ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಬಾಗೇಪಲ್ಲಿ  ಅವರ ಕವಿತೆ “ಗಾಜು”

ಕಾವ್ಯ ಸಂಗಾತಿ ಬಾಗೇಪಲ್ಲಿ   “ಗಾಜು” ನಂಬಿಕೆ ಗಾಜಿ ನಂತೆನಮ್ಮನೋಟ ಒಳ ತೂರಿ ಹೋಗುವಷ್ಟು ಸ್ಪಷ್ಟ ಸ್ವಚ್ಛ ಜಾಗ್ರತೆ ರಹಿತ ನಮ್ಮ ಸ್ಪರ್ಶ ನೆನಪಿಡಲು ಅದು ಬಲು ಸೂಕ್ಷ್ಮ ಮೊದಲ ಬಾರಿಯ ಅಂತ ಸ್ಪರ್ಶಕೆ ಒಡೆಯದೆ ಉಳಿದಿದೆಎಲ್ಲಿಯವರೆಗೆ? ಒಂದು ಸಾಮಾನ್ಯ ದಿನ ಬಹು ಸಣ್ಣ ಒತ್ತಡಕೆ ಅದರಲಿ ಬಿರುಕು ಕಾಣಲೂ ಬಹುದುನಮ್ಮ ಸಂಬಂಧಗಳೂ ಬಹುಶಃ ಹಾಗೆಯೇ! ಅದು ನಮಗರಿವಿಗೆ ಬರುವುದು ಸರಿಪಡಿಸ ಹೋದಾಗಅದು ಆಗಲೇ ಬಿರಕು ಬಿಟ್ಟಿದೆ ಎಂದು.(ಮು.ಪು ವಿನ ಆಂಗ್ಲ ಬರಹದ ಕನ್ನಡೀಕರಣ.) ಬಾಗೇಪಲ್ಲಿ  

ಬಾಗೇಪಲ್ಲಿ  ಅವರ ಕವಿತೆ “ಗಾಜು” Read Post »

ಕಾವ್ಯಯಾನ

ಡಾ.ಡೋ.ನಾ.ವೆಂಕಟೇಶ ಕವಿತೆ “ಝಲಕು”

ಕಾವ್ಯ ಸಂಗಾತಿ ಡಾ.ಡೋ.ನಾ.ವೆಂಕಟೇಶ “ಝಲಕು” ಬರೆಯುವುದಕ್ಕೆ ಏನಿಲ್ಲ ಎಲ್ಲ ಬರೀ ಮೌನಎದೆಯೊಳಗೆ ಬೆಟ್ಟನೆತ್ತಿ ಮೇಲೆ ಹಸಿರು ಕಾಡುಬರೆಯುವುದಕ್ಕೆ ಏನಿಲ್ಲ ಕಣ್ಣ ಹೊಳಪುಶುಭ್ರಾಕಾಶದ ಝಲಕುಆಸೆ ತುಂಬಿದ ಮೆಲುಕುಬರೆಯುವುದಕ್ಕೆ ಏನಿಲ್ಲ ಬಿಟ್ಟು ಹೋದ ಹಾದಿಗುಂಟ ಪುವಾಸನೆಆಘ್ರಾಣಿಸುವ ಶಕ್ತಿಬರಡುಬಿಡು  ಬರೆಯಲೇನಿಲ್ಲ ಹೀಗೇ ಮಾತಿಲ್ಲ ಕಥೆಯಿಲ್ಲಜನ್ಮಗಳಾಚೆ ಧಾರಾವಾಹಿ!ಇಂದು ಇಂದಿಗೆ ನಾಳೆಯಿಲ್ಲ. ಹೀಗೇ ಬಿಡು ಬರೆಯಲೇನಿಲ್ಲ!! ಡಾ.ಡೋ.ನಾ.ವೆಂಕಟೇಶ

ಡಾ.ಡೋ.ನಾ.ವೆಂಕಟೇಶ ಕವಿತೆ “ಝಲಕು” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ ) ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆಲೋಪಗಳಿವೆಯೆಂದು ನಾ  ಜರಿವ ಜಗದೊಳಗೂ ತುಸು ಚಂದವಿದೆ ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳುಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ ವರ್ಣನೆಗೂ ನಿಲುಕದ  ಮಾತುಗಳಿಗಿಲ್ಲಿ ಬರವಿಲ್ಲ ನಿಜಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿನೋವು ತುಂಬಿದ ನಯನದೊಳಗೂ ತುಸು ಚಂದವಿದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ವನಜ ಮಹಾಲಿಂಗಯ್ಯ ಕವಿತೆ “ಮಳೆಯೇ ಬಾ”

ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಮಳೆಯೇ ಬಾ” ಮೋಡಗಳೇ ಎಲ್ಲಿಗೆ ಹೋದಿರಿ,  ನಮ್ಮ ಊರ ನೀವು ಮರೆತೆರಾ?  ಬಾವಿಯಲ್ಲೂ ಒಂದನಿ ನೀರಿಲ್ಲ,  ಕೆರೆಯಲ್ಲೂ  ಹನಿ ನೀರಿಲ್ಲ. ಅಡಿಕೆ ಬಾಳೆ ತೆಂಗು ಒಣಗುತಿದೆಆದರೆ ಅಲ್ಲಿ….ರಾಜಕೀಯ ಕುಣಿದಾಡುತಿದೆಬಡವನ ಕೂಗು ಕೇಳಲವರಿಗೆ ಸಮಯವೆಲ್ಲಿದೆ?ನಿನಗಾದರೂ ಕೇಳಲಿ ರೈತರ ಕೂಗು ಮಳೆಯೇ ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ಬೆಳೆ ಇಲ್ಲದೆ ರೈತ ಅಳುತಿರುವ,ಮಗುವಿಗೆ ನೀರಿಲ್ಲದೆ ತಾಯಿ ಪರಿತಪಿಸುವ,  ಒಣಗಿದ ಮರದ ಕೆಳಗೆ ಹಕ್ಕಿಯೂ ಸುಮ್ಮನಿದೆ,  ಮಳೆಯೇ ಬೇಗ ಬಾ, ನಮ್ಮ ಕಣ್ಣೀರು ಒರೆಸು.  ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ಭೂಮಿ ತಾಯಿ ಬಾಯಾರಿದ್ದಾಳೆ,  ಬಿತ್ತಿದ ಬೀಜ ಕಾಯುತ್ತಿದೆ,  ಒಂದೇ ಒಂದು ಹನಿ ಮಳೆಗಾಗಿ,  ಇಡೀ ಊರೇ ಕೈಮುಗಿದು ನಿಂತಿದೆ. ಮಳೆಯೇ ಬಾ, ಮಳೆಯೇ ಬಾ,  ಜೀವನಕ್ಕೆ ಜೀವ ತುಂಬಲು ಬಾ ಭುವಿಗೆ .ನೀನು ಬಂದರೆ  ನಮಗೆಲ್ಲ ಅನ್ನ ನೀರುನೀ ಬಾರದಿದ್ದರೆ  ನಮಗೆಲ್ಲಿ  ಬದುಕು ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ವನಜ ಮಹಾಲಿಂಗಯ್ಯ 

ವನಜ ಮಹಾಲಿಂಗಯ್ಯ ಕವಿತೆ “ಮಳೆಯೇ ಬಾ” Read Post »

ಕಾವ್ಯಯಾನ

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ”

ಕಾವ್ಯ ಸಂಗಾತಿ ಚಂಪಾ ಬಿ. ಜಿ. “ಒಲವಿನೋಲೆ” ಮಣ್ಣಿನ ವಾಸನೆ ಹೊತ್ತ ಮೊಗಸಿರಿಮುಗ್ಧ ನಗುವಿನ ಮೋಹನಾಂಗಿನಿನ್ನ ನಡಿಗೆಯ ಲಯಕೆಸುಳಿಗಾಳಿ ತಿಳಿಯಾಗಿತುಂತುರು ಹನಿಯಾಗಿಭುವಿಯೆಲ್ಲಾ ಹರಡಿತೇನೋಇವಳ ಒಡನಾಟವೇಮಧುರ ಸಂಗೀತವಾಗಿಝರಿಯಾಗಿ ಹರಿಯಿತೇನೋಸೂರ್ಯನ ಕಿರಣ ಕೂಡನಾಚಿ ಮೇಘಗಳ ಹಿಂದೆ ಸರಿಯಿತೇನೋನೀ ನಡೆವ ಹಾದಿಯಲಿ ನಿಸರ್ಗವೇಬರೆಯಿತೇನೋ ಒಲವಿನೋಲೆ. ಚಂಪಾ ಬಿ. ಜಿ.

ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಮರದ ಮೌನ” ನನ್ನನ್ನುನೆರಳಿನ ಗಾಢತೆಯಿಂದ ಅಳೆಯುತ್ತೀರಿಬೇರುಗಳ ಆಳವನ್ನುಯಾರೂ ಗಮನಿಸುವುದಿಲ್ಲ! ನಾನು ನಿಂತಿರುವುದುನಿಮಗೆ ಸುಲಭವೆನಿಸುತ್ತದೆ;ನೆಲದೊಳಗೆ ಪ್ರತಿದಿನಕುಸಿಯದೆ ಹಿಡಿದಿಟ್ಟುಕೊಳ್ಳುವಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ ನನ್ನ ಕೊಂಬೆಗಳಲ್ಲಿಹಕ್ಕಿಗಳು ಗೂಡು ಕಟ್ಟಿದಾಗಅದು ಅವುಗಳ ಮನೆಯೆನ್ನುತ್ತೀರಿ;ಗಾಳಿ ಅವನ್ನು ಕೆಡವಿದಾಗನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ! ನಾನು ಉದುರಿಸಿದ ಎಲೆಗಳುನನ್ನ ಸೋಲಲ್ಲ ಕೇಳಿರಿ;ಹೊಸ ಋತುವಿಗೆ ಬರೆದಮುನ್ನುಡಿಯಷ್ಟೇ ನೋಡಿರಿ! ನನ್ನ ಹಣ್ಣುಗಳ ಸಿಹಿಯನ್ನುನಿಮ್ಮ ನಾಲಿಗೆ ನೆನಪಿಡುತ್ತದೆ;ಆ ಸ್ವಾದಕ್ಕೆ ಕಾರಣವಾದನನ್ನ ಕಹಿ ಬೇರುಗಳನ್ನುಯಾರೂ ನೆನಪಿಸಿಕೊಳ್ಳುವುದಿಲ್ಲ! ಕಲ್ಲೆಸೆದ ಕೈಗಳಿಗೂನೆರಳನ್ನೇ ಕೊಟ್ಟಿದ್ದೇನೆ!ಆದರೂ ನನ್ನ ಮೌನವನ್ನುದುರ್ಬಲತೆಯೆಂದು ಕರೆಯುತ್ತೀರಿ! ನಾನು ಆಕಾಶದ ಕಡೆಎತ್ತರವಾಗಿ ಬೆಳೆದಂತೆಯೇಭೂಮಿಯ ಆಳಕ್ಕೆವಿನಯದಿಂದ ಇಳಿದಿದ್ದೇನೆ! ಕೊನೆಗೆ ನನ್ನನ್ನು ಇಂಚಿಂಚು ಕಡಿದುಮೇಜು ಬಾಗಿಲು ಚಿತೆಯನ್ನಾಗಿ ಮಾಡುತ್ತೀರಿ;ರೂಪಗಳು ಬದಲಾಗುತ್ತವೆ!ನನ್ನ ಮರತ್ವ ಮಾತ್ರ ಸಾಯುವುದಿಲ್ಲ! ನೀವು ಕಾಣುವುದುಮರದಂತಹ ನನ್ನ ಸಪೂರ ದೇಹ!ನಾನು ಬದುಕುವುದುಬೇರುಗಳ ಗಾಢ ನಿಗೂಢ ಮೌನ! ನಿಮ್ಮ ನೋಟಕ್ಕೆನಾನು ಕೇವಲ ಮರದಂತ ಸ್ವತ್ರು!ನನ್ನ ಆತ್ಮದ ಸಮಾಧಾನಕ್ಕೆಲೋಕದ ಸತ್ಯ ವ್ಯವಹಾರಕ್ಕುನಾನೇ ಒಂದು ಭೂಮಿ ಸಂಪತ್ತು! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ ನೂರು ಸಲ ದೂರ ನೂಕಿದರೂ  ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದುಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ ಯಾನಕೆ  ಅದೆಂತಹ  ಹೆಸರನಿಟ್ಟೆ ತೊಟ್ಟು ನೀನಿತ್ತ ಗಾಯಗಳ ಆಭರಣ ಮೈ ನೇವರಿಸಿ ಹೃದಯ ಭಿತ್ತಿಯಲ್ಲಿ ಕಾಪಿಟ್ಟು ಕೊಂಡಿರುವೆ.ಕೊಟ್ಟ ನೋವುಗಳ ಸರಮಾಲೆ ಹೊತ್ತು ನಿನ್ನೆಡೆಗೆ ಬರುವ ಒಲವ ಹೆಜ್ಜೆ ಪಾದಕೆ ಅದೆಂತಹ ಹೆಸರನಿಟ್ಟೆ. ಬೆಳದಿಂಗಳ ಕಸಿದು ಕಾರ್ಗತ್ತಲು ನೀವಿದ ಶಶಿಗೆ ಗೊತ್ತಿಲ್ಲವೇ  ತಾನು ನೀಡಿದ ನೋವುಇಂದುವಿನ ಅಂತರಂಗದಿ ಅರಳಿದ  ಹೂಗೆಜ್ಜೆ ನಾದಕೆ ಅದೆಂತಹ ಹೆಸರನಿಟ್ಟೆ – ಇಂದಿರಾ  ಮೋಟೆಬೆನ್ನೂರ. ಬೆಳಗಾವಿ.

ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” Read Post »

ಕಾವ್ಯಯಾನ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

ಕಾವ್ಯ ಸಂಗಾತಿ ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” ಮಸೀದೆಯ ಅಜಾನ್ಚರ್ಚ್ ನಲ್ಲಿ  ಕೇಳಬೇಕು ಚರ್ಚ್ ನಲ್ಲಿಯ ಪ್ರಾರ್ಥನೆಮಂದಿರ ದಲ್ಲಿ  ಜರುಗಬೇಕು ಮಂದಿರ ದಲ್ಲಿ ಸೇರಿದ ಜನಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ನನ್ನ ಕಾಯಕರ್ಪುರ ವಾಗಬೇಕು ಮಂದಿರ ಮಸೀದೆಚರ್ಚ್ ನಲ್ಲಿ ಬೆಳಗಬೇಕು ನರನಾಡಿಗಳುನೀಲಾಂಜನಕೆ ಬತ್ತಿ ಯಾಗಬೇಕು ರಕುತ ಎಣ್ಣಿಯಾಗಬೇಕುಮನಸು ಬೆಣ್ಣಿಯಂತೆ ಕರಗಬೇಕು ಆ ಕಾಲಕ್ಕಾಗಿ ನನ್ನಕಣ್ಣುಗಳು ಕಾಯಬೇಕು ಎ.ಎಸ್. ಮಕಾನದಾರ ಗದಗ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” Read Post »

ಕಾವ್ಯಯಾನ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಶ್ರೀಶೈಲ ಮಾದಣ್ಣವರ ಗಜಲ್ ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲುಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳುಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ ಡಾ. ಶ್ರೀಶೈಲ ಮಾದಣ್ಣವರ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

You cannot copy content of this page

Scroll to Top