ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್

ವ್ಯಕ್ತಿ ಸಂಗಾತಿ ಗೊರೂರು ಶಿವೇಶ್ “ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ನನ್ನ ಕಾಲಘಟ್ಟದ ಯಾರೇ ನಮ್ಮೂರಿನ ರಸಿಕರನ್ನು ಚಿತ್ರಿಸಲು ಹೊರಟರೆ, ಅದರಲ್ಲಿ ಮರೆಯದೆ ದಾಖಲು ಮಾಡಬೇಕಾದ ಪಾತ್ರ ಯಾಕೂಬ್ ನದು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ರು ತಮ್ಮ ನಮ್ಮೂರಿನ ರಸಿಕರು ಕೃತಿಯಲ್ಲಿ ಚಿತ್ರಿಸಿದ ಶಾಲು ಸಾಬಿ ಪಾತ್ರವು ತನ್ನ ಮುತ್ತಜ್ಜನೆಂದು ಹೇಳಿಕೊಳ್ಳುವ ಯಾಕೂಬ್ ಗುಣದಲ್ಲೂ ಅವರನೇ ನೆನಪಿಸುತ್ತಾನೆ . ಈಗ ಹಾಸನದಲ್ಲಿ ನೆಲೆಸಿರುವ ಆತ ನಮ್ಮೂರಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಜೊತೆಗೆ ಊರಿನ ರಥೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಹಾಸನದಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮ ನಾಟಕಗಳಲ್ಲಿ ಕಾಣಸಿಗುತ್ತಾನೆ ಕಳೆದ 50 ವರ್ಷಗಳ ಇಡೀ ಗೊರೂರಿನ ಇತಿಹಾಸವನ್ನು ದಾಖಲು ಮಾಡುವ ಸಾಮರ್ಥ್ಯ ಇರುವ ಆತನಿಗೆ ನಮ್ಮೂರಿನ ಮನೆಮನೆ ಕಥೆಗಳು ಗೊತ್ತು. ಅಷ್ಟೇ ಏಕೆ ಹಾಸನದ ಪ್ರಮುಖ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಆತ ಹೇಳಬಲ್ಲ. ಯಾಕೂಬ್ ಗೂ ನನ್ನ ತಂದೆಗೂ ಒಂದು ರೀತಿಯ  ಪ್ರೇಮ ಕೋಪದ ಅನನ್ಯ ಸಂಬಂಧ. 1990ರ ಸುಮಾರಿಗೆ ಆರಂಭವಾದ ಸಾಕ್ಷರತಾ  ಆಂದೋಲನದಲ್ಲಿ ನನ್ನಣ್ಣನು ಹಾಗೂ ಯಾಕೂಬ್ ಇಬ್ಬರೂ ಧುಮುಕಿದ  ಸಂದರ್ಭ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಪದೇಪದೇ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಬಸ್ಸಿನಲ್ಲಿ ಮಧ್ಯರಾತ್ರಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ಕಾರಣಕ್ಕೆ ತಂದೆ ಅವರಿಗೆ  ನನ್ನ ಅಣ್ಣನ ಮೇಲೆ ಕೋಪ. ಈ ಕೋಪವನ್ನು   ಜೊತೆಗಿರುತ್ತಿದ್ದ   ಯಾಕುಬ್ ಮೇಲೆ    ಆಗಾಗ್ಗೇ ತೀರಿಸಿಕೊಳ್ಳುತ್ತಿದ್ದರು. ಅವರು ಬೈದ ಬೈಗಳನೆಲ್ಲ  ನಾನು ಸಿಕ್ಕಾಗ ನನಗೆ  ನಿಮ್ಮ ತಂದೆ ಹೀಗೆಲ್ಲಾ ಬೈದ್ರು ಅಣ್ಣ ಎಂದು ಒಪ್ಪಿಸುತ್ತಿದ್ದ. ಆದರೆ   ಮಾರನೇ ದಿನವೇ ನನ್ನ ತಂದೆ  ಯಾಕೂಬ್ ಬಣ್ಣ ತರಲು ಹಾಸನಕ್ಕೆ ಹೋಗಲು ನಮ್ಮೂರಿನ ಬಸ್ ಸ್ಟ್ಯಾಂಡ್ ನ ಬಳಿ ಕಾಣಿಸುತ್ತಿದ್ದರು.  ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಮಣ್ಣಿನ ಗೋಡೆ ಆದ್ದರಿಂದ ನೀರು ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಣ್ಣ ಬಣ್ಣ ಮೊದಲಿಗೆ ಬೇಡ ಬೇಡ ಎಂದುಕೊಂಡರೂ ಜಾತ್ರೆ ಹತ್ತಿರ ಬಂದಂತೆ  ಸುಣ್ಣ ಬಣ್ಣ ಆಗಲೇಬೇಕೆಂದು ಬೇಕೆಂದು ನಿರ್ಧರಿಸಿದ ನಮ್ಮ ತಂದೆ ಅದಕ್ಕಾಗಿ ಯಾಕೋಬನನ್ನು ನಿಯೋಜಿಸಿದ ನಂತರ 3- 4 ದಿನ ಮನೆಯಲ್ಲಿ ಬಣ್ಣ ದೇ ಸಡಗರ. ಪಾತ್ರೆಗಳನ್ನೆಲ್ಲ ಹಿತ್ತಲಿಗೆ ಸಾಮಾನುಗಳನ್ನೆಲ್ಲ  ರೂಮ್ ನ ಮಧ್ಯಕ್ಕೆ ಜೋಡಿಸಿ ಅದರ ಮೇಲೆ ಚಾಪೆ ಮುಚ್ಚಿ ಬಣ್ಣ ಹೊಡೆಯುವ ಪ್ರಕ್ರಿಯೆ ಆರಂಭವಾಗುತ್ತಿತ್ತು .ಬಣ್ಣ ನೆಲದ ಮೇಲೆ ಬಿದ್ದಾಗಲಿಲ್ಲ ತಾಯಿ  ಗೊಣಗಲು ಒಮ್ಮೊಮ್ಮೆ ಕೂಗಾಡಲು ಆರಂಭಿಸಿದೊಡನೆ ತಟ್ಟನೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಕೆಳಗೆ  ಹಾರಿ ಟರ್ಪೆಂಟೇನನ್ನು ಹಾಕಿ ನೆಲ ಉಜ್ಜಿ ಸರಿ ಆಯ್ತಾ ಅಕ್ಕ ಎಂದು ಸಮಾಧಾನಿಸುತ್ತಿದ್ದ . ನನಗೆ ಅವನ ಕುರಿತು ಗಮನ ಸೆಳೆಯುತ್ತಿದ್ದದ್ದು ಸದಾ  ಆತನ ಕೈಯಲ್ಲಿರುತ್ತಿದ್ದ ಒಂದಿಲ್ಲೊಂದು ಪತ್ರಿಕೆಗಳು. ಅದರಲ್ಲೂ  ಆ ವಾರದ ಲಂಕೇಶ್ ಪತ್ರಿಕೆ ಮತ್ತು  ಹಾಯ್ ಬೆಂಗಳೂರು ಕೈಯಲ್ಲಿ ಹಿಡಿದು ಮನೆಗೆ ಬಂದು ಮಂಚದ ಮೇಲೆ ಇರಿಸಿ ತನ್ನ ಕಾರ್ಯ ಆರಂಭಿಸುತ್ತಿದ್ದ .ಅವನು ತನ್ನ ಕೆಲಸ ಮುಗಿಸುವುದರೊಳಗೆ ನಾನು ಆ ಪತ್ರಿಕೆಗಳನ್ನು ಓದಿ ಮುಗಿಸುತ್ತಿದ್ದೇ. ಈ ರೀತಿಯ ಓದಿನ ಹವ್ಯಾಸ ಹೊಂದಿದ ಯಾಕೂಬನಿಗೆ ಬಹುತೇಕ ಪ್ರಮುಖ ಲೇಖಕರು ಅವರ ಕೃತಿಗಳು ಅವರ ಕೃತಿಗಳ ಸಿನಿಮಾಗಳು ಗೊತ್ತಿತ್ತು .ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಮಾಹಿತಿಗಳನ್ನು ಆತ ಹಂಚಿಕೊಳ್ಳುವುದರ ಜೊತೆಗೆ ಊರಿನ ಹಲವಾರು ರಸವತ್ತಾದ ಪ್ರಸಂಗಗಳನ್ನು  ಅವನದೇ ಹಾಸ್ಯಮಯ ದಾಟಿಯಲ್ಲಿ ಹೇಳುತ್ತಿದ್ದ. ಆತ ಹೇಳುತ್ತಿದ್ದ ಅನೇಕ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಸ್ತುವಾಗಬಲ್ಲದು.  ಬೇಸಿಗೆ ರಜೆ ಸಮಯಕ್ಕೆ ನಮ್ಮೂರಿನಲ್ಲಿ  ಸಮಯ ಕಳೆಯಲು  ಹೊಸದಾಗಿ ಆರಂಭವಾದ ಗ್ರಂಥಾಲಯಕ್ಕೆ ಹೋಗುತ್ತಿದ್ದೆ..ಆದರೆ ಅಲ್ಲಿನ ಗ್ರಂಥಪಾಲಕರು ಅದೇ ಸಮಯಕ್ಕೆ ಅರ್ಜೆ ಹಾಕಿ ತಮ್ಮ ಊರಿಗೆ ತೆರಳಿರುತ್ತಿದ್ದರು ಒಮ್ಮೆ ಈ ರೀತಿ ಗ್ರಂಥಾಲಯದ  ಹೋಗುತ್ತಿದ್ದಾಗ ಯಾಕೂಬ್ ಎದುರಾದ.  ನನ್ನನ್ನು ನೋಡಿ” ಅಣ್ಣ  ಆಶ್ ಮಟಾಶ್ ಇಲ್ಲ” ಎಂದ. ನನಗೆ ತಕ್ಷಣ ಗೊತ್ತಾಗಲಿಲ್ಲ. ನಂತರ ಅದರ ಅನುವಾದ  ಅವನೇ ಮಾಡಿದ.  ” ಆ್ಯಷ್ ಎಂದರೆ ಬೂದಿ ಮಟ್ಯಾಷ್ ಎಂದರೆ ಹಾಳು” ಗ್ರಂಥಪಾಲಕರ ಹೆಸರು ಬೂದಿಹಾಳು ಎಂದಿದ್ದು, ಅದನ್ನು ಆ ರೀತಿ ಪ್ರಯೋಗಿಸುತ್ತಿದ್ದ. ಹಂಸಲೇಖರ ಹಾಸನಕ್ಕೆ ಬಂದ ಸಂದರ್ಭದಲ್ಲಿ ಇವನನ್ನು ಯಾಕುಬ್ ಎಂದು  ಪರಿಚಯಿಸಿದಾಗ ಕ್ಯಾ ಕೂಬ್  ಲಗತಿ ಹೋ ಹಾಡನ್ನು ಬದಲಿಸಿ ಯಾ ಕೂಬ್  ಲಗತಿ ಹೊ ಎಂದು  ಹಾಡಿದ್ದನ್ನು ಖುಷಿಯಿಂದ ನೆನೆಯುತ್ತಿರುತ್ತಾನೆ. 1984ರ ಸುಮಾರಿನಲ್ಲಿ ಗೊರೂರಿನಲ್ಲಿ ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಮತ್ತು ವೀರೇಂದ್ರ ಹೆಗಡೆಯವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನದ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅರಕಲಗೂಡು ವರದರಾಜಲು ರವರಿಗೆ  ಪ್ರಥಮ ದರ್ಜೆ ಕಾಲೇಜಿಗೆ ಬೇಡಿಕೆ ಇಟ್ಟಾಗ ಸ್ಥಾಪಿತವಾದ ಎ ಎನ್ ವಿ ಕಾಲೇಜಿನ  ಮೊದಲ ಫಲಾನುಭವಿ ಯಾಕೋಬನು ಮುಂದೆ ಮಾಸ್ಟರ್ ಡಿಗ್ರಿಯನ್ನು ಪಡೆದ. ಆತನ ಸಹಪಾಠಿಗಳು ಈಗ ಉಪ ನಿರ್ದೇಶಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೆ ತನ್ನ ವಿದ್ಯಾಭ್ಯಾಸದ ದಿನದಲ್ಲಿ ಬಣ್ಣದ ಬದುಕಿಗೆ ಬಿದ್ದ ಯಾಕೂಬ್ ತನ್ನ ಸಂಬಂಧಿಕರ ಜಿಎಎಸ್ ಟಾಕೀಸ್ ನಲ್ಲಿ  ಟಿಕೆಟ್ ವಿತರಕ ,ಗೇಟ್ ಕೀಪರ್, ಆಪರೇಟರ್ ಜೊತೆ ಜೊತೆಗೆ ಬೋರ್ಡ್ ಬರೆಯುವ ಹವ್ಯಾಸಕ್ಕೂ ಬಿದ್ದ ನಂತರ ಯಾಕೋ ಅಲ್ಲಿಯೇ ಸಂತೃಪ್ತನಾದ. ಕುವೆಂಪುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ವಿಶ್ವ ಮಾನವ ಸಂದೇಶವನ್ನು ನಮ್ಮೂರಿನ ಗ್ರಂಥಾಲಯಕ್ಕೆ ಉಚಿತವಾಗಿ ಬ್ಯಾನರ್ ಬೋರ್ಡನ್ನು ಕೊಟ್ಟಿದ್ದಲ್ಲದ ಸುತ್ತಲೂ ನಾಲ್ಕೈದು ಶಾಲೆಗಳಿಗೆ ಕೈಯಲ್ಲಿ ಬರೆದ ಉದ್ದನೆಯ ಫೋಲ್ಡಿಂಗ್ ಬ್ಲಾಕ್ ಬೋರ್ಡ್ ನಲ್ಲಿ ಬರೆದು ಕೊಟ್ಟಿದ್ದು ನೆನಪಿದೆ. ಕಳೆದ ವರ್ಷ ಜಹೊನಾ ಸ್ಮರಣೆಯ ಸಮಾರಂಭದಲ್ಲಿ ಅವರ ಮಗಳಾದ ಖ್ಯಾತ ಲೇಖಕಿ  ಜ ನಾ ತೇಜಶ್ರೀ  ಅವರು ಜಹೊನಾರು ತೀರಿಕೊಂಡ ಸಂದರ್ಭದಲ್ಲಿ  ಪಾರ್ಥಿವ ಶರೀರವನ್ನು ರಾತ್ರಿಯಿಡೀ ಎಚ್ಚರವಾಗಿ ಕುಳಿತು ನೋಡಿಕೊಂಡದ್ದನ್ನು ನೆನಪಿಸಿಕೊಂಡರು.  ಆ ಸಂದರ್ಭದಲ್ಲಿ ಸಾಕ್ಷರತಾ  ಆಂದೋಲನದ ಸಮಯದಲ್ಲಿ ಹಾರನ ಹಳ್ಳಿಯಲ್ಲಿ ಗೋಡೆ ಬರಹವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿದ ಪ್ರಸಂಗವನ್ನು ನನ್ನೊಂದಿಗೆ ಹಂಚಿಕೊಂಡ ಯಾಕೂಬ್ ಆಗ ಸಾಕ್ಷರತಾ ಸಮಿತಿಯ ಅಧ್ಯಕ್ಷರಾಗಿದ್ದ ಜಹೊನಾರವರು ಅಲ್ಲಿಗೆ ಬಂದು ಬಿಡಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವನದೇ ಗೋಡೆ ಬರಹ . ಇವನು ಬರೆಯುವ ಗೋಡೆ ಬರಹಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.ಈಗಲೂ  ರಾಜ್ಯ ,ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ  ಆಯ ಊರುಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ದಿನಾಂಕಗಳ ಜೊತೆಗೆ ಲೇಖಕರ ಪ್ರಸಿದ್ಧ ನುಡಿಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಯಾಕೂಬ್   ನಮ್ಮೂರಿನ ಅನನ್ಯ ಪ್ರತಿಭೆ. ಗೊರೂರು ಶಿವೇಶ್

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್ Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ “ಮೃಗಶಿರಾ ಮಳೆ” ಬಿಸಿಲ ಬೇಗೆಗೆ ಬಸವಳಿದಭೂರಮೆಯ ತಂಪುಗೊಳಿಸಲುಇಳೆಗೆ ಸುರಿಯಿತಿಂದುಮೃಗಶಿರಾ ಮಳೆಧರಣಿದೇವಿಯತಾಪ ನೀಗಿಸಲು ಕಣ್ಣೋಟ ಹರಿಸಿದೆಡೆಹಸಿರಿನ ವೈಭವಮುನ್ನೋಟ ವಿಹರಿಸಿದೊಡೆಆಹ್ಲಾದದ ಸೂರಭನಿಸರ್ಗ ಚೆಲುವಿನಅಮೃತಪಾವನಈ ಮೃಗಶಿರಾ ಮಳೆ ಕಾದ ನೆಲವ ತಂಪಾಗಿಸಿದಆ ವರುಣದೇವಹಸಿದೊಡಲ ಬರ ನೀಗಿಸಿದಈ ಅನ್ನದೇವಭಾವ ಸಮಾಧಿಯಸಿಂಧೂರಈ ಮೃಗಶಿರಾ ಮಳೆ ಕಪ್ಪೆಗಳ ವಟವಟ ನಿನಾದಚಿಟ್ಟೆಗಳ ಚಿಲಿಪಿಲಿ ನಾದಗುಂಯ್ ಗುಡುವ ಸೊಳ್ಳೆಗಳಮಧುರಾಯನ ಮೈಳೈಸಿತೇಳ್ಈ ಮಳೆಯ ಆರ್ಭಟದಿಂ ಮಳೆಯಿಂದ ಇಳೆಕಾಣುತಿದೆ ಬೆಳೆಮನದಿಂದ ಕಲ್ಮಶವ ಕಳೆಇದೇ ಬಾಳಿಗೆ ಚಿತ್ಕಳೆಬೆಳಗುತಿದೆ ಬಾಳುಸುಖದ ಕುರುಹು ಕೇಳು ಶಿವಕುಮಾರ ಕೋಡಿಹಾಳ      

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕೊಳ್ಳುವವರಿಲ್ಲ…….” ಜೀವನ ನಾವು ಅಂದುಕೊಂಡತಲ್ಲಅಂದುಕೊಂಡಿದ್ದೆಲ್ಲ ಜೀವನವಲ್ಲಮೇಲೊಬ್ಬನ ಹಣೆಬರಹ ತಿಳಿಯಲ್ಲಬದುಕಿನ ಏರಿಳಿತ ಎಂದೂ ಅರಿವಿಲ್ಲ ಜಗವೇ ಒಂದು ನಾಟಕ ರಂಗಬಾಳಲ್ಲಿ ಇರಲಿ ಒಳ್ಳೆಯವರ ಸಂಗಅರಿಯದೆ ಬಾಳಿದರೆ ಬದುಕು ಭಂಗತಿಳಿಯದಿದ್ದರೆ ಇಂಗು ತಿಂದ ಮಂಗ ಬದುಕಿನ ಸಂತೆಯಲಿ ಬಿಕರಿಗಿದೆ ಕನಸು ಮತ್ತು ಚಿಂತೆಕೊಳ್ಳುವವರಿಲ್ಲ ನೋವುಗಳ ಸಾಲಿನ ಕಂತೆತುಂಬಿಹುದು ಬಾಳಲಿ ಸುಖ ದುಃಖದ ಬೊಂತೆಎಲ್ಲರು ನನ್ನವರೆಂಬ ಸುಳ್ಳು ಭ್ರಮೆಯಂತೆ ಜಗದಿ  ಅರಿಯಬೇಕು ಬಂದ ಕಾರಣಮಾಡಬೇಕು ಏಳಿಗೆಗೆ ಶ್ರಮಿಸಿದವರ ಸ್ಮರಣಸವಿಯುತ್ತಿರು ಸುಂದರ ನೆನಪುಗಳ ತೋರಣಬರೆದಿಹನು ಎಲ್ಲರಿಗೂ ಒಂದು ದಿನ ಮರಣ.  ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….” Read Post »

ಪುಸ್ತಕ ಸಂಗಾತಿ

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು

ಪುಸ್ತಕ ಸಂಗಾತಿ ಹರಿನರಸಿಂಹ ಉಪಾಧ್ಯಾಯ ಶಂಭೂರು ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ” ಅಂಬುಧಿಯ ಆಳಗಲ ಆಗಸದ ವಿಸ್ತಾರಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆಜಗವೊಂದು ಹಿಡಿ ತಾನೆ? ಚಕ್ರಪಾಣಿ || ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ. ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು   ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ. ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ. ಗುರುಚರಣ ಎಂಬ ಚೋಕಾದಲ್ಲಿ… ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/ನರಮಾನವ/ ನಿನ್ನಾರು ಕಾಯುವರು/ಗುರುಚರಣ/ ಅನುದಿನ ಪೂಜಿಸು/ನೀನೇ ಶ್ರೇಷ್ಠನಾಗುವೆ// ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು. ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ…. ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/ಸತ್ಯದ ಸಾವು/ ಸಂಭವಿಸಿರುವಾಗ/ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/ಹೇಳು ನೀ ಸೃಷ್ಟಿಕರ್ತ // ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ. ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/ಧರ್ಮಯುದ್ಧವೇ ಅಸ್ತ್ರ// ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ. ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು// ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ  ಪರಿ ಅತ್ಯಂತ ಸೊಗಸಾಗಿದೆ. ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು// ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ. ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ// ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ. ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ. ಭಾರತಾಂಬೆಯ / ಮುಕುಟದಿ ಶೌರ್ಯದಿ /ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು// ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ. ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ. ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ. ಹರಿನರಸಿಂಹ ಉಪಾಧ್ಯಾಯ(ಕವಿಗಳು)ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ+೯೧ ೯೯೮೦೯೨೧೧೧೧

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನನ್ನೊಳಗೆ“ ನನ್ನೊಳಗೆ ಬೆಳಕೊಂದುಮೌನವಾಗಿ ಹೊಳೆಯಿತು,ಮೋಡದಾಚೆ ಹುಡುಕಿದ ಕಣ್ಣುಮನದೊಳಗೆ ಮರಳಿತು. ನದಿಯಂತೆ ದಿನ ಹರಿದು,ಗಾಳಿಯಂತೆ ಸುಖ ಸರಿದು;ಜಿಂಕೆಯ ಭಯ, ಸಿಂಹದ ಉರಿಒಂದೇ ಎದೆಯಲಿ ಬೆರೆತು. ಹುಟ್ಟಿನ ಕಂಬನಿ ಹನಿಯಲಿ,ತಾಯಿ ನಗುವಿನ ಹೊನಲಲಿ;ದುಃಖದ ಕಾವು, ಸುಖದ ತಂಪುಒಂದೇ ಮನದ ನೆರಳಲಿ. ಕಲ್ಲಿನ ಗುಡಿ ದಾಟಿದರೂಕಾಣದ ಸತ್ಯ ಉಳಿಯಿತು,ಕಣ್ಣು ಮುಚ್ಚಿದ ಮೌನದಲಿಆತ್ಮದೀಪ ಹೊತ್ತಿತು. ಬಂಧದ ಬೇರು ಮನದಲಿ,ಮುಕ್ತಿಯ ಹೂವು ಮನದಲಿ;ಮನ ಹಸಿರಾದ ಕ್ಷಣದಲಿಬದುಕು ಹೂವಾಯಿತು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆಹುಟ್ಟಿಸಿದೆ ಗೆಳೆಯಾಮಿಡಿದು ಅಂತರಂಗದಲಿ ಮೂಡಿದ ಭಾವಗಳಮುಟ್ಟಿಸಿದೆ ಗೆಳೆಯಾ ಸುರಿದ ಧಾರೆಯೊಳಗೆ ಮಿಂದ  ಇಳೆಯಲಿತಂಪಿನ ಸಿಂಚನವಲ್ಲವೇಹರಿದು ಧಾರಾಕಾರವಾಗಿ ನದಿಯ ಸೇರುವಾಸೆಮೆಟ್ಟಿಸಿದೆ ಗೆಳೆಯಾ ವಸಂತ ತರುಲತೆಗಳಲಿ ಹಸಿರು ರಂಗವಲಿಎರಚುತ ಬಂದನುಹೊಸತು ಕನಸುಗಳ ಬಿತ್ತಲು ಆಸೆಗಳಕಟ್ಟಿಸಿದೆ ಗೆಳೆಯಾ ಕುಣಿದ ವಸುಂಧರೆಯ ಒಡಲು ಹರುಷದತೋರಣ ಬಿಡಿಸಿದೆತಣಿದ ರೈತಾಪಿವರ್ಗಕೆ ಮೂಡಿದ ಭಯವನುಅಟ್ಟಿಸಿದೆ ಗೆಳೆಯಾ ರಾಧೆಯ ಮನದಂಗಳದ ತೋಟದಿ ನಲಿದಿವೆಬಣ್ಣಬಣ್ಣದ ಹೂವುಗಳುಮಧುರ ಅನುಭೂತಿಯಲಿ ಬದುಕ ಮೌಲ್ಯವಗಿಟ್ಟಿಸಿದೆ ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ”

ಕಾವ್ಯ ಸಂಗಾತಿ ಶ್ರೀದೇವಿ .ಮ.ಗುಮ್ಮಗೋಳ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” ಅಪ್ಪನಿಲ್ಲದ ಮನೆಯೊಳಗೆನೋವು ನುಂಗಿ ಕಷ್ಟಸಹಿಸಿದೈರ್ಯ ವಹಿಸಿ…..ಮಕ್ಕಳನ್ನು ಸಾಕಿಬೆಳಸಿದಳಮ್ಮಮಕ್ಕಳೆಲ್ಲ ಬೆಳದು ಹೆಮ್ಮರವಾಗಿದ್ದಾರೆಮಕ್ಕಳೆಲ್ಲ ತಮ್ಮದೆಂಬ ನೆಲೆಯಲ್ಲಿಅಮ್ಮನಿಗ ಜೇಡರಬಲೆಯಲ್ಲಿ… ಹೆಗಲ ಮೇಲೆ ಹೊತ್ತು ಅಪ್ಪ ತಿರುಗುವಾಗನನ್ನ ಕೂಗು ಮುಗಿಲು ಮುಟ್ಟುತ್ತಿತ್ತುಅಪ್ಪಿನಿಲ್ಲದೇ ತಬ್ಬಲಿಗಳಾಗಿ….ಪ್ರಭಲ ಶಕ್ತಿಗಳ ಬಲಿಗಳಾಗಿ….ನಮ್ಮ ಕೂಗು ಕೇಳುವರಿರಲಿಲ್ಲತುತ್ತು ಕೂಳಿಗಾಗಿ ಅಮ್ಮಮುಸುರಿ ತಿಕ್ಕುತ ಅಲೆದಿದ್ದಳಲ್ಲ….. ಅಪ್ಪನಿಲ್ಲದ ಮನೆ ಈಗಉಪ್ಪರಗಿಯಲ್ಲಿದ್ದೂ ಅನಾಥಭಾವ….ಅಮ್ಮ ಕೇವಲ ಅಣ್ಣ-ಅತ್ತಿಗೆಯರ ಕೈಗೊಂಬೆಮರದಿಂದ ಬೇರ್ಪಟ್ಟ ರಂಬೆಕೊಂಬೆಜೀವವಿದ್ದು ನಿರ್ಜಿವದ ತೊಗುಲುಗೊಂಬೆ ಮನೆಗೆ ಬಂದಾಗಲೆಲ್ಲನೀ ಕುಳಿತ ಕುರ್ಚಿ, ಚಸ್ಮ, ಪೆನ್ನು, ಪುಸ್ತಕ ಬಣಗುಡುತ್ತಿವೆಕಣ್ಣಂಚಿನಲ್ಲಿ ಆರ್ದತೆ ತುಂಬಿಕೊಂಡುಮರೆಮಾಚುತ್ತೇನೆ ನೋವ….ಮಾತಿಗಿಳಿಯುತ್ತೇನೆ ಮಾತು ಒಣಗುತ್ತದೆನನ್ನ ಅಂತಾರಾಳದಲ್ಲಿ ಕುಳಿತುಅಪ್ಪ ಬಂದು ಗುಣಗಣಸಿದ ಭಾವ….. ಅಪ್ಪನಿದ್ದಾಗ ಅಮ್ಮನ‌ ಮಾತು ವಟವಟ…ಅಪ್ಪನ ಮೌನದಲ್ಲೂ ಇತ್ತು ಒಂದು ದಿಟ….ಈಗ ಅಮ್ಮನ ಮಾತುಗಳಿಗೆ ಭಾವವಿಲ್ಲಬರಿ ಮೌನ….ಅವಳ ಶಬ್ಧಗಳಿಗೆ ಕಿವಿಗಳಿಲ್ಲ…ರಕ್ಷಣೆಯೇ ಗೌಣ…. ಯಾವ ಆಸರೆಯಿಲ್ಲದ ಅಮ್ಮಗೋಡೆಯಾದರೂ ಆಸರೆಯಾದಿತೆಂದುಗೋಡೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಾಳೆ….ಈಗ ಗೋಡೆಯೂ ಅಭದ್ರಅದಕ್ಕೂ ಕಾಡುತ್ತದೆ ನಿನ್ನ ನೆನಪು…. ಶ್ರೀದೇವಿ .ಮ.ಗುಮ್ಮಗೋಳ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ”

ಕಾವ್ಯ ಸಂಗಾತಿ ಎಮ್ಮಾರ್ಕೆ “ನಾವಿರೋದೇ ಹೀಗೆ” ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇನಾವು ಆರಿಸಲು ಅಣಿಯಾಗುವೆವು ಕಣ್ಣ ಮುಂದೆ ವಂಚನೆ,ಮೋಸನಡೆದರೂ ತಡೆಯುವ ತುಡಿತವಿಲ್ಲ,ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇನಾವು ಬಿಡದೇ ಹರಿಹಾಯುವೆವು ನಮಗ್ಯಾಕೆ ಇಲ್ಲದ ಉಸಾಬರಿನಮಗೂ ಅದಕೂ ಸಂಬಂಧವಿಲ್ಲ,ನಮಗೆ ಸಂಬಂಧ ಪಟ್ಟಾಗಲಷ್ಟೇಎದೆಯನ್ನುಬ್ಬಿಸಿ ಎದುರಾಡುವೆವು ಬಿಟ್ಟಿ ಉಪದೇಶ ನೀಡುವವರಸಂಖ್ಯೆಗಂತೂ ಕೊರತೆಯೇ ಇಲ್ಲ,ಸ್ವಾರ್ಥದ ಸದುದ್ದೇಶವಿದ್ದರಷ್ಟೇಉದ್ದ ಉಪದೇಶವ ನೀಡುವೆವು ಬಹುತೇಕ ಪ್ರಭು,ಪ್ರಜೆಗಳಲ್ಲಿನಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,ಕಾಗೆಯ ಬಣ್ಣ ಬಿಳುಪೆಂದರೂಹೂಂ ಎಂದು ಗೋನು ಹಾಕುವೆವು ಒಬ್ಬನೇ ಸೂರ್ಯ ನಿತ್ಯ ಜಗವಬೆಳಗುವುದರ ಪರಿವೇ ನಮಗಿಲ್ಲ,ನಮ್ಮೊಬ್ಬರಿಂದಲೇ ಏನಾದೀತು!ಎಂದು ಮನದಲ್ಲೇ ಮರುಗುವೆವು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ” Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ‌ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್ Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಮನುಷ್ಯನಿಗೆ ಹೊನ್ನಿನ ರಾಶಿ ಸಿಕ್ಕರೂ ತೃಪ್ತಿಯಾಗುವುದಿಲ್ಲ.ಭವ ಬಂಧನದ ಆಸೆ-ಆಕಾಂಕ್ಷೆಗಳು ಪೆಡಂಭೂತವಾಗಿ ಕಾಡುತ್ತದೆ ಅವನಿಗೆ.ಪ್ರತಿಷ್ಠೆ,ತೋರಿಕೆಯ ಆಸೆ ನುಸುಳುತ್ತದೆ ಅವನ ಮನದೊಳಗೆ.ನೆಮ್ಮದಿಯು ತನ್ನಲ್ಲಿದ್ದರೂ ಅತೀ ನೆಮ್ಮದಿ ಪಡೆಯಲು ಅತ್ಯಂತ ಶ್ರೀಮಂತರ ಸಂಬಂಧಗಳನ್ನು ಬೆಳೆಸಲು ಮುಂದಾಗುತ್ತಾರೆ.ಅವರು ಒಳ್ಳೆಯವರೊ….ಕೆಟ್ಟವರೊ..‌ಮನುಷ್ಯತ್ವದಲ್ಲಿದ್ದಾರೊ….ಅಥವಾ ಅಮಾನುಷತ್ವದಲ್ಲಿ ಮುಳುಗಿದ್ದಾರೊ….ಯಾವುದೂ ಅರಿಯದೆ ಕೇವಲ ಅವರ ಸಿರಿತನದ ಮನೆತನವಿದ್ದರೆ ಸಾಕು,ಸಂಬಂಧ ಬೆಳೆಸಿಬಿಡುತ್ತಾರೆ.ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ.ವೇಗವಾಗಿ ಓಡುವ ಮನಸ್ಸಿಗೆ ಏನೆಂದೂ ಕಾಣುವುದಿಲ್ಲ.ಈಗಿನ ಕಾಲದಲ್ಲಿ ಶ್ರೀಮಂತರ ಮನೆತನಗಳಲ್ಲಿ ನಯ  ವಿನಯ ಮರೆಯಾಗಿದ್ದು  ಮದ ಮತ್ಸರ,ಕೋಪ ತಾಪಗಳು ಮತ್ತು ವಿಶ್ವಾಸ ದ್ರೋಹಗಳೆ ಹಲವು ಬಗೆಯಾಗಿರುತ್ತವೆ.ನಾವುಗಳು ನಾವೇ ಆಗಿರಬೇಕು.ಯಾಕೆಂದರೆ ಜೀವನದಲ್ಲಿ ಅನೇಕ ರೀತಿಯ ಆಯ್ಕೆಗಳಿವೆ.ಅದೆಷ್ಟೋ ಆಯ್ಕೆಗಳನ್ನು ಪಡೆಯಲು ಪ್ರಯತ್ನ ಪಡುತ್ತಲೆ ಇರುತ್ತೇವೆ.ಸಣ್ಣ ಪುಟ್ಟ ಸಂತೋಷಗಳನ್ನು ಪೂರೈಸಿಕೊಳ್ಳಲು,ಸ್ವಾರ್ಥದಿಂದ ಆದರೂ ಸಾಧಿಸಿಕೊಳ್ಳುತ್ತೇವೆ.ನಾವೇ ತೋಡಿದ ತೆಗ್ಗಿನಲಿ ಒಂದಾನೊಂದು ದಿನ ಬೀಳುತ್ತೇವೆ.ಇದು ಸತ್ಯ.ಆತುರವೆಂದರೆ ಒಂದಲ್ಲ ಎರಡಲ್ಲ.,ಹತ್ತಾರು ಕೆಲಸ ಕಾರ್ಯಗಳ ಆತುರ.ತಾಳ್ಮೆ ಎಂಬುದು  ಬಹು ದೂರ.ಮಾತಿನ ಆತುರ.,ದುಡುಕುವ ಆತುರ.,ಹತ್ತಾರು ವಿಷಯಗಳ ಆತುರ.,ಪ್ರತಿ ಕೆಲಸಕ್ಕೂ ಆತುರವಾದರೆ ಹಿತವೆನ್ನುವ ಪಲಿತಾಂಶದಲ್ಲಿ ಫೇಲು ಆಗಬಹುದು.ನಮ್ಮೆದುರಿಗೆ ಇರುವವರನ್ನು ಹಿಂದಿಕ್ಕಿ ಓಡಬೇಕು ಎನ್ನುವ ಆತುರ.ಈ ವಿಷಯದಲ್ಲಿ ನಾವುಗಳು ತುಸು ಯೋಚಿಸುವುದಿಲ್ಲ.ನಮಗೆ ನಮ್ಮ ಕೆಲಸವೇ ಬಹು ಮುಖ್ಯ.ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಂದ ನಮಗೆ ಆಗುವುದಾದರೂ ಏನಿದೆ? ಅನ್ನುವ ಸ್ವಭಾವವನ್ನು ನಾವುಗಳು ಹೊಂದಿರುತ್ತೇವೆ.ಇದೇ ಕಾರಣಕ್ಕೆ ಸೂಕ್ಷ್ಮವನ್ನು ಅರಿಯದೆ ಹೋಗುತ್ತೇವೆ.ಈ ಮಾತಿನ ಅರಿವು ಇಷ್ಟೆ. ಪ್ರಭಾವಿ ಅಥವಾ ಶ್ರೀಮಂತ ವ್ಯಕ್ತಿಗಳ ಜೊತೆ ನಿಕಟ ಸಂಬಂಧವಿದ್ದರೂ, ಅದರಿಂದ ನಮಗೆ ಯಾವುದೇ ಪ್ರಯೋಜನ ಸಿಗದ ಪರಿಸ್ಥಿತಿಯನ್ನು ವಿವರಿಸುತ್ತದೆ.  ಅಳತೆಗೆ ಸಿಗದ ನೀರನ್ನು ಹೊಂದಿರುವ ಸಮುದ್ರದ ಜೊತೆ ನಮಗೆ ಸ್ನೇಹವಿದ್ದರೂ, ನಮಗೆ ಬೇಕಾದ ಒಂದು ಸಣ್ಣ ಹಿಡಿ ಉಪ್ಪು ಸಿಗದೇ ಹೋದರೆ ಆ ಸ್ನೇಹದಿಂದ ಏನು ತಾನೇ ಪ್ರಯೋಜನ?​ ಅಧಿಕಾರ ಮತ್ತು ಪ್ರಭಾವದ ನೆರಳಿನಡಿಯಲ್ಲಿ​ನಮಗೆ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವವರು ಅಥವಾ ರಾಜಕಾರಣಿಗಳು ಪರಿಚಯವಿರಬಹುದು. ಲೋಕದ ದೃಷ್ಟಿಯಲ್ಲಿ ನಾವು ಅವರ “ಆಪ್ತರು” ಎನಿಸಿಕೊಳ್ಳಬೇಕು.ಅವರ ಜೊತೆ ನಿಕಟ ಸಂಪರ್ಕದಲ್ಲಿರಬೇಕು  ಎಂದು ಸದಾ ಬಯಸುತ್ತೇವೆ. ಆದರೆ ನಮಗೆ ಒಂದು ಸಣ್ಣ ವೈಯಕ್ತಿಕ ಕೆಲಸ ಅಥವಾ ಸಹಾಯದ ಅವಶ್ಯಕತೆ ಬಂದಾಗ, ಆ ಪ್ರಭಾವಿ ವ್ಯಕ್ತಿಗಳು ನಮಗೆ ನೆರವಾಗದಿದ್ದರೆ ಅದು “ಸಮುದ್ರದ ನೆಂಟಸ್ತಿಕೆಯಂತೆಯೇ  ಸರಿ.​ವ್ಯರ್ಥ ಪ್ರಯತ್ನ ,ವ್ಯರ್ಥ ಹೆಮ್ಮೆಪಡುವುದು ಕ್ಷೀಣಿಸುತ್ತಿದೆ .ದೊಡ್ಡವರ ಪರಿಚಯವಿದೆ ಎಂದು ಜಗತ್ತಿಗೆ ಹೇಳಿಕೊಳ್ಳುವುದು ಸುಲಭ, ಆದರೆ ಆ ಸ್ನೇಹವು  ಫಲ ನೀಡದಿದ್ದಾಗ ಅದು ಕೇವಲ ಒಂದು ಬೃಹದಾಕಾರದ  ಬಲೂನಿನಂತೆ ಎಂದೆನಿಸಿ ಬಿಡುತ್ತದೆ.​ನಿರೀಕ್ಷೆ ಮತ್ತು ವಾಸ್ತವವು ಸುಳ್ಳಾಗಿ ಟುಸ್ ಎನ್ನುವ ಮುಕ್ಭತ್ತಿಯಾಗಿಡುವುದು . ಸಮುದ್ರದ ಅಲೆಗಳು ದಡಕ್ಕೆ ಬಂದು,ಬಡಿದು ಹಿಂದಕ್ಕೆ ಹೋಗುವುದು ನೋಡಲು  ಬಹು ಸುಂದರ, ಆದರೆ ಆ ಅಲೆಗಳು ಮನೆಯ ಬಾಯಾರಿಕೆಯನ್ನು ತಣಿಸಲಾರವು. ​ ಶ್ರೀಮಂತಿಕೆ ಮತ್ತು ಬಡತನದ ನಡುವಿನ ವ್ಯತ್ಯಾಸವು ಬಹಳ ಆಳವೂ,ಅನಂತವೂ ಆಗಿದೆ.​ಶ್ರೀಮಂತ ಕುಟುಂಬಗಳಲ್ಲಿ ಅಥವಾ ದೊಡ್ಡ ಉದ್ಯಮಿಗಳ ಅಡಿಯಲ್ಲಿ ಕೆಲಸ ಮಾಡುವ ಅನೇಕರನ್ನು ನಾವು ನೋಡುತ್ತೇವೆ. ಹೊರಗಿನ ಜನರಿಗೆ ಅವರು ಬಹಳ ಅದೃಷ್ಟವಂತರು ಎಂದು ಅನಿಸುತ್ತದೆ. ಆದರೆ ಆ ಶ್ರೀಮಂತರ ಮನೆಯಲ್ಲೇ ಕೆಲಸ ಮಾಡುವವರಿಗೆ  ಸರಿಯಾದ ಸಮಯಕ್ಕೆ  ಸಂಬಳವಿಲ್ಲದೆ ಅಥವಾ ಜೀವನದ ಮೂಲಭೂತ ಸೌಕರ್ಯಗಳಿಲ್ಲದೆ ಬಡತನದಲ್ಲಿ ಬೆಂದು,ಕೊನೆಗೆ ಅಂಥವರ ಮನೆಯ ಕೆಲಸವನ್ನು ಬಿಟ್ಟು ಹೋಗುವರು. ​”ಕಲ್ಪವೃಕ್ಷದ ಕೆಳಗೆ ನಿಂತರೂ ಬೇಡಲು ಬಾಯಿಯಿಲ್ಲದಂತೆ,ಮೂಕನಾದಂತೆ., ಕೈಯಲ್ಲಿ ಪಾತ್ರೆಯಿಲ್ಲದಿದ್ದರೆ ಮಳೆ ನೀರು ಕುಡಿಯಲು ಸಾಧ್ಯವಿಲ್ಲ.” ಹಾಗೆಯೇ, ಶ್ರೀಮಂತಿಕೆಯ ಸನಿಹವಿದ್ದರೂ ಅದನ್ನು ಹಂಚಿಕೊಳ್ಳುವ ಗುಣ ಅಥವಾ ಅದನ್ನು ಪಡೆಯುವ ಯೋಗ ಎರಡೂ ಮುಖ್ಯವಾಗುತ್ತದೆ. ​ಜ್ಞಾನ ಮತ್ತು ಅನ್ವಯದ ಕೊರತೆಯಿಂದ​ಈ ಮಾತನ್ನು ಕೇವಲ ಹಣಕ್ಕೆ ಸೀಮಿತಗೊಳಿಸದೆ, ಜ್ಞಾನಕ್ಕೂ ಅನ್ವಯಿಸಬಹುದು.​ನಮ್ಮ ಮನೆಯಲ್ಲಿ ಸಾವಿರಾರು ಪುಸ್ತಕಗಳಿರಬಹುದು, ಅಥವಾ ನಮಗೆ ಮಹಾನ್ ವಿದ್ವಾಂಸರ ಪರಿಚಯವಿರಬಹುದು.​ಆದರೆ ನಾವು ಆ ಜ್ಞಾನವನ್ನು ಬಳಸಿಕೊಳ್ಳದಿದ್ದರೆ ಅಥವಾ ನಮಗೆ ಜೀವನದ ಕಷ್ಟಕಾಲದಲ್ಲಿ ಆ ವಿದ್ವಾಂಸರಿಂದ ಒಂದು ತುಸುವಾದರೂ  ಮಾರ್ಗದರ್ಶನ ಸಿಗದಿದ್ದರೆ, ಅದು ನಡುರಾತ್ರಿಯಲ್ಲಿ ಹಿಡಿದ ಕೈದೀವಿಗೆಯಂತೆ ಶೂನ್ಯವಾಗಿರುತ್ತದೆ. ​ಸಂಬಂಧಗಳಲ್ಲಿನ ಪೊಳ್ಳುತನವು​ಇಂದಿನ ಕಾಲದ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಾವಿರಾರು “ಸ್ನೇಹಿತರು” ಇರುತ್ತಾರೆ. ಇದು ಸಮುದ್ರದಷ್ಟು ದೊಡ್ಡ ಜಾಲವಾಗಿದೆ.ಆದರೆ ನಮಗೆ ಮಾನಸಿಕವಾಗಿ ನೋವಾದಾಗ ಅಥವಾ ಸಹಾಯದ ಹಸ್ತ ಬೇಕಾದಾಗ ಒಬ್ಬರೂ ಬಾರದಿದ್ದರೆ, ಈ ಸೋಷಿಯಲ್ ಮೀಡಿಯಾ ಸ್ನೇಹವು “ಸಮುದ್ರದ ನೆಂಟಸ್ತನಕ್ಕೆ” ಸಾಕ್ಷಿಯಾಗುತ್ತದೆ.​ಸಮುದ್ರದ ನೀರು: ತುಂಬಾ ಇದೆ, ಆದರೆ ಕುಡಿಯಲು ಯೋಗ್ಯವಲ್ಲ.​ಬಾಹ್ಯ ಸಡಗರವಿದ್ದಂತೆ.ಬರೀ ತೋರಿಕೆಗೆ ಕಡಲು.ಆ ಕಡಲಿನ ಪಕ್ಕದಲ್ಲಿ ಮನೆ ಮಾಡಿದವರಿಗೆ ಗೊತ್ತು ಸಾಧಕ ಬಾಧಕಗಳು.ಹಾಗೆನೆ ಉಳ್ಳವರ ಸಂಬಂಧಗಳಲ್ಲಿ ತೋರಿಕೆ ಜಾಸ್ತಿಯಾಗಿ ಅಂತರಂಗದ ಮಿಡಿತ ಕಡಿಮೆಯಾದಾಗ  ಇಂತಹ ಗಾದೆ ಮಾತುಗಳು ಜನ್ಮತಾಳುತ್ತವೆ ​ಈ ಮಾತು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿಕೊಡುತ್ತದೆ.​ಆತ್ಮನಿರ್ಭರತೆ ಮತ್ತು ಗುಣದ ಬೆಲೆ. ಬೇರೆಯವರ ಶ್ರೀಮಂತಿಕೆ ಅಥವಾ ಅಧಿಕಾರವನ್ನು ನೋಡಿ ನಮಗೆ ಏನೋ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕಲು ಆಸೆಪಡುತ್ತೇವೆ. ಆ ಆಸೆಯು ಈಡೇರದಿದ್ದಾಗ ಆತ್ಮ ನಿರ್ಭರವಾಗಿ ಅವರ ಒಳ ಗುಣದ ಅರಿವು ಪ್ರತ್ಯಕ್ಷವಾದಾಗ ದೂರಾಗುತ್ತೇವೆ.    ನಮಗೆ ಬೇಕಾದ ‘ಉಪ್ಪನ್ನು’ ನಾವೇ ಸಂಪಾದಿಸಿಕೊಳ್ಳಬೇಕು.​ರಾಜರ ,ರಾಜಕಾರಿಣಿಗಳ,ಜಮೀನ್ದಾರರ ಅದೆಷ್ಟು  ಸಂಪತ್ತು ಇದ್ದರೂ ನಮಗಾಗುವದೇನು?  ಅದು ಯಾರಿಗಾದರೂ ಬಳಕೆಯಾಗುತ್ತದೆಯೇ ಎಂಬುದು ಮುಖ್ಯ. ಉಪ್ಪಿಲ್ಲದ ಊಟ ಹೇಗೆ ರುಚಿಸುವುದಿಲ್ಲವೋ, ಹಾಗೆಯೇ ಮಾನವೀಯತೆ ಇಲ್ಲದ ಮಹಾನ್ ವ್ಯಕ್ತಿಗಳ ಸ್ನೇಹವು ನಿರರ್ಥಕ.​ಸಮುದ್ರದ ಹತ್ತಿರ ವಾಸಿಸಿದರೂ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಮಗೆ ಬಾರದಿರಲಿ. ನಾವು ಬೆಳೆಸುವ ಸ್ನೇಹವು ಕೇವಲ ಗಾತ್ರದಲ್ಲಿ “ಸಮುದ್ರದಂತೆ” ಇರದೆ, ಗುಣದಲ್ಲಿ “ಶುದ್ಧ ಜಲದಂತೆ” ಇರಲಿ. ಆಡಂಬರದ ಸಂಬಂಧಗಳಿಗಿಂತ ಕಷ್ಟಕ್ಕೆ ಬರುವ ಪುಟ್ಟ ಸಂಬಂಧವೇ ಮಿಗಿಲು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರು (ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ) 1998 ರಿಂದ ಕೆ.ಇ.ಬಿ.ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿ ಪ್ರಾರಂಭ.ಪ್ರಸ್ತುತ ಗಂಗಾವತಿ ನಗರದಲ್ಲಿ ಮೀಟರ್ ರೀಡರ್ ಸೇವೆ ಸಲ್ಲಿಸುತ್ತಿದ್ದಾರೆ.ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು.ಪ್ರಕಟಿತ ಪುಸ್ತಕಗಳು1)ನಾನಲ್ಲದ ನನ್ನೊಳಗೊಬ್ಬ(ಕವನ ಸಂಕಲನ)2)ನಕ್ಷತ್ರ ಗೊಂಚಲು(ಹಾಯ್ಕು ಗಳ ಸಂಕಲನ)3)ನಂಜು ನುಂಗಿದ ನಗು(ಕವನ ಸಂಕಲನ)4) ನಾಕು ತಾವಿನ ತಿರುವು(ಕವನ ಸಂಕಲನ)5)ನುಡಿದಷ್ಟೆ ನವಿರು(ವಿಮರ್ಶೆ ಕೃತಿ)ಪ್ರಶಸ್ತಿಗಳುಕವಿ ಭೂಷಣ ಪ್ರಶಸ್ತಿಅಡ್ವೈಸರ್ ಸಾಹಿತ್ಯ ಪ್ರಶಸ್ತಿ (ಮಂಡ್ಯ)ರುಕ್ಮಿಣಿ ಬಾಯಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿಚೆನ್ನಬಸವೇಶ್ವರ ಸಾಹಿತ್ಯ ಪ್ರಶಸ್ತಿಬೀಚಿ ಸಾಹಿತ್ಯ ಪ್ರಶಸ್ತಿರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ (ಮಾಣಿಕ್ಯ ಪ್ರಕಾಶನ ಹಾಸನ)ಚೆನ್ನವೀರ ಕಣವಿ ರಾಜ್ಯ ಸಾಹಿತ್ಯ ಪ್ರಶಸ್ತಿ (ಧಾರವಾಡ)ಡಾ.ಸಿದ್ಧಲಿಂಗಯ್ಯ ರಾಜ್ಯ ಸಾಹಿತ್ಯ ಪ್ರಶಸ್ತಿ (ಬಸವನ ಬಾಗೇವಾಡಿ)ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ (ಹಾಸನ.ಮಾಣಿಕ್ಯ ಪ್ರಕಾಶನ)ಕವಿ ಕಾವ್ಯ ಪುರಸ್ಕಾರ (ಮಂಡ್ಯ) ರಾಜ್ಯದ ಅನೇಕ ಪ್ರತಿಷ್ಠಿತ ಸಂಘಟನೆಯಲ್ಲಿ ಕಾವ್ಯ ಕಮ್ಮಟ, ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.ಸೇವೆಕಾವ್ಯಲೋಕ (ಗಂಗಾವತಿ )ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿ 89 ಕವಿಗೋಷ್ಠಿಯನ್ನು ನಿರ್ವಹಣೆ ಮಾಡಿದ್ದಾರೆ.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿಯಲ್ಲಿ 21ಕವಿಗೋಷ್ಠಿ ನಡೆಸಿದ್ದಾರೆ.ಸಿರಿಗನ್ನಡ ವೇದಿಕೆ ಗಂಗಾವತಿ ತಾಲುಕಾಧ್ಯಕ್ಷರಾಗಿ ಮೂರು ವರುಷ ಸೇವೆ ಮತ್ತು 15 ಕವಿಗೋಷ್ಠಿ ನಡೆಸಿದ್ದಾರೆ.ಶರಣ ಸಾಹಿತ್ಯ ಪರಿಷತ್ ಗಂಗಾವತಿ ಯಲ್ಲಿ ಕಾರ್ಯದರ್ಶಿಯಾಗಿ ಒಂದು ವರುಷ ಸೇವೆ ಮತ್ತು 30 ವಚನ ಶ್ರಾವಣ ನಿರ್ವಹಣೆ.ಸಧ್ಯದಲ್ಲಿಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿಯ ತಾಲುಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಮತ್ತು ಕವಿ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಹಲವು ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದಾರೆ.2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುದುಗಲ್ಲನಲ್ಲಿ ಏರ್ಪಡಿಸಿದ ತಾಲುಕು ಕವಿ ಸಮ್ಮೇಳನದ ಅಧ್ಯಕ್ಷರಾಗಿ, ಅಧ್ಯಕ್ಷತೆ ನಿರ್ವಹಿಸಿದ ಹೆಮ್ಮೆ.

Read Post »

You cannot copy content of this page

Scroll to Top