ಪುಸ್ತಕ ಪರಿಚಯ

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು […]

ಅನುವಾದ ಸಂಗಾತಿ

ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

ಅನುವಾದ ಸಂಗಾತಿ

ವೇದಗಳಿಗೂ ಮುನ್ನ ನೀನಿದ್ದೆ ಮೂಲ:ಬಾಬುರಾವ್ ಬಾಗುಲ್(ಮರಾಠಿ) ಕನ್ನಡಕ್ಕೆ: ಕಮಲಾಕರ ಕಡವೆ “ವೇದಗಳಿಗೂ ಮುನ್ನ ನೀನಿದ್ದೆ” ವೇದಗಳಿಗೂ ಮುನ್ನ ನೀನಿದ್ದೆದೈವಗಳ ಹುಟ್ಟಿಗೂ ಮುನ್ನ;ಕಂಡು ಪಂಚಭೂತಗಳ, ಅವುಗಳ ವಿರಾಟ, ವಿಕಾರ ಸ್ವರೂಪವ್ಯಥಿತನಾಗಿ, ವ್ಯಾಕುಲಗೊಂಡುಕೈಯೆತ್ತಿ ಪ್ರಾರ್ಥಿಸುತ್ತಿದ್ದೆ ನೀನುಆ ಪ್ರಾರ್ಥನೆಗಳೇ ಧರ್ಮಗ್ರಂಥಗಳಾದವುಎಲ್ಲ ದೈವಗಳ ಜನ್ಮವ ಆಚರಿಸಿದವ ನೀನುಎಲ್ಲ ದೇವದೂತರ ಹೆಸರಿಟ್ಟು ಆನಂದಿಸಿದವ ನೀನೇಓ ಮಾನವನೇ, ಸೂರ್ಯನಿಗೆ ಸೂರ್ಯನೆಂದವ ನೀನುಆಗಲೇ ಸೂರ್ಯ ಸೂರ್ಯನಾದದ್ದುಚಂದ್ರನಿಗೆ ನೀನು ಚಂದ್ರನೆಂದಾಗಲೇಚಂದ್ರ ಚಂದ್ರನಾದದ್ದುನೀನೇ ಇಡೀ ವಿಶ್ವದ ನಾಮಕರಣ ಮಾಡಿರುವೆಎಲ್ಲ ಬಲ್ಲರು, ಓ ಪ್ರತಿಭಾಶಾಲಿ ಮಾನವನೇ,ನೀನೇ ಕಾರಣೀಭೂತನಿನ್ನಿಂದಲೇ ಈ ಜಗವು ಸುಂದರ, […]

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, […]

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . […]

ಕಾವ್ಯಯಾನ

ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ  ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು […]

ಜ್ಞಾನಪೀಠ ಪ್ರಶಸ್ತಿ ವಿಜೇತರು

ದ.ರಾ.ಬೇಂದ್ರೆ ಕೆ.ಶಿವು ಲಕ್ಕಣ್ಣವರ ವರ ಕವಿ ದ. ರಾ. ಬೇಂದ್ರೆಗೆ ಅಂಬು ತಾಯಿಯೇ ಬದುಕಿನ ಮೊದಲ ಪ್ರೇರಕ ಶಕ್ತಿ..! ಈ ಅಂಬು ತಾಯಿಯ ನೆನಪಿನಲ್ಲಿ ದ.ರಾ.ಬೇಂದ್ರೆಯವರು ‘ಅಂಬಿಕಾತನಯದತ್ತ’ವಾದರು… ಈ ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು. ತಾಯಿ ಅಂಬೂ ತಾಯಿ. ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡ ಕುಟುಂಬ […]

ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯದ ಸಾಮರ್ಥ್ಯ ಅವ್ಯಕ್ತ ದೌರ್ಬಲ್ಯದ ಸಾಮರ್ಥ್ಯ ಇವತ್ತಿನ ಕಥೆಯ ವಿಶೇಷವೇ ಹೆಚ್ಚಿನ ಮಕ್ಕಳಲ್ಲಿ ಕಂಡುಬರುವ ತಳಮಳ, ನೋವು-ನಲಿವುಗಳಿಗೆ ಕಾರಣವಾಗುವುದು. ನಾನು ಗಮನಿಸಿದ ಹಾಗೆ ಈ ಸಮಸ್ಯೆ ಎಂಟನೇ ಕ್ಲಾಸಿನ ಪ್ರೌಢ ಮಕ್ಕಳಲ್ಲಿ ಶುರುವಾದರೆ ಎಲ್ಲಿಯವರೆಗೆ ಬೇಕಿದ್ದರೂ ಹೋಗಬಹುದು. ಇವತ್ತಿನ ದಿನ ನಾನೊಂದು ಸಹಜವಾದ ಸಮಸ್ಯೆಯನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾತನಾಡುವ ಎಂದು ಶುರುಮಾಡಿದೆ. ಅಲ್ಲಿ ಕ್ಲಾಸಲ್ಲಿದ್ದ ಎಲ್ಲ ಮಕ್ಕಳಿಗೂ ಒಂದು ಅಸೈನ್ಮೆಂಟ್ ಕೊಟ್ಟೆ.. ಎಲ್ಲರೂ ಒಂದು ಚೀಟಿ ತೆಗೆದುಕೊಂಡು ನಿಮಗೆ ಸಹಜವಾಗಿ ನೋವುಂಟುಮಾಡುವ ಬೇರೆಯವರ ಟೀಕೆ ಟಿಪ್ಪಣಿಗಳನ್ನು 4 […]

ಕಾವ್ಯಯಾನ

ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು […]

Back To Top