ಚಿಂದಿ ಆಯುವ ಕುಡಿಗಳು

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ […]

ಮತ್ತೊಮ್ಮೆ ಬೆಳಕು

ಕವಿತೆ ಮತ್ತೊಮ್ಮೆ ಬೆಳಕು ಹುಳಿಯಾರ್ ಷಬ್ಬೀರ್ ಹುಳಿಯಾರ್ ಷಬ್ಬೀರ್ ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿಗುಡಿಸಿ ಹಾಕಿ ಸ್ವಚ್ಛ ಮಾಡಿ,ಜಯಭೇರಿ ಹೊಡೆದಿತ್ತುನಮ್ಮ ಗಾಂಧಿಗಿರಿ. ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟವಿಶ್ವಧಾಮ…..?ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ…. ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರಪ್ರಜೆ […]

ಪಟ್ಟದರಸಿಯೊಂದಿಗೆ ಪಟ್ಟಾಂಗ

ಕವಿತೆ ಪಟ್ಟದರಸಿಯೊಂದಿಗೆ ಪಟ್ಟಾಂಗ ಪ್ರೇಮಶೇಖರ ಪಟ್ಟದಕಲ್ಲಿನ ಪಟ್ಟದರಾಣಿಯೇ ಇಷ್ಟದ ಒಡವೆಯ ಕೊಡಿಸುವೆ ಬಾ. ಕಷ್ಟವೇ ಆದರೂ, ನಿದ್ರೆಯೇ ಹೊದರೂ ತರುವೆನು ಸರವನು ನಿನಗೊಂದ. ಮೈಸೂರಿನ ಶೂರನೇ, ಪ್ರಾಣಕಾಂತನೆ ಒಡವೆಯು ನನಗೆ ಬೇಡಪ್ಪ. ಮಳೆಗಾಲಕೆ ಮೊದಲೇ ಸೋರುವ ಸೂರನು ಚಂದಕೆ ನೀನು ಹೊದಿಸಪ್ಪ. ಸೂರಿನ ಕೆಲಸವ ನಂತರ ಮಾಡುವೆ, ಮೊದಲಿಗೆ ನಿನ್ನ ಕೊರಳನು ತುಂಬುವೆ ಕಿವಿಯಲಿ ಓಲೆಗಳೆರಡನು ಅಂಟಿಸುವೆ, ಜುಮಕಿಗಳೆರಡನು ತಂದೂ ಕೂಡಿಸುವೆ. ಓಲೆಯು ಬೇಡ, ಜುಮಕಿಯೂ ಬೇಡ, ಒಡವೆಯ ಗೊಡವೆಯು ಬೇಡವೇಬೇಡ. ಮಳೆಗೇ ಮೊದಲೇ ಕಣಜವ ತುಂಬಪ್ಪ, […]

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ […]

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ […]

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ […]

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ […]

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ […]

Back To Top