ಮನೆಯಲ್ಲೇ ಉಳಿದರು ಜನರು

ಮನೆಯಲ್ಲೇ ಉಳಿದರು ಜನರು

ಮೂಲ: ಕ್ಯಾಥಲೀನ್ ಓ ಮಿಯರಾ ಕನ್ನಡಕ್ಕೆ: ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ವಿಶ್ವನಾಥ್ ಹೆದ್ದುರ್ಗ ಆಗ…ಮನೆಯಲ್ಲೇ ಉಳಿದರು ಜನರುಓದಿದರುಕೇಳಿದರುಪದ ಕಟ್ಟಿ ಹಾಡಿಒಟ್ಟಾಗಿ ಉಂಡುವಿರಮಿಸಿ,ಹೊಸದೆಂಬಂತೆ ರಮಿಸಿದುಡಿದು ಬೆವರಿಗೋಡೆಗೊಂದು ಕಲಾಕೃತಿ ಮಾಡಿ ಕಣ್ತುಂಬಿಕೊಂಡು.. ಮರೆತ ಹಳೆಯ ಆಟಗಳ ಆಡಿಮನೆಯಲ್ಲೇ ಉಳಿದುಹೊಸತುಗಳ ಅನ್ವೇಷಣೆ ಹೂಡಿಹೊರಗಡಿಯಿಡುವುದರ ತಮ್ಮಷ್ಟಕ್ಕೇ ತಡೆದುತಮ್ಮೊಳಗಿನ ಧ್ವನಿಯ ತದೇಕ ಕೇಳಿ..ಕೆಲವರು ಧ್ಯಾನಿಸಿಕೆಲವರು ಪ್ರಾರ್ಥಿಸಿಕೆಲವರು ನರ್ತಿಸಿತಮ್ಮ ನೆರಳನ್ನೇ ಮುಖಾಮುಖಿಯಾಗಿಸಿ ಮಾತಾಡಿ..ಬೇರೆಯದೇ ಬಗೆಯಲ್ಲಿ ಬದುಕ ಅರ್ಥೈಸಿಆರಾಮಾದರು ಅವರ ಪಾಡಿಗೆ ಅವರು.. ನಿರ್ಲಕ್ಷದಲಿ ಬದುಕಿದವರ ಗೈರಿನಲ್ಲಿ.,ಹೃದಯವಿಲ್ಲದವರ,ಅರ್ಥವಿಲ್ಲದವರಅಪಾಯಕಾರಿಗಳಹಾಜಾರಾತಿಯ ಕುಂದಿನಲ್ಲಿಧರಣಿಯೂ ಕ್ರಮೇಣ ಕಳೆಕಳೆಯಾಗಿಜಗವನ್ನಾವರಿಸಿದ್ದ ಬೇಗೆ ಅಂತೂ ಮುಗಿಯಲೂ., […]

ಅರಳದ ಮೊಗ್ಗು

ಸೌಜನ್ಯ ದತ್ತರಾಜ ಜಗದ ಜಾತ್ರೆಯೊಳಿದ್ದೂನೀನು ಲೋಕಕಂಟದ ಜಂಗಮನಿನ್ನಾಚೆ ಈಚೆ ತಿರುತಿರುಗಿಯೂಪಲ್ಲವಿಸುತ್ತಿಲ್ಲ ನಿನ್ನೊಳಗೆ ಪ್ರೀತಿ ಪ್ರೇಮ ಆಗುವುದಾದರೆ ಆಗಬೇಕಿತ್ತುಇಷ್ಟರೊಳಗೆ ನಮ್ಮಿಬ್ಬರ ಸಂಗಮಕಠೋರತೆಯನೇ ಕವಚವಾಗಿಸಿಕೊಂಡಿರುವನಿನಗೆ ಬೇಕಿಲ್ಲ ಪ್ರೇಮ ಮೋಹದ ಸಂಭ್ರಮ ಕಾದೆ ನಾನು ಶಬರಿಯಂತೆಅದೆಷ್ಟು ಕಾಲ ನಿನ್ನೊಂದು ಕಾಣ್ಕೆಗಾಗಿಕಾಣದಾದೆಯಲ್ಲ ನೀನುನನ್ನ ಪ್ರೇಮವ ಕಣ್ಣಿದ್ದೂ ಕುರುಡನಾಗಿ ಅರಳದಿರುವ ಮೊಗ್ಗಿಗಾಗಿಕಾಯಬೇಕು ತಾನೇ ಯಾವ ಹಿಗ್ಗಿಗಾಗಿನಡೆಯುತಿರುವೆವು ಇಬ್ಬರೂ ರಸ್ತೆಯತ್ತ ಇತ್ತಕೈಗೆಟುಕದ ಅದಾವುದೋ ಗುರಿಯೆಡೆಗೆ ನೋಡುತ್ತಾ **********************

ಜೀವ ತುಂಬಿದ ಚಿತ್ರ

ಬಿದಲೋಟಿ ರಂಗನಾಥ್ ಅಲೆಯುವ ಕನಸುಗಳನ್ನುಹಿಡಿದು ಮಾತಾಡಿಸಿದೆಮಣ್ಣಲ್ಲಿ ಮಣ್ಣಾದ ಅವುಗಳ ಜೀವನೋಯ್ಯುತಿತ್ತು ನೆಲದ ಪದರಗಳ್ನು ಬಿಡಿಸುತ್ತಾದಾರಿಯಿಲ್ಲದ ದಾರಿಯ ಮೇಲೆ ನಡೆದುಉಸಿರಾಡಿದ ಜೀವಗಳನ್ನು ಮುಟ್ಟಿನೆವೆಯುವ ಕಣ್ಣಂಚಿನ ದೀಪಗಳುಮರುಗುತ್ತಿದ್ದವು ಮಣ್ಣಲ್ಲಿ ಬೆರೆತು ಬೆತ್ತಲಾಗದ ಕಳಂಕಿತ ಮನಸನು ಸುಡಲುಅರೆಬೆಂದ ಜೀವ ಕೊರಗುತ್ತಿದೆಅಲೆಯುತ ನಿರಾಕಾರವಾಗಿ..ನೆಲಕೆ ಬೆನ್ನಾಕಿ. ಮಾಡಿದ ದೋಕಕೆಬೆವರಿದ ಮೆದುಳುಕರಗುತ್ತಿದೆ ಕೊರಳನು ತಬ್ಬಿಅವನೋ ಮರೆಯಲಾಗದ ನೆನಪುಮಣ್ಣಿನಲಿ ಮೂಡಿದ ಕಣ್ಣುನೋಡುತಿದೆ…ಕಾಣದ ಕಡಲಿನ ಗೆರೆಯ ಕಡೆ… ಜೀವ ತುಂಬಿದ ಚಿತ್ರಎದೆಯಲಿ ಅರಳುತ್ತಲೇ ಇದೆ. **************

ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ. ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ […]

ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊಂಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿಂದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ […]

ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ.  ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ […]

ಬಂತು ಶ್ರಾವಣ

ವೀಣಾ ರಮೇಶ್ ನಿಸರ್ಗದ ಕುಂಚದಲಿಬರೆದಳು ಶುಕ್ಲ ಪ್ರತಿಪದೆಹಸಿರ ಬಸಿರು ಹೊತ್ತುಶ್ರಾವಣದ ಶುಭಪ್ರದೆ ನವ ಶೃಂಗಾರದ ವೈಯಾರಿಮೈತುಂಬಿ ಬಂದಳುಬಿಂಕವ ತೋರಿಅಪ್ಪಿದಳು ಇಳೆಯಲಿ ಭೂರಮೆನಸುನಗೆಯ ತೂರಿ ಸಂಭ್ರಮದ ಪರ್ವಗಳ ಮಾಸಮನ ಮಾನಸದಲಿಶ್ರಾವಣಿ ತಂದಳುಮಂದಹಾಸ,ಪ್ರಕೃತಿಯ ಋತುವಿಲಾಸ ವೇದ ಮಂತ್ರಗಳ ಪಠಣಮಂಗಳ ವಾದ್ಯಗಳಶಬ್ದ ಘೋಷಣಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆಸಿಹಿಹೂರಣ **************

ನಾನೇ ರಾಧೇ…

ವಸುಂದರಾ ಕದಲೂರು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ಇನಿಯನ ಇಂಪಿನ ಕೊರಳಿನ ಕರೆಯಒಲವಿನ ಚೆಲುವಿನ ಇನಿದನಿ ಸವಿಯಮರೆಯಲಿ ಹೇಗೆ ನಾ ಮಾಧವನಾತೊರೆಯಲಿ ಹೇಗೆ ನಾ ಗಿರಿಧರನಾ ಮಾಧವ ರಾಘವ ಗಿರಿಧರ ಗೋಪಾಲಹಲಬಗೆ ಹೆಸರಲಿ ಜಪಿಸಿದೆ ಸಂಕುಲಬಾರಾ ಮಾಧವ ಮುರಳಿ ಲೋಲಾತೋರಾ ಶ್ಯಾಮಲ ಅಪಾರ ಲೀಲಾ ಹುಡುಕಲಿ ಎಲ್ಲಿ ಆ ಚೆಲುವನನುಸಹಿಸಲಿ ಹೇಗೆ ನಾ ವಿರಹವನುಮೋಹಿಸದಿರಲೆಂತು ಮಾಧವನನುತೊರೆಯುವುದೆಂತು ಘನವಂತನನು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ […]

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲುರಚ್ಚೆ ಹಿಡಿದ ಮಗುವಿನಂತೆಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆತಾಳಬಲ್ಲೆನೇಸವಾರಿ?ಕಣ್ಣಂಚಲಿಮುತ್ತಿಕ್ಕುತ್ತಿದೆ ಸೋನೆಸುಡುವ ಹರಳಿನಂತೆಒರೆಸಿಕೊಳ್ಳಲೇ ಸುಮ್ಮನೆ?ಎಷ್ಟೊಂದು ಸಂಕಟದ ಸಾಲಿದೆಸೋಲೆಂಬ ಮೂಟೆಯೊಳಗೆನಟ್ಟ ನಡು ಬಯಲಿನಲಿ ಒಂಟಿಮತ್ತು ಒಂಟಿ ಮಾತ್ರಹರಿಯಬಲ್ಲದೇ ಹರಿದಾರಿ?ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?ಸುತ್ತ ಹತ್ತೂರಿಂದ ಬಂದ ಪುಂಡಗಾಳಿ ಹೊತ್ತೊಯ್ದು ಬಿಡುವುದೇನೆಟ್ಟ ಹಗಲಿನ ಕಂಪು?ಯಾವ ದಾರಿಯ ಕೈ ಮರವೂಕೈ ತೋರುತ್ತಿಲ್ಲಮರೆತು ಹೋಗಿದೆ ದಿಕ್ಸೂಚಿಗೂಗುರುತುಕಗ್ಗತ್ತಲ ಕಾರ್ತಿಕದಲಿಹಚ್ಚುವ ಹಣತೆಯೂ ನಂಟು ಕಳಚಿದೆಮುಖ ಮುಚ್ಚಿಕೊಂಡೀತೆಬೆಳಕು ಬಯಲ ಬೆತ್ತಲೆಗೆ?ಮುಗ್ಗರಿಸಿದ ಮಧ್ಯಹಾದಿಯಮಗ್ಗಲು ಬದಲಿಸಲೇ?ನೂರೆಂಟು ನವಿಲುಗರಿಗಳನಡುವೆ ಹಾರಿದ ಮುಳ್ಳುಎದೆ ಚುಚ್ಚಿದೆ, ಕಣ್ಣು […]

ಕಾವ್ಯಯಾನ

ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ […]

Back To Top