ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” ನಿತ್ಯ ನಿರಂತರ ಕಾಯಕಯೋಗಿ ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕಚಲ್ಲುತಾ ಮೆಲ್ಲನೆ ಮೆಘಗಳಮಧ್ಯ ನುಸುಳುತಾ ಬರುತಿಹಏಳಿರಯ್ಯ ಎನ್ನ ಬಾಂಧವರೆ ಬರಿಬೆಳಕಲ್ಲವಿದು ಸತ್ಯದರ್ಶನಲೋಕಬೆಳಗುವ ನಿತ್ಯನಿಯಾಮಕಜಗದಕರೆಗೆ ಸದ್ದಿಲ್ಲದ ಬರುವವನಿತ್ಯನಿರಂತರ ಕಾಯಕಯೋಗಿಸಮಯದ ಪರಿಪಾಲಕ ಪರಂಜ್ಯೊತಿ… ಬೆಳಕಬೆಳಗಿಗೆ ಜಗವೇತೂಗುವದುಏರುಪೇರಿಲ್ಲದ ರಾಯಭಾರಿ ತೇಜಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವಕ್ಷಣ ಕ್ಷಣ ಅನುಕ್ಷಣ ಆದರನೀಯ ಚರಾಚರ ಜೀವರಾಶೀಗಳ ಜೀವದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆತರುಲತೆಗಳ ಹಸಿರ ಸಿಂಚನಭೂಮಾತೆಯ ಮಡಿಲತುಂಬುವ ಚೇತನ… ನಿಸ್ವಾರ್ಥ ಸೇವೆಯ ನಿತ್ಯನೂತನೀತಸ್ವಾರ್ಥಿ ಮನುಜ ಕಲಿಯಬೇಕಿದೆತಮಸೋಮಾ ಜ್ಯೊತಿರ್ಮಯ…ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….ಸತ್ಯವೇ ದೇವರು ಸತ್ಯವೇ ಬೆಳಕುಹೇ! ಮನುಜಾ ಬೆಳಕ ದಾರಿಯಲಿನಡೆ,ಬೆಳಕಿನಲಿ ಬೆರೆತು ಬೆಳಕಾಗು…. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” Read Post »

ಕಾವ್ಯಯಾನ

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನಂಜಿನ ಉಸಿರು” ಕಣ್ಣು ಬಿಟ್ಟ ಕ್ಷಣಗಳೆಲ್ಲಾಮಂಜಿನ ಹನಿಗಳೆಂದುಕೊಂಡಿದ್ದೆ;ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ.. *** ಅಸಮಾನೆತೆಯ ನೆತ್ತರುಕುಡಿದ ನೆಲ ಕುದಿಯುತ್ತಿದೆ;ತೂಗುವ ತೊಟ್ಟಿಲು ಮಸಣವಾಗುತ್ತಿದೆ. *** ವೈಷಮ್ಯ ಚಿಗುರೊಡೆದುನೆಲ ಕೆಂಪಾಗಿದೆಈಗ ನಂಜೇರಿ ಕಪ್ಪಾಯಿತು *** ನಮ್ಮೊಳಗೆ ಧರ್ಮದ ಅಮಲು ಏರಿದೆಅಸಮಾನತೆಯ ಕಸದಿಂದಒಡಲು ತುಕ್ಕು ಹಿಡಿದಿದೆ *** ನಯವಂಚಕರ ದುನಿಯಾಬದುಕ ಪಾತ್ರೆಯಲ್ಲಿಜಗದ ಐಕ್ಯತೆ ತಳ ಹತ್ತಿದೆ. *** ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;ಇನ್ನೂ, ಜಾತಿ ಜಾತಿಯದೋಂಬಿ ನಡೆಯದೇ ಇರುತ್ತದೆಯೇ *** ಬಿದ್ದ ಬೀಜವೂಮೊಳಕೆಯೊಡೆಯಲುನೆಲ ಉರಿವ ಕೆಂಡವಾಗಿದೆ *** ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ ನಾಮದೇವ ಕಾಗದಗಾರ Recipients

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು” Read Post »

ಕಾವ್ಯಯಾನ

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ”

ಕಾವ್ಯ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್‌ “ಬರಹದ ಗುಂಗಿನಲ್ಲಿ” ​ಬರಹದ ಗುಂಗಿನಲ್ಲಿ…​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತುಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತುಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತುದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ” Read Post »

ಕಾವ್ಯಯಾನ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ”

ಕಾವ್ಯ ಸಂಗಾತಿ ದಾನಮ್ಮ ಝಳಕಿ “ಕನಸಿನ ಅರಮನೆ” ರಾತ್ರಿಯ ಮೌನದ ಮಡಿಲಿನಲ್ಲಿಒಂದು ಕನಸು ಕಣ್ಣು ತೆರೆದಿತು,ಬಡ ಹೃದಯದ ಚಿಕ್ಕ ಗುಡಿಸಲಲ್ಲಿಅರಮನೆಯೊಂದು ಅರಳಿತು. ಕಲ್ಪನೆಯ ಕಲ್ಲು ಕಲ್ಲಿನಿಂದಕಟ್ಟಿದ ಮನದ ಮಂದಿರವು,ಆಶೆಗಳ ಹೊನ್ನಿನ ಕಿಟಕಿಯಿಂದಬೆಳಗಿತು ಬದುಕಿನ ಅಂತರವು. ಕಣ್ಣೀರ ಹನಿಯ ನೀರಿನಿಂದಲೇಬೇರು ಬಿಟ್ಟಿತು ಬಯಕೆಯ ಗಿಡ,ನೋವಿನ ಬೆಂಕಿ ದಾಟಿಬಂದಾಗಹೂವಾಯಿತು ಬದುಕಿನ ಹಾದಿ ಬಿಡ. ಬೆವರ ಹನಿಗಳ ಮುತ್ತುಗಳಿಂದಗೋಡೆಯ ಮೇಲೆ ಚಿತ್ರ ಬರೆದೆ,ಸಹನೆಯ ದೀಪ ಹಚ್ಚಿಕೊಂಡುಸಾವಿರ ಕತ್ತಲ ದಾರಿ ನಡೆದೆ. ಬಿರುಗಾಳಿಗಳು ಬಂದಾಗಲೂಮನದ ಬಾಗಿಲು ಮುಚ್ಚಲಿಲ್ಲ,ಸೋಲಿನ ನೆರಳು ಸುತ್ತಿದಾಗನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ. ಅರಮನೆ ಎಂದರೆ ಚಿನ್ನವಲ್ಲ,ಅದು ಮನದ ಮಹತ್ವದ ಗೃಹ,ಪ್ರೀತಿಯೇ ಅದರ ಸಿಂಹಾಸನ,ಮನುಜತ್ವವೇ ಅದರ ಸುಗಂಧ ಸುಭ್ರ. ಕನಸು ಎಂದರೆ ಕೇವಲ ನಿದ್ರೆ ಅಲ್ಲ,ಕನಸು ಎಂದರೆ ಜೀವದ ಜ್ಯೋತಿ,ಬಿದ್ದರೂ ಮತ್ತೆ ಎದ್ದು ನಿಲ್ಲುವಧೈರ್ಯದ ಅಮರ ಪ್ರೀತಿ. ಇಂದು ನಿಂತಿದೆ ಆ ಅರಮನೆಕಾಲದ ಮುಂದೆ ಗರ್ವವಾಗಿ,ನಿನ್ನೆ ಕಣ್ಣೀರಲಿ ತೇಲಿದ ಮನಸುಇಂದು ನಗುತ್ತಿದೆ ಹೂವಾಗಿ. ಜೀವನವೆಂಬ ವಿಶಾಲ ಭುವಿಯಲ್ಲಿಕನಸೇ ಮಾನವನ ರೆಕ್ಕೆ,ಕನಸಿನ ಅರಮನೆ ಕಟ್ಟಿದವನಿಗೆಆಕಾಶವೂ ಚಿಕ್ಕದಾದ ತೆಕ್ಕೆ. ಡಾ ದಾನಮ್ಮ ಝಳಕಿ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ” Read Post »

ಕಾವ್ಯಯಾನ

ಗೊರೂರು ಅನಂತ ರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತ ರಾಜು ಹನಿಗವನಗಳು ಗೊತ್ತೇ..? ಮಡದಿಯ ಹೆಸರಿನ ಮುಂದೆಗಂಡನ ಹೆಸರು ಏಕಿರುತ್ತದೆಯೋಚಿಸಿ ತುಸು ಹೊತ್ತುಮುಂದೆ ಮುಂದೆ ನಡೆಯುತ್ತಾನಲ್ಲಲಗೇಜ್ ಹೊತ್ತು ಗೊತ್ತಿಲ್ಲ.. ವರಾನ್ವೇಷಣೆಯಲ್ಲಿ ಜೋಡಿ ಚಪ್ಪಲಿ ಸವೆಸಿದ ಅಪ್ಪನಿಗೆತನ್ನ ಮಗಳ ಹಿಂದೆ ಹುಡುಗರುಹನ್ನೆರೆಡು ಚಪ್ಪಲಿ ಸವೆಸಿದ್ದುಗೊತ್ತಿಲ್ಲ.. ಗೊತ್ತೇ..? ದುರಂತ ಕಥೆ ಕಾದಂಬರಿಬರೆದು ಪ್ರಸಿದ್ಧನಾದಕತೆಗಾರನಿಗೆ ಸ್ಫೂರ್ತಿಅವನ ಹೆಂಡತಿ ಎಂಬುದುಗೊತ್ತೇ..? ಗೊತ್ತಿಲ್ಲ.. ಹುಡುಗರು ಚುಡಾಯಿಸ್ತಾರೆ ಅಂತಬಿಡ್ತಾರಾ ಹುಡುಗಿಯರುಧರಿಸೋದು ಮಿಡಿಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..! ಗೊರೂರು ಅನಂತರಾಜು 

ಗೊರೂರು ಅನಂತ ರಾಜು ಅವರ ಹನಿಗವನಗಳು Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

ಇತರೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ

ಸೌಹಾರ್ದ ಸಂಗಾತಿ ಜಯಲಕ್ಷ್ಮಿ ಕೆ “ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”   “ಲೋಕದ ಕಾಳಜಿ ಮಾಡುತ್ತೀನಂತಿ.. ನಿಂಗ್ಯಾರು ಬ್ಯಾಡಂದೋರು ಮಾಡಪ್ಪ ಚಿಂತಿ .. ಆನೆ ಅಂಬಾರಿ ಏರಬೇಕಂತಿ.. ಮಣ್ಣಲ್ಲಿ ಇಳಿಯುದ ತಣ್ಣಗ ಮರತಿ…”   ಖ್ಯಾತ ಗಾಯಕ  ಲುಂಗಿ ರಾಕ್ ಸ್ಟಾರ್ ರಘು ದೀಕ್ಷಿತ್ ರವರ ಕಂಠಸಿರಿಯಿಂದ ಮೂಡಿಬಂದು ಜನಮನ ಗೆದ್ದ ಈ ತತ್ವ ಪದದ ರಚನೆಕಾರರ ಊರೇ ಶಿಶುವಿನಹಾಳ. “ಕನ್ನಡದ ಕಬೀರ” ಎಂದೇ ಖ್ಯಾತರಾದ ಸಂತ ಶಿಶುನಾಳ ಶರೀಫರ ಸನ್ನಿಧಿ ಇರುವುದು  ಹಾವೇರಿ ಜಿಲ್ಲೆಯ ಶಿಗ್ಗಾಂವಾ ತಾಲೂಕಿನ ಶಿಶುವಿನಹಾಳದಲ್ಲಿ. ಹಿಂದೂ ಮುಸ್ಲಿಂ ಭಾವೈಕ್ಯದ ಹರಿಕಾರರಾದ ಶರೀಫರ ನಾಡಿನಲ್ಲಿ ಒಂದೇ ಮಂದಿರದಲ್ಲಿ ಎರಡು ಧರ್ಮಿಯರು   ನಡೆಸುವ ಪೂಜಾ ಕೈಂಕರ್ಯ  ನೋಡುವುದೇ ಚೆನ್ನ! ಗುರು ಗೋವಿಂದ ಭಟ್ಟರ ಮೂರ್ತಿ ಒಂದೆಡೆ.. ಶಿಶುನಾಳ ಶರೀಫರ ಮೂರ್ತಿ ಇನ್ನೊಂದೆಡೆ.  ಈ ಎರಡು ಮೂರ್ತಿಗಳ ನಡುವೆ ಶ್ವೇತ ಶಿಲೆಯಲ್ಲಿ ಕೆತ್ತಿದ    ಆಶೀರ್ವಾದ ನೀಡುವ ಭಂಗಿಯಲ್ಲಿ  ನಿಂತ ನಂದಿ, ಶಿವಲಿಂಗ. ಒಂದೆಡೆ ಹಣ್ಣು ಕಾಯಿ ಸೇವೆ, ಇನ್ನೊಂದೆಡೆ ಸಕ್ಕರೆ ಪ್ರಸಾದ ವಿತರಣೆ! ಹಿಂದೂ ಮುಸ್ಲಿಂ ಭಾವೈಕ್ಯತೆಯ ಜೊತೆ ಜೊತೆಗೆ ಗುರು ಶಿಷ್ಯ ಸಂಬಂಧದ ಪಾವಿತ್ರ್ಯತೆಯನ್ನು ಸಾರುವ  ಅಪೂರ್ವ ಚಿತ್ರಣ ! ಎಂಥವರೂ ಭಾವಪರವಶರಾಗಬೇಕು  ಹುಲಗೂರ  ಶರೀಫರ ಈ ಸನ್ನಿಧಿಯಲ್ಲಿ. ವಿಜ್ಞಾನ ತಂತ್ರಜ್ಞಾನದಲ್ಲಿ ಪಳಗಿ  ಆಧುನಿಕತೆಯ ತುತ್ತ ತುದಿಯನ್ನು ತಲುಪಿದ್ದೇವೆ ಎನ್ನುವ ಭ್ರಮೆಯಲ್ಲಿರುವ, ಜಾತಿ ಮತ ಪಂಥಗಳು ಎಂಬ ತ್ರಿಶಂಕುವಿನಿಂದ ಹೊರಬರಲಾಗದ ಸಂಕುಚಿತ ಮನೋಭಾವದವರು ಈ ದಿವ್ಯ ಕ್ಷೇತ್ರಕ್ಕೆ ಹೋಗಲೇಬೇಕು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು, ಅಲ್ಲಿನ ಜನರು  ಹೊಂದಿಕೊಂಡು ಬಾಳುವ  ಪರಿಯನ್ನು ಕಣ್ತುಂಬಿಕೊಳ್ಳಲೇಬೇಕು.  ಐದರಿಂದ ಆರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ಊರದು.  “ದೇಹವೇ ಮಸೀದಿ,ದೇಹವೇ ದೇಗುಲ ” ಎಂದು ಸಾರಿದ, ಸಾರಿದಂತೆಯೇ ಬದುಕಿ ಬಾಳಿದ  ಸಂತ ಶರೀಫರ ನೆಲದಲ್ಲಿ ನಿಂತರೆ ಸಾಕು, ಕೋಮು ಸೌಹಾರ್ದತೆ ಸಾರುವ ಅವರ ತತ್ವಪದಗಳು, ಮಾನವ ಧರ್ಮ ಸಾರುವ  ಅವರ ಪದಗಳ  ಸಾರಗಳು, ಸ್ಮೃತಿ  ಪಟಲದಲ್ಲಿ ಹಾಗೇ ತೇಲಿ ಬರುತ್ತವೆ. ಲೌಕಿಕ ದೃಶ್ಯಗಳ ಮೂಲಕ  ಪಾರಮಾರ್ಥಿಕ ಸತ್ಯಗಳನ್ನು ಸರಳ ಸುಂದರ ಆಡು ಭಾಷೆಯಲ್ಲಿ  ನಿರೂಪಿಸಿರುವ  ಶರೀಫರು  ಮೊದಲ ಸೂಫಿ ಕವಿ. ಆಕರ್ಷಕ ತತ್ವಪದಗಳ ಮೂಲಕ ಜನಮಾನಸದಲ್ಲಿ ಉಳಿದ ಸಿದ್ಧಪುರುಷ ಶರೀಫ  ಇಸ್ಲಾಂ ಧರ್ಮದಲ್ಲಿ ಹುಟ್ಟಿ, ಹಿಂದೂ ಗುರುವನ್ನು ಪಡೆದು ಜಾತಿ ಮತಗಳ ಎಲ್ಲೆ ಮೀರಿ ಬೆಳೆದು ನಿಂತವರು. ” ಕೆಲಸವಿಲ್ಲದೆ ಅಲೆಯುವ ತಿರುಕ ” ಎಂದ ಹಿಂದೂ ಧರ್ಮೀಯರ ಮಾತಿಗಾಗಲಿ, ” ಕಾಫಿರ್ ” ಎಂದ ಮುಸಲ್ಮಾನರ ತೆಗಳಿಕೆಗಾಗಲಿ ಸಂತ ಶರೀಫರ ಮನ ವಿಚಲಿತಗೊಳ್ಳಲಿಲ್ಲ. ಏಕ ತಂತಿಯ ತಂಬೂರಿ ಹಿಡಿದು ತನ್ನ ತತ್ವಗಳನ್ನು ಪದಗಳ ಮೂಲಕ ಬೀದಿಬೀದಿಯಲ್ಲಿ ಸಾರಿದರು. ಯಾವ ಖಲೀಫನಿಂದಲೂ ನಿರ್ಮಿಸಲು ಸಾಧ್ಯವಾಗದ ಮತೀಯ ಸಾಮರಸ್ಯದ ದೇಗುಲದ ನಿರ್ಮಾಣಕ್ಕೆ ಕಾರಣಕರ್ತರಾದರು. ಗೂಢಾರ್ಥದಲ್ಲಿ, ರೂಪಕಗಳನ್ನು ಬಳಸಿ ಇವರು ರಚಿಸಿರುವಂತಹ  ಕೋಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗಿ, ಬಿದ್ದಿಯಬ್ಬೇ ಮುದುಕಿ , ಹಾವು ತುಳಿದೇನೇ ಮಾನಿನಿ, ಇತ್ಯಾದಿ ತತ್ವಪದಗಳು ಕನ್ನಡಿಗರ ನಾಲಿಗೆಯಲ್ಲಿ ಸದಾ ಹರಿದಾಡುವ ನೀತಿ ಸಂಹಿತೆಗಳೇ ಸರಿ.      ಸಮಯ ಸಂದರ್ಭಗಳಿಗೆ ಅನುಗುಣವಾಗಿ ಉಪಮೆಗಳನ್ನು ಬಳಸುತ್ತಾ ಪದ ರಚಿಸಿ ಹಾಡುತ್ತಿದ್ದ ಈ ಸಂತ  ಮತೀಯ ಸಾಮರಸ್ಯದ ಹರಿಕಾರನಾಗಿ ನಮ್ಮೆಲ್ಲರ ಮನದಲ್ಲಿ ನೆಲೆ ನಿಂತ ಧೀಮಂತ. ಶಿಶುನಾಳ ಶರೀಫರು ಮತ್ತು ಅವರ ಗುರು ಗೋವಿಂದ ಭಟ್ಟರ ಸಮಾಧಿಗೆ ಜಾತಿ ಮತಗಳ ಹಂಗಿಲ್ಲದೆ ಪ್ರತಿದಿನ ಪೂಜೆ ನಡೆಯುತ್ತಿದ್ದು ಅದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ.  ಶಿಶುನಾಳ ಶರೀಫರ ದೇಗುಲಕ್ಕೆ ಹೋಗುವವರು  ಅಲ್ಲಿಂದ ಸುಮಾರು 20 -30 ಕಿಲೋ ಮೀಟರ್ ಅಂತರದಲ್ಲಿರುವ 11 ನೇ ಶತಮಾನದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಿದ್ಧೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯಗಳನ್ನು ನೋಡಬಹುದು. ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ತಾರಕೇಶ್ವರ ದೇಗುಲ,  ಹುಕ್ಕೇರಿ ಮಠ,  ಬಂಕಾಪುರದ ನಗರೇಶ್ವರ   ದೇಗುಲ ಬಂಕಾಪುರದ ಕೋಟೆ ಇತ್ಯಾದಿ ಪ್ರೇಕ್ಷಣೀಯ  ಸ್ಥಳಗಳಿವೆ. ಸಂತ ಕನಕದಾಸರ ಹುಟ್ಟೂರಾದ ಕಾಗಿನೆಲೆ ಇರುವುದೂ ಇಲ್ಲಿಯೇ.   ‘ ಏಲಕ್ಕಿ ಕಂಪಿನ ನಾಡು ‘ ಎಂದೇ ಹೆಸರಾದ ಈ ನಾಡಿನಲ್ಲಿ ಎತ್ತ ಸಂಚರಿಸಿದರೂ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳಲ್ಲಿನ ಬ್ಯಾಡಗಿ ಕೆಂಪು ಮೆಣಸಿನಕಾಯಿ  ಮತ್ತು ಕುಸಬಿ  ಎಣ್ಣೆ ಬೀಜದ ಹೊಲಗಳು ಕಣ್ಮನ ಸೆಳೆಯುವ ಆಕರ್ಷಣೆಗಳೇ ಸರಿ . ಆಧ್ಯಾತ್ಮಿಕ ಐತಿಹಾಸಿಕ ಮಹತ್ವದಿಂದ ಕೂಡಿರುವ  ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಿದು. ಜಯಲಕ್ಷ್ಮಿ ಕೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” ಆ ದಿನಗಳ ಸುತ್ತಓಡಾಡಿ ಕಳೆದುಹೋದ ಹಗಲಿಂದುಮುಕ್ತಾಯದ ಸಂಜೆಗೆಬಂದು ನಿಂತಂತಿದೆಬೆಳಕಿನ ಅರಿವಿಗೆಬಿಸಿಲಿನ ಕಿರಣಹರಡಿ ನಿಂತರವಿಗೊಂದು ಸತ್ಯಗೊತ್ತಿರುವಂತಿದೆಮೇಲಿಂದ ಕಾಣುವಸತ್ಯದ ನೆರಿಗೆಯಲ್ಲಿಕಾಣದ ನೋಟಗಳಸುಳ್ಳುಗಳು ಅಡಗಿದಂತಿದೆಹೊಸ ಹಾವ ಭಾವಮುಕ್ತಾಯದ ಸಂಜೆಗೆಇಂದು ಕಳೆಯಿತು ಹೀಗೆಉಳಿಯಬೇಕುನಾಳೆಯೆಂಬ ದುಂದುಭಿಸಂಜೆಗೆ ಬರುವಕನಸುಗಳಲ್ಲಿಭಾವ ಭವಿತದಚಿತ್ರ ಭಿತ್ತಿಯಲ್ಲಿಸುಪ್ತವಾದರೂ.  ನಾಗರಾಜ ಬಿ. ನಾಯ್ಕ 

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-118 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಮಗಳ ನೋವು ಅರ್ಥಮಾಡಿಕೊಂಡ ತಾಯಿ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? …. ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು. ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು. ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.

Read Post »

You cannot copy content of this page

Scroll to Top