ಧಾರಾವಾಹಿ ಸಂಗಾತಿ-29 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಹೀಗಿದ್ದರು ಸ್ತ್ರೀರಾಜ್ಯದ ಸ್ತ್ರೀಯರು ನಮ್ಮ ಕುದುರೆ ಪ್ರವೇಶಿಸಿದ್ದು ಸ್ತ್ರೀರಾಜ್ಯವನ್ನು. ನಾವು ಹೊಕ್ಕದ್ದು ವನಿತಾ ಸೀಮೆಯನ್ನು. ಭಾರವನ್ನು ತಾಳಲಾರದೆ ಧರಣಿ ಕುಗ್ಗಿದೆಯೋ ಏನೋ! ತುಸು ಮುಂದೆ ಹಿಗ್ಗಿದೆಯೋ ಏನೋ! ಎಂಬಂತಿತ್ತು ಅಲ್ಲಿಯ ಭೂಮಿಯ ಸ್ವರೂಪ. ಹೀಗೆ ಏರಿಳಿತಗಳಲ್ಲಿಯೇ ಸಾಗಿದೆವು ನಾವು. ಸ್ತ್ರೀರಾಜ್ಯದ ಬಗೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನನ್ನಲ್ಲಿ ಅಳುಕು ಮೂಡತೊಡಗಿತು. ನನ್ನ ಜೊತೆಗಿದ್ದವರೆಲ್ಲಾ ಸಂಯಮದ ಮನಸ್ಸನ್ನು ಕಾಪಾಡಿಕೊಳ್ಳದಿದ್ದರೆ ಆ ಸ್ತ್ರೀರಾಜ್ಯವನ್ನು ದಾಟಿ ಮುಂದೆ ಹೋಗುವುದು ಸಾಧ್ಯವಿಲ್ಲ ಎಂಬ ಭಯ ನನ್ನಲ್ಲಿ ಉಂಟಾಯಿತು. ಅಲ್ಲಿದ್ದವರೆಲ್ಲಾ ನಾರಿಯರೇ. ಪುರುಷರು ಜೀವನ ನಡೆಸುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿದ್ದ ಸ್ತ್ರೀಯರು ಯೌವ್ವನಾವಸ್ಥೆಯನ್ನು ಹೊಂದಿದವರು. ಮಧುಪಾನದಿಂದ ಮತ್ತೇರಿಸಿಕೊಳ್ಳುವ ಚಟವನ್ನು ಇಟ್ಟುಕೊಂಡವರು. ಚೆಲುವಿತ್ತು ಅವರಿಗೆ. ಲಾವಣ್ಯವತಿಯರಾಗಿದ್ದರು. ಬಗೆಬಗೆಯ ಕಲೆಗಳಲ್ಲಿ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಇಂಪಾಗಿ ಹಾಡುವ ಕೌಶಲ್ಯವಿತ್ತು. ನೃತ್ಯವನ್ನು ಸೊಂಪಾಗಿ ಮಾಡುವ ಪ್ರತಿಭೆಯಿತ್ತು. ಕೊಳಲನ್ನು ನುಡಿಸುತ್ತಿದ್ದರು ಕೋಗಿಲೆ ಕೊರಳಿನಿಂದ ಧ್ವನಿಸರವು ಹೊಮ್ಮಿದಂತೆ. ವೀಣೆಯನ್ನು ನುಡಿಸುತ್ತಿದ್ದರು ರಸಿಕ ಹೃದಯದಿಂದ ಸ್ವರರಸವು ಚಿಮ್ಮಿದಂತೆ. ಮಾತುಮಾತಿಗೆ ನಗುವ, ಮಾತುಮಾತಿನಲಿ ನಗಿಸುವ ವಿನೋದ ಪ್ರಜ್ಞೆಯಿತ್ತು ಅಲ್ಲಿಯ ವಿನೋದಿನಿಯರಲ್ಲಿ. ಭೋಗಾಸಕ್ತರಾಗಿದ್ದರು ಅಲ್ಲಿನ ವನಿತೆಯರು. ಹೀಗೆ ಸ್ತ್ರೀಗಣವದು, ಸ್ತ್ರೀಗುಣಗಳ ಹೊಂದಿ, ಸ್ತ್ರೀಗಡಣದಲ್ಲಿಯೇ ಬದುಕು ನಡೆಸುತ್ತಾ, ಸ್ತ್ರೀಗಣಿಯೊಂದನ್ನು ನಿರ್ಮಿಸಿತ್ತು ಈ ಭೂಮಿಯೊಳಗೆ. ಹೀಗಿದ್ದ ವನಿತಾ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಜೀವಂತವಾಗಿ ಹೊರಬಂದ ಪುರುಷರು ಇರಲಿಲ್ಲ. ಬಂದ ಗಂಡಸರನ್ನು ಆಕರ್ಷಿಸಿ, ಕೊನೆಗೆ ಮರಣವನ್ನೀಯುವ ಕಠೋರತೆಯಿತ್ತು ಅಲ್ಲಿನ ಹೆಂಗಳೆಯರ ಹೃದಯದಲ್ಲಿ. ಸೌಂದರ್ಯಮಯ ದೇಹವನ್ನು ಮುಂದಿಟ್ಟು ಪುರುಷರನ್ನು ಯಮಪಾಶಕ್ಕೆ ಸಿಲುಕಿಸುತ್ತಿದ್ದ ಮೋಹನಾಂಗಿಯರು ಅಲ್ಲಿನವರು. ಬಂದ ಗಂಡಸರನ್ನು ಕಂಡು ಚೆಲ್ಲುಚೆಲ್ಲಾಗಿ ನೋಡುತ್ತಾ, ಆಸೆಯ ಕಣ್ಣೋಟ ಬೀರುತ್ತಿದ್ದರು. ಆಕರ್ಷಕವಾದ ಭಂಗಿಯಲ್ಲಿ ನಿಂತು, ಕಾಲ ಉಗುರುಗಳಿಂದ ನೆಲವನ್ನು ಕೆರೆಯುತ್ತಾ ಹುಸಿಲಜ್ಜೆಯ ಭಾವವನ್ನು ತೋರಿಸುತ್ತಿದ್ದರು. ಸರಸಗೈಯ್ಯುವ ಸಮಯದಲ್ಲಿ ದೇಹಸಿರಿಯನ್ನು ಉಣಬಡಿಸುತ್ತಾ ಗಂಡಸರಿಗೆ ಹುಚ್ಚು ಹಿಡಿದು ಅವರ ಅರಿವು ಇನ್ನಿಲ್ಲವಾಗುವ ಹಾಗೆ ಮದವನ್ನು ಏರಿಸುತ್ತಿದ್ದರು. ಇಲ್ಲಿನ ಸ್ತ್ರೀಯೊಡನೆ ಒಮ್ಮೆ ಸರಸಕೇಳಿಗೆ ಇಳಿದ ಬಳಿಕ ಅದೇ ವಿಷಯದಲ್ಲಿ ಸಂಪೂರ್ಣ ಆಸಕ್ತನಾಗಿಬಿಡುತ್ತಿದ್ದ ಇಲ್ಲಿಗೆ ಬಂದ ಪುರುಷ. ಇಲ್ಲಿಂದ ತೆರಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ನಾನಾ ಪ್ರಕಾರದ ಕಾಮಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಬಗೆಯಲ್ಲಿಯೇ ಒಂದು ತಿಂಗಳು ಸುಖಿಸುತ್ತಿದ್ದರು. ಉತ್ತಮವಾದ ಸುಗಂಧವನ್ನು ಮೈಗೆ ಬಳಿದುಕೊಂಡು, ಸುಗಂಧ ದ್ರವ್ಯವನ್ನು ಬಾಯಿಗೆ ಹಾಕಿಕೊಂಡು, ತಾಂಬೂಲ, ಮಧುಪಾನ ಮೊದಲಾದವುಗಳ ಮೂಲಕ ಮದನಕೇಳಿಯ ಉತ್ತುಂಗ ಸೊಗವನ್ನು ಅನುಭವಿಸುತ್ತಿದ್ದರು. ವಿಧವಿಧವಾದ ಬಗೆಯಲ್ಲಿ ಶೋಭಿಸುವ ಕುಸುಮಸಮೂಹಗಳ ಪರಿಮಳಭರಿತವಾದ ಮಕರಂದಗಳನ್ನು ಚಿನ್ನದ ಬಟ್ಟಲಲ್ಲಿ ಸುರಿಯುತ್ತಿದ್ದಳು ಹೆಣ್ಣು. ಆ ಮಕರಂದಕ್ಕೆ ತನ್ನ ತುಟಿಯ ಸಿಹಿಯನ್ನು ಸೇರಿಸುವಂತೆ ಬಟ್ಟಲಿಗೆ ಮುಖವಿಟ್ಟು ಅದನ್ನು ಸವಿಯುತ್ತಿದ್ದಳು. ಉಳಿದ ಮಕರಂದವನ್ನು ನೋಡಿ ನಗು ಬೀರುತ್ತಿದ್ದಳು. ಬಟ್ಟಲನ್ನು ಪುರುಷನ ಬಳಿಗೆ ತೆಗೆದುಕೊಂಡು ಹೋಗಿ ಬಟ್ಟಲಿನಲ್ಲಿದ್ದ ಮಕರಂದವನ್ನು ಇಬ್ಬರೂ ಹಂಚಿಕೊಂಡು ಸವಿಯುತ್ತಿದ್ದರು. ಮಕರಂದದ ಸವಿಯನ್ನು ತೊರೆದು ಇರುವವರಲ್ಲ ಎಂಬಂತೆ ಇಬ್ಬರೂ ಬಿಡದೆ ಮುಖವಿಟ್ಟು ರುಚಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಚಿನ್ನದ ಬಟ್ಟಲಲ್ಲಿ ಮೂಡಿದ ಪುರುಷನ ಬಿಂಬವನ್ನು ಆ ಹೆಣ್ಣು, ಅವಳ ಬಿಂಬವನ್ನು ಆ ಪುರುಷ ಇಬ್ಬರೂ ಕಂಡು ಅನ್ಯೋನ್ಯತೆಯ ಸಂಪ್ರೀತಿ ಭಾವ ಅವರನ್ನು ಆವರಿಸುತ್ತಿತ್ತು. ಬಟ್ಟಲಲ್ಲಿ ತುಂಬಿರುವ ಮಕರಂದ ಮುಗಿದುಹೋದರೆ ಜೊತೆಜೊತೆಗೆ ಅದನ್ನು ಸವಿಯುವ ಗಳಿಗೆಯದು ಮುಗಿದುಹೋಗುವುದು ಎಂಬ ಯೋಚನೆ ಬಂದ ಕ್ಷಣವೇ ಆತುರಾತುರವಾಗಿ ರಸವನ್ನು ಹೀರುವುದನ್ನು ನಿಲ್ಲಿಸುತ್ತಿದ್ದರು. ಬೇಕುಬೇಕೆಂದೇ ವಿಳಂಬ ಮಾಡುತ್ತಿದ್ದರು. ಜೊತೆಜೊತೆಗೆ ಸವಿವ ರಸಗಳಿಗೆಯದು ಅವರಿಗೆ ಮುದವನ್ನು ನೀಡುತ್ತಿತ್ತು. ಮನಸೆಳೆಯುವ ರತಿಕೇಳಿಯಲ್ಲಿ ತಲ್ಲೀನರಾಗುತ್ತಿದ್ದರು. ಹೆಣ್ಣು ತನ್ನ ತುಟಿಯ ಸಿಹಿರಸವನ್ನು ಕುಡಿಸಿ ಪುರುಷನನ್ನು ತಣಿಸುತ್ತಿದ್ದರು. ಮಿಲನದಲ್ಲಿ ಮನವದು ಮುಳುಗಿಹೋಗಿ ಸುಖ ಅವರದ್ದಾಗುತ್ತಿತ್ತು. ಕಾಮಕಲೆಗಳಲ್ಲಿ ಪರಿಣತಳಾದ ಹೆಣ್ಣು ಈ ಮೂಲಕ ಉನ್ನತ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದಳು. ಹಾಗಿದ್ದಾಗಲೇ ಅವಳ ಅಧರದ ಸ್ಪರ್ಶಕ್ಕೆ ಸಿಲುಕಿ ವಿಷವಾದ ಆ ಮಕರಂದ ಅವನಿಗೆ ಪ್ರಾಣಸಂಕಟವನ್ನು ಕೊಡುವ ಕಾಟವನ್ನು ಆರಂಭಿಸುತ್ತಿತ್ತು. ಇನ್ನೇನು ಮರಣ ತನ್ನನ್ನು ಬಂದು ಅಪ್ಪಿಕೊಳ್ಳುತ್ತದೆ ಎಂದು ಬೆದರಿದ ಪುರುಷ ಮಧ್ಯೆಯೇ ಕಾಮಕೇಳಿಯನ್ನು ನಿಲ್ಲಿಸಿಬಿಡುತ್ತಿದ್ದ. ತಕ್ಷಣವೇ ಅವನ ಚರಣಕ್ಕೆ ಎರಗಿ, ಒಪ್ಪಿಸುವ ನಾಟಕವನ್ನಾಡುತ್ತಿದ್ದಳು. ದೈನ್ಯತೆಯನ್ನು ತೋರಿಸುತ್ತಿದ್ದಳು. ಕರುಣೆ ನೋಟ ಹರಿಸುತ್ತಿದ್ದಳು. ಅದಕ್ಕೂ ಅವನು ಸಹಿಸದವನಾದರೆ ಬೊಬ್ಬೆ ಹೊಡೆದು ಅವನನ್ನು ಹೊಡೆಯುತ್ತಿದ್ದಳು, ಕೊಲ್ಲುತ್ತಿದ್ದಳು. ಕೈಗಳಿಂದ ಬಡಿದು ಪ್ರಾಣ ಹೋಗುವವರೆಗೂ ಅವಳು ಸುಮ್ಮನಾಗುತ್ತಿರಲಿಲ್ಲ. ಸಂಪಿಗೆ ಹೂವಿಗೆ ಮನಸೋತು, ಅದರ ಆಸ್ವಾದನೆಗೆ ಬಂದು, ಹೂ ಬಾಡುವವರೆಗೂ ಮಕರಂದವನ್ನು ಹೀರಿಕೊಂಡಿದ್ದು, ಕೊನೆಗೆ ಅದರೊಳಗಡೆಯೇ ಸಿಲುಕಿ ಮರಣವನ್ನಪ್ಪುವ ದುಂಬಿಯಂತಹ ಸ್ಥಿತಿ ಸ್ತ್ರೀರಾಜ್ಯಕ್ಕೆ ಬಂದ ಪುರುಷರದ್ದು. ಅಲ್ಲಿಗೆ ಬಂದ ಎಲ್ಲಾ ಪುರುಷರಿಗೂ ಇದೇ ಅವಸ್ಥೆ ಒದಗಿಬರುತ್ತಿತ್ತು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಇದೇ ತೆರದಲ್ಲಿದ್ದರು. ಹೀಗೆ ಪುರುಷರನ್ನು ಸಾಯಿಸಿದ ಕೆಲವು ಮಹಿಳೆಯರು ತಿಂಗಳು ಕಳೆದಾಗ ಅಗ್ನಿಪ್ರವೇಶ ಮಾಡುತ್ತಿದ್ದರು. ಇನ್ನೂ ಕೆಲವರು ಹೆಣ್ಣುಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಅಲ್ಲಿಯ ಸ್ತ್ರೀಸಂತತಿ ಬೆಳೆಯುತ್ತಲೇ ಬಂದಿತ್ತು. ಹೀಗೆ ವಿಷಾಂಗನೆಯರಾಗಿದ್ದ ಆ ರಾಜ್ಯಕ್ಕೆ ಪ್ರಮೀಳೆ ಎನ್ನುವವಳು ಅರಸಿಯಾಗಿದ್ದಳು. ನನ್ನ ಜೊತೆಗಿದ್ದವರನ್ನು ಎಚ್ಚರಿಸದೇ ಇದ್ದರೆ ಅಪಾಯವಾಗುತ್ತದೆ ಎನ್ನುವುದು ನನಗೆ ದೃಢವಾಗಿತ್ತು. ಇದುವರೆಗೂ ಪರಾಕ್ರಮವನ್ನಿಟ್ಟುಕೊಂಡು ಯುದ್ಧ ಹೂಡಿದ್ದ ನಾವು ಇದೀಗ ಸಂಪೂರ್ಣ ಬುದ್ಧಿವಂತಿಕೆಯಿAದ, ವಿವೇಚನೆಯಿಂದ ನಡೆದುಕೊಂಡು ಮುನ್ನಡೆಯಬೇಕಿತ್ತು. “ಇಲ್ಲಿನವರು ವಿಷಕನ್ನಿಕೆಯರು. ಕಂಡ ಕೂಡಲೇ ಆಕರ್ಷಿಸುತ್ತಾರೆ. ಅವರೆಡೆಗೆ ಮಾರುಹೋದರೆ ನಿಮ್ಮ ಆಯುಷ್ಯವನ್ನೇ ಅಪಹರಿಸಿಬಿಡುತ್ತಾರೆ. ಕಾಮಕ್ರೀಡೆಯಲ್ಲಿ ಆಸಕ್ತಿ ವಹಿಸದೆ ಬುದ್ಧಿವಂತರಾಗಿರಬೇಕು” ಎಂದು ಹೇಳಿ ಜಾಗೃತಿ ಮೂಡಿಸಿದೆ ನಮ್ಮವರಲ್ಲಿ. ಅರಸಿ ಪ್ರಮೀಳೆ ನಮ್ಮ ಕುದುರೆಯನ್ನು ಕಟ್ಟಿಹಾಕುವ ಲಕ್ಷಣ ತೋರಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ನಾಗರಾಜ ಬಿ.ನಾಯ್ಕ ಅವರ ಕವಿತೆ
ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅವರ ಕವಿತೆ ಕಾಗದದ ಮೇಲೆಬರೆಯಬೇಕೆಂದ ಸಾಲುಗಳುಇದ್ದಲ್ಲೇ ಕರಗಿಹೋದವು ಸುಮ್ಮನೇಗೆರೆಗಳ ಹಾಕಿಚಿತ್ರವಾಗಬೇಕಾದ ಚಿತ್ರಗಳೂರಸ್ತೆಗಳಾದವುಮರದ ನೆರಳಾಗಿಉಳಿಯಬೇಕಾದ ಹೂವುಗಳುಹಣ್ಣಿಗಾಗಿ ಇಳೆ ಸೇರಿತುಕಾಲದ ಸಹಜಓಟದ ಹರಿವಿಗೆಬಯಲು ನದಿಯಾಯಿತುಕಡಲು ಬದುಕಾಗಿಜೀವದ ಓಟ ಸಾಗಿತು ಮರದ ಮೇಲೊಂದು ಹಕ್ಕಿಕುಳಿತು ಗೂಡು ಕಟ್ಟುವುದುಹೇಗೆ ಎಂದು ನೋಡುತ್ತಿತ್ತುಹಾರಿ ಸಾಗಿ ಬದುಕಿನಉಸಿರಿಗೆ ಉಸಿರಾಗಿಕಣ್ಣೊಳಗೆ ಜಗವತುಂಬುತ್ತಿತ್ತು ಸುಮ್ಮನೇಗದ್ದೆಯ ಹಸಿರಿಗೆಚಿಗುರು ಮೂಡಿತ್ತುಮತ್ತೆ ಮೋಡದಿಮಳೆ ಹನಿಯ ಚಿತ್ರತಾನಾಗಿ ಮೂಡಿಜಗದಗಲದ ನೆಲಕೆತಂಪು ಹರಡಿತ್ತುಕಾಗದದ ಮೇಲೆಮೂಡಿದ ಬಣ್ಣಗಳೆಲ್ಲಾಗಾಳಿಯಲ್ಲಿ ತೇಲಿನೆಲಕೆ ಇಳಿದಿತ್ತುಮತ್ತೆ ಚಿತ್ರವಾಗುತ್ತನೆಲದೊಳಗೆ ಸೇರಿತ್ತು……. ನಾಗರಾಜ ಬಿ.ನಾಯ್ಕ
ನಾಗರಾಜ ಬಿ.ನಾಯ್ಕ ಅವರ ಕವಿತೆ Read Post »
ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡ ಪಾಟೀಲ್ ಪರಿಸರ ದಿನಾಚರಣೆ..ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ ಒಂದೆರಡು ದಿನಗಳ ಹಿಂದೆ ಪರಿಸರ ದಿನಾಚರಣೆಯಿದ್ದು ಇದನ್ನು ಕಡ್ಡಾಯವಾಗಿ ಆಚರಿಸಲೇಬೇಕು ಎಂಬ ಕಾರಣಕ್ಕಾಗಿ ಬಹುತೇಕ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಸಿಯನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.ಪತ್ರಿಕೆಯವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಸಿರು ಬಣ್ಣದ ಅಕ್ಷರಗಳಲ್ಲಿ ಪತ್ರಿಕೆಯನ್ನು ಪ್ರಿಂಟ್ ಮಾಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದರು. ಇನ್ನು ಮಹಿಳಾಮಣಿಯರು ಹಸಿರು ರಂಗಿನ ದಿರಿಸುಗಳನ್ನು ಧರಿಸಿ ಪರಿಸರ ದಿನಾಚರಣೆಯನ್ನು ಆಚರಿಸಿ ಅದರ ಫೋಟೋ ತೆಗೆದು ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ಸಂಭ್ರಮಿಸಿದರು. ಎಲ್ಲವೂ ಚಂದ! ನಿಜ ಪರಿಸರ ದಿನಾಚರಣೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲದೆ ಹೋದರೆ ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಕುರಿತು ಒಂದೈದು ನಿಮಿಷ ಮನದಲ್ಲೇ ಯೋಚಿಸಿದರೆ ಶೂನ್ಯ ಫಲಿತಾಂಶ ನಮ್ಮ ಮುಂದೆ ಕಾಣಬಹುದು.ಯಾರನ್ನೂ ಹೀಯಾಳಿಸುವ, ತಮಾಷೆ ಮಾಡುವ ಅವರ ಕುರಿತು ನಿರ್ಣಾಯಾತ್ಮಕವಾಗಿ ಹೇಳಿಕೆ ಕೊಡುವ ಇಲ್ಲವೇ ಅವರ ಕ್ರಿಯೆಯನ್ನು ಹಂಗಿಸುವ ಉದ್ದೇಶ ನನಗಿಲ್ಲ…. ಆದರೂ ಕೆಲ ಸಂಗತಿಗಳನ್ನು ನಮ್ಮದೇ ನಿಲುಕಿನಲ್ಲಿ ನಾವು ವೈಯಕ್ತಿಕವಾಗಿ ಕೈಗೊಳ್ಳುವ ನೂರೆಂಟು ಸಾಧ್ಯತೆಗಳು ಇರುವಾಗ ಆ ನಿಟ್ಟಿನಲ್ಲಿ ನಾವು ಮುಂದುವರೆದರೆ ಪರಿಸರವನ್ನು ಇನ್ನಷ್ಟು ಸಮರ್ಪಕವಾಗಿ ಉಳಿಸಿಕೊಳ್ಳಬಹುದು ಎಂಬ ಆಶಯ ನನ್ನದು. ಈಗಾಗಲೇ ಪರಿಸರ ವಿನಾಶದ ದುಷ್ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ . ಹಿತಕರವಾದ ಬೇಸಿಗೆ ನಮ್ಮ ಪಾಲಿಗೆ ದೂರ…. ಕುರಿಯುತ್ತಿರುವ ಝಳ, ನಮ್ಮನ್ನು ಆಹುತಿ ತೆಗೆದುಕೊಳ್ಳದಿದ್ದರೆ ಸಾಕು ಎಂಬಂತಹ ಬಿಸಿಲು ಒಂದೆಡೆ ಕಾಡುತ್ತಿದ್ದರೆ,, ಬೇಕಿರಲಿ ಬೇಡದೆ ಇರಲಿ ಧೋ ಎಂದು ಸುರಿಯುತ್ತಿರುವ ಅಕಾಲ ಮಳೆ ಅಲ್ಲಲ್ಲಿ ನೆರೆ ಹಾವಳಿಯಿಂದ ಬೆಳೆ ಮನೆಗಳನ್ನು ತನ್ನ ರುದ್ರ ನರ್ತನಕ್ಕೆ ಈಡು ಮಾಡಿ ಹಾಳುಗೆಡವುತ್ತಿದೆ…. ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಮಾರಣಾಂತಿಕ ತೊಂದರೆಗಳಾದ ಹೃದಯ ತೊಂದರೆ, ಅಕಾಲ ಮರಣಗಳು ಚಳಿಯ ಕಾರಣದಿಂದ ಉಂಟಾಗುತ್ತಿದ್ದು, ಸಹಿಸಲಸಾಧ್ಯವಾದ ಚಳಿಯಿಂದ ಜನರು ಸಾಯುತ್ತಿರುವ ಘಟನೆಗಳನ್ನು ಕೂಡ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈಗಾಗಲೇ ಪರಿಸ್ಥಿತಿ ಸಾಕಷ್ಟು ವಿಷಮಿಸಿದ್ದು ಇನ್ನೂ ಹೆಚ್ಚಿನ ಅನಾಹುತಗಳು ಉಂಟಾಗುವ ಮುನ್ನವೇ ಜಾಗೃತರಾಗಬೇಕಾದ ಪರಿಸ್ಥಿತಿ ನಮ್ಮದು ಆ ನಿಟ್ಟಿನಲ್ಲಿ ಕೆಲ ಪರಿಹಾರ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ. ಅಯ್ಯೋ ! ಅದನ್ನೆಲ್ಲ ಎಲ್ಲಿ ಮಾಡೋಕಾಗುತ್ತೆ ಉಳಿದವರೆಲ್ಲ ಮಾಡ್ಲಿ ನಮ್ಮ ಕೈಲಿ ಆಗೋದಿಲ್ಲ ಎಂಬ ನಿಟ್ಟಿನಲ್ಲಿ ಜನರು ವಿಸ್ಮೃತಿಯಲ್ಲಿ ಸಿಲುಕಿದ್ದಾರೆ ಅಂತಹವರಿಗೆ ಮಾಡುವ ಮನಸ್ಸಿದ್ದರೂ ಅವಕಾಶಗಳ ಅರಿವು ಹಾಗೂ ಅನಿವಾರ್ಯತೆಯನ್ನು ಮೂಡಿಸುವುದು ಮಾತ್ರ ನನ್ನ ಉದ್ದೇಶ.ಪರಿಸರ ದಿನಾಚರಣೆ ಇರುವುದು ಕೇವಲ ಗಿಡ ಮರಗಳನ್ನು ನೀಡಲು ಮಾತ್ರವಲ್ಲ. ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ನಾವು ಇರುವ ಈ ಬೃಹತ್ ಬ್ರಹ್ಮಾಂಡದ ಎಲ್ಲಾ ಜೀವರಾಶಿಗಳಿಗೂ ನಮ್ಮಷ್ಟೇ ಇಲ್ಲಿ ಬದುಕುವ ಹಕ್ಕು ಇದೆ ಎಂಬುದನ್ನು ಅರಿತುಕೊಳ್ಳಲು. ಉಳಿದೆಲ್ಲ ಜೀವಿಗಳಿಗೆ ಮನುಷ್ಯನಷ್ಟು ಬುದ್ಧಿಶಕ್ತಿ ಇಲ್ಲ ನಿಜ…ಆದರೆ ಜಗತ್ತಿನ ಜೀವಸಂಕುಲಗಳಲ್ಲಿಯೇ ಅತ್ಯಂತ ಬುದ್ಧಿಶಾಲಿ ಎಂದು ಬೀಗುವ ಮನುಷ್ಯ ತಾನೇ ತೋಡಿದ ಕಂದಕಕ್ಕೆ ತಾನು ಮಾತ್ರವಲ್ಲದೆ ಇಡೀ ಜೀವ ಸಂಕುಲವನ್ನು ಹಂತ ಹಂತವಾಗಿ ತಳ್ಳಿ ಮಾರಣಾಂತಿಕ ತೊಂದರೆಯಲ್ಲಿ ಸಿಲುಕಿಸುವ ಪ್ರಕ್ರಿಯೆಗೆ ಈಗಾಗಲೇ ತೊಡಗಿದ್ದಾನೆ.ಆರಂಭದಲ್ಲಿ ಆಧುನಿಕತೆಯ ಮೆರುಗಿನಲ್ಲಿ ಬಳಸಿ ಬಿಸುಡುವ ವಸ್ತುಗಳ ಶೋಕಿಯಲ್ಲಿ,, ಬಿಗಿಯಾದ ನೀತಿ ನಿಯಮಗಳ ಅನುಷ್ಠಾನ ಇಲ್ಲದ ಕಾರಣಕ್ಕಾಗಿ ಈ ಪ್ರವಾಹ ಚಿಕ್ಕದಾಗಿದ್ದರೂ ಇದೀಗ ಬೃಹದಾಕಾರದ ಸಮಸ್ಯೆಯಾಗಿ ಉಲ್ಬಣಗೊಂಡಿದೆ.ಪ್ರತಿಯೊಂದು ಹಳ್ಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ದಿಲ್ಲಿಯವರೆಗಿನ ಮಹಾನಗರ ಪಾಲಿಕೆಗಳವರೆಗೆ ಸಮಸ್ಯೆ ಇರುವುದು ಕಸ ವಿಲೇವಾರಿ. ನೀವು ಯಾವುದೇ ಊರಿನ ಹೊರ ಭಾಗದಲ್ಲಿ ಹೋಗಿ ನೋಡಿದರೆ ರಸ್ತೆಯ ಬದಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಷ್ಟು ಕಸ ಬಿದ್ದಿರುತ್ತದೆ. ಮರುಬರಕ್ಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳ ರಾಶಿ ಅಲ್ಲಿರುತ್ತದೆ. ಹರಿದು ಹೋದ ರಬ್ಬರ್ ಟಾಯರ್, ಟ್ಯೂಬ್, ಬ್ಯಾಗ್ ಗಳು, ನೀರಿನ ಬಾಟಲಿಗಳು ಪೇಸ್ಟಿನಿಂದ ಹಿಡಿದು ಬೃಹದಾಕಾರದ ತ್ಯಾಜ್ಯಗಳು ಊರ ಹೊರಗಿನಿಂದಲೇ ನಮ್ಮನ್ನು ಸ್ವಾಗತಿಸುತ್ತವೆ.ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಸ್ವಚ್ಛ ಭಾರತ ಯೋಜನೆಯನ್ನು ಕೈಗೊಂಡು ಮನೆಗೊಂದು ಶೌಚಾಲಯವನ್ನು ನಿರ್ಮಿಸಿ ಕೊಟ್ಟರೂ ಕೂಡ 21ನೇ ಶತಮಾನದಲ್ಲಿಯು ಜನರು ಬಯಲು ಬಹಿರ್ದೆಸೆಗೆ ಹೋಗುವ ಮೂಲಕ ಪರಿಸರವನ್ನು ಹಾಳುಗೆಡವುತ್ತಿದ್ದಾರೆ.ಇನ್ನು ಚಿಕ್ಕ ಪಾನ್ ಶಾಪು ಗಳಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ ಎಲ್ಲ ಕಡೆ ಪ್ಲಾಸ್ಟಿಕ್ನದ್ದೇ ಕಾರುಬಾರು.ಬಣ್ಣ ಬಣ್ಣದ ಒಡೆಯದ ಚಿತ್ತಾಕರ್ಷಕ ಪ್ಲಾಸ್ಟಿಕ್ ಲೋಟ, ಬಟ್ಟಲು, ಬಳಸಿ ಬಿಸುಟಬಹುದಾದ ವಸ್ತುಗಳು ಒಂದೆರಡಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಮಾರುವ ಅಂಗಡಿಕಾರರು ಅಂತಿಮವಾಗಿ ಪ್ಯಾಕ್ ಮಾಡಿ ಕೊಡುವಾಗ ಮಾತ್ರ ಸರ್/ಮೇಡಂ ನಾವು ಪ್ಲಾಸ್ಟಿಕ್ ಕವರ್ ಬಳಸುವುದಿಲ್ಲ ಪೇಪರ್ ಬ್ಯಾಗ್ ನಲ್ಲಿ ಹಾಕಿ ಕೊಡೋಣವೇ ಎಂದು ಕೇಳುವುದು ವಿಪರ್ಯಾಸವಲ್ಲವೇ ? ಪರಿಸರವನ್ನು ಉಳಿಸಿ ಎಂದು ಒಕ್ಕೊರಳಿನಿಂದ ಹೋಗುವ ಎಲ್ಲಾ ಕಡೆಗಳಲ್ಲಿ ಕಣ್ಣು ಕುಕ್ಕುವ ಬಲ್ಬ್ ಗಳನ್ನು, ಟ್ಯೂಬ್ ಗಳನ್ನು ಹಾಕಿ ಸೂರ್ಯನ ಬೆಳಕಿಗೆ ಸವಾಲೊಡ್ಡುವಂತೆ ಪ್ರಕಾಶಮಾನವಾಗಿಸುವರು. ರಸ್ತೆಯ ಅಗಲೀಕರಣ ಊರನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಬೃಹದಾಕಾರದ ಕಟ್ಟಡಗಳನ್ನು ಕರುಣಿಸಿ ನಿರ್ಮಿಸುವ ಸಲುವಾಗಿ ನೂರಾರು ವರ್ಷಗಳಿಂದ ನಮಗೆ ಗಾಳಿ ನೆರಳನ್ನು ನೀಡುವುದರ ಜೊತೆಗೆ ನೂರಾರು ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಮರಗಳನ್ನು ಕಡಿದು ಉರುಳಿಸುವುದು ಪರಿಸರ ನಾಶವಲ್ಲದೆ ಮತ್ತಿನ್ನೇನು ? ಯಾವುದೇ ಒಂದು ಆಧುನಿಕತೆಯ ಭರಾಟೆ ತನ್ನ ಅಂತಿಮ ಹಂತದಲ್ಲಿ ತೀವ್ರ ಪರಿಣಾಮವನ್ನು ಬೀರಿದಾಗ ಉಂಟಾಗುವ ಅಲ್ಲೋಲಕಲ್ಲೋಲದಲ್ಲಿ ನಾವು ಮನುಷ್ಯ ಮಾತ್ರಠು ಯೋಚಿಸಲು ಆರಂಭಿಸುತ್ತೇವೆ.ಇವೆಲ್ಲವೂ ದೊಡ್ಡ ಮಟ್ಟದಲ್ಲಾಯಿತು… ನಮ್ಮ ಹಿರಿಯರು ನಮಗೆ ಕೊಟ್ಟ ಒಳ್ಳೆಯ ವಾತಾವರಣದ ಕೊಡುಗೆಯನ್ನು ನಾವು ಮಕ್ಕಳಿಗೆ ಉಳಿಸಿ ಕೊಡಬೇಕಾಗಿರುವುದು ನಮ್ಮದೇ ಜವಾಬ್ದಾರಿ ಆ ಜವಾಬ್ದಾರಿಯ ನಿರ್ವಹಣೆಯಲ್ಲಿ ನಾವು ಬಹುತೇಕ ಎಡವಿದ್ದೇವೆ ನಿಜ, ಆದರೆ ಮತ್ತೆ ಸಂಭಾಳಿಸಿಕೊಂಡು ನಿಲ್ಲಲೇಬೇಕಾದ ತುರ್ತು ಪರಿಸ್ಥಿತಿ ಒದಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಪಕ್ಷ ಸುಶಿಕ್ಷಿತರು, ನಾಗರಿಕರು ಎಂದೆನಿಸಿಕೊಂಡಿರುವ ನಾವುಗಳು ನಮ್ಮ ಮನೆಯ ಮಟ್ಟಿಗೆ ಪರಿಸರವನ್ನು ಹೇಗೆ ಕಾಯ್ದುಕೊಳ್ಳಬಹುದು ಎಂದು ನೋಡೋಣ.* ಮನೆಯಿಂದ ಹೊರಗೆ ಅಂಗಡಿಗೆಂದೇ ಹೋಗುವಾಗ ಬಟ್ಟೆಯ ಕೈ ಚೀಲಗಳನ್ನು ಒಯ್ಯುವುದು ವಿಹಿತ. ಯಾವುದೇ ಸಮಯದಲ್ಲಿಯೂ ನೀವು ಏನನ್ನಾದರೂ ಖರೀದಿಸಬಹುದು ಎಂಬ ಮನಸ್ಥಿತಿ ನಿಮ್ಮದಾಗಿದ್ದರೆ ಬಟ್ಟೆಯ ಬ್ಯಾಗ್ ನ ಜೊತೆ ಒಂದೆರಡು ಡಬ್ಬಗಳನ್ನು ಒಯ್ಯುವುದು ಒಳ್ಳೆಯದು, ಅದು ಸಾಧ್ಯವಾಗದಿದ್ದರೆ ಅಂಗಡಿಗಳಲ್ಲಿ ಕಾಗದ ಪೊಟ್ಟಣದಲ್ಲಿ ಕಟ್ಟಿಕೊಡಲು ಕೇಳಿಕೊಳ್ಳಬೇಕು. ಮೊದಮೊದಲು ಅಂಗಡಿಕಾರರು ನಿಮ್ಮನ್ನು ತಮಾಷೆ ಮಾಡಬಹುದು ಅಯ್ಯೋ! ಅದನ್ನೆಲ್ಲ ಯಾರು ಮಾಡ್ತಾರೆ ಸರ್, ಇದನ್ನೇ ತಗೊಂಡು ಹೋಗಿ ಎಂದು ನಿಮಗೆ ಅಸಡ್ಡೆಯಿಂದ ಉತ್ತರಿಸಬಹುದು… ಇದನ್ನು ಅವಮಾನ ಎಂದು ಭಾವಿಸಬೇಡಿ. ನೀವು ನಿಮ್ಮ ನಿಲುವಿಗೆ ಬದ್ಧರಾದರೆ ಮುಂದಿನ ದಿನಮಾನಗಳಲ್ಲಿ ನಿಮ್ಮನ್ನು ಮತ್ತಷ್ಟು ಜನರು ಅನುಸರಿಸಬಹುದು. ವೈಯುಕ್ತಿಕ ನೆಲೆಯಲ್ಲಿ ನಾವು ಇದನ್ನು ಖಂಡಿತವಾಗಿಯೂ ಮಾಡಲು ಸಾಧ್ಯವಿದೆ.* ಹಗಲಿನ ಹೊತ್ತಿನಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನಿಂದ ಬರುವ ಸೂರ್ಯನ ಬೆಳಕು ಹಾಗೂ ತಾಜಾ ಹವೆಯನ್ನು ಉಸಿರಾಡಲು ರೂಢಿಸಿಕೊಳ್ಳಬೇಕು. ಅನವಶ್ಯಕವಾಗಿ ಲೈಟ್ಗಳನ್ನು ಉರಿಸುವುದು ಬೇಕಾಗಿಲ್ಲ. ತೀರ ಅನಿವಾರ್ಯವಾದಲ್ಲಿ ಮಂದ ಬೆಳಕನ್ನು ಸೂಸುವ ಅತ್ಯಂತ ಕಡಿಮೆ ಯೂನಿಟ್ ಬಳಕೆಯಾಗುವ ನವೀಕೃತ ಮಾದರಿಯ ಬಲ್ಬ್ ಗಳನ್ನು ಬಳಸಬೇಕು.‘ಒಂದು ಯೂನಿಟ್ ಉಳಿತಾಯ ಒಂದು ಯೂನಿಟ್ ಉತ್ಪಾದನೆಗೆ ಸಮ ‘ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿ ಇಟ್ಟುಕೊಳ್ಳಲೇಬೇಕು. ನಮಗೆ ಉತ್ಪಾದನೆ ಮಾಡುವ ಸಾಮರ್ಥ್ಯವಿಲ್ಲ ಎಂದಾದಲ್ಲಿ ಬಳಸುವಾಗ ತುಸು ಎಚ್ಚರ ವಹಿಸುವುದು ಒಳಿತು.*ಆಹಾರವನ್ನು ಸಾಧ್ಯವಾದಷ್ಟು ತಾಜಾ ಆಗಿ ತಯಾರಿಸಿ ಸೇವಿಸಬೇಕು ಪದೇ ಪದೇ ಬಿಸಿ ಮಾಡುವುದರಿಂದ ಆಹಾರದಲ್ಲಿರುವ ಜೀವಸತ್ವಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಆಹಾರವು ಸತ್ವರಹಿತವಾಗುತ್ತದೆ.. ಅತಿಯಾಗಿ ಅಡುಗೆ ತಯಾರಿಸಿ ಅದನ್ನು ಚೆಲ್ಲುವುದರಲ್ಲಿ ಅರ್ಥವಿಲ್ಲ. ಪ್ರತಿದಿನವೂ ಹಳ್ಳಿಯಿಂದ ದಿಲ್ಲಿಯವರೆಗೆ ಉಣ್ಣಲು ಸಾಧ್ಯವಾಗದ ರೀತಿಯಲ್ಲಿ ಟನ್ನುಗಟ್ಟಲೆ ಆಹಾರ ಪದಾರ್ಥಗಳು ಕಸದ ತೊಟ್ಟಿಗೆ ಸೇರುವುದರಲ್ಲಿ ನಮ್ಮ ಅಳಿಲು ಪಾಲು ಸಲ್ಲುವುದನ್ನು ತಪ್ಪಿಸಬೇಕು. ಈ ಹಿಂದೆ ಉಳಿಕೆ ಆಹಾರವು ಮನೆಯ ಕೆಲಸದವರಿಗೆ ಮರುದಿನಕ್ಕೆ, ದನ ಕರುಗಳಿಗೆ ಮುಸುರೆಯಾಗಿ ಸಾರ್ಥಕತೆಯನ್ನು ಪಡೆಯುತ್ತಿತ್ತು ಆದರೆ ಆಧುನಿಕ ಭರಾಟೆಯಲ್ಲಿ ಪಶು ಸಂಗೋಪನೆಯನ್ನು ಕೈ ಬಿಟ್ಟಿರುವ ನಾವುಗಳು ಆಹಾರವನ್ನು ನೇರವಾಗಿ ಕಸದ ತೊಟ್ಟಿಗೆ ಚೆಲ್ಲುತ್ತಿದ್ದೇವೆ. ಇಡೀ ದೇಶದಲ್ಲಿ ಒಂದು ದಿನ ಕಸದ ತೊಟ್ಟಿಗೆ ಬಿಸಾಡುವ ಆಹಾರ ಅದೆಷ್ಟೋ ಕುಟುಂಬಗಳನ್ನು ಪಾಲಿಸಬಲ್ಲದು ಎಂಬ ಸತ್ಯದ ಅರಿವು ನಮಗಿರಬೇಕು… ಉತ್ಪಾದನಾ ಸಾಮರ್ಥ್ಯವಿಲ್ಲದವರಿಗೆ ಹಾಳು ಮಾಡುವ ಹಕ್ಕಿಲ್ಲ… ಅದು ನಮ್ಮ ವೈಯಕ್ತಿಕ ದುಡ್ಡಿನಿಂದ ಖರೀದಿಸಿದ್ದಾದರೂ ಸರಿಯೇ ? ಎಂಬ ಪ್ರಜ್ಞೆಯನ್ನು ಹೊಂದಿ ಅಂತೆಯೇ ನಡೆದುಕೊಳ್ಳಬೇಕು. ಇದರಿಂದ ಮನೆಯ ಖರ್ಚಿನಲ್ಲಿ ಮಿತವ್ಯಯ ಸಾಧಿಸಬಹುದು. ಇಂಧನವನ್ನು ಉಳಿಸಬಹುದು…. ತನ್ಮೂಲಕ ಪರಿಸರದ ಸಂರಕ್ಷಣೆಗೆ ನಮ್ಮ ಪಾಲನ್ನು ಸಲ್ಲಿಸಬಹುದು.* ಈ ಹಿಂದೆ ಅಮ್ಮಂದಿರು ಕಡ್ಡಾಯವಾಗಿ ತಮ್ಮ ಬಳಿ ಕರ ವಸ್ತ್ರವನ್ನು ನ್ಯಾಪ್ಕಿನ್ ಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇದೀಗ ಬಳಸಿ ಬಿಸಾಡಬಹುದಾದ ನ್ಯಾಪ್ಕಿನ್ಗಳನ್ನು ಎಗ್ಗಿಲ್ಲದೆ ಬಳಸಿ ಎಸೆಯುತ್ತಾರೆ. ಒಂದು ದಿನಕ್ಕೆ ಸರಿ ಸುಮಾರು 37 ಸಾವಿರ ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಕೆಗೆ ಕಡಿದು ಬಳಸುತ್ತಾರೆ ಎಂದರೆ ನೀವೇ ಊಹಿಸಿಕೊಳ್ಳಿ…. ಒಂದು ವರ್ಷಕ್ಕೆ ಎಷ್ಟು ಮರಗಳ ಮಾರಣಹೋಮವಾಗುತ್ತದೆ ಎಂದು. ಪ್ರಶ್ನೆ ಇರುವುದು ಅದೇ ಪ್ರಮಾಣದಲ್ಲಿ, ಅದೇ ತುರ್ತಿನಲ್ಲಿ, ಅಷ್ಟೇ ಪ್ರಮಾಣದ ಗಿಡಗಳನ್ನು ನಾವು ಬೆಳೆಸಲು ಸಾಧ್ಯವೇ ? ಎಂಬುದು.*ನಮ್ಮ ಹೊಲಗಳಲ್ಲಿ ಹೆಚ್ಚಿನ ಬೆಳೆಯನ್ನು ಪಡೆಯಲೆಂದು ನಾವು ಬಳಸುವ ಕೀಟನಾಶಕಗಳು ನಮ್ಮ ಭೂಮಿಯ ಸತ್ವವನ್ನು ಹೀರಿಕೊಳ್ಳುತ್ತಿವೆ. ನೆಲವನ್ನು ಬಂಜರಾಗಿಸುತ್ತವೆ. ಇದರ ಪರಿಣಾಮವಾಗಿ ನಿಸ್ಸತ್ವ ಆಹಾರವನ್ನು ಸೇವಿಸುತ್ತಿರುವ ನಮ್ಮ ಯುವ ಜನಾಂಗವು ಹತ್ತು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿವೆ. ಸಂತಾನಹೀನತೆಯ ತೊಂದರೆ ಪ್ರಮುಖವಾಗಿ ತಲೆದೋರುತ್ತಿದೆ. ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಸತ್ವಯುತ ಆಹಾರ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಚಿಸಲೇಬೇಕು. ಈ ಹಿಂದಿನವರು ಮಾಡುವಂತೆ ಉತ್ತಮ ತಳಿಯ ಬೀಜಗಳನ್ನು ಕಾಪಿಟ್ಟುಕೊಳ್ಳುವ, ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ನಮ್ಮದಾಗಿಸಿಕೊಳ್ಳುವ ವಾರ್ಷಿಕ ಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಹಣ್ಣು ಹಂಪಲುಗಳನ್ನು ಬೆಳೆಯುವ ಮೂಲಕ ಆದಾಯವನ್ನು ಸರಿ ತೂಗಿಸಬಹುದು…. ಈ ಕೆಲಸದಲ್ಲಿ ತುಸು ಶ್ರಮ ಹೆಚ್ಚಾಗಬಹುದು ಆದರೆ ನಾವು ಸಾಕುವ ಪಶುಗಳೊಂದಿಗಿನ ಒಡನಾಟ ನಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಪ್ರಕೃತಿಯೊಂದಿಗಿನ ಸಾಂಗತ್ಯ ಮನಸ್ಸಿಗೆ ಹಿತವಾಗಿರುತ್ತದೆ.* ಈ ಹಿಂದಿನಂತೆ ಪ್ರತಿ ಮನೆಯು ಒಂದು ಪುಟ್ಟ ಹಿತ್ತಲನ್ನು ಹೊಂದಿದ್ದು ಅಲ್ಲಿ ದಿನಬಳಕೆಯ ಹಣ್ಣು ತರಕಾರಿ ಹೂವುಗಳ ಗಿಡಗಳನ್ನು ಬೆಳೆಸಬೇಕು. ಅವಸರಕ್ಕೂ ಒದಗುವ ನೆರಳನ್ನು ಕೊಡುವ ಹಸಿರಿನಿಂದ ಕಣ್ಣು ತಂಪಾಗಿಸುವ ತಣ್ಣನೆಯ ಗಾಳಿಯನ್ನು ನೀಡುವ ಗಿಡಗಳು ಮನೆಯ ಹಿಂದೆ ಹಾಗೂ ಮುಂದೆ ಇರಲೇಬೇಕು ನಿಸರ್ಗಕ್ಕೆ ಹತ್ತಿರವಾದ ರೀತಿಯಲ್ಲಿ ಮನೆ ಹಾಗೂ ಮನೆಗೆ ಹತ್ತಿದಂತೆ ನಿಸರ್ಗಕ್ಕೆ ಹತ್ತಿರವಾಗುವ ಕೈತೋಟ ಇದ್ದರೆ ಅದು ನಂದನವನವೇ ಸರಿ. ಮನೆಯಲ್ಲಿ ಕೂಡ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಕೈ ಬಿಡಬೇಕು ಸ್ವಯಂ ಪ್ರೇರಿತರಾಗಿ ಅವುಗಳನ್ನು ದೂರವಿರಿಸುವುದು ಒಳ್ಳೆಯದು. ಇನ್ನು ರಸ್ತೆಗೆ ಇಳಿದರೆ ವಿಪರೀತ ವಾಹನಗಳ ಸಂದಣಿ. ಮನೆಗೆ ನೂರು ಮೀಟರ್ ಹತ್ತಿರವಿರುವ ಅಂಗಡಿ ಮುಂಗಟ್ಟುಗಳಿಗೆ ಹೋಗಲು ಕೂಡ ಟೂ ವೀಲರ್ ಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಡೆಯುತ್ತಾ ಹೋಗಿ ದಿನಬಳಕೆಯ ವಸ್ತುಗಳನ್ನು ಖರೀದಿಸುವ ಮೂಲಕ ದೈಹಿಕ ಆರೋಗ್ಯದ ಜೊತೆ ಜೊತೆಗೆ ಗಾಡಿಗೆ ಬಳಸುವ ಇಂಧನದ ಖರ್ಚನ್ನು ಕೂಡ ಉಳಿಸಬಹುದು. ಮನೆಯಲ್ಲಿ
ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ
ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ ಹೋಗುವುದಾದರೂ ಎಲ್ಲಿಗೆ ….?? ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು. ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್.. ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್ ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು ಕೊನೆಗೆ ಊಟ ಸಿಗದೆ ಇದ್ದವರಲ್ಲಿ ನಾನೂ ಒಬ್ಬಳು. ಅಲ್ಲಿ ಇದ್ದವರೆಲ್ಲ ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ? ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು ನಾವು ನುಂಗಿಕೊಳ್ಳಲೇ ಬೇಕು. ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ. ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ. ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ ದಾರಿತಪ್ಪಿ ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ. ಮನುಷ್ಯ ಬೆಳೆದ ಕಬ್ಬು,ಬಾಳೆ, ಬತ್ತ ಇತ್ಯಾದಿ ಬೆಳೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ, ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15 ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ ತನಗೆದುರಾದ ಮನುಷ್ಯರನ್ನು ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ. ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ. ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ ಆನೆಗಳು ಹೋಗುವುದಾದರೂ ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!! ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ, ಉಪಟಳ ಕೊಡುತ್ತಲೇ ಇರುತ್ತವೆ. ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ. ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ??? ಜಯಲಕ್ಷ್ಮಿ ಕೆ ಮಡಿಕೇರಿ.
ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ Read Post »
ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”
ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”. ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆದೇವರಲಿ ನೀಡಿ ಬೇಡಿದೆ ಬೊಗಸೆಹೃದಯದಲಿ ನೀನೆಂದು ಸ್ಥಿರ ಮನಸೇನಿತ್ಯ ನೂತನ ನೆನಪೆoದು ನನಸೇ ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇಸಂಸಾರದ ರಥ ನಡೆಸುವ ಕನಸೇತುಂಬುವುದು ಸಂತಸದ ಹೊಸ ಹಸಿರೇ ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದುಅನುಭವದ ಸವಿಸ್ತಾರ ಕೇಳುವುದುಜೀವನ ಚಕ್ರ ನಿಲ್ಲದೆ ಉರುಳುವುದುಸುಮಧುರ ಪ್ರೀತಿ ಅಳಿಯದೆ ಉಳಿಯುವುದು ಅನನ್ಯ ಅವಿಸ್ಮರಣೀಯ ಕಂಡ ಬೆರಗುಬೇಕಿಲ್ಲ ಜಂಜಾಟದ ಯಾವ ಕೊರಗುನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗುದೊರಕಿದೆ ಹೊಸತನದ ಹೊಸ ಮೆರಗು ಡಾ. ಲತಾ ಎ ಆರ್ ಬಾಳೆಹೊನ್ನೂರು.
ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ” Read Post »
ವೈ.ಎಂ.ಯಾಕೊಳ್ಳಿ ಅವರ “ಕವಿತೆ”
ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಕವಿತೆ ಎನಿತೊ ಮಾತುಗಳುಮೌನದಲಿ ಕರಗಿನಿಂತು ಹೋಗಿದೆಬಂಧವದು ಸೊರಗಿ ಎದೆಯ ಭಾವಗಳುಆಡದೆಯೆ ಉಳಿದುದೂರವಾದ ಹೃದಯಅಳುತಿದೆ ಮನದಿ ಕಾರಣವೆ ಇರದನೋವಿನ ಸರಮಾಲೆಯಾರದೇನೋ ಶಾಪವುತಿಳಿಯದಾವ ಲೀಲೆ ದಾಟದ ಸಾಗರವುಎದೆಗಳ ನಡುವೆಮುಗಿದು ಹೋದ ಮೇಲೆಮಾತವು ಬರಿ ಸಪ್ಪೆ ಕಡಿದ ಬಂಧವನುಜೋಡಿಸುವದೇ ತಂತುದಾರಿ ಕಾಣದ ಮನಮರುಗುತಿದೆ ಇಂತು ವೈ.ಎಂ.ಯಾಕೊಳ್ಳಿ
ವೈ.ಎಂ.ಯಾಕೊಳ್ಳಿ ಅವರ “ಕವಿತೆ” Read Post »
“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು
ಪುಸ್ತಕ ಸಂಗಾತಿ ಗೊರೂರು ಅನಂತರಾಜು “ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..? ‘ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ನೀವು ನನ್ನನ್ನು ಹಿಂಸಿಸಬಹುದು, ನೀವು ಈ ದೇಹವನ್ನು ಸಹ ನಾಶಪಡಿಸಬಹುದು. ಆದರೆ ನೀವು ಎಂದಿಗೂ ನನ್ನ ಮನಸ್ಸನ್ನು ಬಂಧಿಸಲಾಗುವುದಿಲ್ಲ. -ಮಹಾತ್ಮ ಎಂ.ಕೆ.ಗಾಂಧಿ. ಮಾಳೇಟಿರ ಸೀತಮ್ಮ ವಿವೇಕ್ ಅವರ ಇತ್ತೀಚಿನ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕವೊಂದರ ನಂತರ ಮೂಡಿ ಬರುತ್ತಿರುವ ನನ್ನ ಚೊಚ್ಚಲ ಕನ್ನಡ ಕೃತಿಯಾಗಿದೆ ಎನ್ನುವ ಮೇಡಂ ಅವರ ತವರು ಮನೆ ಹೆಸರು ಕಂಬೀರಂಡ. ಮೂರ್ನಾಡು ಬಾಡಗ ಗ್ರಾಮ. ಕೊಡಗು ಜಿಲ್ಲೆ. ಚರಿತ್ರೆ ಅಧ್ಯಯನಗಾರ್ತಿಯಾದ ಇವರ ಮನಸ್ಸು ಕೃತಿ ಸಾಕಷ್ಟು ಅಧ್ಯಯನ ನಡೆಸಿ ವಿಶಿಷ್ಟ ಮಾಹಿತಿ ಅನುಭವಗಳನ್ನು ಕ್ರೋಢೀಕರಿಸಿ ಬರೆದ ಕೃತಿ. ಮಾನವ ಜೀವನದ ಅತಿ ಮಹತ್ವದ ಆದರೆ ಅತೀ ಅಲಕ್ಷಿತ ಶಕ್ತಿ ಮನಸ್ಸು. ಇದು ಕಾಣುವುದಿಲ್ಲ. ಕಾಣಿಸಿಕೊಳ್ಳುವ ಎಲ್ಲರಿಗೂ ಇದು ಸ್ಫರ್ಶಿಸಬಹುದಾದ ಅಂಗವೂ ಅಲ್ಲ. ಅದರ ಪ್ರತಿಯೊಂದು ಅನುಭವದ ಸ್ಫಂದನ. ಅದರಿಂದಲೇ ಈ ಕೃತಿಯಲ್ಲಿ ಕಾಣುವ ಮನ ಏವಂ ಮನುಷ್ಯಾಣಾಂ ಕಾರಣಂ ಬಂಧಂ ಮೋಕ್ಷಯೋ: ಎಂಬ ಪುರಾತನ ತತ್ವ ವಾಕ್ಯವು ಮನಸ್ಸಿನ ಸ್ವಭಾವವನ್ನು ನೇರವಾಗಿ ಸ್ಫಷ್ಟಪಡಿಸುತ್ತದೆ. ಮನಸ್ಸೆ ಬಂಧನಕ್ಕೂ ಕಾರಣ. ಅದೇ ಮುಕ್ತಿಗೂ ದಾರಿ ಎಂದಿದ್ದಾರೆ ಇವರ ಪತಿ ಮಾಳೇಟಿರ ವಿವೇಕಾನಂದ ಪೊನ್ನಪ್ಪನವರು. ಮನಸ್ಸು ಒಂದು ಅಗೋಚರ ಅತೀಂದ್ರಿಯ ಶಕ್ತಿಯಾಗಿದೆ. ಹೆಣ್ಣು ಗಂಡೆನ್ನದೆ ಸರ್ವರೊಳಗೂ ಇರುವ ಮನಸ್ಸು ಪ್ರತಿಯೊಬ್ಬರಿಗಿರುವ ಅವರವರ ದೇಹದೊಂದಿಗೆ ಜೀವಮಾನವೆಲ್ಲ ಚಲಿಸುವ, ದೈಹಿಕ ಅರಿಹಂತಗಳಿಂದ ಸಮ್ಮಿಳಿತವಾಗಿರುವ ಅತೀಂದ್ರಿಯವಾಗಿದೆ. ಬುವಿಯಲ್ಲಿ ರೂಪ ತಾಳುವ ದೇಹದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿರುವ ಮನಸ್ಸಿಗೆ ಘಾಸಿಯಾದರೆ ಇಡೀ ಶರೀರವೇ ನಾಶವಾಗುತ್ತದೆ. ಅಂತಹ ಘನತ್ತರವಾದ ನಮ್ಮೊಳಗೆ ಇರುವ ಮನ: ಮಾತೃಕೆಯ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೆ ಇರುವುದರಿಂದಲೇ ನಾವು ಮಾತ್ರವಲ್ಲದೆ ಕುಟುಂಬ, ಸಮಾಜ, ದೇಶವೇ ಏರುಪೇರು ದೃಷ್ಟಿಕೊನವನ್ನು ಹೊಂದಿದೆ.ಮಾನವ ಸಂಘ ಜೀವಿ. ಎಲ್ಲರ ಮನಸ್ಸಿಗು ಒಟ್ಟಿಗೆ ಬಾಳುವುದೇ ಪ್ರಧಾನ ಬಯಕೆ ಆಗಿರುತ್ತದೆ. ಹಾಗೆಂದು ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ. ನನಗೆ ಜಿ.ಎಸ್. ಶಿವರುದ್ರಪ್ಪನವರ ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬ ಭಾವಗೀತೆ ನೆನಪಾಗುತ್ತದೆ. ಅದರಲ್ಲಿನ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲ್ಲಿ. ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬಾಳಿನಲಿ.. ಹೌದು ಮನಸ್ಸಿನ ಅರಿವಿಕೆ ಇಲ್ಲದೆ ಇರುವುದೇ ಆ ಹೊಂದಿಕೆ ಸಾಧ್ಯವಾಗದೆ ಇರಲು ಕಾರಣ.ಮೇಡಂ ಅವರು ತಮ್ಮ ವೈಯಕ್ತಿಕ ಜೀವನಾನುಭವಗಳನ್ನು ಆತ್ಮ ಪರಿಶೀಲನೆಯ ಕಣ್ಣಿನಿಂದ ನೋಡುತ್ತಾ, ಸಂಕಟಗಳನ್ನು ಜ್ಞಾನವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಪ್ರಕೃತಿ ವಾತಾವರಣದಲ್ಲಿ ಬೆಳೆದ ಬಾಲ್ಯ, ವಿಭಿನ್ನ ಸಂಸ್ಕೃತಿಗಳ ಅನುಭವ, ಜೀವನದ ಕಠಿಣ ಘಟ್ಟಗಳು, ಆರೋಗ್ಯ ಸಂಕಟಗಳು, ಆತ್ಮ ಅನ್ವೇಷಣೆಯ ಕ್ಷಣಗಳು ಇವೆಲ್ಲವೂ ಈ ಕೃತಿಗೆ ಜೀವ ತುಂಬಿವೆ. ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ನಲ್ಲಿ ಸಂಭವಿಸಿದ ಮರಣಭಯದ ಅನುಭವ ದಾಖಲಿಸುತ್ತಾರೆ.ನಮ್ಮ ಕುಟುಂಬ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿ ಮನಾಲಿಯ ಹಿಡಿಂಬ ದೇವಸ್ಥಾನ ಸಮೀಪದಿಂದ ಸುಮಾರು ೫ ಸಾವಿರ ಮೀ.ಗಿಂತಲೂ ಎತ್ತರದ ರೋಹತಂಗ್ ಪಾಸ್ ನ ಪರ್ವತದೆಡೆ ಪ್ರಯಣ ಬೆಳಸಬೇಕಿತ್ತು. ಅದು ಹಿಮ ಪರ್ವತವಾಗಿ ಸ್ಥಳೀಯರು ಬೆಚ್ಚಗಿನ ಮೈಹೊದಿಕೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಅದೇ ರೀತಿ ತಯಾರಾಗಿ ಹೊರಟೆವು. ಅನೇಕ ತಿರುವುಗಳ ರಸ್ತೆ. ಕ್ರಮಿಸಬೇಕಾಗಿದ್ದ ಎತ್ತರ ನಾವಿದ್ದ ಸ್ಥಳದಿಂದ ತುಂಬಾ ಮೇಲೆ ಮೋಡ ಹರಡಿಕೊಂಡಂತೆ ಇತ್ತು. ಹಾಗಾಗಿ ನಮ್ಮ ವಾಹನದ ಚಾಲಕ ನಮಗೆ ಶ್ವಾಸಕೋಶ ಸಂಬಂಧಿ ತೊಂದರೆ ಇರುವವರಿಗೆ ಆಮ್ಲಜನಕ ಕೊರತೆ ಬಾಧಿಸಬಹುದೆಂದು ಮುನ್ಸೂಚನೆ ನೀಡಿದ್ದರು. ನನ್ನ ತಾಯಿಗೆ ಉಬ್ಬಸದ ಸಮಸ್ಯೆ ಇತ್ತು. ನಾವು ಅವರ ಬಗ್ಗೆ ಯೋಚಿಸುತ್ತಾ ವಾಹನದಲ್ಲಿ ಕುಳಿತು ಎಲ್ಲವನ್ನು ಅಹ್ಲಾದಿಸುತ್ತ ತುತ್ತ ತುದಿ ತಲುಪಿದೆವು. ಇನ್ನೇನು ಹಿಮ ಹರಡಿದ್ದ ಜಾಗ ಮುಟ್ಟಬೇಕು. ಅಷ್ಟು ಹತ್ತಿರದಲ್ಲಿ ಹಿಮಾವೃತ ಸುಂದರ ಪುಟ್ಟ ಗುಡ್ಡ! ಅದನ್ನು ನೋಡುತ್ತ ವಾಹನದಿಂದ ಎಲ್ಲರೂ ಖುಷಿಯಿಂದ ಇಳಿದರು. ಸುತ್ತಮುತ್ತಲ ದೃಶ್ಯಗಳು ವರ್ಣಿಸಲು ಅಸಾಧ್ಯ! ಸೌಂದರ್ಯ ಅಮೋಘ! ದೂರದಲ್ಲಿ ಹಿಮಚ್ಛಾದಿತ ಬೆಟ್ಟದ ತುದಿಯಲ್ಲಷ್ಟೇ ಸೂರ್ಯನ ಕಿರಣಗಳು ಹಾಯ್ದು ಬೆಟ್ಟ ಬೆಳ್ಳಿಯಂತೆ ಹೊಳೆಯುತ್ತಿತ್ತು. ಆ ಸೊಂಪನ್ನು ನೋಡ ನೋಡುತ್ತಿದ್ದಂತೆಯೇ ಆರೋಗ್ಯವಾಗಿದ್ದ ನಾನು ದೊಪ್ಪೆಂದು ಕುಸಿದ್ದು ಬಿದ್ದೆ! ಬಿದ್ದದ್ದು ನನಗೆ ತಿಳಿಯಲಿಲ್ಲ. ಎಷ್ಟು ಸಮಯದ ನಂತರ ಎಚ್ಚರವಾಯಿತು ತಿಳಿಯಲಿಲ್ಲ. ಅಲ್ಲಿ ನಾನು ಎದ್ದು ಕುಳಿತಾಗ ಕಿವಿಗೆ ಬಿದ್ದದ್ದು ನನ್ನ ತಾಯಿಯ ಪ್ರಶ್ನೆ. ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..ಎಂದು! ಆಗ ನಾನು ಅಲ್ಲಿದ್ದೆ. ಇಲ್ಲಿಗೆ ಹೇಗೆ ಬಂದೆ? ಎಷ್ಟು ಇಂಪಾದ ನಾದಗಳು ಅಹ್ಲಾದಕರ ಪರಿಮಳ ಅಲ್ಲಿ ಇದ್ದವಲ್ಲ ಎಂದಿದ್ದೆ. ಅಲ್ಲಿ ಆಗ ಬಿದ್ದಿದ್ದ ನನ್ನ ದೇಹದ ಸುತ್ತಲೂ ಜನ ಸೇರಿ ಮುಟ್ಟಿ ಉಪಚರಿಸುತ್ತಿದ್ದರೂ ಶರೀರಕ್ಕೆ ಯಾವುದೇ ಸ್ಫರ್ಶಾನುಭವ ಆಗುತ್ತಿಲ್ಲ! ಆದರೆ ನಾನು ಸಂಪೂರ್ಣ ಎಚ್ಚರವಾಗಿಯೇ ಇದ್ದೆ! ಮೊದಲೇ ನಾನು ಪ್ರಕೃತಿ ಸೌಂದರ್ಯ ತಲ್ಲೀನ ಅಪ್ಪಟ ಆರಾಧಕಿ. ಆ ಕಾರಣಕ್ಕೋ ಏನೋ ಯಾವ ಬೆಳ್ಳಿಬೆಟ್ಟ ನೋಡುತ್ತಿದ್ದೆನೋ ಅದರೆಡೆಗೆ ನಾನು ಆರಾಮಾಗಿ ಹೊಗುತ್ತಿದ್ದುದು ಚೆನ್ನಾಗಿಯೇ ತಿಳಿಯುತ್ತಿತ್ತು. ಹತ್ತಿರ ತಲುಪಿದಾಗ ಅದರ ಆಸುಪಾಸು ಇಂಪಾದ ನಾದ ಕೇಳಿಸುತ್ತಿತ್ತು. ಸುಂದರ ಹೂವಿನ ಪರಿಮಳ ಹರಡಿತ್ತು. ಎಂದೂ ನೋಡಿರದ ಸುಂದರ ಪಕ್ಷಿಗಳು ಹಾರಾಡುತ್ತಾ ಇದ್ದಿದ್ದು ಗ್ರಹಿಸಿದ್ದೆ. ನೀರು ಹರಿಯುವ ನಾದ ಬರುತ್ತಿದ್ದ ಕಡೆ ಹೋಗಲು ಅಣಿಯಾದಾಗ ದೂರದಲ್ಲಿ ಹೃದಯಕ್ಕೆ ಹತ್ತಿರವಾಗಿ ನನ್ನನ್ನು ಕರೆಯುತ್ತಿರುವುದು ಕೇಳಿಸಿ ಆ ಕೂಗು ಬಂದ ಕಡೆಗೆ ಆ ಸುಂದರ ತಾಣ ಬಿಟ್ಟು ಹೊರಡಲು ಮನಸ್ಸಿಲ್ಲದಿದ್ದರೂ ಗುಡ್ಡದಿಂದ ಇಳಿಯುತ್ತ ಹತ್ತಿರ ತಲುಪಿದಾಗ.. ಮುಖಕ್ಕೆ ನೀರು ಚಿಮುಕಿಸಿ ಮೂಗಿಗೆ ಕರ್ಪೂರವನ್ನು ಮೂಸಿಸುತ್ತಿರುವ ಕಾಲ್ಚೀಲ ಕಳಚಿ ಕಾಲು ತಿಕ್ಕುತ್ತಿರುವ ದೈಹಿಕ ಅನುಭವಗಳಾದವು. ಅಲ್ಲಿ ಕಣ್ಣು ತುಂಬಿಕೊಂಡು ಕರೆಯುತ್ತಿದ್ದವರು ನನ್ನ ತಾಯಿ! ನನ್ನ ಪತಿ ತಂಗಿ ಮಗ ಎಲ್ಲರು ಕರೆಯುತ್ತಿದ್ದರೂ ಅಮ್ಮನ ಕೂಗು ಮಾತ್ರ ಕೇಳಿಸುತ್ತಿದ್ದದ್ದು ಮಾತ್ರ ವಿಚಿತ್ರ ಎನಿಸಿತು. ಅದೇ ಹೃದಯದ ಕೂಗು, ಎದೆಯಾಳದ ಕೂಗು ಎಂಬುದು ಅರಿವಾಯಿತು.ಈ ದೇಹದಿಂದ ಪ್ರಜ್ಞೆ ಹೋಗುವಾಗ ಮತ್ತು ಬರುವಾಗ ಪೂರ್ಣ ಕತ್ತಲಲ್ಲಿ ಸಾಗಿದ್ದರೂ ಬರಿ ಕಣ್ಣಿಗೆ ಕಾಣದ ಪ್ರಕಾಶಮಾನವಾದ ಬೆಳಕಿನಲ್ಲಿ ಸಂಚರಿಸಿದ್ದೆ! ನನಗೆ ಕನಸುಗಳು ಸಾಕಷ್ಟು ಬಿದ್ದಿವೆ. ಆದರೆ ನನ್ನ ಮನಸ್ಸು ೫೦-೬೦ ಕಿ.ಮೀ. ದೂರದಷ್ಟಿದ್ದ ಬೆಟ್ಟದ ಸಮೀಪದವರೆಗೆ ದೇಹದೊಂದಿಗೆ ಪಯಣಿಸಿದಂತಹ ಅನುಭವ ಪಡೆದಿದ್ದು, ಅದೂ ಪೂರ್ಣ ಪ್ರಜ್ಞೆಯಲ್ಲಿ ಎಂದಿಗೂ ಮರೆಯಲಾಗದು. ದೇಹಪ್ರಜ್ಞೆ ಕ್ಷೀಣಿಸಿದ ಕ್ಷಣ ಅನುಭವಿಸಿದ ಆಂತರಿಕ ಪ್ರಕಾಶ, ನಾದ, ಪರಿಮಳ, ಇವು ಮನಸ್ಸಿನ ಅತೀತ ಆಯಾಮಗಳ ಬಗ್ಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.ಇದಾದ ನಂತರ ತಾಯಿ ತಂದೆ ಇರುವವರೆಗೂ ನಾನಾಗಿಯೇ ನನ್ನ ಮರಣವನ್ನೆಂದೂ ಬಯಸಬಾರದೆಂಬ ಮನಸ್ಸು ಬೆಳೆದಿದೆ. ಅಷ್ಟೇ ಅಲ್ಲ ಯಾರ ಮರಣವನ್ನೂ ಬಯಸಬಾರದು. ತದ್ವಿರುದ್ದ ಗುಣದವರೊಂದಿಗೆ ಜೊತೆಯಲ್ಲೇ ವಾಸಿಸಬೇಕಾದಾಗಲೂ ಯಾರನ್ನೂ ದ್ವೇಷಿಸದೆ ನನ್ನ ಕರ್ತವ್ಯಗಳನ್ನು ಯಾವ ಕಾರಣಕ್ಕೂ ಕೈಬಿಡದೆ ಖುಷಿಯಿಂದ ಮಾಡುತ್ತಿರಬೇಕೆಂಬ ನಿಲುವು ತಾಳಿದೆ.. ಅದಾಗಿ ಮೇಡಂ ಧ್ಯಾನ ಯೋಗ ಸಾಧನೆ ಮೂಲಕ ಮಹರ್ಷಿ ಪ್ರಭಾಕರ್ ಗುರೂಜಿ, ಆಚಾರ್ಯ ಆದಿನಾಥ್, ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್ ಯೋಗ ಸಾಧಕರ ಮಾರ್ಗದರ್ಶನದಲ್ಲಿ ಮನಸ್ಸಿನ ಸ್ಕೈರ್ಯ ಮತ್ತು ಆತ್ಮಶಾಂತಿ ಕಂಡ ಅನುಭವಗಳು ಈ ಕೃತಿಯ ಆತ್ಮವಾಗಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.
“ವಿದಾಯ” ಕವಿತಾ ಶ್ರೀನಿವಾಸ್ ನಾಯಕ್
ವಿಶೇಷಲೇಖನ ಕವಿತಾ ಶ್ರೀನಿವಾಸ್ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರುನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.ಏಕೆ ಈ ವಿದಾಯ ಅನಿವಾರ್ಯ?ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.
“ವಿದಾಯ” ಕವಿತಾ ಶ್ರೀನಿವಾಸ್ ನಾಯಕ್ Read Post »
ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು”
ಕಾವ್ಯ ಸಂಗಾತಿ ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸುಕೊಚ್ಚಿ ಹರಿದು ಹೋದ ಹಾಸುಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!! ಕನಸು ನನಸಾಗುವ ಕನವರಿಕೆಕಳೆದು ಹೋದವೆಷ್ಟೋ ಮನದ ಅರಿಕೆಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!! ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂಅದೆಂದೊ ಕಾಲ ಗರ್ಭದಿ ಅವಿತವುಮರೆಯಾದವೆಂದು ವಿಷಾದದಿ ಕುಳಿತಿರೆ..!!೩!! ಅದು ಎಲ್ಲಿಯೋ ಎನಿತೋ ಹೊಳೆದಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದಥಳುಕು..ಕರೇಯುತಿರೆ ಅಕ್ಕರದಿ….!!೪!! ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆತರುತ್ತೀವಿ ಸಕಾರತೆ ಋಣ ಹೊತ್ತುಹರಡಿವೆ ಉಡಿ ತುಂಬ ನುಡಿ ಮುತ್ತು!!೫!! ಎದೆ ತುಂಬಿ ಬಂದ ನುಡಿ ಬೆಳಕು,ಪ್ರಕಾಶಮಾನ ಹೊಂಬೆಳಕಿನ ತುಳುಕುನುಡಿ ಅಮ್ಮನ ಶಬ್ದಗಳ ಚಳಕು…!!೬!! ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನಗಂಟಿನ ನಂಟು ನೋಡಿ ನಿಬ್ಬೆರಗಾಗಿಹರುಷದಿ ಮತ್ತೆ ನಲಿದಾಡುತ!!೭!! ಕಂಡ ಕಿರು ಗನಸು ಹೆಮ್ಮರವಾಗಿಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!! ಪಡೆದ ಸನ್ಮಾನದ ಸುಮ್ಮಾನವಾಗಲು.. ಸವಿತಾ ದೇಶಮುಖ
ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” Read Post »
ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”
ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »









