ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಂಗೆಟ್ಟ ಭೂಮಿಗೆ
ತಂಪೆರೆಯಬೇಕಾಗಿದೆ
ಕೋಟಿ ಕೋಟಿ ಜನ
ಬದುಕಬೇಕಾಗಿದೆ
ಭೂಮಿ ಸುಡು ಸುಡು ಕೆಂಡವಾದರೆ
ತಾಯಿಯ ಹಾಲೆ ನಂಜಾದಂತೆ
ಇರುವುದು ಒಂದೇ ಭೂಮಿ
ಬೇರಿಲ್ಲ ಕಾಣಿರೋ ಸತ್ಯವ
ಚಂದ್ರನ ಮೇಲೆ ಇಳಿದಾಯಿತು.
ಬರಿ ಬರಡೋ ಬರಡು
ಮಂಗಳ ಗುರು ಶನಿಗಳನ್ನೆಲ್ಲ ಸುತ್ತಿ ಆಯಿತು
ಎಲ್ಲೆಲ್ಲೂ ಜೀವದ ಸುಳಿವಿಲ್ಲ
ಯಂತ್ರದೂತರು
ಸಕಲ ಗ್ರಹಗಳ ಸಂದೇಶವಿತ್ತರು
ಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲ
ಜೀವರಾಶಿ ತುಂಬಿ ತುಳುಕುವ
ಧರೆಯನ್ನೀಗ ಕಾಪಿಟ್ಟುಕೊಳ್ಳಬೇಕು
ಜೀವದ ಉಸಿರಿಗೆ
ಜೀವ ಜಲ ಸಿಂಚನವಾಗಬೇಕು
ಓ ಮನುಜ ಅತಿರೇಕದ ಬುದ್ಧಿ ಬೇಡ
ಅತಿ ಆಧುನಿಕತೆಯ ಬೆನ್ನ ಹಿಂದೆ ಓಡಬೇಡ
ಎಲ್ಲಿಯಾದರೂ ಯಾವಾಗಲಾದರೂ
ಎಡವಿ ಬಿದ್ದೆನೆಂಬ ಎಚ್ಚರವಿರಲಿ
ಕಾಡು ಬೆಳೆಸಬೇಕಿದೆ
ಶಕ್ತಿಮೂಲಗಳ ದುರ್ಬಳಕೆ ನಿಲ್ಲಿಸಬೇಕಿದೆ
ಭೂಮಿಗೆ ಭಾರವಾಗುವ ಪದಾರ್ಥಗಳನ್ನ ತ್ಯಜಿಸಬೇಕಿದೆ ವಿಜ್ಞಾನ ತಂತ್ರಜ್ಞಾನದ ಹೆಸರಿನಲ್ಲಿ
ಭಯಾನಕ ಭವಿಷ್ಯವನ್ನು
ಕಟ್ಟ ಹೊರಟಿದ್ದೇವೆ
ತಂತ್ರಜ್ಞಾನ ಮಂಡಿಯೂರಿದೆ
ಅಣುಯುದ್ಧ ಬರಗಾಲ ದುಃಖ ದಾರಿದ್ರ್ಯ
ಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರು
ಜೀವಸಮತೋಲನವಿರಲಿ
ಪ್ರಗತಿ ಇರಲಿ
ಮಾರಕವಾಗದಂತಿರಲಿ
ಮಾರ್ಗ ಬದಲಿಸೋಣ
ವಿಚಾರಗಳು ಬದಲಾದಂತೆ
ಜಗದ ಜೀವ ಸಂಕುಲ
ಉಳಿಯಬೇಕು
ಭೂಮಿ ತಾಯಿಯ ಒಡಲು
ತಣ್ಣಗಾಗಬೇಕು


About The Author

Leave a Reply

You cannot copy content of this page

Scroll to Top