ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ?
ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಏನಿದು ಯುದ್ದ? ಏನಿದು ಯುದ್ದ ಎಲ್ಲಡೆ ನಾಶಸುಡುತಲಿ ಬಂದಿದೆ ಜಗವನ್ನು//ಪ//ಬೇಕಿದೆ ಶಾಂತಿಯ ಹರಡುವ ಹಣತೆಯುತೊಡೆಯಲು ಕವಿದಿಹ ತಮವನ್ನು //ಅ.ಪ// ಉಗುಳುತ ಕೆಂಡವ ಕಾರುತ ದ್ವೇಷವದಹಿಸಿದೆ ಬುವಿಯನು ಮದದಲ್ಲಿನಾನು ನನ್ನದು ಎಂಬುವ ಸ್ವಾರ್ಥವುಉರಿಸಿದೆ ಮತ್ಸರ ಸೊಕ್ಕಿನಲಿ//ಪ// ಪ್ರಕೃತಿ ನಾಶದ ಅರಿವೇ ಇರದೆನಡೆದಿದೆ ಮನುಜನ ಕಾದಾಟಗಾಳಿಯು ತುಂಬಿದ ಬಲೂನಿನ ತೆರದಲಿನಡೆದಿದೆ ಇವನ ಹಾರಾಟ// ಸುಡುವುದೆ ಸಾಧನೆ ಎಂಬುವ ಮನಸಲಿಎಲ್ಲವ ದಹಿಸುತ ಸಾಗಿಹರುಧ್ವಂಸವ ಮಾಡಿ ಬೀಗುತ ಸೊಕ್ಕಲಿತಾವೇ ಉತ್ತಮರು ಎನ್ನುವರು//ಪ// ಯುದ್ಧದ ದಾಹಕೆ ಸಂಕುಲವೆಲ್ಲರೋಧಿಸಿ ಪ್ರಾಣವ ಬಿಟ್ಟಿಹುದುಸುಂದರ ಲೋಕಕೆ ಎಂದೂ ಭರಿಸದನಷ್ಟವೆ ಇಂದಿಗೆ ಆಗಿಹುದು// ಯುದ್ಧವ ನಿಲ್ಲಿಸಿ ಶಾಂತಿಯ ಬದುಕನುಸಾಗಿರಿ ಜಗದಲಿ ಒಲವಿನಲಿಶಾಂತಿಗೆ ದೊರೆಯುವ ಮನ್ನಣೆ ಇಳೆಯಲಿಎಲ್ಲಿಯೂ ಇಲ್ಲ ಅರಿವಿರಲಿ// ಶುಭಲಕ್ಷ್ಮಿ ಆರ್ ನಾಯಕ
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ? Read Post »









