವರ ಅನುಭವಗಳನ್ನು ನೋಡಿ ಕಲಿಯುವಂತಾದರೆ,ಕೆಲವರಿಗೆ ತಮ್ಮ ಸ್ವಂತ ಅನುಭವದಿಂದಲೇ ಕಲಿಯುವ ಅವಕಾಶ.ಸೋತವರ ಅನುಭವಗಳಿಂದ ಕಲಿತರೆ ಗೆಲ್ಲುವ ಸಾಧ್ಯತೆಯಿದೆ.ಹೀಗೆ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಾ ತನ್ನ ಬದುಕಿನಲ್ಲಿ ತಾನು ವೀಕ್ಷಸಿದ,ವಿದ್ಯಾರ್ಥಿಗಳ ನೋವನ್ನು ನೋಡಿ ನಮಗೆ ಅವುಗಳನ್ನು ಹೇಳಿ ನಮ್ಮ ಕಣ್ತೆರೆಸುವಂತಹ ಬರಹಗಳ ಮೂಲಕ ʼಸ್ವಾವಲಂಬಿ ಬದುಕಿನಾಚೆʼಲೇಖನಗಳ ಸಂಕಲನದ ಮೂಲಕ ಲೇಖಕಿ ಮಾಲಾ ಮ.ಅಕ್ಕಿಶೆಟ್ಟಿಯವರು ಸಾಹಿತ್ಯಲೋಕಕ್ಕೆ ಕೊಡುಗೆ ನೀಡಿದ್ದಾರೆ.ಪ್ರೊ.ನಾಗ.ಎಚ್.ಹುಬ್ಳಿಯವರ ಮುನ್ನುಡಿಯೊಂದಿಗೆ ಬಂದ ಈ ಲೇಖನ ಲೇಖಕಿಯ ಮೊದಲ ಕೃತಿ.   ಮಹಿಳಾಪರ ಲೇಖನಗಳ ಮೂಲಕ ಮಹಿಳೆಯರ ಕುರಿತು ಕಾಳಜಿ,ಅವರು ವಹಿಸಬೇಕಾದ ಎಚ್ಚರ,ಮನೆ-ಕೆಲಸ ಎರಡೂ ಒಟ್ಟಿಗೆ ನಿಭಾಯಿಸಬೇಕಾದಾಗ ಬೇಕಾಗುವ ಎಚ್ಚರಿಕೆ,ಯೌವನದ ದಿನಗಳಲ್ಲಿ ಮೊಬೈಲ್‌ ಸ್ನೇಹದಿಂದ ಆಗಬಹುದಾದ ಪ್ರಮಾದಗಳು,ಸ್ನೇಹ,ಪ್ರೀತಿಯಲ್ಲಿರಬೇಕಾದ ಎಲ್ಲೆ,ವಿವಾಹ ಬಂಧನವನ್ನು ಗಟ್ಟಿಗೊಳಿಸಬೇಕಾದ ಗುಟ್ಟುಗಳು ಹೀಗೆ ಮಹಿಳೆಯರಿಗೆ ಒಬ್ಬ ಸೋದರಿಯಾಗಿ ಎಚ್ಚರಿಕೆ ನೀಡುತ್ತಾರೆ,ಮಹಿಳೆಯರಿಗಾಗಿ ನೀಡಿದ ಎಚ್ಚರ ಎಂದುಕೊಳ್ಳುವುದಕ್ಕಿಂತ ಇಂದಿನ ಯುವಜನಾಂಗಕ್ಕೆ ನೀಡುವ ಕಿವಿಮಾತುಗಳು,ಅವುಗಳನ್ನು ಕಿವಿಮಾತಿನಂತೆ ಹೇಳದೇ ನಯವಾಗಿ,ನಾಜೂಕಾಗಿ ನಾವು ಅಳವಡಿಸಿಕೊಂಡು ಎಚ್ಚೆತ್ತುಕೊಳ್ಳುವಂತೆ ಹೇಳುವ ಅವರ ಶೈಲಿ ನಮಗೆ ಇಷ್ಟವಾಗುತ್ತದೆ.   ೪೨ ಲೇಖನಗಳ ಮೂಲಕ ಕೃತಿಯಲ್ಲಿ ಅವರು ನೀಡುತ್ತಿರುವ ಸಲಹೆ ಸೂಚನೆಗಳು ಇಂದಿನ ಯುವಜನಾಂಗಕ್ಕೆ ಅಗತ್ಯ .ಕೆಲವೊಮ್ಮೆ ಗಂಡಸರ ಕುರಿತು ನಾವು ತಪ್ಪು ತಿಳುವಳಿಕೆ ಹೊಂದಿದ್ದು ಅವರ ಬಗ್ಗೆ ಇರುವ ಒಳ್ಳೆಯ ಗುಣಗಳನ್ನು ಉದಾಹರಣೆ ಸಮೇತ ನೀಡುತ್ತಾ ಅವರ ಸಾಹಾಯಕ್ಕೆ ವಂದಿಸುತ್ತಾ ಎಲ್ಲ ಗಂಡಸರು ಕೆಟ್ಟವರಲ್ಲ,ಅವರ ಬಗ್ಗೆ ತಿಳಿದು ವ್ಯವಹರಿಸಬೇಕು ಎಂದು ಎಚ್ಚರಿಕೆಯನ್ನು ನೀಡುತ್ತಾರೆ.ಬಸ್ಸಿನಲ್ಲಿ ನಡು ಸೀಟಿನಲ್ಲಿ ಕುಳಿತು ನಿದ್ರೆಯ ಮಂಪರಿನಲ್ಲಿ ಪಕ್ಕದಲ್ಲಿ ಕುಳಿತ ಹುಡುಗಿಯತ್ತ ವಾಲುವ ಪರಿಸ್ಥಿತಿಯಲ್ಲಿ ಕಿಟಕಿಯ ಪಕ್ಕ ಕುಳಿತ ಹುಡುಗನ ಬಳಿ ಮನವಿಮಾಡಿ ತಾನು ಆ ಸೀಟಿಗೆ ಹೋಗಿ ನಿದ್ರಿಸುವ ಸನ್ನಿವೇಶ ಹೀಗೆ ಅನೇಕ ಉದಾಹರಣೆ ನಮ್ಮ ಮುಂದೆ ಇಡುತ್ತಾರೆ.  ಇವೆಲ್ಲ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳೇ ಅದರೂ ಎಲ್ಲ ಲೇಖನಗಳನ್ನು ಒಂದೇ ಕಡೆ ಓದುವ ಸದವಕಾಶ ನಮ್ಮ ಪಾಲಿಗಿದೆ.ಮನೆಕೆಲಸವೆಂದರೆ ತಾತ್ಸಾರ ತೋರುವ ಮಹಿಳೆಯರಿಗೆ ಕಿವಿಮಾತು,ಹಿರಿಯರೊಂದಿಗೆ ನಡೆದುಕೊಳ್ಳಬೇಕಾದ ರೀತಿ ಹೀಗೆ ಅನೇಕ ಕಿವಿಮಾತುಗಳನ್ನು ಹೇಳುತ್ತಾ ಸಾಗುವ ಲೇಖಕಿಯ ಎಲ್ಲಾ ಲೇಖನಗಳೂ ಚೆನ್ನಾಗಿ ಮೂಡಿ ಬಂದಿದ್ದು ನಮ್ಮನ್ನು ಓದಲು ಪ್ರೇರೆಪಿಸುತ್ತವೆ.   ಸಾವಿತ್ರಿ ಶ್ಯಾನುಭಾಗ ಪುಸ್ತಕ: ಸ್ವಾವಲಂಬಿ ಬದುಕಿನಾಚೆಲೇಖಕರು :ಮಾಲಾ.ಮ.ಅಕ್ಕಿಶೆಟ್ಟಿಬೆಲೆ:೧೭೦ಪುಟ:೧೨೮+೧೬ಪ್ರಕಾಶನ:ಎಸ್‌,ಎಲ್.ಎನ್.ಪಬ್ಲಿಕೇಷನ್

ಮಾಲಾ.ಮ.ಅಕ್ಕಿಶೆಟ್ಟಿ ಅವರ ಕೃತಿ “ಸ್ವಾವಲಂಬಿ ಬದುಕಿನಾಚೆ” ಅವಲೋಕನ ಸಾವಿತ್ರಿ ಶ್ಯಾನುಭಾಗ Read Post »

ಇತರೆ, ಪ್ರಬಂಧ

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು”

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಮೆಲುಕು” ನನ್ನ ಪತಿಯು ಕೂಡು ಕುಟುಂಬದಲ್ಲಿ ಬೆಳೆದವರು. ನಾನು ಮದುವೆಯಾಗಿ ಅತ್ತೆ ಮನೆಗೆ ಹೋದಾಗ,ನನಗೆ ತಿಳಿದಿದ್ದು ಅವರು ಕೇವಲ ೨/೩ ವರ್ಷದ ಹಿಂದೆಯಷ್ಟೇ ಬೇರೆ ಮನೆಗೆ ಬಾಡಿಗೆಗೆ ಬಂದಿದ್ದು   ಎಂದು.ನನ್ನ ಅತ್ತೆಯವರೇ ಮನೆಗೆ ಹಿರಿಯ ಸೊಸೆ, ಹಾಗಾಗಿ ಜವಾಬ್ದಾರಿ ತುಸು ಜಾಸ್ತಿಯೇ ಅವರ ಮೇಲಿತ್ತು.ನಮ್ಮ ಮಾವನವರಿಗೆ ತಮ್ಮಂದಿರು ನಾಲ್ಕು ಮಂದಿ ಮತ್ತು ಒಬ್ಬ ಅಕ್ಕ,ಇಬ್ಬರು ತಂಗಿಯರು ಇದ್ದರು. ನಮ್ಮ ಮದುವೆಯ ವೇಳೆಗೆ ಮಾವನವರ ತಂದೆ ತೀರಿ ಹೋಗಿದ್ದರು. ಅವರ ತಾಯಿ ( ನನ್ನವರ ಅಜ್ಜಿ) ಅನಾರೋಗ್ಯದಿಂದ ಬಳಲುತ್ತಿದ್ದರು.ಇನ್ನೊಂದು ವಿಶೇಷವೆಂದರೆ ಆ ಸಮಯದಲ್ಲಿ ನನ್ನ ಅತ್ತೆಯವರ ತಾಯಿಯವರೂ ಸಹ ನಮ್ಮ ಮದುವೆಯ ಸಮಯದಲ್ಲಿ ಹಾಜರಿದ್ದು , ಇಬ್ಬರು ಬೀಗಿತ್ತಿಯರೂ ಜೊತೆ ಜೊತೆಯಲ್ಲಿ ಕುಳಿತು ಮದುವೆಯ ಕಾರ್ಯ ಕಲಾಪಗಳೆಲ್ಲವನ್ನೂ ವೀಕ್ಷಿಸಿದ್ದು.ನಮ್ಮ ಮದುವೆಯಾಗಿ ೪೪ ವರ್ಷಗಳಾಗಿದ್ದು, ಈಗಲೂ ನನ್ನವರು ಆಗಾಗ್ಗೆ ( ನಮ್ಮ ಮದುವೆ ವಾರ್ಷಿಕೋತ್ಸವದ ದಿನ/ಮೊಮ್ಮಕ್ಕಳು ಮನೆಗೆ ಬಂದಾಗ ನಮ್ಮ  ಮದುವೆ ಫೋಟೋಗಳನ್ನು ತೋರಿಸುತ್ತಾರೆ)ಆ  ಸಿಹಿ ನೆನಪುಗಳ ಪೋಟೋಗಳನ್ನು ನೋಡುತ್ತಿರುತ್ತಾರೆ. ಮನೆಗೆ ಹಬ್ಬ ಹರಿದಿನಗಳಲ್ಲಿ ಅವರ ಅಣ್ಣ,ತಮ್ಮಂದಿರು ಬಂದಾಗ ಅಂದಿನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ.ಸುಮಾರು ೩೦-೩೫ ಜನರಿದ್ದ ಆ ದೊಡ್ಡ ಕುಟುಂಬವನ್ನು ಈಗಿನ ಪೀಳಿಗೆಯ ಮಕ್ಕಳು ಊಹಿಸಿಕೂಳ್ಳಲೂ ಸಹಾ ಕಷ್ಟ!! ಗಂಡ,ಹೆಂಡತಿ ಮಗುವೊಂದಿರುವ ಕುಟುಂಬ(ವಿಭಕ್ತ ಕುಟುಂಬ) ಪ್ರಚಲಿತವಾಗಿರುವ  ಕಾಲವಿದು.ಐದು ಜನ ಅಣ್ಣ,ತಮ್ಮಂದಿರು ಅವರವರ ಹೆಂಡತಿ, ಮಕ್ಕಳೊಡನೆ ಇದ್ದರೆ ,ಆ ಜೀವನ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ!ಪ್ರತಿಯೊಂದು ದಂಪತಿಗೆ ಕನಿಷ್ಟ ೩/೪ ಮಕ್ಕಳು ಇರುವುದು ಅಂದಿನ ದಿನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು.ಹಾಗೆ ನೋಡಿದರೆ ನಮ್ಮ ಅತ್ತೆಗೆ ಇಬ್ಬರೇ ಗಂಡು ಮಕ್ಕಳು ! ಅತ್ತೆಯವರಿಗೆ ಸುಮಾರು ೮-೧೦ ವರುಷಗಳು ಮಕ್ಕಳಾಗದೇ ನಂತರ ನನ್ನ ಪತಿ ಜನಿಸಿದ್ದು , ನಮ್ಮ ಅತ್ತೆ ಇದ್ದಾಗ ಹೇಳುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ನಂತರ ಎರಡೇ ವರುಷಕ್ಕೆ ನನ್ನ ಮೈದುನ ಹುಟ್ಟಿದ್ದು ಎಂದು ಹೇಳಿ ಅತ್ತೆ ನಗುತ್ತಿದ್ದರು.ನನ್ನ ಅತ್ತೆಯ ಓರಗಿತ್ತಿಯರು ನಾಲ್ಕು ಜನ,ಅವರಿಗೆ ತಲಾ ೨/೩ ಮಕ್ಕಳೆಂದರೂ ೨೫ ಜನರು ಜೊತೆಗೆ ಮಾವನವರ ತಂದೆ ಮತ್ತು ತಾಯಿ ಎಲ್ಲಾ ಸೇರಿ ೩೦  ಮಂದಿಯಾಗುತ್ತಿದ್ದರು.೫-೬ ಜನರು ಹೆಚ್ಚಿಗೆ ಏಕೆ ಹೇಳಿದೆನೆಂದರೆ ಬಂದು ಹೋಗುವ ನೆಂಟರಿಷ್ಟರು ಆಗಿನ ಕಾಲದಲ್ಲಿ ನಿತ್ಯವೂ ಇರುತ್ತಿದ್ದರು.(ಇಪ್ಪತ್ತನೆ ಶತಮಾನದ ೫೦-೭೦ ದಶಕಗಳಲ್ಲಿ ಬಹಳ ಸಾಮಾನ್ಯ ಸಂಗತಿಯಾಗಿತ್ತು.ಈ ಪದ್ದತಿ ಇನ್ನೂ ಕೆಲವು ದಶಕಗಳ ಕಾಲ ಮುಂದುವರಿದಿತ್ತೆಂದು ನೆನಪಿದೆ.)ನಾವು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೂ, ನಮ್ಮ ಮನೆ ಬೆಂಗಳೂರಿನಲ್ಲಿ ಇದ್ದಾಗ ನಮ್ಮ ತಾಯ್ತಂದೆಯರ ಸಂಬಂಧಿಕರು ,ನೆಂಟರು ಮದುವೆ,ಮುಂಜಿಗಳಿಗೆ ಬಂದಾಗ ನಮ್ಮ ಮನೆಯಲ್ಲಿಯೇ ತಂಗುತ್ತಿದ್ದ ನೆನಪು ಈಗಲೂ ನನಗಿದೆ.ಆಗಿನ ಕಾಲದಲ್ಲಿ ಜನರು ಇದ್ದಿದ್ದೇ ಹಾಗೆ. ಕಾಯಿಲೆ-ಕಸಾಲೆಗಳಾದರೆ ತಮ್ಮ ಊರುಗಳಿಂದ ಬೆಂಗಳೂರು/ಹತ್ತಿರದ ಪಟ್ಟಣಗಳಿಗೆ  ವೈದ್ಯರ ತಪಾಸಣೆಗೆ ಬರುತ್ತಿದ್ದರು. ಒಬ್ಬರ ಕಷ್ಟ,ಸುಖಕ್ಕೆ ಇನ್ನೊಬ್ಬರು ಸ್ಪಂದಿಸಿ, ನೆರವಾಗುತ್ತಿದ್ದರು.ನಮ್ಮ ಬಾಡಿಗೆ ಮನೆ ಚಿಕ್ಕದಾಗಿದ್ದರೂ ,ಎಲ್ಲರ ಮನಸ್ಸು ದೊಡ್ಡದಾಗಿತ್ತು.ನಮ್ಮ ಅಜ್ಜಿಯು ನಮ್ಮೊಂದಿಗೆ ಇದ್ದುದರಿಂದ ,ಅವರನ್ನು ನೋಡಲು ನೆಂಟರಿಷ್ಟರು ಆಗಾಗ್ಗೆ ಬರುತ್ತಿದ್ದುದು ಸಾಮಾನ್ಯ ಹಾಗೂ ಸಹಜವಾಗಿತ್ತು.ಇನ್ನು ನನ್ನ ಪತಿಯ ಕೂಡುಕುಟುಂಬದ ಬಗ್ಗೆ , ಅವರ ಜೀವನಶೈಲಿಯ ಬಗ್ಗೆ ಹೇಳುತ್ತ ಹೋದರೆ ಅದೇ ಒಂದು ದೊಡ್ಡ ಪ್ರಹಸನವಾದೀತು! ಇರಲಿ …ತುಸು ಚಿಕ್ಕದಾಗಿ ಹೇಳುತ್ತೇನೆ.ಆ ಕೂಡುಕುಟುಂಬದಲ್ಲಿ ಎಷ್ಟೋ ರಸವತ್ತಾದ,ವಿನೋದಮಯವಾದ ಘಟನೆಗಳು ನಡೆದಿದ್ದವು. ಅವುಗಳಲ್ಲಿ ನಗೆಯುಕ್ಕಿಸುವಂತಹ ಕೆಲವು ಸನ್ನಿವೇಶಗಳು ಹೀಗಿವೆ.ಅವರೆಕಾಯಿಯ ಸೀಸನ್ನಿನ ರಸಮಯವಾದ ಚಿತ್ರಣವನ್ನು ನಿಮ್ಮ ಮುಂದಿಡುವೆ.ಆಗೆಲ್ಲಾ ಅವರೆಕಾಯಿಯ ಕಾಲದಲ್ಲಿ ಎಲ್ಲರಿಗೂ ಸಡಗರ, ಸಂಭ್ರಮವೋ ಸಂಭ್ರಮವು.ಹಬ್ಬದ ವಾತಾವರಣವೆಂದರೂ ತಪ್ಪಿಲ್ಲ.ಹಬ್ಬಗಳೆಲ್ಲಾ ಮುಗಿದ ನಂತರ ‘ಅವರೆಕಾಯಿ ಹಬ್ಬ” ಎಂದು ನಮ್ಮತ್ತೆ ನಗುತ್ತಿದ್ದುದು ನೆನಪಿಗೆ ಬರುತ್ತದೆ.ಆ ಸೀಸನ್ನಿನಲ್ಲಿ ಹೆಚ್ಚು ಕಡಿಮೆ ದಿನವೂ ಅವರೆಕಾಯಿಯನ್ನು ಬಳಸುತ್ತಿದ್ದರು. ಒಂದು ದಿನ ಅವರೆಕಾಳಿನ ಉಪ್ಪಿಟ್ಟು, ಇನ್ನೊಂದು ದಿನ ದೋಸೆ ಮತ್ತು ಹಿತಕವರೆ , ಈರುಳ್ಳಿ ರೊಟ್ಟಿ…ಇನ್ನೊಂದು ದಿನ ಅವರೆಕಾಳಿನ ಚಿತ್ರಾನ್ನ……ಹೀಗೆ ಪಟ್ಟಿ ಬೆಳೆಯುತ್ತ ಇರುತ್ತಿತ್ತು.ಇಲ್ಲಿ ಹಿತಕವರೆಯ ಬಗ್ಗೆ ಹೇಳದಿದ್ದರೆ ಈ ಪ್ರಸಂಗವೇ ಅಪೂರ್ಣವಾಗುತ್ತದೆ.ಹಿತಕವರೆಯನ್ನು ಮಾಡಬೇಕೆಂದರೆ ೨/೩ ದಿನಗಳ ಮುಂಚೆಯೇ ಪ್ಲಾನ್ ಮಾಡಬೇಕಿತ್ತು.ಹಿಂದಿನ ದಿನವೇ ಅವರೆಕಾಯಿಯನ್ನು ತಂದು ಕಾಳನ್ನು ಬಿಡಿಸಿಟ್ಟು ಕೊಳ್ಳಬೇಕಿತ್ತು. ನಂತರ ಅದನ್ನು ನೀರಿನಲ್ಲಿ ಅರ್ಧದಿನ ನೆನೆಸಿಡಬೇಕಾಗುತ್ತಿತ್ತು.ನಂತರ ಆ ಕಾಳುಗಳನ್ನು ಹಿಸುಕಿ, ಅದರ ಹೊಟ್ಟನ್ನು ತೆಗೆಯಬೇಕು. ಈ ಎಲ್ಲಾ ದೀರ್ಘ ಕಲಾಪದ ಬಳಿಕ ಇದಕ್ಕೆ ಮಸಾಲೆ ರುಬ್ಬುವ ಕಾರ್ಯಕ್ರಮ ಶುರುವಾಗಬೇಕಿತ್ತು.ಆ ಪ್ರೋಗ್ರಾಂ ಇನ್ನೂ ರಸವತ್ತಾಗಿ ಇರುತ್ತಿತ್ತು. ಮನೆಯ ಎಲ್ಲಾ ಸದಸ್ಯರು ಈ ಕೆಲಸಕ್ಕೆ ಕೈಗೂಡಿಸಬೇಕಾಗುತ್ತಿತ್ತು.ಹಿಂದಿನ ದಿನವೇ ಮನೆಯವರೆಲ್ಲಾ ಕಾಯಿಯನ್ನು ಬಿಡಿಸಿಟ್ಟು ಮಲಗುತ್ತಿದ್ದರು. ಮರುದಿನ ಮಕ್ಕಳ ಸಹಿತವಾಗಿ ಎಲ್ಲರೂ ಬೆಳಗ್ಗೆ ಬೇಗ ಎದ್ದು ನೆನೆಸಿದ ಕಾಳನ್ನು ಹಿಸುಕಲು ಕುಳಿತುಕೊಳ್ಳುತ್ತಿದ್ದರು. ಮಕ್ಕಳು ಪೈಪೋಟಿಗೆ ಬಿದ್ದವರಂತೆ ಎರಡೂ ಕೈಗಳಲ್ಲಿ ಕಾಳನ್ನು ಹಿಸುಕಿ ಸಿಪ್ಪೆಯನ್ನು ಬೇರ್ಪಡಿಸುತ್ತಿದ್ದರು.ಈಗ ಮಸಾಲೆ ರುಬ್ಬುವ ಕಾರ‍್ಯಕ್ರಮ ಶುರುವಾಗುತ್ತಿತ್ತು. ಮನೆಯ ಹೆಂಗಸರಿಗೆ ಕೈ ತುಂಬಾ ಕೆಲಸವೋ ಕೆಲಸ…..ಒಬ್ಬರು ಈರುಳ್ಳಿಯನ್ನು ಒಲೆಯ ಮೇಲಿಟ್ಟು ಸುಟ್ಟರೆ, ಇನ್ನೊಬ್ಬರು ತೆಂಗಿನಕಾಯಿಯನ್ನು ತುರಿಯುತ್ತಿದ್ದರು. ಇನ್ನಿಬ್ಬರು ಮಸಾಲೆ ರುಬ್ಬಲು ಕುಳಿತುಕೊಳ್ಳುತ್ತಿದ್ದರು. ಬಳಿಕ ಬೇಯಲು ಇಟ್ಟಿದ್ದ ಕಾಳಿಗೆ ಮಸಾಲೆಯನ್ನು ಸೇರಿಸುತ್ತಿದ್ದರು.ಹೀಗೆ ಸುದೀರ್ಘದ ತಯಾರಿಯ ನಂತರ ಹಿತಕವರೆ ಕೊನೆಗೆ ಅಂತೂ ಸಿದ್ದವಾಗುತ್ತಿತ್ತು.ಈಗ  ಇನ್ನೊಂದು ಪರ್ವ ಶುರುವಾಗುತ್ತಿತ್ತು. ಶೈಲಜಾ ಪ್ರಸಾದ್

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು” Read Post »

ಇತರೆ

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ )

ಶಿಕ್ಷಕ ಸಂಗಾತಿ ಕಾವ್ಯ ಸುಧೆ. ( ರೇಖಾ ಶಂಕರ್ ) “ಶಿಕ್ಷಕ ದಿನಾಚರಣೆಯ ಶುಭಾಶಯಗಳು” ಶಿಕ್ಷಣ ಮತ್ತು ಜ್ಞಾನಕ್ಕೆ ಅತ್ಯುನ್ನತ ಗೌರವವನ್ನು ನೀಡಲಾಗುವ ಭಾರತ ದೇಶವಾಸಿಯಾಗಿರುವ  ನಮ್ಮ ಹೃದಯದಲ್ಲಿ ” ಶಿಕ್ಷಕರ ದಿನ’ವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅಸಂಖ್ಯಾತ ವಿದ್ಯಾರ್ಥಿಗಳ ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಆಳವಾದ ಪ್ರಭಾವ ಬೀರುವ ಶಿಕ್ಷಕರನ್ನು ಗೌರವಿಸಲು ಮೀಸಲಾದ ಈ ದಿನವನ್ನು, ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸುತ್ತದೆ. ಇದು ಕೇವಲ ಸಂಭ್ರಮಾಚರಣೆಯ ದಿನವಷ್ಟೇ ಅಲ್ಲ, ಬದಲಾಗಿ ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ನಾಯಕರಲ್ಲೊಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಒಂದು ಮಹತ್ವದ ಸಂದರ್ಭವಾಗಿದೆ. ಶಿಕ್ಷಕರ ದಿನವು ಕೇವಲ ಮೆಚ್ಚುಗೆಯನ್ನು ವ್ಯಕ್ತಪಡಿಸುವ ದಿನವಲ್ಲ; ಬದಲಾಗಿ, ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ನಿರ್ಣಾಯಕ ಪಾತ್ರವನ್ನು ಅದು ನಮಗೆ ನೆನಪಿಸುತ್ತದೆ. ಶಿಕ್ಷಕರು ಸಮಾಜದ ಶಿಲ್ಪಿಗಳಾಗಿದ್ದು, ಯುವ ಮನಸ್ಸುಗಳನ್ನು ರೂಪಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಕೇವಲ ಶೈಕ್ಷಣಿಕ ವಿಷಯಗಳನ್ನು ಬೋಧಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಹಾಗೂ ಅವರ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ, ಅವರನ್ನು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುತ್ತಾರೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಶಿಕ್ಷಕರ ಪಾತ್ರ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಕ್ಷಿಪ್ರ ತಾಂತ್ರಿಕ ಪ್ರಗತಿ, ಜಾಗತೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯತೆಯಂತಹ 21ನೇ ಶತಮಾನದ ಸವಾಲುಗಳನ್ನು ಎದುರಿಸಲು, ಈ ಸಂಕೀರ್ಣ ಜಗತ್ತಿನಲ್ಲಿ ಮುನ್ನಡೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುವ ಹೊಸ ತಲೆಮಾರಿನ ಚಿಂತಕರು ಹಾಗೂ ನಾಯಕರ ಅವಶ್ಯಕತೆಯಿದೆ. ವಿದ್ಯಾರ್ಥಿಗಳನ್ನು ಈ ಸವಾಲುಗಳನ್ನು ಎದುರಿಸಲು ಮತ್ತು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಸಿದ್ಧಪಡಿಸುವ ಮೂಲಕ, ಶಿಕ್ಷಕರು ಈ ಮಹತ್ವದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.ಶಿಕ್ಷಕರ ದಿನವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿರುವ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮಗೆಲ್ಲರಿಗೂ ಸಿಗುವ ಒಂದು ಅವಕಾಶವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲು ಶಿಕ್ಷಕರು ಪಡುವ ಶ್ರಮ, ಅವರ ಬದ್ಧತೆ ಮತ್ತು ಅವರು ಮಾಡುವ ತ್ಯಾಗವನ್ನು ಗುರುತಿಸುವ ದಿನವಿದು. ಜೊತೆಗೆ, ಶಿಕ್ಷಣದ ಮಹತ್ವವನ್ನು ಅವಲೋಕಿಸಲು ಹಾಗೂ ಶಿಕ್ಷಕರ ಪ್ರಮುಖ ಪಾತ್ರಕ್ಕೆ ಬೆಂಬಲ ನೀಡುವ ಮತ್ತು ಅವರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವೂ ಇದಾಗಿದೆ. ಕೊನೆಯದಾಗಿ, ಶಿಕ್ಷಕರ ದಿನಾಚರಣೆಯು ತಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ. ಬೋಧನೆಯು ಎಲ್ಲಾ ವೃತ್ತಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಎಂದು ನಂಬಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಪರಂಪರೆಯನ್ನು ಸ್ಮರಿಸುವ ದಿನವಿದು. ಶಿಕ್ಷಕರ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ, ಶಿಕ್ಷಣದ ಮಹತ್ವ ಮತ್ತು ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ನಾವು ಒಮ್ಮೆ ಚಿಂತಿಸೋಣ. ನಮಗೆ ಸ್ಫೂರ್ತಿ ನೀಡಿದ, ನಮ್ಮನ್ನು ಸವಾಲುಗಳಿಗೆ ಒಡ್ಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸೋಣ. ಹಾಗೆಯೇ, ಮುಂದಿನ ಪೀಳಿಗೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಕಾರ್ಯವನ್ನು ಶಿಕ್ಷಕರು ಮುಂದುವರಿಸಲು ಅವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಸಂಕಲ್ಪ ಮಾಡೋಣಅಲ್ಲವೇ…………. ಕಾವ್ಯ ಸುಧೆ. ( ರೇಖಾ ಶಂಕರ್ )

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ ) Read Post »

ಕಾವ್ಯಯಾನ, ಗಝಲ್

ರತ್ನರಾಯ ಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯ ಮಲ್ಲ ಅವರ ಗಜಲ್ ನನ್ನೆದೆಯಲಿ ಅರಳಿದ ಚಿತ್ರವ ವರ್ಣಿಸಲು ಪದಗಳು ಸೋಲುತಿವೆಭಾವದ ಕುಲುಮೆಯಲಿ ಗಜಲ್ ರಚಿಸಲು ಪದಗಳು ಸೋಲುತಿವೆ ದಿನವೂ ನಿನ್ನ ಕಾಣುತಿರುವೆ ಅವನಿಗೆ ಬೆಳಕಾಗಿರುವ ನೇಸರನಲಿಹೃದಯದಲಿ ನಿನ್ನ ಇರುವಿಕೆ ತೋರಿಸಲು ಪದಗಳು ಸೋಲುತಿವೆ ಪ್ರೇಮದ ಹಸಿವು ನೀಗಿಸಲು ನಿನ್ನ ಅಂತರಂಗದ ಕದ ತಟ್ಟುತಿರುವೆನಿನ್ನಧರಗಳ ಸವಿ ಪುಟದಲಿ ಜೋಡಿಸಲು ಪದಗಳು ಸೋಲುತಿವೆ ಪ್ರೀತಿಸುತಿಲ್ಲ ಅಕ್ಷರಗಳಲಿ ನಿನ್ನನು ಉಸಿರಾಡುತಿರುವೆ ಬೇಬಿಮಾನನ್ನಾರುಮೆಯ ಆಳದ ಅಳತೆ ತಿಳಿಸಲು ಪದಗಳು ಸೋಲುತಿವೆ ಮಲ್ಲಿಗೆ ಸುಮದಂತೆ ನೆನಪು ದೂರವಿದ್ದರೂ ಕನಸಲಿ ಅರಳುವುದುಅಂತರದಲಿ ಜಿನುಗುವ ಕಂಬನಿ ರಮಿಸಲು ಪದಗಳು ಸೋಲುತಿವೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-35 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಕರ್ನಾಟಕ ಏಕೀಕರಣ ಭಾಗ-35*ಕರ್ನಾಟಕ ಏಕೀಕರಣ* ಡಾ. ಜಯದೇವಿತಾಯಿಯವರು ಭಾರತದ ಅಖಂಡತೆಯನ್ನು ಸದಾ ಒಪ್ಪಿಕೊಂಡವರು.ಭಾರತವು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರ. ಭಾಷೆಗಳು ಬೇರೆಬೇರೆಯಾಗಿದ್ದರೂ, ಅವೆಲ್ಲವೂ ಸೇರಿ ಭಾರತದ ಏಕತೆಯನ್ನು ರೂಪಿಸುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಹಾಗೇನೆ ಅವರು ಭಾಷಾವಾರು ಪ್ರಾಂತ ರಚನೆಯನ್ನೂ ಬೆಂಬಲಿಸಿದರು. ಭಾಷಾವಾರು ಪ್ರಾಂತ ಎಂದರೆ ದೇಶವನ್ನು ವಿಭಜಿಸುವುದು ಎಂಬ ಅರ್ಥ ಅವರದ್ದಾಗಿರಲಿಲ್ಲ. ಬದಲಾಗಿ, ಒಂದೇ ಭಾಷೆಯನ್ನು ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಬಂದರೆ, ಆ ಭಾಷೆಯ ಅಭಿವೃದ್ಧಿ, ಸಂರಕ್ಷಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆ ಕಾಲದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರದೇಶಗಳಲ್ಲಿ ಚದುರಿಹೋಗಿದ್ದರು. ಇದರಿಂದ ಕನ್ನಡ ಭಾಷೆಯ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಆಡಳಿತದಲ್ಲಿ ಕನ್ನಡದ ಬಳಕೆಗೆ ಹಲವು ಅಡಚಣೆಗಳಿದ್ದವು. ಕನ್ನಡಿಗರ ಪ್ರದೇಶಗಳು ಒಂದಾದರೆ ಕನ್ನಡ ಶಾಲೆಗಳು ಬೆಳೆಯಲು, ಕನ್ನಡದಲ್ಲಿ ಶಿಕ್ಷಣ ದೊರೆಯಲು, ಕನ್ನಡ ಸಾಹಿತ್ಯ ಅಭಿವೃದ್ಧಿಯಾಗಲು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ ಎಂದು ಅವರು ನಂಬಿದ್ದರು.ಭಾಷೆಯನ್ನು ಉಳಿಸುವ ಉದ್ದೇಶದಿಂದಜಯದೇವಿತಾಯಿಯವರ ಭಾಷಾವಾರು ಪ್ರಾಂತದ ಬೆಂಬಲಿಸಿದರು..ಅಂತೆಯೇ ಅದರ ಹಿಂದೆ ಭಾಷಾಭಿಮಾನವಿತ್ತು…… ಭಾಷೆಯು  ಒಂದು ಜನಾಂಗದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ಜೀವನಶೈಲಿ ಮತ್ತು ಭಾವನೆಗಳ ವಾಹಕ. ಆದ್ದರಿಂದ ಒಂದು ಭಾಷೆಯನ್ನು ಉಳಿಸುವುದು ಎಂದರೆ ಅದರೊಂದಿಗೆ ಬೆಸೆದುಕೊಂಡಿರುವ ಸಂಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಾಗಿದೆ.ಕನ್ನಡ ಭಾಷಿಕ ಪ್ರದೇಶಗಳು ಒಂದಾಗುವುದರಿಂದ ಕನ್ನಡಿಗರಲ್ಲಿ “ನಾವೆಲ್ಲರೂ ಒಂದೇ” ಎಂಬ ಭಾವನೆ ಬಲವಾಗುತ್ತದೆ. ಕನ್ನಡ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕನ್ನಡ ಭಾಷೆ ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಸಾಗುತ್ತ ಬಂದಿತು ಜಯದೇವಿತಾಯಿಯವರ ವಿಚಾರದಲ್ಲಿ ಕರ್ನಾಟಕದ ಏಕೀಕರಣ ಮತ್ತು ಭಾರತದ ಅಖಂಡತೆ ಪರಸ್ಪರ ವಿರೋಧಿಗಳಲ್ಲ. ಕರ್ನಾಟಕ ಒಂದಾಗುವುದು ಭಾರತದೊಳಗೇ ಒಂದು ರಾಜ್ಯದ ಏಕೀಕರಣವೆಂದರೆ“ನಾಡು ಒಂದಾಗಲಿ, ಭಾಷೆ ಬೆಳೆಯಲಿ.. ಎಂಬ ಭಾವನೆ ಅವರ ಚಿಂತನೆಯಲ್ಲಿತ್ತು. ಅಖಂಡ ಕರ್ನಾಟಕ ಏಕೀಕರಣ ಆಗಷ್ಟೇ ಹುಟ್ಟಿಕೊಂಡಿದ್ದಾಗಿರಲಿಲ್ಲ …ಕೆಲವು ದಶಕಳ ನಿರಂತರ  ಹೋರಾಟ ನಡೆದೇಯಿತ್ತು…. ೧೯೧೬,ರಲ್ಲಿ ಮೌಂಟೇಗ್ಯೂ ಚೆಮ್ಸ್‌ಫರ್ಡ್ ಭಾರತಕ್ಕೆ ಬಂದ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದ *ವಿದ್ಯಾವರ್ಧಕ ಸಂಘವು* ಅವರಿಗೆ ಒಂದು ಬಿನ್ನಹ ಪತ್ರವನ್ನು ಸಲ್ಲಿಸಿತು.ಆ ಬಿನ್ನಹ ಪತ್ರದಲ್ಲಿ ಕನ್ನಡಿಗರ ಪ್ರಮುಖ ಸಮಸ್ಯೆಯನ್ನು ವಿವರಿಸಲಾಗಿತ್ತು. ಆಗ ಕನ್ನಡ ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಕರ್ನಾಟಕದ ಕನ್ನಡ ಭಾಷಿಕ ಪ್ರದೇಶಗಳು ವಿವಿಧ ಪ್ರಾಂತಗಳು ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದವು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಕನ್ನಡಿಗರ ಅಭಿವೃದ್ಧಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸಬೇಕು ಮತ್ತು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ಸೇರಿಸಬೇಕು ಎಂದು  ವಿದ್ಯಾವರ್ಧಕ ಸಂಘವು ಮನವಿ ಮಾಡಿತು. ಇದುವೇ ಮುಂದೆ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಮುಖ ಬಲ ನೀಡಿತು.ಈ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಚಾರದ ಬಗ್ಗೆ ಚರ್ಚೆ ನಡೆಯಿತು. ೧೯೧೭ರಲಿ ಮಹಾತ್ಮ ಗಾಂಧೀಜಿಯವರಿಗೆ ಮನವಿ ಸಲ್ಲಿಸಲಾಗಿತ್ತು.ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತು. ಇದರಿಂದ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ತರಬೇಕು ಎಂಬ ಆಶಯಕ್ಕೆ ಮತ್ತಷ್ಟು ಬಲ ದೊರೆಯಿತು. ನಂತರ ಕರ್ನಾಟಕ ಏಕೀಕರಣಕ್ಕಾಗಿ ನಡೆದ ವಿವಿಧ ಸಭೆ, ಸಮ್ಮೇಳನ ಮತ್ತು ಮನವಿಗಳ ಮೂಲಕ “ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಬೇಕು” ಎಂಬ ಬೇಡಿಕೆ ನಿರಂತರವಾಗಿ ಮುಂದುವರಿಯಿತು.ಈ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ *ಕರ್ನಾಟಕ ಏಕೀಕರಣ ಪರಿಷತ್ತು* ಸ್ಥಾಪಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳ ಕನ್ನಡಿಗರನ್ನು ಒಂದುಗೂಡಿಸಿ, ಏಕೀಕರಣದ ಉದ್ದೇಶವನ್ನು ಜನರಲ್ಲಿ ಬಿತ್ತುವುದು ಮತ್ತು ಸರ್ಕಾರದ ಗಮನವನ್ನು ಸೆಳೆಯುವುದು ಈ ಪರಿಷತ್ತಿನ ಪ್ರಮುಖ ಉದ್ದೇಶವಾಗಿತ್ತು. ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನಗಳು ಕೈಕೊಳ್ಳಲಾರಂಭಿಸಿದರು. ೧೯೨೪ ಡಿಸೆಂಬರ್ ೨೫ ರಂದು ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯಿತು.ಅಧಿವೇಶನದ ಅಧ್ಯಕ್ಷರು  ಸಿದ್ಧಪ್ಪ ಕಂಬಳಿ ಅವರು‌ವಹಿಸಿದ್ದರು….ಈ ಅಧಿವೇಶನದಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸುವುದು ಮತ್ತು ಏಕೀಕರಣದ ಹೋರಾಟವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಯಿತು.೧೯೨೬ರಲಿ ಜರುಗಿದ ಎರಡನೇ ಅಧಿವೇಶನಕ್ಕೆ ಪಟ್ಟಾಭಿ ಸೀತಾರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಅಧಿವೇಶನದ ಮೂಲಕವೂ ಕನ್ನಡ ಪ್ರದೇಶಗಳ ಏಕೀಕರಣದ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ನಾಯಕರು ಹಾಗೂ ಹೋರಾಟಗಾರರು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾದರು. ೧೯೨೮ರ ಮೂರನೇ ಅಧಿವೇಶನವು ಧಾರವಾಡದಲ್ಲಿ ನಡೆಯಿತು.ಇದಕ್ಕೆ ಫ. ಗು. ಹಳಕಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಧಾರವಾಡವು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಕೇಂದ್ರವಾಗಿ ಬೆಳೆಯಲು ಈ ರೀತಿಯ ಸಭೆಗಳು ಸಹಾಯ ಮಾಡಿದವು.ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಅದರ ಶಾಖೆಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸ್ಥಾಪನೆಯಾದವು. ಇದರ ಮೂಲಕ ಏಕೀಕರಣದ ಸಂದೇಶವು ಗ್ರಾಮ, ಪಟ್ಟಣ ಮತ್ತು ವಿವಿಧ ಕನ್ನಡ ಪ್ರದೇಶಗಳಿಗೆ ತಲುಪಿತು. ಜನರಲ್ಲಿ “ನಾವೆಲ್ಲರೂ ಕನ್ನಡಿಗರು, ನಮ್ಮ ನಾಡು ಒಂದಾಗಬೇಕು” ಎಂಬ ಭಾವನೆ ಗಟ್ಟಿಯಾಯಿತು.ಈ ಚಳವಳಿಯ ಪ್ರಮುಖ ನಾಯಕರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು, ನರಗುಂದಾರಾಯಣ ದೇಶಪಾಂಡೆ ಮುಂತಾದವರು ಪ್ರಮುಖರಾಗಿದ್ದರು. ಇವರು ಕನ್ನಡಿಗರನ್ನು ಸಂಘಟಿಸಿ, ಕರ್ನಾಟಕದ ಏಕೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದರು.  ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು, ಕಾಂಗ್ರೆಸ್‌ನ ಭಾಷಾವಾರು ಪ್ರಾಂತದ ಪರವಾದ ನಿಲುವು, ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಕನ್ನಡ ಮಾತೆಯ ಮಕ್ಕಳ ನಿರಂತರ ಪ್ರಯತ್ನಗಳು ಮುಂದೆ ಕರ್ನಾಟಕ ಏಕೀಕರಣಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದವು. ಸವಿತಾ ದೇಶಮುಖ

Read Post »

ಅನುವಾದ, ಕಾವ್ಯಯಾನ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ

ಅನುವಾದ ಸಂಗಾತಿ “ನಿನ್ನೆಯೊಳಗೆ” ತೆಲುಗು ಮೂಲ:ರಾಜಾಬಾಬು ಕಂಚರ್ಲಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ ಜೀವನವನ್ನು ದಾಟಿಕೊಂಡು ಹೊರಟಿದ್ದೇನೆಎಲ್ಲೋ, ಎಂದೋ…ನನ್ನ ಭವಿಷ್ಯವನ್ನೇಕಳೆದುಹೋಗುವಂತೆ ಬಿಟ್ಟು ಬಂದವನಂತೆ ಎದುರಾದವರುನಗುತ್ತಾ ಮಾತಾಡಿಸುವರುಕಾಲವು ಮಾತ್ರನನ್ನ ಕೈ ಹಿಡಿದುಮುಂದಕ್ಕೆ ಎಳೆದೊಯ್ಯುತ್ತಿದೆ ಆದರೂ…ನನ್ನೊಳಗಿನ ಒಂದು ಸಣ್ಣ ತುಣುಕುಇಂದಿಗೂ ಅಲ್ಲೇ ನಿಂತಿದೆನೀನು ಕೊನೆಯ ಸಲಕಂಡ ಆ ಹೊಸ್ತಿಲ ಬಳಿ ನೀನು…ಮೌನದೊಳಗೆ ಮುಳುಗಿಹೋದೆನಾನು ಮಾತ್ರನನಗಿಷ್ಟವಾದ ನಿನ್ನೆಯೊಳಗೆನಡೆಯುತ್ತಾ ಹೊರಟುಹೋದೆ ದಿನಗಳು ಕಳೆದವುಋತುಗಳು ಬದಲಾದವುಮನುಷ್ಯರು ಬದಲಾಗಿಬಿಟ್ಟರು ಆದರೆ… ನನ್ನೊಳಗೆಇನ್ನೂ ಒಂದು ಬಾಗಿಲು ಮಾತ್ರಇಂದಿಗೂ ತೆರೆದೇ ಇದೆನೀನು ಮರಳಿ ಬರಬಹುದೆಂಬ ನಿರೀಕ್ಷೆಯಿಂದಲ್ಲನಾನು ಕಳೆದುಕೊಂಡನನ್ನ ನಿನ್ನೆಯನ್ನುಎಂದಾದರೂ ಮತ್ತೆಪಡೆಯುವೆನೇನೋ ಎಂಬ ನಿರೀಕ್ಷೆಯಿಂದ!! ತೆಲುಗು ಮೂಲ : ರಾಜಾಬಾಬು ಕಂಚರ್ಲಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ವಿಶ್ವ ಮಾನವ ಕವಿ ಪಂಪ ಪಂಪ (ಕ್ರಿ.ಶ. (902-955 CE) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. ಕನ್ನಡ ಸಾಹಿತ್ಯ ಸಾರಸ್ವತ ಲೋಕದ ಮಹಾಮಾನವತಾವಾದಿ ಶ್ರೇಷ್ಠ ಜೀವ ಪರ ಕವಿ ಪಂಪ. ಕನ್ನಡ ಸಾಹಿತ್ಯ ಲೋಕದಲ್ಲಿ ಪಂಪನ ಯುಗವೆಂದೇ ಗುರುತಿಸಲ್ಪಟ್ಟ ಅಪರೂಪದ  ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಕವಿ ಶ್ರೀಮಂತ.  ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ, ಪಂಪನ ಎರಡು ಮೇರು ಕೃತಿಗಳು. ಹಿನ್ನೆಲೆ ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ಜೀವನ ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು,  “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ”  ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. ಪಂಪನ ಇನ್ನೊಂದು ಕೃತಿ ‘ವಿಕ್ರಮಾರ್ಜುನ ವಿಜಯ’ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. ಪಂಪನನ್ನು “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. ‘ಹಿತಮಿತ ಮೃದುವಚನ’ ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ಕೃತಿಗಳು ಆದಿಪುರಾಣ ವಿಕ್ರಮಾರ್ಜುನ ವಿಜಯ  ಪಂಪ ಭಾರತ ಅರಿಕೇಸರಿಯ ಆಸ್ಥಾನ ಬನವಾಸಿ ವರ್ಣನೆಯ ಪದ್ಯ ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್||   (ಉತ್ಪಲಮಾಲೆ) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ||  (ಉತ್ಪಲಮಾಲೆ) ಗದ್ಯಭಾಗ – ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.  ಪಂಪ ಭಾರತದಲ್ಲಿ ಕರ್ಣನಿಗೆ ನಾಯಕತ್ವವನ್ನು ಪಟ್ಟವನ್ನು ಕಟ್ಟುವ ಪಂಪ ಮಹಾಭಾರತದಲ್ಲಿ ನೆನೆದೊಡೆ ನೆನೆ ಕರ್ಣಂ ನೆನೆ ಎಂದಿದ್ದಾನೆ.  ಆಕರಗಳು “ಆರ್ಕೈವ್ ನಕಲು”. Archived from the original on 2022-10-09. Retrieved 2020-03-26. ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭ ಈ-ಭೋಗದ-ಜಗತ್ತೇ-ಬೇರೆ-ಆದಿಪುರ/ ಪಂಪಭಾರತ : ಗದ್ಯಾನುವಾದ – ಚತುರ್ದಶಾಶ್ವಾಸಂ ಪದ್ಯ ೪೩-೫೨ ______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top