ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” ಸತ್ಯ ಸಮತೆಶಾಂತಿ ಪ್ರೀತಿಬಸವ ಸಾರಿದರಾಷ್ಟ್ರ ಪ್ರೀತಿ ರಾಜ ಬೀದಿಶರಣ ನಿಧಿರಾಜತೇಜಬಸವ ಬೀಜ ದುಡಿದು ತಂದುಹಂಚಿ ತಿಂದರುನನ್ನ ಶರಣರುದಿಟ್ಟ ಯೋಧರು ನ್ಯಾಯ ನಿಷ್ಟುರಲೋಕ ರಕ್ಷಕಜನ ತಾಂತ್ರಿಕಮಹಾ ಮಾಂತ್ರಿಕ ಬಸವ ಭಕ್ತಿದೇಶ ಶಕ್ತಿಲಿಂಗ ಜಂಗಮಬಸವ ನೀತಿಯು ಬಸವ ಭಾನುಭಕ್ತ ನಾನುಭರತ ನೆಲದಲಿಆನು ತಾನು ಡಾ. ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” Read Post »

ಕಾವ್ಯಯಾನ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್”

ಕಾವ್ಯ ಸಂಗಾತಿ ರೋಹಿಣಿ ಜೆ “ಫ್ರಿಜ್ – ಫ್ಲವರ್” ಚೆಲುವಿತ್ತು ಎಲೆಯನಲವಿತ್ತುಮೊಗ್ಗಾದುದಕ್ಕೆ ಹಿರಿಹಿರಿಹಿಗ್ಗಿತ್ತುಗಿಡದಲ್ಲೇ ಅರಳುವ ಕನಸೊಂದ ಕಟ್ಟಿತ್ತು!ಯಾವುದೋ ಕಾಣದ ಕೈ ಬಂತುಹಾಗೆಯೇ ಚಿವುಟಿ ಗೋಣ ಮುರಿದಿತ್ತು!ಆಸೆಯ ಹೊಸಕಿ ಪರವಶವಾಗಿ ಹೊರಟಿತ್ತು!? ದಾರಿಯುದ್ದಕ್ಕೂ ಸಂಭ್ರಮಎಲ್ಲೋ ಎತ್ತರಕ್ಕೇರುವೆನೆಂದು!ಸ್ವಲ್ಪವೇ ಸ್ವಲ್ಪ ಮೈಯರಳಿಸತೊಡಗಿತ್ತುಬಂದು ಬಿದ್ದದ್ದು ಮಾರುಕಟ್ಟೆಗೆತನ್ನಂತಿರುವ ಸುತ್ತಲವರ ಕಂಡುಚೂರು ಚೂರೇ ಚೂರು ಧೈರ್ಯ ದೊರೆಯಿತು ನೂರು, ಇನ್ನೂರು, ಐನೂರು,“ಅಬ್ಬಬ್ಬಾ ಎಷ್ಟು ಏರಿದೆ ಬೆಲೆ”ಮಂದಿಯೊಳಗೆ ನಡೆದಿತ್ತು ಗೊಣಗು ಗುಸುಗುಸುಏನಾಗ್ತಿದೆ ತನ್ನ ಮಾರಾಟವೇ?ನೀರು ಚಿಮುಕಿಸಿದ್ದು ಅಕ್ಕರೆಗಲ್ಲ!ನೆರಳೊಳಗೂ ಸುಡುವಕಾವಿಗೆ ಅಳುತ್ತಿತ್ತು ಮುಸುಮುಸು! ಯಾರೋ ಮಹನೀಯರ ಫೋಟೋಗೆಸಂಭಾಷಣೆ ಕೇಳಿಬಂದಿತ್ತು ಮೊಬೈಲಲ್ಲಿಹೀಗಾದರೂ ಪಾವನ ಜನುಮ ಪರಿಮಳ ಬೀರಿತುಸಂದಣಿಯಲಿ ನಜ್ಜುಗುಜ್ಜು ಬಜ್ಜಿಯಾಗಿಬಂದರೆ ಇಲ್ಲೂ ದೊರೆಯಲಿಲ್ಲ ಪ್ರೀತಿಯ ಸ್ಪರ್ಶಎಂದೂ ಕಾಣದ ನಂ(ಮಂ)ಜಿನ ಕೋಣೆಯ ಸೇರಿತು ಮಾರನೆಯ ದಿನ ಬಂದರು ಮನುಷ್ಯರುಹೊರತೆಗೆದು ಖುಷಿಯಲ್ಲಿ ನೋಡಲುಹೃದಯಕ್ಕೆ ಆಘಾತ ಕಾದಿತ್ತು ಹೂ ಹಣ್ಣಾಗಿತ್ತು!ನೋಟಿನ ರಾಣಿ ಪರ್ಸನು ತೆರೆದುಇತ್ತಳು ಹೊಸತೊಂದು ತಾ ಎನುತಕಣ್ಮುಂದೆ ಕನಸಕೊಂದವರ ಶಪಿಸಿ ಅದು ತಾ ಮಣ್ಣಾಗಿತ್ತು! ರೋಹಿಣಿ ಜೆ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ ಇಂದೇಕೋ ಮನಸ್ಸು ಭಾರವಾಗಿದೆ. ಇಂದೇಕೋ ಮನಸ್ಸು ಭಾರವಾಗಿದೆ…  ಮೋಡ ಕವಿದ ಆಗಸದ ಹಾಗೆ.  ಕಾರಣ ಕೇಳಿದರೆ ಉತ್ತರವಿಲ್ಲ,  ಆದ್ರೂ ಎದೆಯೊಳಗೆ ಎದ್ದಿಹಬಿರುಗಾಳಿಯ ಸಾವಿರ ಸುಳಿಯೊಳಗೆ ಸಿಲುಕಿದೆ… ನಗುತ್ತಾ ಎಲ್ಲರೊಂದಿಗೂ ಮಾತಾಡ್ತೀನಿ,  ಆದ್ರೆ ಒಳಗೆ ಎಲ್ಲೋ ಒಂದು ಮೂಲೆಯಲ್ಲಿ  ಸಣ್ಣ ಮಗುವಿನ ಹಾಗೆ ಗೋಳಾಡ್ತಿದೆ ಮನಸ್ಸು.  ಯಾರಿಗೂ ಹೇಳಿಕೊಳ್ಳದ ಸಂಕಟ ನೋವುಗಳು  ಗುಂಡಿಗೆ ಗೂಡಲ್ಲಿ ಕಲ್ಲಿನಂತೆ ಕೂತಿವೆ. ಸಮಯ ನಿಂತಂತಿದೆ,  ಗಡಿಯಾರದ ಮುಳ್ಳುಗಳುಕೂಡ ನಿಧಾನಗತಿಯಲ್ಲಿ ಚಲಿಸುತ್ತಿವೆಪ್ರಪಂಚ ಜೋರಾಗಿ ಓಡ್ತಿದೆ,  ನಾನು ಮಾತ್ರ ನನ್ನ ಯೋಚನೆಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೀನೇನೋ.. ಕಣ್ಣಲ್ಲಿ ನೀರಿದ್ದರೆ ಹರಿಯಲಿ.  ಮಳೆ ಬಿದ್ದ ಬಳಿಕ ಭೂಮಿಯಮಣ್ಣು ಪರಿಮಳ ಬೀರುತ್ತೋ,  ಅತ್ತಮೇಲೆ ಮನಸ್ಸೂ ಹಾಗೆಹಗುರಾಗುತ್ತದೆಂಬ ಭರವಸೆ. ಈ ಕತ್ತಲು ಶಾಶ್ವತವಲ್ಲ.  ದೀಪ ಆರಿಸಿದ ಕೂಡಲೇ ಬೆಳಕು ಬರುತ್ತೆ.  ನೋವು ಇರುವ ಜಾಗದಲ್ಲೇಗುಣವಾಗೋ ಶಕ್ತಿನೂ ಇರುತ್ತೆ.ಆದರೂ ಇಂದೇಕೋ ಈ ಮನಸ್ಸುಭಾರವಾಗಿದೆ…. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್ “ನಾವೀಗ ಅನಂತ” ಇನ್ನೂಏನೆಂದರೆ ಏನನ್ನೂ ಧಕ್ಕಿಸಿಕೊಂಡಿರಲಿಲ್ಲಆಗಲೇ ತೊರೆದು ನಡದೆಈಗಷ್ಟೇ ಸಿಕ್ಕ ಹಾಗಿತ್ತು, ಇಲ್ಲ , ಸಿಗುತ್ತಿದ್ದೆ . ಆಗಲೇ ದಾರಿ ಬದಲಿಸಿದೆ ಮುಂದಿನನಿಲ್ದಾಣದಲ್ಲಿ  ಮತ್ತೆ ಸಿಗುತ್ತೇವೆಯೊ  ಅದುಬೇಡದ ಸಂಗತಿ ಇಲ್ಲಿಈಗಲೇ ಸಿಕ್ಕವರು ಒಬ್ಬರಿಗೊಬ್ಬರು ಏನೂದೊರಕಿಸಿಕೊಳ್ಳದೇ ಹೋದಮೇಲೆಮುಂದೆ ಕೊಡುಕೊಳ್ಳುತ್ತೇವೆ ಎನ್ನುವಹಂಬಲ ಭರವಸೆ ನನಗಿಲ್ಲನಿರಿಕ್ಷೆಯೋ ..ಒಮ್ಮೆ ನಿರೀಕ್ಷೆ ಸತ್ತರೆ ಸಿಗುವ ಸಿಗದಿರುವುದರಗೊಡವೆಯೇ ಇರದು ನೀವೆನ್ನಬಹುದುಇಲ್ಲಿ ಕೊಡುಕೊಳ್ಳುವುದಾದರು ಏನಿತ್ತು?ಏನೆಲ್ಲವೂ…. ಬದುಕು ಬವಣೆ,ಕೊನೆಗು ಉಸಿರನ್ನೂ….. ಅವನುಕೊಟ್ಟಿದ್ದರೆ ಬವಣೆಯನ್ನೂ ಉಸಿರಾಗಿಸಿಕೊಳ್ಳುವ ಛಾತಿ ಇತ್ತು. ಅವನದನ್ನೂ ಕೊಡದೇ ತೆರಳಿದ ನೀವನ್ನುವಿರುಅವನು ಎನೂ ಕೊಡದೇ ಹೋದುದೇಬವಣೆಯಲ್ಲವೇ ಎಂದು!ಅದು ಹಾಗಲ್ಲ ಎನೋ ಕೊಡದೇ ಇರುವುದೇ ಅಮೃತ ಪ್ರೀತಿಅದೆ ಎಲ್ಲ, ಎಲ್ಲವೂ… ಅದನ್ನೇ ಬದುಕುತ್ತಿರುವೆ ನಾನೀಗಅವನು ಏನನ್ನಾದರೂ ಕೊಟ್ಟಿದ್ದರೆ ಸೀಮಿತವಾಗುತ್ತಿದ್ದ ಈಗ ಏನನ್ನೂ ಕೊಡದ ಅವನು ಪಡೆಯದ ನಾನು ಇಬ್ಬರೂ ಅನಂತ ಡಾ.ಭಾರತಿ ಅಶೋಕ್.

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಖಾಲಿಹಾಳೆ” ಬದುಕುಬಿಳಿಯ ಖಾಲಿ ಹಾಳೆಯಾಗಿದ್ದರೆಬಣ್ಣಗಳ ಬಳಿಯಬಹುದಿತ್ತು ನಮ್ಮಿಚ್ಛೆಯಂತೆತುಂಬಿಹುದು ಓರೆ ಕೋರೆಯಾದ ಗೆರೆಕಪ್ಪು ಬಣ್ಣದ ಚುಕ್ಕೆಗಳುಎಂದೆದೂ ಅಳಿಸಲಾಗದಂತ ಕಲೆಗಳುಊಹಿಸಲಾರದಂತಹ ತಿರುವುಗಳು ಬರೆದಿಟ್ಟಂತೆ ನಡೆವುದಾದರೆ ಬಾಳುಇರುತ್ತಿರಲಿಲ್ಲ ಇಲ್ಲಾವುದೇ ಗೋಳುಜೀವನ ನಾವು ರಚಿಸುವ ಕಾದಂಬರಿಯಲ್ಲಸುಖಾಂತ್ಯವನ್ನೇ ಬಯಸೋಣವೆಂದರೆನಲಿವೊಂದೇ ತುಂಬಲಿ ಎನ್ನಲುಬದುಕು ನಾವೆಣಿಸಿದಂತಲ್ಲಎಣಿಕೆಗೂ ಮೀರಿದ ಬ್ರಹ್ಮನ ಹೆಣಿಕೆಯಿದು ಇರುವ ಬಣ್ಣಗಳ ಬಳಸಿನೋವು ನಲಿವುಗಳ ಬೆರೆಸಿಚುಕ್ಕಿಗಳ ಸೇರಿಸಿ ರಂಗೋಲಿಯಾಗಿಸಿಚಿತ್ತಾರವಾಗಿಹ ವಾಸ್ತವವಿದುಬರೆದಂತೆ ಬದುಕಲ್ಲನಿನ್ನ ಬದುಕೇ ಬರವಣಿಗೆಯಾಗುವುದಿಲ್ಲಿನಿನ್ನ ಹೆಜ್ಜೆಯ ಗುರುತೇ ಮಾದರಿಯಾಗಿಅಕ್ಷರವ ರೂಪ ತಾಳುವುದು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ” Read Post »

ಕಾವ್ಯಯಾನ

ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ “ನನ್ನ ಮನೆ”

ಕಾವ್ಯ ಸಂಗಾತಿ ಡಿ. ಪಿ.ಯಮನೂರ್ ಸಾಬ್ “ನನ್ನ ಮನೆ” ನನ್ನ ಮನೆ ಅದು ಮನೆ ಅಲ್ಲಅದು ಸ್ಮಶಾನ ಮೌನ ತಾಳಿದ ಮನೆಅಲ್ಲಿ ನನಗೆ ಅಕ್ಕರೆಯಿಂದ ಉಣಬಡಿಸುತ್ತಿದ್ದನನ್ನ ತಾಯಿ ಇಲ್ಲ ಮಮತೆಯಿಂದ ಸತ್ಕರಿಸುತ್ತಿದ್ದನನ್ನ ಅಜ್ಜಿ ಇಲ್ಲ ನನ್ನ ಸಹೋದರಸಹೋದರಿಯರ ಗುದ್ದಾಟದಗದ್ದಲವಿಲ್ಲ, ಮನೆಯಲ್ಲಿ ಬೈದು ಬದ್ದಿ ಹೇಳುವಹಿರಿಯರಿಲ್ಲ,ನಾನು ದುಃಖದಲ್ಲಿರುವಾಗಕರೆದು ಸಂತೈಸುವರಿಲ್ಲನನಗೆ ನನ್ನೋರು ಯಾರೂ ಇಲ್ಲ ಅದಕ್ಕೆ ನಾನು ಮನೆಗೆ ಹೋಗುವುದಿಲ್ಲಯಾಕಂದ್ರೆ ಅದು ನನ್ನ ಮನೆಯಲ್ಲಅದು ಸ್ಮಶಾನಮೌನ ತಾಳಿದ ಮನೆಅಲ್ಲಿರುವುದಕ್ಕಿಂತ ಬೀದಿಯ ಒಂದುಚೌಕದಲ್ಲಿರುವುದೇ ಲೇಸು. ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ

ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ “ನನ್ನ ಮನೆ” Read Post »

ಕಾವ್ಯಯಾನ

  ರಮೇಶ್ ಅಂಬಳಿ ಅವರ ಕವಿತೆ “ನಾನು”

ಕಾವ್ಯ ಸಂಗಾತಿ   ರಮೇಶ್ ಅಂಬಳಿ ನಾನು ನಾನು, ಯಾರು ಈ ನಾನು?..ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಅಡಗಿಕುಳಿತಿರುವನು ಈ ನಾನು,ಇವನಿಂದ ಎಲ್ಲಿಯೂ ಶಾಂತಿ ಇಲ್ಲ, ಎಲ್ಲಿಯೂ ಸಮಾಧಾನವಿಲ್ಲ,ಶಾಂತಿಗೆ ಭಂಗ ತರುವುದೇ ಈ ನಾನು ಕೆಲಸ,ಯಾರು ಈ ನಾನು?.. ಇವನಿದ್ದ ಕಡೆಯಲ್ಲಾ ಬರೀ ಹೊಡೆದಾಟ ಬಡಿದಾಟ,ಇವನಿದ್ದ ಕಡೆಯಲ್ಲಾ ನಾನು ಹೆಚ್ಚು, ನೀನು ಕೀಳು,ಇವನಿದ್ದಕಡೆಯಲ್ಲಾ ಬೇಧಾ ಬಾವ,ಇವನಿದ್ದಕಡೆಯಲ್ಲಾ ಜಾತಿ ಮತಗಳ ಗಲಭೆಇವನಿದ್ದಕಡೆಯಲ್ಲಾ ಹಿಂಸೆ, ಶಾಂತಿಗೆ ಇವನ ಬಳಿ ಸ್ಥಳವೇ ಇಲ್ಲ, ಯಾರು ಈ ನಾನು ?.. ಪ್ರೀತಿ ಎಂದರೆ ಇವನಿಗೆ ವಾಕರಿಕೆ, ಸ್ನೇಹಕ್ಕೆ ಇವನಲ್ಲಿ ಬೆಲೆಯೇ ಇಲ್ಲಾ, ಇವನದು ಯಾವಾಗಲೂ ತರ್ಲೆ,ಇವನು ವಾಸಿಸುವ ಕುಟುಂಬದಲ್ಲಿ ಕಲಹಾ,ಇವನಿರುವ ಸಂಘ ಸಂಸ್ಥೆಗಳಲ್ಲಿ ಕಲಹಾ,ಇವನು ನಡೆದಾಡುವ ಸ್ಥಳದಲ್ಲೆಲ್ಲಾ ಕಲಹಾ,ಇವನೇ ಯಾಕೆ ಹೀಗೆ ?.. ಯಾರು ಈ ನಾನು?.. ಈ ನಾನು, ಲೋಕವನ್ನು ಬಿಟ್ಟು ತೊಲಗಲಿ,ಈ ನಾನು ಕುಟುಂಬವನ್ನು ಬಿಟ್ಟು ತೊಲಗಲಿ,ಈ ನಾನು ಸಮಾಜವನ್ನು ಬಿಟ್ಟು ತೊಲಗಲಿ,ಈ ನಾನು ನನ್ನನ್ನು ಬಿಟ್ಟು ತೊಲಗಲಿ,ಈ ನಾನು ನಿನ್ನನ್ನು ಬಿಟ್ಟು ತೊಲಗಲಿ,ಆಗ ಸಮಾಜದಲ್ಲಿ ಶಾಂತಿ, ಕುಟುಂಬದಲ್ಲಿ ಶಾಂತಿ,ನಿನ್ನಲ್ಲಿ ಶಾಂತಿ, ನನ್ನಲ್ಲಿ ಶಾಂತಿ, ಲೋಕವೆಲ್ಲಾ ಶಾಂತಿ ಯಿಂದ ತುಂಬುವುದು ನೋಡಾ ಮನುಜಾ..!! ರಮೇಶ್ ಅಂಬಳಿ

  ರಮೇಶ್ ಅಂಬಳಿ ಅವರ ಕವಿತೆ “ನಾನು” Read Post »

ಕಾವ್ಯಯಾನ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ”

ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ‌ “ನಿಜ ದೈವ” ನಾನು ಹುಟ್ಟಿದ್ದು ದೇವಸ್ಥಾನ ದಪಕ್ಕದಲ್ಲಿಯೇ ಆದ್ದರಿಂದ ಗಂಟೆಗಳ ಶಬ್ದವೇಜೋಗುಳವಾದವುಅಜಾನಗಳೇ ಸುಪ್ರಭಾತ ಗಳಾದವು ಜೀವನದ ಭಾಗವಾಗಿ  ಜೀವಕ್ಕೆ ತಣು ವಾಗಿಯಾರು ಹಾಡಿದರು ಯಾರು ಬರೆದವರುಎಂಬೆಲ್ಲ ಪ್ರಶೆಗಳಿಗೆ ಉತ್ತರವೇ ಬೇಕಿರಲಿಲ್ಲ ನೆಮ್ಮದಿಯಾಗಿದ್ದ ನೆಮ್ಮದಿ ಹಾಳಾಯಿತೇಕಿಂದುಗಂಟೆ  ಪ್ರಾರ್ಥನೆ ಗಳೇ ಕತ್ತು ಹಿಸುಕುತಿವೆಯಿಂದುಜನಮನದ ಭಾವನೆಯ ಕೊಲ್ಲುತಿವೆ ಇಂದು ಗೊಂದಲದ ಗೂಡಾಗಿಡೆ  ನನ್ನೀ ಮನವುಆ ಬಹುರೂಪಿ ಪರಮಾತ್ಮನ  ಕಂಡುಅಯ್ಯೋ ಏನಿತು ರೂಪ ಏನು ವೇಷ ಸುಂದರವಾಗಿಹೆ ವೇಷಭೂಷದಲಿಇಂಪಾಗಿರುವೆ ವೇದ ಪದಗಳಲಿನೋಡಲು ಕೇಳಲು ಚಂದವೋ ಚಂದ ಹೇ ದೇವನೇ ನಂಗೊತ್ತು ನೀನಲ್ಲಿಲ್ಲಪದ ರೂಪವ ಮೀರಿಹೆ ನೀನುಅಯ್ಯೋ ಎಂದು ಕಾಣಬಲ್ಲೆ ನಿಜ ದೈವವನು. ರಾಜೇಶ್ವರಿ ಪ್ರಕಾಶ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ” Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಆಸೆ ( ಅತಿಯಾಸೆ)” ಕಣ್ಣು ಮುಚ್ಚಿವೆಮಣ್ಣು ಮುಚ್ಚುವ ಮುನ್ನನಿನ್ನ ಮುಖವನ್ನೋಮ್ಮೆನನ್ನ ಮುಚ್ಚಿದ ಕಣ್ಣುಗಳೊಳಗಿಂದ ನೋಡುವಾಸೆ ಉಸಿರಾಡುವದ ಮರೆತ ನನ್ನಉಸಿರ ತಿತ್ತಿಗಳಪ್ರತಿ ಪದರಲಿನಿನ್ನ ಹೆಸರಿರುವದ ನಿನಗೆ ತೋರಿಸುವಾಸೆ ನಿನ್ನವಳು ನಾನೆಂದುಡಂಗುರಸಾರಿದ ಸಮಕರಿಗೇನೀನು ನನ್ನವನೆಂದು ತೋರಿಸುವಾಸೆ ಮರಳಿ ಬಾರದೂರಿಗೆ ಹೊರಟಿರುವೆಹೂವಿನಾ ತೇರನೇರಿ.ಮುಡಿಗೆ ಮೊಳ ಮಲ್ಲಿಗೆ ಇಲ್ಲೆಂಬಸುದ್ದಿ ಹಬ್ಬಬಾರದೆಂಬಾಸೆ. ನಿನ್ನ ಆರುಮೆ ಅಮೂರ್ತ !ಅರಿವಿದೆ ನನಗೆ.ಅರ್ಥಕಪಾರ್ಥ ಕಲ್ಪಿಸುವಕಮಂಗಿ ತಿಮಿಂಗಿಲಗಳಹಸಿವಿಗಹಾರ ನೀನಾಗ ಬಾರದೆಂಬಾಸೆ ಒಂದೇ ವಾಕ್ಯದಲ್ಲೊಮ್ಮೆಮರಣಕ್ಕೆ ಮದ್ದಿಲ್ಲನನ್ನೊಲುಮೆಗೆ ಸಾವಿಲ್ಲ ಎಂದುನೀ ಉಸುರ ಬೇಕೆಂಬಾಸೆ ಬಿಂದುಗಳಿಂದಲೇ ಬಿಗಿದ ನಿನ್ನ ಕಣ್ಣುಗಳಿಂದನನ್ನ ನೋಡುತ್ತಾ..ನನ್ನ ಹಣೆಬರಹ ದಲ್ಲಿಲ್ಲದ ನೀನು ನನ್ನಹಣೆಗೊಮ್ಮೆ ಮುತ್ತಿಕ್ಕಿ ಮಣ್ಣಿನಾ ದೇಹತಣ್ಣಗೆ ಮಣ್ಣಿಗೆ ಕಳಿಸುವೆ ಎಂಬಾಸೆ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)” Read Post »

You cannot copy content of this page

Scroll to Top