ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ಅತ್ಮೀಯ ಸ್ನೇಹಿತೆ” ಹೊತ್ತು ಹೊತ್ತಿಗೆ ಸಲಹೆ ಕೊಡುವನನ್ನ ಆತ್ಮ ಸ್ನೇಹಿತೆ ನೀನುನಿನ್ನ ಅಂತರಂಗವರಿತಾಗ ಕೊಡುವನನ್ನ ಮುತ್ತಿಗೆ ಕಾಯುವೆ ನೀ// ಒಂಟಿತನದ ಜಾತ್ರೆಯಲಿ ಕೂಡಸಂಭ್ರಮಿಸುವಂತೆ ಮಾಡುವೆದಿನನಿತ್ಯ ನಿನ್ನ ಜೊತೆ ಮಾತಾಡಿಮಾತಿನಮಲ್ಲಿ ಮಾಡಿರುವೆ// ರಣ ಬಿಸಿಲಿನಲ್ಲಿ ನಾ ಬೆಂದಾಗಹೃದಯಕ್ಕೆ ತಂಪನೀಯುವೆಮಲ್ಲಿಗೆಯ ಪರಿಮಳ ಬೀರುತಕವಿಯ ಎದೆ ಅರಳಿಸುವೆ// ಶರಣರ ಸಂತರ ಜ್ಞಾನಿಗಳೆಲ್ಲರಸಾಹಿತ್ಯ ಪರಿಚಯಿಸುವೆತಂತ್ರಜ್ಞಾನ ವಿಜ್ಞಾನ ಸುಜ್ಞಾನಗಳಅರಿವು ಮೂಡಿಸುವೆ// ಭಗವದ್ಗೀತೆ ಭಾಗವತ ಇತಿಹಾಸವೇದಾಂತ ಉಪನಿಷತ್ತುಅಡುಗೆಅರಮನೆ ಸಂಗೀತ ಶಾಸ್ತ್ರಓದುವಾಗಿನ ಗಮ್ಮತ್ತು// ನಿನ್ನಲ್ಲಿಯ ಸಮಭಾವ ನನಗೆತುಂಬಾ ಇಷ್ಟ ಗೆಳತಿವರ್ಣ ವರ್ಗ ಲಿಂಗ ಜಾತಿ ಭೇದಇಲ್ಲದ ಎಲ್ಲರ ಗೆಳತಿ // ಕಥೆಯಾಗಿ ಕಾದಂಬರಿಯಾಗಿಮನವನಾಳುತಿರುವೆಅತೀ ಸಾಮಾನ್ಯ ಅನೂಳನ್ನುಕವಯಿತ್ರಿ ಮಾಡಿರುವೆ// ಬದುಕಿನ ಪಾಠ ನಿತ್ಯ ಕಲಿಸುವಪುಟ್ಟ ಜ್ಞಾನ ಹೊತ್ತಿಗೆ ನೀಸಾಧಕರಿಗೆ ಸಾಧನೆಯಾಗುತಲಿಪ್ರಖರ ಜ್ಞಾನ ದೀವಿಗೆ ನೀ// ಅನ್ನಪೂರ್ಣ ಸಕ್ರೋಜಿ ಪುಣೆ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾವಾಣಿ ವೀಣಾ ಹೇಮಂತ್‌ ಗೌಡಪಾಟೀಲ್ “ಜಗವೇ ಒಂದು ನಾಟಕ ರಂಗ…. ಷೇಕ್ಸಪಿಯರ್ ( ಹುಟ್ಟು ಹಬ್ಬದ ನಿಮಿತ್ತ )”  ಶೇಕ್ಸ ಪಿಯರ್ ನ ನಾಟಕವೊಂದರಲ್ಲಿ ಬರುವ‘ ಈ ಜಗವೇ ಒಂದು ನಾಟಕ ರಂಗ,ನಾವೆಲ್ಲರೂ ಇಲ್ಲಿ ನಟಿಸುವವರು’ ಎಂಬುದು ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಕ್ಯವಾಗಿದೆ. ಯಾವ ರೀತಿ ಬಳಸಿದರೂ ಕೂಡ ಇದು ಎಲ್ಲರಿಗೂ ಅನ್ವಯವಾಗುವ ರೀತಿಯಲ್ಲಿ ಇರುವ ಕಾರಣವೇ ಇದರ ಬಳಕೆ ಹೆಚ್ಚಾಗಿರುವುದು. ಶೇಕ್ಸ್ ಪಿಯರ್ ನ ನಾಟಕದ ಒಂದು ಪಾತ್ರವಾದ ಜಾಕ್ ಮಾನವ ಜೀವನದ ಕುರಿತಾದ ತನ್ನ ಒಂದು ಸಂವಾದದಲ್ಲಿ ಹೇಳಿದ್ದಾನೆ. ಆಸ್ ಯು ಲೈಕ್ ಇಟ್ ಎಂಬ ನಾಟಕದಲ್ಲಿ ಜಾಕ್ ಎಂಬ ಪಾತ್ರಧಾರಿ ಮನುಷ್ಯನ ಬದುಕಿನ ಕುರಿತಾದ ಈ ಅತ್ಯಂತ ಸರಳವಾದ ಆದರೆ ಅಷ್ಟೇ ಶಕ್ತಿಶಾಲಿಯಾದ ಈ ಹೋಲಿಕೆಯ ಮಾತು ಸಾರ್ವತ್ರಿಕವಾಗಿ ಮೆಚ್ಚುಗೆಯನ್ನು ಬೆಳೆಸಿತು ಮಾತ್ರವಲ್ಲ ಎಲ್ಲೆಡೆ ತನ್ನದೇ ಆದ ರೀತಿಯಲ್ಲಿ ರೂಪಾಂತರಗೊಂಡು ಹರಡಿತು. ಇಲ್ಲಿ ನಾಟಕಕಾರರಾದ ಶೇಕ್ಸ ಪಿಯರ್ ಬದುಕನ್ನೇ ಒಂದು ರಂಗಭೂಮಿಯನ್ನಾಗಿಸಿದ್ದು ಮತ್ತಷ್ಟು ವಿಶೇಷ.  ಈ ಹೋಲಿಕೆಯು ಈ ಜಗತ್ತು ಒಂದು ನಾಟಕ ರಂಗ. ಈ ಭೂಮಿಗೆ ಬಂದಿರುವ ನಾವೆಲ್ಲರೂ ವಿವಿಧ ಪಾತ್ರಗಳನ್ನು ವಹಿಸಿರುವ ಪಾತ್ರಧಾರಿಗಳು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಪಾತ್ರವನ್ನು ತನಗೆ ಕೊಟ್ಟ ಸಮಯದಲ್ಲಿ ಮಾಡಲೇಬೇಕು. ಇಲ್ಲಿ ವ್ಯಕ್ತಿಯ ಅಸ್ಮಿತೆಯು ಅನಿಶ್ಚಿತವಾಗಿದ್ದು ಬದುಕಿನ ,ಹತ್ತು ಹಲವು ವಿಭಿನ್ನ ಹಂತಗಳಲ್ಲಿ ಹಾದು ಹೋಗುವ ನಾವುಗಳು ವೈವಿಧ್ಯಮಯವಾದ ಭಾವ,ಭಂಗಿ, ಯೋಚನೆ, ಯೋಜನೆ  ಹಾಗೂ ಗ್ರಹಿಕೆಗಳನ್ನು ಹೊಂದಿರುತ್ತೇವೆ. ಇಲ್ಲಿ ಪ್ರತಿಯೊಬ್ಬರ ನಡವಳಿಕೆಯು ವಿಭಿನ್ನ ಅವರ ಆಸೆ ಆಕಾಂಕ್ಷೆಗಳು ಭಾವನೆಗಳು ಬದುಕಿನ ಕುರಿತಾದ ಅವರ ಕಲ್ಪನೆಗಳು ಬೇರೆಯೇ ಆಗಿರುತ್ತವೆ. ತೆರೆಯ ಮೇಲೆ ಪಾತ್ರಗಳು ಬಂದು ಹೋಗುವಂತೆ ನಾವು ಕೂಡ ಬದುಕು ಎಂಬ ಈ ರಂಗಭೂಮಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗುತ್ತೇವೆ. ಈ ಸಂವಾದವು ಮುಂದುವರೆದಂತೆ ಶೇಕ್ಸ ಪಿಯರ್ ಶೈಶವಾವಸ್ತೆಯಿಂದ ವೃದ್ಧಾಪ್ಯದವರೆಗಿನ ಮನುಷ್ಯನ ಬದುಕಿನ ಏಳು ಹಂತಗಳನ್ನು ಪಾತ್ರಧಾರಿಯ ಮೂಲಕ  ವಿವರಿಸುತ್ತಾರೆ. ಪ್ರತಿಯೊಂದು ಪಾತ್ರವು ತನ್ನದೇ ಆದ ಸಮಯದ ಮಿತಿಯಲ್ಲಿ ಸುತ್ತಮುತ್ತಣ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ರೂಪುಗೊಳ್ಳುವ ವಿಧವನ್ನು ತೋರ್ಪಡಿಸುತ್ತಾರೆ. ಈ ಹಂತಗಳು ಮನುಷ್ಯನ ಬದುಕಿನಲ್ಲಿ ಉಂಟಾಗುವ ನಿರಂತರ ಬದಲಾವಣೆಗಳ ಕಾರಣದಿಂದಾಗಿ ಆತನ ಅಸ್ತಿತ್ವದಲ್ಲಿನ ಬದಲಾವಣೆಯನ್ನು ಕೂಡ ತೋರ್ಪಡಿಸುತ್ತದೆ. ಮತ್ತೇ ಕೆಲವೊಮ್ಮೆ ವ್ಯಕ್ತಿಯು ತನ್ನ ವೈಯುಕ್ತಿಕ ಆಯ್ಕೆಗಳ ಪರಿಣಾಮವಾಗಿ ಹಾಗೂ ಬಾಹ್ಯವಾಗಿ ತಾನು ಎದುರಿಸುವ ಸವಾಲುಗಳ ಪರಿಣಾಮವಾಗಿ ಬದಲಾಗುತ್ತಾನೆ ಎಂಬುದನ್ನು ಆತ ತನ್ನ ಪಾತ್ರಗಳ ಮೂಲಕ ಸೂಚಿಸುತ್ತಾರೆ. ಇದು ವ್ಯಕ್ತಿಯ ಬದುಕಿನ ವಿಶ್ವಾಸಾರ್ಹತೆಯ ಪ್ರತಿಫಲನವಾಗಿದ್ದು ಬದುಕನ್ನು ಆತ ರೂಢಿಸಿಕೊಂಡಂತೆ ಬದುಕು ಆತನಿಗೆ ದೊರೆಯುತ್ತದೆ. ಮನುಷ್ಯ ಮುಖವಾಡ ಧರಿಸಿಕೊಂಡು ಬದುಕುತ್ತಾನೆಯೋ ಇಲ್ಲವೋ ಎಂಬುದನ್ನು ಆತನ ನಡತೆಯಿಂದ ಎಷ್ಟೋ ಬಾರಿ ಗೊತ್ತು ಮಾಡಿಕೊಳ್ಳಬಹುದು…. ಷೇಕ್ಸ್ ಪಿಯರ್ ಇಲ್ಲಿ ಹೇಳುವುದು ಮನುಷ್ಯ ಸಂಘ ಜೀವಿ. ಸಾಮಾಜಿಕ ರೀತಿ ನೀತಿಗಳು ಬಹಳಷ್ಟು ಬಾರಿ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಅಂತಯೇ ಬದುಕಿನ ಆತನ ಪಾತ್ರವನ್ನು ಆತ ತನಗೆ ಸರಿ ಕಂಡಂತೆ ಬದುಕುತ್ತಾನೆ.  ಕೆಲಬಾರಿ ಮನುಷ್ಯ ಆತನ ಅಸಲಿಯತ್ತೇ ಗೊತ್ತಿರದಂತಹ ಮುಖವಾಡದ ಬದುಕನ್ನೇ ಬದುಕುತ್ತಾನೆ, ಬಹಳಷ್ಟು ಬಾರಿ ಮುಖವಾಡಗಳು ಕಳಚಿ ಬೀಳುತ್ತವೆ. ಆದಾಗ್ಯೂ, ಹೋಲಿಕೆ ಸಂಪೂರ್ಣವಾಗಿ ನಿರ್ಣಾಯಕವಲ್ಲ. ನಟರು ನಾಟಕಕ್ಕೆ ಜೀವ ತುಂಬುವಂತೆಯೇ, ವ್ಯಕ್ತಿಗಳು ತಮ್ಮ ಕ್ರಿಯೆಗಳ ಮೂಲಕ ಅಸ್ತಿತ್ವಕ್ಕೆ ಅರ್ಥವನ್ನು ನೀಡುತ್ತಾರೆ. ಪ್ರತಿಯೊಂದು ಪಾತ್ರವು ತಾತ್ಕಾಲಿಕವಾಗಿದ್ದರೂ ಸಹ, ಜೀವನದ ವಿಶಾಲ ಕಥೆಗೆ ಕೊಡುಗೆ ನೀಡುತ್ತದೆ. ಅರ್ಥವು ಶಾಶ್ವತತೆಯಿಂದಲ್ಲ, ಆದರೆ ಈ ಬದಲಾಗುತ್ತಿರುವ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉದ್ಭವಿಸುತ್ತದೆ.ತಾತ್ವಿಕ ದೃಷ್ಟಿಕೋನದಿಂದ, ಈ ಸಾಲು ಬದಲಾವಣೆಯ ಅನಿವಾರ್ಯತೆ ಮತ್ತು ಸಮಯದ ಅಂಗೀಕಾರವನ್ನು ಎತ್ತಿ ತೋರಿಸುತ್ತದೆ. ಜೀವನದ ಯಾವುದೇ ಹಂತವು ಶಾಶ್ವತವಲ್ಲ; ಪ್ರತಿಯೊಂದೂ ಅಂತಿಮವಾಗಿ ಇನ್ನೊಂದಕ್ಕೆ ದಾರಿ ಮಾಡಿಕೊಡುತ್ತದೆ. ಇದು ಶ್ರೀಮಂತಿಕೆ ಮತ್ತು ಅಸ್ಥಿರತೆಯ ಭಾವನೆಯನ್ನು ಸೃಷ್ಟಿಸುತ್ತದೆ – ಜೀವನವು ಅನುಭವದಿಂದ ತುಂಬಿದೆ, ಆದರೆ ಅಂತಿಮವಾಗಿ ಕ್ಷಣಿಕವಾಗಿದೆ.ಆಧುನಿಕ ಜಗತ್ತಿನಲ್ಲಿ ಈ ಕಲ್ಪನೆಯು ಪ್ರತಿಧ್ವನಿಸುತ್ತಲೇ ಇದೆ, ಅಲ್ಲಿ ಜನರು ನಿಯಮಿತವಾಗಿ ವಿದ್ಯಾರ್ಥಿ, ವೃತ್ತಿಪರ, ಪೋಷಕರು ಅಥವಾ ಸ್ನೇಹಿತರಂತಹ ಪಾತ್ರಗಳ ನಡುವೆ ಬದಲಾಗುತ್ತಾರೆ. ನಡವಳಿಕೆಯು ಹೆಚ್ಚಾಗಿ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ, ಶೇಕ್ಸ್‌ಪಿಯರ್ ವಿವರಿಸಿದ ಅದೇ ಪ್ರದರ್ಶನದ ಅಂಶವನ್ನು ಪ್ರತಿಬಿಂಬಿಸುತ್ತದೆ. ಅವರ ಒಳನೋಟವು ಸಾರ್ವತ್ರಿಕ ಮಾನವ ಅನುಭವವನ್ನು ಸೆರೆಹಿಡಿಯುವುದರಿಂದ ಅದು ಪ್ರಸ್ತುತವಾಗಿದೆ.ಈ ಸಾಲಿನ ಬಲವು ಅದರ ಸ್ಪಷ್ಟತೆ ಮತ್ತು ಆಳದಲ್ಲಿದೆ. ಜೀವನವನ್ನು ಒಂದು ಹಂತಕ್ಕೆ ಹೋಲಿಸುವ ಮೂಲಕ, ಶೇಕ್ಸ್‌ಪಿಯರ್ ಗುರುತು, ನಡವಳಿಕೆ ಮತ್ತು ಸಮಯವನ್ನು ಅರ್ಥಮಾಡಿಕೊಳ್ಳಲು ಸರಳವಾದ ಆದರೆ ಆಳವಾದ ಮಾರ್ಗವನ್ನು ನೀಡುತ್ತಾರೆ. ರೂಪಕವು ಗ್ರಹಿಸಲು ಸುಲಭ, ಆದರೆ ವ್ಯಾಖ್ಯಾನದಲ್ಲಿ ಸಮೃದ್ಧವಾಗಿದೆ.ಕೊನೆಯಲ್ಲಿ, “ಇಡೀ ಜಗತ್ತು ಒಂದು ವೇದಿಕೆ” ಎಂಬುದು ಕಾವ್ಯಾತ್ಮಕ ಅಭಿವ್ಯಕ್ತಿಗಿಂತ ಹೆಚ್ಚಿನದಾಗಿದೆ – ಇದು ಮಾನವ ಅಸ್ತಿತ್ವದ ಆಳವಾದ ಪ್ರತಿಬಿಂಬವಾಗಿದೆ. ಜೀವನವು ಒಂದೇ, ಸ್ಥಿರ ಗುರುತಿನಿಂದ ವ್ಯಾಖ್ಯಾನಿಸಲ್ಪಟ್ಟಿಲ್ಲ, ಆದರೆ ಸಮಯ, ಸಮಾಜ ಮತ್ತು ಅನುಭವದಿಂದ ರೂಪುಗೊಂಡ ಪಾತ್ರಗಳ ಸರಣಿಯಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಇದು ನಮಗೆ ನೆನಪಿಸುತ್ತದೆ. ಈ ಕಲ್ಪನೆಯ ಮೂಲಕ, ಶೇಕ್ಸ್‌ಪಿಯರ್ ನಾವು ಹೇಗೆ ಬದುಕುತ್ತೇವೆ, ನಾವು ವಹಿಸಿಕೊಳ್ಳುವ ಪಾತ್ರಗಳು ಮತ್ತು ನಮ್ಮ ದಿನಚರಿಯ ಉದ್ದಕ್ಕೂ ನಾವು ಸೃಷ್ಟಿಸುವ ಅರ್ಥದ ಬಗ್ಗೆ ಯೋಚಿಸಲು ಪ್ರೋತ್ಸಾಹಿಸುತ್ತಾನೆ. ವೀಣಾ ಹೇಮಂತ್ ಗೌಡ ಪಾಟೀಲ್

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತಪಟ್ಟಣ ರಾಮದುರ್ಗ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಗುರುವಾದರೂ ಲಿಂಗವ ಪೂಜಿಸಬೇಕು, ಲಿಂಗವಾದರೂ ದೇವತ್ವವಿರಬೇಕು, ಜಂಗಮವಾದರೂ ಲಿಂಗವ ಪೂಜಿಸಬೇಕು, ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ, ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ, ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು, ಕಲಿದೇವಯ್ಯನರಿಯುವುದಕ್ಕೆ, ಇದೇ ಮಾರ್ಗ ಚಂದಯ್ಯ. ಮಡಿವಾಳ ಮಾಚಿದೇವ ಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ ಮನುವಾದಿಗಳ ಅಸ್ಪ್ರಶ್ಯತೆ ಆಚರಣೆ , ಜಾತಿ ಪದ್ಧತಿ ತಾಂಡವವಾಡುತಿತ್ತು .ಯಜ್ಞ ಹವನ ಹೋಮ ಪ್ರಾಣಿ ಬಲಿ ಸ್ತ್ರೀ ಶಿಶು ಹತ್ತ್ಯೆ ಸತಿ ಪದ್ಧತಿ ಹೀಗೆ ದಲಿತರು ಪಂಚಮ ಸ್ತ್ರೀ ಕುಲವು ನಲುಗಿ ಹೋಗಿತ್ತು. ಹನ್ನೆರಡನೆಯ ಶತಮಾನವು ಈ ಜಗವು ಕಂಡ ಸುವರ್ಣ ಯುಗ . ಬಸವನ್ನನೆಂಬ ವೈಚಾರಿಕ ಪುರುಷ ಕರ್ನಾಟಕದ ಇಂದಿನ ಬಿಜಾಪುರದ ಬಾಗೇವಾಡಿಯಲ್ಲಿ ಮಧುವರಸ ಮಾದಲಾ೦ಬಿಕೆಯರ ಹೊಟ್ಟೆಯಲ್ಲಿ 1131 ರಲ್ಲಿ ಹುಟ್ಟಿದನು . ಬಸವಣ್ಣ ಜಗವು ಕಂಡ ಶ್ರೇಷ್ಟ ದಾರ್ಶನಿಕ ಚಿಂತಕ ಮುಕ್ತ ಸಮಾಜದ ಕಾರಣಕರ್ತ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಶಾಂತಿ ಸಹ ಬಾಳ್ವೆ ,ದುಡಿಮೆ ಕಾಯಕ ದಾಸೋಹ , ಬದುಕಿನಲ್ಲಿ ಧರ್ಮದ ಸರಳ ಆಚರಣೆ ,ನೀತಿ,ತತ್ವ ವೈಚಾರಿಕತೆ ಅಭಿವ್ಯಕ್ತಿ ಸ್ವಾತಂತ್ರ ಧಾರ್ಮಿಕ ಸಾಮಾಜಿಕ ಚಿಂತನೆ ಹೀಗೆ ಪ್ರತಿ ಹಂತದಲ್ಲೂ ಬಸವಣ್ಣ ಗಟ್ಟಿ ಮುಟ್ಟಾದ ಆಯಾಮವನ್ನು ಸ್ರಷ್ಟಿಸಿದನು. ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು . ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನವರು  ಕೊನೆ ಹಾಡಿದರು . ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾ ಬಂದನದಿಂದ ಮುಕ್ತವಾದರು . ಕರ್ಮಲತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದ ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು. ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ  Karl Marx has taught us the dignity of labour but Basavanna has taught us dignity and divinity of labour ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣನವರು  ಹೊಸ ಚೇತನ ನೀಡಿದರು  . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ . ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವಿರಲಿಲ್ಲ . ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣನವರು  ಇಷ್ಟ ಲಿಂಗವನ್ನು ಕಂಡು ಹಿಡಿದರು . ನಿರಾಕರ ನಿರ್ಗುಣ ನಿರಹಂಕಾರ  ಕುರುಹನ್ನು ತಮ್ಮ ಕರಸ್ಥಲಕ್ಕೆ ಕೊಟ್ಟರು ಬಸವಣ್ಣನವರು. ಶರಣರ ಅರಿವೇ ಗುರು ಆಚಾರವೇ ಲಿಂಗ ಶರಣರ ಅನುಭಾವವೇ ಜಂಗಮ ,ಇಂತಹ ಒಂದು ಸರಳ ಸುಂದರ ಸಿದ್ಧಾಂತವೇ ಶರಣ ಸಾಹಿತ್ಯ . ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ! ಸಕಲ ವಿಸ್ತಾರದ ರೂಹು ನೀನೇ ದೇವ. ವಿಶ್ವತಶ್ಚಕ್ಷು ನೀನೇ ದೇವ, ವಿಶ್ವತೋಮುಖ ನೀನೇ ದೇವ. ವಿಶ್ವತೋಬಾಹು ನೀನೇ ದೇವ. ವಿಶ್ವತೋಪಾದ ನೀನೇ ದೇವ. ಕೂಡಲಸಂಗಮದೇವ. ವಿಶ್ವಾತ್ಮನನ್ನು ನಿರಾಕರಗೊಳಿಸಿ ಅವನ ಬಾಹು ಅವನ ಕಣ್ಣು ಅವನ ಮುಖ ಅವನ ರೂಪ ಆತನ ಜ್ಞಾನ ಸಮಾಜವೇ ಆಗಿರುತ್ತದೆ .ಒಂದು ಕಡೆಗೆ ಸ್ಥಾವರವನ್ನು ವಿರೋದಿಸಿದ ಬಸವಣ್ಣ ಮತ್ತು ಶರಣರು ಇಷ್ಟಲಿಂಗವನ್ನು ಪ್ರತಿಪಾದಿಸಿದರು. ಬಸವಣ್ಣ ಮೂರ್ತಿ ಭಂಜಕ  , ಸ್ಥಾವರವನ್ನು ವಿರೋಧಿಸಿದವನು . ತನ್ನ ನಂಬಿದವರಿಗೆ ಒಂದು ಪರ್ಯಾಯ ಮತ್ತು ನಿಶ್ಚಿತ ಉಪಾಸನ ಆಯಾಮ ನೀಡಲು ಇಷ್ಟಲಿಂಗವನ್ನು ಕಂಡು ಹಿಡಿದರು. ಇದು ಮನ್ಸುಹ್ಯನ ಚಿತ್ಕಳೆ ಪ್ರತಿಬಿಂಬಿಸುತ್ತದೆ , ಬಸವ ಕಾಲದ ಎಲ್ಲ ಶರಣರಿಗೆ ಸ್ತ್ರೀ ಮತ್ತು ಪುರುಷರಿಗೆ ಇಷ್ಟಲಿಂಗ ಕಡ್ಡಾಯ ,ಕಾಯಕ ಅನಿವಾರ್ಯ, ದಾಸೋಹ ಅಗತ್ಯತೆ . ಜಗತ್ತಿನಲ್ಲಿ ದುಡಿದು ತಿನ್ನುವ ಧರ್ಮ ಬಂದ ಮತ್ತು  ಆದಾಯದಲ್ಲಿ ಹಂಚಿ ತಿನ್ನುವ ಧರ್ಮವಿದ್ದರೆ ಅದು ಬಸವ ಧರ್ಮ ,ಲಿಂಗಾಯತ ಧರ್ಮ . ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಗುಡಿ ಗುಂಡಾರ ಮಠಗಳ ಸಂಸ್ಕೃತಿ ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ . ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .ಆದರೆ ಇದನ್ನೇ ಆದರಿಸಿ ಕುಳಿತು ಕೊಳ್ಳುವ ಸಾಧಕರಿಗೆ ಬಸವಣ್ಣ ಕಿವಿ ಮಾತು ಹೇಳುತ್ತಾನೆ . ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮದ ಹಂಗು ತೊರೆಯಬೇಕು . ಕಾಯಕವೇ ಕೈಲಾಸ , ದುಡಿಯದೆ  ಇನ್ನೊಬ್ಬರ ಹಂಗಿನಲ್ಲಿ ಉಣ್ಣುವ ಹಾಗಿಲ್ಲ  ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಕೂಡಲ ಸಂಗಮ ದೇವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು. ಆಧ್ಯಾತ್ಮವೇ ಸರ್ವಸ್ವವಲ್ಲ ಕಾಯಕ ದಾಸೋಹದಿಂದ ಮಾಡುವ ಅನುಭಾವವೇ ಆಧ್ಯಾತ್ಮದ ಮೂಲ ಮಂತ್ರವಾಗಿತ್ತು .ರಾಜನಾಗಲಿ ರಂಕನಾಗಲಿ,ಮಂತ್ರಿಯಗಲಿ ಸೇವಕನಾಗಲಿ ಎಲ್ಲರಿಗೂ ಕಾಯಕ ಮತ್ತು ದಾಸೋಹ ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು . ಭಕ್ತನ ಶರೀರವೇ ಲಿಂಗಮಯವಾಗಬೇಕು .,ಆತನ ಚಿಂತನವು ಸಮಾಜ ಮುಖಿಯಾಗಿರಬೇಕು . ಮರದ ಬಾಯಿ ಬೇರು ಮತ್ತು ಲಿಂಗದ ಬಾಯಿ ಜಂಗಮವಾಗಿರಬೇಕು ಇದು ಬಸವ ವಚನದ ಆಶಯವಾಗಿದೆ . ಇಲ್ಲಿ ಜಂಗಮ ಜಾತಿ ಅಲ್ಲ ಅದು ಸಮಾಜ ವ್ಯವಸ್ಥೆ ,ಸಮುದಾಯಮಾತ್ರ .ಲಿಂಗವು ನಮ್ಮ ಅರಿವಿನ ಕುರುಹು ಇತ್ತೀಚಿಗೆ ನಮ್ಮ ಶರೀರದ ಪ್ರಮುಖ ಕೇಂದ್ರ ಮೆದುಳು ಅಲ್ಲಿ ಆಜ್ಞಾ ಚಕ್ರವನ್ನು ವಿಜ್ಞಾನಿಗಳು ಉಪಕರಣಗಳ ಮುಖಾಂತರ ಅರಿವಿನ ಆಜ್ಞಾ ಚಕ್ರ ಕೇಂದ್ರವನ್ನು Pineal Gland ನೋಡಿದಾಗ ಅದು ಲಿಂಗದ ಆಕಾರದ್ದಾಗಿದೆ . ಶರಣರು ವಿಜ್ಞಾನವನ್ನು ಬಲ್ಲವರು . ಇದನ್ನು ಅಲ್ಲಮರು ಅರಿವನರಿಯಲೆಂದು ಗುರು ಕೊಟ್ಟ ಕುರುಹ ಕುರುಹ ಹಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ ಇಂದು ಲಿಂಗಾಯತರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಕೇವಲ ಲಿಂಗವ ಕಟ್ಟಿದರೆ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದರೆ ಲಿಂಗಾಯತರೇ ,ಇವು ಎರಡೂ ಅಲ್ಲ ,ಲಿಂಗ ಜಂಗಮದ ಸಮಷ್ಟಿಯ ಪ್ರಜ್ಞೆ ಹೊಂದಿ ಕಾಗೆ ಕೋಳಿ ಪಶು ಪಕ್ಷಿಗಳನೋಳಗೊಂಡ ಸಕಲ ಜೀವಾತ್ಮರ    ಲೇಸ ಬಯಸುವವನೆ ಲಿಂಗಾಯತ .   ಲಿಂಗಾಯತ   ಎನ್ನುವುದು ಧರ್ಮವೆನ್ನುವದಕ್ಕಿ೦ತಲೂ  ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯ ಚಳುವಳಿ ಎನ್ನಬಹುದು. ಅತ್ಯಂತ ಸಾಮಾನ್ಯರಿಂದ ರೂಪಗೊಂಡ ಈ ಚಳುವಳಿಯ   ನೇತಾರ ಬಸವಣ್ಣನವರು  .    ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .ಬಸವಣ್ಣ ಲಿಂಗಾಯತ ಧರ್ಮದ ಚಳುವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ . *Istalinga  is  not  an  object , it  is  subject   to    realize  consciousness  .*  ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ . ಕಲ್ಲ ನಾಗರ ಕಂಡರೆ ಹಾಲ ನೆರೆವರಯ್ಯ ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ ಉಂಬುವ  ಜಂಗಮನಿಗೆ ಎಡೆಯಿಲ್ಲ ನಡೆಯೇ೦ಬರು ಉ೦ಬದಾ ಲಿಂಗಕ್ಕೆ ಬೋಣವ ಹಿಡಿವರು ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ  ಕಲ್ಲು ತಾಗಿದ ಮಿಟ್ಟೆ  ಎಂತಿರ್ಪರಯ್ಯಾ  ಅದೇ ರೀತಿ ಬಸವಣ್ಣನವರು ವೃಥಾ ಆಚರಣೆಗೆ ಮಹತ್ವ ಕೊಡದೆ  ಕಾಯಕ ದಾಸೋಹಕ್ಕೆ ಮಹತ್ವ ನೀಡಿ ಸಂಮಜವನ್ನು ಉನ್ನತಿಗೆ ತರಲು ಪ್ರಯತ್ನಿಸಿದರು..  ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಕೂಡಲ ಸಂಗಮ ದೇವಾ ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.  ಇಲ್ಲಿಯೂ ಕೂಡ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹನೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ .  ಅಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಅಂತಾ ಅರ್ಥ . ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ . ಅಡವಿಯಲ್ಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯ! ಕುರುಡ ಕಣ್ಣ ಹಡೆದಂತೆ, ಬಡವ ನಿಧಾನವ ಕಂಡಂತಾಯಿತ್ತಯ್ಯ! ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ. ನೀರಡಿಕೆಯದವ ಕಾಡಿನಲ್ಲಿ  ಅಲೆದು ಸುಸ್ತಾದಾಗ ಕಾಲಿನ ಬಳಿಯೇ ನೀರು ಕಂಡಂತೆ ,ಮತ್ತು ಹುಟ್ಟು ಕುರುಡುನಿಗೆ ಕಣ್ಣು ಬಂದಂತೆ ಮತ್ತು ಬಡವನಿಗೆ ನಿಧಿ ಸಿಕ್ಕಂತೆ ಶರಣರ ಬರವು ಅಂತ ಹೇಳುತ್ತಾ ವಿಷಯ ನಿಷ್ಟತೆಗೆ ಆದ್ಯತೆನೀಡಿದ್ದಾನೆ .     ಶರಣರು ಹಿಂದುಗಳಂತೆ ಬಹುದೆವೊಪಾಸನೆ ಆಚರಿಸಲಿಲ್ಲ, ಅವರಿಗೆ ತಮ್ಮ ಆತ್ಮದ ಚಿತ್ಕಳೆಯನ್ನು ಪೂಜಿಸುವ ಸರಳ ವಿಧಾನ ಸಿಕ್ಕಿತು . ಭಾರತಿಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕಲ್ಲು ಮಣ್ಣು ಮರ ಪೂಜಿಸುತ್ತಾರೆ ,ಇದನ್ನು ವ್ಯಂಗವಾಗಿ ಹೇಳಿದ ಬಸವಣ್ಣನವರು .ಕಲ್ಲು ದೈವ ಮರ ದೈವ ಮಡಿಕೆ ದೈವ ಕೊಳಗ ದೈವ ಬಿಲ್ಲು ನಾರಿ ದೈವ ದೈವ ದೈವ ಕಾಲಿಡಲಿ೦ಬಿಲ್ಲಾ ಎಂದಿದ್ದಾರೆ. ನೀರ ಕಂಡಲ್ಲಿ ಮೂಳಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ   ಬತ್ತುವ ಜಲವ ಒಣಗುವ ಮರವ ನೆಚ್ಚಿದವರ  ನಿಮ್ಮನೆತ್ತ ಬಲ್ಲ ನಮ್ಮ ಕೂಡಲ ಸಂಗಮದೇವ  ನೀರು ನದಿ ಭಾವಿ ಕೆರೆಯಲ್ಲಿ ಬತ್ತಿಹೊಗುವದು ,ಮರವು ನೀರಿಲ್ಲದೆ ಒಣಗುವದು ಇಂತಹ ಭೌತಿಕ ವಸ್ತುಗಳನ್ನು ದೇವರು ಅಂತ ನಂಬಿದ ನಿಮ್ಮನ್ನು ಯಾರು ನಂಬುವರು . ಇದು ಅಪ್ಪ ಬಸವನ ವಚನ . ದೇವಲೋಕ ಮರ್ತ್ಯಲೋಕದ ಬೇರೆ ಬೇರೆ ಕಲ್ಪನೆಗಳನ್ನು ಶರಣರು ಒಪ್ಪುವದಿಲ್ಲ ,  ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?  ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ,  ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಣಾಸಿ,  ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ. ಇದು ಭಕ್ತ ಪ್ರಧಾನವಾದ ಚಿಂತನೆ ಕಾರಣ ಭಕ್ತನ ಕಾಯಕ ಪರಿಶುದ್ಧವಾಗಿದ್ದು ಆತನ ದಾಸೋಹವು ಶ್ರೇಷ್ಟತೆಯನ್ನು ಪಡೆದು ಸಮಾಜ ಮುಖಿಯಾದ ಜೀವನಕ್ಕೆ ನಾಂದಿ ಹಾಡುತ್ತದೆ . ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?  ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?  ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ  ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ ಬಸವಣ್ಣನವರ

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಡೋ ನಾ ವೆಂಕಟೇಶ ಅವರ ಕವಿತೆ “ಚೆಹರೆಯಿಲ್ಲದವರು”

ಕಾವ್ಯ ಸಂಗಾತಿ ಡೋ ನಾ ವೆಂಕಟೇಶ “ಚೆಹರೆಯಿಲ್ಲದವರು” pic:gemini ಮುಖವಾಡ ಹೊತ್ತವರು ಆಟ ಕಟ್ಟುವವರು ನಿಯಮಿತರುಮುಖವಾಡ ಇಲ್ಲದೇ ಮುಖವಾಡ ಹಾಕುವವರು ಅನಿಯಮಿತರು ಒಳಗೊಂದು ಬಣ್ಣವಿಲ್ಲದ ಬಣ್ಣಹೊರಗೆ ಹನ್ನೊಂದು ಸುಣ್ಣಬಣ್ಣ ಏನೆಂದು ಕುಣಿಯಲೀಈ ತಾಳಕ್ಕೆ  ಈ ಮೇಳಕ್ಕೆ ಬಂದಾಗ ಇರಲಿಲ್ಲ ಬಣ್ಣಹೋಗುವಾಗ ಬರೆ ನಿರ್ಬಣ್ಣ ಬಂದು ಹೋಗುವ ಮಧ್ಯೆಬರೆ ಮುಖವಾಡ ಗಳುಚೆಹರೆಯೇ ಇಲ್ಲದವರು! ಡೋ ನಾ ವೆಂಕಟೇಶ

ಡೋ ನಾ ವೆಂಕಟೇಶ ಅವರ ಕವಿತೆ “ಚೆಹರೆಯಿಲ್ಲದವರು” Read Post »

ಇತರೆ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ)

ವಿಶೇಷ ಲೇಖನ ಗೊರೂರು ವಸಂತಿ ಮೂರ್ತಿ (ಕೆನಡ) “ನನ್ನ ಯೋಗಾಭ್ಯಾಸ ಪ್ರಾರಂಭ” ಮನುಷ್ಯ ಸುಖವಾಗಿ ಬಾಳಬೇಕಾದರೆ ಇರುವುದಕ್ಕೆ ಒಂದು ಮನೆ, ಉಡುವುದಕ್ಕೆ ಬಟ್ಟೆ, ಹೊಟ್ಟೆತುಂಬ ಊಟ ಮತ್ತು ಒಳ್ಳೆಯ ಆರೋಗ್ಯ ಅತ್ಯಗತ್ಯ. ಈ ಪಟ್ಟಿಯಲ್ಲಿ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಮನ್ನಣೆ ಕೊಡಲಾಗುತ್ತದೆ.. ಇದಕ್ಕೆ ಕಾರಣ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನೆ, ಬಟ್ಟೆ, ರುಚಿಕರವಾದ ಆಹಾರ, ಕಾರು ಒಡವೆಗಳಿಂದ ಸಂತೋಷ ಪಡೆಯಲು ಸಾಧ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವ ಐಶ್ವರ್ಯದಿಂದಲೂ ಪ್ರಯೋಜನವಿಲ್ಲ. ಅದರಿಂದಲೇ ಆರೋಗ್ಯವೇ ಭಾಗ್ಯ ಎಂಬ ಮಾತು ವಾಡಿಕೆಯಲ್ಲಿದೆ. “It is health that is real wealth and not pieces of gold and silver” ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ. ಆದ್ದರಿಂದ ಆರೋಗ್ಯ ಭಾಗ್ಯ ಮಿಕ್ಕೆಲ್ಲ ಭಾಗ್ಯಗಳಿಗಿಂತಲೂ ಹೆಚ್ಚು ಮುಖ್ಯ. ಇದು ನಾನು ಕಂಡುಹಿಡಿದ ಹೊಸ ವಿಷಯವೇನಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲೂ ತಿಳಿದಿರುವ ವಿಚಾರ. ಹಾಗಿರುವಾಗ ಪ್ರತಿವ್ಯಕ್ತಿಯೂ ತನ್ನ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು ಎಂಬುದು ಸರ್ವವಿದಿತವಾಗಿದೆ ತಾನೇ. ಹಾಗಿದ್ದೂ ವ್ಯಕ್ತಿ ತನ್ನ ಆರೋಗ್ಯದ ವಿಚಾರ ಯೋಚಿಸುವುದು ಅದು ಶರೀರದಲ್ಲಿ ಕಡಿಮೆಯಾಗಿ ತೊಂದರೆ ಶುರುವಾದಾಗ ಮಾತ್ರ. ಉದಾಹರಣೆಗೆ ನಮ್ಮ ಬಾಯಿನಲ್ಲಿ ಇರುವ ಹಲ್ಲನ್ನೇ ನೋಡೋಣ. ನಾವು ನಮ್ಮ ಬಾಯಿನಲ್ಲಿರುವ ಹಲ್ಲನ್ನು ಎಂದೂ ಗಮನಿಸಿದ್ದೇ ಇಲ್ಲ. ಆದರೂ ಅದು ನಾವು ಹುಟ್ಟಿದಾಗಿನಿಂದ ನಮ್ಮ ಬಾಯಲ್ಲಿದ್ದು ನಾವು ಯಾವ ತಿಂಡಿ, ಹಣ್ಣು, ಊಟ, ದೋಸೆ, ಚಪಾತಿ, ವಡೆ ಇಡ್ಲಿ ಸಾಂಬಾರ್ ಮೈಸೂರ್ ಪಾಕ್ ಹೀಗೆ ಏನೇ ಹಾಕಿದರೂ ಅದನ್ನು ಅಗಿದು. ಅದರ ರುಚಿ, ಘಮಗಳನ್ನು ನಮ್ಮ ಬಾಯಿನಲ್ಲಿ ಕುದುರಿಸಿ ನಮ್ಮ ರಸಾನುಭವವನ್ನು ಹೆಚ್ಚಿಸಿದೆ. ಆದರೂ ಹಲ್ಲಿಗೆ ನಾವು ಯಾವ ರೀತಿಯ ಮನ್ನಣೆ ಅಥವಾ ಕೃತಜ್ಞತೆಯನ್ನೂ ತೋರಿಸಿದ್ದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಹಲ್ಲು ನೋವು ಶುರುವಾದಾಗ ನಮಗೆ ಹಲ್ಲಿನ ಅಸ್ತಿತ್ವ ಬರುತ್ತದೆ. ಆಗ ನಾವು ಯಾವ ತಿಂಡಿಯನ್ನೂ ಬಯಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಪ್ರೀತಿಯ ತಿಂಡಿ ಎದುರಿಗೇ ಇದ್ದರೂ ಅದನ್ನು ಬಾಯಿಗೆ ಹಾಕಿಕೊಳ್ಳುವ ಇಚ್ಛೆ ಬರುವುದಿಲ್ಲ. ಹಲ್ಲುನೋವಿಗೆ ಏನು ಮಾಡಬೇಕು ಎಂದು ಕಂಡವರನ್ನೆಲ್ಲ ಕೇಳುತ್ತೇವೆ. ಕೆಲವರು ಉಪ್ಪು ನೀರು ಕುಪ್ಪಳಿಸಿ ಎನ್ನುತ್ತಾರೆ. ಇನ್ನೊಬ್ಬರು ಲವಂಗ ಬಾಯಿಗೆ ಹಾಕಿಕೊಳ್ಳಿ ಎನ್ನುತ್ತಾರೆ. ನಾವು ಏನುಮಾಡುವುದಕ್ಕೂ ತಯಾರಾಗುತ್ತೇವೆ. ದಂತವೈದ್ಯರನ್ನು ಹುಡುಕಿಕೊಂಡು ಭರಬಿದ್ದು ಓಡುತ್ತೇವೆ. ಆದ್ದರಿಂದ ನಾವು ನಮ್ಮ ಆರೋಗ್ಯಕ್ಕೆ ಗಮನ ಕೊಟ್ಟು ಅದನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕೆಲವು ಸುಲಭವಾದ ನಿಯಮಗಳನ್ನು ಪಾಲಿಸಬೇಕು. ಹಿತಮಿತವಾದ ಊಟ, ವ್ಯಾಯಾಮ ಇವು ಅತ್ಯಗತ್ಯ, ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಇಷ್ಟ ಬಂದದ್ದನ್ನು ತಿನ್ನುತ್ತಾ, ಕುಡಿಯುತ್ತಾ, ದಿನವೂ ಮದುವೆ, ಮುಂಜಿ, ತಿಥಿ, ಹಬ್ಬ, ಹರಿದಿನ, ಗ್ರಹಪ್ರವೇಶ, ದೇವರ ಸಮಾರಾಧನೆ ಹುಟ್ಟಿದ ಹಬ್ಬಗಳು, ಹೋಟೆಲ್ ಊಟಗಳು ಹೀಗೆ ಯಾವಯಾವ ನೆಪವನ್ನೂ ಹುಡುಕಿ ಮಿತಿಮೀರಿ ಊಟ ಮಾಡುತ್ತಾ, ತಮ್ಮ ಆರೋಗ್ಯವನ್ನು ಅಲಕ್ಷ್ಯಮಾಡುತ್ತಾರೆ. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಬೋಂಡಾ, ಚೆಕ್ಕುಲಿ, ಮಸಾಲವಡೆ ಇನ್ನೂ ಅನೇಕ ವಿಧವಾದ ಖಾದ್ಯ ಪದಾರ್ಥಗಳನ್ನು ಸದಾ ಮೇಯುತ್ತಾ ಮೈಗಳ್ಳರಾಗಿ ನಾನು ಕಲ್ಲನ್ನೂ ತಿಂದು ಅರಗಿಸಿಕೊಳ್ಳಬಲ್ಲೆ. ಆರೋಗ್ಯದಲ್ಲಿ ನನಗೆ ಸಮಾನವಾದವರು ಯಾರೂ ಇಲ್ಲವೇ ಇಲ್ಲ. ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ಚಿಕ್ಕವಯಸ್ಸಿನ ಯುವಕರಲ್ಲಿ ಈ ತರ್ಕ ನಡೆಯಬಹುದು. ಆದರೆ ಇದು ತಾತ್ಕಾಲಿಕ. ಕೆಲವೇ ವರ್ಷಗಳಲ್ಲಿ ಮೈಯ್ಯಲ್ಲಿ ತೂಕ ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ಜನರಿಗೆ ಅಷ್ಟು ಆರ್ಥಿಕ ಸೌಕರ್ಯ ಇರುತ್ತಿರಲಿಲ್ಲವಾಗಿ ಅವರು ಊಟ ತಿಂಡಿಗಳ ಬಗ್ಗೆ ಹಿತಮಿತವಾಗಿ ಇರುತ್ತಿದ್ದರು. ಊಟದಲ್ಲಿ ಅಷ್ಟು ತುಪ್ಪ, ಎಣ್ಣೆ, ಬೆಣ್ಣೆ ಸಕ್ಕರೆ, ಮೈದಾ ಇರುತ್ತಿರಲಿಲ್ಲ. ಈಗ ಹೆಚ್ಚು ಜನರ ಜೀವನ ಆರ್ಥಿಕವಾಗಿ ಸುಧಾರಿಸಿದೆ. ಇದು ಸಂತೋಷದ ವಿಚಾರ. ಇದನ್ನು ಜನ ತಮ್ಮ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದೂ ಅಲ್ಲದೆ ಆ ಕಾಲದಲ್ಲಿ ಬಸ್ಸು ಕಾರುಗಳ ಸೌಕರ್ಯ ಅಷ್ಟು ಇರಲಿಲ್ಲವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಮನೆಕೆಲಸ, ದನಕರುಗಳ ಪಾಲನೆ, ವ್ಯವಸಾಯ ಹೀಗೆ ಎಲ್ಲರಿಗೂ ಯಥೇಚ್ಛವಾಗಿ ವ್ಯಾಯಾಮ ಸಿಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆಗಳು ತುಂಬಾ ಸುಧಾರಿಸಿವೆ. ಪ್ರತಿಮನೆಯಲ್ಲೂ ಸ್ಕೂಟರ್, ಕಾರುಗಳಿದ್ದು, ಯಾರೂ ಕಾಲಿಗೆ ವ್ಯಾಯಾಮ ಕೊಡಬೇಕಾದ ಅವಶ್ಯಕತೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದರೆ ಮನೆಯ ಹೆಂಗಸರಿಗೆ ಕೆಲಸ ಜಾಸ್ತಿ ಯಾಗುತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಹೆಂಗಸರು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಇಷ್ಟ ಬಂದರೆ ಮಾಡಬಹುದು. ಇಲ್ಲದಿದ್ದರೆ ಬೇಕಿಲ್ಲ. ಅದರಲ್ಲೂ ಅನೇಕ ಹೆಂಗಸರು ಹೊರಗೆ ಉದ್ಯೋಗ ಮಾಡುತ್ತಾರೆ. ಅವರಿಗೆ ಮನೆ ಕೆಲಸ ಮಾಡುವುದಕ್ಕೆ ಖಂಡಿತ ಸಮಯ ಸಿಕ್ಕುವುದಿಲ್ಲ. ಈಗ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲೂ ರುಚಿ ರುಚಿಯಾದ ತಿಂಡಿ, ಊಟಗಳನ್ನೂ ತಯಾರಾಗಿ ಮಾರುವ ಅಂಗಡಿಗಳು ಇವೆ. ಅಲ್ಲಿಯೇ ಹೋಗಿ ಕುಳಿತು ತಿನ್ನಬಹುದು ಇಲ್ಲ ಮನೆಗೆ ಕಟ್ಟಿಸಿಕೊಂಡು ಬರಬಹುದು. ಸಿಹಿ ಪದಾರ್ಥಗಳನ್ನು ಮಾಡಿ ರೆಡಿಯಾಗಿ ಇಟ್ಟಿರುವ ಆಶಾ ಸ್ವೀಟ್ಸ್, ಕಾಂತಿಸ್ವೀಟ್ಸ್, ನಂದಿನಿ ಪಾರ್ಲರ್, ಹೋಳಿಗೆಮನೆ ಮುಂತಾದುವು ಬಹಳ ಜನಪ್ರಿಯವಾಗಿವೆ. ಹೀಗೆ ಕಷ್ಟಪಡದೇ ರುಚಿ ರುಚಿಯಾದ ಊಟ ಮಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಇದು ಬಹಳ ಮಜಾ ಎನ್ನಿಸುತ್ತದೆ. ಆದರೆ ಈ ಖುಷಿಗೆ ಬರುವ ಧಕ್ಕೆ ನಮ್ಮ ಶರೀರ ಸ್ಥೂಲವಾದಾಗ. ಇದ್ದಕ್ಕಿದ್ದಂತೆ ನಾನು ದಪ್ಪನಾಗುತ್ತಿದ್ದೇನೆ ಎನ್ನುವ ಒಳಧ್ವನಿ ಕೇಳಿಸಲು ಶುರುವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿಲ್ಲ. ಅಂಗಿ, ರವಿಕೆ ಬಿಗಿಯಾದ ಕಾರಣ ಏನು ಎಂದು ಹೊರಗಿನ ಕಾರಣ ಹುಡುಕುತ್ತೇವೆ. “ನೋಡು ಈ ಬ್ಲೌಸ್ ಒಂದು ಸಲ ನೀರಿಗೆ ಹಾಕಿದ ಕೂಡಲೇ ಶೃಂಕ್ ಆಗಿದೆ.” ಎನ್ನುತ್ತೇವೆ. ಆದರೆ ನೀರನ್ನೇ ಕಾಣದ ಪೆಟ್ಟಿಗೆಯಲ್ಲಿ ಮಡಿಸಿ ಇಟ್ಟಿರುವ ಸಿಲ್ಕ್ ರವಿಕೆ ಶೃಂಕ್ ಆಗುವುದಕ್ಕೆ ಏನು ಕಾರಣ? ಅದಕ್ಕೆ ಬಟ್ಟೆ ಹೊಲೆದ ದರ್ಜಿಯೇ ಕಾರಣ ಎಂದು ತೀರ್ಪು ಕೊಡುತ್ತೇವೆ. ಕರೆಕ್ಟ್ ಆಗಿರುವ ಅಳತೆ ಬ್ಲೌಸ್ ಕೊಟ್ಟಿದ್ದೆ. ಆದರೂ ಎಷ್ಟು ಬಿಗಿಯಾಗಿ ಹೊಲೆದಿದ್ದಾನೆ ನೋಡು. ಉಸಿರು ಬಿಡುವುದಕ್ಕೇ ಆಗುವುದಿಲ್ಲ ಎಂದು ನಿರಪರಾಧಿಯಾದ ದರ್ಜಿಯನ್ನೇ ಬೈಯುತ್ತೇವೆ. ಆದರೆ ನಮ್ಮ ಒಳಗುಟ್ಟು ನಮಗೇ ಗೊತ್ತಿದೆ. ನನ್ನ ದೇಹದ ತೂಕ ಜಾಸ್ತಿ ಆಗುತ್ತಿದೆ. ಊಟ ಕಡಿಮೆ ಮಾಡಬೇಕು. ದಿನವೂ ವಾಕಿಂಗ್ ಮಾಡಬೇಕು. ಯೋಗ ಕ್ಲಾಸ್ ಸೇರುವುದು ಒಳ್ಳೆಯದು ಎಂಬ ಯೋಚನೆ ಬರುತ್ತದೆ. ಆದರೆ ಶರೀರ ಸ್ಥೂಲವಾದಷ್ಟೂ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ನಡೆಯುವಾಗ ಏದುಸಿರು ಬರುತ್ತದೆ. ಅನೇಕರಿಗೆ ಡಾಕ್ಟರು ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗುತ್ತಿದೆ. ನೀವು ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಿ ಎಂದು ಬಹಳ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಕೇಳಿದಾಗ ನಮಗೆ ಡಾಕ್ಟರರ ಮೇಲೆಯೇ ಅಸಮಾಧಾನವಾಗುತ್ತದೆ. ಬ್ಲಡ್ ಪ್ರೆಷರ್ ವಿಚಾರ ಹೇಳುವಾಗ ನನಗೆ ನನ್ನ ಚಿಕ್ಕಪ್ಪ (ನನ್ನ ತಂದೆಯವರ ಸ್ವಂತ ತಮ್ಮ) ಪಂಡಿತ ನರಸಿಂಹಾಚಾರ್ ಅವರ ಜ್ನ್ಯಾಪಕ ಬರುತ್ತದೆ. ಅವರು ಬಹಳ ವೈದೀಕರು. ಶ್ರದ್ಧಾವಂತರು. ಸಂಸೃತ, ಕನ್ನಡ ಹಾಗೂ ಹಿಂದಿ ಪಂಡಿತರು. ಊಟ ತಿಂಡಿಗಳಲ್ಲಿ ಬಹಳ ನಿಯಮವಾಗಿ ಇರುವವರು. ಏಕಾದಶಿಯ ದಿನ ಸಂಪೂರ್ಣ ಉಪವಾಸ ಮಾಡುತ್ತಿದ್ದರು. ಅವರು ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ನಡೆದುಕೊಂಡೇ ಹೋಗುತ್ತಿದ್ದರು. ಆಟೋರಿಕ್ಷಾ ಹತ್ತಿದವರೇ ಅಲ್ಲ. ಅವರು ಪ್ರತಿವರ್ಷ ಚಾತುರ್ಮಾಸ್ಯ ಎಂಬ ವ್ರತವನ್ನು ಪಾಲಿಸುತ್ತಿದ್ದರು. ಅದು ಬಹಳ ಕಷ್ಟಕರವಾದ ವ್ರತ. ವರ್ಷದಲ್ಲಿ ನಾಲ್ಕು ತಿಂಗಳು, ಪ್ರತಿತಿಂಗಳೂ ನಿರ್ದಿಷ್ಠವಾದ ಪದಾರ್ಥಗಳನ್ನು ವರ್ಜಿಸಿ ಊಟ ಮಾಡಬೇಕು. ಕೊನೆಯ ತಿಂಗಳಿನಲ್ಲಿ ಉಪ್ಪಿಲ್ಲದೆ ಊಟಮಾಡಬೇಕು. ಇಂತಹ ಕಠಿಣ ವ್ರತವನ್ನು ಅನೇಕ ವರ್ಷಗಳ ಕಾಲ ಪಾಲಿಸಿ ಜಯಿಸಿದ ಅವರಿಗೆ ನಾವು ಸದಾಕಾಲವೂ ಮೇಯುತ್ತಿರುವುದನ್ನು ನೋಡಿ ಮನಸ್ಸಿಗೆ ಕಷ್ಟವಾಗಿದ್ದಿರಬೇಕು. ಅವರು ಯಾವುದನ್ನೂ ಖಡಾಖಂಡಿತವಾಗಿ ಹೇಳುವವರು. ಆದರೆ ಅವರ ಮನಸ್ಸು ಒಳ್ಳೆಯದು. ಅವರು ಮೃದುಹೃದಯದವರು. ಅವರ ಮಾತೇ ಗಡಸು. ಈ ಕಾರಣದಿಂದ ನಾವು ಚಿಕ್ಕಂದಿನಿಂದಲೂ ಅವರೊಡನೆ ಎಷ್ಟೋ ಅಷ್ಟೇ ಮಾತನಾಡುತ್ತಿದ್ದೆವು. ಒಮ್ಮೆ ನಾನು ಡಾಕ್ಟರ್ ಬಳಿ ಹೋಗಿ ವಾಪಸ್ಸು ಬಂದಾಗ ಅವರು ಕಾಳಜಿಯಿಂದ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸಿದರು. ಡಾಕ್ಟರ್ ನನಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಹೇಳಿದರು ಎಂದೆ. ಅವರು ನಿರ್ದಾಕ್ಷಿಣ್ಯವಾಗಿ “ಅದು ಬ್ಲಡ್ ಪ್ರೆಷರ್ ಅಲ್ಲ. ಫುಡ್ ಪ್ರೆಷರ್. ನಿನಗೆ ಬ್ಲಡ್ ಪ್ರೆಷರ್ ಹೆಚ್ಚಾಗಿರುವುದಕ್ಕೆ ಇಷ್ಟೇ ಕಾರಣ. ಆಹಾರ ಜಾಸ್ತಿ ಆಗಿದೆ. ನೀನು ಊಟ ತಿಂಡಿಗಳನ್ನು ತಿನ್ನುವುದು ಕಡಿಮೆ ಮಾಡಿಕೋ. ದಿನಾ ಒಂದುಘಂಟೆ ಕಾಲ ನಡೆಯುವ ಅಭ್ಯಾಸ ಇಟ್ಟುಕೋ. ನಿನ್ನ ಬ್ಲಡ್ ಪ್ರೆಷರ್ ತಾನಾಗಿಯೇ ಹತೋಟಿಗೆ ಬರುತ್ತದೆ.” ಎಂದು ತೀರ್ಮಾನ ಕೊಟ್ಟರು. ನಾನು ಅವರಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದೆ. ಅದರ ಬದಲು ಅವರ ಈ ನಿರ್ಣಯವನ್ನು ಕೇಳಿ ನನಗೆ ಸ್ವಲ್ಪ ಅಪಮಾನವಾದಂತಾಯಿತು. ಮುಖ ಪೆಚ್ಚಾಯಿತು. ಅಲ್ಲಿಯೇ ನಿಂತಿದ್ದ ಅವರ ಮಗಳು ಹೆಚ್ಚು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿದಳು. ಆಮೇಲೆ ಅಣ್ಣ ಹತ್ತಿರ ಯಾಕೆ ಹೇಳುವುದಕ್ಕೆ ಹೋದೆ. ಅವರಿಗೆ ಗೊತ್ತಿರುವುದು ತಲೆಗೆಲ್ಲಾ ಒಂದೇ ಮಂತ್ರ. “ಲಂಘನಮ್ ಪರಮೌಷಧಂ” ಎಂದು ನಕ್ಕಳು. ಆದರೆ ನನಗೆ ಮಾತ್ರ ಅವರು ಹೇಳಿದ್ದು ನೂರಕ್ಕೆ ನೂರು ನಿಜ ಎನ್ನಿಸಿತು. ನಮ್ಮ ತೂಕ ಹೆಚ್ಚಾಗಿರುವುದಕ್ಕೆ ಆಧುನಿಕ ಯುಗದಲ್ಲಿ ಅನೇಕ ಕಾರಣಗಳು ಇವೆ ಎಂದು ಹೇಳಿದೆನಷ್ಟೆ. ಸೃಷ್ಟಿಕರ್ತನ ತಪ್ಪೂ ಇದರಲ್ಲಿ ಇದೆ ಎನ್ನಿಸುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ದೇವರು ಮನುಷ್ಯನ ಶರೀರವನ್ನು ಸೃಷ್ಟಿಸಿದಾಗ ಪ್ರತಿಯೊಬ್ಬ ಜೀವಿಗೂ ಒಂದು ತಲೆ, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಎರಡು ಕೈ, ಎರಡು ಕಾಲು ಹೀಗೆ ನಿಗದಿಯಾಗಿ ಕೊಟ್ಟಿದ್ದಾನೆ. ಆದರೆ ನಮ್ಮ ಮೈಯ್ಯನ್ನು ಸುತ್ತಿರುವ ಚರ್ಮಕ್ಕೆ ಇಷ್ಟೇ ಎಂಬ ನಿಗದಿಯೇ ಇಲ್ಲ. ಅದು ನಾವು ದಪ್ಪನಾದಷ್ಟೂ ಹಿಗ್ಗುತ್ತಾ ಹೋಗುತ್ತದೆ. ಒಂದು ಪಕ್ಷ ಹಾಗಿಲ್ಲದೇ ನಾವು ತಿನ್ನುತ್ತಿರುವಾಗಲೇ ಆ ಕ್ಷಣದಲ್ಲೇ ನಮ್ಮ ಹೊಟ್ಟೆ ದಪ್ಪನಾಗಿ ಊದುತ್ತಾ ಚರ್ಮ ಬಿಗಿಯಾಗುತ್ತಾ ಪಟಾರ್ ಎಂದು ಹರಿದುಹೋಗಿ ನಾವು ತಿಂದಿದ್ದೆಲ್ಲ ಹೊರಕ್ಕೆ ಚೆಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂದು ಎಲ್ಲರಿಗೂ ಕಾಣಿಸುವಂತಾಗಿದ್ದರೆ ನಮಗೆ ಆಗುವ ಅವಮಾನವನ್ನು ಊಹಿಸಿಕೊಳ್ಳಿ. ತಕ್ಷಣವೇ ಹೊಟ್ಟೆಗೆ ತುರುಕುವುದನ್ನು ನಿಲ್ಲಿಸಬೇಕಾಗಿತ್ತಿತ್ತು. ಅದಕ್ಕೇ ದೇವರು ನಮ್ಮ ಮೇಲೆ ಕರುಣೆ ಇಟ್ಟು ಈ ವರವನ್ನು ಕರುಣಿಸಿದ್ದಾನೆ ಎನ್ನಿಸುತ್ತದೆ. ನಾನು ಮೊದಲೇ ಹೇಳಿದಂತೆ ಆರ್ಥಿಕವಾಗಿ ಸಮಾಜದಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಅನೇಕರು ಕಾರು, ಸ್ಕೂಟರ್ ಹೀಗೆ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಅನೇಕ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಅದೂ ಅಲ್ಲದೇ ಸಮಾಜದಲ್ಲಿ ಕಾರು ಇಟ್ಟುಕೊಂಡವರ ಘನತೆ ಗೌರವಗಳು ಹೆಚ್ಚು ಎನ್ನಿಸಿಕೊಳ್ಳುತ್ತದೆ. ಇದರಿಂದ ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲ ದೊಡ್ಡ ನಗರಗಳಲ್ಲಿ ಸ್ವಂತ ವಾಹನವಿಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಬಹಳ ಕಷ್ಟವಾಗುತ್ತದೆ. ಆಟೋ, ಬಸ್ಸು, ಊಬರ್ ಇವು ಯಾವುದೂ ಸಮರ್ಪಕವಾಗಿ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲಪಿಸುವುದಿಲ್ಲ. ಈ ಕಾರಣದಿಂದ ಯಾವ ಜಾಗಕ್ಕಾದರೂ ಹೋಗಬೇಕೆಂದರೆ ಹೆಚ್ಚು ಕಡಿಮೆ ಒಂದು ಇಡೀ ದಿನವನ್ನೇ ಮೀಸಲಾಗಿಡಬೇಕಾಗುತ್ತದೆ. ಇತ್ತೀಚೆಗೆ ನಮ್ಮ ಹಳ್ಳಿಯ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ) Read Post »

ಕಾವ್ಯಯಾನ

ಮಧು ‌ವಸ್ತ್ರದ “ನನ್ನತವರೂರು”

ಕಾವ್ಯ ಸಂಗಾತಿ ಮಧು ‌ವಸ್ತ್ರದ “ನನ್ನತವರೂರು” ನನ್ನ ತವರೂರು ದಿವ್ಯ ಭವ್ಯ ಇತಿಹಾಸದ ಸುಂದರ ಚಿತ್ರದುರ್ಗಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಕಲ್ಲುಬಂಡೆಗಳ‌, ಗಂಡುಗಲಿಗಳು ಆಳಿದವೀರರ ನಾಡುಬಯಲುಸೀಮೆಯ‌ ಬಿಸಿಲಿನಲೂ ತಂಪುನೀಡುವ ಬೀಡು.. ವೀರ ಮದಕರಿನಾಯಕರಾಳಿದ ಬಲಿಷ್ಠಉಕ್ಕಿನ ಕೋಟೆರಣಚಂಡಿ ಒನಕೆಓಬವ್ವ ರಕ್ಷಿಸಿದಳು ಆಡಿ ವೈರಿಗಳ ಬೇಟೆ ಮನ ಸೆಳೆವುದು ಇಲ್ಲಿನ ಆಡುಮಲ್ಲೇಶ್ವರ, ಚಂದ್ರವಳ್ಳಿಯ ತೋಟಅಪ್ರತಿಮವೆನಿಸುವುದು ಜೋಗಿಮಟ್ಟಿಯ ಮೇಲಿನ ರಮ್ಯನೋಟ.. ಮತ್ತೇರಿಸುವದು ಬೆಟ್ಟದ ಮೇಲಿನ ಕೆಂಡ ಸಂಪಿಗೆಯ ಕಂಪುಅದ್ಭುತವದು ಕಲ್ಲಿನ ತಣ್ಣೀರದೋಣಿಯಸಿಹಿನೀರ ತಂಪು.. ಉರುಮೆ, ತಮಟೆ, ಡೊಳ್ಳು, ಸೋಮ, ಮರಗಾಲಿನ ಕುಣಿತಬೇರೆಲ್ಲೂ ಕಾಣಸಿಗದು ಇಂತಹ ಅದ್ಭುತ ಜಾನಪದ ತುಡಿತ.. ಸಾಹಿತಿ ವೆಂಕಣ್ಣಯ್ಯ,ಕೃಷ್ಣಶರ್ಮ ತರಾಸು ಅವರಿಗೆ ಸರಿಸಾಟಿಯುಂಟೇಮನಗೆದ್ದ ಜನನಾಯಕ ನಿಜಲಿಂಗಪ್ಪನವರಅರಿಯದವರುಂಟೇ.. ವಿಷ್ಣು, ಅಂಬಿಯರಂಥ ನಟರತ್ನರನು ಚಿತ್ರರಂಗಕೆ ನೀಡಿದ ಹೆಮ್ಮೆದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಮರುಜನ್ಮವನಿತ್ತ ಹಿರಿಮೆ.. ಶಬ್ದಮಾಂತ್ರಿಕ ಬಿ ಎಲ್ ವೇಣು ದುರ್ಗದ ಕಥೆಯನಾಗಿಸಿಹರು ಜೀವಂತವೀರಭೂಮಿಯ ಗಂಧ ಪಸರಿಸಿಹ ಅವರಅದ್ಭುತ ಶೈಲಿ ಸದಾ ಜ್ವಲಂತ ಜೋಳದ ಮುದ್ದೆ ಸೊಪ್ಪಿನ ಸಾರು ಹಪ್ಪಳ ಉಪ್ಪಿನಕಾಯಿ ಊಟಪಂಚತಾರಾ ಹೋಟೆಲಿನಲೆಲ್ಲೂ ಸಿಗದಿಂಥಾ ಆತ್ಮೀಯ ಕೂಟ.. ನನ್ನ ತವರೂರು ದಿವ್ಯ ಭವ್ಯ ಇತಿಹಾಸದಸುಂದರ ಚಿತ್ರದುರ್ಗಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಮಧು ‌ವಸ್ತ್ರದ್     

ಮಧು ‌ವಸ್ತ್ರದ “ನನ್ನತವರೂರು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯಸಂಗಾತಿ ಎಮ್ಮಾರ್ಕೆ ಅವರ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-116 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು.  ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?” ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿ‌ದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು.  ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು.‌ ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು. ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು. 

Read Post »

ಇತರೆ, ಲಹರಿ

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ

ನೆನಪಿನ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಓಯ್ ಪಾರ್ಲೆ ಹುಡುಗಿ” ನಾನು ಇನ್ನೂ ಚಿಕ್ಕವಳಿದ್ದೆ ಒಂದು ದಿನ ಅಂದು ಭಾನುವಾರ. ನಮ್ಮದೇ ಅಂಗಡಿ ಇತ್ತು, ಅಂಗಡಿಗೆ ಹೋಗಿ ಪಾರ್ಲೆ ಬಿಸ್ಕಿಟ್ ತರಬೇಕ ಅಂತ ಹೋದೆ.ಬಹಳ ದೂರ,ಅಷ್ಟು ಸಮೀಪ ಅಲ್ಲದ,ನಡೆದುಕೊಂಡೆ ಹೋಗಬೇಕಿತ್ತು.‌ ಅಂಗಡಿಯಲ್ಲಿ ಅಪ್ಪ ಇದ್ದರೆ, ಎನ್ ಬೇಕೋ ಅದನೆಲ್ಲ ತಿನ್ನಬಹುದಿತ್ತು.. ಆದರೆ ದೊಡ್ಡಪ್ಪ ಇದ್ದಾಗ ಕಿರಿ ಕಿರಿ, ಅದನ್ನ ತಿನ್ನಬ್ಯಾಡ್ರಿ,ಮುಟ್ಟಬ್ಯಾಡ್ರಿ ಅಂತ ಕಣ್ಣಲ್ಲೇ ಬಯ್ಯುವ. ಅಂದು ದಾರಿಯಲ್ಲಿ ಒಬ್ಬ ಹುಡುಗ ಹರಿದ ಬಟ್ಟೆ, ಕೆದರಿದ ಕೂದಲು, ಕೊಳಕು ಕೈ,ಕಾಲುಗಳು. ನನ್ನ ಬೆನ್ನತ್ತಿ ಬಂದಿದ್ದ. ನಾನು ಬಿಸ್ಕಿಟ್ ತಗೊಂಡು ಮನೆಗೆ ಬರತಿದ್ದಾಗ ಅವನು ಹಿಂದಿಂದೆ ಬಂದು ಮನೆಗೆ ಹತ್ತಿರ ಆಗ್ತಿದ್ದಂತೆ ” ಓಯ್ ಪಾರ್ಲೆ ಹುಡುಗಿ, ಓsಯ್ , ಕಿವಿ ಕೇಳಿಸೋದಿಲ್ಲ ನಿನಗ? ಎನ್ನುತಾ ನಮ್ಮ ಮನೆಯ ಕಟ್ಟೆಯ ಮೇಲೆ ಬಂದು ಕುಳಿತ”. ಎಲ್ಲರಿಗೂ ಆಶ್ಚರ್ಯ, ಯಾರ ಇವನು? ಇವನನ್ನ ಯಾಕ ಕರೆದುಕೊಂಡ ಬಂದೆ? ನೂರೆಂಟು ಪ್ರಶ್ನೆಗಳು. ಅವನ್ನ ನಾನು ಕರಕೊಂಡ ಬಂದಿಲ್ಲ, ಅವನೇ ಬಂದಿದ್ದಾನ ಅಂದೆ, ಅವ್ವ, ಯಾರೋ ಕಂದ ನೀನು ? ಎನ್ ಬೇಕು? ನಿಮ್ಮನೆ ಎಲ್ಲಿ? ನಿನ್ಯಾಕಿಲ್ಲಿ ಬಂದಿಯಾ? ಅಂದಾಗ ಅವನ ದೃಷ್ಟಿ ಆ ಬಿಸ್ಕಿಟ್ ಕಡೆಗೆ ಇತ್ತು. ಆವಾಗ ಅನಿಸಿತ್ತು ನನಗೆ ಓಹೋ, ಪಾಪ! ಇವನಿಗೆ ಬಿಸ್ಕಿಟ್ ತಿನ್ನುವ ಆಸೆ ಆಗಿರಬೇಕು. ಬಿಸ್ಕಿಟ್ ಬೇಕಾ? ಅಂತ ಬರಿ ಕೈ ಮುಂದೆ ಮಾಡಿದೆ, ಕಿತ್ತುಕೊಂಡವನೇ ಅಲ್ಲಿಂದ ಓಡಿ ಹೋದ.ಅವ್ವ,ಬಾರೋ ಇಲ್ಲಿ ಊಟ ಮಾಡುವಂತೆ. ಅಂತ ಕೂಗಿದರೂ ತಿರುಗಿ ನೋಡಲಿಲ್ಲ ಅವನು. ಅವ್ವ ಅವನು ಮರೆಯಾಗುವವರೆಗೆ ಬಿಡಳು. ಅಯ್ಯೋ, ಅವ್ವಾ ಅವನು ಹೋದಾ, ನನಗೆ ಹಸಿವಾಗಿದೆ.‌ಮತ್ತೆ ಅಂಗಡಿಗೆ ಹೋಗಿ ಬಿಸ್ಕಿಟ್ ತರಲಾ? ಅಂದೆ. ಬೇಡ ಊಟ ಮಾಡು ಬಾ. ಬಿಸ್ಕಿಟ್ ಬಹಳ ತಿನ್ನಬಾರದು ಅಂತ ಒಳಗೆ ಹೋದಳು. ಇದ್ದದ್ದನ್ನ ಕಸಿದುಕೊಂಡು ಹೋದ, ಇನ್ನೂ ತಿನ್ನೊದೆಲ್ಲಿಂದ. ನನಗೆ ಊಟ ಬೇಡವಾಗಿತ್ತು, ಆ ಹುಡುಗ ಯಾರಿರಬಹುದು? ದಾರಿಯಲ್ಲಿ ತಾನಾಗಿಯೇ ಹಿಂದೆ ಬಂದು ಹೋಗಿಯೆ ಬಿಟ್ಟ್ನಲ್ಲ.! ಅನಾಥನಾ? ಅವನಿಗೆ ಅವ್ವ-ಅಪ್ಪ ಇಲ್ಲವಾ? ಅವನು ಹಾಗೇಕಿದ್ದ. ಉತ್ತರವಿಲ್ಲದ ಪ್ರಶ್ನೆಗಳು.ಆ ದಿನ ,ಆ ಕ್ಷಣ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಕಾರಣ ಆ ಹುಡುಗ ಹುಡುಕಿದರೂ‌ ಸಿಗದವ. ಹಸಿವು ಅನ್ನೋದು ಏನೆಲ್ಲ ಮಾಡಿಸಬಹುದಲ್ಲವೆ.??!! pics:chatgpt ಕಲ್ಪನಾ ಎಸ್ ಪಾಟೀಲ್

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಹಬ್ಬೆ ಜಲಪಾತ” ಹಬ್ಬೆ ನಿನ್ನ ನೋಡಿ ದಿಬ್ಬೆರಗಾದೆಎತ್ತರದಿಂದ ದುಮ್ಮುಕ್ಕುವ ನಿನ್ನ ಜಲದಾರೆ|ಹಾಲನೊರೆಯ ಪರದೆಯ ಪರಿಯುಸೊರೆ ಗೊಂಡಿಹುದು ಮನಸಾರೆ|| ಒರಟು ಕಲ್ಲು ಬಂಡೆ ಮೇಲೆ ಸ್ಪುರಿಸುವಮೃದು ಅಮೃತದ ಹಾಲಹೊಳೆ ಸಂತೆ|ಗಡಸು ದೇಹದೋಳಗೆ ಗುಪ್ತವಾಗಿ ಹರಿಯುವಪ್ರೀತಿ, ಪ್ರೇಮ ಕರುಣೆಯ ಕಹಳೆ‌ ಅಂತೆ|| ನಿನ್ನ ಆಳದೊಳಗೆ ನಾನಿಳಿದುನನ್ನ ಅಂತರಾಳದ ನೋವನ್ನು ಮರತೆ|ನಿನ್ನ ಬೋರ್ಗರೆಯುವ ಶಬ್ಧದೊಳಗೆಸಂಸಾರದ ಜಂಜಡದ ಬೆಂಬಿಡದಕರ್ಕಸವನ್ನು ಕ್ಷಣಕಾಲ ತೊರದೆ|| ದೃಡವಾದ ಕಲ್ಲುಬಂಡೆಯನ್ನು ಕೂಡಾಪಾಚಿಗಟ್ಟಿಸಿ ಜಾರಿ ಎಡವಿ ಬಿಳಿಸುವದುಕಲಿಸುವದು ಪಾಠ ಮನದೊಳಗೆ|ರಾಚಿಸುವ ರಾಡಿ ಕೆಡುಸುವದುಬೀಳಿಸುವದು ನಿನ್ನ ಬದುಕಿನ ಏಳಿಗೆ|| ಉನ್ಮಾದದ ಅಲೆಗಳನ್ನು ತಡೆಯಲುಹೆಬ್ಬಂಡೆಗಳನ್ನು ಹೊತ್ತು ನಿಂತಹಿಳು ಧಾತ್ರಿ|ಬಿಳಿ ಸೀರೆ ಉಟ್ಟ ನಿತ್ಯ ನೃತ್ಯವನ್ನುಕಣ್ಣತುಂಬಿಕೊಳ್ಳಲು ಮುತ್ತಿಹುದು ಜನಜಾತ್ರಿ||ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ” Read Post »

You cannot copy content of this page

Scroll to Top