ಧಿಕ್ಕಾರ… ಧಿಕ್ಕಾರ…!!

ಧಿಕ್ಕಾರ… ಧಿಕ್ಕಾರ…!!

ಕವಿತೆ ಧಿಕ್ಕಾರ… ಧಿಕ್ಕಾರ…!! ಡಾ. ಮಲ್ಲಿನಾಥ ಎಸ್. ತಳವಾರ ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರುತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರುಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳುಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ […]

ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ ಸಜ್ಜನರ ಸಂಗ ಲೇಸು ಕಂಡಯ್ಯಾ…! ಬಾಲಾಜಿ ಕುಂಬಾರ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕುರಿ ಕಾಯುವುದು ಈತನ ಕಾಯಕವಾಗಿತ್ತು.ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ. […]

ಸ್ವಗತ

ಕವಿತೆ ಸ್ವಗತ ಮಮತಾ ಶಂಕರ್ ದೂರದಲ್ಲಿ ನಾನು ನೀನುಒಂದಾಗಿ ಕಂಡರೂ ಒಂದಾಗದ ನಿಜದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ ನೀನು ಒಮ್ಮೊಮ್ಮೆ ಉರಿಯೆದ್ದುಸುರಿಸುವೆ ಕೆಂಡ ಮೈಮನಗಳಿಗೆ ;ನಾನೋ ಹಪಹಪಿಸುವೆ ಒಂದೆರಡುತಂಪನಿಗಳಿಗೆಹುಚ್ಚೆದ್ದು ಮಳೆ ಸುರಿಸುವೆ ಅದೆಒಲವೆಂದು ಬಾನೆದೆಯ ಸೀಳಿ ;ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆಬಿಕ್ಕಳಿಸುತ ನಾನಿಲ್ಲಿ…… ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನುನಿನಗುಂಟೆ ಈ ಒಡಲೊಳಗಿಂದಕಣಕಣವು ನೋವಾಗಿ ಚಿಗುರಿ ಮರಹೂ ಕಾಯಿ ಹಣ್ಣಾಗುವ […]

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ […]

ಮತ್ತೊಮ್ಮೆ ಬೆಳಕು

ಕವಿತೆ ಮತ್ತೊಮ್ಮೆ ಬೆಳಕು ಹುಳಿಯಾರ್ ಷಬ್ಬೀರ್ ಹುಳಿಯಾರ್ ಷಬ್ಬೀರ್ ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿಗುಡಿಸಿ ಹಾಕಿ ಸ್ವಚ್ಛ ಮಾಡಿ,ಜಯಭೇರಿ ಹೊಡೆದಿತ್ತುನಮ್ಮ ಗಾಂಧಿಗಿರಿ. ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟವಿಶ್ವಧಾಮ…..?ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ…. ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರಪ್ರಜೆ […]

ಪಟ್ಟದರಸಿಯೊಂದಿಗೆ ಪಟ್ಟಾಂಗ

ಕವಿತೆ ಪಟ್ಟದರಸಿಯೊಂದಿಗೆ ಪಟ್ಟಾಂಗ ಪ್ರೇಮಶೇಖರ ಪಟ್ಟದಕಲ್ಲಿನ ಪಟ್ಟದರಾಣಿಯೇ ಇಷ್ಟದ ಒಡವೆಯ ಕೊಡಿಸುವೆ ಬಾ. ಕಷ್ಟವೇ ಆದರೂ, ನಿದ್ರೆಯೇ ಹೊದರೂ ತರುವೆನು ಸರವನು ನಿನಗೊಂದ. ಮೈಸೂರಿನ ಶೂರನೇ, ಪ್ರಾಣಕಾಂತನೆ ಒಡವೆಯು ನನಗೆ ಬೇಡಪ್ಪ. ಮಳೆಗಾಲಕೆ ಮೊದಲೇ ಸೋರುವ ಸೂರನು ಚಂದಕೆ ನೀನು ಹೊದಿಸಪ್ಪ. ಸೂರಿನ ಕೆಲಸವ ನಂತರ ಮಾಡುವೆ, ಮೊದಲಿಗೆ ನಿನ್ನ ಕೊರಳನು ತುಂಬುವೆ ಕಿವಿಯಲಿ ಓಲೆಗಳೆರಡನು ಅಂಟಿಸುವೆ, ಜುಮಕಿಗಳೆರಡನು ತಂದೂ ಕೂಡಿಸುವೆ. ಓಲೆಯು ಬೇಡ, ಜುಮಕಿಯೂ ಬೇಡ, ಒಡವೆಯ ಗೊಡವೆಯು ಬೇಡವೇಬೇಡ. ಮಳೆಗೇ ಮೊದಲೇ ಕಣಜವ ತುಂಬಪ್ಪ, […]

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ […]

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ […]

Back To Top