ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” ಬದುಕಿದ್ದಾಗ…ಅವನ ಮನೆಯ ಬಾಗಿಲು ತಟ್ಟಿದರೂತೆರೆದದ್ದು ಯಾರ ಮನಸ್ಸೂ ಅಲ್ಲ. ಹಸಿವೆಂದು ಕೈ ಚಾಚಿದಾಗಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,ದುಃಖವೆಂದು ಕಣ್ಣೀರು ಸುರಿಸಿದಾಗಒಂದು ಹೆಗಲನ್ನೂ ನೀಡದ ಬಂಧುಗಳು. ಅವನ ಉಸಿರು ಇರುವಾಗಅವನ ಮಾತಿಗೆ ಬೆಲೆ ಇರಲಿಲ್ಲ;ಉಸಿರು ನಿಂತ ಕ್ಷಣದಿಂದಲೇಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು. ಚಿತೆಯ ಬೆಂಕಿ ಹೊತ್ತಿತು…ದೇಹ ಬೂದಿಯಾಯಿತು…ಆದರೆ ಸುಟ್ಟು ಹೋದದ್ದು ದೇಹವಲ್ಲ—ಸಮಾಜದ ಕಪಟ ಮುಖವಾಡ. ಅಂತ್ಯಸಂಸ್ಕಾರಕ್ಕೆಸಾವಿರ ಜನ ಸೇರಿದರು;ಬದುಕಿನ ದಾರಿಯಲ್ಲಿಅವನೊಂದಿಗೆ ನಡೆದದ್ದುಅವನ ನೆರಳು ಮಾತ್ರ. ಮೂರನೇ ದಿನ…ಹತ್ತನೇ ದಿನ…ವಾರ್ಷಿಕ…ನಂತರ ಜಾತ್ರೆ… ವೇದಿಕೆ ಕಟ್ಟಿದರು.ಹೂವಿನ ಹಾರ ಹೊದಿಸಿದರು.ಅವನ ಹೆಸರಿನಲ್ಲಿ ಧ್ವಜ ಹಾರಿಸಿದರು.ನಿನ್ನೆ ಅವನನ್ನು ತಿರಸ್ಕರಿಸಿದವರೇಇಂದು ಹೊಗಳಿಕೆಯ ಹೊಳೆ ಹರಿಸಿದರು. “ಅವನು ಮಹಾನ್…” ಎಂದರು.“ಅವನು ಸಮಾಜದ ಬೆಳಕು…” ಎಂದರು.“ಅವನಂತವರು ಅಪರೂಪ…” ಎಂದರು. ಆ ಮಾತುಗಳನ್ನು ಕೇಳಿಕಾಲವೇ ಕಹಿಯಾಗಿ ನಕ್ಕಿತು. ಏಕೆಂದರೆ—ಅವನು ಬದುಕಿದ್ದಾಗಈ ಒಂದು ಮಾತನ್ನಾದರೂಅವನ ಕಿವಿಗೆ ಹೇಳಿರಲಿಲ್ಲ! ಜಾತ್ರೆಯ ದಿನಹೊಟ್ಟೆತುಂಬ ಊಟ,ಕೈತುಂಬ ಕಾಣಿಕೆ,ವೇದಿಕೆಯ ಮೇಲೆ ಭಾಷಣ,ಕೆಳಗೆ ಚಪ್ಪಾಳೆ… ಜಾತ್ರೆ ಮುಗಿದ ಮೇಲೆ? ಹೂವು ಒಣಗಿತು.ವೇದಿಕೆ ತೆರವಾಯಿತು.ಜನರು ಮರೆಯಾದರು.ಅವನ ಹೆಸರೂಮತ್ತೊಮ್ಮೆ ಧೂಳಿನೊಳಗೆ ಮಲಗಿತು. ಇದೇನಾ ಸಂಸ್ಕಾರ? ಸಂಸ್ಕಾರವೆಂದರೆಸತ್ತವನಿಗೆ ಚಂದನ ಹಚ್ಚುವುದಲ್ಲ;ಬದುಕಿರುವವನ ಗಾಯಕ್ಕೆಒಂದು ಮುದ್ದಾದ ಮದ್ದು ಹಚ್ಚುವುದು. ಸಂಸ್ಕಾರವೆಂದರೆಚಿತೆಗೆ ಬೆಂಕಿ ಕೊಡುವುದಲ್ಲ;ಜೀವಂತ ಹೃದಯದಲ್ಲಿಭರವಸೆಯ ದೀಪ ಹಚ್ಚುವುದು. ಸಂಸ್ಕಾರವೆಂದರೆಸಾವಿನ ನಂತರದ ಜಾತ್ರೆಯಲ್ಲ;ಜೀವನದೊಳಗಿನ ಮಾನವೀಯತೆ. ಕೊರಡಿಗಿಲ್ಲಿ ಸಂಸ್ಕಾರಮರಣದ ನಂತರದ ಆಡಂಬರವಲ್ಲ—ಬದುಕಿರುವಾಗಲೇಮನುಷ್ಯನನ್ನು ಮನುಷ್ಯನಾಗಿ ಕಾಣುವಕರುಣೆಯ ಕಣ್ಣು. ಇಲ್ಲದಿದ್ದರೆ… ಪ್ರತಿ ವರ್ಷ ಜಾತ್ರೆ ನಡೆಯುತ್ತದೆ,ಪ್ರತಿ ವರ್ಷ ಭಾಷಣಗಳು ಮೊಳಗುತ್ತವೆ,ಪ್ರತಿ ವರ್ಷ ಹೊಗಳಿಕೆಯ ಹೂವುಗಳು ಬೀಳುತ್ತವೆ. ಆದರೆ… ಬದುಕಿದ್ದಾಗ ಕಡೆಗಣಿಸಿದಒಬ್ಬ ಮನುಷ್ಯನ ನಿಟ್ಟುಸಿರುಆ ಚಪ್ಪಾಳೆಗಳಿಗಿಂತ ದೊಡ್ಡದು. . -ಎನ್.ಜಯಚಂದ್ರನ್ .ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” Read Post »

ಕಾವ್ಯಯಾನ

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು “ಅವಳಿಗೆ” ಅವಳಿರಬೇಕಿತ್ತು ಅಲ್ಲಿಅವನ ಜೊತೆಯಲ್ಲಿಅವನ ಬದುಕಲ್ಲಿಅವನ ಬಾಳಿನಲ್ಲಿ  ಆಗಬೇಕಿತ್ತು ಅವಳಿಗೆಅವನ ಮಗನ ತಾಯಿಯಾಗಿಅವನ ಬಾಳ ಸಂಗಾತಿಯಾಗಿಅವನ ಹೃದಯದ ಬಡಿತವಾಗಿ ಬಯಕೆಯಿತ್ತು ಅವಳಿಗೆಬಾಹುಗಳಲ್ಲಿ ಬಂಧಿಯಾಗಲುಸುಖ ದುಃಖಗಳಲಿ ಜೊತೆಯಾಗಲುಅವನ ತುಟಿಗಳ ನಗುವಾಗಲು ಕನಸಿತ್ತು ಅವಳಿಗೆಅವನ ಕನಸಿಗೆ ಜೀವ ತುಂಬಲುಅವನ ಕವಿತೆಗೆ ಪದವಾಗಲುಮಧುಮಂಚದ ವದುವಾಗಲು ಅಂತರಂಗದ ಭಾವನೆಗಳುಹೊರಬರಲಾರದ ಕನಸುಗಳುಬಲಿಪಶುವಾದ ಹೂಗಳುಅವಲೊಳಗಿನ ಅವಶೇಷಗಳು ಪರಿಮಳ ಐವರ್ನಾಡು

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಮ್ಮ ನೆತ್ತರಿನ ಬಣ್ಣ ಒಂದೇಯಾಗಿದ್ದರೂಉತ್ತರ ಆಶೋತ್ತರಗಳು ಬೇರೆ ಬೇರೆಅಡಿ ಇಡುವ ನೆಲವು ಒಂದೇಯಾಗಿದ್ದರೂಗಮ್ಯ ತಾಣ ನಿಲ್ದಾಣಗಳು ಬೇರೆ ಬೇರೆ ಬುದ್ಧಿಶಕ್ತಿಯ ಲವಲೇಶವಿರದ ಪ್ರಾಣಿಗಳುಸಹಬಾಳ್ವೆಗೆ ತಮ್ಮನ್ನು ಒಡ್ಡಿಕೊಂಡಿವೆಸುತ್ತ ಸುಳಿವ ಗಾಳಿ ಒಂದೇಯಾಗಿದ್ದರೂಒಳ ನೋಟ ಒಕ್ಕೂಟಗಳು ಬೇರೆ ಬೇರೆ ಭಾಷಣ ಬರವಣಿಗೆಯಲ್ಲಷ್ಟೇ ಸಮತೆಯಹೂರಣ ತೋರಣಗಳನ್ನು ಕಂಡಿದ್ದೇವೆಕುಡಿಯುವ ಜಲವು ಒಂದೇಯಾಗಿದ್ದರೂಯೋಚನೆ ಯೋಜನೆಗಳು ಬೇರೆ ಬೇರೆ ಒಡಹುಟ್ಟಿದವರೇ ಬೆಳೆದೊಡನೆ ಕಾದಾಡಿದಾಯಾದಿಗಳಾಗುವುದಿಲ್ಲಿ ಮಾಮೂಲಿಭಾರತೀಯರೆಂದೂ ಒಂದೇಯಾಗಿದ್ದರೂಇಲ್ಲಿ ಆಚಾರ ವಿಚಾರಗಳು ಬೇರೆ ಬೇರೆ ಸರ್ವಜನಾಂಗದ ತೋಟದಲ್ಲಿ ಕುಂಬಾರಶಾಂತಿ ಹುಡುಕಿ ಹುಡುಕಿ ಸೋತಿದ್ದಾನೆಭಾವೈಕ್ಯದ ಬಾವುಟ ಒಂದೇಯಾಗಿದ್ದರೂಜಾತಿ ಜೆಂಡಾ ಅಜೆಂಡಾಗಳು ಬೇರೆ ಬೇರೆ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಸ್ವಪ್ನ ಸುಂದರಿ” ನನ್ನ ಕನಸಲ್ಲಿ ಬಂದವಳು ನೀನು,  ಹೆಸರಿಲ್ಲ, ಊರಿಲ್ಲ,ಆದರೂಎಷ್ಟು ಹತ್ತಿರ ಇರುವೆ ನೀನುಕಣ್ಣಲ್ಲಿ ನಕ್ಷತ್ರ, ನಗುವಲ್ಲಿ ಹುಣ್ಣಿಮೆ,  ಮಾತಲ್ಲಿ ಮಲ್ಲಿಗೆ ಪರಿಮಳವನುಹೊತ್ತು ತಂದಿರುವೆ ಏನು.? ನೀನು ನಡೆದರೆ ಹೂವು ಅರಳಿಹುದುನೀನು ನೋಡಿದರೆ ಮಳೆ ಬರುವುದು  ಸುಮ್ಮನೆ ಒಮ್ಮೆ ನೀ ಕೈ ಬೀಸಿದರೂ  ನನ್ನ ಇಡಿ ದಿನ ಹಬ್ಬವಾಗುವದು. ವಾಸ್ತವದಲ್ಲಿ ಸಿಗಲಾರೆನೋ ಗೊತ್ತಿಲ್ಲಆದರೂ ಕನಸಲ್ಲಿ ಪ್ರತಿ ರಾತ್ರಿಭೇಟಿಯಾಗುವೆನು ನಿನ್ನನು“ನೀನೆ ನನ್ನ ಸ್ವಪ್ನ ಸುಂದರಿ”ನಿದ್ದೆಯಲ್ಲೆ ಪದೇ ಪದೇ ಹೇಳುವೆ ರಿ. ನೀನು ಕನಸೆ ಆದರೂನನಸಾಗಿಸಲು ಬರದೆ ಇರುವೆ ಏನು?ಆದರೂ ಆ ಕನಸೆ ನನ್ನ ಬದುಕಿಗೆ ಬೆಳಕುಒಂದು ದಿನ ಆ ಕನಸುನಿಜವಾಗುವುದಲ್ಲವೇನು!ಆಗಲೆಂದು ಆ ದೇವರಲ್ಲಿಕೇಳುತ್ತಿರುವೆನು ನಾನು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ” Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಎತ್ತ ಸಾಗುತ್ತಿದೆ” ಎತ್ತ ಸಾಗುತ್ತಿದೆ ನವ ಸಮಾಜಸಮಾನತೆ ಗಾಳಿಗೆ ತೂರಿನಾಗರಿಕತೆಯ ಕುರುಹುಗಳ ಅರಿಯದೆಮಾನವೀಯತೆಯ ಬೆತ್ತಲಾಗಿಸಿದೆ . ಅರೆಬೆತ್ತಲೆ ಮೈ ಮನಮನಸಾ ಇಚ್ಛೆಯ ಮೆರವಣಿಗೆಸಾಮರಸ್ಯ ಕುರುಡಾಗಿಸಿವಿಕೃತ ಮನಸ್ಸಿನ ಅನಾವರಣ. ನಶೆಯ ಗುಂಗಲಿಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದುಜವಾಬ್ದಾರಿ ಮರೆತುಕರುಳ ಕುಡಿಗಳು ಹೊಂಚು ಹಾಕುತ್ತಿವೆ. ಬಿಕೋ ಎನ್ನುತ್ತಿವೆ ಹಳ್ಳಿ ಹಾಡುಹೂಬಳ್ಳಿ ಗಳು ಮುಳ್ಳು ಮೊನಚಾಗಿಹಿರಿಯ ಜೀವಗಳು ಹಪಹಪಿಸುತ್ತಿವೆಜೀವ ಕೊಂಡಿ ಕಳಚುತಿದೆ. ಎಲ್ಲೆಂದರಲ್ಲಿ ಕಾರ್ಖಾನೆಕೆಲಸದ  ಆಸೆಗೆ ಭೂಮಿ ಮಾರಿಕೊಂಡುಉಸಿರಾಡಲು ಕಲುಷಿತ ಗಾಳಿಹೊಟ್ಟೆ ಹೊರೆಯಲು ಜೀತದಾಳು. ರಕ್ತ ಸಂಬಂಧಕೆ  ಆಗುಂತಕರಾಗಿತಮ್ಮವರನೆ ಹೆಣವಾಗಿಸಿಮನೆಯಲ್ಲಿ ಹೂಳುವರೆಲ್ಲವಿಕೃತ ಮನಸುಗಳು. ಉಡ್ವೇಗಕೆ ತಲೆದೂಗಿಹಸುಳೆಗಳು ನರಳಾಟಕಾಮಂಧತೆಯ ಅನಾವರಣಅಕ್ರಮ ದಂದೆಗಳ ತಾಣ. ಮದ್ದು ಗುಂಡುಗಳ ಹಾವಳಿಕೆಂಡ ಮಂಡಲ ವಾಗಿಸಿದೆನೆತ್ತರು ಹರಿಸಿಒತ್ತರಿಸಿದ ನೋವು ಕೇಳುವವರಾರು. ಪ್ರಾರ್ಥನೆಯಲು ಹಿಂಸಾಚಾರಬೋಧನೆಯಲು ಭಿನ್ನಾಚಾರಉಂಡ ಮನೆಗೆ ಕನ್ನ ಹಾಕುವ ವಿಚಾರ ತಿಳಿಯುತ್ತಿಲ್ಲ ನವ ಸಮಾಜಕೆಹರುಕ ಬಟ್ಟೆ ತೊಟ್ಟುಮೈ ತೋರಿಸುತಬದ್ಧತೆ ಇಲ್ಲದ ಪರಿಪಾಠತರಾವರಿ ಮೋಹಕೆ ಬಲಿಯಾಗುತಿದೆ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನರಕದ ಬೆಂಕಿ” ಓ…ಅಹಂಕಾರಿ ಮನುಜನೀನೆಂದೂ ಚಿರಂಜೀವಿಯಲ್ಲ,!    ನಿನ್ನ ಅಧಿಕಾರದ ದರ್ಪ   ನೀನಗೆಂದೂ ಅದು ಶಾಶ್ವತವಲ್ಲ,! ಧರ್ಮದ ಮಧವೇರಿಸಿಅನ್ಯ ಧರ್ಮಗಳ ನೀ ಕೆಣಕದಿರು,!    ರಾಜಕೀಯ ಪ್ರೇರಿತನಾಗಿ   ದ್ವೇಷದ ಜಪವನು ಮಾಡದಿರು,! ಮತಾಂಧರನು ನೀನಾಗದೆಮಾನವ ಕುಲದ ಸುಪುತ್ರನಾಗು,!    ಮರಣದ ಕುಣಿಕೆ ಹಿಡಿದು   ಯಮ ನಿನ್ನ ಬೆನ್ನಟ್ಟುತ್ತಿರುವನು! ಸತ್ತು ಮಣ್ಣಾಗುವ ಮುನ್ನಮಂದಿಯ ಮನಸ್ಸಿಗೆ ಅರಸನಾಗು.!    ಕೆಡುಕಿನ ದಾರಿಗಳ ಹಿಡಿದು   “ನರಕದ ಬೆಂಕಿ”ಗೆ ಆಹುತಿ ಆಗದಿರು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ” Read Post »

ಕಾವ್ಯಯಾನ

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ!

ಕಾವ್ಯ ಸಂಗಾತಿ ಗೌರಾ ಹಾಲಭಾವಿ.    ಯುದ್ಧ ಯುದ್ಧ ಯುದ್ಧ! ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ  ಮನಸ್ಸಿನ  ಉನ್ಮಾದ!ಯಾಕಿಷ್ಟು ಮಮಕಾರ  ಈ ಯುದ್ಧ ಎಂಬ ಮಾರಿಯ ಮೇಲೆ ನಿನಗೆ  ಏ ಮನುಷ್ಯ ಜೀವಿಯೇ?ಯಾರಿಗಾಗಿ?ಏನು ಸಾಧಿಸಿದೆ?ಯಾರಿಗಾಯಿತು ಪ್ರಯೋಜನ?ನಿನಗಾಗಿ , ನಿನ್ನ  ಅಹಂಕಾರಕ್ಕಾಗಿ,ನಿನ್ನ ಕೀರ್ತಿಗಾಗಿ,ನೀನು ಎಲ್ಲರನ್ನು ನಿನ್ನ  ಆಧೀನದಲ್ಲಿ ಇರಿಸುವದಕ್ಕಾಗಿ!ಎಲ್ಲದರ ಮೇಲಿನ ಅಧಿಪತ್ಯಕ್ಕಾಗಿ ,ನಿನ್ನ ಪ್ರತಿಷ್ಠೆಗಾಗಿ , ಹಠಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ,ಹೊನ್ನಿಗಾಗಿ!ಏನು ಮಾಡಿದೆ ?ಏನು ಮಾಡಿದೆ  ಹಿಂತಿರುಗಿ  ನೋಡೊಮ್ಮೆ!ಯಾವುದು  ನಿನಗೆ  ಸುಖ  ಕೊಟ್ಟಿತು?ಯಾವದು ನಿನ್ನೊಡನೆ  ಬಂದಿತು  ಉಸಿರೊಮ್ಮೆ!ರಾಮಾಯಣದ ರಾಮ  ರಾವಣರ  ಯುದ್ಧ, ಮಹಾಭಾರತದ ಪಾಂಡವ ಕೌರವರ  ಮಹಾಯುದ್ಧದಿಂದ,ಶುರುವಾದ  ಈ ಯುದ್ಧವೆಂಬ ಮಹಾ ಪಿಡುಗು  ,ಇಂದು ಎಲ್ಲರ  ಮನೆಯ  ಬಾಗಿಲಿಗೆ ಬಂದು  ನಂತಿತಲ್ಲ!ಸತ್ತವರೆಷ್ಟೋ,  ನೊಂದವರೆಷ್ಟೋ,ಕಳೆದುಕೊಂಡವರೆಷ್ಟೋ,ಕಳೆದುಹೋದವರೆಷ್ಟೋ,ಅನಾಥರಾದವರೆಷ್ಟೋ?ಯಾರಿಗೆ ಗೊತ್ತು ,ಯಾರಿಟ್ಟಿದ್ದಾರೆ ಲೆಕ್ಕ ?ಗೆದ್ದವರ  ಲೆಕ್ಕ ಇದೆ,ಸೋತವರದ್ದೂ  ಇದೆ ಲೆಕ್ಕ!ನಿಜವಾಗಿ  ಹೋರಾಡಿ  ಜೀವ ಕಳೆದುಕೊಂಡು ,ಏನನ್ನೂ  ಪಡೆಯದವರ  ಲೆಕ್ಕ  ಎಲ್ಲಿದೆ?ಒಂದಲ್ಲ  ಎರಡಲ್ಲ , ಸಾಲು  ಸಾಲು,ಸಾವಿರಾರು.ಎಷ್ಟೆಲ್ಲ  ಯುದ್ಧಗಳು,ಏನೆಲ್ಲ  ಸಾಧಿಸಿವೆ?ಜಗದ ಜನರ ವಿಚಾರ ಬದಲಾಯಿತಾ?ಮತ್ತೆ  ಮತ್ತೆ ಅದೇ ಪುನರಾವರ್ತನೆ.ಯಾಕೆ  ಕೆಡುಕಿನ ಉನ್ಮಾದ  ಮನುಷ್ಯ  ಮನದಲ್ಲಿ?ಎರಡು ಮಹಾಯುದ್ಧದಿಂದ  ಪಾಠ  ಕಲಿತಿಲ್ಲ!ಈಗ ರಷ್ಯಾ ಉಕ್ರೇನ ಯುದ್ಧ!ಮುಗಿಯಲಿಲ್ಲ,ಮುಗಿಯುವ ಲಕ್ಷಣ ಇಲ್ಲ ಇನ್ನೂ!ನಿನ್ನ  ನಾಶ ನನ್ನ  ಗುರಿ!ಎನೀ  ಸಾಧನೆ?ಈ ಪ್ರಶ್ನೆಯ  ಕೊನೆ  ಎಲ್ಲಿ?ಗೊತ್ತಿಲ್ಲ.ಬಹುಶಃ  ಮನುಷ್ಯ  ಇರುವವರೆಗೆ!ಮನುಷ್ಯ ಕುಲ ಅಳಿಯುವವರೆಗೆ !ಬಗೆಹರಿಯದ  ಸಮಸ್ಯೆ!!ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ ಈ ಮನಸ್ಸಿನ  ಉನ್ಮಾದ! ಗೌರಾ ಹಾಲಭಾವಿ.   

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ! Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಶತಕದ ಸಾಧಕ ಪುಲಿಗೆರೆ ಸೋಮನಾಥ ಕನ್ನಡ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ. ಕನ್ನಡ ಭಾಷೆ ಹಲ್ಮಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ  ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ. ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ (ಜೈನ ಯುಗ / ಪಂಪ ಯುಗ) ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ. ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ. ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ), ಪೊನ್ನ ಮತ್ತು ರನ್ನ ಕನ್ನಡದ ಮಹಾಕವಿಗಳಾಗಿದ್ದಾರೆ. ಶೈಲಿ: ಈ ಕಾಲದಲ್ಲಿ ‘ಚಂಪೂ’ (ಗದ್ಯ ಮತ್ತು ಪದ್ಯ ಮಿಶ್ರಿತ) ಶೈಲಿಯು ಪ್ರಸಿದ್ಧವಾಗಿತ್ತು. ೨. ನಡುಗನ್ನಡ ಕಾಲ (ವಚನ ಮತ್ತು ವೈಷ್ಣವ ಯುಗ) ೧೨ ನೇ ಶತಮಾನದಿಂದ ಕನ್ನಡ ಸಾಹಿತ್ಯವು ರಾಜಾಶ್ರಯದಿಂದ ಹೊರಬಂದು ಸಾಮಾನ್ಯ ಜನರ ಭಾಷೆಯಾಗಿ ಮಾರ್ಪಟ್ಟಿತು.ವಚನ ಸಾಹಿತ್ಯ: ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ವಚನ ಚಳವಳಿ ಆರಂಭವಾಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ವಚನಕಾರರು ಸರಳ ಕನ್ನಡದಲ್ಲಿ ಬದುಕಿನ ತತ್ವಗಳನ್ನು ಬರೆದರು. ಹರಿಹರ ಮತ್ತು ರಾಘವಾಂಕ: ಹರಿಹರನು ‘ರಗಳೆ’ ಸಾಹಿತ್ಯವನ್ನೂ, ರಾಘವಾಂಕನು ‘ಷಟ್ಪದಿ’ ಶೈಲಿಯನ್ನೂ ಪರಿಚಯಿಸಿದರು. ದಾಸ ಸಾಹಿತ್ಯ: ಭಕ್ತಿ ಪಂಥದ ಭಾಗವಾಗಿ ಪುರಂದರದಾಸರು, ಕನಕದಾಸರು ಮುಂತಾದ ಹರಿದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕುಮಾರವ್ಯಾಸ: ‘ಕರ್ಣಾಟ ಭಾರತ ಕಥಾಮಂಜರಿ’ (ಗದಗಿನ ಭಾರತ) ಮಹಾಕಾವ್ಯದ ಮೂಲಕ ನಡುಗನ್ನಡದ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದನು. ಇಂತಹ ಸುದೀರ್ಘ ಸಾಹಿತ್ಯ ಪರಂಪರೆಯ ಶ್ರೇಷ್ಠ ಶತಕ ಸಾಧಕ ಪುಲಿಗೆರೆ ಸೋಮನಾಥ (ಪುಲಗೇರೆ ಸೋಮನಾಥ) ಕನ್ನಡ ಸಾಹಿತ್ಯ ಲೋಕದ ಒಬ್ಬ ಪ್ರಸಿದ್ಧ ಹಳಗನ್ನಡದ ಕವಿ.  ಇವರು ಪ್ರಮುಖವಾಗಿ ತಮ್ಮ ನೀತಿಪ್ರಧಾನ ಕಾವ್ಯವಾದ  ಸೋಮೇಶ್ವರ ಶತಕ’ಕ್ಕಾಗಿ ಜನಪ್ರಿಯರಾಗಿದ್ದಾರೆ.ಕವಿಯ ಕುರಿತಾದ ಪ್ರಮುಖ ವಿವರಗಳು  ವೈಯಕ್ತಿಕ ವಿವರಗಳು ಮತ್ತು ಕಾಲ ಇವರು ಸುಮಾರು ಕ್ರಿ.ಶ. ೧೨೯೯ ಅಥವಾ ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಇವರು ಹೊಯ್ಸಳ ರಾಜರ ಆಶ್ರಯದಲ್ಲಿದ್ದರು. ಜನ್ಮಸ್ಥಳ: ಇವರು ಪ್ರಸ್ತುತ ಗದಗ ಜಿಲ್ಲೆಯ (ಹಳೆಯ ಧಾರವಾಡ ಜಿಲ್ಲೆ) ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಎಂಬ ಊರಿನವರು.ಪಾಂಡಿತ್ಯ: ಸೋಮನಾಥನು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಮಹಾ ಪಂಡಿತನಾಗಿದ್ದನು. ಸಾಹಿತ್ಯ ಕೃಷಿ ಮತ್ತು ಅಂಕಿತ ನಾಮ ಇವರ ಪದ್ಯಗಳ ಅಂಕಿತ ನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ” ಅಥವಾ “ಹರಹರ ಶ್ರೀ ಚನ್ನಸೋಮೇಶ್ವರ”.ಸೋಮೇಶ್ವರ ಶತಕ: ಇದು ಇವರ ಅತ್ಯಂತ ಪ್ರಸಿದ್ಧ ಕೃತಿ.  ವೃತ್ತ ಛಂದಸ್ಸಿನಲ್ಲಿ (ಮತ್ತೇಭವಿಕ್ರೀಡಿತ ವೃತ್ತ) ರಚಿತವಾಗಿರುವ ಈ ಕಾವ್ಯವು ಒಟ್ಟು 100 ಪದ್ಯಗಳನ್ನು ಒಳಗೊಂಡಿದೆ. ಇವು ಸಮಾಜಕ್ಕೆ ಉತ್ತಮ ನೀತಿ, ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ. ರತ್ನಾಕರಂಡಕ: ಇವರು ಚಂಪೂ ಶೈಲಿಯಲ್ಲಿ ‘ರತ್ನಾಕರಂಡಕ’ ಎಂಬ ಕಾವ್ಯವನ್ನೂ ರಚಿಸಿದ್ದಾರೆ. ಪ್ರಸಿದ್ಧ ಸಾಲುಗಳುಇವರ ಸೋಮೇಶ್ವರ ಶತಕದ ಈ ಸಾಲು ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ:”ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…”(ಇದರ ಅರ್ಥ: ಮನುಷ್ಯನು ಸ್ವಲ್ಪ ಜ್ಞಾನವನ್ನು ತಿಳಿದವರಿಂದ ಕಲಿತು, ಇನ್ನು ಸ್ವಲ್ಪ ಜ್ಞಾನವನ್ನು ಶಾಸ್ತ್ರಗಳನ್ನು ಕೇಳಿ ಪಡೆಯುತ್ತಾ ಜ್ಞಾನಿಯಾಗಬೇಕು.) ಪುಲಿಗೆರೆ ಸೋಮನಾಥ ಮೂಲತಃ ಜೈನ ಧರ್ಮೀಯನಾಗಿದ್ದು ಶರಣರ ವಚನಗಳನ್ನು ಆಳವಾಗಿ ಓದಿಕೊಂಡು ನಡುಗನ್ನಡ ದೇಸಿ ಪದ್ಧತಿಯನ್ನು ತನ್ನ ಕಾವ್ಯ ಶೈಲಿಯನ್ನಾಗಿ ಪರಿವರ್ತಿಸಿದನು. ಬಸವಣ್ಣ ಅಕ್ಕ ಮಹಾದೇವಿ ಮತ್ತು ಇತರ ಶರಣರ ವಚನಗಳ ಪ್ರಭಾವ ಈತನ ಮೇಲೆ ಅಪಾರವಾಗಿ ಬೀರಿತ್ತು. ಇವನ ಶತಕಗಳು ಮುಂದೆ ಸರ್ವಜ್ಞ ಮತ್ತು ತತ್ವ ಪದಕಾರರಿಗೆ ಪ್ರಭಾವ ಬೀರಿರಬಹುದು ಎಂದೆನಿಸುತ್ತಿದೆ.ಒಟ್ಟಾರೆ ಸೋಮನಾಥನ ಶತಕಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಆಸ್ತಿ ಎಂದು ಹೇಳ ಬಹುದು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಆರೋಗ್ಯ, ಇತರೆ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ

ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ  ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ  ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ  ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ  ಸಂಘ ಜೀವಿ.  ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು  ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;-  ಉತ್ತಮ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »

ಕಾವ್ಯಯಾನ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ”

ಕಾವ್ಯ ಸಂಗಾತಿ ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರುಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು ಉಸಿರು ಬಿಗಿ ಹಿಡಿದಿದ್ದೇವೆಜೀವ ಹೋಗಿ ನೆತ್ತರು ಹರಿದರೂ ನಮ್ಮನು ನೋಡದವರೇ ಇದ್ದಾರೆ ಸೋನಂ ದುಡಿದುಣ್ಣುವ ಶ್ರಮಿಕರು ಜೊತೆಗಿದ್ದು ಹಕ್ಕಿಗಾಗಿ ಹೋರಾಡುತ್ತೇವೆ ನ್ಯಾಯ ನೀತಿ ಪ್ರೀತಿ ಎಂದರೆ ಗೊತ್ತಿಲ್ಲದವರೇ ಇದ್ದಾರೆ ಸೋನಂ ಕೆಟ್ಟು ನಾರುತಿರುವ ವ್ಯವಸ್ಥೆಗೆ ರೋಸಿ ಹೋಗಿದ್ದಾಳೆ ಅರುಣಾ ಶೈಕ್ಷಣಿಕ ಬದಲಾವಣೆ ತರಲು ಒಲ್ಲದವರೇ ಇದ್ದಾರೆ ಸೋನಂ ಅರುಣಾ ನರೇಂದ್ರ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” Read Post »

You cannot copy content of this page

Scroll to Top