ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ

ಪುಸ್ತಕ ಸಂಗಾತಿ ಗಂಗಾ ಚಕ್ರಸಾಲಿ ಶ್ರೀ ಕಿರಣ ಗಣಾಚಾರಿ ಬೆಳಕಿನ ಹೊಳೆಯ ಪ್ರವಾಹ ಬದುಕಿನಪ್ರವಾಹದಲ್ಲಿಮಿಂದೆದ್ದ ಕವಿತೆಗಳು ಪುಸ್ತಕ: ಬೆಳಕಿನ ಹೊಳೆಯ ಪ್ರವಾಹಲೇಖಕರು: ಶ್ರೀ ಕಿರಣ ಗಣಾಚಾರಿಬೆಲೆ:೧೦೦ ರೂಪ್ರಕಾಶನ: ಸಂಭ್ರಮ ಫೌಂಡೇಶನ್ ಶ್ರೀ ಕಿರಣ ಗಣಾಚಾರಿಯವರ ಎರಡನೇ ಕವನ ಸಂಕಲನ ಬೆಳಕಿನ ಹೊಳೆಯ ಪ್ರವಾಹ. ಕವಿಯಾದವನು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಕಿವಿಯಾಗುತ್ತಾನೆ, ಕಣ್ಣಾಗುತ್ತಾನೆ ಕೊನೆಗೆ ವಿಮರ್ಶಕನೂ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ಐವತ್ತು ಕವಿತೆಗಳು ಪ್ರಸ್ತುತ ಸಮಾಜ, ರಾಜಕೀಯ, ಶೈಕ್ಷಣಿಕ, ಮಾನವೀಯ ಸಂಬಂಧಗಳ ನೆಲೆಯೊಳಗೆ ಓದುಗನಿಗೆ ಭಾವನಾತ್ಮಕವಾಗಿ ಪ್ರವಾಹವನ್ನೇ ಹರಿಸುತ್ತವೆ.ಹುಲಿಜೊತೆ ಚಿಗುರೆಯೊಂದು ಸಂವಾದಿಸಿದಂತೆಅಪ್ಪನೆಂದರೆ ಭಯದ ಬಕಾಸುರನಂತೆನಿಸಿದ್ದೇ ಹೆಚ್ಚುಅಪ್ಪನ ಕುರಿತಾದ ಭಯ, ನಡುಕ ೮೦- ೯೦ ರ ದಶಕದಲ್ಲಿ ತುಸು ಹೆಚ್ಚಾಗಿಯೇ ಇತ್ತು. ಅಪ್ಪನೆಂದರೆ ಅರ್ಥವಾಗದವನಾಗಿದ್ದನು. ಪ್ರತಿಯೊಂದು ಜವಾಬ್ದಾರಿಯೊಳಗೆ ಮುಳುಗೆದ್ದ ಅಪ್ಪ ಮೌನದ ಪರ್ವತವೇ ಆಗಿದ್ದ. ಆಗಾಗ ಒಂದೆರೆಡು ಮಾತುಗಳು ಗುಡುಗಿನಂತೆ ಸದ್ದಾದರೂ , ಅವನ ಹೃದಯದಲಿ ಪ್ರೀತಿ ಕಾಳಜಿಯ ತೊರೆಯು ಮಾತ್ರ ಬತ್ತುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಬಂದ ಈ ಕವಿತೆ ಓದುಗನನ್ನು ತನ್ನ ಬಾಲ್ಯಾವಸ್ಥೆಗೆ ಕರೆದೊಯ್ದು ಕಣ್ಣಹನಿ ಜಾರಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಭಾವಿಸುವವರೆಂದರೆ ಅಮ್ಮ, ಅಪ್ಪ, ಗೆಳೆಯ. ಈ ನೆಲೆಯೊಳಗೆ ಅಪ್ಪನೆಂಬ ಪ್ರಶ್ನೆಗಳ ಹುತ್ತ, ಪ್ಲೀಸ್…ಅಮ್ಮ, ಮುದ್ದು ಕಂದ, ಅವ್ವ ಮತ್ತು ಧೂಳು, ಗೆಳೆಯ ಬದಲಾಗಿದ್ದಾನೆ ಕವಿತೆಗಳು ಮನವನ್ನು ಕದಡುತ್ತವೆ.ವರ್ತಮಾನದಲ್ಲಿ ಬದುಕುತ್ತಿರುವ ನಾವುಗಳು ಅಂದು ಇಂದು ಎಂಬ ಪದಗಳ ಜರಡಿಯೊಳಗೆ ಸಮಾಜವನ್ನು ನೋಡುತ್ತೇವೆ. ಕವಿಯಾದವನು ತುಸು ಹೆಚ್ಚೇ ಈ ಬದಲಾವಣೆಗಳನ್ನು ಗಮನಿಸುತ್ತಾನೆ. ಈ ಬದಲಾವಣೆಯ ಪರದೆಯೊಳಗೆ ಹಲವು ಕವಿತೆಗಳು ಮೂಡಿಬಂದಿವೆ. ಎಂದಿನಂತೆ ನಾನಿಲ್ಲ, ಒಪ್ಪಿಕೊಳ್ಳಲಾರದ ವಾಸ್ತವ, ಬೆಳಕಿನ ಹೊಳೆಯ ಪ್ರವಾಹ, ಅಮವಾಸ್ಯೆ ಹೊದ್ದವರು, ಇಶಾರೆ, ಸೆರೆಯಾಗದ ಭಾವಚಿತ್ರ, ಹೇ! ಸಮಯವೇ…, ಕೊಡು ಕೊಳ್ಳುವಾಟ ಹೀಗೆ ಹಲವು ಕವಿತೆಗಳು ಇಂದಿನ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ ನಮ್ಮೊಳಗಿನ ನಮ್ಮತನವನ್ನು ಬಡಿದೆಬ್ಬಿಸುತ್ತವೆ. ಬೆಳಕಿನ ಹೊಳೆ ಹರಿಸುತ್ತಿದ್ದೇವೆಂದುಅದೆಷ್ಟು ಕಲ್ಲು ಮಣ್ಣು ಕಸ ಕಡ್ಡಿಹಾಕುತ್ತಿದ್ದೇವೆನೀವೇ ಹೇಳಿ…ನೋಡೋಣ ! ಈ ಪುಸ್ತಕದ ಶೀರ್ಷಿಕೆಯ ಈ ಕವಿತೆ ಇಂದಿನ ಮಾನವರ ಅತಿಯಾದ ಬಯಕೆ, ಅಹಮ್ಮಿನ ಫಲಶೃತಿಯನ್ನು ಕಣ್ಣಮುಂದೆ ತೆರೆದಿಡುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಸವೆದುಹೋದ, ಕ್ಲೀಷೆಗೊಳಗಾದ, ಜೀರ್ಣಗೊಂಡ, ಶಿಥಿಲಗೊಂಡ, ಸಡಿಲವಾದ ಬದುಕಿನ ಸಾಮಾನ್ಯ ಸಹಜ ನಿಯಮಗಳು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳದೆ, ಹೊಸ ಜಗತ್ತನ್ನು ಧ್ಯೇನಿಸುತ್ತಿರುವ ಸತ್ಯವನ್ನು ಹೊರಹೊಮ್ಮಿಸುತ್ತವೆ ಎಂಬ ಪ್ರೊ. ಎಸ್‌ ಎಂ ಗಂಗಾಧರಯ್ಯನವರ ಮುನ್ನುಡಿ ಮಾತು ಅರ್ಥಪೂರ್ಣವಾಗಿದೆ. ಹಳತಾದ ಬಣ್ಣಗೆಟ್ಟ ಗೋಡೆಗಳುನಮ್ಮ ಬದುಕ ಬಣ್ಣವಾಗಿಸಿವೆಹರಕಲು ಮುರುಕಲು ಮಾಳಿಗೆನಮ್ಮ ಬಾಳ ನೆಟ್ಟಗಾಗಿಸಿವೆ ಸರಕಾರಿ ಶಾಲೆ ಕವಿತೆಯಲ್ಲಿ ಮೂಡಿಬಂದ ಈ ಸಾಲುಗಳು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತವೆ. ಬಹುತೇಕರು ಆಗ ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ಬಹಳಷ್ಟು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಈ ಸಂದರ್ಭದಲ್ಲಿ ಅದರ ಮಹತ್ವ ಸಾರುವ ಈ ಕವನ ಸಕಾಲಿಕವಾಗಿದೆ. ಇದೇ ರೀತಿ ಶಾಲೆಗೆ ಸಂಬಂಧಿಸಿದಂತೆ ಬರೆದ ಇನ್ನಷ್ಟು ಕವಿತೆಗಳೆಂದರೆ ಪಾಟಿ ಚೀಲ , ಪುಸ್ತಕ ಮತ್ತು ನಿನಗೆ ಕಲಿಸಿದ ಮಾಸ್ತರ ಯಾರು? ಕವಿತೆಗಳು.ಇಂದು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಪರಿಸರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಪ್ರಕೃತಿಯಲ್ಲಿಯ ಹಸಿರು ನಾಶವಾಗಿ, ಜೀವಸಂಕುಲಗಳು ತೊಂದರೆಗೊಳಗಾಗಿವೆ. ಇಂತಹ ನೋಡಿದ ಕೇಳಿದ ಘಟನೆಗಳ ಹಿನ್ನೆಲೆಯಲ್ಲಿ ಹಲವು ಕವಿತೆಗಳು ಮೂಡಿಬಂದಿವೆ. ಈ ಜಾಗ ನಂದೈತಿ, ನಂಬಿಕೆ ಪಟ್ಟ ಕಟ್ಟಿದವರಾರು? , ಸಹಿಸಿಕೊಂಡಿರುವೆ ಕವನಗಳು ಆ ಚಿತ್ರಣವನ್ನು ಕಟ್ಟಿಕೊಡುತ್ತವೆ. ಸಖ್ಯ ಬೆಳೆಸಿಕೊ, ಸುಖ ನೀಡುವೆನಂಬು, ಇಂಬನೀಯುವೆಕಡೆಗಣಿಸಿದರೆ ನಡುಗಣ್ಣ ತೆರಯುವೆ .. ಇಂತಹ ಸಾಲುಗಳು ಮಾನವನಿಗೆ ತಿಳುವಳಿಕೆ ನೀಡುವ ಜೊತೆಗೆ ಮುಂದೆ ಆಗುವ ಆನಾಹುತವನ್ನು ತಿಳಿಸಿಕೊಡುತ್ತವೆ. ಕವಿಗಿರುವ ಪರಿಸರ ಪ್ರೇಮವನ್ನು ಅರಿಯಬಹುದಾಗಿದೆ. ಇಷ್ಟೇ ಅಲ್ಲದೇ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತಹ ಕವಿತೆಗಳು ಕನ್ನಡತನವನ್ನು ಜಾಗೃತಿಗೊಳಿಸುತ್ತವೆ. “ ಕನ್ನಡ ಭಾಷೆ ನಾಲಿಗೆಯಲಿ ಉಲಿಯದೆ ಗಂಟಲಲ್ಲಿ ಸಿಕ್ಕಾಕಿಕೊಂಡಂತಿರುವ ಭಯ “ ಈ ಸಾಲು ಅನ್ಯಭಾಷೆಯ ಹಾವಳಿಯನ್ನು ಸೂಚ್ಯವಾಗಿ ಹೇಳುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹಬ್ಬಗಳು ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬರೆದ ಹಲವು ಕವಿತೆಗಳು ಭೂತ ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುತ್ತವೆ.ಕವಿ ಎಂದರೆ ಭಾವತೀವ್ರ ವೇದನೆಗಳನು ಹೊರುವ, ಹೆರುವ ಸೃಜನಶೀಲ ಗರ್ಭಸ್ಥ ಸ್ಥಿತ ಪ್ರಜ್ಞ ಎಂದು ಹೇಳುವ ಕಿರಣ ಅವರ ಮಾತಿಗೆ ಪೂರಕವಾಗಿಯೇ ಹಲವು ಕವಿತೆಗಳು ಭಾವನೆಗಳನ್ನು ಹೊದ್ದು ನಿಂತಿವೆ. ಪ್ರತಿಯೊಂದು ಕವನಗಳನ್ನು ಓದುವಾಗಲೂ ಇಂದಿನ ನೋವು, ವೇದನೆಗಳ ಚಿತ್ರಣ ಕಣ್ಮುಂದೆ ಸುಳಿದು ಬದಲಾದ ಮನುಷ್ಯನ ವ್ಯಕ್ತಿತ್ವಗಳನ್ನು ತೋರಿಸುತ್ತವೆ. ಇವರ ಮೊದಲ ಕವನ ಸಂಕಲನಕ್ಕಿಂತ ಈ ಕವನ ಸಂಕಲನ ಸಂಪೂರ್ಣವಾಗಿ ಭಿನ್ನ ಸಂಗತಿಗಳನ್ನು ಓದುಗರಿಗೆ ತರೆದಿಡುತ್ತದೆ. ಕಾಲದ ಸುಳಿಯಲ್ಲಿ ಮಾಗಿದ ಕವಿತೆಗಳು ಈ ಬೆಳಕಿನ ಪ್ರವಾಹದಲ್ಲಿ ಮಿಂದೆದ್ದಿವೆ. ಇವರಿಂದ ಮತ್ತಷ್ಟು ಮತ್ತಷ್ಟು ಕವನಸಂಕಲನಗಳು ಹೊರ ಬರಲೆಂದು ಆಶಿಸುವೆ. ಗಂಗಾ ಚಕ್ರಸಾಲಿ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ Read Post »

ಕಾವ್ಯಯಾನ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ ನನಗೆಜಗತ್ತನ್ನೇ ಮರೆಯುವ ಆಸೆ ಎನಗೆಮೂಲೆ ಮೂಲೆಯಲ್ಲಿ ಪುಸ್ತಕಗಳ ರಾಶಿಅದರ ನಡುವೆ ನನ್ನದೇ ಒಂದು ಪ್ರಪಂಚ ಸೃಷ್ಟಿ. ಬೆರಳುಗಳು ಸೋಕಿದ ಪುಟಗಳ ಗಂಧಅದೆಷ್ಟೋ ಲೇಖಕರ ಉಸಿರಿನ ಸ್ಪಂದಕೆಲವು ಪುಟಗಳಲ್ಲಿ ಪ್ರೀತಿಯ ಕಥೆಕೆಲವುಗಳಲ್ಲಿ ಅದೆಷ್ಟೋ ಯುದ್ಧದ ವ್ಯಥೆ. ಕಿಟಕಿಯಿಂದ ಬೀಳುವ ಸಂಜೆಯ ಬೆಳಕುಧೂಳಿನ ಕಣಗಳಲ್ಲಿ ತೇಲುವ ಸಾಲು ಸಾಲುಸದ್ದು ಮಾಡದ ಮೌನದ ಮಾತುಗಳುಪುಸ್ತಕಗಳು ಆಡುವ ನಿಶ್ಯಬ್ದದ ಸವಿಗನಸುಗಳು. ಯಾರೂ ಹುಡುಕದ ಹಾಗೆ ಕಳೆದು ಹೋಗಬೇಕುನನಗೆ ನಾನೇ ಮತ್ತೆ ಸಿಗುವವರೆಗೆ ಹುಡುಕದಿರಿ ನನ್ನನುಒಂದು ಕವನದಿಂದ ಇನ್ನೊಂದು ಕವನಕ್ಕೆಒಂದು ಜೀವನದಿಂದ ಇನ್ನೊಂದು ಜೀವನಕ್ಕೆ. ಸಮಯ ಇಲ್ಲದ ಜಾಗ ಅದುಮುಚ್ಚಿದರೂ ತೆರೆದಿರುವ ಬಾಗಿಲದುಹೊರಗಿನ ಜಗತ್ತು ಕಾಯಲಿ ಸ್ವಲ್ಪ ಹೊತ್ತುನಾನು ಇಲ್ಲೇ ಇರ್ತೀನಿ ಈ ಅಕ್ಷರಗಳೆ ನನ್ನ ಸ್ವತ್ತು. ನಾವಾಗಿಯೇ ಕಳೆದು ಹೋಗಬೇಕಿದೆಮನಸ್ಸಿನಿಂದ ಮನೆಯೊಂದ ಮಾಡಬೇಕಿದೆನೀವು ಎಷ್ಟೊತ್ತಾದ್ರೂ ಇರಬಹುದು ಇಲ್ಲಿಪ್ರತಿ ಪುಸ್ತಕದಲ್ಲೂ ನಿಮ್ಮನ್ನು ನೀವು ಕಾಣಬಹುದು ಇಲ್ಲಿ. ನನಗೆ ಅತಿ ಇಷ್ಟದ ತಾನವಿದುಮನೆಯೊಳಗೊಂದು ಗ್ರಂಥಾಲಯ ಮಾಡುವುದುನನ್ನ ಬದುಕಿನ ಮಹದಾಸೆಯದುಮನ ನಿತ್ಯವೂ ಕಳೆದು ಹೋಗೆಂದಿಹುದು.. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ರಾಜಕೀಯ” ನಿನ್ನಕೈಯಲ್ಲಿದ್ದ ಕಲ್ಲಿಗೆಅಭಿವೃದ್ಧಿಯ ಫಲಕ ತೊಡಿಸಿದೆ! ನಿನ್ನಬಾಯಲ್ಲಿದ್ದ ಸುಳ್ಳಿಗೆಭರವಸೆ ಬಣ್ಣಗಳ ಬಳಿದೆ! ನಿನ್ನಜೇಬು ತುಂಬಿದ ಹಣಕ್ಕೆಜನಸೇವೆಯ ಹೆಸರು ನೀಡಿದೆ! ನಿನ್ನಕುರ್ಚಿಯ ಮೇಲಿನ ಮೋಹಕ್ಕೆಜನಹಿತದ ಮುಖವಾಡ ಹಾಕಿದೆ! ನಿನ್ನಜಾತಿಯ ಮೆಟ್ಟಿಲೇರಿ ನಿಂತುಸಮಾನತೆಯ ಭಾಷಣ ಮಾಡಿದೆ! ನಿನ್ನಧರ್ಮದ ಗೋಡೆ ಕಟ್ಟಿಕೊಂಡುಸೌಹಾರ್ದತೆಯ ಧ್ವಜ ಹಾರಿಸಿದೆ! ನಿನ್ನಚುನಾವಣೆಯ ಗೆಲುವಿಗೆಬಡವರ ಕಣ್ಣೀರಿಗೆ ಬೆಲೆ ಕಟ್ಟಿದೆ! ನಿನ್ನಮತ ಕೇಳುವ ಮನಸಿಗೆವರ್ಷಗಳ ಅಧಿಕಾರದ ಅಮಲಿದೆ! ನಿನ್ನವಿರೋಧಿಯಾದ ಮತಗಳಕುರ್ಚಿಯ ಆಮಿಷದಿ ಮಿತ್ರರಾಗಿಸಿದೆ! ನಿನ್ನಜನರು ಬದಲಾಗುತ್ತಾರೆಂದುಪ್ರತಿ ಚುನಾವಣೆಯಲ್ಲೂ ಹೇಳಿದೆ! ನಿನ್ನಜನ ಮತ್ತದೇ ಚುನಾವಣೆಯಲ್ಲಿಬದಲಾಯಿಸುತ್ತಾರೆಂಬುದ ಮರೆತೆ!ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬರೆಯಬೇಕು ಕವನ” ಬರೆಯಬೇಕು ಕವನನೋವು ಮರೆತು ನಲಿಯಲುಜೀವ-ಭಾವ ಬೆಸೆಯಲುಸ್ನೇಹ-ಪ್ರೀತಿ ಹಂಚಲುತನು-ಮನಗಳು ತಣಿಯಲುಸೃಷ್ಟಿ ಸೊಬಗ ಸವಿಯಲುಬಚ್ಚಿಟ್ಟ ಬಯಕೆ ಬಿಚ್ಚಿಡಲುಮಧುರ ಮಿಲನವಾಗಲುವಿಚಾರಧಾರೆ ಹರಿಸಲುಕನಸಗಳು ನನಸಾಗಲುಅಂತರಾಳವ ಅರಿಯಲುಅಭಿವ್ಯಕ್ತಿ ಅನಾವರಣವಾಗಲುಮನದಾಳದ ಮೌನ ಮಾತಾಗಲುತಲ್ಲಣಗಳ ಕೊನೆಗೊಳಿಸಲುವಿರಹ ವೇದನೆ ಮರೆಯಲುಭೇದ-ಭಾವ ಅಳಿಯಲುಅಜ್ಞಾನ ಅಂಧಕಾರ ಕಳೆಯಲುಸಮರಸ ಸಮಾಜ ಉಳಿಯಲುಸ್ವಾಸ್ಥ್ಯ ಸಾಹಿತ್ಯ ಸೃಷ್ಟಿಸಲುಸೃಜನಶೀಲತೆ ಬೆಳೆಸಲುಶಾಂತಿ ಸಮತೆ ಸಾರಲುಶಬ್ದಗಳ ಪೋಣಿಸಿ ಸಂಭ್ರಮಿಸಲುಬರವಸೆಯ ಬಾಳು ಬೆಳಗಲುಬರೆಯಬೇಕು ಕವನ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ” Read Post »

ಕಾವ್ಯಯಾನ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ನಿಶಾ ಹೆಚ್ ಕಾಮತ್ “ನಿರಾಸೆ” ನನಸಾಗದ ಕನಸೆಂದು ತಿಳಿದೂ  ಮನದ ಮೂಲೆಯಲೊಂದು ಆಸೆನಾನೂ ಮನಸ ಬಳಿ ಮಾತನಾಡುವೆ  ಆಡದೇ ಯಾವುದೇ ಭಾಷೆ ಇಂದೋ ನಾಳೆಯೊ ತಿಳಿಯದ ಅಂತ್ಯಮಾಡಿದ್ದೆಲ್ಲವೂ ವ್ಯರ್ಥಕಣ್ಣೆದುರಲ್ಲೇ ಜೀವನ ಮರಣನಮ್ಮಲ್ಲೇಕಿದೆ ಸ್ವಾರ್ಥ ? ತಿಳಿಯದೆ ಏನೂ ವರ್ತಿಸುವುದೇಕೆತಿಳಿದವರಂತೆ ನಾವುತಿಳಿದರೆ ತಿಳಿಸಿ ತೆಗೆವುದು  ಹೇಗೆಮಾನವ ಕುಲದ ನೋವು? ಬೆಳೆಸಿದಿರೇಕೆ ಗಿಡವನು ಅಂದುಆಸೆಯ ಬೀಜವ ನೆಟ್ಟು?ಈ ದಿನ ನಾನು ತಡೆಯಲಿ ಹೇಗೆಜನಗಳ ಕೊಡಲಿಯ ಪೆಟ್ಟು ? ಗುರುತಿಸದಿದ್ದರೂ ನೋವಿರಲಿಲ್ಲನಾನು ಮಾಡಿದ ಸಾಧನೆತಿಳಿದು ಕೊಳ್ಳಲು ಪ್ರಯತ್ನಿಸಬಾರದೆನನ್ನ ಮನಸಿನ ಭಾವನೆ ನಿಶಾ ಹೆಚ್ ಕಾಮತ್ ಕಿನ್ನಿಗೋಳಿ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ” Read Post »

ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನುನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವುನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನುನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ. ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ ” ಒಳ ಸುಳಿವು” ಮೌನಮರೆಯಲಿ ಮಾತೊಂದು ಮೊಳಗುವುದುಮನದಾಳದ ನೋವು ಕಣ್ಣಲಿ ಕರಗುವುದು;ನಗುವಿನ ಹಿಂದೆ ಅಡಗಿದ ಕಣ್ಣೀರ ಹನಿಯೇ,ಬದುಕಿನ ಸತ್ಯಕ್ಕೆ ನೀಡುವ ಒಳ ಸುಳಿವೇ. ಹೊರಗಿನ ಬೆಳಕಿಗೆ ನೆರಳೊಂದು ಜೊತೆಯಲಿ,ಒಳಗಿನ ಕತ್ತಲೆಗೆ ದೀಪವೊಂದು ಹೃದಯದಲಿ;ಕಳೆದುಹೋದ ದಾರಿಯ ಹೆಜ್ಜೆ ಗುರುತಿನಲಿ,ನಾಳೆಯ ಪಯಣದ ಸುಳಿವಿದೆ ಆತ್ಮದಲಿ. ಕಾಣದ ಕನಸೊಂದು ಕಣ್ಣೊಳಗೆ ನಿಲ್ಲುವುದುಹೇಳದ ಭಾವ ಉಸಿರಾಗಿ ಹರಿಯುವುದುಪದಗಳಿಗಿಂತ ಮೌನವೇ ಸತ್ಯ ಹೇಳುವಾಗಮನವೇ ಮನಸ್ಸಿಗೆ ಕನ್ನಡಿ ಹಿಡಿಯುವಾಗ ಜಗವನು ಅರಿಯಲು ಮೊದಲು ನಿನ್ನನು ಅರಿತು ಒಳಗಿನ ಧ್ವನಿಯನು ಕೇಳು ಕ್ಷಣವೊಂದು ನಿಂತು ಹೊರಗೆ ಹುಡುಕಿದ ಸತ್ಯ ಒಳಗೇ ಹೊಳೆಯುವುದು ನೀನೇ ನಿನ್ನ ದಾರಿ ಎಂದು ಒಳ ಸುಳಿವು ನೀಡುವುದು. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು” Read Post »

ಕಾವ್ಯಯಾನ

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ತ್ರಿವರ್ಣದ ನೆರಳಿನಲ್ಲಿ” 140  ವರುಷಗಳ ಹಿಂದೆಹೊತ್ತಿ ಉರಿದಿತ್ತು ಒಂದು ಕನಸು,ಬಂಧನದ ಕತ್ತಲೆಯನ್ನು ಸೀಳಿಬೆಳಕಾಗಿತ್ತು  ಸ್ವಾತಂತ್ರ್ಯದ ಬೆಳಗು. ತಾಯ್ನಾಡಿನ ಮಣ್ಣಿಗಾಗಿನಡೆದವು ಮೋಹನದಾಸ್ ಕರಮಚಂದ ಗಾಂಧಿ ಜೊತೆಗೆ ಸಾವಿರ ಹೆಜ್ಜೆಗಳು,ತ್ಯಾಗದ ದಾರಿಯಲ್ಲಿ ಮೂಡಿದವುಅಸಂಖ್ಯಾತ ವೀರರ ಹೆಜ್ಜೆ ಗುರುತುಗಳು. ಗಾಂಧಿ ಕೈಯಲ್ಲಿ ಆಯುಧವಿರಲಿಲ್ಲ,ಹೃದಯದಲ್ಲಿ ಮಾತ್ರ ಧೈರ್ಯವಿತ್ತು;ತುಟಿಯಲ್ಲಿ  ಅಜಾದಿಯ  ಹಂಬಲ ;ಕಣ್ಣಿನಲ್ಲಿ ಭಾರತವಿತ್ತು. ಜೈಲಿನ ಕತ್ತಲ ಕೋಣೆಗಳಲ್ಲೂ ನೆಹರು ಅವರಸ್ವಾತಂತ್ರ್ಯದ ಹಾಡು ಮೊಳಗಿತು,ತಾಯಿಯ ಮಡಿಲು ತೊರೆದ ಮಗನಹೆಜ್ಜೆ ದೇಶದ ದಾರಿಯಾಯಿತು. ಆ ದಿನದ ತ್ಯಾಗದ ಹನಿಗಳುಇಂದು ನಮ್ಮ ಧ್ವಜದ ಬಣ್ಣಗಳಾಗಿವೆ;ಆ ವೀರರ ಕನಸುಗಳೇಇಂದು ನಮ್ಮ ಸ್ವತಂತ್ರ ಉಸಿರಾಗಿವೆ. ನೂರಾಮೂವತ್ತು  ವರ್ಷಗಳು ಕಳೆದುಹೋದರೂಆ ನೆನಪುಗಳುಕ್ವಿಟ್ ಇಂಡಿಯಾ ಚಳುವಳಿ ಹಳೆಯದಲ್ಲ,ಪ್ರತಿ ಆಗಸ್ಟ್‌ನ ಗಾಳಿಯಲ್ಲೂಅವರ ತ್ಯಾಗದ ಸುಗಂಧ ಕಡಿಮೆಯಾಗದು. ತ್ರಿವರ್ಣ ಧ್ವಜ ಹಾರುವಾಗಮನದೊಳೊಂದು ಪ್ರಶ್ನೆ ಮೂಡಲಿ—“ನಾವು ಪಡೆದ ಸ್ವಾತಂತ್ರ್ಯವನ್ನುಮುಂದಿನ ಪೀಳಿಗೆಗೆ ಹೇಗೆ ನೀಡಲಿ?” ಸ್ವಾತಂತ್ರ್ಯವೆಂದರೆ ಕೇವಲ ಹಬ್ಬವಲ್ಲ,ಅದು ಹೊಣೆಗಾರಿಕೆಯ ಬೆಳಕು;ದೇಶದ ಮಣ್ಣನ್ನು ಪ್ರೀತಿಸುವಪ್ರತಿಯೊಬ್ಬ ಹೃದಯದ ಸಂಕಲ್ಪ. ವೀರರ ಕನಸುಗಳು ನಗುವಂತೆ,ಭಾರತದ ಭವಿಷ್ಯ ಬೆಳಗುವಂತೆ,ಎಂಭತ್ತು ವರ್ಷಗಳ ನೆನಪಿನ ಮುಂದೆನಾವು ತಲೆಬಾಗಿ ಪ್ರತಿಜ್ಞೆ ಮಾಡೋಣ. “ನೆಲದ ಜನ  ಮೊದಲು,  ನಂತರ, ವಿವಿಧತೆಯಲ್ಲಿಏಕತೆ ನಮ್ಮ ಶಕ್ತಿ,ಸ್ವಾತಂತ್ರ್ಯ ನಮ್ಮ ಉಸಿರು,ಭಾರತ ನಮ್ಮ ಹೆಮ್ಮೆ! ಎನ್.ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್ Read Post »

ಕಾವ್ಯಯಾನ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು”

ಕಾವ್ಯ ಸಂಗಾತಿ ಶಿವರಾಜ ಅರಳಿ “ಮಾಸದ ಹೊಸ್ತಿಲು” ಎದೆಯ ತಿದಿಯೊತ್ತಿ ಗಿರಕಿಸುವಸಂಕಟದ ಆಂತಯು೯ದ್ಧಕ್ಕೆವಿರಾಮದ ಮುಲಾಮುಕೇವಲ ನೆಪ ಮಾತ್ರಆಗಾಗ ಬೆನ್ನಹುರಿಯಿಂದಿಳಿದುಹೊಕ್ಕಳು ಬಳ್ಳಿ ಸುತ್ತುವಋತುವಿನ ಆಟಕ್ಕೇನು ಗೊತ್ತುಹಸಿ ಕಣ್ಣ ಹೆಂಗಳೆಯರಚೀತ್ಕಾರದ ಆತ೯ನಾದ. ಮಾಸದ ಹೊಸ್ತಿಲಲಿಕಾದು ಕೆಂಡವಾದ ಬೇನೆಕನಸುಗಳನ್ನು ಜೀವಂತ ಸುಡುತ್ತದೆಎದೆಯ ಭಾವಗಳುಸ್ರಾವದ ಹರಿವಿನ ತೀವ್ರತೆಗೆಕೊಚ್ಚಿ ಹೋಗುವುದೊಂದೇ ಬಾಕಿಇಲ್ಲಿ ಹೃದಯದ ಭಾಷೆಒಮ್ಮೊಮ್ಮೆ ತಣ್ಣಗೆ ಮಲಗುತ್ತದೆವಿಧಿಯಿಲ್ಲದೆ… ಬಂಧಿಸಿಟ್ಟ ಗೂಡು ಹಕ್ಕಿಗೆಬೇಲಿಯ ದದಿ೯ಲ್ಲನಿಷಿದ್ಧ ನೆತ್ತಿಗೆನೆರಳ ಚಾಚುವ ಕೈಗಳಿಲ್ಲಹಳತು ಹೊಸತಾಗುವ ಜೀವ ಭಾವಹಗಲು ದಾಟಿದರೂಇರುಳು ಸರಿದರೂಮಾಸಕ್ಕೊಮ್ಮೆ ಮೊಳೆತುನೋವ ಹೊರಬೇಕು ಆವತ೯ದಲ್ಲಿ ಶಿವರಾಜ ಅರಳಿ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು” Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಅವರ ಗಜಲ್ ಹುಸಿ ಕೋಪ ಮರೆತು ಎಲ್ಲರೊಂದಿಗೆ ಬೆರೆಯುವುದೇ ಮಾತು.ತುಸು ದೂರ ಇದ್ದವರ ಹತ್ತಿರ ಕರೆಯುವುದೇ ಮಾತು. ಸುಮ್ಮನೇ ಜಗಳ ಮಾಡಿ ದ್ವೇಷ ಸಾಧಿಸುವುದು ಸರಿಯೇ.ಬಿಮ್ಮನೆ ಮುಖ ಊದಿಸಿದರೆ ಅಗಲಿ ತೊರೆಯುವದೇ ಮಾತು. ಸಿಹಿಯ ‌ದ್ವನಿ ಕೇಳುಗನ ಮನ ತಣಿಸುವುದು ನೋಡು.ಕಹಿಯ ಕಂಠ ನೋವ ನೀಡುತ ಕೊರೆಯುವುದೇ ಮಾತು. ಒಂದಾಗಿ ಚಂದದಿ ಬಾಳುತ ಸಾಗುವುದೇ ರಸಮಯ ಜೀವನ.ಬಂಧನದಿ ಭುವಿಗೆ ಹೊಂದಿಕೊಳ್ಳದಿರೆ ವಿಷ ಎರೆಯುವುದೇ ಮಾತು ಹೃದಯ ಪರಸ್ಪರ ಮಿಡಿದರೆ ಒಲವಿನ ಜಯ ಸಿಗುವುದುಮಧುರ ಬಾಂಧವ್ಯ ಬೆಸೆದರೆ ಸಂಕಟ ಮರೆಯುವುದೇ ಮಾತು ಜಯಶ್ರೀ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

You cannot copy content of this page

Scroll to Top