ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಹೊನ್ನೆರಳು” ಹುಣ್ಣಿಮೆಯ ಹೊನ್ನೆರಳುಸಾಗರ ಮೈಮೇಲೆ ಹರಿದು,ಅಲೆಗಳ ಮೌನ ನಿದ್ರೆಯಲಿಚಂದ್ರ ಕನಸಾಗಿ ಕರಗಿತು. ನೀರಿನ ತುಟಿಯ ನಡುಕದಲಿಬೆಳ್ಳಿಯ ತೇವ ಮೊಳಗಿತು,ದೂರದ ವಿರಹ ಉಪ್ಪಾಗಿಎದೆಯ ಆಳದಲಿ ನೆಲಸಿತು. ನೀಲಿಯ ಶಂಖ ಊದಿದ ಗಾಳಿರಾತ್ರಿಯ ಕೂದಲು ಸವರಿತು,ಅಲೆಗಳ ರಕ್ತನಾಳದಲಿಮೌನ ಬೆಳಕು ಹರಿಯಿತು. ತೀರ ಮುಟ್ಟದ ಅಲೆಗಳಲಿಹಂಬಲ ಹಕ್ಕಿ ತೇಲಿತು,ನೀರೊಳ ಮುರಿದ ಚಂದ್ರಬಿಂಬಪ್ರೀತಿಯ ಗಾಯವಾಯಿತು. ಬೆಳದಿಂಗಳ ಮೃದುವೆರಳುಅಲೆಗಳ ಬೆನ್ನಲಿ ಜಾರಿತು,ಸಾಗರದ ಕತ್ತಲ ಗರ್ಭದಲಿಮೌನ ಕಮಲ ಅರಳಿತು. ನೀ ಇಲ್ಲದ ಕಪ್ಪು ರಾತ್ರಿಸಾಗರ ಶಿಲೆಯಾಗಿ ನಿಂತು,ನೀ ಬಂದ ಬೆಳ್ಳಿ ಹುಣ್ಣಿಮೆಉಪ್ಪಿನ ದೀಪವಾಗಿ ಹೊತ್ತು. ಮರಳ ತೀರದ ಮಡಿಲೊಳಗೆಹೆಜ್ಜೆಯ ದಾಹ ಮಲಗಿತ್ತು,ಅಲೆಗಳ ಮರುಳು ಕರೆಯೊಳಗೆ“ಬರುವೆಯಾ…” ತೇವ ಉಳಿಯಿತು. ಆಕಾಶ ತಗ್ಗಿ ಮುತ್ತಿಟ್ಟಸಾಗರದ ಉಪ್ಪು ನೆತ್ತಿಗೆ,ಪ್ರಕೃತಿ ಬೆಳ್ಳಿ ಮಸಿಯಲಿಪ್ರೀತಿ ಬರೆದು ಹೋಯ್ತು ರಾತ್ರಿಗೆ. ಹುಣ್ಣಿಮೆ ದೂರ ಸರಿದರೂಚಂದ್ರಗಂಧ ಉಸಿರಾಯಿತು,ಸಾಗರದ ನೀಲಿ ಎದೆಯೊಳಗೆಮೌನ ಬೆಳಕು ತೇಲಿತು. ಪ್ರೀತಿಒಮ್ಮೆ ತಾಕಿದ ಚಂದ್ರತಂಪು,ಜೀವಪೂರ್ತಿ ಅಲೆಯುವ ಉಪ್ಪು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “

ಕಾವ್ಯ ಸಂಗಾತಿ ಸವಿತಾ ದೇಶಮುಖ “ಮನಸ್ಸೆಂಬ ಬೆಳಕೆಂಡಿ “ ಮನಸ್ಸೆಂಬ ಬೆಳಕಿಂಡಿಯ ಮುಚ್ಚಳವತೆರೆದು ನೋಡು ಇಡೀ ಬ್ರಹ್ಮಾಂಡವಪರಮ ಗೂಡು ನಿನ್ನೊಳಗೆ…. !!೧!! ಇಡಿ ಭೂಲೋಕ ಹುದುಗಿ ಇರುತಿರೆ ನಿನ್ನೊಳುನೀನೇ ದಾರಿ ದೀಪ ಕತ್ತಲೆಯ ಅಲೆಯೊಳುಹತ್ತಿದ ಉರಿಗೆ ತಣ್ಣೇ ಎಳಲು ನೀನು !!೨!! ಒಂದೆಡೆ ನಗಿಸುವ ಮತ್ತೆ ಅಳಿಸುವಕುಣಿಸುವ ಮೆರೆಸುವ ಮರಗಿಸುವಸೂತ್ರಧಾರಿ ತುಂಟ ನಡೆಯುವ ನಿನ್ನದು!!೩!! ಮನಸೆಂಬ ದೀಪದೊಲವಿನಲ್ಲಿಹೊಸ ಹೊಸ ಕನಸಿನಾಗರದಲ್ಲಿನೂರೊಂದು ಕಥೆಗಳ ಸರಣಿ ಕಂತು.. !!೪!! ಅರಿಯದ ಕಾರ್ಪಣ್ಯ ಸಂಕಟಗಳ ದಾಳಿಬೀಸಲಿ ,ಆರದು ನಿನ್ನೊಳಗಿನ -ಗಾಳಿನಂದಿಸದು ಸ್ತ್ರೈರ್ಯವನು …!!೫!! ನಿಟ್ಟುಸಿರಿನ ಕ್ಷಣದಲೂ ಧೈರ್ಯದಬೆಳಕಿನ ಹಂದರದ ಹಚ್ಚಡ ಹಾಸಿದನೀನೇ ಸಮಾಧಾನದ ಅದಿರು ….!!೬!! ದಣಿದ ನನ್ನ ಉಸಿರಿಗೆ- ನಿನ್ನ ಮೃದುತಡಕಾಟ ಶಾಂತವಾಗಿಸುವದುನನ್ನ ಮುಂದಲ ಹೃದಯ ತಂತಿ ಮಿಟಿ!!೭!!  ನನಗರಿವಿಲ್ಲದೆ ತಿಳಿದು ತಿಳಿಯದೇಸರಿ ಹೊಂದಿಸಿ ಹೃದಯ ರಾಗ ತಾಳಮೇಳಯಿಸುವೆ ನಿನ್ನ ಬೆಳಕಿನೊಳು!!೮!! ಮನದಾಳದಲ್ಲಿ ಉಕ್ಕುತ್ತಿರುವ ಭಾವಗಳಉದ್ವೇಗಕ್ಕೆ ನೀನಾಗುವೆ ಬೆಳಕಿಂಡಿಅಳಿವು  ಅಳಿಸಿ ಶಾಂತಿ ಅಜರಾಮರ.,!!೯!!  ಅಮರ ಜ್ಯೋತಿ ಮನಸ್ಸೇ ಪರಮ ಜ್ಯೋತಿ ಬೆಳಗುವ ಬೆಳಕಂಡಿ…. ನೀನೇ..!!!! ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಪ್ರಿಯತಮ” ದೈವದ ಅನುಗ್ರಹ ನಮ್ಮಿಬ್ಬರ ಪರಿಚಯಬರೆಯಲು ಸಾಲದು ಕಳೆದಿರುವ ಸಮಯಪದಗಳಿಲ್ಲ ಹೇಳಲು ಹೃದಯದ ವಿಷಯನೆನೆಯಲು ನಿನ್ನಾ ನೋವೆಲ್ಲಾ ಮಾಯಾ. ಆಲಿಸಲಾರೆಯ ನನ್ನ ಪ್ರೀತಿಯ ಕರೆಯನೋಡಲು ಬಯಸಿದೆ ಮನ ಮೋರೆಯತವಕಿಸುತ್ತಿದೆ ಕಾಣಲು ಹೃದಯದ ದೊರೆಯನೋಡಲೆಂದು ನನ್ನೆಡೆ ನೀ ಬರುವೆಯಾ ಹೇಗೆ ತಿಳಿಸಲಿ ಹೃದಯದ ಪರಿಯಜೀವನದ ಹಸಿರು ಮರೆಯದಿರು ಗೆಳೆಯಬಯಸಿರುವೆ ಬಾಳಲಿ ನೀನೆ ಇನಿಯಬಯಸಿದೆ ನಿನ್ನನೇ ಪುಟ್ಟ ಹೃದಯ ಬರುವಿಕೆಯ ಹಾದಿ ಕಾದು ಬಳಲಿರುವೆಸವಿ ನುಡಿಯ ಪ್ರೇಮಕೆ ಸೋತಿರುವೆನೀನೇಕೆ ಸವಿ ನೆನಪಿನ ಪ್ರೀತಿ ಮರೆತಿರುವೆನನ್ನೊಳಗೆ ನೀನೆಂದೋ ಮನೆ ಮಾಡಿರುವೆ ಜೀವನದ ಕೊನೆ ಅಂಚಿನಲಿ ನಿಂತಿರುವೆಕಣ್ ತುಂಬಾ ಕಾಣಲು ಕಾದಿರುವೆನೀನೇಕೆ ನಿನ್ನ ಶಬರಿಯ ಮರೆತಿರುವೆಬಂದೆ ಬರುವ ದಾರಿಯ ನೋಡುತ್ತಿರುವೆ. ಡಾ. ಲತಾ ಎ ಆರ್ ಬಾಳೆಹೊನ್ನೂರು

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಅನುರಾಗ” ಗೆಳತಿ…ನಾನೇಗೆ ನಿನ್ನ ಮರೆಯಲಿಮರೆಯಾಗಿ ನಿಂತರೂ ದೂರದಲಿಅದೇಕೋ ಮೋಹ ಅಂತರಾಳದಲಿ,!! ನೆನಪುಗಳು ಸುಳಿಯಾಗಿಆಸೆಗಳೆಲ್ಲ ಸವಿ ಸವಿ ಮಾತಾಗಿಬಯಕೆಗಳೆಲ್ಲ ಮನಸ್ಸಿನಲ್ಲಿ ಕನಸಾಗಿ,!! ನನ್ನೊಳಗೆ ನಿನ್ನದೇಪ್ರತಿಕ್ಷಣ ಮಧುರ ಚಿತ್ರಣನೆನೆಪಿನಾಂಗಳ ಅನುದಿನವು,!! ಮನವು ಕುಣಿಯಿತುಆಸೆಯ ಮುಗಿಲೇರಿಸಿ ಅನುಕ್ಷಣಭರವಸೆ ಮೂಡಿಸಿತು ಅನುರಾಗದಲಿ.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಇಂದೇಕೊ!” ಇಂದೇಕೊ ಈ ಅಕ್ಷರಗಳುಪದಗಳಾಗದೆ ಕಾಡುತಿವೆಲೇಖನಿಗೂ ಸಿಗದಂತೆ ದೂರಸಾಗುತಿವೆಗೀಚಿದರೂ ಮತ್ತಷ್ಟುಗೀಚುಗಾಚು ಹಾಕಿಸಿಕೊಳ್ಳುತಿವೆಹಾಳೆಯ ಹರಿಯಲು ಹೊರಟರೂಅದಕ್ಕೂ ಹಠವ ಮಾಡುತಿವೆಸಾಲೊಂದ ಮುಂದೆ ಹೋಗದಂತೆರಚ್ಚೆ ಹಿಡಿದಿವೆಪುಟ್ಟ ಕಂದನಂತೆ ಬಿಡದೆ ಆಗಾಗಬಡಿಸಿಕೊಂಡವರಂತೆ ಮಿಡುಕಿಅಳುತಿವೆಸಾಕು ನಿಮ್ಮ ಸಹವಾಸ ಎಂದರೂಬಿಡದೆ ಬೆನ್ನ ಹತ್ತಿವೆಬೇಕೆಂದಾಗ ಬರೆಯಲು ಕುಳಿತರೆಮರೆವಿನೂರಿಗೆ ಪ್ರಯಾಣ ಬೆಳೆಸಿವೆಅಂದುಕೊಂಡಿದ್ದನೆಲ್ಲ ಅದಲುಬದಲಾಗಿಸಿವೆತಿಪ್ಪರಲಾಗ ಹಾಕಿದರೂ ಅದೇಕೋಮೊದಲು ನೆನಪಾದಂತೆ ನೆನಪಿಗೆಬರದೆ ಪ್ರೇಮಿಯಂತೆ ಸತಾಯಿಸಿವೆಇಂದೇಕೊ ಈ ಅಕ್ಷರಗಳು ಕಾಡಿವೆಕಾಡಿಸುತಿವೆ,ಕಾಲೆಳೆಯುತಿವೆಶಬ್ಧ ಭಂಡಾರ ಖಾಲಿಯಾದಂತಭಾವವ ಭಾಸವಾಗುವಂತೆ ಮಾಡಿವೆಹಠ ನಿಮಗಷ್ಟೇ ಇದೆಯೋ ನನ್ನಲ್ಲೂಹಠ ಇದೆ ಏನೋನೋಡಿಯೇ ಬಿಡುವಾ ನೀವಾ!? ನಾವಾ?ನಾನು ಮತ್ತು ನನ್ನ ಲೇಖನಿ…! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!” Read Post »

ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ತಾಯ್ತನ” ಜೀವಸಂಕುಲದ ತಾಯ್ತನದವಿಶ್ವದ ತತ್ವವೇ ಅವ್ವಮಾನವ ಜನ್ಮದ ಜೀವನದಸಾರದ ಸತ್ವವೇ ಅವ್ವ|| ಸೃಷ್ಟಿಕರ್ತನ ಲೀಲೆ ಭುವಿಯಅತ್ಯದ್ಭುತ ಸೃಷ್ಟಿದೇವ ತಾ ಇಳೆಗಿಳಿದುಬಾರದಮಮತೆಯ ವೃಷ್ಟಿ|| ಬಡವಳಿರಲಿ ಬಲ್ಲಿದಳೇ ಇರಲಿಮಕ್ಕಳಿಗೆ ಮಾತೆ ಶ್ರೇಷ್ಠಭಿಕ್ಷುಕಿ ಇರಲಿ ರಾಣಿ ಆಗಿರಲಿಮಕ್ಕಳಿಗೆ ತಾಯಿ ನಿಷ್ಠ || ಇರುವೆಯಿಂದ ಆನೆಯವರೆಗೆಅವುಗಳ ತಾಯಿ ಆಧಾರದೇವಾನುದೇವತೆಗಳಿಗೂ ಸಹಆದಿಶಕ್ತಿಯೇ ಆಶ್ರಯ|| ಮಾನವ ಜನ್ಮದ ಸಾರ್ಥಕತೆಜನ್ಮ ಕೊಟ್ಟ ಹೆತ್ತತಾಯಿಜೀವನದಲ್ಲಿ ಬದುಕಿ ಇರಲುಅನ್ನ ನೀಡಿದ ಭೂತಾಯಿ || ನೀರು ಕೊಟ್ಟ ಕಾವೇರಿ ತಾಯಿನುಡಿ ಕಲಿಸಿದ ಕನ್ನಡ ತಾಯಿನನ್ನ ಜೀವದಾತೆ ಭಾರತಮಾತೆತಮಗೆಲ್ಲರಿಗೂ ಚಿರಋಣಿ ನಾ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!! ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!! ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!! ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!! ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವುಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!! ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!! ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು”

ಅಮ್ಮನ ಸಂಗಾತಿ ಡಾ.ದಾನಮ್ಮ ಝಳಕಿ “ಅವ್ವ ಆಲದ ನೆರಳು” ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…!*ಅವ್ವ ಆಲದ ನೆರಳು* ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…! ಡಾ.‌ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು” Read Post »

ಕಾವ್ಯಯಾನ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ”

ಕಾವ್ಯ ಸಂಗಾತಿ ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” ಜೀವ ತಂತು ದಾಟಿ ಬಂತುಹತ್ತು ಮೈಲಿಗಲ್ಲನುಗಟ್ಟಿಯಾಗಿ‌ ಸಾಗಿಸುತ್ತಬಾಳ ಸುಖದ ತೇರನು ಎರಡು ಮುತ್ತು ಮುದದಿ ಹೆತ್ತುಮಧುರ ಪ್ರೇಮ ಕಾಣ್ಕೆಗೆನೀಡಿ ನೀನೆ ಸಾಕ್ಷಿಯಾದೆಸಹಯೋಗದ ಬಾಳ್ವೆಗೆ ಕ್ಷುದ್ರ ಮೂಲದಿಂದಗಾಧಸೃಷ್ಟಿಗರ್ಭ ವಿಸ್ಮಯಎನಿತು ಬಾಳೊ ಏಸು ಒಡಲೊತನಗೆ ತಾನೆ ತನ್ಮಯ ಉದಧಿ ತಲದಿ ನಭದ ತುದಿಗೆಸಚೇತನದ ಸರಿಗಮಫಲ ಹೇತುಕ ಪರಿಣಾಮದಗೌಣ ಭಾವ ಸಂಭ್ರಮ ನಿತ್ಯ ನಲಿವ ಅಪ್ರಮೇಯಜೀವಕೋಟಿಯಂತೆಯೇನಮ್ಮದೊಂದು ಪಾಲು ಇರಲಿಜಗದ ಸಂತೆಯಂತೆಯೇ  ಸಂತೋಷಕುಮಾರ ಅತ್ತಿವೇರಿ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” Read Post »

ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ”

ಕಾವ್ಯ ಸಂಗಾತಿ ನಿಂಗಮ್ಮ ಭಾವಿಕಟ್ಟಿ “ವಿಚಿತ್ರ ಅಮ್ಮ” ತಿಂಗಳೆಚ್ಚರವಿದ್ದುಬೆಳದಿಂಗಳ ಸ್ನಾನಮಾಡುವ ಅಮ್ಮ ನಕ್ಷತ್ರಗಳೊಂದಿಗೆಆಡುವ ಅಮ್ಮ ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ  ಒಬ್ಬಳೇ ನಗುತಯಾವುದೋ ಮಂತ್ರಗುನುಗುಣಿಸುತ ಓಡಾಡುವ ಎಲ್ಲಾ ಕಾಯಿಲೆಗೂಮದ್ದು ಹೇಳುವ ಅಮ್ಮಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ ಎಲ್ಲ ಮಕ್ಕಳನ್ನುಮುಟ್ಟಿ ನಗಿಸುವಪಕ್ಕದ ಮನೆ ಗಿಡಕುನೀರು ಹನಿಸುವ ಅಮ್ಮವ್ಯಕ್ತಿ ವಸ್ತುಗಳ ಭೇದವರಿಯದೆ ಧನ್ಯವಾದ ಹೇಳುವಅಮ್ಮ ಒಮ್ಮೊಮ್ಮೆಹುಚ್ಚಿ ಎನಿಸಿ ಬಿಡುತ್ತಾಳೆ  ಹಸಿವೆಯ ಹಾಸಿಹೊದ್ದು ಎದ್ದು ಬಂದ ಆಕೆಗೆಲ್ಲರ ಹಸಿವೆಯ ಸದ್ದು ಗೊತ್ತು ಮುತ್ತಿನೊಂದಿಗೆ ಪ್ರೀತಿಬಡಿಸುವ  ವಿಚಿತ್ರ ಅಮ್ಮ ಅಲ್ಲ ಆಕೆ ಹುಚ್ಚಿ ಅಲ್ಲಮಕ್ಕಳು ನೆರೆಯವರಿಗೆಲ್ಲ ಪ್ರೀತಿ ಸಹಾಯ ಕರುಣೆಗಳಹುಚ್ಚು ಹಿಡಿಸಿದವಳು ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ” Read Post »

You cannot copy content of this page

Scroll to Top