ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್‌ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು…  ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು  ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್‌ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು.  ಏಕೀಕರಣವು  ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು  ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್‌ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ  ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು  ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು  ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ  ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ  ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ.  ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857).  ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ:  ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ.  ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ.  ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು.  ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ  ದ್ರೋಹ ಎಸಗಿ  ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ  ತಿಳಿಸಿರುವ  ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು.  ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು.  ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು.  ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು.  ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು.  1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.

Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ *ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? “ಹುಟ್ಟಿನಿಂದ ಬಂದ ಗುಣ ಅಥವಾ ನೈಜ ಸ್ವಭಾವವನ್ನು ಎಂತಹ ಭವ್ಯ ಪರಿಸರದಲ್ಲೇ ಇಟ್ಟರೂ ಬದಲಾಯಿಸಲು ಸಾಧ್ಯವಿಲ್ಲ.” ಈ ಅನುಭವದ ಸಾರವನ್ನು ಹಿಡಿದಿಟ್ಟ ಗಾದೆಗಳು ನಮಗೆ ನೀಡಿದ ಅಮೂಲ್ಯ ಜ್ಞಾನದ ಮುತ್ತುಗಳು. ಹನಿ ಹನಿ ಸೇರಿದರೆ ಹಳ್ಳವಾಗುವಂತೆ, ಸಣ್ಣ ಸಾಲುಗಳಲ್ಲಿ ಇಡೀ ಜಗತ್ತಿನ ಸತ್ಯವನ್ನು ದರ್ಶಿಸುವ ಶಕ್ತಿ ಗಾದೆ ಮಾತಿನಲ್ಲಿವೆ. ಅಂತಹ ಅದ್ಭುತ ಗಾದೆಗಳಲ್ಲಿ “ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?” ಎನ್ನುವುದು ಪ್ರಮುಖವಾದದ್ದು. ಇದು ಕೇವಲ ಪಕ್ಷಿ ಪ್ರಪಂಚಕ್ಕೆ ಸೀಮಿತವಾಗದೆ, ಮನುಷ್ಯನ ಸಹಜ ಗುಣ, ಯೋಗ್ಯತೆ ಮತ್ತು ಅಹಂಕಾರದ ಮುಖವಾಡಗಳನ್ನು ಕಳಚಿಡುವ ಒಂದು ತತ್ವವಾಗಿದೆ.​​ಕಾಗೆಯ ಸ್ವರ ಬಹು ಕರ್ಕಶ ಧ್ವನಿ, ಸಾಮಾನ್ಯತೆ ಅಥವಾ ಕೀಳು ಗುಣದ ಸಂಕೇತ ಇಲ್ಲಿ ಕಾಗೆಯನ್ನು ಕೀಳಾಗಿ ಕಾಣುವುದಕ್ಕಿಂತ ಅದರ ಸಹಜ ಗುಣವನ್ನು ಗುರುತಿಸುವುದು ಮುಖ್ಯ.​ಪಂಜರ (ಚಿನ್ನದ ಪಂಜರ): ಇದು ವೈಭೋಗ, ಕೃತಕವಾಗಿ ಸೃಷ್ಟಿಸಿದ ಉನ್ನತ ಪರಿಸರ ಅಥವಾ ಯೋಗ್ಯತೆಗೂ ಮೀರಿದ ಸ್ಥಾನದ ಸಂಕೇತ.​ಪಂಚಮ ಸ್ವರದ ವಿಶೇಷತೆ ಎಂದರೆ ಸಂಗೀತದ ಅತ್ಯಂತ ಮಧುರವಾದ, ಕೋಗಿಲೆಯು ಹೊರಡಿಸುವ ಶ್ರೇಷ್ಠ ಧ್ವನಿಯ ಸಂಕೇತ.​ಕೋಗಿಲೆಯನ್ನು ಚಿನ್ನದ ಪಂಜರದಲ್ಲಿಟ್ಟರೆ ಅದು ತನ್ನ ಮಧುರವಾದ ಪಂಚಮ ಸ್ವರದಿಂದ ಹಾಡುತ್ತದೆ. ಆದರೆ, ಕಾಗೆಯನ್ನು ತಂದು ಎಷ್ಟೇ ದುಬಾರಿ, ರತ್ನಖಚಿತ ಪಂಜರದಲ್ಲಿ ಕೂರಿಸಿದರೂ ಅದು ತನ್ನ ಸಹಜ ಗುಣವಾದ ‘ಕಾವ್ ಕಾವ್’ ಎಂಬ ಕರ್ಕಶ ಧ್ವನಿಯನ್ನೇ ಹೊರಡಿಸುತ್ತದೆಯೇ ಹೊರತು ಕೋಗಿಲೆಯಂತೆ ಹಾಡಲು ಸಾಧ್ಯವಿಲ್ಲ.​ನೈಜ ಸ್ವಭಾವ ಮತ್ತು ಪರಿಸರದ ಮಿತಿ​ಮಾನವನ ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಮತ್ತು ವಂಶವಾಹಿ (ಹುಟ್ಟುಗುಣ) ಎರಡೂ ಪಾತ್ರ ವಹಿಸುತ್ತವೆ. ಆದರೆ ಕೆಲವು ಮೂಲಭೂತ ಗುಣಗಳು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿರುತ್ತವೆ. ಹೊರಗಿನ ಆಡಂಬರ, ಸಂಪತ್ತು ಅಥವಾ ಉನ್ನತ ಹುದ್ದೆಗಳು ಮನುಷ್ಯನ ಬಾಹ್ಯ ರೂಪವನ್ನು ಬದಲಾಯಿಸಬಹುದೇ ಹೊರತು ಆತನ ಆಂತರಿಕ ಯೋಗ್ಯತೆ ಅಥವಾ ದುರ್ಗುಣವನ್ನು ಬದಲಾಯಿಸಲಾರವು.​ಒಬ್ಬ ಅಯೋಗ್ಯನಿಗೆ ರಾಜಸಿಂಹಾಸನವನ್ನು ನೀಡಿದರೂ ಆತ ಯೋಚಿಸುವ ರೀತಿ ಮತ್ತು ನಡೆದುಕೊಳ್ಳುವ ರೀತಿ ಆತನ ಅಲ್ಪತನವನ್ನೇ ಪ್ರದರ್ಶಿಸುತ್ತದೆ. ಕೆಸರಿನಲ್ಲಿ ಹುಟ್ಟಿದ ಕಮಲ ಪವಿತ್ರವಾಗುತ್ತದೆ, ಆದರೆ ಹಾವಿಗೆ ಹಾಲನ್ನು ಕುಡಿಸಿದರೂ ವಿಷವೇ ಹೊರಬರುತ್ತದೆ ವಿನಃ ಅಮೃತವಲ್ಲ. ಹಾಗೆಯೇ, ಆಂತರಿಕವಾಗಿ ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅತ್ಯುನ್ನತ ಸಮಾಜದಲ್ಲಿ ಕೂರಿಸಿದರೂ ಆತನ ನೈಜ ಗುಣ ಒಂದಲ್ಲಾ ಒಂದು ದಿನ ಹೊರಬಂದೇ ತೀರುತ್ತದೆ.​ಸಾಮಾಜಿಕ ಮತ್ತು ರಾಜಕೀಯ ಪ್ರಸ್ತುತತೆಯಲ್ಲಿನ​ಇಂದಿನ ಆಧುನಿಕ ಸಮಾಜಕ್ಕೆ ಈ ಗಾದೆ ಮಾತು ಅತ್ಯಂತ ಪ್ರಸ್ತುತವಾಗಿದೆ. ಇಂದು ಹಣ, ಅಧಿಕಾರ ಅಥವಾ ವಂಶಪಾರಂಪರ್ಯದ ಪ್ರಭಾವದಿಂದ ಅನೇಕರು ಉನ್ನತ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಆ ಸ್ಥಾನಕ್ಕೆ ಬೇಕಾದ ಅರ್ಹತೆ, ಕರುಣೆ, ವಿವೇಕ ಅವರಲ್ಲಿ ಇರುವುದಿಲ್ಲ.​ರಾಜಕೀಯದಲ್ಲಿ ಅರ್ಹತೆಯಿಲ್ಲದ ನಾಯಕನಿಗೆ ಎಷ್ಟೇ ದೊಡ್ಡ ಅಧಿಕಾರ ನೀಡಿದರೂ ಆತ ಜನಕಲ್ಯಾಣ ಮಾಡಲಾರ. ಆತನ ಭ್ರಷ್ಟ ಮತ್ತು ದುರಹಂಕಾರದ ಗುಣಗಳು ಹೊರಬೀಳುತ್ತವೆ. ಇದು ಕಾಗೆಯನ್ನು ಪಂಜರದಲ್ಲಿಟ್ಟಂತೆ.​ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಅಷ್ಟೆ .ಕೇವಲ ಶಿಫಾರಸಿನಿಂದ ದೊಡ್ಡ ಹುದ್ದೆ ಪಡೆದ ವ್ಯಕ್ತಿ ಆ ಕೆಲಸದಲ್ಲಿ ಸೃಜನಶೀಲತೆ ತೋರಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದವನಿಗೆ ಐಷಾರಾಮಿ ಕಚೇರಿ (ಪಂಜರ) ಕೊಟ್ಟರೂ ಆತನಿಂದ ಗುಣಮಟ್ಟದ ಕೆಲಸ (ಪಂಚಮ ಸ್ವರ) ನಿರೀಕ್ಷಿಸಲು ಸಾಧ್ಯವಿಲ್ಲ.​​ಈ ಗಾದೆಯು ನಮಗೆ ಕೃತಕತೆ ಮತ್ತು ನೈಸರ್ಗಿಕತೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಕಾಗೆಗೆ ತನ್ನದೇ ಆದ ಮಹತ್ವವಿದೆ—ಅದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ, ಪಿತೃಕಾರ್ಯಗಳಲ್ಲಿ ಅದಕ್ಕೆ ಪ್ರಾಧಾನ್ಯತೆಯಿದೆ. ಆದರೆ, ಅದರ ಮಿತಿ ಅದಕ್ಕಿದೆ. ಕಾಗೆ ಕೋಗಿಲೆಯಾಗಲು ಯತ್ನಿಸುವುದು ಕೃತಕತೆ.​ಅದೇ ರೀತಿ, ಮನುಷ್ಯ ತಾನು ಅಲ್ಲದೇ ಇರುವುದನ್ನು ತೋರಿಸಿಕೊಳ್ಳಲು ‘ಮುಖವಾಡ’ ಧರಿಸಿದಾಗ ಈ ಗಾದೆ ಅನ್ವಯಿಸುತ್ತದೆ. ಎಷ್ಟೇ ಶ್ರೀಮಂತಿಕೆಯ ಪ್ರದರ್ಶನ ಮಾಡಿದರೂ, ಆಚಾರ-ವಿಚಾರಗಳಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಶ್ರೀಮಂತಿಕೆ ವ್ಯರ್ಥ. ಬೂದಿಗೆ ತುಪ್ಪ ಸುರಿದರೆ ಹೋಮವಾಗುವುದಿಲ್ಲ, ಹಾಗೆಯೇ ಸಂಸ್ಕಾರಹೀನನಿಗೆ ಸಕಲ ಸೌಲಭ್ಯ ನೀಡಿದರೂ ಆತ ಸತ್ಪ್ರಜೆಯಾಗಲಾರ.​ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ​ಕನ್ನಡದ ಅನೇಕ ಶರಣರು ಮತ್ತು ದಾಸರು ಈ ಕಲ್ಪನೆಯನ್ನು ತಮ್ಮ ವಚನ ಹಾಗೂ ಕೀರ್ತನೆಗಳಲ್ಲಿ ಬಳಸಿದ್ದಾರೆ.​”ಕಾಗೆಯ ತಂದು ಪಂಜರದೊಳಗಿಟ್ಟರೆ ಕೋಗಿಲೆಯಾಗಬಲ್ಲದೇ?”​ಎಂದು ಜಗತ್ತಿನ ಕೃತಕತೆಯನ್ನು ವಚನಕಾರರು ಪ್ರಶ್ನಿಸಿದ್ದಾರೆ. ಆಧ್ಯಾತ್ಮಿಕವಾಗಿ, ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಗಳೆಂಬ ಮಲಿನತೆ ತುಂಬಿರುವಾಗ, ದೇಹಕ್ಕೆ ಕಾವಿ ಬಟ್ಟೆ ಧರಿಸಿದ ತಕ್ಷಣ ಅಥವಾ ದೇವಸ್ಥಾನದೊಳಗೆ ಕುಳಿತ ತಕ್ಷಣ ಒಬ್ಬ ವ್ಯಕ್ತಿ ಮಹಾತ್ಮನಾಗಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದ ಹೊರತು ಬಹಿರಂಗದ ಆಡಂಬರವೆಲ್ಲವೂ ಶೂನ್ಯ. ಕಾಗೆಯ ಕಪ್ಪು ಬಣ್ಣವನ್ನು ತೊಳೆದರೆ ಬಿಳಿಯಾಗುವುದಿಲ್ಲ, ಹಾಗೆಯೇ ದುರ್ಬುದ್ಧಿಯುಳ್ಳವನಿಗೆ ತೀರ್ಥಸ್ನಾನ ಮಾಡಿಸಿದರೂ ಆತನ ಪಾಪ ಅಥವಾ ಕುಟಿಲತೆ ದೂರವಾಗುವುದಿಲ್ಲ.ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? ಎಂಬ ಮಾತು ನಮಗೆ ಬದುಕಿನ ದೊಡ್ಡ ಸತ್ಯವನ್ನು ಬೋಧಿಸುತ್ತದೆ.​ಸ್ವಯಂ ಅರಿವು ಉಂಟಾಗುತ್ತದೆ.ನಾವು ಯಾರೋ ಆಗಲು ಪ್ರಯತ್ನಿಸದೇ, ನಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿ ಬೆಳೆಯಬೇಕು.​ ಬಾಹ್ಯ ವೈಭವವನ್ನು ನೋಡಿ ವ್ಯಕ್ತಿಯನ್ನು ಅಳೆಯಬಾರದು, ಆತನ ಆಂತರಿಕ ಯೋಗ್ಯತೆ ಮತ್ತು ನಡತೆಗೆ ಬೆಲೆ ಕೊಡಬೇಕು.​ಕೇವಲ ಪರಿಸರ ಬದಲಾದರೆ ಸಾಲದು, ವ್ಯಕ್ತಿಯ ಆಂತರಿಕ ಗುಣ ಮತ್ತು ಯೋಚನಾ ಲಹರಿ ಬದಲಾಗಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿತಿಯನ್ನು ಅರಿತು, ಕೃತಕ ಮುಖವಾಡಗಳನ್ನು ಕಳಚಿ ಹಾಕಿ, ಸತ್ಸಂಗ ಮತ್ತು ಸದ್ವಿಚಾರಗಳ ಮೂಲಕ ತನ್ನ ಆಂತರಿಕ ಗುಣವನ್ನು ಕೋಗಿಲೆಯಂತೆ ಮಧುರವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ​ಈ ಮಾತು ಮನುಷ್ಯನ ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಭಾವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು ಹುಟ್ಟುಗುಣ ಅಥವಾ ಬೆಳೆಸಿದ ವಾತಾವರಣ ಎನ್ನಲಾಗುತ್ತದೆ. ​ ಇಂದು ಜಗತ್ತು ಕೇವಲ ‘ಪಂಜರ’ಗಳನ್ನು ಅಂದರೆ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳನ್ನು ನೋಡಿ ವ್ಯಕ್ತಿಯ ಯೋಗ್ಯತೆಯನ್ನು ಅಳೆಯುತ್ತದೆ. ಆದರೆ, ಮಾನಸಿಕವಾಗಿ ವಿಕಾಸಗೊಳ್ಳದ, ಸಣ್ಣತನದ ಯೋಚನೆ ಇರುವ ವ್ಯಕ್ತಿಯನ್ನು ಎಷ್ಟೇ ದೊಡ್ಡ ಶ್ರೀಮಂತಿಕೆಯಲ್ಲಿ ಇಟ್ಟರೂ ಆತನ ಮಾತುಗಳು ಮತ್ತು ವರ್ತನೆಗಳು ಕಾಗೆಯ ಕರ್ಕಶ ಧ್ವನಿಯಂತೆಯೇ ಇರುತ್ತವೆ.ಕಾಗೆಯು, ಕೋಗಿಲೆಯನ್ನು ನೋಡಿ ನಕಲು ಮಾಡಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಾವೂ ಹಾಗೆಯೇ ಬದುಕಲು ಕೃತಕವಾಗಿ ಪ್ರಯತ್ನಿಸುತ್ತಿದೆ. ತನ್ನ ಮೂಲ ಅಸ್ತಿತ್ವವನ್ನು ಮರೆತು, ಬೇರೊಬ್ಬರ ಮುಖವಾಡ ಧರಿಸಿದಾಗ ಮನುಷ್ಯ ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಕಾಗೆಗೆ ತನ್ನದೇ ಆದ ಸ್ವಾತಂತ್ರ್ಯವಿದೆ, ಆದರೆ ಅದು ಕೋಗಿಲೆಯಾಗಲು ಹೋದಾಗ ಮಾತ್ರ ಹಾಸ್ಯಾಸ್ಪದವಾಗುತ್ತದೆ.​​ಕುಟುಂಬ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ಈ ಗಾದೆಗೆ ಭಿನ್ನವಾದ ಅರ್ಥವಿದೆ. ಕೇವಲ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದಲ್ಲಿ ಹುಟ್ಟಿದ ತಕ್ಷಣ ಒಬ್ಬ ವ್ಯಕ್ತಿಗೆ ಯೋಗ್ಯತೆ ಬಂದುಬಿಡುವುದಿಲ್ಲ. ಸಮಾಜದಲ್ಲಿ ದೊಡ್ಡ ಮನೆತನದಲ್ಲಿ ಹುಟ್ಟಿ, ಸಕಲ ಸೌಕರ್ಯಗಳ ಮಧ್ಯೆ ಬೆಳೆದ ಎಷ್ಟೋ ಮಕ್ಕಳು ದುಶ್ಚಟಗಳಿಗೆ ದಾಸರಾಗಿ, ಸಮಾಜಕ್ಕೆ ಕಂಟಕರಾಗುವುದನ್ನು ನಾವು ನೋಡುತ್ತೇವೆ. ಇಲ್ಲಿ ‘ದೊಡ್ಡ ಮನೆತನ’ ಎನ್ನುವುದು ಚಿನ್ನದ ಪಂಜರ ಇದ್ದಂತೆ. ಆದರೆ ಆ ಮಗುವಿನಲ್ಲಿ ಮೂಲತಃ ಒಳ್ಳೆಯ ಗುಣ, ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೆ, ಆತ ಸಮಾಜದಲ್ಲಿ ‘ಪಂಚಮ ಸ್ವರ’ದಂತಹ ಕೀರ್ತಿಯನ್ನು ತರಲಾರ.​ ರಾಜನ ಮಗ ರಾಜನಾಗಬಹುದು, ಆದರೆ ಆತ ಪ್ರಜಾವತ್ಸಲನಾದ ನಾಯಕನಾಗಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದ ಉತ್ತರಾಧಿಕಾರಿಗೆ ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಹಸ್ತಾಂತರಿಸಿದರೂ ಆತ ಅದನ್ನು ನಾಶ ಮಾಡುತ್ತಾನೆಯೇ ಹೊರತು ರಕ್ಷಿಸುವುದಿಲ್ಲ. ಯೋಗ್ಯತೆಯನ್ನು ತರಬೇತಿಯಿಂದ ಕೊಡಬಹುದೇ ಹೊರತು, ಜನ್ಮಸಿದ್ಧ ಹಕ್ಕಾಗಿ ಅಥವಾ ಆಸ್ತಿಯ ರೂಪದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ.​​ಕಲೆ ಮತ್ತು ಸಾಹಿತ್ಯದ ಲೋಕದಲ್ಲಿ ಈ ಗಾದೆಯು ‘ಪ್ರತಿಭೆ’ ಮತ್ತು ‘ಅವಕಾಶ’ಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ. ​ಕಲೆ ಎನ್ನುವುದು ದೈವದತ್ತವಾದದ್ದು ಮತ್ತು ಕಠಿಣ ಪರಿಶ್ರಮದಿಂದ ಒಲಿಯುವಂತದ್ದು. ಇಂದು ಕಲಾ ಜಗತ್ತಿನಲ್ಲಿ ಅಥವಾ ಸಿನಿಮಾ ರಂಗದಲ್ಲಿ ಯಾವುದೇ ಪ್ರತಿಭೆಯಿಲ್ಲದ ವ್ಯಕ್ತಿಗೆ ಹಣದ ಬಲದಿಂದ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು. ಆದರೆ, ಜನಮನ ಗೆಲ್ಲುವಂತಹ ‘ಪಂಚಮ ಸ್ವರ’ವನ್ನು ಸೃಷ್ಟಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ನೈಜ ಪ್ರತಿಭೆಯಿಲ್ಲದ ನಟನೆ ಅಥವಾ ಸಂಗೀತ ಕೃತಕವಾಗಿ ಕಾಣುತ್ತದೆ.ಕಾಗೆ ಕಪ್ಪಗಿದ್ದರೂ ಸಮಾಜಕ್ಕೆ ಅದರದೇ ಆದ ಕೊಡುಗೆಯಿದೆ. ಆದರೆ ಅದನ್ನು ಕೋಗಿಲೆಯ ಸ್ಥಾನದಲ್ಲಿ ಕೂರಿಸುವುದು ಕಲೆಯ ಅಪಚಾರವಾಗುತ್ತದೆ. ಅದೇ ರೀತಿ, ಅನರ್ಹರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಉನ್ನತ ಪೀಠದಲ್ಲಿ ಕೂರಿಸಿದಾಗ ಇಡೀ ಸಾಂಸ್ಕೃತಿಕ ವ್ಯವಸ್ಥೆಯೇ ಹದಗೆಡುತ್ತದೆ ಎಂಬುದನ್ನು ಈ ಗಾದೆ ಎಚ್ಚರಿಸುತ್ತದೆ.​​ನಮ್ಮ ಭಾರತೀಯ ದರ್ಶನಗಳಲ್ಲಿ ಅಥವಾ ವೇದಾಂತದಲ್ಲಿ ಈ ಗಾದೆಗೆ ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಿದೆ. ಇಲ್ಲಿ ಪಂಜರ ಎನ್ನುವುದು ‘ಐಹಿಕ ಜಗತ್ತು’ ಅಥವಾ ‘ದೇಹ’, ಕಾಗೆ ಎನ್ನುವುದು ‘ಅಹಂಕಾರ’ ಅಥವಾ ‘ಅಜ್ಞಾನ’.​ಅಂತರಂಗದ ಶುದ್ಧಿಯೆನ್ನಬಹುದು. ಮನುಷ್ಯನು, ಕಾಶಿ, ರಾಮೇಶ್ವರ ಅಥವಾ ಮಕ್ಕಾಗೆ ಹೋಗಿ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದರೂ ಆತನ ಮನಸ್ಸಿನಲ್ಲಿರುವ ಕ್ರೌರ್ಯ, ಅಸೂಯೆ ಮತ್ತು ಕಾಮನೆಗಳು ದೂರವಾಗುವುದಿಲ್ಲ. ದೇಹಕ್ಕೆ ಚಂದನ ಸವರಿದರೂ ಒಳಗಿರುವ ಕೊಳಕು ನಾಶವಾಗುವುದಿಲ್ಲ. ಧಾರ್ಮಿಕ ಆಚರಣೆಗಳು ಕೇವಲ ಬಾಹ್ಯ ಪಂಜರದಂತೆ. ಮನಸ್ಸು ಶುದ್ಧವಾಗದ ಹೊರತು ಭಗವಂತನ ಸಾಕ್ಷಾತ್ಕಾರವೆಂಬ ಪಂಚಮ ಸ್ವರ ಹೊರಹೊಮ್ಮಲು ಸಾಧ್ಯವಿಲ್ಲ. ​ ಹಿಂದೂ ತತ್ತ್ವಶಾಸ್ತ್ರದ ಪ್ರಕಾರ, ಮನುಷ್ಯ ತನ್ನ ಹಿಂದಿನ ಜನ್ಮಗಳ ‘ವಾಸನೆ’ (ಗುಣಗಳು) ಮತ್ತು ಕರ್ಮಗಳನ್ನು ಹೊತ್ತು ತರುತ್ತಾನೆ. ಆ ಹುಟ್ಟುಗುಣವನ್ನು ಕೇವಲ ಬಾಹ್ಯ ಪರಿಸರದಿಂದ ಬದಲಾಯಿಸುವುದು ಕಷ್ಟ. ಕಟುಕನ ಕೈಯಲ್ಲಿರುವ ಕತ್ತಿಗೆ ಚಿನ್ನದ ಹಿಡಿ ಹಾಕಿದರೂ ಅದು ರಕ್ತವನ್ನೇ ಹರಿಸುತ್ತದೆಯೆ ಹೊರತು ಕಬ್ಬಿನ ಹಾಲನ್ನು ಹರಿಸಲಾರದು .ಹಾಗೆಯೇ, ತಾಮಸ ಗುಣವುಳ್ಳ ವ್ಯಕ್ತಿಗೆ ಸಾತ್ವಿಕ ವಾತಾವರಣ ಕಲ್ಪಿಸಿದರೂ ಆತನ ಆಲೋಚನೆಗಳು ತಾಮಸಿಕವಾಗಿಯೇ ಇರುತ್ತವೆ.​ಜಾಗತಿಕ ಮಟ್ಟದಲ್ಲಿ ಅಥವಾ ಇಂದಿನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಈ ಗಾದೆ ಅತ್ಯಂತ ಮಾರ್ಮಿಕವಾದ ವಿಡಂಬನೆಯನ್ನು ಮಾಡುತ್ತದೆ.​ಪದವಿಗಳು ಮತ್ತು ಪ್ರಬುದ್ಧತೆಗಳಿಗೂ ಬೇರೆ ಮಾತು ಹೇಳಬೇಕಾಗಿಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರೂಪಾಯಿ ಕೊಟ್ಟು ಪದವಿ (Degrees) ಪಡೆದವರು ದೇಶದಲ್ಲಿದ್ದಾರೆ. ಈ ಪದವಿಗಳು ಕೇವಲ ಒಂದು ಪಂಜರವಿದ್ದಂತೆ. ಆದರೆ, ಸಮಾಜಕ್ಕೆ ಬೇಕಾದ ಕರುಣೆ, ನೈತಿಕತೆ, ಮತ್ತು ದೇಶಪ್ರೇಮ ಅವರಲ್ಲಿ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಜ್ಞಾನವಿದ್ದಲ್ಲಿ ವಿನಯವಿರಬೇಕು, ಆದರೆ ಕೇವಲ ಅಹಂಕಾರದ ‘ಕಾವ್ ಕಾವ್’ ಧ್ವನಿ ಕೇಳಿಬಂದರೆ ಆ ಶಿಕ್ಷಣ ಸಂಪೂರ್ಣ ವಿಫಲ ಎಂದರ್ಥ.​ವ್ಯವಸ್ಥೆಯ ವೈಫಲ್ಯವು ಎಷ್ಟು ಕೆಟ್ಟು ಹೋಗಿದೆ ಎಂದರೆ, ಯಾವುದೇ ಒಂದು ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ನೌಕರನನ್ನು ಮೂಲೆಗುಂಪು ಮಾಡಿ, ಕೇವಲ ಹಿತೈಷಿ ಅಥವಾ ಚಮಚಾಗಿರಿ ಮಾಡುವ ವ್ಯಕ್ತಿಗೆ ಉನ್ನತ ಮ್ಯಾನೇಜರ್ ಹುದ್ದೆ ನೀಡಿದರೆ ಆ ಸಂಸ್ಥೆ ದಿವಾಳಿಯಾಗುತ್ತದೆ. ಕಾಗೆಯನ್ನು ಸಿಂಹಾಸನದ ಮೇಲೆ ಕೂರಿಸಿದಾಗ ಇಡೀ ಸಾಮ್ರಾಜ್ಯವೇ ಪತನದ ಹಾದಿ ಹಿಡಿಯುತ್ತದೆ ಎಂಬ ರಾಜನೀತಿಯ ಸತ್ಯವನ್ನು ಇದು ಜ್ಞಾಪಿಸುತ್ತದೆ.​​ಈ ಗಾದೆ ಮಾತು ಕೇವಲ ನಕಾರಾತ್ಮಕವಾಗಿ ಕಾಗೆಯನ್ನು ನಿಂದಿಸುವ ಮಾತಲ್ಲ; ಬದಲಿಗೆ ಇದು ಪ್ರಕೃತಿಯ ನಿಯಮವನ್ನು ಎತ್ತಿಹಿಡಿಯುವ ಸತ್ಯ. “ಯಾರಿಗೆ ಎಲ್ಲಿ ಗೌರವ ಸಿಗಬೇಕೋ ಅಲ್ಲಿ ಸಿಗಬೇಕು ಮತ್ತು ಯಾರು ತಮ್ಮ ನೈಜ ಗುಣಕ್ಕೆ ತಕ್ಕಂತೆ ಬದುಕಬೇಕೋ ಹಾಗೆ ಬದುಕಬೇಕು.”​ಕಾಗೆ ಮುಕ್ತವಾಗಿ ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯನ್ನು ಸ್ವಚ್ಛಗೊಳಿಸುವಾಗ ಸುಂದರವಾಗಿರುತ್ತದೆ. ಅದನ್ನು ತಂದು ಪಂಜರದಲ್ಲಿಟ್ಟು ಕೋಗಿಲೆಯಾಗಲು ಒತ್ತಾಯಿಸುವುದು ಕಾಗೆಗೂ ಮಾಡುವ ಅನ್ಯಾಯ, ಪಂಜರಕ್ಕೂ ಮಾಡುವ ಅಪಚಾರ. ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ತನ್ನ ನೈಜ ಸಾಮರ್ಥ್ಯವನ್ನು ಅರಿತು, ಕೃತಕ ಆಡಂಬರಗಳಿಗೆ ಮಾರುಹೋಗದೆ, ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗುವ ‘ಪಂಚಮ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು  ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ–129 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರು ತಲುಪಿದ ಸುಮತಿ ಸುಮತಿಯ ಎರಡನೇ ಮಗಳು ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬೆಂಗಳೂರಿನಲ್ಲಿರುವ ಮಾವನ ವಿಳಾಸವನ್ನು ಪಡೆದುಕೊಂಡು ಬಂದಳು. ಹೆಚ್ಚು ತಡ ಮಾಡಿದರೆ ಸುಮತಿಯ ಆರೋಗ್ಯದಲ್ಲಿ ಮತ್ತೆ ಇನ್ನೇನು ಏರುಪೇರು ಆಗುವುದೋ ಎಂದು ಆದಷ್ಟು ಬೇಗ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗುವ ತಯಾರಿಯನ್ನು ಸುಮತಿಯ ಕುಟುಂಬ ಮಾಡತೊಡಗಿತು. ತನ್ನ ತಾಯಿಗೆ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗಾಗಿ ಊರಿಗೆ ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಎರಡನೇ ಮಗಳು ಅನಾಥಾಶ್ರಮದ ಸೆಕ್ರೆಟರಿಯವರ ಅನುಮತಿಯನ್ನು ಪಡೆದು ತನ್ನ ಜೊತೆಯಲ್ಲಿ ತನ್ನ ಕೋಣೆಯಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಿದಳು. ಮಾರನೇ ದಿನ ಎಸ್ಟೇಟಿನ ಸಾಹುಕಾರರು ತಮ್ಮ ಕಾರು ಹಾಗೂ ಚಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸಿ, ಸುಮತಿಯನ್ನು ಸುರಕ್ಷಿತವಾಗಿ ಬೆಂಗಳೂರಿನ ಸುಮತಿಯ ತಮ್ಮನ ಮನೆಗೆ ತಲುಪಿಸುವಂತೆ ತಿಳಿಸಿದರು. ಸುಮತಿಯ ಎರಡನೇ ಮಗಳ ಕೈಲಿ ಹೆಚ್ಚು ಹಣವಿರಲಿಲ್ಲ. ಇದನ್ನು ಅರಿತ ಆಶ್ರಮದಲ್ಲಿ ಇತರೆ ಕೆಲಸಗಳಿಗೆ ಸಹಾಯಕ್ಕೆ ಬಂದಿದ್ದ ಹುಡುಗಿ ತನ್ನ ಗೆಳತಿಯ ಸ್ಥಿತಿಯನ್ನು ಗಮನಿಸಿ, ತಾನು ಮುಂದಿನ ವರ್ಷದಲ್ಲಿ ನರ್ಸಿಂಗ್ ತರಬೇತಿಗೆ ಸೇರಬೇಕೆಂದು ಕೂಡಿಟ್ಟಿದ್ದ ಹಣವನ್ನು ತಂದು ತನ್ನ ಸ್ನೇಹಿತೆಯ ಕೈಯಲ್ಲಿ ಇಟ್ಟು…. “ನೀನು ಮೊದಲು ನಿನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸು…. ಮುಂದಿನ ವರ್ಷ ತಾನೇ ನಾನು ತರಬೇತಿಗೆ ಸೇರಿಕೊಳ್ಳುವುದು… ಅಷ್ಟರ ಒಳಗಾಗಿ ನೀನು ನಿಧಾನವಾಗಿ ಈ ಹಣವನ್ನು ನನಗೆ ಹಿಂತಿರುಗಿ ಕೊಡುವಿಯಂತೆ”….. ಎಂದು ಹೇಳಿದಳು.  ಬೆಂಗಳೂರಿಗೆ ಹೋಗಿ ಬರುವ ಖರ್ಚಿಗಾಗಿ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದ ಸುಮತಿಯ ಮಗಳಿಗೆ ಆಕೆಯ ಗೆಳತಿಯೇ ಆಪದ್ಬಾಂಧವಳಾಗಿ ಬಂದು ಸಹಾಯವನ್ನು ಮಾಡಿದ್ದಳು. ತನ್ನ ಪರಿಸ್ಥಿತಿಯನ್ನು ಅರಿತು ಕಷ್ಟಕ್ಕೆ ನೆರವಾದ ಗೆಳತಿಯನ್ನು ಅಪ್ಪಿಕೊಂಡು ಆ ಹುಡುಗಿ ಗದ್ಗದಿತಳಾದಳು…. ₹ನಿನ್ನ ಈ ಉಪಕಾರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ…. ನೀನು ಹೀಗೆ ನನಗೆ ಸಹಾಯ ಮಾಡುತ್ತೀಯಾ ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ…. ನಿನ್ನ ಅಂತಃಕರಣ ದೊಡ್ದದು…..ಯಾವ ರೀತಿಯಲ್ಲಿ ನಿನಗೆ ಕೃತಜ್ಞತೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ”…ಎಂದು ಹೇಳುತ್ತಾ ಅತ್ತುಬಿಟ್ಟಳು. ತನ್ನ ಗೆಳತಿಯ ತಲೆಯನ್ನು ನೇವರಿಸುತ್ತಾ…..”ನಿನ್ನ ತಾಯಿ ಮತ್ತು ನನ್ನ ತಾಯಿ ಬೇರೆ ಬೇರೆಯಲ್ಲ…. ಇಬ್ಬರೂ ಒಂದೇ ಎಂದು ನಾನು ತಿಳಿದಿದ್ದೇನೆ… ನನ್ನ ಕೈಲಿ ಆದ ಪುಟ್ಟ ಸಹಾಯವನ್ನು ನಾನು ನಿನಗೆ ಮಾಡಿದ್ದೇನೆ….. ನೀನು ಮಾಡಬೇಕಾಗಿದ್ದು ಇನ್ನೂ ಇದೆ…. ಆದಷ್ಟು ಬೇಗ ನಿನ್ನ ತಾಯಿಗೆ ಚಿಕಿತ್ಸೆ ಕೊಡಿಸು….ಇಲ್ಲಿನ ಕೆಲಸಗಳನ್ನು ಮಾಡಲು ನಾನಿದ್ದೇನೆ….ಈಗ ಹೇಗಿದ್ದರೂ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದೆ…. ಶಾಲೆಗೆ ರಜೆಯೂ ಇದೆ….ಹಾಗಾಗಿ ನೀನು ನಿಶ್ಚಿಂತೆಯಿಂದ ಹೋಗಿ ಬಾ”…. ಎಂದು ಹೇಳುತ್ತಾ ತನ್ನ ಗೆಳತಿಗೆ ಸಾಂತ್ವನ ಹೇಳಿ ಬೀಳ್ಕೊಟ್ಟಳು. ಅಳಿಯ ಹಿಂದಿನ ರಾತ್ರಿಯೇ ಬಂದು ಸುಮತಿಯ ಜೊತೆಯೇ ಉಳಿದುಕೊಂಡಿದ್ದರಿಂದ ಬೆಳಗ್ಗೆ ಬೇಗನೇ ಬೆಂಗಳೂರಿಗೆ ಹೊರಡಲು ಅನುಕೂಲವಾಯಿತು.  ಹಿಂದಿನ ದಿನವೇ ಹಿರಿಯ ಮಗಳು, ಮೊಮ್ಮಕ್ಕಳು, ಮೂರನೇ ಮಗಳು ಸುಮತಿಯನ್ನು ನೋಡಲು ಬಂದಿದ್ದರು. ಕೊನೆಯ ಮಗಳು ಮಧ್ಯ ಪ್ರದೇಶದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪತ್ರದ ಮೂಲಕ ತಾಯಿಯ ಯೋಗಕ್ಷೇಮದ ವಿವರಗಳನ್ನು ತಿಳಿಸಲಾಗುತ್ತಿತ್ತು. ಅವಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳ ವ್ಯಾಸಂಗಕ್ಕೆ ತೊಂದರೆಯಾಗದೆ ಇರಲೆಂದು ತನ್ನ ಆರೋಗ್ಯ ತೀರಾ ಹದಗಟ್ಟಿದೆ ಎಂಬ ವಿಚಾರವನ್ನು ಅವಳಿಗೆ ತಿಳಿಸುವುದು ಬೇಡ ಎಂದು ಸುಮತಿ ತಾಕೀತು ಮಾಡಿದ್ದಳು. ತಾಯಿಯ ಅಣತಿಯಂತೆ ಮಕ್ಕಳು ನಡೆದುಕೊಂಡರು. ಸುಮತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬೆಳಗ್ಗೆ ಕಾರು ಬರುವುದೆಂದು ಹಿಂದಿನ ದಿನ ಟೆಲಿಫೋನ್ ಮುಖಾಂತರ ಸಾಹುಕಾರರ ಜೊತೆಗೆ ಎರಡನೇ ಮಗಳು ಮಾತನಾಡಿದಾಗ ತಿಳಿಸಿದ್ದರು. ಹಾಗಾಗಿ ಬೆಳಗ್ಗೆಯೇ ಸುಮತಿ,ಅಳಿಯ ಮತ್ತು ಎರಡನೇ ಮಗಳು ತಯಾರಾದರು. ಅವರಿಗೆ ಚಿರಪರಿಚಿತನಾದ ಚಾಲಕನಾದ ಕಾರಣ ದಾರಿಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಸುಮತಿಗೆ ಯಾವುದೇ ರೀತಿಯಲ್ಲೂ ಆಯಾಸವಾಗದಂತೆ ನಿಧಾನ ಗತಿಯಲ್ಲಿ ಚಾಲಕನು ಕಾರಿನ ಚಾಲನೆ ಮಾಡುತ್ತಿದ್ದ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮವಾದ ಹೋಟೆಲ್ ಗಳಿಗೆ ಕರೆದುಕೊಂಡು ಹೋಗಿ ಊಟ ಮಾಡಲು ಅನುಕೂಲ ಮಾಡಿಕೊಟ್ಟು ಅವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುತ್ತಿದ್ದ. ಸುಮತಿಗೆ ಡಯಾಬಿಟಿಸ್ ಇರುವ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕಿತ್ತು.  ಮಧ್ಯಾಹ್ನದ 3:00 ಹೊತ್ತಿಗೆ ಕಾರು ಸುಮತಿಯ ತಮ್ಮನ ಮನೆಯನ್ನು ತಲುಪಿತು. ಅಕ್ಕನ ಮಗಳು ಪತ್ರದ ಮೂಲಕ ಬರೆದು ತಿಳಿಸಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ ಬೆಂಗಳೂರಿಗೆ ಬರುವುದು ತಮ್ಮನಿಗೆ ತಿಳಿದಿತ್ತು. ಸುಮತಿಯನ್ನು ಕಂಡು ಅವಳ ತಮ್ಮನ ಕುಟುಂಬದ ಎಲ್ಲರಿಗೂ ಸಂತಸವಾಯಿತು. ತಮ್ಮನ ಹೆಂಡತಿ ಮತ್ತು ಮಕ್ಕಳು ಬಂದು ಜಾಗ್ರತೆಯಿಂದ ಸುಮತಿಯನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಸಕಲೇಶಪುರದಿಂದ ಸುಮತಿಯನ್ನು ಕರೆದುಕೊಂಡು ಬಂದ ಚಾಲಕನನ್ನು ಮನೆಯ ಒಳಗೆ ಕರೆದು ಆತನಿಗೆ ಕಾಫಿ ತಿಂಡಿಯನ್ನು ಕೊಟ್ಟು ಉಪಚರಿಸಿ, ಕೃತಜ್ಞತೆಗಳನ್ನು ತಿಳಿಸಿ ಕಳುಹಿಸಿಕೊಟ್ಟರು. ಸುಮತಿಯ ತಮ್ಮ ಮೊದಲೇ ಆಸ್ಪತ್ರೆಯ ಬಗ್ಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಬೇಗನೆ ಆಸ್ಪತ್ರೆಗೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅಂದು ರಾತ್ರಿ ತಮ್ಮನ ಹೆಂಡತಿ ಸುಮತಿಗೆ ಇಷ್ಟವಾದ ವಿಶೇಷ ಅಡಿಗೆಯನ್ನು ಮಾಡಿ ಬಡಿಸಿದಳು. ಎಲ್ಲರೂ ಸಂತೋಷದಿಂದ ರಾತ್ರಿ ಊಟ ಮಾಡಿ ಮಾತನಾಡುತ್ತಾ ಕಾಲ ಕಳೆದರು.  ಅತ್ತೆಯೆಂದರೆ ತಮ್ಮನ ಮಕ್ಕಳಿಗೆ ಅಚ್ಚುಮೆಚ್ಚು. ಅತ್ತೆ ಹೇಳುವ ಕಥೆಯು ಅವರಿಗೆ ಪ್ರಿಯ. ತಮ್ಮನ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಸುಮತಿಗೂ ಖುಷಿ. ಆದರೆ ಸುಮತಿಯ ಆರೋಗ್ಯ ಸರಿ ಇಲ್ಲದೇ ಇರುವುದನ್ನು ಅರಿತ ಮಕ್ಕಳು ಅತ್ತೆಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದರು. ಅಕ್ಕನ ಆರೋಗ್ಯ ತೀರಾ ಹದಗಟ್ಟಿರುವುದನ್ನು ಅರಿತ ತಮ್ಮ ಬಹಳ ಚಿಂತಿತನಾದನು. 

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ  ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು.  ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು.  ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು.  ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ  ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.  ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು  ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ.  ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು  ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು.  *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು  ಒಬ್ಬ ವ್ಯಕ್ತಿಯ  ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು  ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. .  ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ  ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು.   ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ‌ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು.  ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು  ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಗಜೇಶ ಮಸಣಯ್ಯ ಗಜೇಶ ಮಸಣಯ್ಯನವರ  ವಚನಗಳು ಶರಣಸತಿ ಲಿಂಗಪತಿ ಭಾವ, ಷಟ್ಸ್ಥಲ ಸಿದ್ಧಾಂತ ಮತ್ತು ಆತ್ಮಜ್ಞಾನದ ಆಳವಾದ ತಿಳುವಳಿಕೆಯನ್ನು ಒಳಗೊಂಡಿವೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಇವರು ತಮ್ಮ ಮಡದಿಯೊಂದಿಗೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು. ಒಬ್ಬಶ್ರೇಷ್ಠಅನುಭಾವಿ ಚಿಂತಕ ಬಸವಕಾಲಿನಶರಣರು.   ಕಾಲ – ಹನ್ನೆರಡನೆಯ ಶತಮಾನಒಟ್ಟು ವಚನಗಳು 70 ಜನ್ಮ ಸ್ಥಳ  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು.ಅಂಕಿತ -ಮಹಾಲಿಂಗ ಗಜೇಶ್ವರ”. ಮಡದಿ -ಗಜೇಶ ಮಸಣಮ್ಮಐಕ್ಯ ಸ್ಥಳ – ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಮನಹಳ್ಳಿ ಗ್ರಾಮದಲ್ಲಿದ್ದು ಕೊನೆಗೆ ಅಲ್ಲಿಯೇ ಐಕ್ಯರಾದರೆಂದು ಕೆಲವರು ಹೇಳಿದರೆ, ಅಕ್ಕಲಕೋಟೆಯ ಕರ್ಜಗಿ ಗ್ರಾಮದಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ.   12 ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”. ಹೊಸ ಮದುವೆ ಹಸೆ ಉಡುಗದ ಮುನ್ನಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನನೀರ ತಾಳ್ಮೆ ಹರಿಯದ ಮುನ್ನತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದುಹುಸಿ ಇಲ್ಲದಿದ್ದಡೆ ಭಕ್ತನೆಂಬೆಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆತನುವಿಲ್ಲದಿದ್ದಡೆ ಪ್ರಸಾದಿ ಎಂಬೆಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆಆಸೆ ಇಲ್ಲದಿದ್ದಡೆ ಶರಣನೆಂಬೆಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆಇಂತಾಗಬೇಕೆಂಬ ಮನದ ದೇಹಇರಿದಡರಿಯದು, ಸ್ತುತಿಸಿದಡರಿಯದುಸುಖವನರಿಯದು, ದುಃಖವನರಿಯದುಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆಅದೇ ಮಹಾಲಿಂಗ ಗಜೇಶ್ವರನೆಂಬೆ ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿ  ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ    ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.                                         ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ  ಹೇಗೆ ಅಳವಡಿಸಿಕೊಂಡನು ಮಸಣಯ್ಯ   ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .ಎನ್ನ ಕರಸ್ಥಲವೇ ಬಸವಣ್ಣನಯ್ಯ———————————-ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ   ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ  ಗಜೇಶ ಮಸಣಯ್ಯ . ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ. ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ ) ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಕಾರಸ್ತಹದಲ್ಲಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ————————————–ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ  ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು  ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು. ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,———————————–ಇಷ್ಟಲಿಂಗ ಬಸವಣ್ಣ  ಪ್ರಾಣಲಿಂಗಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ   ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು. ಇಂತೆನ್ನ ಕರ ಮನ ಭಾವಂಗಳಲ್ಲಿ    ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ——————————————————————————ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು  ಮನವನ್ನು ಭಾವವನ್ನು ಶುದ್ಧ ಮಾಡುವ  ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು   ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲುಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ  ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ. ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.————————————————————————————————–ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರುತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ   ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅನಂತಹ ಎತ್ತರದ ನಿಲುವನ್ನು ಕಾಣಲುಸಾದ್ಯ  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಶರಂದ್ರ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ? *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* — ಈ ಮೇಲಿನ ಮಾತು ಸಮಾಜದಲ್ಲಿ ಕಾಣಸಿಗುವ ಅಸಮಾನತೆ, ಶಕ್ತಿ ಪ್ರದರ್ಶನ ಮತ್ತು ದುರ್ಬಲರ ಮೇಲಿನ ದೌರ್ಜನ್ಯವನ್ನು ಅತ್ಯಂತ ಮಾರ್ಮಿಕವಾಗಿ ಖಂಡಿಸುತ್ತದೆ. ತೀರಾ ಕಡುಬಡವರು ಅಥವಾ ಕಾರ್ಮಿಕರಿಗೆ ನಿಜಕ್ಕೂ ವಾಕ್ ಸ್ವಾತಂತ್ರ್ಯವಿಲ್ಲ.ಅವರ ಮನಸ್ಸಿನಲ್ಲಿರುವ ಮಾತುಗಳನ್ನು ಯಥಾವತ್ತಾಗಿ ಹೇಳಬಯಸಿದ್ದನ್ನು ಹೇಳಲಾಗುವುದಿಲ್ಲ.ನಮ್ಮೆದುರಿಗಿರುವ ಬಾಸ್,ಧಣಿ,ಅಧಿಕಾರಿಗಳು ಇರುವ ಕಡೆಗೆ ನೋಡಿ ಅಂಜಿಕೆ,ಅಳುಕುವಿನಿಂದ ನಮ್ಮ ಅಗತ್ಯಕ್ಕೆ ತಕ್ಕಂತೆ,ಅನುಗುಣವಾಗಿ, ಪರಿಸ್ಥಿತಿಗೆ ತಲೆಬಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮೃದುವಾದ ಭಾವನೆಯಿಂದ ಸಂಕೋಚದಿಂದಲೆ ಮಾತಾಡುತ್ತೇವೆ.ಅಧಿಕಾರ ಪಡೆದವರು ಕೆಳವರ್ಗದವರನ್ನು ನಿಂದಿಸಬೇಕಾದರೆ ಪ್ರಾಣಿಗಳಿಗೆ ಹೋಲಿಸಿ ಬಯ್ಯುತ್ತಿರುತ್ತಾರೆ.ಯಾವ ವಿಷಯದಲ್ಲಿಯೂ ತಳಮಟ್ಟದ ಕೆಲಸಗಾರರಿಗೆ ಇತಿಮಿತಿ ಇಲ್ಲ.‌‌ಹೌದು! ಕೆಳಮಟ್ಟದ ಕಾರ್ಮಿಕರಿಗೆ ಇರುವ ವಿಚಾರ ಶಕ್ತಿ, ಆಳುವ ವರ್ಗದವರಿಗೆ, ಅಧಿಕಾರಿಗಳಿಗೆ ಇರುವುದಿಲ್ಲ.ಪ್ರಾಣಿಗಳಿಗಿಂತಲೂ ದುಡಿಯುವ ಮನಸ್ಸುಗಳ ಜೀವನ ಉನ್ನತವಾಗಿದೆಯೆ?ಏನೋ! ಅದೆಷ್ಟೋ ಸಂದರ್ಭಗಳಲ್ಲಿ ಪ್ರಾಣಿಗಳು ದುಡಿಯುವ ವರ್ಗದವರನ್ನು ನೋಡಿ ತಲೆ ಬಾಗಿಸುತ್ತವೆಯೋ ಏನೋ?ಕತ್ತಲು ಬೆಳಕಿಗೆ ಜನ್ಮ ನೀಡುತ್ತದೆ.ದುಡಿಯುವವರು ಯಾವತ್ತಿದ್ದರೂ ಕತ್ತಲು.ಅವರು ಮಾಡುವ ಕೆಲಸಗಳು ಮಾತ್ರ ಬೆಳಕು.ಮೈ ಮುರಿದು ದುಡಿಯುವ ಎಲ್ಲಾ ಜನಾಂಗದವರಿಗೆ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ.ಬುದ್ಧಿವಂತಿಕೆಯೂ ಇರುತ್ತದೆ.ಕೆಲಸ ಕಾರ್ಯಗಳು ಯಾವುದೇ ಇರಲಿ.ಕೆಲವು ಪರಸ್ಥಿತಿಗಳ ಕಾರಣದಿಂದ ಒಂದೊಂದು ಸಲ ಕಾರ್ಮಿಕರು ಬ್ಯಾಲೆನ್ಸ್ ಕಳೆದುಕೊಳ್ಳಬಹುದು.ತಪ್ಪೂ ಸಹ  ಮಾಡಬಹುದು.ಆದರೆ ಆದೇಶದ ಆವೇಶದಲ್ಲಿ ಅಧಿಕಾರಿಗಳು ಆಡಿದ  ಮಾತುಗಳನ್ನು  ಹಿಂತೆಗೆದುಕೊಳ್ಳಲಾಗುವುದಿಲ್ಲ ಈ ಮೇಲಿನ ಮಾತು ಸಾಧಾರಣವಲ್ಲ.  ಗುಬ್ಬಚ್ಚಿ ಅತ್ಯಂತ ಸಣ್ಣ ಹಾಗೂ ನಿರಪರಾಧಿ ಹಕ್ಕಿ. ಅದನ್ನು ಕೊಲ್ಲಲು ಅಥವಾ ಹೆದರಿಸಲು ಬ್ರಹ್ಮಾಸ್ತ್ರದಂತಹ ಅತ್ಯಂತ ಶಕ್ತಿಶಾಲಿ ಹಾಗೂ ವಿನಾಶಕಾರಿ ಅಸ್ತ್ರವನ್ನು ಬಳಸುವ ಅವಶ್ಯಕತೆ ಇಲ್ಲ. ಸಣ್ಣ ಕಲ್ಲಿನಿಂದಲೇ ಅದನ್ನು ಓಡಿಸಬಹುದು. ಆದರೂ ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಮೂರ್ಖತನ ಮತ್ತು ಅತಿಯಾದ ಅಹಂಕಾರದ ಸಂಕೇತ. ​ತಬ್ಬಲಿ ಎಂದರೆ ಯಾರು? ಏನೂ ಇಲ್ಲದ ಅಸಹಾಯಕ ಅಥವಾ ಬಡವ ,ನಿರ್ಗತಿಕ,ಅನಾಥ ಮಗು ಎನ್ನಬಹುದು. ಶಕ್ತಿಹೀನ, ರಕ್ಷಣೆಯಿಲ್ಲದ ಜೀವದ ಮುಂದೆ ತಮ್ಮ ಶಕ್ತಿ, ಅಧಿಕಾರ ಅಥವಾ ಶೌರ್ಯವನ್ನು ಪ್ರದರ್ಶಿಸುವುದು ಹೇಡಿತನವಾಗಿದೆ.​​ಅತಿಯಾದ ಶಕ್ತಿ ಪ್ರದರ್ಶನ ಮಾಡುವುದು ವ್ಯರ್ಥ. ತಮಗಿಂತ ತೀರಾ ಸಣ್ಣವರಾದ, ಅಸಹಾಯಕರಾದ ಜನರ ಮೇಲೆ ತಮ್ಮ ಇಡೀ ಅಧಿಕಾರ ಅಥವಾ ಬಲವನ್ನು ಬಳಸಿ ಜಿಗುಟುತನ ತೋರುವ ಜನರನ್ನು ಈ ಮೇಲಿನ ಮಾತು ಎಚ್ಚರಿಸುತ್ತದೆ. “ಇಷ್ಟೊಂದು ಸಣ್ಣ ವಿಷಯಕ್ಕೆ.,ಸಣ್ಣ ವ್ಯಕ್ತಿಗೆ., ಇಷ್ಟೊಂದು ದೊಡ್ಡ ರಾದ್ಧಾಂತ ಬೇಕೇ? ಎಂದು ಕೇಳಲು ಈ ಮಾತನ್ನು  ಬಳಸಲಾಗುತ್ತದೆ.​ನ್ಯಾಯ ಮತ್ತು ಮಾನವೀಯತೆಯ ಕೊರತೆಯಲ್ಲಿ ಕರಗುತ್ತದೆ .ಯಾಕೆಂದರೆ ಬಲಿಷ್ಠರು ಯಾವಾಗಲೂ ತಮ್ಮ ಸಮಾನರಾದವರ ಜೊತೆ ಹೋರಾಡಬೇಕೇ ಹೊರತು, ಧ್ವನಿಯಿಲ್ಲದ ಅಸಹಾಯಕರ ಮೇಲಲ್ಲ. ದುರ್ಬಲರನ್ನು ಮತ್ತಷ್ಟು ತುಳಿಯುವುದು ಶೌರ್ಯವಲ್ಲ, ಅದು ಕ್ರೌರ್ಯ ಎಂಬುದನ್ನು ಈ ಮಾತು ನೆನಪಿಸುತ್ತದೆ.​ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವ ಗಾದೆ ಮಾತುಗಳು​ಇಂದಿನ ಸಮಾಜದಲ್ಲೂ  ನೂರಕ್ಕೆ ನೂರು ನಿಜವಾಗುವುದು.​ಕಛೇರಿಗಳಲ್ಲಿ ಮೇಲಧಿಕಾರಿಗಳು ಸಣ್ಣ ತಪ್ಪುಗಳಿಗಾಗಿ ಕೆಳಹಂತದ ನೌಕರರನ್ನು ಅತಿಯಾಗಿ ಶಿಕ್ಷಿಸಿದಾಗ,​ರಾಜಕೀಯದಲ್ಲಿ ಸಾಮಾನ್ಯ ಜನರ ಮೇಲೆ ಕಾನೂನಿನ ಅಸ್ತ್ರಗಳನ್ನು ಅತಿಯಾಗಿ ಪ್ರಯೋಗಿಸಿದಾಗ,​ಶ್ರೀಮಂತರು ಬಡವರನ್ನು ಹೆದರಿಸಿದಾಗ ಈ ಮಾತನ್ನು ಬಳಸಲಾಗುತ್ತದೆ.​ಸಣ್ಣ ಮತ್ತು ಅಸಹಾಯಕ ಜೀವಿಗಳ ವಿರುದ್ಧ ಬಲಪ್ರದರ್ಶನ ಮಾಡುವುದು ವೀರನ ಲಕ್ಷಣವಲ್ಲ. ಶಕ್ತಿಯುಳ್ಳವರು ದುರ್ಬಲರನ್ನು ರಕ್ಷಿಸಬೇಕೇ ಹೊರತು, ಅವರ ಮೇಲೆ ಸವಾರಿ ಮಾಡಬಾರದು. *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* ಎಂಬುದು ಕೇವಲ ಒಂದು ಮಾತಲ್ಲ, ಹೋಲಿಕೆಯಲ್ಲ; ಇದು ಮನುಷ್ಯನ ಅಹಂಕಾರ, ಅಧಿಕಾರದ ದುರ್ಬಳಕೆ ಮತ್ತು ಸಮಾಜದ ರಚನಾತ್ಮಕ ದೌರ್ಬಲ್ಯವನ್ನು ಅಗೆದು ತೋರಿಸುವ ಒಂದು ದಾರ್ಶನಿಕ ಸೂತ್ರವಾಗಿದೆ.​​ಶಕ್ತಿಯ ದುರಹಂಕಾರ ಮತ್ತು ವಿವೇಚನಾ ಶೂನ್ಯತೆಯ​ಬ್ರಹ್ಮಾಸ್ತ್ರ ಎಂಬುದು ಇಡೀ ಜಗತ್ತನ್ನೇ ನಾಶಮಾಡಬಲ್ಲ ಅತ್ಯುನ್ನತ ದಿವ್ಯಾಸ್ತ್ರ. ಅದನ್ನು ಬಳಸಲು ತಪಸ್ಸು, ಅರ್ಹತೆ ಮತ್ತು ಅತ್ಯಂತ ಕಠಿಣವಾದ ಸಂದರ್ಭವಿರಬೇಕು. ಆದರೆ, ಎದುರಿಗಿರುವ ಶತ್ರು ಯಾರು? ಒಂದು ಪುಟ್ಟ ಗುಬ್ಬಚ್ಚಿ!ಇಲ್ಲಿ ‘ಗುಬ್ಬಿ’ ಮತ್ತು ‘ಬ್ರಹ್ಮಾಸ್ತ್ರ’ ಪರಸ್ಪರ ತದ್ವಿರುದ್ಧ ಧ್ರುವಗಳು. ​ಮನುಷ್ಯನಿಗೆ ಅತಿಯಾದ ಅಧಿಕಾರ ಅಥವಾ ಸಂಪತ್ತು ಸಿಕ್ಕಾಗ ಅವನಿಗೆ ವಿವೇಚನೆ ತಪ್ಪುತ್ತದೆ ಎಂಬುದನ್ನು ಇದು ತೋರಿಸುತ್ತದೆ.​ಸಣ್ಣ ಸಮಸ್ಯೆಯನ್ನು ಪ್ರೀತಿ ಅಥವಾ ಸಮಾಧಾನದಿಂದ ಬಗೆಹರಿಸುವ ಬದಲು, ಅಹಂಕಾರದಿಂದ ದೊಡ್ಡ ರಾದ್ಧಾಂತ ಮಾಡಿಕೊಳ್ಳುವ ಮಾನಸಿಕತೆಯನ್ನು ಇದು ಎತ್ತಿ ತೋರಿಸುತ್ತದೆ. ​ನಿಜವಾದ ವೀರ ಅಥವಾ ಶಕ್ತಿವಂತ ತನ್ನ ಶಕ್ತಿಯನ್ನು ತನ್ನಷ್ಟೇ ಬಲಿಷ್ಠನಾದವನ ಎದುರು ಪ್ರದರ್ಶಿಸಬೇಕು. ಆದರೆ, ಸಮಾಜದಲ್ಲಿ ಅನೇಕರು ತಮಗಿಂತ ಮೇಲಿರುವವರ ಮುಂದೆ ಕೈಕಟ್ಟಿ ನಿಂತು, ತಮಗಿಂತ ಕೆಳಗಿರುವ ಅಥವಾ ಅಸಹಾಯಕರಾದ ತಬ್ಬಲಿಗಳ ಮೇಲೆ ತಮ್ಮ ಇಡೀ ಕೋಪ, ಅಧಿಕಾರವನ್ನು ಹರಿಸುತ್ತಾರೆ.​ತಬ್ಬಲಿ ಮ್ಯಾಲೆ ಹಾರಾಟ ಚೀರಾಟ,ಕೂಗಾಟ,ಮಾಡುತ್ತಾ,ಶಕ್ತಿ  ಇಲ್ಲದವರನ್ನು ನೋಡಿ ಆರ್ಭಟಿಸುವುದು.​ಇದು ಶೌರ್ಯದ ಸಂಕೇತವಲ್ಲ, ಬದಲಿಗೆ ಇದು ಮನುಷ್ಯನ ಒಳಗಿರುವ ಹೇಡಿತನ. ಮತ್ತು ಕೀಳರಿಮೆಯನ್ನು  ಮುಚ್ಚಿಕೊಳ್ಳಲು ಮಾಡುವ ಹತಾಶೆಯ ಪ್ರಯತ್ನವಾಗಿದೆ.​ ಸಾಮಾಜಿಕ ಮತ್ತು ರಾಜಕೀಯ ಆಯಾಮದ ಬುಡದಿಂದ ನೋಡಿದರೂ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.​ಕಾನೂನಿನ ದುರ್ಬಳಕೆಯಾಗುತ್ತದೆ. ದೊಡ್ಡ ದೊಡ್ಡ ಹಗರಣ ಮಾಡಿದವರು, ಕೋಟ್ಯಂತರ ರೂಪಾಯಿ ವಂಚಿಸಿದವರು ಕಾನೂನಿನ ಸಣ್ಣ ಸಣ್ಣ ಸರಕುಗಳನ್ನು ಬಳಸಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ಹೊಟ್ಟೆಪಾಡಿಗಾಗಿ ಸಣ್ಣ ತಪ್ಪು ಮಾಡಿದ ಬಡವನ ಮೇಲೆ ಇಡೀ ವ್ಯವಸ್ಥೆಯೇ ಮುಗಿಬೀಳುತ್ತದೆ. ಇದು ಬಡವನೆಂಬ ‘ಗುಬ್ಬಿ’ಯ ಮೇಲೆ ಕಾನೂನೆಂಬ ‘ಬ್ರಹ್ಮಾಸ್ತ್ರ’ ಪ್ರಯೋಗಿಸುವ ಜಗತ್ತಾಗಿದೆ.ಸಾವಿರಾರು​ಸಂಸ್ಥೆಗಳಲ್ಲಿ ಶೋಷಣೆಯಾಗುತ್ತವೆ. ಕಾರ್ಪೊರೇಟ್ ಜಗತ್ತಿನಲ್ಲಾಗಲಿ ಅಥವಾ ಸರ್ಕಾರಿ ಕಚೇರಿಗಳಲ್ಲಾಗಲಿ, ಮೇಲಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಥವಾ ತಮ್ಮ ಅಹಂ ತೃಪ್ತಿಗಾಗಿ ಅತ್ಯಂತ ಕೆಳಮಟ್ಟದ ನೌಕರನನ್ನು ಬಲಿಪಶು  ಮಾಡುತ್ತಾರೆ. ​ತಾತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿ ಅಧ್ಯಯನ ನಡೆಸಿದರೆ,​ನಮ್ಮ ಜನಪದರು ಪ್ರಕೃತಿಯ ನಿಯಮವನ್ನು ಚೆನ್ನಾಗಿ ಅರಿತಿದ್ದರು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಕೂ ಬದುಕುವ ಹಕ್ಕಿದೆ.​ಒಂದು ಜೀವಿಗೆ ಮತ್ತೊಂದು ಜೀವಿಯನ್ನು ನಾಶಮಾಡುವ ಶಕ್ತಿ ಇದೆ ಎಂದಮಾತ್ರಕ್ಕೆ ಅದನ್ನು ನಾಶಮಾಡುತ್ತಾ ಹೋಗುವುದು ಧರ್ಮವಲ್ಲ.​”ಅಧಿಕಾರ ಮತ್ತು ಶಕ್ತಿ ಇರುವುದು ರಕ್ಷಿಸುವುದಕ್ಕಾಗಿಯೇ ಹೊರತು ಶಿಕ್ಷಿಸುವುದಕ್ಕಲ್ಲ” ಎಂಬುದು ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದೆ. ಬ್ರಹ್ಮಾಸ್ತ್ರವನ್ನು ಹೊಂದಿರುವವನಿಗೆ ಜಗತ್ತನ್ನು ರಕ್ಷಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಬಿಟ್ಟು ಗುಬ್ಬಿಯ ಮೇಲೆ ಪ್ರಯೋಗಿಸಿದರೆ ಆ ಅಸ್ತ್ರಕ್ಕೂ ಅಪಚಾರ, ಅದನ್ನು ಬಳಸಿದವನಿಗೂ ಅಧಃಪತನ ಎಂಬುದು ಸತ್ಯ. ಜಾಗೃತಗೊಳಿಸುವ ಒಂದು ಪ್ರಶ್ನೆಯಿದೆ. ನಮಗೆ ಜೀವನದಲ್ಲಿ ಸ್ವಲ್ಪ ಅಧಿಕಾರ, ಹಣ ಅಥವಾ ಶಕ್ತಿ ಬಂದಾಗ ನಾವು ಅಹಂಕಾರದಿಂದ ಕುರುಡಾಗುತ್ತಿದ್ದೇವಾ? ನಮ್ಮ ಶಕ್ತಿಯನ್ನು ಧ್ವನಿಯಿಲ್ಲದವರನ್ನು ದಮನ ಮಾಡಲು ಬಳಸುತ್ತಿದ್ದೇವಾ? ಎಂದು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಇದು ಪ್ರೇರೇಪಿಸುತ್ತದೆ. ಶಕ್ತಿವಂತನಾದವನು ‘ಸಂಹಾರಕ’ನಾಗಬಾರದು, ‘ಪಾಲಕ’ನಾಗಬೇಕು. ಎಂಬುದೇ ಈ ಗಾದೆ ಮಾತಿನ  ಆಳವಾದ ಸಂದೇಶವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಗರ್ಭವತಿಯಾದಳುಭೂಗರ್ಭಸಂಜಾತೆಸೀತೆ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕೂಡಬಯಸುವ, ಸೇರಿ ಆನಂದಿಸುವ, ಆನಂದವನ್ನು ವರ್ಧಿಸುವ ಬಯಕೆಗಳನ್ನು ಮನದಲ್ಲಿ ಒಗ್ಗೂಡಿಸುವ ವಸಂತಕಾಲವದು ಓಡಿಬಂತು ಇಳೆಯ ಬಳಿಗೆ. ಅದೇ ಸಮಯದಲ್ಲಿ ಬುವಿಸುತೆ ರಾಮಸತಿ ಸೀತೆ ಋತುಮತಿಯಾದಳು. ಮಲ್ಲಿಗೆಯಂತಹ ಶುಭ್ರ ನಗೆಯನ್ನು ಹೊಂದಿರುವ, ಚಿಗುರಿನಂತಹ ಅಧರದಿಂದ ಶೋಭಿಸುವ, ದುಂಬಿಯ ತೆರದ ಮುಂಗುರುಳಿನಿAದ ಚೆಲುವು ಪಡೆದ, ಗಿಳಿ- ಕೋಗಿಲೆಗಳ ಮೃದು ಮಧುರ ಧ್ವನಿಯನ್ನು ತನ್ನದಾಗಿಸಿಕೊಂಡ, ಹೂವಿನಂತಹ ಕಣ್ಣಿನಿಂದ ಅಂದ ಹೆಚ್ಚಿಸಿಕೊಂಡ, ಚಂದಿರಸದೃಶ ಮೊಗದವಳಾದ ಸೀತೆ ಸೊಬಗಿನಿಂದ ಮೆರುಗು ಪಡೆದಳು ಋತುಮತಿಯಾದ ಆ ಸಮಯದಲ್ಲಿ. ಮೈನೆರೆದ ಹೆಣ್ಣು ಪೂರೈಸಬೇಕಾದ ನೀತಿನಿಯಮಗಳಷ್ಟನ್ನೂ ಅಚ್ಚುಕಟ್ಟಾಗಿ ಸಹನೆಯಿಂದ ಪಾಲಿಸಿದಳು ಪೃಥ್ವಿಸುತೆ.ನಾಲ್ಕನೆಯ ದಿನ ವಿಶಿಷ್ಟ ಸ್ನಾನವನ್ನು ಮುಗಿಸಿದಳು. ಮಿಂದು ಶುಭ್ರಳಾಗಿ ನಿಂದು ಕುಂದಿಲ್ಲದ ಇಂದುವಿನAತೆ ಶೋಭಿಸುತ್ತಿದ್ದ ಸೀತೆ ಶ್ರೀರಾಮನ ಕಣ್ಣಿಗೆ ಹೊಸಬಗೆಯಲ್ಲಿ ಕಂಡಳು. ನಿಮಿಷದಲ್ಲಿಯೇ ಮೂರೂ ಲೋಕಗಳನ್ನು ಗೆಲ್ಲುವ ಉತ್ಸುಕತೆಯಲ್ಲಿ ಮನ್ಮಥ ಹರಿತಗೊಳಿಸಿಟ್ಟ ಆಯುಧದಂದದಿ ತೋರಿದಳು. ಕಳಂಕವನ್ನೆಲ್ಲಾ ಕಳೆದು ಆ ಮದನ ಇರಿಸಿದ ಸೌಂದರ್ಯಸಾರದAತೆ ಗೋಚರಿಸಿದಳು. ಕಾಮನ ಸಂಪೂರ್ಣ ಯಶಸ್ಸದು ಸಾಕಾರಗೊಂಡAತಹ ಅನುಭವವಾಯಿತು ಶ್ರೀರಾಮನಿಗೆ, ಪೂರ್ಣ ಪರಿಶುದ್ಧತೆಯಿಂದ ತನ್ನೆದುರು ನಿಂತ ಸೀತೆಯನ್ನು ನೋಡಿದಾಗ.ಮಂದಗಮನೆಯ ಮಂದಹಾಸವದು ಅವನಿಗೆ ಮುದ್ದಾಗಿ ತೋರಿತು. ಅಂದದ ಮುಖಾರವಿಂದದವಳ ಕುಂದಿಲ್ಲದ ಅಂಗಾAಗ ಸೌಂದರ್ಯ ಅವನಿಗೆ ಮುದ ನೀಡಿತು. ಚಂದನದ ಸುಗಂಧವನ್ನು ಬೀರುತ್ತಿದ್ದ ಅವಳ ಶರೀರ, ಚಂದ್ರನAತಿದ್ದ ಅವಳ ಮುಖ ಅವನ ಮನಸ್ಸನ್ನು ತಣಿಸಿತು. ಹಣೆಯಲ್ಲಿ ತಿಲಕವಿತ್ತು. ವದನದಲ್ಲಿ ಮಂದಸ್ಮಿತ. ಉಟ್ಟ ಉಡುಗೆಯದು ಮನೋಹರವಾಗಿತ್ತು. ಮೂರು ಸರಗಳನ್ನು ಧರಿಸಿದ್ದಳು. ನೀಳವಾದ ಕೇಶರಾಶಿ ಹೊಂದಿದವಳಾಗಿದ್ದಳು.ಮಹಾವಿಷ್ಣು ಸಾಗರದ ಮಧ್ಯೆ ಹಾವಿನ ಹಾಸಿಗೆಯ ಮೇಲೆ ಲಕ್ಷಿö್ಮಯ ಜೊತೆಗೆ ಭೋಗಿಸಿದ ರೀತಿಯಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಸುಖವನ್ನು ಪಡೆಯತೊಡಗಿದ ಸೀತೆಯ ಜೊತೆಗೆ.ಎರಡು ದೇಹಗಳಾಗ, ಈಗ ಒಂದು. ಅವನು ಸಾಗರ, ಅವಳು ಬಿಂದು. ಅವನು ಸಾಸಿರ, ಅವನು ಒಂದು. ಅವಳು ಇಲ್ಲದೆ ಅವನು ಇಲ್ಲ. ಅವನ ಜೊತೆಯದು ಅವಳಿಗೆಲ್ಲ. ಅವನೀಗ ಸುರನಲ್ಲ. ಅನುರಾಗ ಪ್ರಿಯ ನಲ್ಲ. ಪುಳಕವದು ಶಾಶ್ವತ. ಅಕ್ಕರೆಯು ಅವಿರತ. ಶ್ರೀರಾಮ ಸೀತೆಯರ ಸಮರತಿಯ ಸಂಗವನು ಕಂಡು ಶ್ರಮಕೀಡಾದ ಆ ಮನ್ಮಥ. ಮದನನಿಗೆ ಶ್ರಮ, ಇಲ್ಲ ವಿರಾಮ. ಅಂಗಜ ಸಂಗದಲಿ ಸೀತೆ ಶ್ರೀರಾಮ, ಮನಕೆ ಹೊಸಬಗೆಯ ಆರಾಮ.ಈ ಬಗೆಯಲ್ಲಿ ಶ್ರೀರಾಮ ದೇಹವದು ಮಿಲನಗೊಂಡಿತು ಸೀತೆಯಲ್ಲಿ. ಮನಸ್ಸುಗಳು ಸಮಾಗಮಗೊಂಡವು ಹೊಸಬಗೆಯ ಹುರುಪಿನಲ್ಲಿ.ವರವಿಷ್ಣು ನಕ್ಷತ್ರವದು ಕೊನೆಗಾಣುತ್ತಿರುವ ಸಮಯದಲ್ಲಿ ಗರ್ಭವತಿಯಾದಳು ಆ ಭೂಗರ್ಭೆ. ಸೀತೆಯ ಗರ್ಭದ ಫಲವನ್ನು ತಿಳಿದವರಲ್ಲಿ ಕೇಳಿದ ಶ್ರೀರಾಮ. “ನಿನ್ನನ್ನವಳು ತೊರೆದು ಬೇರಾವುದೋ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುತ್ತಾಳೆ” ಎಂಬ ಭವಿಷ್ಯವದು ತಿಳಿದುಬಂತು.ಇದನ್ನರಿಯದ ಸೀತೆ ತಾಯ್ತನದ ಸುಖದ ಭಾವದಲ್ಲಿದ್ದಳು. ರಾಮಚಂದ್ರನನ್ನೇ ಹೋಲುವ ಅವಳಿ ಚಂದ್ರ ಸದೃಶರಾದ ಶಿಶುಗಳನ್ನು ಗರ್ಭದಲ್ಲಿ ಹೊತ್ತುನಿಂತಿದ್ದ ಚಂದ್ರಮುಖಿ ಸೀತೆ ಪೌರ್ಣಮಿಯ ಚಂದ್ರನAದದಿ ಶೋಭಿಸುತ್ತಿದ್ದಳು ಗರ್ಭಿಣಿಯಾದ ಸಮಯದಲ್ಲಿ.ಸೀತೆ ಗರ್ಭವತಿಯೆನಿಸಿಕೊಂಡ ನಾಲ್ಕನೆಯ ತಿಂಗಳಿಗೆ ಅವಳ ಸೀಮಂತ ಶಾಸ್ತçವನ್ನು ನಡೆಸಿದ ಶ್ರೀರಾಮಚಂದ್ರ. ವಸಿಷ್ಠ, ವಿಶ್ವಾಮಿತ್ರರ ಸಲಹೆಗನುಗುಣವಾಗಿ ನಡೆಯಿತದೋ ಸೀಮಂತ ಶಾಸ್ತç. ಮೂರು ಯೋಜನ ವಿಸ್ತೀರ್ಣತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಉತ್ಸವವನ್ನು. ಬ್ರಾಹ್ಮಣರಿಗೆ ಅವರು ಬಯಸಿದ್ದನ್ನು ಕೊಡಲಾಯಿತು. ರಾಜರುಗಳಿಗೆ, ಸುಗ್ರೀವ, ವಿಭೀಷಣ ಮೊದಲಾದವರಿಗೆ ಭೋಜನ, ಸುಗಂಧ, ತಾಂಬೂಲ, ಪುಷ್ಪ, ಅಕ್ಷತೆ, ವಸ್ತಾçಭರಣಗಳನ್ನಿತ್ತು ಗೌರವಿಸಿದ ಶ್ರೀರಾಮ. ಪೂರ್ಣ ಭೂಮಿಯದು ಹೊಗಳುವಂತೆ ನಡೆಯಿತು ಭೂಸುತೆಯ ಸೀಮಂತ ಶಾಸ್ತç.ಉತ್ಸವಕ್ಕೆ ಬಂದವರೆಲ್ಲರೂ ಸಂತಸದಿAದ ತೆರಳಿದ ಬಳಿಕ ಶ್ರೀರಾಮನ ಬಳಿಗೆ ಬಂದಳು ಸೀತೆ. ತನ್ನ ಮನದಿಂಗಿತವನ್ನು ತೋಡಿಕೊಂಡಳು. ವನವಾಸದ ಸಮಯದಲ್ಲಿ ಅವಳು ಶ್ರೀರಾಮನ ಜೊತೆ ಹಲವು ಆಶ್ರಮಗಳಿಗೆ ಹೋಗಿದ್ದಳು. ಋಷಿಪತ್ನಿಯರ ಜೊತೆಗೆ ಮಾತನಾಡಿದ್ದಳು. ಆನಂದದಿAದ ಬೆರೆತಿದ್ದಳು. ಅದರ ನೆನಪದು ಈಗ ಮೂಡಿತ್ತು ಸೀಮಂತಿನಿ ಸೀತೆಗೆ. ಈಗ ಬಸುರಿ ಬಯಕೆಯದು ಅವಳಲ್ಲಿ ಮೂಡಿತ್ತು. ಮುನಿಪತ್ನಿಯರನ್ನು ಈಗ ಮತ್ತೆ ನೋಡಬೇಕು, ಮಾತನಾಡಿಸಬೇಕು, ಅವರೊಂದಿಗೆ ದಿನ ಕಳೆಯಬೇಕು ಎಂದು ಆಸೆಪಟ್ಟಿತ್ತು ಅವನ ಮನಸ್ಸು. ಅದನ್ನೇ ಹೇಳಿಕೊಂಡಳು ಪತಿ ಶ್ರೀರಾಮಚಂದ್ರನಲ್ಲಿ. “ನಾನೀಗ ಮತ್ತೆ ವನವನ್ನು ಸೇರಿಕೊಳ್ಳುತ್ತೇನೆ. ಅನುವು ಮಾಡಿಕೊಡಬೇಕು ನೀವು” ಎಂದು ಕೇಳಿಕೊಂಡಳು. ಜನಕಸುತೆಯ ಮನದಿ ಜನಿಸಿದ್ದ ಬಯಕೆಯದು ನಗುವನ್ನು ತರಿಸಿತು ರಘುಕುಲೋತ್ತಮನಿಗೆ. ಅವಳ ಇಚ್ಛೆಯನ್ನು ಈಡೇರಿಸುವ ಭರವಸೆ ಕೊಟ್ಟ ಶ್ರೀರಾಮ.ಹೀಗಿದ್ದ ಕಾಲದಲ್ಲಿಯೇ ಒಂದು ಇರುಳು ಕನಸೊಂದನ್ನು ಕಂಡ ರಘುಪತಿ. ಗಂಗೆಯನ್ನು ದಾಟಿದ ಸೀತೆ ಕಾಡನ್ನು ಸೇರಿ ದಿಕ್ಕುದೆಸೆ ಇಲ್ಲದವರಂತೆ ಅಸಹಾಯಕಳಾಗಿ ದೆಸೆದೆಸೆಯ ಈಕ್ಷಿಸುತ, ಮರುಗುತ್ತಿರುವುದನ್ನು ಕನಸಿನಲ್ಲಿ ಕಂಡು ಕನಲಿದ ಶ್ರೀರಾಮ.ತನ್ನ ಕನಸನ್ನು ವಸಿಷ್ಠರಲ್ಲಿ ಹೇಳಿಕೊಂಡ. “ಈ ಕನಸು ಶುಭದ ಸೂಚನೆಯೋ? ಅಶುಭದ ಸುಳುಹೋ?” ಎಂದು ಕೇಳಿದ. “ಒಳ್ಳೆಯದನ್ನು ತಿಳಿಸುವ ಕನಸಲ್ಲವಿದು” ಎಂಬ ನುಡಿ ಮೂಡಿಬಂತು ಅವರಿಂದ. ಶ್ರೀರಾಮ ಮನಸ್ಸದು ಕನಸಿನ ಅಳುಕಿನಿಂದ ಮುಕ್ತವಾಗುವಂತಹ ಮಾತುಗಳನ್ನಾಡಿ ಶಾಂತಿ ಮೂಡಿಸುವ ಯತ್ನ ಮಾಡಿದರು. ಡಾ.ವಿಶ್ವನಾಥ ಎನ್‌ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-128 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸ್ಸಿನ ಪತ್ರ ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು. ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು.  ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು. “ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.

Read Post »

You cannot copy content of this page

Scroll to Top