ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ”

ಕಾವ್ಯ ಸಂಗಾತಿ ಕಾರ್ತಿಕ್ ಭಟ್ ಬಳಗುಳಿ “ನನ್ನೆದೆಯ ಗೂಡಿನಲ್ಲಿ”‌ ನನ್ನೆದೆಯ ಗೂಡಲ್ಲಿ ಧಗಧಗಿಸುತಿದೆಬೆಂಕಿಯ ಜ್ವಾಲೆಹೊತ್ತಿ ಉರಿಯುತ್ತಿದೆಕೆನ್ನಾಲಿಗೆಆರಿಸಬೇಕಿದೆಜ್ವಾಲಾಮುಖಿಯಾಗುವ ಮುನ್ನ….ದಡಕ್ಕೆ ಬಂದು ಅಪ್ಪಳಿಸಿ ಬರುವ ಅಲೆದಡವನ್ನು ಸ್ವಚ್ಚಗೊಳಿಸುವಂತೆ……. ನನ್ನೆದೆಯ ಗೂಡನ್ನ ಆರಿಸಬೇಕಿದೆಆಹುತಿಯಾಗುವ ಮುನ್ನಹೊಗೆಯಾಡುತ್ತಿದೆಸುಟ್ಟುಹೋಗಿರಬಹುದೇ ಸುಡುತ್ತಿರುವ ಬೆಂಕಿಗೆಮಳೆ ಹನಿಯ ಸಿಂಚನಹರಿಸಬೇಕಿದೆ….ಆರಿಸಬೇಕಿದೆನನ್ನೊಡಲ ಕಾವನ್ನ…. ದೂರದಲ್ಲೆಲ್ಲೋ ಬರುತಲಿದೆಸುಟ್ಟ ವಾಸನೆತಂಪಾಗಿಸಬೇಕಿದೆಬಿಸಿಯಾದ ಒಡಲ ಕಾವನ್ನಆರಿಸಬೇಕಿದೆದೀಪ ಆರುವ ಮುನ್ನ…….ಹದಗೊಳಿಸಿ ಬಿತ್ತಬೇಕಿದೆಪ್ರೀತಿಯೆಂಬ ಬೀಜವನ್ನ …..ಮತ್ತೇ ನಳನಳಿಸಿ ಕುಣಿಯುವಂತೆಮಾಡಬೇಕಿದೆ ನನ್ನೆದೆಯ ಗೂಡನ್ನ….. ಕಾರ್ತಿಕ್ ಭಟ್ ಬಳಗುಳಿ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ  ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು.  ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು.  ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು.  ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ  ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.  ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು  ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ.  ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು  ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು.  *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು  ಒಬ್ಬ ವ್ಯಕ್ತಿಯ  ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು  ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. .  ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ  ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು.   ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ‌ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು.  ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು  ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ

Read Post »

ಇತರೆ

“ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ”‌ ವೀಣಾ ಹೇಮಂತ್‌ ಗೌಡಪಾಟೀಲ

ಕಲಾ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ “ಮಂಡಲ ಕಲೆ…. ಎಂಬ ಅದ್ವಿತೀಯ ಕಲಾ ರಚನೆ”‌ ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ ಒಂದೇ ರೀತಿಯ ಸಮ್ಮಿತಿಯ ರಚನೆಯನ್ನು ಹೊಂದಿರುವ ಮಂಡಲ ಕಲೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ ಆಧ್ಯಾತ್ಮಿಕ ಅಭಿವ್ಯಕ್ತಿಯ ಈ ಕಲೆಗೆ ಶತಶತಮಾನಗಳ ಹಲವಾರು ಸಾಂಸ್ಕೃತಿಕ ಅಭಿವ್ಯಕ್ತಿಯ ಮಹತ್ವವಿದೆ.ಮಂಡಲ ಕಲೆಗೆ ಅತ್ಯಂತ ದುಬಾರಿ ಸಾಮಾನುಗಳ ಅವಶ್ಯಕತೆ ಇದೆ ಎಂದು ಸಾಕಷ್ಟು ಜನ ಭಾವಿಸುತ್ತಾರೆ.ಬಗೆ ಬಗೆಯ ಪೆನ್ಸಿಲ್ ಗಳು ವಿವಿಧ ವಿನ್ಯಾಸಗಳನ್ನು ಚಿತ್ರಿಸುವ ಸಲಕರಣೆಗಳು ಬೇಕೇ ಬೇಕು ಎಂದೇನಿಲ್ಲ. ಕೇವಲ ಒಂದು ಪೆನ್ನು ಮತ್ತು ಪೆನ್ಸಿಲ್ ನ್ನು  ಬಿಳಿಹಾಳೆಯ ಮೇಲೆ ಮೂಡಿಸುವ ಮೂಲಕ ನಾವು ಮಂಡಲಕಲೆಯನ್ನು ರಚಿಸಬಹುದು.ಸಮತೋಲನ, ವಿವಿಧ ಬಗೆಯ ವಿನ್ಯಾಸ ಹಾಗೂ ಭಾವನೆಗಳ ಮಿಶ್ರಣ ಮಂಡಲಕಲೆ ಇದರಲ್ಲಿ ಬರುವ ವೃತ್ತಗಳು ಮಂಡಲಕಲೆಯ ಭಾಗವೇ ಹೊರತು ನಿಯಮಗಳಲ್ಲ…. ಬಹಳಷ್ಟು ಜನ ಮಂಡಲ ಕಲೆಯನ್ನು ವೃತ್ತಗಳನ್ನು ಹಾಕುವ ವಿಧಾನ ಎಂದು ಭಾವಿಸುತ್ತಾರೆ ಆದರೆ ಅದು ಸಂಪೂರ್ಣ ನಿಜವಲ್ಲ.ಆಸಕ್ತಿ ಇರುವ ಯಾರು ಬೇಕಾದರೂ ಮಂಡಲ ಕಲೆಯನ್ನು ಕಲಿಯಬಹುದು ಇದರಲ್ಲಿ ಕಲಾತ್ಮಕ ಅಭಿವ್ಯಕ್ತಿಯ ಅವಶ್ಯಕತೆ ಇಲ್ಲ ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ, ನಿರಂತರ ಪ್ರಯತ್ನ ಹಾಗೂ ತರಬೇತಿ. ಮಂಡಲ ಕಲೆಯನ್ನು ಕಲಿಯುವವರು ಕಲಾವಿದರೇ ಆಗಬೇಕೆಂದಿಲ್ಲ ಕಲಾವಂತಿಕೆಯನ್ನು ಮೆಚ್ಚುವ ಆಸ್ವಾದಿಸುವ ಹಾಗೂ ರಚಿಸುವ ಆಶಯ ಹೊಂದಿದ್ದರೆ ಸಾಕು.ಮೊದಲ ಬಾರಿಗೆ ಮಂಡಲ ಕಲೆ ಪರಿಪೂರ್ಣತೆ ಹಾಗೂ ಸಾಮ್ಯತೆಯನ್ನು ಹೊಂದಿರಲೇಬೇಕಿಲ್ಲ. ಇಲ್ಲಿ ನಮ್ಮ ಗುರಿ ಕೇವಲ ಪರಿಪೂರ್ಣತೆಯಲ್ಲ , ಧ್ಯಾನಪೂರ್ವಕವಾದ ಅಭ್ಯಾಸವಾಗಿರಬೇಕು.ಬಹುತೇಕ ಜನರು ಮಂಡಲ ಕಲೆಯನ್ನು ಮಾನಸಿಕ ನೆಮ್ಮದಿ ಹಾಗೂ ವಿಶ್ರಾಂತಿಗಾಗಿ ರಚಿಸುತ್ತಾರೆ ಎಂಬ ಭಾವ ಜನರಲ್ಲಿದೆ. ಮಂಡಲ ಕಲೆಯು ಮೆದುಳಿನ ನರಗಳನ್ನು ಶಾಂತವಾಗಿಸುತ್ತದೆ ಎಂಬುದು ನಿಜ, ಆದರೆ  ಅದೇ ಸಮಯದಲ್ಲಿ ಮಂಡಲಕಲೆಯ ನಿರಂತರ ಅಭ್ಯಾಸವು ನಿಖರವಾದ ಗುರಿ, ಕ್ರಿಯಾಶೀಲತೆ ಹಾಗೂ ಸ್ವಯಂ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತದೆ.ಮಂಡಲ ಕಲೆಯ ನಿಜ ಪಯಣ ಆರಂಭವಾಗುವುದು ಒಂದು ಪುಟ್ಟ ಗುರಿಯ ಮೂಲಕ. ವಿವಿಧ ವಿನ್ಯಾಸಗಳನ್ನು ರಚಿಸುವ ನಿಟ್ಟಿನಲ್ಲಿ ನಮ್ಮ ಸಂಪೂರ್ಣ ಲಕ್ಷವನ್ನು ಕೊಡುವ ಮೂಲಕ. ವಿನ್ಯಾಸಗಳ ರಚನೆಯ ಸಮಯದಲ್ಲಿ ಮಾನಸಿಕವಾಗಿ ಅತ್ಯಂತ ಪ್ರಶಾಂತ ಭಾವ ಉದ್ಭವವಾಗುತ್ತದೆ, ಜೊತೆಗೆ ಸೃಜನಶೀಲತೆಗೂ ಕೂಡ ಅವಕಾಶ ದೊರೆಯುತ್ತದೆ. ಮಂಡಲ ಕಲೆಯು ಸ್ವಯಂ ಪ್ರೀತಿಯನ್ನು ಅಭಿವ್ಯಕ್ತಿಸುವ ಅತ್ಯುತ್ತಮ ರೇಖಾಚಿತ್ರವಾಗಿರುತ್ತದೆ.ಮಂಡಲಕಲೆಯನ್ನು ಕಲಿಯಬೇಕು ಎಂದು ಇಚ್ಛಿಸುವವರು ಮೊದಲು ತಮ್ಮೊಳಗಿನ ಸೃಜನಶೀಲತೆಯು ಹೊಮ್ಮುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ಪ್ರತಿದಿನವೂ ಹಂತ ಹಂತವಾಗಿ ರಚನೆಯನ್ನು ಆರಂಭಿಸಿ ಹೆಚ್ಚಿಸುತ್ತಾ ಹೋಗಬೇಕು, ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬೇಕು, ಜೊತೆಗೆ ರಚನೆಯ ಸಮಯವನ್ನು ಆನಂದಿಸಬೇಕು ಹಾಗೂ ಅದರಲ್ಲಿಯೇ ವಿಶ್ರಾಂತಿಯ ಅನುಭವವನ್ನು ಪಡೆಯಬೇಕು.ಮಂಡಲ ಕಲೆಯು ನಮ್ಮ ನಿಖರತೆಯನ್ನು ಹಾಗೂ ವಿವಿಧ ವಿನ್ಯಾಸಗಳನ್ನು ಹೆಚ್ಚಿಸಿಕೊಳ್ಳುವ ಕಲೆಯಾಗಿದೆ. ಪ್ರತಿ ಬಾರಿಯೂ ನೀವು ರಚಿಸುವ ಮಂಡಲ ಕಲೆ ಚಿತ್ರವು ಪರಿಪೂರ್ಣವಾಗಿರಬೇಕಾಗಿಲ್ಲ ಅದು ನಿಮ್ಮ ಅಭಿವ್ಯಕ್ತಿಯಾಗಿದ್ದರೆ ಸಾಕು. ನೀವು ಎಳೆಯುವ ಪ್ರತಿ ರೇಖೆಯು ಉನ್ನತಿಕೆಯ ಸಂಕೇತ.ನಿಮ್ಮ ಅಭಿವ್ಯಕ್ತಿಯ ಈ ಕಲೆಯನ್ನು ಇತರರ ಕಲೆಯೊಂದಿಗೆ ಹೋಲಿಸಬೇಡಿ ನಿಮ್ಮ ಮಂಡಲ ಕಲೆಯ ಪಯಣ ವಿಶಿಷ್ಟ ಹಾಗೂ ಕೇವಲ ನಿಮ್ಮದಾಗಿದ್ದರೆ ಸಾಕು.ಮಂಡಲ ಕಲೆಗೆ ಸಾಕಷ್ಟು ಸಮಯದ ಅವಶ್ಯಕತೆ ಇದೆ, ನಿಜ ಹಾಗೆಂದು ಒಂದೇ ಸಮನೆ ದಣಿದು ಮಾಡುವುದು ಬೇಡ. ಮಧ್ಯದಲ್ಲಿ ಒಂದಷ್ಟು ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು ವಿಶ್ರಾಂತಿ ತೆಗೆದುಕೊಳ್ಳುವುದು ಎಂದರೆ ಒಂದು ಹೆಜ್ಜೆ ಹಿಂದೆ ಸರಿದಂತಲ್ಲ ಅದು ಈ ಕಲಿಯುವಿಕೆಯ ರಚನೆಯ ಒಂದು ಭಾಗ.ಮಂಡಲ ಕಲೆಯು ನಿಮ್ಮ ಅಭಿವ್ಯಕ್ತಿಯ ಭಾಗ ಎಂದು ಹೇಳುತ್ತಾರಲ್ಲವೇ… ಇದಕ್ಕೆ ಕಾರಣವೂ ಇದೆ* ನೀವು ರಚಿಸುವ ವೃತ್ತಗಳು ಹಾಗೂ ಚುಕ್ಕಿಗಳು ನೀವು ಸಮಗ್ರತೆಯನ್ನು, ಸಾಮರಸ್ಯವನ್ನು ಹಾಗೂ ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಇಚ್ಛಿಸುತ್ತೀರಿ ಎಂಬುದನ್ನು ತೋರುತ್ತದೆ.* ಮುಕ್ತ ಹಾಗೂ ಭೂಮಿ ತೂಕದ ಮನಸ್ಥಿತಿ ನಿಮ್ಮದಾಗಿದ್ದು ನೀವು ಮಾಡುವ ಎಲ್ಲಾ ಕೆಲಸದಲ್ಲೂ ಒಂದು ಸಮತೋಲನವನ್ನು ನೀವು ಹೊಂದಿರುತ್ತೀರಿ.* ಹೂವಿನ ದಳಗಳು… ನೀವು ಹೂವಿನ ದಳಗಳನ್ನು ರಚಿಸುತ್ತಿದ್ದರೆ ನೀವು ಸಹಾನುಭೂತಿಯನ್ನು ಹೊಂದಿರುವ ಪೋಷಕ ಗುಣವನ್ನು ಹೊಂದಿರುವ ಹಾಗೂ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದರ್ಥ.* ವ್ಯಕ್ತಿಯ ಸಮಗ್ರ ಬೆಳವಣಿಗೆ, ಪ್ರಕೃತಿ ಹಾಗೂ ಅರ್ಥಪೂರ್ಣ ಬಾಂಧವ್ಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂಬುದನ್ನು ಇದು ತೋರುತ್ತದೆ.ಸುರುಳಿ ರಚನೆಗಳು… ಸುರುಳಿ ಆಕಾರದ ರಚನೆಗಳನ್ನು ನೀವು ಇಷ್ಟಪಟ್ಟು ರಚಿಸುತ್ತೀರಿ ಎಂದಾದರೆ ನೀವು ಬೆಳವಣಿಗೆ ಮತ್ತು ಆತ್ಮ ಸಾಕ್ಷಾತ್ಕಾರದ ಭಾವವನ್ನು ಹೊಂದಿದ್ದೀರಿ ಎಂದರ್ಥ.*ನೀವು ಅತ್ಯಂತ ಸುಲಭವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳುತ್ತೀರಿ. ಬದುಕಿನ ಪ್ರಕ್ರಿಯೆಗಳನ್ನು ನೀವು ನಂಬುತ್ತೀರಿ ಹಾಗೂ ನಿಮ್ಮನ್ನು ನೀವು ಹೆಚ್ಚು ಪ್ರೀತಿಸುತ್ತೀರಿಎಂದರ್ಥ.* ಜಾಮಿತಿಯ ಆಕಾರಗಳು.. ನೀವು ತಾರ್ಕಿಕವಾಗಿ ನಿಖರ ಗುರಿಯ ಕುರಿತು ಹಾಗೂ ಉತ್ತಮ ರಚನಕಾರರಾಗಿ ಇರುವಿರಿ. ನಿಮ್ಮಲ್ಲಿ ಸ್ಪಷ್ಟತೆ ಇದ್ದು ನಿಖರವಾದ ಗುರಿಯನ್ನು ಹೊಂದಿರುತ್ತೀರಿ. ಅನವಶ್ಯಕ ಗೊಂದಲಗಳನ್ನು ಸರಿ ಮಾಡಿ ಸಮತ್ವವನ್ನು ತರುತ್ತೀರಿ.* ಹೃದಯದಾಕಾರದ ಚಿಹ್ನೆಗಳನ್ನು ನೀವು ಬಳಸುತ್ತೀರಿ ಎಂದಾದರೆ ನೀವು ಪ್ರೀತಿ, ಕರುಣೆ ಮತ್ತು ಅತ್ಯಂತ ಆಳವಾದ ಭಾವನಾತ್ಮಕ ಭಾವಗಳನ್ನು ಹೊಂದಿದ್ದೀರಿ.ನೀವು ಉಧಾರಿಗಳಾಗಿದ್ದು ಸಹಾನುಭೂತಿಯನ್ನು ಹೊಂದಿರುತ್ತೀರಿ. ಜೊತೆಗೆ ನೀವು ಅತ್ಯಂತ ಆಳವಾದ ಹಾಗೂ ಅಧಿಕೃತ ಸಂಬಂಧಗಳನ್ನು ಗೌರವಿಸುತ್ತೀರಿ ಎಂದರ್ಥ.* ಪ್ರಾಕೃತಿಕ ವಸ್ತುಗಳ ರಚನೆ…. ನಿಮ್ಮ ರಚನೆಗಳಲ್ಲಿ ಪ್ರಾಕೃತಿಕ ವಸ್ತುಗಳನ್ನು ನೀವು ಅಳವಡಿಸಿದ್ದರೆ ನೀವು ಅತ್ಯಂತ ಮುಕ್ತ ಹಾಗೂ ಸ್ವತಂತ್ರ ಮನಸ್ಥಿತಿಯ ವ್ಯಕ್ತಿಯಾಗಿದ್ದು ಪ್ರಕೃತಿಯೊಂದಿಗೆ ಉತ್ತಮ ಸಮತೋಲನವನ್ನು ಹೊಂದಿರುತ್ತೀರಿ. ಪ್ರಕೃತಿಯಲ್ಲಿ ನೀವು ಅತ್ಯಂತ ನೆಮ್ಮದಿ ಹಾಗೂ ಭರವಸೆಯನ್ನು ಹೊಂದಿರುತ್ತೀರಿ. ಬದುಕಿನ ನೈಸರ್ಗಿಕ ಹರಿವನ್ನು ಬಯಸುವ ನೀವು ನಿಮಗೆ ಪ್ರಾಕೃತಿಕವಾಗಿ ದೊರೆಯುವ ಸಂಜ್ಞೆ ಗಳನ್ನು ಬಲವಾಗಿ ನಂಬುತ್ತೀರಿ.ಮಂಡಲಕಲೆಯಲ್ಲಿ ಯಾವುದೇ ಸರಿ ಅಥವಾ ತಪ್ಪು ರಚನೆಗಳು ಇಲ್ಲ . ನೀವು ರಚಿಸುವ ಮಂಡಲದ ಕಲೆಯು ನಿಮ್ಮ ಭಾವಾಭಿವ್ಯಕ್ತಿ ಯು ಪ್ರತಿಫಲನ. ಅತ್ಯಂತ ಸುಂದರ, ಅನನ್ಯ ಹಾಗೂ ವಿಕಸಿತ ಸೌಂದರ್ಯ ಮಂಡಲ ಕಲೆಯದ್ದು.ಮಂಡಲಕಲೆಯನ್ನು ಒಂದೇ ಬಾರಿಗೆ ಅವಸರದಿಂದ ಕಲಿಯುವ ಅವಶ್ಯಕತೆ ಇಲ್ಲ ಇದೊಂದು ನಿಧಾನ ಪ್ರಕ್ರಿಯೆ… ನಿಜವಾದ ಮಂಡಲ ಕಲೆಯ ಸೌಂದರ್ಯ ಅಡಗಿರುವುದು ಅದರ ವಿಶಿಷ್ಟವಾದ ಪ್ರಕ್ರಿಯೆಯಲ್ಲಿ.ವಿವಿಧ ವಿನ್ಯಾಸಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ನಿಮ್ಮ ಕ್ರಿಯಾಶೀಲತೆಯನ್ನು ಬಳಸಿ, ರಚನೆಗಳನ್ನು  ಸಹಜವಾಗಿ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ.ಮಂಡಲ ಕಲೆ ರಚನೆಯಲ್ಲಿ ವಿಶ್ರಾಂತಿ, ಉಸಿರಾಟ ಕ್ರಿಯೆ ಹಾಗೂ ರಚನೆಯ ಪ್ರಕ್ರಿಯೆಗಳು ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತವೆ.ಮಂಡಲ ಕಲೆಯಲ್ಲಿ ನೀವು ಒಮ್ಮಿಂದೊಮ್ಮೆಲೆ ಕಲಾವಿದರಾಗಲು ಸಾಧ್ಯವಿಲ್ಲ ನಿಧಾನವಾಗಿ ನಿಮ್ಮ ಕಲೆ ವಿಕಸಿತವಾಗುತ್ತಾ ಹೋಗುತ್ತದೆ. ನಿಧಾನವಾಗಿ ನೀವು ನಿಮ್ಮ ಕೈಯಾರೆ ತಯಾರಿಸಿದ ರಚನೆಯನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು ಆ ರೀತಿ ನಿಮ್ಮ ಉಡುಗೊರೆಯನ್ನು ಸ್ವೀಕರಿಸಿದವರ ಕಣ್ಣಲ್ಲಿನ ಹೊಂಬೆಳಕನ್ನು ಸಂಭ್ರಮಿಸಿ.ಮಂಡಲ ಕಲೆ ಬ್ರಹ್ಮ ವಿದ್ಯೆಯೇನಲ್ಲ…ಕಲಿಯುವ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಖಂಡಿತವಾಗಿಯೂ ನಿಮಗೆ ಆ ಕಲೆ ಹಸ್ತಗತವಾಗುತ್ತದೆ ಅಷ್ಟೇ?ಏನಂತೀರಾ ಸ್ನೇಹಿತರೆ? ವೀಣಾ ಹೇಮಂತ್ ಗೌಡ ಪಾಟೀಲ್

“ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ”‌ ವೀಣಾ ಹೇಮಂತ್‌ ಗೌಡಪಾಟೀಲ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ“ ನೆಲದಿಂದ ಮೇಲಕ್ಕೆಹಾರಿತು ವಿಮಾನ,ಹಕ್ಕಿಯಂತೆ ನಲಿದಿದೆ ನನ್ನಯ ಮನ.ಮೋಡಗಳ ನಡುವೆ ಸಾಗುವ ಈ ಪಯಣ,ಕಾಣದ ಲೋಕದ ಒಡನಾಟದ ನಯನ. ಕೆಳಗೆ ನೋಡಿದರೆ ಕಾಣದು ಗಡಿಗಳು,ಚಿಕ್ಕದಾಗಿ ಕಾಣುವವು ದೊಡ್ಡ ನದಿಗಳು.ಮನುಷ್ಯರ ಸೃಷ್ಟಿಯ ಈ ಅದ್ಭುತ ಯಾನ,ಬಾನಿನಂಚಿಗೆ ಮುಟ್ಟುವ ಸುಂದರ ಪಯಣ. ಬಿಳಿ ಮೋಡಗಳ ಹಾಸಿಗೆ ಮೈಯನ್ನು ತುಂಬಿ,ಕನಸಿನ ಲೋಕಕ್ಕೆ ಕರೆದೊಯ್ಯುವ ಹಾದಿ.ಗಾಳಿಯ ರಭಸದಲಿ ತೇಲುತ್ತಾ ಮುಂದೆ,ಮರೆಯಾಯಿತು ಎಲ್ಲ ಚಿಂತೆಯೂ ಒಂದೊಂದೇ  ಉಷಾರಾಣಿ ಗುರುಪ್ರಸಾದ್ ಕೊಡಗು

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಯಾನ ಹೊರಟಾಗ…..” ಮುಸ್ಸಂಜೆಗೊಂದುಬೆಳಗಿನ ಅವಸರಕ್ಕೊಂದುಹೊರಡುವ ಹಕ್ಕಿಗಳಸಾಲೊಂದು ಎಲ್ಲೋಹೊರಟಂತಿದೆಕಾಲದ ಅಳತೆಯೊಳಗೆಕಳೆದ ಸಮಯವಹುಡುಕಿ ಉಸಿರಿನಸಂಭ್ರಮಕ್ಕೆ ಚಿತ್ರ ಬರೆಯಲುದಾರಿಯಿರದ ದಾರಿಕಾಣದ ಹೆಜ್ಜೆಯ ಪಯಣನಭಕೆ ನಂಬಿಕೆ ಅಂಟಿಸಿಇಳೆಗೆ ಇಳಿವ ಕಾತರಮತ್ತೆ ಬದುಕಿನ ಸುತ್ತಅವಸರದ ಇಡುಗಂಟುಹಸಿವಿಗೆ ಅನ್ನದ ನಗುಮಣ್ಣೊಳಗೆ ಬೇರು ಬಿಟ್ಟಿದೆಭತ್ತವಾಗಲುಉಸಿರು ಉಳಿಸಲುನೆಲದ ಮಾತುಹಕ್ಕಿಗೆ ಗೊತ್ತುಗೂಡಿನ ಒಳಗೆಸಾಲು ಕಟ್ಟಿದ ಕನಸಿನಮೆರವಣಿಗೆಯ ಯಾನತಲುಪಿದ ಮೇಲೆತಿರುಗುವ ಗಡುವುಒಂದು ಪಯಣದ ಬದುಕುಸುಪ್ತ ನದಿಯಂತೆಹರಿದಷ್ಟು ಪರಿಶುದ್ಧತೆಮನದ ಬಿಂಬದ ಚಿತ್ರದಾರಿಯ ಹುಡುಕಬೇಕುಯಾನ ಹೊರಡಬೇಕು ನಾಗರಾಜ ಬಿ. ನಾಯ್ಕಹುಬ್ಬಣಗೇರಿ.ಕುಮಟಾ.

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..” Read Post »

ಪುಸ್ತಕ ಸಂಗಾತಿ

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ

ಪುಸ್ತಕ ಸಂಗಾತಿ ವೆಂಕಟೇಶ ಈಡಿಗರ “ಸಾವಿರದ ಶರಣವ್ವ ಕನ್ನಡದ ತಾಯೇ“ ಅಂಕಿತ ಪ್ರಕಾಶನಪ್ರಕಾಶಕರು ಮತ್ತು ಮಾರಾಟಗಾರರು53ˌ ಶಾಮ್ ಸಿಂಗ್ ಕಾಂಪ್ಲೆಕ್ಸ್ಗಾಂಧಿ ಬಜಾರ್ .ಮುಖ್ಯ ರಸ್ತೆಬಸವನಗುಡಿ. ಬೆಂಗಳೂರುಪುಸ್ತಕದ ಬೆಲೆ — 250 ರೂ ಜನಪದವೇ ಜನಾನುರಾಗದ ಮೂಲಮಂತ್ರ ಎಂದು ನಂಬಿ ಮುನ್ನೆಡೆಯುತ್ತಿರುವ ಬಿತ್ತಿ ಬೆಳೆಸುತ್ತಿರುವ  ಹಿರಿಯ ಸಾಹಿತಿˌ  ನಾಟಕಕಾರರು ಹಾಗೂ ಜನಪದ ಕಲಾವಿದರಾದ ಚಂದ್ರಶೇಖರ ಕಂಬಾರರು ನೆಲಮೂಲ ಸಂಸ್ಕೃತಿಯಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕˌ ಕಾವ್ಯ. ಕಾದಂಬರಿ ಕಥೆ. ರೂಪಕ ಮುಂತಾದ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ ಮತ್ತು ರಚಿಸುತ್ತಿದ್ದಾರೆ. ರಂಗಭೂಮಿˌ ಸಿನಿಮಾ ಪತ್ರಿಕೆ ಮುಂತಾದ ಹಲವು ಮಾಧ್ಯಮಗಳಲ್ಲಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಕಲೆಗಳ ತಾಯಿಬೇರಿನಂತಿರುವ ಜನರ ಜೀವನ ವಿಧಾನದ ಮೂಲ ಸೆಲೆ ಜನಪದ ಚಟುವಟಿಕೆಗಳು ಜೀವನುತ್ಸಾಹದ ಸೆಲೆಗಳು ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ.  ಜೀವನದ ಜೀವಾಳ ಎಂದಿದ್ದಾರೆ.ಕನ್ನಡ ರಂಗಭೂಮಿಯ ಹಿರಿಮೆ ಪಾಲುದಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟು ಅದರ ಸೊಗಸನ್ನು ಮುಂದಿನ ಪೀಳಿಗೆಗೆ ಧಾರೆಯಾಗಿ ಎರೆದವರು. ಜನಪದ ಸಂಗೀತˌ ಜನಪದ ಸಾಹಿತ್ಯ ಹಾಗೂ ಜನಪದ ನಾಟಕಗಳನ್ನು ರಚಿಸುವುದರಿಂದಲೇ ನಾಡಿನ ನೆಲಮೂಲ ಸಂಸ್ಕೃತಿಗೆ ಘನತೆ ತಂದವರು. ಅದರಲ್ಲೂ ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಹಿರಿಯರಿಗಾಗಿ ಅನೇಕ ಪತಿಹಾಸಿಕ. ಜನಪದ. ವಾಸ್ತವವಾದಿ ಮುಂತಾದ ವಿಷಯಗಳನ್ನಿಟ್ಟುಕೊಂಡು ನಾಟಕ ರಚಿಸಿದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಿರುವುದರಿಂದ   *ಸಾವಿರದ ಶರಣವ್ವ ಕನ್ನಡದ ತಾಯೇ* ಎಂಬ ಏಕಾಂಕ ನಾಟಕಗಳ ಸಂಕಲವನ್ನು  ಮಕ್ಕಳಿಗಾಗಿ ರಚಿಸಿದ್ದಾರೆ. ಇನ್ನೂರ ನಾಲ್ಕು ಪುಟಗಳಿರುವ ಈ ಪುಸ್ತಕವನ್ನು ಕ್ರಿ ಶ 2023 ರಲ್ಲಿ  ಅಂಕಿತ ಪ್ರಕಾಶನವು ಮುದ್ರಣಗೊಳಿಸಿದೆ. ಮಕ್ಕಳಿಗಾಗಿಯೇ ರಚನೆಗೊಂಡ ಈ ಕೃತಿಯು ಹನ್ನೆರಡು ಏಕಾಂಕ ನಾಟಕಗಳನ್ನು ಒಳಗೊಂಡಿದೆ.ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳು ಪ್ರದರ್ಶನ ಮಾಡುವ  ಮಕ್ಕಳ ನಾಟಕಗಳೇ ರಚನೆಯಾಗುತ್ತಿಲ್ಲ. ಮತ್ತು  ರಚಿಸುವವರಿಲ್ಲ ಎಂಬ ಕೊರಗನ್ನು ಚಂದ್ರಶೇಖರ ಕಂಬಾರರು ಹೋಗಲಾಡಿಸಿದವರು. ಕಂಬಾರರೇ ರಚಿಸಿರುವ ಅಲಿಬಾಬ ಮತ್ತು 40 ಜನ ಕಳ್ಳರು. ಪುಷ್ಪರಾಣಿ ಮುಂತಾದ ಮಕ್ಕಳ ನಾಟಕಗಳಿವೆ. ಇವುಗಳ ಜೊತೆಗೆ ಮಕ್ಕಳು ಸುಲಭವಾಗಿ ಅಭಿನಯಿಸಬಹುದಾದ ಹನ್ನೆರಡು ನಾಟಕಗಳನ್ನು *ಸಾವಿರದ ಶರಣವ್ವ ಕನ್ನಡದ ತಾಯೆ* ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ. ಇವು ಜನಪದˌ ಪೌರಾಣಿಕ. ಐತಿಹಾಸಿಕ ನಾಟಕಗಳ ವಸ್ತು ಒಳಗೊಂಡವುಗಳಾಗಿವೆ.ತಂದೆ ಮಾತನ್ನು ಪರಿಪಾಲಿಸಿ ತಾಯಿಯ ಶಿರವನ್ನು ಕಡಿದ ಪರಶುರಾಮˌ  ವೀರ ಮೈಯೂರˌ ಚಾಲುಕ್ಯರ ಚಕ್ರೇಶ್ವರˌ ರಾಷ್ಟೃಕೂಟ ದೊರೆ ಅಮೋಘವರ್ಷ ನೃಪತುಂಗˌ ಬಾಹುಬಲಿˌ ಕಲ್ಯಾಣದ ಕೂಗುˌ  ಜಕಣಾಚಾರ್ಯˌ ಸಾಮ್ರಾಜ್ಯದ ಕತೆ. (ವಿಜಯನಗರ ಸಾಮ್ರಾಜ್ಯ ಸ್ಥಾಪನೆ)ˌ ಪುರಂದರದಾಸರುˌ ಸಾವಳಿಗಿ ಶಿವಲಿಂಗˌ ಕೆಂಪೇಗೌಡ ಹಾಗೂ ಕಿತ್ತೂರು ಚನ್ನಮ್ಮ  ಎಂಬ ಹನ್ನೆರಡು ನಾಟಕಗಳು ಮಕ್ಕಳಲ್ಲಿ ಕನ್ನಡ ನಾಡಿನ ವಿವಿಧ ಕಾಲಘಟ್ಟದ ಸಾಮಾಜಿಕ. ರಾಜಕೀಯˌ ಸಂಸ್ಕೃತಿˌ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯನ್ನು ತಿಳಿಸಲು ಸಹಕಾರಿಯಾಗಿವೆ.ಪಿತೃ ವಾಕ್ಯ ಪರಿಪಾಲಕನಾಗಿ ತಾಯಿಯ ಶಿರವನ್ನೇ ಕಡಿದ ಪರಶುರಾಮನ ಕತೆಯು ಕೊನೆಗೆ ತಾಯಿಯ ಜೀವವನ್ನೇ ವರವಾಗಿ ಪಡೆದು ತನ್ನ ಮಾತೃಹತ್ಯೆಯ ದೋಷದಿಂದ ಮುಕ್ತನಾಗುವ ಕತೆ ತಂದೆ ಮತ್ತು ತಾಯಿಯ ಮಹತ್ವವನ್ನು ಸಾರುತ್ತದೆ. ಕನ್ನಡದ ಮೊದಲ ಸಾಮ್ರಾಜ್ಯವೆಂದೆ ಹೇಳಿಕೊಳ್ಳಬಹುದಾದ ಕದಂಬ ವಂಶ ಸಂಸ್ಥಾಪಕನಾದ ಮೈಯೂರ ವರ್ಮ ಮೈಯೂರಶರ್ಮನಾಗಿ ಸಾಮ್ರಾಜ್ಯ ಕಟ್ಟಿದ ಕತೆಯಾಗಿದೆ. ಚಾಲುಕ್ಯ ಚಕ್ರೇಶ್ವರ ಎಂದು ಖ್ಯಾತನಾದ ಹಿಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರನಾಗಿ ಉತ್ತರದ ಹರ್ಷವರ್ಧನನ್ನು ಸೋಲಿಸಿದ ಸಾಹಸದ ಕತೆಯನ್ನು ಮನೋಜ್ಞವಾಗಿ ವಿವರಿಸಲಾಗಿದೆ.   ರಾಷ್ಟೃಕೂಟರ ಸಂಸ್ಥಾಪಕ ಅಮೋಘವರ್ಷ ನೃಪತುಂಗನು ಕನ್ನಡವನ್ನು ಹೇಗೆ ಉತ್ತುಂಗ ಮಟ್ಟಕ್ಕೆ ಹೊಯ್ದನು ಎಂದು ತಿಳಿಸುತ್ತದೆ.ಭರತ ಮತ್ತು ಬಾಹುಬಲಿಯ ಕತೆಯಂತೂ ತಿಳಿಯೇ ಇದೆ . ಚಕ್ರರತ್ನದ ಮೂಲಕ ಸಹೋದರರೆಲ್ಲರನ್ನೂ ಜಯಿಸಿದ ಭರತ ತಮ್ಮ ಬಾಹುಬಲಿಯನ್ನು ಸಕಲ ಯುದ್ದದಲ್ಲೂ ಗೆಲ್ಲಲಾಗದೆ ಕೊನೆಗೆ ಅಣ್ಣ ಭರತನಿಗೆ ಸಾಮ್ರಾಜ್ಯವನ್ನೇ ಬಿಟ್ಟು ಬಾಹುಬಲಿ ಶ್ರವಣಬೆಳಗೋಳಕ್ಕೆ ಹೋದ ಕತೆಯನ್ನು ಹೇಳುತ್ತದೆ. *ಕಲ್ಯಾಣದ ಕೂಗು* ನಾಟಕವು ಹನ್ನೆರಡನೇ ಶತಮಾನದ ಕಲ್ಯಾಣದ ಕ್ರಾಂತಿಯ ವಸ್ತುವನ್ನು ಹೊಂದಿದೆ. ಅಂತರ್ಜಾತಿ ವಿವಾಹ ಮಾಡಿ ಕ್ರಿಂತಿಗೆ ಕಾರಣನಾದ ಬಸವಣ್ಣ ಮತ್ತು ಶರಣರನ್ನು  ಬ್ರಾಹ್ಮಣ ಕುಲದವರು ಹೇಗೆ ಓಡಾಡಿಸಿ ಕೊಂದರು ಎಂಬ ಕತೆಯನ್ನು ವಿವರಿಸುತ್ತದೆ. ಶಿಲ್ಪಕಲೆಯ ಜತುರನಾದ ಜಕಣಾಚಾರ್ಯ ಮತ್ತು ಆತನ ಕೌಟುಂಬಿಕ ಕತೆಯನ್ನು ಅರುಹುವ *ಜಕಣಿಚಾರ್ಯ* ನಾಟಕವು ಕಲೆ ರಕ್ತಗತವಾಗಿ ಬರುತ್ತದೆ ಎಂಬುದರ ಜೊತೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಕುಟುಂಬವನ್ನೇ ತೊರೆದು ಬಂದು ಹೊಯ್ಸಳರ ಆಸ್ಥಾನದಲ್ಲಿದ್ದ ಜಕಣಾಚಾರ್ಯರು ಕೊನೆಗೆ ತಂದೆಯನ್ನು ಹುಡುಕಿಕೊಂಡು ಬಂದ ಡಂಕಣನು ತಂದೆಯನ್ನು ಮೀರಿಸುವಷ್ಟು ಶಿಲ್ಪಕಲಾ ಪಂಡಿತನಂತೆ ಬೆಳೆಯುತ್ತಾನೆ.  *ಸಾಮ್ರಾಜ್ಯದ ಕತೆ* ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರ ಜೀವನ ಮತ್ತು ಸಾಮ್ರಾಜ್ಯ ಕಟ್ಟಿದ ಪರಿಯನ್ನು ವಿವರಿಸುತ್ತದೆ. *ಪುರಂದರದಾಸರು* ನಾಟಕವೂ ಇದೆ ಹನ್ನೆರಡನೆಯ ಶತಮಾನದ ಕತೆಯಾಗಿದ್ದು ಶ್ರೀನಿವಾಸನಾಯಕ ಎಂಬ ಶ್ರೀಮಂತ ಬಂಗಾರದ ವ್ಯಾಪಾರಿಯೊಬ್ಬನು ಜೀವನದಲ್ಲಿ ಭಕ್ತಿಯನ್ನು ಹೊತ್ತಿಸಿಕೊಂಡು ದಾಸನಾಗುತ್ತಾನೆ. ಅವನೇ ಪುರಂದರದಾಸ. ಈ ಕತೆಯನ್ನು ವಿವರಿಸುತ್ತದೆ.  ಕೆರೆಗೆ ಹಾರವಾದ ಕತೆಯಂತೆ ಬೆಳಗಾವಿಯ ಭಾಗದಲ್ಲೂ ಈ ಘಟನೆ ನಡೆಯುತ್ತದೆ. ಹಿಂದು — ಮುಸ್ಲಿಂ ಬೇಧವನ್ನು ತೊಡೆದು ಹಾಕಲು ಸೂಫಿ ಮತ್ತು ಭಕ್ತಿಪಂಥಗಳು ಉದಯವಾಗುತ್ತವೆ. ಅಂತೆಯೇ ಸಾವಳಿಗಿ ಶಿವಲಿಂಗನೂ ಸಾಮರಸ್ಯದ ಬದುಕಿಗೆ ನಾಂದಿಯಾಡುತ್ತಾನೆ.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೈಡರನ್ನು ವಿಜಯನಗರದ ಸಾಮಂತ ಅರಸರಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹಾಗೂ ಕೆರೆ ಕಟ್ಟೆ. ಕೋಟೆ ಅರಮನೆಗಳನ್ನು ಕಟ್ಟಿ ನಾಡಿನ ಸಮೃದ್ದಿಗೆ ಕಾರಣರಾದ ಇತಿಹಾಸವನ್ನು ಈ ನಾಟಕ ತಿಳಿಸಿಕೊಡುತ್ತದೆ.ಇಲ್ಲಿರುವ ಹನ್ನೆರಡು ನಾಟಕಗಳಲ್ಲಿ ಹಲವು ಜಾನಪದ ಕತೆಯ ಮೂಲವನ್ನು ಹೊಂದಿವೆ. ಕೆಲವು ಇತಿಹಾಸದ ವಸ್ತುವನ್ನು ಹೊಂದಿದ್ದು ಮತ್ತೆ ಕೆಲವು ಪೌರಾಣಿಕ ವಿಷಯಾಧಾರಿತ ನಾಟಕಗಳಾಗಿವೆ. ಎಲ್ಲವೂ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬಿತ್ತುವಂತವುಗಳೇ ಆಗಿವೆ. ಜನಪದ ಉಳಿದರೆ ಎಲ್ಲವೂ ಉಳಿದು ಬೆಳೆಯುತ್ತದೆ ಎಂಬ ಲೇಖಕರ ಆಶಯ ಇಲ್ಲಿನ ಎಲ್ಲಾ ನಾಟಕಗಳಲ್ಲಿ ಎದ್ದು ಕಾಣುತ್ತದೆ. ನಾಟಕಗಳ ಮೂಲಕ ಮಕ್ಕಳಲ್ಲಿ  ನೈತಿಕ ಪ್ರಜ್ಞೆ. ಇತಿಹಾಸದ ಜ್ಞಾನ ಹಾಗೂ ಪೌರಾಣಿಕ ಕತೆಗಳ ಅರಿವನ್ನು ಮೂಡಿಸುವ ಮೂಲಕ ವಿಚಾರವಂತರನ್ನಾಗಿ ಮಾಡಬೇಕೆಂಬ ಆಶಯ ಲೇಖಕರದ್ದಾಗಿದೆ. ಕದಂಬˌ ಚಾಲುಕ್ಯˌ  ರಾಷ್ಟೃಕೂಟರು ವಿಜಯನಗರ ಸಾಮ್ರಾಜ್ಯ. ಬಸವಣ್ಣನವರ ಕಾಲˌ ಕೆಂಪೆಗೌಡ ಹಾಗೂ ಕಿತ್ತೂರರಾಣಿ ಚನ್ನಮ್ಮ ಇವರ ಕಾಲದ ಐತಿಹಾಸಿಕ ಜ್ಞಾನವನ್ನು ತಮ್ಮ ನಾಟಕಗಳ ಮೂಲಕ ತಿಳಿಸಿದ್ದಾರೆ. ಹಾಗೆಯೇ ಪುರಂದರದಾಸರು. ಬಾಹುಬಲಿ. ಸಾವಳಿಗಿ ಶಿವಲಿಂಗ ಜಕಣಾಚಾರ್ಯರಂತವರ ಜೀವನ ಸಾಧನೆಯನ್ನೂ ಕತೆಯಾಗಿ ರೂಪಾಂತರಿಸಲಾಗಿದೆ.ಇಲ್ಲಿರುವ ಹನ್ನೆರಡು ನಾಟಕಗಳೂ ಏಕಾಂಕ ನಾಟಕಗಳಾಗಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ಸಣ್ಣ ಪುಟ್ಟ ತಂಡಗಳಲ್ಲಿ ನಾಟಕ ತಯಾರಿಸಿ ಪ್ರದರ್ಶಿಸಲು ಅನುಕೂಲವನ್ನು ಹೊಂದಿವೆ. ಅತ್ಯಂತ ಸರಳ ಬಂಧದಲ್ಲಿ ರಚನೆಗೊಂಡಿರುವ ನಾಟಕಗಳು ಕತೆಯಂತೆ ನಿರಂತರವಾದ ದೃಶ್ಯಗಳನ್ನು ಹೊಂದಿರುವುದರಿಂದ ಪ್ರದರ್ಶನದ ತಾಂತ್ರಿಕ ತೊಂದರೆ ಎದ್ದು ಕಾಣುತ್ತದೆ. ದೃಶ್ಯಗಳು ಒಂದರ ನಂತರ ಒಂದಾಗಿ ಬರುವುದರಿಂದ ನಟರಿಗೆ ಅಭಿನಯಿಸಲು ತೊಂದರೆಯೂ ಆಗಬಹುದು ಎನಿಸುತ್ತದೆ. ಒಂದು ದೃಶ್ಯದಲ್ಲಿರುವ ಪಾತ್ರಧಾರಿಗಳು ಮುಂದೆ ಬರುವದೃಶ್ಯದಲ್ಲಿಯೂ ಬರುವುದರಿಂದ ನಿರಂತರವಾಗಿ ಅದೆ ಪಾತ್ರಗಳು ಅಭಿನಯಿಸಲು ತೊಡಕಾಗಬಹುದು ಎನಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಬದಲಿ ಪಾತ್ರಗಳು ಬರುವಂತೆ ಇದ್ದರೆ ಮತ್ತು ಮಧ್ಯೆ ಮಧ್ಯೆ ಸಂಗೀತ ಹಾಗೂ ನಾಟಕೀಯ ಸನ್ನಿವೇಷ ಬಂದರೆ ಅಭಿನಯಿಸಲು ಅನುಕೂಲವಾಗಹುದು ಎನಿಸುತ್ತದೆ. ಆದರೆ…ˌ ಇವು ಪಠ್ಯ ನಾಟಕಗಳಾದ್ದರಿಂದ ಹೀಗಿರಬಹುದು. ಪ್ರದರ್ಶಕ್ಕೆ ಬಂದಾಗ ನಿರ್ಧೇಶಕ ಮತ್ತು ನಟರ ಜಾಣ್ಮೆಯಿಂದ ಸಂಗೀತˌ ನಾಟಕೀಯತೆ ಹಾಗೂ ನಿರಂತರತೆಯ ತಾತ್ರಿಕ ದೋಷಗಳು ನಿವಾರಣೆಯಾಗಹುದು. ಲೇಖಕರ ಮತ್ತೊಂದು ಸಂತೃಪ್ತ ಭಾವ ಯಾವುದೆಂದರೆ ಇಂತಹ ಮಹನೀಯರೆಲ್ಲಾ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಘನವಾದ ಸಾಧನೆ ಮಾಡಿದ್ದಾರೆಲ್ಲ ಅದೆ ಕನ್ನಡದ ಹಿರಿಮೆ ಎನ್ನುತ್ತಾರೆ. ಅಂತಹ ಹಿರಿಮೆಯುಳ್ಳ ಕನ್ನಡ ನಾಡಿನಲ್ಲಿ ಹುಟ್ಟಿರುವುದೂ ನಮ್ಮ ಪುಣ್ಯ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ನಾಟಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ರಚಿಸಿದ್ದಾರೆ. ನಾಡು ನುಡಿ ನೆಲ ಜಲದ ವಿಷಯ ಹಾಗೂ ಸಂಸ್ಕೃತಿಕಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂಬುದನ್ನು ನಾಟಕಗಳು ತಿಳಿಸುತ್ತವೆ. ನಾಡಿನ ಸಮಸ್ತ ಕಲಾವಿದರು. ನಿರ್ದೇಶಕರುˌ ನಾಟಕ ತಂಡಗಳು ಹಾಗೂ ಪೋಷಕರು ಮಕ್ಕಳು. ಶಾಲಾ ಕಾಲೇಜಿನ ಶಿಕ್ಷಕರು ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಲಿ ಎಂಬ ಆಶಯ ಈ ಲೇಖನದ್ದಾಗಿದೆ. ವೆಂಕಟೇಶ ಈಡಿಗರರಾಣೇಬೆನ್ನೂರು

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಗಜೇಶ ಮಸಣಯ್ಯ ಗಜೇಶ ಮಸಣಯ್ಯನವರ  ವಚನಗಳು ಶರಣಸತಿ ಲಿಂಗಪತಿ ಭಾವ, ಷಟ್ಸ್ಥಲ ಸಿದ್ಧಾಂತ ಮತ್ತು ಆತ್ಮಜ್ಞಾನದ ಆಳವಾದ ತಿಳುವಳಿಕೆಯನ್ನು ಒಳಗೊಂಡಿವೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಇವರು ತಮ್ಮ ಮಡದಿಯೊಂದಿಗೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು. ಒಬ್ಬಶ್ರೇಷ್ಠಅನುಭಾವಿ ಚಿಂತಕ ಬಸವಕಾಲಿನಶರಣರು.   ಕಾಲ – ಹನ್ನೆರಡನೆಯ ಶತಮಾನಒಟ್ಟು ವಚನಗಳು 70 ಜನ್ಮ ಸ್ಥಳ  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು.ಅಂಕಿತ -ಮಹಾಲಿಂಗ ಗಜೇಶ್ವರ”. ಮಡದಿ -ಗಜೇಶ ಮಸಣಮ್ಮಐಕ್ಯ ಸ್ಥಳ – ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಮನಹಳ್ಳಿ ಗ್ರಾಮದಲ್ಲಿದ್ದು ಕೊನೆಗೆ ಅಲ್ಲಿಯೇ ಐಕ್ಯರಾದರೆಂದು ಕೆಲವರು ಹೇಳಿದರೆ, ಅಕ್ಕಲಕೋಟೆಯ ಕರ್ಜಗಿ ಗ್ರಾಮದಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ.   12 ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”. ಹೊಸ ಮದುವೆ ಹಸೆ ಉಡುಗದ ಮುನ್ನಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನನೀರ ತಾಳ್ಮೆ ಹರಿಯದ ಮುನ್ನತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದುಹುಸಿ ಇಲ್ಲದಿದ್ದಡೆ ಭಕ್ತನೆಂಬೆಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆತನುವಿಲ್ಲದಿದ್ದಡೆ ಪ್ರಸಾದಿ ಎಂಬೆಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆಆಸೆ ಇಲ್ಲದಿದ್ದಡೆ ಶರಣನೆಂಬೆಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆಇಂತಾಗಬೇಕೆಂಬ ಮನದ ದೇಹಇರಿದಡರಿಯದು, ಸ್ತುತಿಸಿದಡರಿಯದುಸುಖವನರಿಯದು, ದುಃಖವನರಿಯದುಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆಅದೇ ಮಹಾಲಿಂಗ ಗಜೇಶ್ವರನೆಂಬೆ ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿ  ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ    ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.                                         ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ  ಹೇಗೆ ಅಳವಡಿಸಿಕೊಂಡನು ಮಸಣಯ್ಯ   ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .ಎನ್ನ ಕರಸ್ಥಲವೇ ಬಸವಣ್ಣನಯ್ಯ———————————-ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ   ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ  ಗಜೇಶ ಮಸಣಯ್ಯ . ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ. ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ ) ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಕಾರಸ್ತಹದಲ್ಲಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ————————————–ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ  ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು  ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು. ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,———————————–ಇಷ್ಟಲಿಂಗ ಬಸವಣ್ಣ  ಪ್ರಾಣಲಿಂಗಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ   ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು. ಇಂತೆನ್ನ ಕರ ಮನ ಭಾವಂಗಳಲ್ಲಿ    ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ——————————————————————————ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು  ಮನವನ್ನು ಭಾವವನ್ನು ಶುದ್ಧ ಮಾಡುವ  ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು   ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲುಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ  ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ. ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.————————————————————————————————–ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರುತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ   ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅನಂತಹ ಎತ್ತರದ ನಿಲುವನ್ನು ಕಾಣಲುಸಾದ್ಯ  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

ಕಾವ್ಯಯಾನ

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು”

ಕಾವ್ಯ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಕಾಡಿಸದಿರು” ಕೊಳಲನೂದಿ ಕರೆವಾಗಕರಗಿ ಹೋದೆ ಮಾಧವಪ್ರೀತಿಯ ಕರೆಯ ತಿರಸ್ಕರಿಸಿಬಾಳಲು ಸಾಧ್ಯವ ನವಿಲು ಗರಿಯ ಹಿಡಿದು ಬಂದೆನಲ್ಮೆಯ ಗೋಪಾಲನಿಗಾಗಿಬೆಣ್ಣೆಯ ಮಡಿಕೆ ಹೊತ್ತು ತಂದೆಕಳ್ಳನಾದ ಆ ಕೃಷ್ಣನಿಗಾಗಿ ಬೃಂದಾವನದೊಳಗೆ ಅವಿತಅವನ ಹುಡುಕತ ಬಂದೆರಂಗಿನೋಕುಳಿ ಎರಚಿಮರೆಯಾದವನ ಒಲವಲಿ ನೆನೆದೆ ಎದೆಯ ಬಯಕೆಯ ಅರಿತವನಾದರೂಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿಗೋಪಿಕೆಯರ ಜೊತೆ ಕಳೆದು ಹೋದಗೋವರ್ಧನನ ಗುರುತು ಹಿಡಿದೆ ಭ್ರಮಿಸಿ ಇನ್ನು ಕಾಡಿಸ ಬೇಡ ಮಾಧವವಿರಹದಲಿ ಬೆಂದು ಸೋತಿದೆ ಜೀವಆನಂದದ ಯಮುನೆಯಲಿ ಮೀಯಿಸುಜೀವಚೇತನವಾಗಿ ಕೈಹಿಡಿದು ಮುನ್ನಡೆಸು ಅಮು ಭಾವಜೀವಿ ಮುಸ್ಟೂರು

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ..  *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ  ಮರೆಯುತಿರಲಿಏನೇ ಆದರೂ ಎಂದೂ  ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು”

ಕಾವ್ಯ ಸಂಗಾತಿ ನಿರಂಜನ ನಾಯಕ “ಅನುಭವಿ ಮೇಷ್ಟ್ರು” ಒಮ್ಮೆ ಕಣ್ಣೀರಿಟ್ಟಿದ್ದರುಆ ಒಳ್ಳೆಯ ಮೇಷ್ಟ್ರು—ಪಾಠಕ್ಕೆ ತಡೆಯೊಡ್ಡಿ,ಸದಾ ರಂಪ ಮಾಡುತ್ತಿದ್ದಮಕ್ಕಳ ರಗಳೆಗೆ ಬೇಸತ್ತು… ದಿನಗಳು ಉರುಳಿದವು,ಮಕ್ಕಳ ಪಡೆ ಬದಲಾಯಿತು;ಬಂದ ಹೊಸಬರಂತೂಹಳೆಯವರಿಗಿಂತ ಒಂದು ಕೈ ತಂಟೆಕೋರರೇ!ಆದರೂ ಈ ಬಾರಿಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,ತಮ್ಮ ಮುಂದಿರುವುದುಮಹಾ ಪಟಿಂಗರೆಂಬಅರಿವೇ ಇಲ್ಲದೇ… ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,ಅದೇ ಇಂದು ಅವರ ಆತ್ಮಬಲವಾಗಿತ್ತು!ಅಂದು ಬೆಟ್ಟದಂತಿದ್ದ ಅಡಚಣೆ,ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು. ಗಲಿಬಿಲಿಯ ಪ್ರತಿ ತರಗತಿಯೂ,ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—ಅವರ ಭಾವಗಳ ಹದಗೊಳಿಸಿದವು,ಕಾಲದ ಜೊತೆ ಬೆಳೆಸಿದವು.ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—ಏಕೆಂದರೆ,ಅವರು ಕಲಿಸಿದ ಪ್ರತಿ ಮಗುವೂಅವರಿಗೊಂದು ಹೊಸ ಪಾಠ ಕಲಿಸಿತ್ತು;‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು. ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು” Read Post »

You cannot copy content of this page

Scroll to Top