ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವೀಣಾ ರಮೇಶ್

ನಿಸರ್ಗದ ಕುಂಚದಲಿ
ಬರೆದಳು ಶುಕ್ಲ ಪ್ರತಿಪದೆ
ಹಸಿರ ಬಸಿರು ಹೊತ್ತು
ಶ್ರಾವಣದ ಶುಭಪ್ರದೆ

ನವ ಶೃಂಗಾರದ ವೈಯಾರಿ
ಮೈತುಂಬಿ ಬಂದಳು
ಬಿಂಕವ ತೋರಿ
ಅಪ್ಪಿದಳು ಇಳೆಯಲಿ ಭೂರಮೆ
ನಸುನಗೆಯ ತೂರಿ

ಸಂಭ್ರಮದ ಪರ್ವಗಳ ಮಾಸ
ಮನ ಮಾನಸದಲಿ
ಶ್ರಾವಣಿ ತಂದಳು
ಮಂದಹಾಸ,
ಪ್ರಕೃತಿಯ ಋತುವಿಲಾಸ

ವೇದ ಮಂತ್ರಗಳ ಪಠಣ
ಮಂಗಳ ವಾದ್ಯಗಳ
ಶಬ್ದ ಘೋಷಣ
ಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆ
ಸಿಹಿಹೂರಣ

**************

About The Author

Leave a Reply

You cannot copy content of this page

Scroll to Top