ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು

ವಿಶೇಷ ಸಂಗಾತಿ ಗೊರೂರು ಅನಂತರಾಜು “ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.”  ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ ೧೨೨ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವತಿಯಿಂದ ಹಾಸನದ ಟೈಮ್ಸ್ ಪಿಯು ಕಾಲೇಜು, ಸತ್ಯಮಂಗಲ ಇಲ್ಲಿ ಮದ್ಯಾಹ್ನ ೨ ಗಂಟೆಗೆ ಡಾ.ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂದರ್ಭ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರÀ ಪುತ್ರಿ ಸಧ್ಯ ಕೆನಡದ ವಾಸಿ ಗೊರೂರು ವಸಂತಿಮೂರ್ತಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭ ಡಾ. ಗೊರೂರರ ಬದುಕು ಬರಹ ಗಾಂಧೀಜಿ ಪ್ರಭಾವ ಗ್ರಾಮನೋಟದ ಒಂದು ಕಿರು ಅವಲೋಕನ ಈ ಲೇಖನ. ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು. ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ ಇದ್ದರೆ ಬೆಳೆಯುತ್ತಾ ಆ ವ್ಯಕ್ತಿತ್ವ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಅದು ಅವರ ಗಾಂಧಿ ಜೀವನ ಚಿಂತನೆ. ಡಾ. ಗೊರೂರರ ಜೀವಸತ್ವ ಇರುವುದು ಹಳ್ಳಿ ಮತ್ತು ಗಾಂಧಿ ಚಿಂತನೆಯ ರಚನಾತ್ಮಕ ಸಂಯೋಗದಿAದ. ಅವರು ಶಾಲಾ ಕಾಲೇಜಿನ ಶಿಕ್ಷಣವಿಲ್ಲದೆ ಜೀವನದಲ್ಲಿ ಕಲಿತ್ತಿದ್ದೆ ಹೆಚ್ಚು. ದೇಶಸೇವೆಗೆ ಸಂಬAಧಿಸಿದ ಅನೇಕ ಕೆಲಸ ಮಾಡುತ್ತಾ ಅನುಭವ ಗಳಿಸಿ ಪುಸ್ತಕ ಬರೆಯುತ್ತಾ ಕೀರ್ತಿವಂತರಾದರು. ಒಬ್ಬ ವ್ಯಕ್ತಿಯಿಂದ ಒಂದು ಗೊರೂರು ಧನ್ಯತೆ ಪಡೆದಿದೆ.ತಾ. ೪-೭-೨೦೦೪ರಂದು ಜನಿಸಿದ ಜಿ.ಕೆ.ರಾಮಸ್ವಾಮಿ ಅವರ ೧ ರಿಂದ ೫ ಕನ್ನಡ ಲೋಯರ್ ಸೆಕಂಡರಿವರೆಗಿನ ವಿದ್ಯಾಭ್ಯಾಸ ಗೊರೂರಿನಲ್ಲಿ ನಡೆಯಿತು. ಆ ಕಾಲದಲ್ಲಿ ಚಿಕ್ಕ ಹಳ್ಳಿಯಾಗಿದ್ದ ಗೊರೂರಿನಲ್ಲಿ ಇದ್ದಿದ್ದು ಇಷ್ಟೇ ತರಗತಿ. ೫ನೇ ಫಾರಂ ಓದುತ್ತಿರುವಾಗಲೇ ರಾಮಸ್ವಾಮಿಯವರು ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೇಳಿದ್ದರು. ತಮಗೆ ಗಾಂಧೀಜಿಯ ಬಗ್ಗೆ ಅಧಿಕೃತ ವಿಷಯ ಗೊತ್ತಾದ ಬಗ್ಗೆ ಒಂದು ಕಡೆ ಹೀಗೆ ಬರೆಯುತ್ತಾರೆ.ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಮರ‍್ನಾಲ್ಕು ವರ್ಷ ಕಳೆದಿದ್ದರು. ಮೊದಲು ಗಾಂಧೀಜಿಯ ಹೆಸರು ನನ್ನ ಕಣ್ಣಿಗೆ ಬಿದ್ದುದು ಅವರೊಬ್ಬ ರಾಜಕೀಯ ಪವಾಡ ಪುರುಷರೆಂಬುದಾಗಿಯೇ. ಅಲ್ಲಿಯವರೆಗೆ ನಾನು ಹೆಚ್ಚಾಗಿ ಕೇಳಿದ್ದುದು ಬಾಲಗಂಗಾಧರ ತಿಲಕರ ಹೆಸರನ್ನು ಮಾತ್ರ. ಅಂದಿನ ದಿನಗಳಲ್ಲಿ ಬ್ರಿಟಿಷ್ ಆಡಳಿತದ ದೌರ್ಜನ್ಯ ಕುರಿತಂತೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು. ರೌಲತ್ ಆಕ್ಟ್, ಜಲಿನ್‌ವಾಲ ಹತ್ಯಾಕಾಂಡ ಇವು ಭಾರತೀಯರನ್ನು ರೊಚ್ಚಿಗೆಬ್ಬಿಸಿದ್ದವು. ೧೯೨೯ ಆಗಸ್ಟ್ ೭ ರಂದು ಲೋಕಮಾನ್ಯ ಟಳಕರು ನಿಧನರಾದರು. ನಾನು ಕ್ಲಾಸ್‌ನ್ನು ಬಿಟ್ಟು ಇತರ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಮೆರವಣಿಗೆ ಹೊರಟೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದೇಶಿ ಬಟ್ಟೆ ಸುಟ್ಟು ಎಲ್ಲಾ ವಿದ್ಯಾರ್ಥಿಗಳು ಖಾದಿ ತೊಟ್ಟೆವು. ಗಾಂಧೀಜಿ ರಾಷ್ಟçನಾಯಕರಾಗಿ ಮುಂದಾಳತ್ವ ವಹಿಸಿಕೊಂಡರು. ೧೯೧೯ರಲ್ಲಿ ರಾಷ್ಟಿçÃಯ ಚಳುವಳಿ ಮುಗಿಲು ಮುಟ್ಟಿತು. ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಗುಜರಾತ್ ವಿದ್ಯಾಪೀಠ ಸೇರಿ ಆಶ್ರಮದಲ್ಲಿ ಇರುವ ಯೋಚನೆ ಬರುತ್ತಿದ್ದಂತೆ ಗೊರೂರರು ಅಹಮದಾಬಾದಿಗೆ ಹೊರಟರು. ಗುಜರಾತ್ ವಿದ್ಯಾಪೀಠದಲ್ಲಿ ವ್ಯಾಸಂಗಕ್ಕೆ ಸೇರಿದರು. ನಾನು (ಗೊರೂರು ಅನಂತರಾಜು) ಗುಜರಾತ್ ಪ್ರವಾಸ ಹೋಗಿದ್ದಾಗ ಗುಜರಾತ್ ವಿದ್ಯಾಪೀಠ ವೀಕ್ಷಿಸುವಾಗ ತಟ್ಟನೆ ಡಾ.ಗೊರೂರರು ನೆನಪಾಗಿ ಟೂರಿಸ್ಟ್ಗಳಿಗೆಲ್ಲಾ ಆ ವಿಷಯ ತಿಳಿಸಿ ನಾವೆಲ್ಲಾ ಅಲ್ಲಿ ನಿಂತು ಪೋಟೋ ತೆಗೆಸಿಕೊಂಡೆವು. ಡಾ.ಗೊರೂರರು ಇಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಗಾಂಧೀಜಿ ನನ್ನ ಹೃದಯದಲ್ಲಿಯೇ ಕುಳಿತಿದ್ದ ಜ್ಯೋತಿ ಆಗಿದ್ದರು ಎಂದು ಗೊರೂರರು ಮಹಾತ್ಮರನ್ನು ಸ್ಮರಿಸಿದ್ದಾರೆ. ಗಾಂಧೀಜಿ ೧೯೪೬ ರಲ್ಲಿ ಮದ್ರಾಸಿನಲ್ಲಿದ್ದಾಗ ಅವರೊಂದಿಗೆ ಹತ್ತು ದಿನ ಕಳೆದರು. ಅನಂತರ ಪಳನಿ, ಮಧುರೈ ಮೊದಲಾದ ಕ್ಷೇತ್ರಗಳಲ್ಲಿ ಗಾಂಧೀಜಿಯವರೊAದಿಗೆ ಪ್ರವಾಸ ಕೈ ಗೊಂಡರು. ಈ ಪ್ರವಾಸ ಕಥನ ಗಾಂಧೀಜಿಯವರ ದಕ್ಷಿಣ ಯಾತ್ರೆ ಪುಸ್ತಕದಲ್ಲಿದೆ.ನವಜೀವನ ಯಂಗ್ ಇಂಡಿಯ ಪತ್ರಿಕೆಗಳಿಗೆ ಕಂಪೋಜಿಟರ್ ಆಗಿ ಕೆಲಸಕ್ಕೆ ಸೇರಿ ಮದರಾಸ್ ಲೋಕಮಿತ್ರ ಪತ್ರಿಕೆಯ ಉಪ ಸಂಪಾದಕರಾಗಿ, ಬೆಂಗಳೂರು ಕೆಂಗೇರಿಯಲ್ಲಿ ಗುರುಕುಲಾಶ್ರಮದ ವ್ಯವಸ್ಥಾಪಕರಾಗಿ ಮಾಸ್ತರಾಗಿದ್ದರು. ಖಾದಿ ವಸ್ತಾçಲಯದಲ್ಲಿ ಮಾರಾಟಗಾರರಾಗಿ ಖಾದಿ ಬೋರ್ಡಿನಲ್ಲಿ ಮ್ಯಾನೇಜರ್ ಆಗಿದ್ದರು.೧೯೩೮ ರಲ್ಲಿ ಗೊರೂರಿನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕೃಷಿಕ ಜೀವನದೊಂದಿಗೆ ಸಾಹಿತ್ಯ ಕೃಷಿ ಪ್ರಾರಂಭಿಸಿ ಗೊರೂರಿನಲ್ಲಿ ಯುವಕರನ್ನು ಸಂಘಟಿಸಿ ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆ ಮೊದಲಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಎಣ್ಣೆಗಾಣ, ಕೈಕಾಗದ, ಮೂಳೆಪುಡಿ, ಬೆಲ್ಲ, ಕೊಟ್ಟದ ಅಕ್ಕಿ, ಜೇನು ಸಾಕಣೆ, ಕಿತ್ತಳೆನಾರಿನ ಪ್ಯಾಕಿಂಗ್ ದಾರ, ತಾಟಿಬೆಲ್ಲ, ಚಾಪೆ ತಯಾರಿಸುವ ಗ್ರಾಮೋದ್ಯೋಗ ಆರಂಭವಾಯಿತು. ಗೊರೂರರ ಈ ಎಲ್ಲ ಕೆಲಸಗಳಲ್ಲಿ ಮತ್ತೋರ್ವ ಸ್ವಾತಂತ್ರö್ಯ ಹೋರಾಟಗಾರರು ಸಾಹುಕಾರ್ ಸಂಪತ್ತಯ್ಯAಗಾರ್ ಮತ್ತು ಗ್ರಾಮದ ಪ್ರಮುಖರು ಬೆಂಬಲ ನೀಡಿದರು. ಗೊರೂರಿನಲ್ಲಿ ೪೦ ದಿವಸ ವಯಸ್ಕರ ಶಿಕ್ಷಣ ಶಿಬಿರ ಏರ್ಪಡಿಸಿ ಪುತಿನ, ತೀನಂಶ್ರೀ ಕರೆಸಿದರು. ಆಗ ಸರ್ಕಾರ ಗೊರೂರರನ್ನು ಜಿಲ್ಲಾ ಆಡಳಿತ ಸಮಿತಿಗೆ, ಸ್ಥಳೀಯ ಶಿಕ್ಷಣ ಸಮಿತಿಗೆ ನಾಮಕರಣ ಮಾಡಿತು. ೧೯೩೯ ರಲ್ಲಿ ಸತ್ಯಾಗ್ರಹ ಕಾಲದಲ್ಲಿ ಸಲಹೆ ಕೊಡಲು ಗೊರೂರರೂ ಒಬ್ಬ ಸದಸ್ಯರಾಗಿದ್ದರು. ೧೯೪೧ ರಲ್ಲಿ ವಾರ್ಧಾದಲ್ಲಿ ಜರುಗಿದ ಎಐಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಕ್ವಿಟ್ ಇಂಡಿಯ ಚಳವಳಿಯಲ್ಲಿ ಪೊಲೀಸರು ಗೊರೂರರನ್ನು ಬಂಧಿಸಿ ಹಾಸನ, ಶಿವಮೊಗ್ಗ, ಸಾಗರ ಮತ್ತು ಬೆಂಗಳೂರು ಸೆರೆಮನೆಗಳಲ್ಲಿ ೧೪ ತಿಂಗಳು ಜೈಲಿನಲ್ಲಿ ಕಳೆದರು. ಸೆರೆಮನೆಯಲ್ಲಿ ಇದ್ದಾಗ ಹಳ್ಳಿಯ ಬಾಳು ಕೃತಿ ಅಚ್ಚಾಗುತ್ತಿತ್ತು. ಸೆರೆಮನೆ ಸೇರಿ ಮೂರು ವಾರಗಳಲ್ಲಿ ಟಾಲ್‌ಸ್ಟಾಯ್‌ರವರ ಕಾಸಕ್ಸ್ ಕಾದಂಬರಿಯನ್ನು ಮಲೆನಾಡವರು ಎಂಬ ಹೆಸರಿನಿಂದ ಅನುವಾದಿಸಿದರು. ಒಂದು ವಾರದೊಲ್ಲಿ ಪುಜರ್ನನ್ಮ ಕಾದಂಬರಿ ಬರೆದರು. ಸ್ವಾತಂತ್ರö್ಯವೇ ಧರ್ಮ ಎಂಬ ಕೃತಿಯ ಬಹುಭಾಗ ೧೯೪೨ ರಲ್ಲಿ ಸೆರೆಮನೆಯಲ್ಲಿ ಬರೆದಿದ್ದು. ಇವರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಸಂಪಾದಿಸಿದ ಇನ್ನೊಂದು ಮುಖ್ಯ ಸಂಗ್ರಹ ಕೋಲಾಟದ ಪದಗಳು. ವಾರದ ಬಿಡುವಿನ ದಿನದಲ್ಲಿ ಕೈದಿಗಳೆಲ್ಲರೂ ಒಟ್ಟಾಗಿ ಸೇರಿ ಭಜನೆ ಕೀರ್ತನೆ ಕೋಲಾಟದ ಪದ ಹಾಡುತ್ತಿದ್ದರು. ಗೊರೂರರು ನಾಲ್ಕಾರು ವಾರ ಅವರನ್ನು ಆಶ್ರಯಿಸಿ ಈ ಹಾಡುಗಳನ್ನು ಬರೆದುಕೊಂಡರು. ಸೆರೆಮನೆಯಿಂದ ಬಿಡುಗಡೆಯಾಗಿ ಜನಜಾಗೃತಿಗಾಗಿ ರಾಷ್ಟಿçÃಯ ಗ್ರಂಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಷ್ಟಿçÃಯ ಸಾಹಿತ್ಯ ಸಮಿತಿ ಸ್ಥಾಪಿಸಿದರು. ಸತಿ ಕಸ್ತೂರಿಬಾ, ಮಹದೇವ ದೇಸಾಯಿಯವರ ಕೃತಿಗಳು, ಮೌಲನಾ ಅಬುಲ್‌ಕಲಾಂ ಅಜಾದ್, ಸ್ವಾತಂತ್ರö್ಯವೇ ಧರ್ಮ, ತಾಯ್ನುಡಿಯಲ್ಲಿ ಶಿಕ್ಷಣ ಇವೇ ಗ್ರಂಥಗಳನ್ನು ಪ್ರಕಟಿಸಿದರು.ಭಾರತಕ್ಕೆ ಸ್ವಾತಂತ್ರö್ಯ ಬಂದರೂ ದೇಶೀಯ ಸಂಸ್ಥಾನಗಳ ಮಹಾರಾಜರು ತಮ್ಮ ಪ್ರಜೆಗಳಿಗೆ ಸ್ವಾತಂತ್ರö್ಯ ಕೊಡಲಿಲ್ಲ. ಅದಕ್ಕಾಗಿ ಬೇರೆ ಚಳವಳಿ ಬಲಿದಾನಗಳೇ ಬೇಕಾದವು. ಚಲೋಪ್ಯಾಲೆಸ್ ಚಳವಳಿಯಲ್ಲಿ ಗೊರೂರರ ಹಿರಿಯ ಮಗ ರಾಮಚಂದ್ರ ತುಮಕೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ವಿಷಯ ತಿಳಿದ ಗೊರೂರರು ನನ್ನ ಮಗ ಹುತಾತ್ಮನಾಗಿದ್ದಾನೆ. ಮುಂದಿನ ತಲೆಮಾರು ಅವನನ್ನು ನೆನೆಯುತ್ತದೆ ಎಂದರು. ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪನೆಯಾದ ಮೇಲೆ ಗೊರೂರು ೧೨ ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಈ ಸಂದರ್ಭ ಗೊರೂರರು ಮಾಡಿದ ಕೆಲಸಗಳಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣ, ಕನ್ನಡ ನಿಘಂಟು ಕನ್ನಡ ವಿಶ್ವಕೋಶ ಇವುಗಳ ರಚನೆಗಾಗಿ ಮಸೂದೆ ಮಂಡಿಸಿ ಕರ‍್ಯಗತ ಮಾಡಿಸಿದ್ದು.ಗೊರೂರರು ಒಂದು ಕಡೆ ಹೀಗೆ ಹೇಳುತ್ತಾರೆ. ನನ್ನ ಬಾಳನ್ನು ನಾನು ಹಿಂದಿಗುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ ತ್ಯಾಗ ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನಸಾಮಾನ್ಯರ ಜಾನಪದವೆಂದರೆ ನನಗೆ ಅವರಲ್ಲಿ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದು ಎಂಬುದು ನನ್ನ ನಂಬಿಕೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ.

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು Read Post »

ಇತರೆ, ಶಿಕ್ಷಣ

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ.

ಶಿಕ್ಷಣ ಸಂಗಾತಿ ಜಯಲಕ್ಷ್ಮಿ ಕೆ. “ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..”   ಶಿಕ್ಷಣ, ಉದ್ಯೋಗ, ಆರೋಗ್ಯ ಸಂವಹನ ಹೀಗೆ  ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಂತ್ರಜ್ಞಾನದ್ದೇ ಮೇಲುಗೈ. ವಿಜ್ಞಾನ  ತಂತ್ರಜ್ಞಾನವಿಲ್ಲದೆ  ನಮ್ಮ ಬದುಕೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ . ರಾಷ್ಟ್ರದ ಅಭಿವೃದ್ಧಿಯ ಮಾನದಂಡವೇ ತಂತ್ರಜ್ಞಾನವಾಗಿದೆ. ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ  ಮಕ್ಕಳಿಗಾಗಲಿ  ಅವರ ಪೋಷಕರಿಗಾಗಲೀ ಮಾನವೀಯ ಶಾಸ್ತ್ರಗಳ ಅಧ್ಯಯನ ಇಷ್ಟವಾಗುವುದಿಲ್ಲ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ತೀರಾ ಕಡಿಮೆ ಎಂದೇ ಹೇಳಬಹುದು.  ಎಷ್ಟೋ ಖಾಸಗಿ  ಕಾಲೇಜುಗಳಲ್ಲಿ ವಿಜ್ಞಾನ ವಾಣಿಜ್ಯ ವಿಭಾಗಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ.  ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಡುತ್ತಾ, ಗೆಡ್ಡೆ ಗೆಣಸು ಹಸಿ ಮಾಂಸಗಳನ್ನು ತಿನ್ನುತ್ತಾ, ವನ್ಯ ಮೃಗಗಳಂತೆ ಗುಹೆಗಳಲ್ಲಿ ಬದುಕುತ್ತಿದ್ದ ಮಾನವ  ಒಂದೆಡೆ ನೆಲೆ ನಿಂತು ಬಾಳಲು ಕಲಿತದ್ದೇ  ಒಂದು ಸುದೀರ್ಘ ಇತಿಹಾಸ. ಅನಾಗರಿಕತೆಯಿಂದ ಹಂತ ಹಂತವಾಗಿ  ಅಭಿವೃದ್ಧಿ ಹೊಂದುತ್ತಾ  ನಾಗರಿಕತೆಯೆಡೆಗೆ  ಸಾಗಿ ಬಂದ ಮಾನವ ಜೀವಯಾನದ ಕಥೆಗಳಲ್ಲಿ ಕಷ್ಟ -ಸುಖ, ಸೋಲು -ಗೆಲುವುಗಳ ಪಾಠವಿದೆ. ಮಾನವನ ಅಸ್ಥಿತ್ವ, ಸಂಸ್ಕೃತಿ ಮತ್ತು ಸಮಾಜದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವಂತಹ ಇತಿಹಾಸವೇ ಮೊದಲಾದ ಮಾನವೀಯ ಶಾಸ್ತ್ರಗಳ ಅಧ್ಯಯನ ಇಂದು ಬಲು ದೂರ ಸರಿದಿದೆ.  ಭೂತಕಾಲವನ್ನು ಅರ್ಥೈಸಿಕೊಂಡು ಭವಿಷ್ಯದ ಬಗೆಗೆ ಚಿಂತನೆಗೈಯುತ್ತಾ  ವರ್ತಮಾನದಲ್ಲಿ ಬದುಕುವ ಕಲೆಗಾರಿಕೆಯನ್ನು ಕಲಿಸಿಕೊಡುವ ಇತಿಹಾಸದ ಅಧ್ಯಯನವಾಗಲೀ . ಪ್ರಜೆಗಳ ಹಕ್ಕು ಕರ್ತವ್ಯ, ಸರಕಾರದ ನೀತಿ ನಿಯಮ, ಉದಾತ್ತ ವ್ಯಕ್ತಿಗಳ ಜೀವನ- ಸಾಧನೆ, ಪರಸ್ಪರರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವ ಜೀವನ ಕ್ರಮ, ಮನುಷ್ಯ ತನ್ನ ಸಮಾಜದೊಂದಿಗೆ ಮಾಡಿಕೊಳ್ಳಲೇ ಬೇಕಾದ ಹೊಂದಾಣಿಕೆ ಇತ್ಯಾದಿಗಳನ್ನು ತಿಳಿಸಿಕೊಡುವಂತಹ  ಇತರ ಮಾನವ ಶಾಸ್ತ್ರಗಳ ಅಧ್ಯಯನವಾಗಲೀ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿಲ್ಲ .  ಶ್ರುತಿ  ಮತ್ತು ಸ್ಮೃತಿ ಆಧಾರಿತ ಗುರುಕುಲ ಶಿಕ್ಷಣ ಪದ್ಧತಿ ಬದಲಾವಣೆ ಹೊಂದುತ್ತಾ ಹೊಂದುತ್ತಾ “ತಂತ್ರಜ್ಞಾನವೇ ಶಿಕ್ಷಣದ ಜೀವಾಳ ” ” ಶಿಕ್ಷಣ ಎಂದರೆ   ವಿಜ್ಞಾನ -ತಂತ್ರಜ್ಞಾನ ಎನ್ನುವಲ್ಲಿಗೆ ನಮ್ಮ ಶಿಕ್ಷಣ ಕ್ರಮ ಬಂದು ತಲುಪಿದೆ. ಗುರು-ಶಿಷ್ಯ ಸಂಬಂಧ, ಕಲಿಕಾ ಕ್ರಮ, ಪಠ್ಯಕ್ರಮ, ಕಲಿಕೆಯ ಉದ್ದೇಶ, ಬೋಧನಾ ವಿಧಾನ, ಎಲ್ಲವೂ ಬದಲಾಗಿದೆ.  ಕಲಿಕಾ ವಾತಾವರಣವಷ್ಟೇ ಅಲ್ಲ, ಶಿಕ್ಷಣದ ಮೂಲೋದ್ದೇಶವೇ  ಬದಲಾಗಿರುವ ಯುಗವಿದು. ಶಿಕ್ಷಣದೊಂದಿಗೇ ಬೆಸೆದು ಹೋಗಿದ್ದ ಅಧ್ಯಾತ್ಮ ಇಂದು ಶಿಕ್ಷಣ ವ್ಯವಸ್ಥೆಯಿಂದ  ಕಾಣೆಯೇ ಆಗಿದೆ ಎಂದರೂ ತಪ್ಪಾಗಲಾರದು. ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಜಾಗತಿಕ ವೃತ್ತಿ ಜೀವನಕ್ಕೆ ತಯಾರಿಗೊಳಿಸುವ ಭರದಲ್ಲಿ ತಾಂತ್ರಿಕ ಶಿಕ್ಷಣಕ್ಕೇ ಆಧ್ಯತೆ ನೀಡುತ್ತಿರುವ ನಾವು ಮಾನವೀಯ ಶಾಸ್ತ್ರಗಳನ್ನೇ ಮರೆತಿದ್ದೇವೆ. ಇತಿಹಾಸ, ತತ್ವಜ್ಞಾನ,ಅರ್ಥಶಾಸ್ತ್ರ ಮನಃಶಾಸ್ತ್ರ,ಸಮಾಜಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡುವ  ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ . ಪ್ರಾಥಮಿಕ ಪ್ರೌಢ ಹಂತದಲ್ಲಿ ಅಂಕಗಳಿಕೆ, ನಂತರ ಮೆಡಿಕಲ್ ಇಂಜಿನಿಯರಿಂಗ್ ಸೀಟ್ ಗಳಿಕೆ ತದನಂತರ ಹೆಚ್ಚು ಸಂಬಳದ ಉದ್ಯೋಗ  ಗಳಿಕೆ ಈ ಮೂರನ್ನೇ ಶಿಕ್ಷಣದ ಉದ್ದೇಶ ಎಂದು ಪರಿಭಾವಿಸಿದ್ದರ ಪರಿಣಾಮ ಮಾನವ ಶಾಸ್ತ್ರಗಳ ಅಧ್ಯಯನ ದೂರ ಉಳಿಯಿತು. ಇದರ ಜೊತೆಗೆ ಮೌಲ್ಯಾಧರಿತ ಶಿಕ್ಷಣವೂ…. ವಿಜ್ಞಾನ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ  ಗಳಿಸಿ ಐಟಿ ಬಿಟಿ  ಕಂಪನಿಗಳಲ್ಲಿ   ಉದ್ಯೋಗ ಗಳಿಸಿಕೊಂಡಿರುವ ಯುವ ಜನಾಂಗ  ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಪರಿಸರ, ಸ್ನೇಹಿತ ವರ್ಗದಿಂದ  ಹಂತ ಹಂತವಾಗಿ ದೂರವಾಗುತ್ತಿದ್ದು, ಅವರು ಭಾವನಾತ್ಮಕವಾಗಿ ಬಡವಾಗುತ್ತಿದ್ದಾರೆ. ಈ ನಡುವೆ ತಂತ್ರಜ್ಞಾನದ ಬಳಕೆಯಿಂದ  ಅಮಾಯಕರನ್ನು ಭಾವನಾತ್ಮಕವಾಗಿ ಬೆದರಿಸಿ ಹಣ ಲೂಟಿ ಮಾಡುವ ಸಣ್ಣ ವಯಸ್ಸಿನ ವಿಪರೀತಮತಿಗಳು  ಅಲ್ಲಲ್ಲಿ ತಲೆಯೆತ್ತಿವೆ . ಇಂತಹ ಅಪರಾಧಿಗಳನ್ನು ಕಂಡುಹಿಡಿಯುವುದೇ ಸರಕಾರಕ್ಕೊಂದು ದೊಡ್ಡ ಸವಾಲಾಗಿದೆ. ವಿಜ್ಞಾನ ತಂತ್ರಜ್ಞಾನ ವರಿಯದ ಕಳ್ಳನೊಬ್ಬ ನಮ್ಮ ಹಣ ವಾಚು,ಚಿನ್ನ ಇತ್ಯಾದಿ ಬೌತಿಕ ವಸ್ತುಗಳನ್ನಷ್ಟೇ ಕದ್ದರೆ ತಂತ್ರಜ್ಞಾನದಲ್ಲಿ ಪಳಗಿದ ಕಳ್ಳ ನಮ್ಮ ಹಣ ಸಂಪತ್ತುಗಳ  ಜೊತೆ ಜೊತೆಗೆ  ನಮ್ಮ ಆರೋಗ್ಯ,ಮಾನ, ಕೊನೆಗೆ ಜೀವವನ್ನೇ  ಕಸಿದುಕೊಳ್ಳುತ್ತಾನೆ. ” ಯಂತ್ರಗಳಿಗೆ ಅಂತಃಕರಣವಿಲ್ಲ ” ನಿಜ. ಆದರೆ ಯಾಂತ್ರಿಕ ಬದುಕು ನಡೆಸುತ್ತಿರುವ ಇಂದಿನ ಅದೆಷ್ಟೋ ಯುವಕ ಯುವತಿಯರಿಗೆ ಪ್ರೀತಿ, ಕರುಣೆ, ಸಹನೆ, ಸಹಾನುಭೂತಿ, ಕೃತಜ್ಞತಾ ಭಾವ ಇವಾವುವೂ ಇಲ್ಲ. ಇದಕ್ಕೆ ಇತ್ತೀಚೆಗೆ ಸುದ್ದಿ ಯಾಗುತ್ತಿರುವ ಅವರ ವರ್ತನೆಗಳೇ ಸಾಕ್ಷಿ. ತಮ್ಮ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾದರೆ ಹೊತ್ತ ತಂದೆಯೋ, ಹೆತ್ತ ತಾಯಿಯೋ, ರಕ್ತ ಹಂಚಿಕೊಂಡು ಹುಟ್ಟಿದ ಅಕ್ಕ ತಂಗಿಯರೋ.. ಯಾರಾಗಿದ್ದರೂ ಸರಿಯೇ, ಅವರನ್ನು ಕೊಚ್ಚಿ ಕೊಲ್ಲುವಷ್ಟು ಕ್ರೌರ್ಯ, ಮೃಗೀಯ ವರ್ತನೆ ತೋರಿಬಿಡುತ್ತಾರೆ. ಆಟಿಕೆಗಳನ್ನು ಒಗೆದಂತೆ  ತಮ್ಮೊಡನೆಯೇ ಇದ್ದ ಜೀವಗಳನ್ನು ಕಂದಕಕ್ಕೆ ನೂಕಿ ಬದುಕಿನಲ್ಲಿ ನಲಿವು ಕಾಣಬೇಕೆಂದು ಹಂಬಲಿಸುತ್ತಾರೆ!  ಅಂತಃಕರಣ ಅರಳಿಸುವ ಶಿಕ್ಷಣ, ಕೂಡಿ ಬಾಳುವ ಮನೋಭಾವ ಶಾಲಾ ಕಾಲೇಜುಗಳಲ್ಲಿ ಕಲಿತಿಲ್ಲ. ಸೋಲು ಗೆಲುವುಗಳಲ್ಲಿ ಸಮತೋಲನವನ್ನು ಸಾಧಿಸುವ ಕಲೆಗಾರಿಕೆಯನ್ನು ರೂಢಿ ಮಾಡಿಕೊಂಡಿಲ್ಲ. ಮನೆಯಲ್ಲಿ ಮಾನವಿಕ ಶಾಸ್ತ್ರ ಗಳನ್ನು ಹೇಳಲು – ಕೇಳಲು ಯಾರಿಗೂ ಬಿಡುವಿಲ್ಲ. ದೊಡ್ಡವರನ್ನು ನೋಡಿ ಕಲಿಯಲು ಕೂಡು ಕುಟುಂಬ ವ್ಯವಸ್ಥೆ ಮೊದಲೇ ಇಲ್ಲ. ಸಮಾಜಮುಖಿಯಾಗಿ ಬೆಳೆಯಲು ಇಂದಿನ ಮಕ್ಕಳಿಗೆ ಯೋಗ್ಯ ಅವಕಾಶಗಳಾಗಲೀ, ಸಾಮಾಜಿಕ ಭದ್ರತೆಯಾಗಲೀ ಇಲ್ಲ. ಹಸಿವು, ಬಡತನ,ಕಷ್ಟ, ಇತ್ಯಾದಿಗಳ ಅರಿವಿಲ್ಲದೆ’ ಬದುಕೆಂದರೆ ತಮ್ಮ ವೈಯಕ್ತಿಕ ಸುಖ  ಸಂತೋಷಗಳ ಒಂದು ಮೊತ್ತ ‘ ಎಂದೇ ಭಾವಿಸಿಕೊಂಡಿರುವ ಯುವ ಮನಸುಗಳು ಆ ಸುಖ ಸಾಧನೆಗಾಗಿ ಯಾರಿಗೆ ಯಾವ ಕೆಡುಕು ಮಾಡುವುದಕ್ಕೂ ಹೇಸುವುದಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನ  ಕೂಡಾ ಅವರಲ್ಲಿದೆ!! ಹುಟ್ಟಿ ಬೆಳೆದ ಸಮಾಜದ ಋಣ ತನ್ನ ಮೇಲಿದೆ, ಆದ ಕಾರಣ  ಇತರರಿಗೆ ಬಾಳಗೊಡುತ್ತಾ  ತಾನು ಬಾಳಬೇಕು ಎನ್ನುವ ಸಾಮಾನ್ಯ ಜ್ಞಾನವಿಲ್ಲ ಮಾತ್ರ ಇಲ್ಲ!!!ಅವಿದ್ಯಾವಂತರು ಮಾಡುವ ಮೋಸ ವಂಚನೆಗಳಿಗಿಂತ ವಿದ್ಯಾವಂತ (ಅ ) ನಾಗರಿಕರು ಮಾಡುವ ಮೋಸ ವಂಚನೆಗಳು ಘನ ಘೋರ !!  ಸಾಮಾನ್ಯವಾಗಿ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವ ಹಂತಕ್ಕೆ ಬಂದಾಗ ಅವರ ಜೊತೆಗಿನ ಪೋಷಕರ ಓಟ – ಒಡನಾಟ ನಿಧಾನವಾಗುತ್ತದೆ ಅಥವಾ ಅನಿವಾರ್ಯ  ಪರಿಸ್ಥಿತಿಗಳಿಂದಾಗಿ  ನಿಂತೇ ಹೋಗುತ್ತದೆ. ಆದರೆ ಮಕ್ಕಳ  ನಿಜವಾದ  ಬದುಕು ಆರಂಭವಾಗುವುದೇ ಅಲ್ಲಿಂದ. ತನ್ನನ್ನು  ಪ್ರತ್ಯೇಕವೆಂದು ಭಾವಿಸದೆ ತಾನೂ ಸಮಾಜದ ಒಂದು ಭಾಗ ಎಂದು ಅರಿತುಕೊಳ್ಳುತ್ತಾ, ಭಾವನಾತ್ಮಕವಾಗಿ ಪರಿ ಪರಿಪಕ್ವತೆಯನ್ನು ಪಡೆದುಕೊಳ್ಳುತ್ತಾ  ಯುವ ಜನತೆ ದೇಶದ ಆಸ್ತಿಯಾಗಿ ಉಳಿಯಬೇಕಾದರೆ  ತಂತ್ರಜ್ಞಾನದ ಜೊತೆ ಜೊತೆಗೆ ಮಾನವ ಶಾಸ್ತ್ರಗಳ ಅಧ್ಯಯನವೂ  ಶಿಕ್ಷಣದಲ್ಲಿ ಮಿಳಿತಗೊಂಡಿರಬೇಕು. ಜಯಲಕ್ಷ್ಮಿ ಕೆ ಮಡಿಕೇರಿ.

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ. Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಅಳು ಬಂದರೆ ಅತ್ತು ಬಿಡು” ಅಳು ಮನವೆ ತಡೆದುಕೊಳ್ಳಬೇಡಈ ಕಣ್ಣೀರು ದೌರ್ಬಲ್ಯ ಅಲ್ಲವೊಅದಾರ ಮೇಲಿನ ಪ್ರೀತಿಯ ಸಾಕ್ಷಿಗೊಮುನಿಸಿಗೊ ನಿನ್ನ ಮನಸ ಹಗುರಾಗಲುಅತ್ತೆ ಬಿಡು ಅಳು ಬಂದರೆ. ಗಂಟಲು ಕಟ್ಟಿ ಮಾತು ಬಾರದಾದಾಗಕಣ್ಣುಗಳೇ ಮಾತಾಡಲಿ ನಿನ್ನೊಡನೆಒಂದೊಂದು ಹನಿಯೂ ಹೇಳಿವೆ“ನೆನಪುಗಳೆ ನೆನಪಾಗ್ತೀರಿ” ಅಂತ.   ಜನ ಏನಂದಾರೆಂದು ನೋಡಬೇಡಗಂಡಸರು ಅಳಬಾರದು ಅನ್ನೋದೆಲ್ಲ ಸುಳ್ಳುಅವಳು ಹೋದ ನೋವಿಗೆ ಅಳದಿದ್ರೆ  ಆ ಎದೆ ಕಲ್ಲು ಆಗಿರಬೇಕು ಎನ್ನುವರಲ್ಲ. ಅಳು, ಆದ್ರೆ ಆ ಹನಿಗಳಲ್ಲಿ ಮುಳುಗಬೇಡಅದೇ ಹನಿಗಳಿಂದಲೆ ಎದ್ದು ನಿಲ್ಲುನಿನ್ನ ಕಣ್ಣೀರು ಒರೆಸೋ ಕೈ ಇಲ್ಲಎಂದು ಕೊರಗಬೇಡ ಆಕಾಶದಿಂದಅವಳು ನೋಡುವಳಂತೆ. ಅಳು ನೀನು ಮನಸಾರೆ ಅಳು ಮನವೆ  ಅತ್ತ ಮೇಲೆ ಮನಸ್ಸು ಹಗುರ ಆಗವುದಂತೆಮತ್ತೆ ಬದುಕೋಕೆ ಶಕ್ತಿ ಬರುವುದಂತೆಅವಳಿಗಿಷ್ಟ ಆಗೋ ಹಾಗೆ ನಗೋಕೆದಾರಿ ಸಿಗುವುದಂತೆ.   ಅತ್ತೆಯಾ ಅತ್ತು ಬಿಡು ಅಳು ಬಂದರೆಅತ್ತು ಹಗುರ ಆಗು ನಾನಿದ್ದೀನಿ ನಿನ್ನ ಜೊತೆಗೆ. ಇಂತಿ ನಿನ್ನ  ಮನ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು” Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-26 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕನ್ನಡಾಬಿಮಾನ *ಗಡಿ ಭಾಗವೆಂದರೆ |ಕಡಿಮೆ ಇಲ್ಲ ಕನ್ನಡಕೆ ಉಡಿಯ ತುಂಬುವೆ ಕನ್ನಡ -ತಾಯಿಗೆಒಡವೆಯ ಇಡಿಸುವೆ ಪದಗಳ||*ಅಂತ ಹಾಡುತ ಜಯದೇವಿ ತಾಯಿಯವರು ಗಡಿಭಾಗದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.  ಗಡಿಭಾಗದಲ್ಲಿ ವಾಸಿಸುವುದರಿಂದ ಕನ್ನಡದ ಮೇಲಿನ ಪ್ರೀತಿ, ಗೌರವ ಅಥವಾ ನಿಷ್ಠೆ ಕಡಿಮೆಯಾಗುವುದಿಲ್ಲ  ಸ್ಪಷ್ಟಪಡಿಸುತ್ತ* ಉಡಿಯ ತುಂಬುವೆ ಕನ್ನಡ ಪದಗಳ …ಎಂಬುದು ಸಾಂಕೇತಿಕವಾಗಿದೆ. ಮುತ್ತೈದೆಯಾದ ಕನ್ನಡಾಂಬೆಯ ಉಡಿಯನ್ನು ಕನ್ನಡದ ಮಧುರ ಪದಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯಿಂದ ತುಂಬಿಸಿ ಅವಳನ್ನು ಗೌರವಿಸುವ ಸಂಕಲ್ಪವನ್ನು ವ್ಯಕ್ತಪಡಿಸುತ್ತ…. *ಒಡವೆ ಇಡಿಸುವೆ ಕನ್ನಡ ಪದಗಳ* ಎಂಬುದು ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಧರಿಸುವ ಅಮೂಲ್ಯ ಆಭರಣಗಳೆಂಬ ಭಾವವನ್ನು ತಿಳಿಸುತ್ತದೆ. ಬಂಗಾರ, ಬೆಳ್ಳಿ ಅಥವಾ ರತ್ನಗಳಿಗಿಂತ  ಶ್ರೇಷ್ಠ ಕನ್ನಡದ  ಪದಗಳು…. ಸಾಹಿತ್ಯ ಮತ್ತು ಸಂಸ್ಕೃತಿಯೇ ಕನ್ನಡಾಂಬೆಯ ನಿಜವಾದ ಅಲಂಕಾರವೆಂದು ಸಾರುವ ತ್ರಿಪದಿ ಗಡಿಭಾಗದ ಕನ್ನಡಿಗರ ಅಚಲ ಕನ್ನಡಾಭಿಮಾನವನ್ನು, ಕನ್ನಡ ತಾಯಿಯನ್ನು ಪದಗಳ ಮೂಲಕ ಆರಾಧಿಸುವ ಮನೋಭಾವವನ್ನು ಹಾಗೂ ಕನ್ನಡ ಭಾಷೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮತ್ತಷ್ಟು ಶ್ರೀಮಂತಗೊಳಿಸುವ ಸಂಕಲ್ಪವನ್ನು ಸುಂದರವಾಗಿ ಅಭಿವ್ಯಕ್ತಿಸುತ್ತ… ಮನದಾಳಕ್ಕೆ ಇಳಿಯುವಂತಹ ತ್ರಿಪದಿಗಳು ರಚಿಸಿದರು…. ಗಡಿನಾಡಿನಲ್ಲಿ ಬದುಕಿದ ತಾಯಿಯವರು‌…ನಿಸರ್ಗದ ಮಡಿಲಿನಲ್ಲಿ ಹುಟ್ಟಿದ ನದಿಯೊಂದು ತನ್ನ ತಾಯಿನಾಡನ್ನು ತೊರೆದು ಹರೆವಂತೆ ಕನ್ನಡದ ಅಸ್ಮಿತೆಯನ್ನು ಎಲ್ಲೆಡೆ ಹರಡಿದವರಲ್ಲಿ ಒಬ್ಬರಾದರು!!!  ಜಯದೇವಿ ತಾಯಿಯವರ ಹೃದಯವೂ ಕನ್ನಡದ ನೆಲ, ಕನ್ನಡದ ಜನ ಮತ್ತು ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಬಿಟ್ಟು ದೂರವಾಗಲಿಲ್ಲ.ಬೆಟ್ಟಗಳಂತೆ ಅಚಲವಾದ ಅವರ ಕನ್ನಡ ಪ್ರೇಮ, ಸಾಗರದಷ್ಟು ವಿಶಾಲವಾಗಿತ್ತು. ಮಳೆಯ ಹನಿಗಳು ಭೂಮಿಗೆ ಜೀವ ತುಂಬುವಂತೆ, ಅವರ ಕನ್ನಡದ ಪ್ರೀತಿ ಸಾವಿರಾರು ಜನರ ಮನಗಳಲ್ಲಿ ಭಾಷೆಯ ಮೇಲಿನ ಗೌರವವನ್ನು ಅರಳಿಸಿತು.ವಸಂತ ಬಂದಾಗ ಮರಗಳು ಹೊಸ ಚಿಗುರು ಬಿಡುವಂತೆ, ತಾಯಿಯವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಹೊಸ ಚೈತನ್ಯ ಮೊಳೆಯುತ್ತಿತ್ತು. ಪರಿಮಳವನ್ನು ಎಲ್ಲೆಡೆ ಹರಡುವ ಹೂವಿನಂತೆ, ಅವರ ಕನ್ನಡದ ಅಭಿಮಾನ ಎಲ್ಲೆಡೆ ಪಸರಿಸಿತು. ಅವರು ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ನೋಡದೆ, ಬದುಕಿನ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಯ ಭಾಷೆಯಾಗಿ ಕಂಡರು. ಜಯದೇವಿ ತಾಯಿಯವರಿಗೆ ಕನ್ನಡವೇ ಉಸಿರು, ಅವರ ಆತ್ಮ, ಅವರ ಬದುಕಿನ ಧ್ಯೇಯವಾಗಿತ್ತು….  ಕನ್ನಡವನ್ನೇ ಬದುಕಿದರು…!!!ಅವರ ಪ್ರತಿಯೊಂದು ಮಾತಿನಲ್ಲಿ ಕನ್ನಡದ ಲಾಲಿತ್ಯ,ಪ್ರತಿಯೊಂದು ಬರಹದಲ್ಲಿ ಕನ್ನಡದ ಸೌಂದರ್ಯ, ಪ್ರತಿಯೊಂದು ಕಾರ್ಯದಲ್ಲಿ ಕನ್ನಡದ ಪರಿಮಳ ತುಂಬಿಕೊಂಡಿತ್ತು. ಅವರ ದೃಷ್ಟಿಯಲ್ಲಿ ಕನ್ನಡ ಎಂದರೆ ಕರುಣೆ, ಸಂಸ್ಕಾರ, ಶರಣ ತತ್ವಗಳ ಪ್ರತಿಪಾದನೆ, ಜ್ಞಾನ ಮತ್ತು ಆತ್ಮಗೌರವದ ಪ್ರತೀಕ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಓದಬೇಕು, ಕನ್ನಡದಲ್ಲೇ ಯೋಚಿಸಬೇಕು ಎಂಬ ಆಶಯವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು. ಅವರಿಗೆ ಕನ್ನಡ ತಾಯಿ ಎಂದರೆ ದೇವತೆ. ತಾಯಿಯ ಮಡಿಲು ಮಗುವಿಗೆ ಹೇಗೆ ಸುರಕ್ಷಿತ ಆಶ್ರಯವೋ, ಹಾಗೆಯೇ ಕನ್ನಡ ಭಾಷೆ ಕನ್ನಡಿಗರಿಗೆ ಆತ್ಮೀಯ ನೆಲೆ ಎಂದು ಅವರು ನಂಬಿದ್ದರು. ಆ ಕಾರಣಕ್ಕಾಗಿಯೇ ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ಕೂ ಅವರು ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದರು. ಕನ್ನಡದ ಮೇಲಿನ ಅವರ ಪ್ರೀತಿ ಆಕಾಶದಷ್ಟು ಅಪಾರ, ಭೂಮಿಯಷ್ಟು ಸಹನಶೀಲ, ನದಿಯಷ್ಟು ನಿರಂತರ, ವಟವೃಕ್ಷದಷ್ಟು ಆಶ್ರಯದಾಯಕವಾಗಿತ್ತು. ಕನ್ನಡದ ಗೌರವ ಕುಂದಿದಾಗ ಅವರ ಮನ ನೋಯುತ್ತಿತ್ತು, ಕನ್ನಡದ ಕೀರ್ತಿ ಹೆಚ್ಚಾದಾಗ ಅವರ ಮುಖ ಅರಳಿದ ಹೂವಿನಂತೆ ಸಂತೋಷದಿಂದ ಕಂಗೊಳಿಸುತ್ತಿತ್ತು.ಜಯದೇವಿ ತಾಯಿಯವರ ಕನ್ನಡಾಭಿಮಾನ ಇಂದು ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶ. ಭಾಷೆಯನ್ನು ಪ್ರೀತಿಸುವುದು ಎಂದರೆ  ಭಾಷೆಯ.. ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಕನ್ನಡಾಭಿಮಾನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾರಿ ತೋರಿಸಿದರು.  *ಶರಣ ಸಾಹಿತ್ಯವು ….ಕನ್ನಡಾಂಬೆಯ ದಿವ್ಯ ಬೆಳಕು*ಶರಣ ಸಾಹಿತ್ಯವು ಕನ್ನಡ ನಾಡಿನ ಆತ್ಮ, ಕನ್ನಡ ಭಾಷೆಯ ದಿವ್ಯ ಬೆಳಕು, ಕನ್ನಡಾಂಬೆಗೆ ಬೆಳಗುವ ಅಮರ ದೀಪವಾಗಿದೆ. ಇದು  ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿ. ಅಜ್ಞಾನ, ಅಂಧಶ್ರದ್ಧೆ, ಜಾತಿ-ಮತದ ಸಂಕೋಲೆಗಳನ್ನು ಕಳಚಿ ಸಮಾನತೆ, ಪ್ರೀತಿ, ಕರುಣೆ, ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿದ ಮಹಾನ್ ಚಳುವಳಿ ನಡೆದದ್ದು ವಚನ ಸಾಹಿತ್ಯದ ಮೂಲಕ ಕನ್ನಡದಲ್ಲಿ ಅಂತ ಹೇಳುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದರು. ಅರಮನೆಯ ಭಾಷೆಯಾಗಿದ್ದ ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ ರೂಪಿಸಿದರು. ಅವರ ವಚನಗಳು ಇಂದಿಗೂ ದಾರಿದೀಪಗಳಾಗಿ ಹೊಳೆಯುತ್ತಿವೆ. ಆದ್ದರಿಂದ ಶರಣ ಸಾಹಿತ್ಯವನ್ನು ಕನ್ನಡದ ದಿವ್ಯ ಬೆಳಕು ಎಂದು ಕರೆಯುವುದು ಅತ್ಯಂತ ಸಮಂಜಸ. *ಕತ್ತಲನ್ನು ಓಡಿಸುವ ಸೂರ್ಯನ ಕಿರಣಗಳಂತೆ, ಶರಣ ಸಾಹಿತ್ಯವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಹರಡುವದೆಂದು ಜಯದೇವಿ ತಾಯಿಯವರು ಅಭಿಮಾನದಿಂದ ನುಡಿಯವರು * ಮಳೆಯು ಭೂಮಿಯನ್ನು ಹಸನಾಗಿಸುವಂತೆ, ಈ ಸಾಹಿತ್ಯವು ಮನಸ್ಸುಗಳನ್ನು ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಹಸನಾಗಿಸಿದೆಂದು.  ಕನ್ನಡಿಗರ ಅಮೂಲ್ಯ ಸಂಪತ್ತಾಗಿ….ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗಿರುವ ಶ್ರೇಷ್ಠ ಪರಂಪರೆಯಾಗಿದೆ. ಶರಣ ಸಾಹಿತ್ಯದ ಬೆಳಕು ಎಂದಿಗೂ ಆರದು. ಅದು ಪ್ರತಿಯೊಂದು ಕನ್ನಡಿಗನ ಹೃದಯದಲ್ಲಿ ಸತ್ಯದ ಜ್ಯೋತಿಯಾಗಿ, ಸಮಾನತೆಯ ಸಂದೇಶವಾಗಿ, ಮಾನವೀಯತೆಯ ಮಹಾಪ್ರಕಾಶವಾಗಿ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ. ಕನ್ನಡ ಇರುವವರೆಗೆ, ಕನ್ನಡದ ದಿವ್ಯ ಬೆಳಕಾಗಿ ಶರಣ ಸಾಹಿತ್ಯವು ಅನಂತ ಕಾಲದವರೆಗೆ ಜನಮನಗಳನ್ನು ಪ್ರಕಾಶಮಾನಗೊಳಿಸುತ್ತಲೇ ಇರುತ್ತದೆ. ಎಂದು ರಾಜಾರೋಷವಾಗಿ ಎಲ್ಲ ಭಾಷಣಗಳಲ್ಲಿ ತಾಯಿಯವರು ಸಾರುತ್ತಿದ್ದರು. *ಕನ್ನಡದ ದಿವ್ಯ ಬೆಳಕಾದ ಶರಣ ಸಾಹಿತ್ಯವು ಕನ್ನಡವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿತು ಅಂತ ಜಯದೇವಿ ತಾಯಿಯವರು ನುಡಿಯುತ್ತಿದ್ದರು…!!! ಹನ್ನೆರಡನೇ ಶತಮಾನದಲ್ಲಿ ಶರಣರ ವಚನ ಕ್ರಾಂತಿಯು ಇಡೀ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಆದರೆ ಕಾಲಕ್ರಮೇಣ, ವಿಶೇಷವಾಗಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಹಲವು ಶತಮಾನಗಳ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಂದ ತೆಲುಗು, ಮರಾಠಿ ಹಾಗೂ ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಕನ್ನಡ ಭಾಷೆಯ ಬಳಕೆ, ಅದರ ಬಳಕೆ ಮತ್ತು ಶರಣ ಸಾಹಿತ್ಯದ ಅರಿವು ಅನೇಕ ಪ್ರದೇಶಗಳಲ್ಲಿ ಕ್ಷೀಣಿಸತೊಡಗಿತು. ಇಂತಹ ಸಂದರ್ಭದಲ್ಲಿ, ಕನ್ನಡದ ಆತ್ಮಸ್ವರೂಪವಾಗಿರುವ ಶರಣ ಸಾಹಿತ್ಯದ ಜ್ಯೋತಿಯನ್ನು ಮತ್ತೆ ಜನಮನಗಳಲ್ಲಿ ಪ್ರಜ್ವಲಿಸುವ ಮಹತ್ತರ ಸಂಕಲ್ಪವನ್ನು ಜಯದೇವಿ ತಾಯಿಯವರು ಕೈಗೊಂಡರು. ವಚನ ಸಾಹಿತ್ಯವನ್ನು ಮನೆಮನೆಗೆ, ಮನಸ್ಸುಮನಸ್ಸಿಗೆ ತಲುಪಿಸುವ ಮೂಲಕ ಕನ್ನಡದ ಆತ್ಮಗೌರವವನ್ನು ಮರುಜಾಗೃತಗೊಳಿಸಿದರು. ಅವರ ಪ್ರಯತ್ನವು ಸಾಹಿತ್ಯದ ಪ್ರಸಾರ ಮಾಡುತ…  ಕನ್ನಡದ ಮೆರುಗನ್ನು ಪುನರುಜ್ಜೀವನಗೊಳಿಸುವ ಶರಣರ ಮೌಲ್ಯಗಳ ಪುನರ್‌ಸ್ಥಾಪನೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಮಹಾಯಜ್ಞವಾಗಿತ್ತು. ಸತ್ಯಶರಣರ ಪಾದವ ನೆನೆದರೆ |ಚಿಂತೆ ಚಿತೆಯು ಶಮನಾಗುವದು ||ಶಾಂತ ಚಿತ್ತ ನಿಜ ಹಂತವನೇರುತ |ತಸಂತಸದಿ ನಲಿದಾಡುವದು||ಎನ್ನುತ…..ಶರಣರ ವಚನಗಳನ್ನು ಜನಜೀವನದೊಂದಿಗೆ ಬೆಸೆದು, ಕನ್ನಡದ ದಿವ್ಯ ಬೆಳಕನ್ನು ಮತ್ತೆ ಪ್ರಜ್ವಲಿಸಿದ ಸಾಂಸ್ಕೃತಿಕ ಸಾಧಕಿಯಾಗಿ ಜಯದೇವಿ ತಾಯಿಯವರು ಚಿರಸ್ಮರಣೀಯರಾಗಿದ್ದಾರೆ. ಅವರ ಸೇವೆಯಿಂದ ಶರಣ ಸಾಹಿತ್ಯವು ಮತ್ತೊಮ್ಮೆ ಜನಮನಗಳಲ್ಲಿ ಜ್ಞಾನಜ್ಯೋತಿಯಾಗಿ ಹೊಳೆಯಿತು…. ಕನ್ನಡದ ಹೊಳಪು ಹೊಸ ಉತ್ಸಾಹದಿಂದ ನಾಡಿನಾದ್ಯಂತ ಹರಡಿತು. ಜಯದೇವಿ ತಾಯಿಯವರಲ್ಲಿ ಶರಣ ಸಾಹಿತ್ಯದ ಮೇಲಿನ ಅಭಿರುಚಿ ಬಾಲ್ಯದಲ್ಲಿಯೇ ಮೊಳಕೆಯೊಡೆದಿತ್ತು. ವಚನಗಳಲ್ಲಿದ್ದ  ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಸರಳವಾದ ಜೀವನದರ್ಶನವು ಅವರ ಮನಸ್ಸನ್ನು ಆಳವಾಗಿ ಸೆಳೆದಿತ್ತು.ವಚನಗಳನ್ನು ಓದಿ ಅರ್ಥೈಸಬೇಕೆಂಬ ಅಪಾರ ಜಿಜ್ಞಾಸೆಯೇ ಅವರಿಗೆ ಕನ್ನಡ ಕಲಿಯುವ ಪ್ರೇರಣೆಯಾಯಿತು.ಅಕ್ಷರಜ್ಞಾನವನ್ನು ಗಳಿಸುವುದಕ್ಕಾಗಿಯೇ,  ಶರಣರ  ವಚನಗಳ  ಅಮೃತ ಸತ್ವವನ್ನು ಆಸ್ವಾದಿಸುವ ಮಹದಾಸೆಯಿಂದ ಅವರು ಕನ್ನಡವನ್ನು ಅಭ್ಯಾಸ ಮಾಡಿದರು. ಕನ್ನಡ ಭಾಷೆಯನ್ನು  ಸಂವಹನದ ಮಾಧ್ಯಮವಾಗಿ..ಶರಣರ ಚಿಂತನೆಗಳ ಅಪೂರ್ವ ಲೋಕಕ್ಕೆ ಕರೆದೊಯ್ಯುವ ಪವಿತ್ರ ಸೇತುವೆಯೆಂದು ಭಾವಿಸಿದರು.ವಚನಗಳ ಮೇಲಿನ  ಅಪಾರ ಪ್ರೀತಿ, ಅಧ್ಯಯನಶೀಲತೆ ಮತ್ತು ಕನ್ನಡಾಭಿಮಾನವೇ ಮುಂದೆ ಅವರನ್ನು ಶರಣ ಸಾಹಿತ್ಯದ ಪ್ರಚಾರಕಿ, ಕನ್ನಡ ಸಂಸ್ಕೃತಿಯ ಮುಂಚೂಣಿ ಸೇವಕಿ ಹಾಗೂ ವಚನ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಮಹಾನ್ ಸಾಧಕಿಯನ್ನಾಗಿ ರೂಪಿಸಿತು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮೌನ ಯೋಗಿ ಶ್ರೀ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ.  ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ. ವ್ಯಕ್ತಿತ್ವ ಮತ್ತು ಜೀವನ  ಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು. ಮೌನಯೋಗಿ: ಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ. ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣ:  ಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ. ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವ: ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶರಣರ ಬುತ್ತಿ:  ಈ ಜಾತ್ರೆಯ ಒಂದು ವಿಶಿಷ್ಟ ಸಂಪ್ರದಾಯವೆಂದರೆ, ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಭಕ್ತರಿಗಾಗಿ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ ಮತ್ತು ಕರ್ಜಿಕಾಯಿಗಳನ್ನು ತಯಾರಿಸಿ, ಬುತ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ತರುತ್ತಾರೆ. ಸಾಮಾಜಿಕ ಸೇವೆಗಳು: ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು, ನೇತ್ರ ಚಿಕಿತ್ಸಾ ಶಿಬಿರಗಳು, ರಕ್ತದಾನ ಮತ್ತು ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಮಠವು ಜನಪರ ಕಾರ್ಯಗಳನ್ನು ಮಾಡುತ್ತದೆ. ಶ್ರೀಮಠದ ಸಮಾಜ ಸೇವೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಿಕ್ಷಣ ಸಂಸ್ಥೆಗಳು, ಉಚಿತ ಪ್ರಸಾದ ನಿಲಯ (ದಾಸೋಹ) ಮತ್ತು ಸಾವಯವ ಕೃಷಿ ಹಾಗೂ ಗೋಶಾಲೆಯನ್ನು ನಡೆಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ   ನೀಡುತ್ತಿದೆ.    ಚಿಕ್ಕೇನಕೊಪ್ಪದ ಮೌನಯೋಗಿ, ಪೂಜ್ಯ ಶ್ರೀ ಚನ್ನವೀರ ಶರಣರ ವೈಯಕ್ತಿಕ ಲೌಕಿಕ ಜೀವನ ಮತ್ತು ಅವರ ತಂದೆ-ತಾಯಿಗಳ ನಿಖರವಾದ ಹೆಸರುಗಳ ಕುರಿತು ಇತಿಹಾಸದ ದಾಖಲೆಗಳಲ್ಲಾಗಲಿ ಅಥವಾ ಸಾರ್ವಜನಿಕ  ಮೂಲಗಳಲ್ಲಾಗಲಿ ಯಾವುದೇ ಸ್ಪಷ್ಟ ಮಾಹಿತಿಯು ಲಭ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅವರ ಹಿನ್ನೆಲೆಯ ಕುರಿತಾದ ಕೆಲವು ಮುಖ್ಯ ಸಂಗತಿಗಳು  ಅವಧೂತ ಹಾಗೂ ಮೌನ ಪರಂಪರೆ:  ಶ್ರೀ ಚನ್ನವೀರ ಶರಣರು ಒಬ್ಬ ಪರಮ ಅವಧೂತರಾಗಿ ಮತ್ತು ಮೌನಯೋಗಿಯಾಗಿ ಜೀವಿಸಿದರು. ಅವರು ತಮ್ಮ ಪೂರ್ವಾಶ್ರಮದ (ಸಂಸಾರದ ಅಥವಾ ಹುಟ್ಟಿನ) ವಿವರಗಳನ್ನು ಸಂಪೂರ್ಣವಾಗಿ ತೊರೆದು, ಕೇವಲ ಲೌಕಿಕ ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬೆಳಕಿಗೆ ಬಾರದ ಹಿನ್ನೆಲೆ:  ಇತಿಹಾಸದ ಪ್ರಕಾರ, ಅವರು ಬಳಗಾನೂರಿನ ಚಿಕ್ಕೇನಕೊಪ್ಪ ಮಠಕ್ಕೆ ಬಂದು ನೆಲೆಸಿದ ನಂತರವೇ ಅವರ ದಿವ್ಯ ತಪಃಶಕ್ತಿ ಮತ್ತು ಪವಾಡಗಳು ಜನಸಾಮಾನ್ಯರಿಗೆ ತಿಳಿಯತೊಡಗಿದವು. ಹೀಗಾಗಿ ಅವರ ತಂದೆ, ತಾಯಿ ಅಥವಾ ಬಾಲ್ಯದ ಲೌಕಿಕ ವಿವರಗಳು ಮರೆಯಾಗಿ, ಅವರು ಕೇವಲ “ಚಿಕ್ಕೇನಕೊಪ್ಪದ ಶರಣರು” ಎಂದೇ ಪ್ರಸಿದ್ಧರಾದರು. ಸಾಹಿತ್ಯದಲ್ಲಿ ಉಲ್ಲೇಖ:  ಪಂ. ಪುಟ್ಟರಾಜ ಗವಾಯಿಗಳು ಬರೆದಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಗ್ರಂಥದಲ್ಲಿಯೂ ಇವರ ಅಧ್ಯಾತ್ಮಿಕ ಸಾಧನೆ, ಪವಾಡಗಳು ಮತ್ತು ಸಮಾಜ  ಮುಖಿ ಸೇವೆ ಬಗ್ಗೆ ಹೇಳಿದ್ದಾರೆಯೇ ಹೊರತು ಅವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಚಿಕ್ಕೇನಕೊಪ್ಪದ ಮಹಾನ್ ತಪಸ್ವಿ ಶ್ರೀ ಚನ್ನವೀರ ಶರಣರ ನಿಖರವಾದ ಹುಟ್ಟಿದ ದಿನಾಂಕ ಮತ್ತು ವರ್ಷ ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಲಭ್ಯವಿಲ್ಲ. ಅವರು ಒಬ್ಬ ಸಿದ್ಧ ಪುರುಷರಾಗಿದ್ದು, ಸಂಸಾರ ಹಾಗೂ ಕಾಲದ ಗಡಿಯಿಂದ ದೂರವಿದ್ದ ಕಾರಣ ಅವರ ಬಾಲ್ಯ ಮತ್ತು ಜನನದ ವಿವರಗಳು ಬೆಳಕಿಗೆ ಬಂದಿಲ್ಲ.  ಅವರ ಮಹಾಸಮಾಧಿ (ಮರಣ) ಹಾಗೂ ಪುಣ್ಯಸ್ಮರಣೆಯ   1. ಮರಣ / ಲಿಂಗೈಕ್ಯರಾದ ವಿವರ ಲಿಂಗೈಕ್ಯರಾದ ತಿಂಗಳು: ಶ್ರೀ ಚನ್ನವೀರ ಶರಣರು  1995 ಜನೆವರಿ ತಿಂಗಳ ಅವಧಿಯಲ್ಲಿ ಲಿಂಗೈಕ್ಯರಾದರು (ಮಹಾಸಮಾಧಿ ಹೊಂದಿದರು).:    ಘನಮೌನಿಗಳು:  ಶರಣರನ್ನು ಇತಿಹಾಸದಲ್ಲಿ “ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರು” ಎಂದು ಕರೆಯಲಾಗುತ್ತದೆ. ಅವರು ಮೌನವ್ರತವನ್ನು ಆಚರಿಸುತ್ತಿದ್ದರಿಂದ ತಮ್ಮ ಜನ್ಮ ವೃತ್ತಾಂತವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ದೈವೀಪುರುಷ: ಭಕ್ತರ ನಂಬಿಕೆಯ ಪ್ರಕಾರ, ಅವರು ಯಾವುದೇ ಸಾಮಾನ್ಯ ಮನುಷ್ಯನಂತೆ ಹುಟ್ಟು-ಸಾವಿನ ಬಂಧನಕ್ಕೆ ಒಳಗಾಗದೆ, ಕೇವಲ ಲೋಕ ಕಲ್ಯಾಣಕ್ಕಾಗಿ ಬಂದು ಮಠದಲ್ಲಿ ನೆಲೆಸಿದ ದೈವೀ ಸ್ವರೂಪಿಯಾಗಿದ್ದರು.ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ನಡೆಯುವ ಅವರ ಪುಣ್ಯಸ್ಮರಣೆಯ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶರಣರ ಗದ್ದುಗೆಯ ದರ್ಶನ ಪಡೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಮಾಡಿದರು. ಮೌನವೇ ತಪಸ್ಸು ಮಾತು ಬೆಳ್ಳಿ ಮೌನ ಬಂಗಾರ ಎಂದು ತಿಳಿದು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಒಬ್ಬ ಶ್ರೇಷ್ಠ ಶಿವಯೋಗ ಸಾಧಕರು. ಸಾವಿಲ್ಲದ ಶರಣರು. ಬಸವ ಮಾರ್ಗದ ರೂವಾರಿಗಳು ಚಿಕ್ಕೇನಕೊಪ್ಪದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಕಾವ್ಯಯಾನ

ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ”

ಕಾವ್ಯ ಸಂಗಾತಿ ಎಸ್. ಆರ್. ಆರ್. ವಿಜಯಲಕ್ಷ್ಮಿ “ನೀಲ ನಭದೊಳಗಣ ಮುಗಿಲ ದಿಬ್ಬಣ” ನೀಲ ನಭದೊಳಗಣಮುಗಿಲ ದಿಬ್ಬಣ. ನೀಲ ನಭ ದೊಳಗಣಮುಗಿಲ ಮೇಘಗಾನಸೋಜಿಗದ ಸೊಬಗುಸೃಜಿಸಿದೆ ರಿಂಗಣ           ಬಂಗಾರ ವರ್ಣದ         ಬಾಂದಳದೊಡೆಯಭಾಸ್ಕರನ ಶೃಂಗಾರಕಲ್ಪಲೀಲಾ ಮಗದೊಮ್ಮೆಮರು ಹುಟ್ಟು ಪಡೆದಿದೆ         ಮುಸ್ಸಂಜೆ ಯು  ರವಿಯರಶ್ಮಿ ಯೊಳಗೆ ಮಿಂದೆದ್ದ. ಉಷೆಯ ಉಸುಕುರಂಗೇರಿ ಮೇಘ ತರಂಗಗಳಹಣೆಗೆ ಕೆಂಪಿನ ತಿಲಕ ವಿಟ್ಟಂತೆಇಲ್ಲೊಂದು. ಗಾಂಧಾರಲೋಕ ವರಳಿಸಿದೆ           ಜಗ ತನ್ನಿರುವ ಮರೆತಿರುವಂತೆಮೆಲ್ಲ ನೆಲ್ಲೋ  ಬಾನಾಡಿ. ಗರಿ ಗೆದರಿನಭ ನೋಡಿ  ನಕ್ಕಂತೆಭ್ರಮರವಿದೋ. ಮೆಲು ಹೂವು ಸ್ಪರ್ಶಿಸಿಮಧುವ ಹೀರಿ ಸಂಭ್ರಮಿಸುವಂತೆ                            ಮೇಲ್ ಮುಗಿಲುನೀಲಿ ಕಂಗಳ ತೆರೆದುಧರಣಿ ಯನ್ನೊಮ್ಮೆ ಬಳಿ ಕರೆದುಅವಳ ಕರಿ ಮುಂಗುರಳ               ತೆರೆ ಸರಿಸಿದಂತೆಅಲ್ಲಲ್ಲಿ. ರಂಗೇರಿದಕೆಂದಾವರೆಯ  ಕೆನ್ನೆ ಯನಾಚಿಕೆಯ  ಕೆಂಪುಎಲ್ಲೆಡೆ ಪಸರಿಸಿ ದಂತೆ           ಆಮುಗಿಲ. ಸೌಂದರ್ಯ ದಸಾರವನ್ನೆಲ್ಲ     ತನ್ನೊಡಲೊಳಗಿನಕಡಲಿನೊಳಗಿರಿಸಿ.ಛಾಯೆಯಾಗಿಸಿದೃಷ್ಟಿ ಬೊಟ್ಟಿನಂತೆ.ಪ್ರತಿ ಬಿಂಬಿಸಿನಭದ ನಕ್ಷೆ ಯಲ್ಲಿಚಿತ್ತಾರ.  ಬರೆದಜಗದ ಸೃಷ್ಟಿ ಯಸಾಕ್ಷಾತ್ಕಾರ,   ಎಸ್. ಆರ್. ಆರ್. ವಿಜಯಲಕ್ಷ್ಮಿ                                   

ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ” Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಶೆ ಮುಕ್ತರಾಗಲಿ ಯುವಜನತೆ ಈ ವಾರ ಮಾದಕ ವ್ಯಸನ ನಿವಾರಣಾ ಸಪ್ತಾಹ ಆಚರಿಸಲಾಯಿತು. ಕುಡಿತ ಮತ್ತು ಮಾದಕ ಪದಾರ್ಥಗಳ ವ್ಯಸನ ಯುವ ಪಿಳಿಗೆಗೆ ಒಂದು ಶಾಪ.ಯಾವಾಗ ವ್ಯಸನಕ್ಕ ಬಲಿ ಆಗ್ತಾರ ಅಂತ ಗೊತ್ತಾಗಲ್ಲ.ಗೊತ್ತಾಗುವಷ್ಟರಲ್ಲಿ ವ್ಯಸನಿಗಳಾಗಿ ಅದರಿಂದ ಹೊರ ಬರಲಾರದವರಾಗಿರತಾರ.ಇತ್ತೀಚಿಗೆ ಲಡಾಖ್ ಪ್ರವಾಸ ಹೋಗಿದ್ಧ.ಇಷ್ಟು ದಿನ ಅಲ್ಲಿ ಮದ್ಯಪಾನಕ್ಕ ಅವಕಾಶ ಇರಲಿಲ್ಲ.ಈಗ ಸರ್ಕಾರ ಅವಕಾಶ ಮಾಡಕೊಟ್ಟದ.ಅದರ ಅಗತ್ಯ ಇರಲಿಲ್ಲ ನಿಜ.ಆದ್ರ ಸರ್ಕಾರ ಕ್ಕ ಮದ್ಯ ಮಾರಾಟ ಒಂದು ದೊಡ್ಡ ಆದಾಯ.ಬ್ಯಾರೆ ಬಿಸಿನೆಸ್ ನಿಂದ ಬರುವ ಟ್ಯಾಕ್ಸ್ ಗಿಂತ ಮದ್ಯ ಮಾರಾಟದಿಂದ ಬರುವ ಟ್ಯಾಕ್ಸ್ ಸರ್ಕಾರ ಕ್ಕ ಉಪಯೋಗ. ಆದ್ರ ಇದರಿಂದ ಆಗುವ ಉಪಯೋಗ ಅನುಪಯೋಗ ಜನ ಸಾಮಾನ್ಯರು ಚರ್ಚಿಸಬೇಕು.ಅಲ್ಲಿ ಇರುವದು ದಯಡಿಯುವ ವರ್ಗ.ಗಳಿಸಿದ ದುಡ್ಡಲ್ಲಿ ಸಂಸಾರ ನೋಡಕೊಂಡು ಆರಾಮ ಇದ್ರು.ಈಗ ಮದ್ಯ ಅವರಿಗೆ ಅಧಪತನಕ್ಕ ಕರೆದೊಯ್ಯತದ. ಸುಲಭವಾಗಿ ಸಿಗುವದರಿಂದ ದುಡಿದ ತಮ್ಮ ದಣಿವು ಪರಿಹಾರ ಮಾಡಕೊಳ್ಳಾಕ ಮದ್ಯದ ಮೊರೆ ಹೋಗತಾರ.ಕ್ರಮೇಣ ವ್ಯಸನಿಗಳಾಗತಾರ.ಆದ್ರ ಅಲ್ಲಿನ ಸರ್ಕಾರ ದವರ ಹೆಳಿಕೆ ಬ್ಯಾರೆ.ಯುವ ಜನ ಬ್ಯಾರೆ ಬ್ಯಾರೆ ನಶೆ ಪದಾರ್ಥ ಉಪಯೋಗಿಸಿ ಹಾಳಾಗುವದನ್ನು ತಡೆಯಲು ಮದ್ಯ ಮಾರಾಟದ ಪರವಾನಿಗೆ ಕೊಡಲಾಗಿದೆ ಎಂದು ಹೇಳತಾರಂತೆ.ಒಂದು ವ್ಯಸನಕ್ಕೆ ಮತ್ತೊಂದು ವ್ಯಸನ ಪರ್ಯಾಯ ಆಗಲ್ಲ.ಮದ್ಯ ಮಾರಾಟ ಮುಕ್ತ ರಾಜ್ಯಗಳು ಇವೆ.ಸಿಗಲಾರದು ಎಂದು ಜನ ಅದರ ಗೋಜಿಗೆ ಹೋಗದಿರಬಹುದು.ಉಳ್ಳವರು ಬೇರೆ ವ್ಯವಸ್ಥೆ ಮೂಲಕ ತರಿಸಿಕೊಂಡು ಕುಡಿಬಹುದು. ಆದ್ರೆ ಮುಕ್ತವಾಗಿ ಸಿಗುವದರಿಂದ ಆಗುವ ಅಧಪತನ , ಸಿಗದಿದ್ದಾಗ ಆಗದು.ಅದಕ್ಕೆ ಮದ್ಯ ಮಾರಾಟದ ನಿಷೇಧ ಒಳ್ಳೆದು. ಒಮ್ಮೆ ಓದಿದ ನೆನಪು.ಝೆನ್ ಝಿ ಗಳು ಕುಡಿಯುವದಕ್ಕ ಅಷ್ಟು ಒಲವು ತೊರಿಸುತ್ತಿಲ್ಲ ಎಂದು. ಆದ್ರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮುಕ್ತ ವಾಗಿ ಮದ್ಯ ಮತ್ತು ಗಾಂಜಾ ಇತರ ಮಾದಕ ಪದಾರ್ಥಗಳ ಸೇವನೆ ಮಾಡತಾರೆ.ಇಂಜಿನಿಯರಿಂಗ್ , ವೈದ್ಯಕೀಯ ವಿದ್ಯಾರ್ಥಿಗಳೆ ಇದಕ್ಕೆ ಹೆಚ್ಚು ಬಲಿ ಆಗತಿದ್ದಾರೆ.ಯೌವನದ ಅಮಲಿನಲ್ಲಿ ಏನು ಮಾಡಿದ್ರು ನಡಿತದ ಎಂಬ ದೋರಣೆ. ಗೆಳೆಯರೊಂದಿಗೆ ಸೇರಿ ಒಂದು ಹೊಸ ಅನುಭವ ಎಂದು ಶುರು ಮಾಡುವದು ಯಾವಾಗ ತಮಗ ವ್ಯಸನ ಆಗತದ ಎಂದು ಅರಿವಾಗುವಷ್ಟರಲ್ಲಿ ಅದರಿಂದ ಹೊರ ಬರಲಾರದವರಂಗ ಆಗಿರತಾರ.ಹಾಗಂತ ಎಲ್ಲ ವಿದ್ಯಾರ್ಥಿಗಳು ವ್ಯಸನಿಗಳೆ ಅಂತ ಹೆಳಕ್ಕಾಗಲ್ಲ.ತಮ್ಮ ಬುದ್ಚಿಯ ಸೀಮೀತದಲ್ಲಿ ಇರುವವರು ಮಾದಕ ವಸ್ತು ಗಳನ್ನು ಒಂದು ಪ್ರಯೋಗವಾಗಿ ಉಪಯೋಗಿಸಿಕೊಂಡು ಬಿಡತಾರ.ಅದನ್ನೆ ದಿನಚರಿ ಮಾಡಿಕೊಂಡವರ ವ್ಯಸನ ಬಿಡಿಸೋದು ಕಷ್ಟ. ಕಾಲೇಜ್ ಯುನಿವರ್ಸಿಟಿ ಗಳಲ್ಲಿ ಮಾದಕ ವಸ್ತುಗಳನ್ನು ಎಲ್ಲಿಂದ ತರತಾರ..! ಇವುಗಳನ್ನು ನಿಯಂತ್ರಣ ಮಾಡಲು ಅಲ್ಲಿನ ಸಿಬ್ಬಂದಿ ಪ್ರಯತ್ನ ಮಾಡಬಹುದು . ಆದ್ರ ವಿದ್ಯಾರ್ಥಿಗಳು ಕದ್ದು ಮುಚ್ಚಿ ಮಾಡುವ ವ್ಯಸನಕ್ಕ ಅವರು ಕುರುಡಾಗಿರತಾರ ಅಂತ ಕಾಣತದ.ನನ್ನ ಮಗ ಕಲಿಯುವ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಾಂಜಾ ಮತ್ತಿತರ ನಶೆ ಪದಾರ್ಥಗಳನ್ನು ಉಪಯೋಗಿಸುವದನ್ನು ಹೇಳತಿರತಾನೆ.ಅದು ಕೆಟ್ಟದ್ದು ಎಂದು ಅವರಿಗೂ ಗೊತ್ತು.ಆದ್ರೂ ಯೌವನದ ಹುರುಪು.ಈಗಲ್ಲದಿದ್ರೆ ಮಜಾ ಮತ್ಯಾವಾಗ ಮಾಡೋದು , ಒಂದು ಸಲ ಮಾಡಿ ನೋಡೋಣ , ಹೀಗೆ ಒಂದು ಪ್ರಯೋಗವಾಗಿ ಶುರುಮಾಡತಾರೆ. ಮಾದಕ ಪದಾರ್ಥಗಳ ಬಗ್ಗೆ ನಮಗೆ ಗೊತ್ತಿರುವದಕ್ಕಿಂತ ಹೆಚ್ಚು ನಮ್ಮ ಮಕ್ಕಳಿಗೆ ಗೊತ್ತಿರತದ. ಅದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆಯೂ ತಿಳಿದಿರತದ.ನಾವು ಅವರಿಗೆ ಎಚ್ಚರಿಕೆ ಕೊಡಬಹುದು.ಆದ್ರ ನಿಯಂತ್ರಿಸಲಿಕ್ಕ ಆಗಲ್ಲ.ಅದರ ಪರಿಣಾಮ ದುಷ್ಪರಿಣಾಮ ಸ್ವತಃ ಅವರು ತಿಳಕೊಂಡು ತಮ್ಮನ್ನು ತಾವು ನಿಯಂತ್ರಣ ಮಾಡಕೊಳ್ಳಬೇಕು. ನಶೆ ಪದಾರ್ಥಗಳ ಬಳಕೆ ಮಾಡುವುದು ಬೇಡ ಅಂತ ಎಲ್ಲಾ ಹೆತ್ತವರಂತೆ ನಾನು ನನ್ನ ಮಕ್ಕಳಿಗೆ ಹೇಳತೇನೆ.ಆದ್ರ ಬೇಡವೇ ಬೇಡ ಅಂತ ಹೆಳಲಾರೆ.ಗೆಳೆಯರ ಸಂಗಡ ಅವರು ಬೆರೆತು ಅವರಿಷ್ಟ ಇದ್ರೆ ಉಪಯೋಗಿಸಲಿ , ಎಚ್ಚರಿಕೆ ಮಾತ್ರ ಸದಾ ಇರಲಿ ಎಂಬುದು ಸೂಚಿಸತೆನ ಯುವ ಜನ ಮದ್ಯಕ್ಕಿಂತ ಇತರ ನಶೆ ಪದಾರ್ಥ ಗಳಿಗೆ ಬಲಿ ಆಗತಿರೋದು ಶೋಚನೀಯ.ಇಂತಹ ನಶೆಗಳು ದೇಶವಿದೇಶಗಳ ನೆಲದಲ್ಲಿ ಸಾಂಕ್ರಾಮಿಕ ವಾಗಿ ವ್ಯಾಪಿಸತಿವೆ. ಇವುಗಳನ್ನು ತೆಡಯಲು ಪೋಲಿಸ್ ಪಡೆಗಳು ಶ್ರಮಿಸಬೇಕು.ಕಾಲೇಜ್ ಗಳಲ್ಲಿ ವಿದ್ಯಾರ್ಥಿ ಗಳ ಕೈಗೆ ಸಿಗದಂಗ ನಿಯಂತ್ರಿಸಬೇಕು. ಆದ್ರ ಈಗಿನ ಸಿನಿಮಾಗಳಲ್ಲಿ ಹೀರೋ ಸಿಗರೇಟ್ ಮತ್ತು ಡ್ರಗ್‌ ವ್ಯಸನಿ ಆಗಿರತಾನ.ಅವನನ್ನು ಹೀರೋ ಅನ್ನತೀವಿ.ಇಂತಹ ಹೀರೋಗಳು ಸಮಾಜಕ್ಕ ಏನು ಸಂದೇಶ ಕೊಡತಾರ..ಈಗಿನ ಎಲ್ಲಾ ಸಿನಿಮಾಗಳಲ್ಲೂ ಹೀರೋ ನ್ ಕೈಯಲ್ಲಿ ಉರಿಯುವ ಸಿಗರೇಟ್ ಇರತದ. ಮುಂದಿನ ಎರಡ್ಮೂರು ವರ್ಷಗಳಲ್ಲಿ ನಮ್ಮ ರಾಜ್ಯ ವ್ಯಸನ ಮುಕ್ತವಾಗಿ ಮಾಡಲಾಗತದ ಅಂತ ಸರ್ಕಾರ ಹೆಳ್ಯಾದ.ಒಳ್ಳೆದು.ನಶೆ ಪದಾರ್ಥಗಳು ವಿದ್ಯಾರ್ಥಿ ಗಳ ಕೈಗೆ ಸಿಗದಂಗ ಮೊದಲು ನಿಯಂತ್ರಿಸಬೇಕು.ನಶೆ ಪದಾರ್ಥಗಳು ನಮ್ಮ ರಾಜ್ಯದಲ್ಲಿ ತಯ್ಯಾರಾಗದಂತೆ , ಹೊರಗಿನಿಂದ ಬರದಂತೆ ನಿಯಂತ್ರಣ ಮಾಡೊದು ಮುಖ್ಯ. ಮದ್ಯ ಮತ್ತು ಇತರ ಮಾದಕ ಪದಾರ್ಥ ಗಳಲ್ಲಿ ಬಹಳ ವ್ಯತ್ಯಾಸ ಇರತದಂತ.ಮದ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ದುಷ್ಪರಿಣಾಮ ಆಗತದಂತ ಈ ಮಾದಕ ವಸ್ತುಗಳನ್ನು ಉಪಯೋಗಿಸುವ ದರಿಂದ.ಗೊತ್ತಿರಲಾರದವ್ರು ಯಾರೂ ಇಲ್ಲ ಈಗ.ಗೊತ್ತಿದ್ರೂ ಒಂದು ಸಲ ನೋಡೊಣ ಎಂಬ ಪ್ರಯೋಗ ಯುವಜನತೆಯ ಆಸೆ.ಇದೇ ಕ್ರಮೇಣ ವ್ಯಸನ ಆಗೊದು ದುರಂತ. ವಿದ್ಯಾರ್ಥಿಗಳು ಜಸ್ಟ್ ಫನ್ ಎಂದು ಶುರುಮಾಡುವ ನಶೆಗಳು ಅವರ ಜೀವಕ್ಕೆ ಮಾರಕ ಆಗತಾವೆ ಅಂತ ಅರ್ಥಾಗಲ್ಲ.ಆದರೂ ಒಂದು ಸಮಾಧಾನ.ಈಗೀನ ವಿದ್ಯಾರ್ಥಿಗಳು ತಮ್ಮ ಜೀವನದ ಒಳ್ಳೆದು ಕೆಟ್ಟದ್ದು ತಾವೇ ನಿರ್ಧರ ಮಾಡ್ತಾರ.ಅವರಲ್ಲಿ ವಿವೇಚನೆ ಅದ.ದೊಡ್ಡ ನಗರಗಳಲ್ಲಿ ಪಬ್ ಗಳಲ್ಲಿ ಕಾಣುವ ಯುವಕ ಯುವತಿಯರೆಲ್ಲ ಹೆಚ್ಚಾಗಿ ಸ್ವಾವಲಂಬಿ ಗಳು. ವ್ಯಸನದ ಪರಿಣಾಮ ಬಲ್ಲವರು, ತಮ್ಮ ಮಿತಿಯಲ್ಲಿ ಜೀವನವನ್ನು ಎಂಜಾಯ್ ಮಾಡುವದಕ್ಕೆ ಆಕ್ಷೇಪ ಮಾಡಲಾಗದು.ಆದ್ರೆ ದುಡಿಯುವ ವರ್ಗದ ವ್ಯಸನಿಗಳ ಜೀವನ ಶೋಚನೀಯ.ಮಾದಕವಸ್ತು ನಿಯಂತ್ರಣ ಮಾಡುವದೆ ಇದಕ್ಕೆಲ್ಲ ಪರಿಹಾರ. ಜ್ಯೋತಿ ಡಿ ಬೊಮ್ಮಾ

Read Post »

ಇತರೆ, ರಂಗಭೂಮಿ

ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, ಡಾ.ಯಲ್ಲಮ್ಮ

ರಂಗ ಸಂಗಾತಿ ಡಾ.ಯಲ್ಲಮ್ಮ ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, *ಪರಿಪೂರ್ಣತೆಯ ಹುಡುಕಾಟ: ಹಯವದನ – ನಾಟಕದ ಜೀವಾಳ, ಗಿರೀಶ್ ಕಾರ್ನಾಡ್*ಒಂದಾನೊಂದು ಕಾಲದಲ್ಲಿ *ಧರ್ಮಪುರ* ಎಂಬ ಸುಂದರವಾದ ನಗರವಿತ್ತು. ಆ ಊರಿನಲ್ಲಿ ಇಬ್ಬರು ಪ್ರಾಣಸ್ನೇಹಿತರಿದ್ದರು – *ದೇವದತ್ತ* ಮತ್ತು *ಕಪಿಲ* . *ದೇವದತ್ತ ಬ್ರಾಹ್ಮಣ* ಯುವಕ, ಮಹಾನ್ ಬುದ್ಧಿವಂತ, ಕವಿ. ಆದರೆ ಆತನ ದೇಹ ದುರ್ಬಲವಾಗಿತ್ತು. ಇತ್ತ *ಕಪಿಲ ಕಮ್ಮಾರನ ಮಗ,** ದೈಹಿಕವಾಗಿ ಅತ್ಯಂತ ಬಲಶಾಲಿ ಮತ್ತು ಮಲ್ಲ. ಆದರೆ ಆತನಿಗೆ ದೇವದತ್ತನಷ್ಟು ಬುದ್ಧಿವಂತಿಕೆ ಇರಲಿಲ್ಲ. ಇಬ್ಬರ ನಡುವೆ *ರಾಮ-ಲಕ್ಷ್ಮಣರಂತಹ ಸ್ನೇಹ* ವಿತ್ತು. ಈ ಕಥೆಗೆ ರೋಚಕ ತಿರುವು ಸಿಗುವುದು *ಪದ್ಮಿನಿ* ಎಂಬ ಅತ್ಯಂತ ಸುಂದರ ಹೆಣ್ಣುಮಗಳ ಪ್ರವೇಶದಿಂದ. ದೇವದತ್ತ ಅವಳನ್ನು ನೋಡಿ ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ಕಪಿಲನ ಸಹಾಯದಿಂದ *ದೇವದತ್ತ ಮತ್ತು ಪದ್ಮಿನಿಯ ವಿವಾಹ* ವೂ ನಡೆಯುತ್ತದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ, ದಿನ ಕಳೆದಂತೆ ಪದ್ಮಿನಿಯ ಮನಸ್ಸಿನಲ್ಲಿ ಒಂದು ದೊಡ್ಡ ತುಮುಲ ಶುರುವಾಗುತ್ತದೆ. ಅವಳಿಗೆ ತನ್ನ ಗಂಡ ದೇವದತ್ತನ ಬುದ್ಧಿವಂತಿಕೆ ಇಷ್ಟ, ಆದರೆ ಅದೇ ಸಮಯದಲ್ಲಿ ಕಪಿಲನ ಕಟ್ಟುಮಸ್ತಾದ ದೇಹದಾಢ್ಯತೆಯ ಬಗ್ಗೆಯೂ ಎಲ್ಲಿಲ್ಲದ ಆಕರ್ಷಣೆ ಹುಟ್ಟಿಕೊಳ್ಳುತ್ತದೆ!   ಒಮ್ಮೆ ಈ ಮೂವರೂ *ಉಜ್ಜಯಿನಿಗೆ* ಪ್ರಯಾಣ ಬೆಳೆಸುತ್ತಾರೆ. ದಾರಿಯಲ್ಲಿ ರುದ್ರ ಮತ್ತು ಕಾಳಿಮಾತೆಯ ದೇವಾಲಯ ಸಿಗುತ್ತದೆ. ತನ್ನ ಹೆಂಡತಿ ತನ್ನ ಗೆಳೆಯ ಕಪಿಲನತ್ತ ಆಕರ್ಷಿತಳಾಗಿದ್ದಾಳೆ ಎಂದು ಅರಿತ ದೇವದತ್ತ, ತೀವ್ರ ಹತಾಶೆಯಿಂದ ಕಾಳಿಮಾತೆಯ ಗುಡಿಗೆ ಹೋಗಿ ತನ್ನ ತಲೆಯನ್ನು ಕತ್ತರಿಸಿಕೊಂಡು ಪ್ರಾಣ ಬಿಡುತ್ತಾನೆ. ಗೆಳೆಯನನ್ನು ಹುಡುಕಿಕೊಂಡು ಗುಡಿಯೊಳಗೆ ಬಂದ ಕಪಿಲ, ದೇವದತ್ತನ ಮೃತದೇಹ ನೋಡಿ ತಡೆಯಲಾರದೆ ತನ್ನ ಗೆಳೆಯನ ಸಾವಿಗೆ ತಾನೇ ಕಾರಣ ಎಂದು ನೊಂದು ತಾನೂ ತನ್ನ ತಲೆ ಕಡಿದುಕೊಳ್ಳುತ್ತಾನೆ.   ಇಬ್ಬರೂ ಹಿಂದಿರುಗದಿದ್ದಾಗ ಅವರನ್ನು ಹುಡುಕಿಕೊಂಡು ಬಂದ ಪದ್ಮಿನಿ, ಇಬ್ಬರ ಮೃತದೇಹ ನೋಡಿ ಆಘಾತಗೊಂಡು ತಾನೂ ಪ್ರಾಣ ಬಿಡಲು ಮುಂದಾಗುತ್ತಾಳೆ. ಆಗ ಕಾಳಿ ಮಾತೆ ಪ್ರತ್ಯಕ್ಷಳಾಗಿ, “ಅವರ ರುಂಡಗಳನ್ನು ಮುಂಡಗಳಿಗೆ ಜೋಡಿಸು, ನಾನು ಅವರಿಗೆ ಜೀವ ನೀಡುತ್ತೇನೆ” ಎನ್ನುತ್ತಾಳೆ. ಗಾಬರಿ ಮತ್ತು ಗಡಿಬಿಡಿಯಲ್ಲಿ (ಅಥವಾ *ತನ್ನ ಆಳವಾದ ಆಸೆಯ ಕಾರಣದಿಂದಲೋ ಏನೋ* ) ಪದ್ಮಿನಿ ದೇವದತ್ತನ ತಲೆಯನ್ನು ಕಪಿಲನ ದೇಹಕ್ಕೂ, ಕಪಿಲನ ತಲೆಯನ್ನು ದೇವದತ್ತನ ದೇಹಕ್ಕೂ ಜೋಡಿಸಿಬಿಡುತ್ತಾಳೆ! ಇಬ್ಬರಿಗೂ ಜೀವ ಬರುತ್ತದೆ. ಆದರೆ ಈಗ ಅತಿ ದೊಡ್ಡ ಸಮಸ್ಯೆ ಎದುರಾಗುತ್ತದೆ – *ದೇವದತ್ತನ ತಲೆ ಮತ್ತು ಕಪಿಲನ ದೇಹವಿರುವ ವ್ಯಕ್ತಿ ಪದ್ಮಿನಿಯ ಗಂಡನೋ?* ಅಥವಾ ಕಪಿಲನ ತಲೆ ಮತ್ತು ದೇವದತ್ತನ ದೇಹವಿರುವ ವ್ಯಕ್ತಿ ಗಂಡನೋ? ನ್ಯಾಯಾಲಯದಲ್ಲಿ ಋಷಿಗಳು *”ತಲೆಯೇ ಮನುಷ್ಯನ ಪ್ರಧಾನ ಅಂಗ, ಹೀಗಾಗಿ ದೇವದತ್ತನ ತಲೆ ಇರುವವನೇ ಅವಳ ನಿಜವಾದ ಗಂಡ”* ಎಂದು ತೀರ್ಪು ನೀಡುತ್ತಾರೆ. ಪದ್ಮಿನಿಗೆ ತಾನು ಬಯಸಿದ್ದಂತೆಯೇ *’ಬುದ್ಧಿವಂತ ತಲೆ ಮತ್ತು ಬಲಶಾಲಿ ದೇಹವುಳ್ಳ’* ಪರಿಪೂರ್ಣ ಗಂಡ ಸಿಕ್ಕಂತಾಗಿ ಬಹಳ ಸಂತೋಷಪಡುತ್ತಾಳೆ. ಕಪಿಲ ಬೇಸರದಿಂದ ಕಾಡಿಗೆ ಹೊರಟುಹೋಗುತ್ತಾನೆ. ಆದರೆ ಪ್ರಕೃತಿಯ ನಿಯಮವೇ ಬೇರೆ ಇತ್ತು. ದಿನ ಕಳೆದಂತೆ ದೇವದತ್ತನ ತಲೆಗೆ ತಕ್ಕಂತೆ ಆ ಬಲಶಾಲಿ ದೇಹ ಕರಗಿ ಸಾಮಾನ್ಯವಾಗುತ್ತದೆ. ಇತ್ತ ಕಾಡಿನಲ್ಲಿದ್ದ ಕಪಿಲನ ತಲೆಗೆ ತಕ್ಕಂತೆ ಆ ದುರ್ಬಲ ದೇಹ ದೃಢವಾಗುತ್ತದೆ. ಕೊನೆಗೆ ಮನುಷ್ಯನ ಅಪೂರ್ಣತೆಯೇ ಸತ್ಯ ಎಂದು ಎಲ್ಲರಿಗೂ ಅರಿವಾಗುತ್ತದೆ. ಈ ಸಂಘರ್ಷದ ಕೊನೆಯಲ್ಲಿ *ದೇವದತ್ತ ಮತ್ತು ಕಪಿಲ ಇಬ್ಬರೂ ಹೋರಾಡಿ ಸಾಯುತ್ತಾರೆ. ಪದ್ಮಿನಿ ಸತಿ ಸಹಗಮನ ಮಾಡುತ್ತಾಳೆ.*    *ಕಥೆಯೊಳಗಣ ಕಥೆ – ಉಪಕಥೆ (ಹಯವದನ):* ಈ ಕಥೆಯ ಜೊತೆಯಲ್ಲೇ ಇನ್ನೊಂದು ಕಥೆ ನಡೆಯುತ್ತಿರುತ್ತದೆ. ಅದೇ ‘ *ಹಯವದನ’* ನ ಕಥೆ. ತಾಯಿ ಮನುಷ್ಯಳು, ತಂದೆ ಕುದುರೆ ಆಗಿದ್ದರಿಂದ, ಇವನಿಗೆ ಕುದುರೆಯ ತಲೆ ಮತ್ತು ಮನುಷ್ಯನ ದೇಹವಿರುತ್ತದೆ. ತಾನು *’ಪರಿಪೂರ್ಣ’* ಮನುಷ್ಯನಾಗಬೇಕು ಎಂದು ಕಾಳಿಮಾತೆಯಲ್ಲಿ ಮೊರೆ ಹೋಗುತ್ತಾನೆ. ಆದರೆ ಕಾಳಿಮಾತೆ ಆತುರದಲ್ಲಿ ಅವನನ್ನು ‘ಪರಿಪೂರ್ಣ ಕುದುರೆ’ಯನ್ನಾಗಿ ಮಾಡಿಬಿಡುತ್ತಾಳೆ!  *ಸಂದೇಶ:* ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ, ಎಲ್ಲವನ್ನೂ ಪಡೆದು ‘ಪರಿಪೂರ್ಣ’ರಾಗುವುದು ಈ ಜಗತ್ತಿನಲ್ಲಿ ಅಸಾಧ್ಯ, ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಅಪೂರ್ಣತೆ ಇದ್ದೇ ಇರುತ್ತದೆ ಎನ್ನುವುದೇ ಈ ಅದ್ಭುತ ಕಥೆಯ ಹಿಂದಿರುವ ತತ್ವ. ಡಾ. ಯಲ್ಲಮ್ಮ ಕೆ.                                          

ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, ಡಾ.ಯಲ್ಲಮ್ಮ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ‌ “ಸ್ವರ್ಗ ಮನದೊಳಿದೆ” ಕಾಣದ ಸ್ವರ್ಗಕೆಹಂಬಲವೇಕೆಕಾಣುವ ಬದುಕನುಕಳೆವೆಯೇಕೆ ಹುಟ್ಟಿದ ಉಸಿರುಹೊರಡಲೇಬೇಕುಈ ನಿತ್ಯ ಸತ್ಯವನುಮರೆವೆಯೇಕೆ ನರಕದ ಭಯಕೆನಡುಗುವೆಯೇಕೆಮನದ ಗಾಯಕ್ಕಿಂತದೊಡ್ಡದೇನಿದೆ ಮೂರ್ತಿಯಲ್ಲಅಮೂರ್ತದಲ್ಲಕೊನೆಯ ತೀರ್ಪುಆತ್ಮಸಾಕ್ಷಿಯಲ್ಲವೇ ಕೈಯಲಿ ಕರುಣೆಮನದಲಿ ಪ್ರೀತಿಬದುಕಲಿ ಮಾನವತೆಸಾಕಲ್ಲವೇ ಕಾಣುವ ಬದುಕೇಕೈಯಲ್ಲಿರುವುದುಪ್ರೀತಿ ಇರುವೆಡೆಸ್ವರ್ಗ ಇರುವುದು ಮೂರು ದಿನದ ಬದುಕುನಗುನಗುತಾ ಸಾಗಲಿಒಬ್ಬರ ನೋವಿಗೆಇನ್ನೊಬ್ಬ ಕಾರಣವಾಗದಿರಲಿ ಸ್ವರ್ಗ ನರಕವೆಲ್ಲಮನದೊಳಿವೆಮಾಡಿದ ಒಳಿತುಗಳೇಉಳಿಯಲಿವೆ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ” Read Post »

ಕಥಾಗುಚ್ಛ

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್

ಕಥಾ ಸಂಗಾತಿ ಪೃಥ್ವಿ ಬಸವರಾಜ್ “ನಂಬಿಕೆಯ ಬಲೆಯಲ್ಲಿ..” ರಾತ್ರಿ ಹನ್ನೆರಡು ಗಂಟೆ ದಾಟಿತ್ತು. ಕಿಟಕಿಯ ಗಾಜಿನ ಮೇಲೆ ಮಳೆ ಹನಿಗಳು ನಿಧಾನವಾಗಿ ಜಾರುತ್ತಿದ್ದವು. ಮೇಜಿನ ಮೇಲೆ ತೆರೆದಿಟ್ಟಿದ್ದ ಹಳೆಯ ದಿನಚರಿಯ ಒಂದು ಪುಟದಲ್ಲಿ ಅವಳ ಹೆಸರನ್ನು ಮತ್ತೆ ಮತ್ತೆ ಬರೆಯುತ್ತಾ ಕುಳಿತಿದ್ದೆ. “ಅವಳು ನನ್ನವಳಾ?” ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮೂರು ವರ್ಷಗಳು ಕಳೆದಿದ್ದವು.ಮೊದಲ ಬಾರಿ ಅವಳನ್ನು ನೋಡಿದ್ದು ವಿಶ್ವವಿದ್ಯಾನಿಲಯದ ಎಂ.ಎ ತರಗತಿಯಲ್ಲಿ. ಮೊದಲ ದಿನವೇ ಅವಳು ತರಗತಿಗೆ ಬಂದಾಗ ಎಲ್ಲರ ದೃಷ್ಟಿಯೂ ಕ್ಷಣಕಾಲ ಅವಳತ್ತ ನೆಟ್ಟಿತ್ತು. ಅದು ಅವಳ ಸೌಂದರ್ಯಕ್ಕಲ್ಲ. ಅವಳ ಮುಖದಲ್ಲಿ ಕಾಣುತ್ತಿದ್ದ ಮುಗ್ಧತೆಯ ಕಾರಣಕ್ಕೆ.ಅವಳ ಕಣ್ಣುಗಳಲ್ಲಿ ಯಾವುದೇ ಲೆಕ್ಕಾಚಾರ ಇರಲಿಲ್ಲ. ಅವಳ ನಗುವಿನಲ್ಲಿ ನಾಟಕೀಯತೆ ಇರಲಿಲ್ಲ. ಯಾರೇ ಮಾತನಾಡಿದರೂ, ಪರಿಚಯವಿದ್ದರೂ ಇಲ್ಲದಿದ್ದರೂ ಒಂದೇ ರೀತಿಯ ಗೌರವದಿಂದ ಉತ್ತರಿಸುತ್ತಿದ್ದಳು. ಇಂದಿನ ಕಾಲದಲ್ಲಿ ಜನರು ಒಳ್ಳೆಯವರಂತೆ ಕಾಣಲು ಮುಖವಾಡ ಧರಿಸುವುದನ್ನು ನೋಡಿದ್ದ ನನಗೆ ಅವಳು ಒಂದು ಪ್ರಶ್ನೆಯಾಗಿ ಕಂಡಳು. “ಇವಳು ನಿಜವಾಗಿಯೂ ಇಷ್ಟೇ ಸರಳಳಾ? ಇಲ್ಲವೇ ಎಲ್ಲರ ಮುಂದೆ ಒಳ್ಳೆಯವಳೆಂದು ತೋರಿಸಲು ಅಭಿನಯಿಸುತ್ತಿದ್ದಾಳಾ?” ದಿನಗಳು ಕಳೆದವು.ನಾನು ಅವಳನ್ನು ಗಮನಿಸುತ್ತಲೇ ಇದ್ದೆ.ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿದ್ದಳು.ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದಳು.ಕಾಲೇಜು ಮುಗಿದ ತಕ್ಷಣ ಮನೆಗೆ ಹೋಗುತ್ತಿದ್ದಳು.ಹಬ್ಬ ಬಂದರೆ ಮನೆಗೆ ತೆರಳಿ ತಂದೆತಾಯಿಯ ಜೊತೆ ಕಾಲ ಕಳೆಯುತ್ತಿದ್ದಳು.ಸ್ನೇಹಿತೆಯರು ಪ್ರೀತಿ, ಪ್ರೇಮದ ಬಗ್ಗೆ ಮಾತನಾಡಿದಾಗ ಅವಳು ಕೇವಲ ನಗುತ್ತಾ ಹೇಳುತ್ತಿದ್ದಳು. “ನನ್ನ ಅಪ್ಪ ಅಮ್ಮ ನನ್ನನ್ನು ತುಂಬಾ ನಂಬಿದ್ದಾರೆ. ಅವರ ನಂಬಿಕೆಯನ್ನು ಕಳೆದುಕೊಳ್ಳುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ.” ಆ ಮಾತು ಕೇಳಿದ ದಿನ ಅವಳ ಬಗ್ಗೆ ನನ್ನ ಮನಸ್ಸಿನಲ್ಲಿ ಇದ್ದ ಎಲ್ಲಾ ಅನುಮಾನಗಳು ಕರಗಿ ಹೋದವು. ಅವಳು ತನ್ನ ಸುತ್ತ ತಾನೇ ಒಂದು ಬೇಲಿ ಕಟ್ಟಿಕೊಂಡಿದ್ದಳು.ಅದು ಬಂಧನವಲ್ಲ.ಅದು ಅವಳ ತಂದೆತಾಯಿಯ ನಂಬಿಕೆಯಿಂದ ನಿರ್ಮಾಣವಾದ ಬೇಲಿ. ಅವಳ ಪ್ರಪಂಚ ಚಿಕ್ಕದಾಗಿತ್ತು.ತಂದೆ.ತಾಯಿ.ಓದು.ಕನಸುಗಳು.ಅಷ್ಟೇ. ಆ ಪ್ರಪಂಚದಲ್ಲಿ ಪ್ರೀತಿಗೆ ಜಾಗವೇ ಇರಲಿಲ್ಲ. ಆದರೆ ಬದುಕು ಯಾವಾಗಲೂ ನಾವು ಹಾಕಿಕೊಂಡ ನಿಯಮಗಳಂತೆ ನಡೆಯುವುದಿಲ್ಲ.ನನಗೂ ಅವಳಿಗೂ ಸ್ನೇಹ ಬೆಳೆಯಿತು.ಸಣ್ಣ ಸಣ್ಣ ಮಾತುಗಳು.ತರಗತಿಯ ಟಿಪ್ಪಣಿಗಳು.ಪರೀಕ್ಷೆಯ ಚರ್ಚೆಗಳು.ಹುಟ್ಟುಹಬ್ಬದ ಶುಭಾಶಯಗಳು.ನಿಧಾನವಾಗಿ ಸ್ನೇಹ ಹೃದಯದೊಳಗೆ ಬೇರು ಬಿಟ್ಟಿತು.ಒಂದು ದಿನ ನಾನು ಧೈರ್ಯ ಮಾಡಿ ಕೇಳಿದೆ.“ನೀನು ಪ್ರೀತಿಯನ್ನು ನಂಬುತ್ತೀಯಾ?”ಅವಳು ಸ್ವಲ್ಪ ಹೊತ್ತು ಮೌನವಾಗಿದ್ದಳು.ನಂತರ ನಿಧಾನವಾಗಿ ಹೇಳಿದಳು.“ಪ್ರೀತಿ ತಪ್ಪಲ್ಲ. ಆದರೆ ನಮ್ಮನ್ನು ನಂಬಿ ಬದುಕುವವರ ಕಣ್ಣಲ್ಲಿ ನಿರಾಶೆ ಮೂಡಿಸಿದರೆ ಆ ಪ್ರೀತಿಯ ಅರ್ಥವೇನು?”ಅವಳ ಉತ್ತರ ನನ್ನನ್ನು ಮೌನಗೊಳಿಸಿತು.ಆದರೆ ಪ್ರೀತಿಯು ಮೌನವನ್ನು ಅರ್ಥಮಾಡಿಕೊಳ್ಳುವುದಿಲ್ಲ.ಅದು ಮನಸ್ಸಿನೊಳಗೆ ನಿಧಾನವಾಗಿ ಬೆಳೆಯುತ್ತಲೇ ಇರುತ್ತದೆ.ಕೊನೆಗೆ ಒಂದು ಸಂಜೆ ಕಾಲೇಜಿನ ಆವರಣದಲ್ಲಿ ಅವಳ ಮುಂದೆ ನನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟೆ.ಅವಳು ಏನೂ ಮಾತನಾಡಲಿಲ್ಲ. ಕೆಲವು ದಿನಗಳ ನಂತರ ಅವಳಿಂದ ಸಂದೇಶವೊಂದು ಬಂದಿತು.“ನಾನು ನಿನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದೇನೆ. ಆದರೆ ನನಗೆ ಭಯವಾಗುತ್ತಿದೆ.”“ಯಾಕೆ?”“ನನ್ನ ಅಪ್ಪ ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವ ಭಯ.” ಆ ದಿನದಿಂದ ನಮ್ಮ ಪ್ರೀತಿ ಆರಂಭವಾಯಿತು.ಆದರೆ ಅದು ಸಂಭ್ರಮದ ಪ್ರೀತಿ ಇರಲಿಲ್ಲ.ಜವಾಬ್ದಾರಿಯ ಪ್ರೀತಿ.ಮಿತಿಯೊಳಗಿನ ಪ್ರೀತಿ.ಗೌರವದ ಪ್ರೀತಿ. ಅವಳು ಪ್ರತಿದಿನ ಹೇಳುತ್ತಿದ್ದಳು.“ನಮ್ಮ ಪ್ರೀತಿ ಯಾರ ಕಣ್ಣಲ್ಲೂ ಕಣ್ಣೀರು ತರಬಾರದು.”ಒಮ್ಮೆ ನಾನು ಕೇಳಿದೆ.“ಒಂದು ವೇಳೆ ನಿನ್ನ ತಂದೆತಾಯಿಗೆ ನಮ್ಮ ಬಗ್ಗೆ ಗೊತ್ತಾದರೆ?”ಅವಳ ಕಣ್ಣುಗಳು ತೇವಗೊಂಡವು.“ನನ್ನನ್ನು ಶಿಕ್ಷಿಸಿದರೂ ಸಹಿಸುತ್ತೇನೆ. ಆದರೆ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮುರಿಯುವುದನ್ನು ಮಾತ್ರ ಸಹಿಸಲಾರೆ.”ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ.ಒಂದೇ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.“ನನ್ನಿಂದಾಗಿ ಅವಳು ತನ್ನ ತಂದೆತಾಯಿಯ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾಳೆಯೇ?”ಕೆಲವು ಪ್ರೇಮಗಳು ಸೇರಿಸುವುದಕ್ಕಿಂತ ಹೆಚ್ಚು ಕಲಿಸುತ್ತವೆ. ನಾನು ಅವಳನ್ನು ಪ್ರೀತಿಸಿದ್ದೆ.ಆದರೆ ಅವಳ ಪ್ರೀತಿಗಿಂತ ಅವಳ ತಂದೆತಾಯಿಯ ನಂಬಿಕೆ ದೊಡ್ಡದು ಎಂಬುದು ನನಗೆ ಅರಿವಾಯಿತು.ಒಂದು ದಿನ ನಾನು ಅವಳಿಗೆ ಹೇಳಿದೆ.“ನಿನ್ನ ಜೀವನದಲ್ಲಿ ನಾನು ಪ್ರೀತಿಯಾಗಿ ಉಳಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ತಂದೆತಾಯಿಯ ಹೆಮ್ಮೆಯಾಗಿ ಉಳಿಯಬೇಕು.”ಅವಳು ಕಣ್ಣೀರು ಒರೆಸಿಕೊಂಡು ನಗಿದಳು.“ನೀನು ನನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡೆ.” ಇಂದು ಮೂರು ವರ್ಷಗಳ ನಂತರವೂ ಅವಳ ನೆನಪು ನನ್ನ ಮನಸ್ಸಿನಲ್ಲಿದೆ.ಅವಳು ನನ್ನವಳಾಗಲಿಲ್ಲ.ಆದರೆ ನನಗೆ ಒಂದು ದೊಡ್ಡ ಪಾಠವನ್ನು ಕಲಿಸಿದಳು.ನಂಬಿಕೆಯನ್ನು ಕಾಪಾಡಿಕೊಳ್ಳಲು ತ್ಯಾಗ ಮಾಡಬಲ್ಲವಳೇ ನಿಜವಾದ ಪ್ರೀತಿಯನ್ನು ಅರಿತವಳು. ಹೊರಗೆ ಮಳೆ ನಿಂತಿತ್ತು.ನಾನು ದಿನಚರಿಯ ಕೊನೆಯ ಪುಟದಲ್ಲಿ ಒಂದು ವಾಕ್ಯ ಬರೆದೆ. “ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಬಹುದು; ಆದರೆ ನಂಬಿಕೆ ಇಡೀ ಕುಟುಂಬವನ್ನು ಬದುಕಿಸುತ್ತದೆ. ಪ್ರೀತಿಯನ್ನು ಗೆಲ್ಲಬಹುದು, ನಂಬಿಕೆಯನ್ನು ಮಾತ್ರ ಉಳಿಸಿಕೊಳ್ಳಬೇಕು.” ಪೃಥ್ವಿ ಬಸವರಾಜ್

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್ Read Post »

You cannot copy content of this page

Scroll to Top