ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »

ಕಾವ್ಯಯಾನ

ಅಶ್ಫಾಕ್ ಪೀರಜಾದೆ ಅವರ ಗಜಲ್

ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ ಗಜಲ್ ಕಲರವರದ ನಂತರ ಕಲಹ ಮತ್ತೆ ಕಾಡಿದೆಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ ನೋವ ತೆರೆತೆರೆಯಾಗಿ ಸಾಗರ ಸೇರುತಿರೆನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ ಬರೆದುಕೊಂಡ ಬಂದ ಹಣೆಬರ ಇದುತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ ದೂರದಿ ಶಾಂತವಾಗಿ ಕಾಣುವ ಸಮುದ್ರಕುದಿಯುವ ಲಾವಾರಸ ಮತ್ತೆ ತುಂಬಿದೆ ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕುಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಒಮ್ಮೆಬರುವೆಯಾ?” ನನ್ನ ಪ್ರಾಣದ ಇನಿಯಎಲ್ಲಿರುವೆ  ಬರುವೆಯಾಬಿಳಿ ಗೋಡೆಯ ನಡುವೆ ನಾನುನೆರಳಾಗಿ ಕರಗುತ್ತಿರುವೆ ಒಮ್ಮೆ ನನ್ನ ಕಣ್ಣೊಳಗೆಚಂದ್ರ ಬೆಳಕು ಹುಡುಕಿದವನು ನೀನುಇಂದು ಒಣಗಿದ ಹೂವಿನಂತೆನನ್ನನ್ನು ದಾರಿಯಂಚೆ ಬಿಟ್ಟೆ ಕೂದಲು ಉದುರಿದ ರಾತ್ರಿಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲಬೆಂಕಿಗೆ ಬಿದ್ದ ಕನಸೊಂದುನಿಧಾನವಾಗಿ ಬೂದಿಯಾಗುತ್ತಿತ್ತು ಔಷಧದ ವಾಸನೆಯ ನಡುವೆನನ್ನ ಉಸಿರು ಮುಳ್ಳಿನ ಹಾಸಿಗೆಸಾವಿಗಿಂತ ಹೆಚ್ಚು ಕಾಡಿದ್ದುನೀ ಮೌನವಾಗಿ ದೂರಾದ ಹೆಜ್ಜೆ ನನ್ನ ಎದೆಯೊಳಗೆ ಈಗರಕ್ತವಲ್ಲ ವಿರಹ ಹರಿಯುತ್ತಿದೆಕಣ್ಣೀರಲ್ಲ ಇದುಒಡೆದ ಹೃದಯ ಕರಗಿದ ಶಬ್ದ ಒಮ್ಮೆ ಅಪ್ಸರೆ ಎಂದ ತುಟಿಗಳುಇಂದು ನನ್ನ ಹೆಸರನ್ನೇ ಮರೆತಿವೆನಾನು ಒಣ ಮರದ ನೆರಳುನೀ ಬೇಸತ್ತ ಹಕ್ಕಿಯ ಹಾರಾಟ ಕಿಟಕಿಯಾಚೆ ಚಂದ್ರ ಸುಡುತ್ತಾನೆಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆನೀ ಬಾರದ ಪ್ರತಿರಾತ್ರಿನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ ನನ್ನ ಪ್ರಾಣದ ಇನಿಯಒಮ್ಮೆ ಬರುವೆಯಾಕೊನೆಯ ಉಸಿರ ತುದಿಯಲ್ಲಿನಿನ್ನ ಹೆಸರೇ ಇನ್ನೂ ತೂಗುತ್ತಿದೆ ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?” Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖದ ಹೊತ್ತು ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಸಂತೃಪ್ತಿ” ಅರವತ್ತೆಪ್ಪತ್ತರ ಅಜ್ಜಿತಲೆಮೇಲೆ ಬಿಳಿ ಹೆರಳುಬಾಯಲ್ಲಿ ಹಳದಿ ಹಲ್ಲುತುಟಿಯಂಚಿನಿಂದ ಸೋರುವ ಮೆಲ್ಲುಈ ಕಿವಿಯಿಂದ ಆ ಕಿವಿಯ ತನಕ ನಗು ನಗುವ  ಸೆಲೆ ಬಂದ ವಿದೇಶಿ ಯಾತ್ರಿಕನಿಗೆ ಕೇಳುವಳು ಮಾರ್ಗದರ್ಶಿಯಾಗಿಹಲೋ ಸರ್ ಹೌ ಡು ಯು ಡುಮತ್ತು ವಾಟ್ ಕ್ಯಾನ್ ಐ ಡು! ನಗುತ ಹೇಳುವಳು ನಮಗೆಇದು ನನ್ನ ದಿನ ನಿತ್ಯದ ಕಾಯ!ಯಾವ ಗೀತೆಯೂ ಬೇಡ ನನಗೆಯಾವ ಭೂಲೋಕದೈಸಿರಿಯೂ ಬೇಡದಿನ ಪೂರ್ತಿ ಹೃದಯ ತಣಿಯುವ ಈ ದುಡಿಮೆಯೇ ಸಾಕು ವಿರಾಮದಲ್ಲಿ ನನ್ನ ಐಚ್ಛಿಕದ ತಿನಿಸು ಬೇಕುಕಂಡವರೊಡನೆ ಮನ ಬಿಚ್ಚಿ ಮಾತನಾಡ ಬೇಕು. ರಾತ್ರಿ ಮಲಗುವ ಸಮಯಮೇಲಕ್ಕೆ ಹೋಗಿರುವ ಗಂಡನೆಲಕ್ಕಿಳಿದು ತನ್ನಮನದಾಳ ತಣಿಸುವ ಸಮಯ. ದೂರದಲ್ಲಿಯ ಮಕ್ಕಳುಜೀವಿಸಲಿ ಅವರದ್ದೇ ಜೀವನಅವರವರಿಗೆನನಗ್ಯಾಕೆ ಅವರ ಚಿಂತೆ.   ಬಂದಾಗ ಮೊಮ್ಮಕ್ಕಳು ತಾಪ್ರೀತಿ ಹರಿಬಿಡುವ ಸಮಯಬೆಳದಿಂಗಳು ಚೆಲ್ಲಾಡುವ ಸಮಯಪಾಟಿ ಪಾಟಿ ಎಂದು ಮುದ್ದಾಡುವ ಸಮಯ ಇಂದು ಇಂದಿಗೆನಾಳೆ ನಾಳೆಗೆಕಲಿಯಲಿಕ್ಕೇನಿಲ್ಲ ಈಕೆಗೆಮುದ್ದುಕ್ಕಿ ಬರುವುದು ಈಕೆಯಜೀವನ ಸಂಗೀತಕ್ಕೆ,ಜೀವನ ಪ್ರೀತಿಗೆ ,ಈಕೆಯ ಜೀವನ ಛಾತಿಗೆ.   ಹಾರೈಕೆಯಿಷ್ಟೇಇಂಥ ಆತ್ಮೋನ್ನತಿ ನಮ್ಮೆಲ್ಲರಿಗೂ  ಸಿಗಲೆಂದು ,ಅವಳ ಹೃದಯ ಪೂರ್ವಕ ನಗುನಮಗೂ ಬರಲೆಂದು!! ಕರುಣಿಸಲಿ ಆತ ಸದ್ಗತಿ ಈಕೆಗೆಅವಳದ್ದೇ ದಿನದಂದುಅವಳದ್ದೇ ಬಯಕೆಯಂತೆ ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ” Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು”

ಕಾವ್ಯ ಸಂಗಾತಿ ಡಾ.ದಾನಮ್ಮ ಝಳಕಿ “ಬದುಕು” ಬದುಕು…ಗಾಳಿಗೆ ತೂಗುವ ದೀಪವಾದರೂಭರವಸೆಯ ಬೆಳಕು. ಬದುಕು…ಮುರಿದ ಕನಸುಗಳ ಮಣ್ಣಿನೊಳಗೆಮತ್ತೆ ಮೊಳಕೆಯೊಡೆಯುವ ಭರವಸೆಯ ಬೀಜ. ಬದುಕು…ಒಮ್ಮೆ ಕಣ್ಣೀರಿನ ನದಿ,ಮತ್ತೊಮ್ಮೆ ನಗುವಿನ ಸಮುದ್ರ.ಆದರೂ ಎರಡನ್ನೂ ದಾಟಿ ಸಾಗುವಮನದ ಹಠದ ನೌಕೆ. ಬದುಕು…ತಾಯಿಯ ಮಮತೆಯ ಮೃದುವಾದ ಸ್ಪರ್ಶ,ತಂದೆಯ ಬೆವರಿನ ಉಪ್ಪಿನ ಸತ್ಯ.ಸ್ನೇಹದ ನೆರಳಲ್ಲಿ ಅರಳುವ ನಗು,ಪ್ರೀತಿಯ ಮೌನದಲ್ಲಿ ಹುಟ್ಟುವ ಸ್ವರ್ಗ. ಬದುಕು…ಸಾವಿರ ಬಾರಿ ಸೋತರೂಮತ್ತೆ ಎದ್ದು ನಡೆಯುವ ಹೆಜ್ಜೆಯ ಧೈರ್ಯ.ಕತ್ತಲ ರಾತ್ರಿ ಎಷ್ಟು ದಟ್ಟವಾದರೂಬೆಳಗಿನ ಸೂರ್ಯ ಬರುವನೆಂಬ ನಂಬಿಕೆ. ಬದುಕು…ಹೂವಿನಷ್ಟು ಮೃದುವಾದರೂಕಲ್ಲಿನಷ್ಟು ಕಠಿಣ.ಒಮ್ಮೆ ಗಾಯ ಕೊಡುವುದು,ಮತ್ತೊಮ್ಮೆ ಅದೇ ಗಾಯಕ್ಕೆ ಮದ್ದು ಆಗುವುದು. ಬದುಕು…ಉಸಿರು ಇರುವವರೆಗಿನ ಪ್ರಯಾಣವಲ್ಲ,ನಾವು ಹೋದ ಮೇಲೂಬೇರೊಬ್ಬರ ಹೃದಯದಲ್ಲಿ ಉಳಿಯುವಒಂದು ಒಳ್ಳೆಯ ನೆನಪಿನ ಹೆಸರು.ಡಾ. ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು” Read Post »

ಕಾವ್ಯಯಾನ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ”

ಕಾವ್ಯ ಸಂಗಾತಿ ನಿರಂಜನ ನಾಯಕ “ನಗರ ಜಾಗರಣೆ” ನಗರ ಬೆಳೆಯುತಲಿದೆಉಕ್ಕಿ ಹರಿದ ಮೋರಿಯಂತೆ,ಸಿಕ್ಕ ಸಂದುಗಳಲಿ ಜಾರುತಾದುರ್ನಾತದೊಂದಿಗೆಜಾಗರಣೆ ಖಾತ್ರಿಯಾಗಿ! ಮುಚ್ಚದ ಕಣ್ಣುಗಳೆದುರುಮೆಚ್ಚುಗೆಯಾಗದ ಮುಖಗಳು;ಮನದ ಖಗ-ಮಿಗಗಳುಮಾಯಾಮೃಗಗಳಂತೆಮರೆಯಾಗುತಿವೆ. ಕಾಲು ಚಾಚಿಬಿದ್ದಿಹ ರಸ್ತೆಗಳಿಗೆತಡೆಒಡ್ಡುವ ಗೋಡೆಗಳು,ಬಣ್ಣ ಮಾಸುತ್ತಾಅಪರಿಚಿತವಾಗುತಿವೆ. ಇಕ್ಕೆಲದ ಅಂಗಡಿಗಳಎಗ್ಗಿಲ್ಲದ ವ್ಯಾಪಾರ,ಕುರುಡನ ತಟ್ಟೆಯಮೂರು ಕಾಸುಗಳನುಅಣಕಿಸುತಿದೆ! ನಿರಂಜನ ನಾಯಕ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಅಂದು ಹಸಿವಿನಿಂದ ಪರದಾಡಿದ ಪರದೇಶಿ ದಿನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಅಂತರಾಳದಲ್ಲಿಯ ಹಸಿ ಗಾಯಗಳ ರುಜು ಋಣಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಕರೆದು ಕೂಲಿಗೆ ಕಾಸು ಚೆಲ್ಲಿ ಸುಮ್ಮನೆ ಮನೆಗೆ ಕಳುಹಿಸಿದ್ದರೂಮರೆಯಬಹುದಿತ್ತು ನಾವುಕಲ್ಲಿನೇಟು ನೀಡಿ ,ಮುಳ್ಳುಗಳಿಂದ ತಿವಿದ ಜೀತ ಕ್ಷಣಗಳಿಂದು  ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಾಳೆಗಾಗಿ ಬರಿಗಾಲಲಿ ನಡೆದು ನೆತ್ತರು ಸುರಿಸಿ ಕಳೆದು ಹೋಗುತಿವೆನಿತ್ಯ ಕಂಡ ಕನಸುಗಳುಬೆತ್ತಲೆ ಪಾದಗಳು ಸೀಳಿ ರಕ್ತ ಒಸರಿ ಬಾಯ್ಬಿಟ್ಟ ಆರ್ತನಾದಗಳಿಂದು   ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಮಹಡಿ ಮನೆಗಳ ಮುಂಬಾಗಿಲಿಗೆ ಬಡವನನ್ನು ಸುಲಿದ ಚರ್ಮದತೋರಣ ಒಪ್ಪ ಓರಣವಾಗಿದೆಕನಸಿಗೆ ತೆರಿಗೆ ಹಾಕಿ,ಸಾವಿಗೂ ಸುಂಕ ಕಟ್ಟುವ ಹುನ್ನಾರುಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಿದ್ದೆ ಮಾಡುವವನು, ಕದ್ದು ಕರೆದರೂ ತುಸು ಎಚ್ಚರಗೊಳ್ಳುವನು ಅನಾಯಾಸವಾಗಿಆಳುವವರ ಮುಸುಕಿನಲ್ಲಿ ಸೋಗುಲಾಡಿತನದ ನಡೆಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಎಷ್ಟಂತ ತೇಪೆ ಹಾಕಿ, ಚಿತ್ತಾರ ಮೂಡಿಸಿ ಮನವ ಹಗುರಾಗಿಸೋಣ ಮರ್ಯಾದೆಗೆ ಅಂಜಿಅಪವಾದ, ಅವಮಾನಗಳಿಂದ ನುಜ್ಜುಗುಜ್ಜಾದ ಆಕ್ರಂದನಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಯಾರನ್ನೋ ದ್ವೇಷಿಸಿ, ದೂಷಿಸಿ, ಹಿಡಿಶಾಪ ಹಾಕಿ, ಕಣ್ಣೀರು ಹರಿಸಿದರೆ ಏನು ಪ್ರಯೋಜನ ಜ್ಯೋತಿಖಂಡ, ಮಾಂಸ, ಬೆವರು, ಬಿಸಿರಕ್ತಗಳ ಅಸಂಖ್ಯ ಬಲಿದಾನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು”

ಕಾವ್ಯಸಂಗಾತಿ ತಾತಪ್ಪ ಕೆ ಉತ್ತಂಗಿ “ಪ್ರೇಮದಮೊಹರು” ಸದಾ ಸಣ್ಣೂರಗಲ್ಲಿಯಾಚಿನಹಸಿರೂರ ಪಥದಲಿಅದೇ ಹೊಳಪಿನ ಅವಳು,ಕಣ್ಣೋಟಕ್ಕೆಸಿಕ್ಕ ಅಪರೂಪದಕೆಂಪು ಸೌಂದರ್ಯದ  ಸುಂದರಿ,ಜಗಕ್ಕೆ ನಾಚಿದ ನಿತ್ಯಾಂಬರಿಜಗವನ್ನೇ ನಾಚಿಸಿದ ಕೆಂಪುರಂಗಿನಪ್ರೇಮಸುಂದರಿ. ಅಣಕಿಸುವ,ತವಕಿಸುವ,ಕರುಣಿಸುವ, ಹಿಗ್ಗಿಸುವಕುಗ್ಗಿಸುವ,ಪ್ರೇಮಿಸುವ   ಕುಕ್ಕುಕಣ್ಣಿನ  ವಾರೇನೋಟದ ಒಲವಿಗೆಸಿಕ್ಕ ಅವನುಸದಾ ಪ್ರೇಮಬಂಧಿ..ಸವಿಮಾತಿನ ಸಖನೇಸಂಬಂಧ ಬೆಸೆಯುವ ಭಾವಸಂಬಂಧಿ..ಅವಳೊರಗಿನ ಅವಳಿಗೆ ಪ್ರೀತಿಯ ಕೊಟ್ಟರೆಪ್ರೇಮದ ಮಳೆ ಸುರಿಸುವಋತುಬಂಧಿ..ಅವಳು.. ಮಳೆ ಮೋಡಗಳುಕಂಗೆಟ್ಟು ದಿಕ್ಕೆಟ್ಟು  ಓಡಾಡುವಾಗ,ಗುಡುಗು, ಸಿಡಿಲ್ ಆರ್ಭಟಿಸಿ, ಬೆಳಕಿನ ಮಿಂಚಿನಸಮಯದಲ್ಲಿ, ಕೋಲ್ಮಿಂಚಿನಕೆಂಡಕುಂಡದ ಗುಲಾಬಿಯ ಗುಂಗಿನ ವಿರಾಗಿಣಿಯಾಗಿಸ್ತಬ್ಧ ವಿಹಾರದ ನಡುನಡುವೆ, ದಿವ್ಯವೇದನೆಯ,ನವ್ಯ ನಿವೇದನೆಯೊಂದಿಗೆಕೈ ಬೀಸಿ, ಕೈ ಚಾಚಿಮಧುರ ವರ್ಣವ ರಾಚಿಕರೆಯೋಲೆ ಕಳಿಸುವಆದರದ ಅಂಬರಿಯಿವಳು.ಕೆಂಪುಮೊಗದ ಗಿಳಿನಾಸಿಕದಗರಿಗರಿ ನಗೆಯ,ಫಳಫಳ ಕಣ್ಬೆಳಕಿನಬೀಸುವ ಗಾಳಿಗೆಜೋ ಜೋ ಲಾಲಿಯಾಡುವ ಶುಭ್ರಜ್ಯೋತ್ಸ್ನೆಯಿವಳು.ಅಮರ ಮಧುರದಪ್ರೇಮಗೀತೆಯಾಡುವಸ್ವಪ್ನ ಸುಂದರಿ ಇವಳು.ಸಂಭ್ರಮದ ಎಲ್ಲೆ ಮೀರಿದಾಗಸಂತಸದ ಸರಸತೆಯ  ಸೋಬಾನೆಯಾಡುವವೈಶಾಖದ ಪ್ರೇಮದಮೊಹರಿನಇವಳೇ ಸುಗ್ಗಿಯ ಸಗ್ಗದಪ್ರೇಮಾಂಬರಿಯಾದಕೆಂಪು ಸೊಂಪಿನಮುಂಗಾರಿಗೆ ಮುತ್ತಿನಮುದ್ರೆಯನ್ನೊತ್ತಿದ *ಗುಲ್ ಮೊಹರ್*  ಇವಳು. ತಾತಪ್ಪ. ಕೆ.ಉತ್ತಂಗಿ

ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು” Read Post »

ಕಾವ್ಯಯಾನ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ”

ಕಾವ್ಯ ಸಂಗಾತಿ ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” ಬಾನ ಅಂಗಳದಿ ಮೋಡಗಳ ನರ್ತನ,ಧರೆಗೆ ಇಳಿಯಲು ಸಜ್ಜಾದ ವರುಣಒಣಗಿದ ಭೂಮಿಗೆ ಜೀವ ತುಂಬುವ ಕ್ಷಣ,ಬರಡಾದ ಬದುಕಿಗೆ ತಂದ ಹೊಸ ಕಿರಣ. ಹನಿ ಹನಿಯು ಮುತ್ತಾಗಿ ಮಣ್ಣ ಸೇರಲಿ,ಸಸ್ಯ ಸಂಕುಲವು ಹಸಿರು ಸೀರೆಯ ಉಡಲಿ.ರೈತನ ಕಣ್ಣಲಿ ಕನಸಿನ ಬೆಳೆ ಅರಳಲಿ, ಹಸಿವು ನೀಗಿ ಸಮೃದ್ಧಿ ಬೆಳಗಲಿ. ಗುಡುಗು ಸಿಡಿಲ ಅಬ್ಬರವಲ್ಲದ ಮಳೆ,ನೊಂದ ಜೀವಗಳ ಕಣ್ಣೀರು ಒರೆಸುವ ಮಳೆ.ಸೋತ ಮನಗಳಿಗೆ ಸಾಂತ್ವನದ ಧಾರೆ,ಜೀವಜಗತ್ತಿಗೆ ಹೊಸ ಚೈತನ್ಯದ ಸಾರೇ. ಸುರಿಸು ಮಳೆಯೇ ಕರುಣೆಯ ಹನಿ,ತೊಳೆಯು ಜಗದಕಲ್ಮಶದ ಮನೆ.ಪ್ರೀತಿ ವಿಶ್ವಾಸದ ಹೊಳೆ ಹರಿಯಲಿ ಎಲ್ಲೆಡೆ,ಭರವಸೆಯ ಬೆಳಕಿರಲಿ ಸಾಗುವ  ಹೆಜ್ಜೆಯಲಿ. ಭಾಗ್ಯಶ್ರೀ ಕೋಟಿ ಜಮಖಂಡಿ

ಭಾಗ್ಯಶ್ರೀ ಕೋಟಿ ಜಮಖಂಡಿ‌ “ಭರವಸೆಯ ಬೆಳಕಿರಲಿ” Read Post »

You cannot copy content of this page

Scroll to Top