ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ”

ಕಾವ್ಯ ಸಂಗಾತಿ ವೆಂಕಟೇಶ್ ಈಡಿಗರ “ಮೌನ ಯಾನ” ಮೌನವದು ಸ್ಪಷ್ಟತೆ ಇಲ್ಲದಅನರ್ಥಗಳ ನಿರ್ಭಾವ  ಸ್ಥಿತಿಸಮ್ಮತಿಯೂ  ಅಲ್ಲದಅಸಮ್ಮತಿ ಸೂಚಿಸದ ದ್ವಂದ್ವ ನೀತಿ ಮನಸ್ಸು ಬಲವಾದಾಗ ಪ್ರತಿಕಾರದುರ್ಬಲವೆಂದರೆ ಅಂಗಿಕಾರಇಲ್ಲದಿರೆ ನಪುಂಸಕತೆಯ ನಿರಾಕಾರವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ ಮನದಿಂಗಿತಗಳನು ಬಲಿಕೊಟ್ಟುಒಳಬೇಗುದಿಯಲ್ಲಿ ಬೇಯುವನೋಯುವ ನಿಶಕ್ತ ರೂಪವದುತನ್ನತನವ ದಹಿಸಿಕೊಂಡು ಬಂದುದ್ದನ್ನುಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು ಜ್ಞಾನವೋ ಅಜ್ಞಾನವೋ ಎಂದರುಹಲುಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವದಿವ್ಯ ರೂಪ   ದೃಢತೆಯ ಅಪರೂಪಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ ಮೌನವದು  ವಿಶ್ವರೂಪಹೊಸ ಮನ್ವಂತರಕೆ ಮುನ್ನುಡಿಬರೆಯಲುಮೈದಾಳಿದ ಮಹಾ ಸಂಕಲ್ಪˌಇದಕಾಗಿ ಇರಬೇಕು ಆತ್ಮಬಲದಜ್ಞಾನದೀಪˌ  ಅದುವೇ ಅವನಜೀವನದ ಮುನ್ನಡೆಗೆ ದಾರಿದೀಪ ಮತಿಗೆಡದಿರಲಿ ಮನದ ಮೌನದೃತಿಗೆಡದೆ ಮುನ್ನಡೆಯಲಿ ಜ್ಞಾನಮೌನದಲ್ಲಿಯೂ ಧ್ಯಾನಸ್ಥನಾಗಿಬೆಳಗಲಿ ಲೋಕದೊಳಿತಿನ ಸುಜ್ಞಾನಉಳಿಸಿ ಬೆಳೆಸಲಿ ಮಾನ ಸಮ್ಮಾನಮೌನವೇ ಧ್ಯಾನವಾಗಿˌ ಜ್ಞಾನವಾಗಿಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ. ವೆಂಕಟೇಶ್ ಈಡಿಗರ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ”

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ “ನಕ್ಕಿತು ಕನ್ನಡಿ” ಕಂಡದ್ದು ಕಂಡಹಾಗೆತೋರಿದರೆಕೆಂಡದಂತ ಕೋಪಕನ್ನಡಿ ಸರಿಗಿಲ್ಲಭೂತಗನ್ನಡಿ ಎನ್ನುವಭೂತಗಳ ಕಂಡು ನಿಜವನರಿಯದ ನಿತ್ಯನಡೆವ ನಾಟಕದ ರೂವಾರಿಗಳ ಕಂಡುರಾವುಗನ್ನಡಿಯ ಹಿಂದೆಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು ಜನಸಾಮಾನ್ಯರನು ಮಳ್ಳುಮಾಡುವ ವಿವೇಕಿಗಳಅವಿವೇಕತೆಯ ಕಂಡುವಿವೇಕ ಇದ್ದರೂ ತಪ್ಪನ್ನುತಪ್ಪೆಂದು ಒಪ್ಪದವರ ಕಂಡು ಅವರಿವರನು ಬಳಸಿಕೊಂಡುಶಾಂತಿ ನೆಮ್ಮದಿ ಸೌಹಾರ್ದಹಾಳು ಮಾಡುವ ಮತಿಹೀನರ ಮಂಗನಾಟದಲಿಮುಗ್ಧಜನರ ಬಲಿಪಶು ಕಂಡು ಇದ್ದದ್ದು ಇದ್ದಂಗ ತೋರಿದರೂ ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್  ಮನಸುಗಳ ವಿಕ್ರತ ಮನಸು ಕಂಡುಮುಸು ಮುಸು ಕನ್ನಡಿ ನಕ್ಕಿತುಕನ್ನಡಿ ನಕ್ಕಿತುಲಲಿತಾ ಪ್ರಭು ಅಂಗಡಿ ಮಂಬಯಿ.

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ‌ “ನೆರೆ-ಬರ” ಇದೋ ನೋಡಿ ….ಈ ವರ್ಷದ ಸೋಜಿಗ ,ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .ಇರುವುದೊಂದೇ ಬಾನು , ಇರುವುದೊಂದೇ ಭುವಿನಡುವೆ ಎನೀ  ಅಂತರ….. ? ಒಂದೆಡೆ ಬರಗಾಲದ ಭೀತಿ ,ಇನ್ನೊಂದೆಡೇ  ಪ್ರವಾಹಕೆ ಆಹುತಿಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,ಸುತ್ತ ನೋಡಿದರೂ ಜಲ ದಿಗ್ಬಂಧನ…… ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತುನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶಸಡಿಲಗೊಂಡು ,  ನಶ್ವರ ಜಗದ ಸತ್ಯ ದರ್ಶನ….. ಕಾಳಿಲ್ಲದೆ , ಕೂಳಿಲ್ಲದೆ  ಕಂಗೆಟ್ಟ ಜೀವ ಕುಲನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರುವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು…. ಸುರಿಯುವ ಸುಳಿವೇ ಕೊಡದ ಮಳೆರಾಯಆಡುತಿರುವ ನಮ್ಮೊಡನೆ  ಜೂಟಾಟಹಸಿವು , ದಾಹಕೆ  ಅದೆಷ್ಟು ಬಲಿ  ಬಿಳುವುದೊ ತಿಳಿಯದು , ….. ತಾಪಮಾನದ ಹೆಚ್ಚಳಕೆ  ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .ಸೃಷ್ಠಿ ಕರ್ತನ ಅಣತಿ ಮೀರಬಹುದೆ?ಪುಣ್ಯದ ದಿನಗಳು ಕಳೆದಾಗ ,ಉಳಿಯುವ ಶೇಷವೆ ಕರ್ಮ ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಕಾವ್ಯ” ಕಾವ್ಯ ನನ್ನಲ್ಲಿದೆ ನಿನ್ನಲ್ಲಿದೆ ಕಾವ್ಯ ಮನದ ಮಿಡಿತಲ್ಲಿದೆಹೃದಯದ ತುಡಿತದೊಳಿದೆಎದೆ ಕದದ ಬಡಿತದಲ್ಲಿದೆ. ಕಾವ್ಯ ಬೀಸುವ ಕಲ್ಲಿನ ಸದ್ದೊಳುಕೇರುವ ಮರದ ಕಾಳಿನಲ್ಲಿಹುದುಬಿಂದಿಗೆ ಬಾವಿಯೊಳು ಮುಳುಗವುದರಲ್ಲಿದೆ. ಕಂದನ ಹಸಿವಿನ ಅಳುವಿನಲಿತಾಯಿ ರಮಿಸಲು ಹಾಡುವ ರಾಗದೊಳುಕಾವ್ಯ ಅಪ್ಪನ ಅಗಾಧ ಪ್ರೀತಿಯಲ್ಲಿದೆ. ರೈತನುಳುವ ನೇಗಿಲದ ಹದದಲ್ಲಿಕುಂಟಿ ಕೂರಗಿಯ ತಾಳದಲಿಕಾವ್ಯಕೂ ಜನನವಿಹುದಲ್ಲಿ ಹಲ್ಲುದುರಿ ಹಣ್ಣಾದ ಅಜ್ಜ ಅಜ್ಜಿಯ ನಗುವಲಿಕೈಗಾಸರೆಯಾದ ಕೋಲಿನಲಿದೆ ಕಾವ್ಯಹಿರಿಯರ ಹರಕೆಯೊಳಿದೆಬದುಕಿನ ಬವಣೆಯೊಳಿದೆ. ಕಾವ್ಯದ ಕಟ್ಟುವವರ ಮನದಲಿದೆಸುಪ್ತ ಮನಸ್ಸಿನಾಳದಲಿ ಹುದುಗಿದೆಹುಟ್ಟಿನಲಿದೆ ಗುಟ್ಟಿನಲ್ಲಿದೆಸಾವಿನಂಚಿನಲ್ಲಿಯೂ ಇದೆ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ” Read Post »

ಕಾವ್ಯಯಾನ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು”

ಕಾವ್ಯ ಸಂಗಾತಿ ಡಾ. ನಟರಾಜ್ ಆರ್ಯ “ಅರಳಿಯ ನೆರಳು” ಬೆಟ್ಟ ಗುಡ್ಡದ ತೋಳಲಿಕೆರೆಯೂರ ಕೇರಿ;ಅರಳಿಯ ನೆರಳಲಿಊರು ಉಸಿರಾಡಿತು. ಕರುಗಳ ಮೊರೆ,ಒಲೆ ಹೊಗೆ,ಒನಕೆಯ ತಾಳಕೆಬೆಳಗು ಮೂಡಿತು. ಹುಟ್ಟು ಬಂದರೆಅರಳಿಯ ಕೆಳಗೆ;ಸಾವು ಬಂದರೂಅರಳಿಯ ಕೆಳಗೆ. “ಅರಳಿ ಕಡೀಬೇಡಯ್ಯ…ಒಳಗ ದೇವರಿರ್ತಾರೆ…”ಹಿರಿಯರ ನುಡಿಗಾಳಿಯಲಿ ತೇಲಿತು. ಹೊನ್ನಯ್ಯನ ಕೊಡಲಿಬೇರಿಗೆ ಇಳಿಯಿತು. ಕೊಂಬೆ ಮುರಿಯಿತು.ಗೂಡು ಉದುರಿತು.ಮರಿ ಬಿತ್ತು.ಊರು ಮೌನವಾಯಿತು. ತಾಯಿಹಕ್ಕಿ ಅತ್ತಿತು;ಗಾಳಿ ನಿಟ್ಟುಸಿರಿಟ್ಟಿತು;ಅರಳಿಯ ಎಲೆಗಳುಮಾತಿಲ್ಲದೆ ಉದುರಿದವು. ಅರಳಿ ಬಿದ್ದ ಮೇಲೆಬಿಸಿಲು ಹರಡಿತು;ಕೇರಿಯ ದಾರಿಯಲಿನೆರಳು ಕಳೆದುಹೋಯಿತು. ಹೂವಯ್ಯಕಣ್ಣು ಮುಚ್ಚಿದ. ಅರಳಿ ಬಿದ್ದ ಜಾಗದಲ್ಲಿಇಂದಿಗೂಗಾಳಿ ಬೀಸಿದರೆಮೌನ ಅಲುಗಾಡುತ್ತಿದೆ. ಡಾ. ನಟರಾಜ್ ಆರ್ಯ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?”

ಕಾವ್ಯ ಸಂಗಾತಿ ನಿರಂಜನ ನಾಯಕ “ನಾ ಯಾವುದ ನಂಬಲಿ?” ನಾ ಯಾವುದ ನಂಬಲಿ?ಕಣ್ಣಿಗೆ ರಾಚುವ ಬಣ್ಣದ ಭ್ರಮೆಯನ್ನೋ?ಕರ್ಣಕೆ ಅಪ್ಪಳಿಸುವ ಹುಸಿ ಪದಗಳ ಸದ್ದನ್ನೋ?ಇವೆಲ್ಲವ ಮೀರಿಆ ಎದೆಯಾಳದಿ ತುಡಿಯುವ ಪ್ರಜ್ಞೆಯ ದನಿಯನ್ನೋ? ದಮನಿಸುವ ಸಿಂಹಾಸನದ ದರ್ಪವನ್ನೋ?ಬೀದಿಯಲಿ ಧಗಧಗಿಸುವ ಕಿಚ್ಚಿನ ಜ್ವಾಲೆಯನ್ನೋ?ಎದೆಯತ್ತ ಗುರಿಯಿಟ್ಟ ಬಂದೂಕಿನ ನಾಲಗೆಯನ್ನೋ?ಅಥವಾನೆಲದ ಮೇಲೆ ಹೆಪ್ಪುಗಟ್ಟಿದ ನಿಸ್ಸಹಾಯಕ ನೆತ್ತರ ಗುರುತನ್ನೋ? ನಂಬಿಕೆ ಬೆಲೆಗೆ ಬಿಕರಿಯಾದ ಸರಕಾದಾಗ,ನನ್ನ ನಂಬಿಕೆಗಳು ಮಾರಾಟವಾಗಿ,ನನ್ನತನದ ಗುರುತನ್ನೇ ಕಳೆದುಕೊಂಡಾಗ…ನಾ ಬರಿಯ ಅಧಿಕಾರದ ಗುರುತಾದೆ!ಇಷ್ಟೆಲ್ಲದರ ನಡುವೆ ಕಳೆದುಹೋದನಾನು ಯಾರು?ನಾನು ಯಾರು? ನಿರಂಜನ ನಾಯಕ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?” Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ (ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” ಬಾನಿನ ಬಾನು ಕಣ್ಣ‌ ತೆರೆದು ನೋಡಿದಭುವಿಯು ಭವದಿಂದ‌ ನಮಸ್ಕರಿಸಿದಳುತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳುಆಗಸ ಬೊಗಸೆ ಪ್ರೀತಿ ಬೇಡಿದ ಮಿಥುನ ರಾಗಕೆ ಮಳೆಯ ಸ್ಪುರಿಸಿದಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತುಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತುಲೋಕಕೆ ಸಂತೋಷದ ಹೊಳೆ ಹರಿಸಿದ ಪರಿಸರವ ಪರಿಭ್ರಮಿಸುತ ಜ್ಞಾನಿಸಿದಸಂವತ್ಸರ ಋತುಗಳ ಕಾವ್ಯ ಬರೆದಜಗವನಾಳುವ ಒಡೆಯನಾಗಿ ಮೆರೆದಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ ತೆರೆದು ನೋಡುವ ನೋಟವಿದುಪ್ರಕೃತಿ ಹೇಳುವ ಪಾಠವಿದು ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” Read Post »

ಕಾವ್ಯಯಾನ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಮಾತು ಮನವ ಕೆದುಕುವಾಗ ಮೌನವೇ ಉತ್ತಮಸತ್ಯ ಬದುಕು ಕದಡುವಾಗ ಮೌನವೇ ಉತ್ತಮ ಸಂಭಾಷಣೆ ಸಂಪ್ರೀತಿಯಿಂದ ಕೂಡಿದರೆ ರಸಗವಳನುಡಿಯಲಿ ಹುಡಿ ಹಾರುವಾಗ ಮೌನವೇ ಉತ್ತಮ  ಮಾತು ಹೃದಯ ಹೃದಯಗಳನು ಕಟ್ಟಿ ಆಳಬಹುದುಅರಿಕೆಯಿಂದ ಅಪಾಯವೆಂದಾಗ ಮೌನವೇ ಉತ್ತಮ  ನುಡಿದರೆ ಈ ಜಗವು ಮೆಚ್ಚಿ ಹಾರ ಹಾಕುವಂತಿರಬೇಕು ನಡೆ ನುಡಿಗಳು ಬೇರೆಯಾದಾಗ ಮೌನವೇ ಉತ್ತಮ ಒಲವು ಗೆಲುವುಗಳು ಸೇಡಿನ ಕಿಡಿಯಲಿ ಸುಡುತಿವೆ ಸಾಕಿಜ್ಯೋತಿ ಬೆಳಗದೆ ಬೂದಿಯಾದಾಗ ಮೌನವೇ ಉತ್ತಮ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ”

ಕಾವ್ಯ ಸಂಗಾತಿ ಹೆಬಸೂರ ರಂಜಾನ್ “ಖಾಲಿ” ನಿನ್ನ ಎದೆ ಖಾಲಿ ಇದೆಅದು ಇಂಚುಗಳ ಅಳತೆಗೆ ಒಗ್ಗುವುದುಅಲ್ಲಿ ತಲೆಯಾನಿಸಿ ನಿಟ್ಟುಸಿರುವೇನೆಂದರೆಅಲ್ಲಿ ಮೊಳೆಗಳನ್ನು ಜಡಿಯಲಾಗಿದೆ ನಿನ್ನ ಎದೆ ಬರಡಾಗಿದೆಅಲ್ಲಿ ಸದಾ  ಜಿನುಗುವ ಪಸೆಬತ್ತಿಹೋಗಿದೆನಿನ್ನ ಎದೆಗೂ ಮೊಲೆಗಳು ಮೂಡಿರಬೇಕಿತ್ತುಹಸಿದ ಹಾಲುಗಲ್ಲುಗಳತುಟಿಗಳಲಿ  ಎದೆ ಹಾಲು ಜಿನುಗುತ್ತಿತ್ತು ನಿನ್ನದೆಯ ರೋಮಗಳನುಸವರುತ್ತಿದ್ದರೆಮುಳ್ಳುಗಳು ಪರುಚುತ್ತಿವೆಅದೆಷ್ಟು ವರುಷಗಳ ರಕ್ತದ ದಾಹವಿದೆ ಅವುಗಳಿಗೆ ನಿನ್ನ ಬೆರಳುಗಳ ಸಹವಾಸಸಾಕುಲಾಠಿಗಳನ್ನೆ ಪಠಿಸುತ್ತೀವೆನಾಲಿಗೆಯ ತುಂಬ ಸಿಡಮದ್ದಿನ ವಾಸನೆಯ ಘಮಲು ತುಂಬಿದೆ ಸಾಕು ದೊರೆಯೇನಿನ್ನನಾಟಕದ ಕೊನೆಯ ಅಂಕನಟಿಸುವ ಆ ಪಟ್ಟುಗಳ ಗತ್ತು ಬಿನ್ನಾಣಎಲ್ಲವನ್ನೂ ಅರಿತಿರುವೆ ಹಸುಳೆಗಳು ಬೀದಿಗಳಿದಿವೆಈಗಲಾದರೂ ನಟಿಸುವುದು ಸಾಕುಒಂದು ಕಡ್ಡಿ ಸಾಕು ಹೊತ್ತಿ ಉರಿಯಲು ಮಕ್ಕಳಿದ್ದರೆ ಗೊತ್ತಾಗುತ್ತಿತ್ತುಅಪ್ಪನ ಎದೆಯೊಳಗೆ ಮೊಲೆಗಳಿವೆ..ಅಳತೆಗಳಿಲ್ಲ..!ಹೆಬಸೂರ ರಂಜಾನ್

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ” Read Post »

You cannot copy content of this page

Scroll to Top