ಪಾಕ

ಪಾಕ

ಕವಿತೆ ಡಾ . ಅಜಿತ್ ಹರೀಶಿ. ಎದೆಯೊಳಗೆ ಸಿಕ್ಕಿಬಿದ್ದಪದಗಳು ಸೀಳಿಹೊರಬಂದು ಘೀಳಿಡುತ್ತವೆನಮ್ಮನು ಕಟ್ಟಿಹಾಕಲುನಿನಗಾವ ಹಕ್ಕಿದೆಯೆಂದು…? ಈ ಮುರಿಯದ ಮೌನಆ ಅಕಾಲ ಪ್ರಸವಈ ಮುದವಿಲ್ಲದ ಮನಆ ಕಳೆಗೆಟ್ಟ ಮಳೆಹದ ಬಿದ್ದು ಮೊಳೆಯಲಿ ಅರ್ಧ ಗೀಚಿದ ಕವಿತೆಅಂತ್ಯ ಕಾಣದ ಕತೆಮಧ್ಯೆ ನಿಂತ ಬದುಕಿನಂತೆಮುಂದೇನೆಂಬ ಚಿಂತೆ ಅವಸರಕ್ಕೆ ಬಿದ್ದುಮುಗಿಸುವ ದಾರಿಅದಿಲ್ಲವೋ ಸದ್ದಿಲ್ಲದೆಮಾಡಬೇಕು ತಯಾರಿ…!********************

ವೃದ್ಧಾಶ್ರಮಗಳ ಸುತ್ತ

ಚಿಂತನೆ ಅರುಣ ರಾವ್ ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು […]

ಎದೆಯ ಬೆಂಕಿ

ಕವಿತೆ ವೀಣಾ ನಿರಂಜನ ನನ್ನ ಎದೆಯೊಳಗೆ ಬೆಂಕಿಯಿದೆಈ ಬೆಂಕಿಯೇನನ್ನ ಸುಡದಂತೆ ಎಚ್ಚರದಿಂದದಾಟಬೇಕಿದೆ ಹೊರಗೆನಿರೂಪಾಯಳಾದ ನನಗೆನಿರುಪದ್ರವಿ ಕವಿತೆಯೇಉತ್ತರ ಹೇಳಬೇಕುಅಕ್ಷರಗಳು ಬೇಯದಂತೆಶಬ್ದಗಳು ಬೂದಿಯಾಗದಂತೆಈ ಬೆಂಕಿಯಿಂದಲೇಬೆಳಕ ಹೊತ್ತಿಸ ಬೇಕಿದೆ ಕತ್ತಲು ಮಗ್ಗುಲು ಬದಲಾಯಿಸಿನಾಳೆ –ಬೆಳಗಾಗುವುದು ಮತ್ತೆಸುಡುವ ಸೂರ್ಯ ಹೊತ್ತು ತರುತ್ತಾನೆಬೆಳಕಿನ ಪುಂಜ ಎಂದಿನಂತೆ ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆಕವಿತೆ –ನೀನೇಕೆ ಮರವಾಗಿ ನಿಲ್ಲ ಬಾರದುಸುಡುವಾಗ್ನಿ ತಣ್ಣಗಾದೀತುನಿನ್ನ ತಂಗಾಳಿಯ ಸ್ಪರ್ಶದಿಂದಗಾಳಿ, ಬೆಳಕು ಮತ್ತು ಕವಿತೆಈ ಬೆಂಕಿಯೆದುರುಎದೆ ಸೆಟೆಸಿ ನಿಲ್ಲುವುದಾದರೆಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆಮತ್ತುಸತ್ಯವಾಗಿಯೂ ಅಲ್ಲಿ ಹೊಸತೊಂದುಕವಿತೆ ಬದುಕನ್ನು ಚುಂಬಿಸುತ್ತದೆಬದುಕಿಗಾಗಿ ಹಂಬಲಿಸುತ್ತದೆ.                    **********************

ಹಾವು ತುಳಿದೇನೇ?

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, […]

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು

ಕವಿತೆ ಪ್ಯಾರಿಸುತ ಅದು ಒಂದು ದಾರಿಬುದ್ಧ ಹೋಗುತ್ತಿದ್ದ ದಾರಿಯದುಅವನು ಎದ್ದು ಹೋದ ಸಮಯಕ್ಕೆನಾನೂ ಎದ್ದು ಯಾರಿಗೂ ಹೇಳದೆಹೋಗಿಬಿಟ್ಟೆ;ಅವನಿಗೆ ಕಂಡಂತೆ ನನಗೆ ಯಾವಹೆಣವಾಗಲಿ,ಮುದಿಯನಾಗಲಿಯಾರೂ ಒಬ್ಬರೂ ಸಿಗಲೇ ಇಲ್ಲಅಥವಾನನ್ನ ಕಣ್ಣೇ ಕಾಣಲಿಲ್ಲವೋ ಗೊತ್ತಿಲ್ಲನಾನು ಮಾತ್ರ ಅವನು ಸಿಗುವಭರವಸೆಯ ಭರದಲ್ಲಿ ಹೆಜ್ಜೆಗಳನ್ನುಹಾಕುತ್ತಲೇ ಹೋಗುತ್ತಿದ್ದೆನನ್ನ ಚಪ್ಪಲಿಗಳೂ ಅದೇ ಭರವಸೆಯನ್ನುಹುಟ್ಟು ಹಾಕಿದ್ದವುಒಳಗೊಳಗೆ ಬುದ್ಧನಾಗುವ ಜಂಬಕಾರಂಜಿಯಂತೆ ರಂಜಿಸುತ್ತಿತ್ತುನಾನು ರಾಜನ ಮಗನಲ್ಲದಕ್ಕೋ,ಗುಡಿಸಲು ಹೊರತು ಬೇರೇನೂಇಲ್ಲದಕ್ಕೋತಿಳಿಯಲಿಲ್ಲ ಮತ್ತೆ ಮುಂದೆ ಹೆಜ್ಜೆ ಹಾಕಿದೆಕಾಡೆಲ್ಲ ಅಲೆದರೂ ಯಾವ ಪಾಪಪ್ರಜ್ಞೆಯುಕಾಡದಿರುವದುನನ್ನಲ್ಲೂ ಆಶ್ಚರ್ಯ ಉಂಟು ಮಾಡಿತ್ತುಅಲ್ಲಿಂದ ನೇರವಾಗಿ ಪಟ್ಟಣದ ಎದೆಯ ಮೇಲೆನಡೆಯುತ್ತಿದ್ದೆಗುಡಿಯ ಪಕ್ಕ ಹಸಿವಿಗಾಗಿ […]

ಕರೆ ಮಾಡಬೇಡಿ…ಪ್ಲೀಸ್

ಕವಿತೆ ಸುಜಾತ ಲಕ್ಷ್ಮೀಪುರ. ಒಂದೇ ಸಮನೆ ಎಡಬಿಡದೆಝಣಗುಟ್ಟುವ ಪೋನುಕೋಪ ನೆತ್ತಿಗೇರಿಸಿ ಸಿಟ್ಟು ಮತ್ತು ಅಳುಒತ್ತರಿಸಿಕೊಂಡು ಬಂದುಕಣ್ಣೀರಾಗಿ ಹರಿದರೂಬಿಕ್ಕಳಿಕೆ ಹಾಗೇ ಉಳಿದಿದೆ. ದಯವಿಟ್ಟು ಕರೆ ಮಾಡಬೇಡಿನಾನು ಎಷ್ಟು ಬಾರಿ ಹೇಳಲಿಹೌದು ನಾನು ಕರೋನಾ ಸೋಂಕಿತಳು.ಸೋಂಕಿತಳೆ. ಮತ್ತೆ ಮತ್ತೆ ವಿಳಾಸ ಖಾತರಿಆಗಬೇಕೇಕೆ!??‌ಹೊರಟಿಲ್ಲಾ ಇನ್ನೂ ವಿಳಾಸವಿಲ್ಲದ ಊರಿಗೆ. ದೇಹದ‌ ನೋವಿಗೇನೋಗುಳಿಗೆಗಳಿವೆ…ಯಾರಾದರೂ ಕಳಿಸಿಕೊಡಿವಿಳಾಸ ತಿಳಿಸುವೆಸೋಂಕಿತಳೆಂಬ ಹೆಸರು ಕಿತ್ತಾಕುವ ಗುಳಿಗೆ. ಹಾಲು,ತರಕಾರಿ,ದಿನಸಿತಂದು ಕೊಡುವವರಿಲ್ಲದೆಕಿಟಕಿ ಸರಳುಗಳ ಆಚೆ ಸತ್ತ ಮನಸ್ಸಿನ ಮಂದಿ ನೋಡುತ್ತಾ ಕಾಲದೂಡುತ್ತಿದ್ದೇನೆ. ನಾನೀಗ ವೈರಾಣುವಿನ ವಿರುದ್ದಗಟ್ಟಿಯಾಗಿ ನಿಂತಿದ್ದೇನೆ.ಪದೇ ಪದೇ ಕರೆಮಾಡಿಪ್ರಶ್ನಿಸಬೇಡಿ ನಿರುಮ್ಮಳವಾಗಿರಲು ಬಿಟ್ಟುಬಿಡಿ. […]

ಯಕ್ಷಿಣಿ ಗಾನ

ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ ಪೂರ್ಣಿಮಾ ಸುರೇಶ್ ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು  ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ.  ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ  ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು.    ರಾತ್ರಿ ನೋಡಿದ […]

ಸಂವಿಧಾನ ಶಿಲ್ಪಿಗೆ

ಅನುವಾದ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ. ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು […]

ಜಂಜಾಟದ ಬದುಕು

ಕವಿತೆ ಪೂಜಾ ನಾರಾಯಣ ನಾಯಕ ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕುಕಂಡರೇನಂತೆ, ಅತ್ತ ಪೋದರೆ ಸಿಗದಾ ಹಕ್ಕುಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗನಿತ್ಯವೂ ದಿನಪೂರ್ತಿ ಜಂಜಾಟಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳುನಿಬ್ಬಣದಂತೆ ಸಾಗುತಿವೆಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆಸಹಿಸಲಾಗದ ಸಂಕಟಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,ಕುಹಕ ಮಾತುಗಳೇಳುತಿವೆಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.ತಪ್ತ ಹೃದಯಕೆ ತಿರಸ್ಕಾರಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿದಿಕ್ಕು-ಹಕ್ಕುಗಳಿಲ್ಲದೇಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆನಿತ್ಯವೂ […]

ಅನುವಾದ ಸಂಗಾತಿ

ಕವಿತೆ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಸಂವಿಧಾನ ಶಿಲ್ಪಿಗೆ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ […]

Back To Top