ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಮೀನಾಕ್ಷಿ‌ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ”

ಕಾವ್ಯ ಸಂಗಾತಿ ಡಾ.ಮೀನಾಕ್ಷಿ‌ ಪಾಟೀಲ್ “ಬಳಲುತಿದೆ ಭೂಮಿ” ಕಂಗೆಟ್ಟ ಭೂಮಿಗೆತಂಪೆರೆಯಬೇಕಾಗಿದೆಕೋಟಿ ಕೋಟಿ ಜನಬದುಕಬೇಕಾಗಿದೆಭೂಮಿ ಸುಡು ಸುಡು ಕೆಂಡವಾದರೆತಾಯಿಯ ಹಾಲೆ ನಂಜಾದಂತೆಇರುವುದು ಒಂದೇ ಭೂಮಿಬೇರಿಲ್ಲ ಕಾಣಿರೋ ಸತ್ಯವಚಂದ್ರನ ಮೇಲೆ ಇಳಿದಾಯಿತು.ಬರಿ ಬರಡೋ ಬರಡುಮಂಗಳ ಗುರು ಶನಿಗಳನ್ನೆಲ್ಲ ಸುತ್ತಿ ಆಯಿತುಎಲ್ಲೆಲ್ಲೂ ಜೀವದ ಸುಳಿವಿಲ್ಲಯಂತ್ರದೂತರುಸಕಲ ಗ್ರಹಗಳ ಸಂದೇಶವಿತ್ತರುಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲಜೀವರಾಶಿ ತುಂಬಿ ತುಳುಕುವಧರೆಯನ್ನೀಗ ಕಾಪಿಟ್ಟುಕೊಳ್ಳಬೇಕುಜೀವದ ಉಸಿರಿಗೆಜೀವ ಜಲ ಸಿಂಚನವಾಗಬೇಕುಓ ಮನುಜ ಅತಿರೇಕದ ಬುದ್ಧಿ ಬೇಡಅತಿ ಆಧುನಿಕತೆಯ ಬೆನ್ನ ಹಿಂದೆ ಓಡಬೇಡಎಲ್ಲಿಯಾದರೂ ಯಾವಾಗಲಾದರೂಎಡವಿ ಬಿದ್ದೆನೆಂಬ ಎಚ್ಚರವಿರಲಿಕಾಡು ಬೆಳೆಸಬೇಕಿದೆಶಕ್ತಿಮೂಲಗಳ ದುರ್ಬಳಕೆ ನಿಲ್ಲಿಸಬೇಕಿದೆಭೂಮಿಗೆ ಭಾರವಾಗುವ ಪದಾರ್ಥಗಳನ್ನ ತ್ಯಜಿಸಬೇಕಿದೆ ವಿಜ್ಞಾನ ತಂತ್ರಜ್ಞಾನದ ಹೆಸರಿನಲ್ಲಿಭಯಾನಕ ಭವಿಷ್ಯವನ್ನುಕಟ್ಟ ಹೊರಟಿದ್ದೇವೆತಂತ್ರಜ್ಞಾನ ಮಂಡಿಯೂರಿದೆಅಣುಯುದ್ಧ ಬರಗಾಲ ದುಃಖ ದಾರಿದ್ರ್ಯಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರುಜೀವಸಮತೋಲನವಿರಲಿಪ್ರಗತಿ ಇರಲಿಮಾರಕವಾಗದಂತಿರಲಿಮಾರ್ಗ ಬದಲಿಸೋಣವಿಚಾರಗಳು ಬದಲಾದಂತೆಜಗದ ಜೀವ ಸಂಕುಲಉಳಿಯಬೇಕುಭೂಮಿ ತಾಯಿಯ ಒಡಲುತಣ್ಣಗಾಗಬೇಕು ಡಾ.ಮೀನಾಕ್ಷಿ ಪಾಟೀಲ್

ಡಾ.ಮೀನಾಕ್ಷಿ‌ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಸವಿತಾ ದೇಶಮುಖ ಭಾರತಕ್ಕೆ ಸ್ವಾತಂತ್ರವೇನೋ ದೊರೆತಿತ್ತು ನಿಜ ಆದರೆಅನೇಕ ಸ್ಥಿತ್ಯಂತರಗಳು ಹಾಗೂ ಸಮಸ್ಯಗಳ ಕುರಿತು ಪರಿಹಾರ ಹುಡುಕಬೇಕಾಗಿತ್ತು.ಇಂತಹ ಕಾಲದಲ್ಲಿ ಜನತೆಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗ ಬೇಕೆಂತಹ ಕಾರ್ಯಗಳನ್ನು ಹಮ್ಮಿಕೊಳ್ಳ ಬೇಕಾಗಿದನ್ನು ಅರಿತುಕೊಂಡಿದ್ದರು ಜಯದೇವಿ ತಾಯಿಯವರು ಹಾಗೂ ಅವರ ಸಂಘಟನಾ ಸದಸ್ಯರು. ೧೯೪೭ ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತದ್ದು ಸಂಸ್ಥಾನಗಳ ವಿಲೀನಿಕರಣ …… ಸುಮಾರ ೫೬೫ ಕ್ಕೂ ಹೆಚ್ಚು ಸಂಸ್ಥಾನಗಳು ಇದ್ದವು ಮತ್ತು ಅವುಗಳಿಗೆ ಸ್ವತಂತ್ರವಾಗಿರುವದೇ ಅಥವಾ ಭಾರತ ಇಲ್ಲವೇ ಪಾಕಿಸ್ತಾನಕ್ಕೆ ಸೇರೋದು ಎಂಬ ಆಯ್ಕೆ ನೀಡಲಾಗಿತ್ತು…..ಇದರಿಂದ ಅನೇಕ ಸಮಸ್ಯೆಗಳು ಉಂಟಾದವು. ಸ್ವಾತಂತ್ರ್ಯದ ಆಸೆ ಯಿಂದಾಗಿ ಕೆಲವು ರಾಜರು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೂ ಸೇರುವುದನ್ನು ಬಯಸದೇ, ಸ್ವತಂತ್ರ ರಾಷ್ಟ್ರವಾಗಿರಲು ಯತ್ನಿಸಿತ್ತು ಅದುವೇ* ಹೈದರಾಬಾದ ಸಂಸ್ಥಾನ*…..ಇದರಿಂದ ದೇಶ ತುಂಡಾಗಿ ಹೋಗುವ ಭೀತಿ  ಉಂಟಾಯಿತು.ಧರ್ಮ ಮತ್ತು ಭೌಗೋಳಿಕವಾಗಿ ಕೆಲವು ಸಂಸ್ಥಾನಗಳಲ್ಲಿ ಜನಸಂಖ್ಯೆ ಮತ್ತು ರಾಜರ ಧರ್ಮ ಭಿನ್ನವಾಗಿತ್ತು.*ಜುನಾಗಢದ*ಲಿ….ಹಿಂದೂ ಜನರು…ಮುಸ್ಲಿಂ ನವಾಬ ಇದ್ದನು..ಅದೇ‌ ರೀತಿ ಕಾಶ್ಮೀರದಲ್ಲಿಮುಸ್ಲಿಂ ಜನರು…ಹಿಂದೂ ರಾಜನಿದ್ದ….ಇದರಿಂದ ಗೊಂದಲ, ಹೋರಾಟಗಳು ನಡೆದವು. ಇಲ್ಲಿ ಮೈಸೂರು ಸಂಸ್ಥಾನ ಒಂದು ಪ್ರಮುಖ ಸಂಸ್ಥಾನವಾಗಿತ್ತು….ಮೈಸೂರು ಅರಸರು ಭಾರತ ಸೇರುವುದನ್ನು ವಿರೋಧಿಸಿದಾಗ ಜನರು ದಂಗೆ ಎದ್ದಾಗ ಅಲ್ಲಿ ಗೋಲಿಬಾರ್ ಆಗಿ ಕೆಲ ಜನರು ಅನಾಹುತಕ್ಕೆ ಇಡಾದರು…. ಇದನ್ನು ಖಂಡಿಸಿ *ಜಯದೇವಿ ತಾಯಿಯವರು* ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟ ಧೀರ ಮಹಿಳೆ.ಅದರಂತೆ ಮುಂದೆ ಮಹಾರಾಜ ಜಯಚಾಮರಾಜೇಂದ್ರ ವಡಿಯರ.  ೯ ಆಗಸ್ಟ್೧೯೪೭ ರಂದು ಭಾರತಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು.ಮುಂದೆ ಮೈಸೂರು ಶಾಂತಿಯುತವಾಗಿ ಭಾರತಕ್ಕೆ ಸೇರಿತು‌. ಇಲ್ಲಿ ಸಮಸ್ಯೆ ಉದ್ಭವಿಸಿದ್ದು ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ……!!! ಹೈದರಾಬಾದ್ ಸಂಸ್ಥಾನವು ಭಾರತದ ಅತಿ ದೊಡ್ಡ ಮತ್ತು ಶ್ರೀಮಂತ ಸಂಸ್ಥಾನವಾಗಿತ್ತು.ಜನಸಂಖ್ಯೆಯಲ್ಲಿ ಬಹುಪಾಲು ಹಿಂದೂಗಳು, ಆದರೆ ಆಡಳಿತ ಮುಸ್ಲಿಂ ನಿಜಾಮನ ಕೈಯಲ್ಲಿ ಇತ್ತು.ನಿಜಾಮ್ ತನ್ನ ರಾಜ್ಯವನ್ನು “ಸ್ವತಂತ್ರ ದೇಶ”ವಾಗಿ ಉಳಿಸಿಕೊಳ್ಳಲು ಬಯಸಿದ “ಮಿರ್ ಒಸ್ಮಾನ್ ಅಲಿ ಖಾನನು ಭಾರತಕ್ಕೂ ಸೇರುವುದಿಲ್ಲ,ಪಾಕಿಸ್ತಾನಕ್ಕೂ ಸೇರುವುದಿಲ್ಲವೆಂದು…..“ಸ್ವತಂತ್ರ ಹೈದರಾಬಾದ್ ರಾಷ್ಟ್ರ” ನಿರ್ಮಿಸಲು ಬಯಸಿದ ಅವರು ಭಾರತ ಸರ್ಕಾರದ ಜೊತೆ  “ಸ್ಟ್ಯಾಂಡ್ ಸ್ಟಿಲ್” ಒಪಂದ ಮಾಡಿಕೊಂಡು ಸಮಯ ಕಳೆಯಲು ಪ್ರಯತ್ನಿಸಿದ. ನಿಜಾಮನ ಆಡಳಿತದಲ್ಲಿ, ವಿಶೇಷವಾಗಿ ರಜಾಕಾರ್ ದಳದ ಕಾರಣದಿಂದ ಜನರು ತುಂಬಾ ಸಂಕಷ್ಟ ಅನುಭವಿಸಿದರು.ಕಾಸಿಂ ರಿಜ್ವಿ ನೇತೃತ್ವದಲ್ಲಿ ರಜಾಕಾರ ಸಂಘಟನೆಗ್ರಾಮಗಳಲ್ಲಿ ದಾಳಿ, ಹಿಂಸೆ, ಲೂಟಿ ಮಹಿಳೆಯರ ಮೇಲೆ ಅತ್ಯಾಚಾರಗಳಂಥ ದುಷ್ಕೃತ್ತಿಗಳು ನಡೆದವು..ಇದರಿಂದ ಸಾವಿರಾರು ಜನರು ಮನೆಬಿಟ್ಟು ಓಡಿನಿರಾಶ್ರಿತರ ಆಗಿ ಬೇರೆ ಪ್ರದೇಶಗಳಿಗೆ ಹೋದರುರೈತರು ಮತ್ತು ಸಾಮಾನ್ಯ ಜನರ ಸ್ಥಿತಿ ಹೇಳತೀರದಾಗಿತ್ತು….. ಜಮೀನ್ದಾರರು ದೌರ್ಜನ್ಯಕೆ ಒಳಪಟ್ಟು ಭಾರೀ ತೆರಿಗೆ ಕಟ್ಟಬೇಕಾಗಿ ಬಂತು…ಬಡ ರೈತರು ಹಿಂಸೆಗೆ ಒಳಗಾದರು…..ಇದಕ್ಕೆ ಪ್ರತಿಯಾಗಿಹೈದರಾಬಾದ್ ಜನರು ಸ್ವಾತಂತ್ರ್ಯ ಬಂದರೂ ಕೂಡಸ್ವಾತಂತ್ರ್ಯದ ಸುವಾಸನೆ ಅನುಭವಿಸಲಿಲ್ಲ… ನಿಜಾಮನ ಸ್ವತಂತ್ರವಾಗಿ ರಾಜ್ಯ ಕಟ್ಟುವ ಆಸೆ ಜನರಿಗೆ ಸಂಕಷ್ಟವಾಯಿತು…ಹೈದರಾಬಾದ್ ಸಂಸ್ಥಾನದಲ್ಲಿ ಮಿರ್ ಒಸ್ಮಾನ್ ಅಲಿ ಖಾನ್ ಅವರ ಆಡಳಿತದ ಕೊನೆಯ ದಿನಗಳಲ್ಲಿ, ವಿಶೇಷವಾಗಿ ರಜಾಕಾರ್ ಹಿಂಸಾಚಾರದ ಸಮಯದಲ್ಲಿ, ಸಾವಿರಾರು ಜನರು ನಿರಾಶ್ರಿತರಾಗಿ ಭಾರೀ ಸಂಕಷ್ಟ ಅನುಭವಿಸಿದರು. ರಜಾಕಾರ್ ದಾಳಿಗಳು ಹಠಾತಆಗಿ ನಡೆಯುತ್ತಿತ್ತುಗ್ರಾಮಗಳಲ್ಲಿ ಹತ್ಯೆ, ಬೆಂಕಿ ಹಚ್ಚುವುದು, ದೋಚಾಟ ಸಾಮಾನ್ಯವಾಗಿತ್ತು ಜನರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಯಿತು….ಮನೆಗಳನ್ನು ಸುಟ್ಟುಹಾಕುವುದು ಧಾನ್ಯ, ಪಶು, ಆಸ್ತಿ ದೋಚಿಕೊಳ್ಳುವಂಥ ದುಷ್ಕೃತ್ಯಗಳು ನಡೆದವು. ಒಂದೇ ರಾತ್ರಿಯಲ್ಲಿ ಜನರು ಎಲ್ಲವನ್ನೂ ಕಳೆದುಕೊಂಡರು.  ಮಹಿಳೆಯರ ಮೇಲಿನ ಹಿಂಸೆ ಅತ್ಯಾಚಾರ, ಅವಮಾನಕಾರಿ ವರ್ತನೆಯಿಂದಾಗಿ ಕುಟುಂಬಗಳು ಭೀತಿಯಿಂದ ಊರು ಬಿಟ್ಟು ಹೋಗುವ ಪರಿಸ್ಥಿತಿ  ಬಂದಿತು,ಆಹಾರ ಮತ್ತು ಆಶ್ರಯದ ಕೊರತೆಯಿಂದಾಗಿ ಓಡಿಹೋಗುವಾಗ ಆಹಾರ ಇಲ್ಲದೆ ನರಳಿದರು ….ಚಿಕ್ಕ ಮಕ್ಕಳೊಂದಿಗೆ ಕಾಡು, ಹೊಲಗಳಲ್ಲಿ ಅಲೆದಾಡಲಾರಂಭಿಸಿದರು.ಹಸಿವು, ದಾಹ, ರೋಗಗಳಿಂದ ನರಳಿದರು. ಓಡಾಟದಲ್ಲಿ ಕುಟುಂಬದವರು ಬೇರೆಯಾದರು ಮಕ್ಕಳು, ಮಹಿಳೆಯರು ಕಳೆದುಹೋಗುವ ಘಟನೆಗಳು ನಡೆದವು…. ಹೀಗಾಗಿಹೈದರಾಬಾದ್ ಸಂಸ್ಥಾನದ ಜನರು ಹತ್ತಿರದ *ಮೈಸೂರು ಪ್ರದೇಶ *…ಇಂದಿನ ಕರ್ನಾಟಕಕ್ಕೆ ಸುರಕ್ಷಿತ ಪ್ರದೇಶಗಳಿಗೆ ಕುಟುಂಬ ವನ್ನು ರವಾನಿಸಿದರು.ಬಳ್ಳಾರಿ,ರಾಯಚೂರು ಪ್ರದೇಶಗಳಿಗೆ ಹಲವರು ಹೋದರು……ಇಲ್ಲಿ ಜನರು ತಾತ್ಕಾಲಿಕ ಆಶ್ರಯ ಪಡೆದರು. ಇನ್ನು ಹಲವರು* ಬಾಂಬೆ ಪ್ರೆಸಿಡೆನ್ಸಿ* ಭಾಗಗಳು  ಅಂದರೆ ಇಂದಿನ ಮಹಾರಾಷ್ಟ್ರ. ಸೋಲಾಪುರ,ಪೂಣೆಗಡಿ ಪ್ರದೇಶಗಳಿಗೆ ಹೆಚ್ಚಿನ ಜನರು ಹರಿದು ಬಂದರು. ಇನ್ನು ಹಲವರು *ಮದ್ರಾಸ್ ಪ್ರೆಸಿಡೆನ್ಸಿ *ಭಾಗಗಳು ಇಂದಿನ ಆಂಧ್ರಪ್ರದೇಶ ಮತ್ತು ತಮಿಳುನಾಡು, ಕುರ್ನೂಲ್,ಗುಂಟೂರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡರು…. ಎಲ್ಲ ಪ್ರದೇಶಗಳಲ್ಲಿ ಅಲ್ಲಲ್ಲಿ ನಿರಾಶ್ರಿತ್ರಿಗೆ ಶಿಬಿರಗಳಲ್ಲಿ ತಂಗಿದರು.ಸರ್ಕಾರ ಮತ್ತು ಸಮಾಜದಿಂದ ಸ್ವಲ್ಪ ಸಹಾಯ ದೊರೆತರೂ ಅನಿಶ್ಚಿತ ಭವಿಷ್ಯ “ನಮ್ಮ ಊರು ಯಾವಾಗ ಮರಳಿ ಸಿಗುತ್ತೆ?” ಎಂಬ ನೋವು ಹೊತ್ತು ಬಾಳುತ್ತಿದ್ದರು. *ಈ ಸಮಯದಲ್ಲಿ ಸಾವಿರಾರು ಜನರು ಸೊಲ್ಲಾಪುರದತ ಧಾವಿಸಿದರು ರಜಾಕಾರರ ರಕ್ಕಸಿಯ ದವಡೆಗೆ ಸಿಲುಕಿದ ನಿರಾಶ್ರಿತರಿಗೆ ಅನ್ನ ಅರಿವೆ ಆಶ್ರಯವನ್ನು ಜಯದೇವಿ ತಾಯಿಯವರು ಕೊಟ್ಟ‌ ಸಲುಹಿದರು* ಮನೆಮಾರ ತೊರೆದಾರ, ಕನವರೆಸಿ ಬಂದಾರಅನ್ನ ನೀರಿಗೆ ದಿಕ್ಕಿಲ್ಲ ,ನನ್ನ ಜನಸೊನ್ನಲಿಗಿ ದಾರೀ ಹಿಡಿದಾರ !! ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿಗೆ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು.  ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ಬಡವರು ದಲಿತರ ಬದುಕನ್ನು ತಮ್ಮ ಹಿತಾಸಕ್ತಿಗಾಗಿ ನಾಶ ಮಾಡುತ್ತಿದ್ದಂತೆ ಜಮೀನ್ದಾರಿ ವರ್ಗಕ್ಕೆ ವೆತರಿಕ್ತವಾಗಿ ಜನಪರ ಕೆಲಸವನ್ನು ಮಾಡುತ್ತಾ ಬಂದರು.  ಶಾಲಾ ವಿದ್ಯಾರ್ಥಿಗಳಿಗೆ ಕುಂಟೋಜಿ ಮಠದಲ್ಲಿ ಇವರಿಗೆ ವ್ಯವಸ್ಥೆ ಮಾಡಲಾಯಿತು. ನಿರಾಶ್ರಿತರಿಗೆ  ಬೇಕಾದ ಸಾಮಾನುಗಳು ದವಸ ಧಾನ್ಯ ಪಟ್ಟಿಯನ್ನು ಮಾಡಿ ಉದ್ಯಮಿ ಪತಿಗಳು ನಿಗದಿತ ಸ್ಥಳಕ್ಕೆ ತಂದು ತಲುಪಿಸುವಂಥ ಯೋಜನೆಗಳನ್ನು ಹಾಕಿದರು. ಇಂಥ ಕೆಲಸಗಳಲ್ಲಿಜಯದೇವಿ ತಾಯಿಯವರ ಜೊತೆಗೂಡಿದವರು  ಶ್ರೀಮತಿ ಘಾಟಿಗೆ ಸುಮಿತ್ರಾಬಾಯಿ ,ವಾರದ ಬಾಬಾ ಸಾಹೇಬ ,ನಾಗಪ್ಪ ಕಾಡದಿ, ಚಾಕುತಿ ಈರಮ್ಮ, ಸಂಗವ್ವ ಮಡಿಕೆ ಮೊದಲಾದ ಪ್ರಮುಖರು ಸಭೆಯೊಂದು ಸೇರಿ ಸೌಲಭ್ಯ ಒದಗಿಸುವ ನಿರ್ಣಯವನ್ನು ತೆಗೆದುಕೊಂಡರು .ಬೀದರ್ ರೈಚೂರ್ ಕಲ್ಬುರ್ಗಿಯಿಂದ ವಲಸಿ ಬಂದ ಮಕ್ಕಳಿಗೆ ಕಾಡದೇ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು . ಜಯದೇವಿ ತಾಯಿಯವರು ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು …ಅವರಿಗಾಗಿ ೫ ಲಕ್ಷ ೮೦೧೪ ರೂಪಾಯಿಗಳನ್ನು ಸಂಗ್ರಹಿಸಿದರು . ಸಾವಿರಾರು  ಸೀರೆಗಳು ಮತ್ತು ಅಷ್ಟೇ ಬೆಲೆ ಬಾಳುವ ರಘ ಪಡೆದರು. ಸರಿಯಾಗಿ ಹಂಚಿ ಅವುಗಳನ್ನು ವಿತರಿಸಿದರು ವುಲನ್ ತಂದು ಶಾಲಾ ಶಿಕ್ಷಕಿಯರಿಂದ ಸ್ವೀಟರ್ ಗಳನ್ನು ಹೆಣಿ‌ಸಿ ನಿರಾಶೆತ್ರಿಗೆ ಕೊಡುತ್ತಿದ್ದರು. ಇನ್ನುಳಿದ ಮಕ್ಕಳಿಗೆ ಅನುಕೂಲವಾಗುವಂತೆ ಮಾಧ್ಯಮಿಕ ಶಾಲೆಯನ್ನು ಕೂಡ ಪ್ರಾರಂಭಿಸಿದರುತಾಯಿಯವರು ಹೇಳ್ತಾರೆ. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ಸವಿತಾ ದೇಶಮುಖ

Read Post »

You cannot copy content of this page

Scroll to Top