ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಏಕೆ ಗೆಳೆಯ”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಏಕೆ ಗೆಳೆಯ” ಹೊಸೆದ ಸವಿ ಭಾವಗಳ ಮಸೆದು ಮಣ್ಣಲಿ ಒಲವ ತರಿದು ಗಾಳಿಗೆ ತೂರಿದೆಯಲ್ಲ ಏಕೆ ಗೆಳೆಯಬೆಸೆದ ಮನಸುಗಳ ತುಸು ಕರುಣೆಯಿಲ್ಲದೇ ಮುರಿದುಕನಸು ಮಾರಿದೆಯಲ್ಲ ಏಕೆ ಗೆಳೆಯ ಕೊನೆವರೆಗೆ ಜೊತೆಗಿರುವೆ ಏನುತಲೇ ತಿರುವೊಂದರಲಿ ಹೇಳದೆ ಕಾರಣ ತೊರೆದು ದೂರಾದೆಯಲ್ಲ ಏಕೆ ಗೆಳೆಯಮನೆವರೆಗೆ ಬಂದು ಮನದಲ್ಲಿ ನಿಂದು ಮರುಗಳಿಗೆ ಎಲ್ಲ ಮರೆತು ಬೇರಾದೆಯಲ್ಲ ಏಕೆ ಗೆಳೆಯ ಮಲ್ಲಿಗೆ ಮನದ ಪರಿಮಳದ ನಗುವ ಕಸಿದು ಬರಿದೆ ಕುದಿ ಎಸರು ಎರೆದೆಯಲ್ಲ ಏಕೆ ಗೆಳೆಯಮೆಲ್ಲಗೆ ಮಾತಿನ ಚೂಪು ಬಾಣಗಳ ತೊಡಿಸಿ ಹೃದಯದಿ ಬೆಂಕಿ ಮಳೆ ಬೀರಿದೆಯಲ್ಲ ಏಕೆ ಗೆಳೆಯ ಒಪ್ಪಿದ ಸ್ನೇಹ ಬಂಧನವ ಕಾರಣವಿಲ್ಲದೇ ದೂರ ಮಾಡಿ ಹೃದಯ ತರಿದೆಯಲ್ಲ ಏಕೆ ಗೆಳೆಯಅಪ್ಪಿದ ಅನುಬಂಧ ಎಳೆ ರಂಗೋಲಿ ಅಳಿಸಿ ನೆನಪೊಂದ ಉಳಿಸಿ ಎದೆ ಇರಿದೆಯಲ್ಲ ಏಕೆ ಗೆಳೆಯ.. ಮೌನದಲಿ ಕೊಲ್ಲುತ ಮಾಯದ ಗಾಯಗಳ ನೀಡಿ ಚುಚ್ಚು ಮಾತುಗಳಿಂದ ಗೀರಿದೆಯಲ್ಲ ಏಕೆ ಗೆಳೆಯನಗುವ ಕಂಗಳ ಬೆಳಕನ್ನೇ ತುಟಿಯಂಚಿನ ನಗುವ ಜೇನನ್ನೇ ಕರುಣೆಯಿಲ್ಲದೇ ಹೀರಿದೆಯಲ್ಲ ಏಕೆ ಗೆಳೆಯ ಮನದ ತುಂಬೆಲ್ಲಾ ಶಬ್ದಗಳ ಕೂರಂಬುವಿನಿಂದ ಸುಡು ಸುಡು ಬರೆಗಳ ಕೊರೆದೆಯಲ್ಲ ಏಕೆ ಗೆಳೆಯನೆಲದ ಚಿಗುರ ಮರೆತು ಮುಗಿಲ ತಾರೆಗಳ ಮಡಿಲಿನಲ್ಲಿ ನಗುತಮೆರೆದೆಯಲ್ಲ ಏಕೆ ಗೆಳೆಯ ಕೊಟ್ಟ ಮಾತಿಗೆ ತಪ್ಪಿ ಇಟ್ಟ ಭಾಷೆಯ ತೊರೆದು ಅಂಬರದ ನಕ್ಷತ್ರಗಳ ಸೆರೆಯಾದೆಯಲ್ಲ ಏಕೆ ಗೆಳೆಯಸ್ನೇಹ ತುಂಬಿದ ಕರಗಳ ಕಾರಣ ಹೇಳದೇ ದೂರ ಸರಿಸಿಕಂಗಳಿಂದ ಮರೆಯಾದೆಯಲ್ಲ ಏಕೆ ಗೆಳೆಯ ಹಣದ ಸುಧೆಯ ಅಮಲಲಿ ತೇಲಿದ ಶಶಿ ಇಂದುವಿನ ಹಾದಿಗೆ ಕತ್ತಲನ್ನೆ ಸುರಿದೆಯಲ್ಲ ಏಕೆ ಗೆಳೆಯಪಣದ ಹಾದಿಯಲಿ ಸಾಗುತ ಎದೆತಬ್ಬಿ ಹಬ್ಬಿದ ಪ್ರೀತಿಯ ಬೇರನ್ನೇ ಮುರಿದೆಯಲ್ಲ ಏಕೆ ಗೆಳೆಯ ಇಂದಿರಾ ಮೋಟೆಬೆನ್ನೂರ. 

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಏಕೆ ಗೆಳೆಯ” Read Post »

ಕಾವ್ಯಯಾನ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ”

ಕಾವ್ಯ ಸಂಗಾತಿ ಬೆಂಶ್ರೀ ರವೀಂದ್ರ “ಹೆಡೆ ಬಿಚ್ಚಿ ಹೊಡೆ” ನೀನು ಮನೆ ಬಿಟ್ಟು ಹೋದ ರಾತ್ರಿಯೇ ರಾಹುಲ ಹುಟ್ಟಿದಹೆರಿಗೆಯ ನೋವಲಿದ್ದವಳಕೈ ಹಿಡಿದು ಯಶೋಧರಾಸಹಿಸಿಕೊ ನಾನಿದ್ದೇನೆಅಂತೇಕೆ ಅಂದು ಹೋಗಲಿಲ್ಲ ನಾನೇನು ಕಡಿಮೆ ಮಾಡಿದ್ದೆಅಂತಃಪುರದ ತುಂಬಾ ಸೀತೆಗೂಮಿಗಿಲು ಸುಂದರಿಯರು ಇದ್ದರಲ್ಲಬೇಡವೆಂದನೇಅವಳೊಬ್ಬಳನ್ನು ಬಿಡೆಂದುಗೋಗರೆದರೂ ಧಿಕ್ಕರಿಸಿದೆಯಲ್ಲ. ಬೇಕಿತ್ತೆ ಅಗ್ನಿಗಿಂತ ಬೇರೆ ಸಾಕ್ಷಿಕಾಡಾಡಿಯಾಗಿ ಮಾಡಿದೆಯಲ್ಲತುಂಬು ಬಸುರಿಗೆಅವನಿಯೇ ಗತಿಯಾಯ್ತಲ್ಲ ಹೇಳಿ ಹೋಗಬಹುದಿತ್ತು ಮಧುರೆಗೆನಾ ಬರುವುದರಲ್ಲೇ ಮತ್ತೆಂದೂಸಿಗದಂತೆ ಹೊರಟೆಯಲ್ಲಅಷ್ಟು ಅವಸರವಿತ್ತೇಎದೆ ಮಿಡಿತಕೆ ಸದೆಬಡಿತವೇ ಹೀಗೆ ಬರೆಯಲುಂಟು ನೂರಾರುಕಥೆಗಳು ಇತಿಹಾಸ ಚರಿತ್ರೆಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಜಗದಗಲ‌ ಮುಗಿಲಗಲಮತ ಧರ್ಮ ಜಾತಿ ವರ್ಗ ವರ್ಣಗಳ ಭೇದವಿಲ್ಲದೆಹೆಬ್ಬೆಟ್ಟಿನಡಿಯಲೇ ಇಟ್ಟುನಡೆದಿದೆ ನುಡಿ ಸಾಂತ್ವನನಡೆ ಗೊಸುಂಬೆ ಅಯ್ಯೋಮತ್ತೆ ನೀನಿವರ ಕೈಗೊಂಬೆ ಅವರ ಮೇಲಿವರುಇವರ ಮೇಲವರುಎಡ ಬಲ‌ ಮಧ್ಯದಮುಖವಿಲ್ಲದ ಕೂಗುಮಾರಿಗಳುಭಾಷಣ ಭೂಷಣರುಇವರೇ ಅವರು ಅವರೇ ಇವರು ಬಿಲ್ಲುಗಳ ಹೆಣೆಯುತ್ತಾರೆಹಾರುವುದಿಲ್ಲ ಬಾಣನುಡಿ ನೇವರಿಕೆಗೆತಣಿವುದೇ ಬಾಯಾರಿಕೆನೀನಿಲ್ಲದೆ ಅವರಿಲ್ಲಎಂಬರಿವಿದ್ದರೂಅರಿವುಗೆಟ್ಟ ಅರಿಗಳುಮಂಗಮಾಡುವ ನರಿಗಳುಮತಕಾಗಿ ಹಾರಿಸುವ ಹುಸಿಮತಾಪುಕೋರರು ಹುಡುಗಿನೀನಿನ್ನು ಇರಬಾರದು ಸುಮ್ಮನೆಬಯಲಿಗೆಳೆದು ಬಿಮ್ಮನೆಕಳಚಿ ಮುಖವಾಡಗಳಪೂತ್ಕರಿಸಿ ಈ ಬೇಮಾನರಪಡೆ ಕಟ್ಟಿ ಪಡೆ ನಿನ್ನ ಪಾಲುಹೆಡೆ ಬಿಚ್ಚಿ ಹೊಡೆಇಲ್ಲವಾದರೆ ಏಳಲ್ಲಎಪ್ಪತ್ತು ದಶಕವಾದರೂನಿನಗಿಷ್ಟೂ ಕೂಳು ಸಿಕ್ಕುವುದಿಲ್ಲ. ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ” Read Post »

ಅನುವಾದ

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮಲಯಾಳಂ ಕವಿತೆ “ಒಂದು ನುಡಿ?” ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಸಹ ಪ್ರಯಾಣಿಕನೇ…….,ಈ ತಿರುವಿನಲ್ಲಿಯೂಅಥವಾಮುಂದಿನ ತಿರುವಿನಲ್ಲಿಯೂನಾವು ಬೇರೆಯಾಗುತ್ತೇವೆ….!ನೀನು ಪುನಃಯಾತ್ರೆಯನ್ನು ಮುಂದುವರಿಸುವಾಗನನ್ನ  ‘ಶವಪೆಟ್ಟಿಗೆ ‘ಯನ್ನುಹೊತ್ತುಕೊಂಡು ಸಾಗಬೇಡಾ….!!!. ಯಾರದ್ದರೂನನ್ನ ಕುರಿತು ಕೇಳಿದ್ದರೇ…….,ನಾನುಜೊತೆಗೆ ಇದ್ದುನಷ್ಟವಾದ ದುರಾದೃಷ್ಟವಂತ….!ಬಾಳಿನಿಂದ ದೂರವಾದಪಾತ್ರದಾರ……ಎಂದು ಮಾತ್ರ ಹೇಳಬೇಕು….!‘ ದರಿದ್ರ’ನಾಗಿದ್ದೆ ಎಂದುಮಾತ್ರ ಹೇಳಬಾರದು…..!!! ನನ್ನ ನೋಟಗಳಲ್ಲಿಬರೆಯದೇ ಇದ್ದದ್ದುಓದಿದ್ದರೇ……ಅಳಿಸಿ ಹಾಕಲುನೀನು ‘ಅವಳ ‘ಬಳಿ ಹೇಳಬೇಕು….!!! ನಾನು ಒಂದು‘ಹೂವು’ ಸಹಕಿತ್ತು ಹಾಕಿಯೇಇಲ್ಲ….!!!. ಮಲಯಾಳಂ ಮೂಲ: ತಾಜುದ್ದೀನ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.                                 

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. Read Post »

ಕಾವ್ಯಯಾನ

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು”

ಕಾವ್ಯ ಸಂಗಾತಿ ಪ್ರೊ.ರಾಜಕುಮಾರ ಬಿ ಟಿ. “ಮಾನವೀಯತೆ ಹರಿಕಾರರು” ಅವಿಭಕ್ತ ಕುಟುಂಬದಲಿ ಜನಿಸಿಅಸ್ಪೃಶ್ಯತಾ ಅಂಧಕಾರವನು ಅಳಿಸಿಜಾತೀಯತೆ ಹೊಡೆದೊಡಿಸಲುಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧- ಅಸ್ಪೃಶ್ಯತೆಯ ಕಹಿಯನು ಉಂಡುಅವಮಾನದಿಕುಲುಮೆಯಲಿ ಬೆಂದುಬದುಕಿನ ಬವಣೆಗಳಲಿ ನೊಂದುಅಸಹಾಯಕತೆಯ ಕಣ್ಣಿರಲಿ ಮಿಂದುದೀನ-ದುರ್ಬಲರ ಧ್ವನಿಯಾಗಿಹರು  -೨- ಸಮಾನತೆಯ ಲೇಖನಿ ಹಿಡಿದುಸಮ ಸಮಾಜಕೆ ಸಂವಿಧಾನ’ವ ಬರೆದುಸರ್ವರಲೂ ಸಮಭಾವ ತಂದು  ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿಆಗಿಹರು  -೩- ಅಕ್ಷರಗಳನು ಆಯುಧವಾಗಿರಿಸಿಅಂಧಶ್ರದ್ಧೆಗಳನು ಬೇಧಿಸಿಲೇಖನಿಯ ಮಸಿಕೋಟಿ-ಕೋಟಿ ಜನಗಳಿಗೆ ಬಿಸಿಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪- ಅನಿಷ್ಟಗಳ ನಡುವಿಂದ ಸಿಡಿದುಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದುಜ್ಞಾನಕ್ಷೀರವನು ಕುಡಿದುಘರ್ಜಿಸಿಹರು ಮಹಾ ನಾಯಕರಿವರುಅಂಬೇಡ್ಕರರು -೫- ಪ್ರೊ.ರಾಜಕುಮಾರ ಬಿ ಟಿ.

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು” Read Post »

ನಿಮ್ಮೊಂದಿಗೆ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ”

ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ್‌ “ನ್ಯಾಯ ಕಣ್ಣು ತೆರೆದಿದೆ” ಜನಸಾಮಾನ್ಯರಉಸಿರು ನಿಲ್ಲಿಸಿದರ್ಪ ಮೆರೆದನರನ ಮಾತುಮೌನವಾಗಿದೆ; ಹಣದಕಪಿಮುಷ್ಠಿಯಲಿಹಂತಕರ ಸೃಷ್ಟಿಸಿದ್ವೇಷವೆಂಬ ರೋಗದಿಜೀವ ತೆಗೆದಜೀವಿಯಮುಖವಾಡ ಕಳಚಿದೆ; ತೋಳ್ಬಲದಕತ್ತಿಯ‌ ಅಂಚಿನಲಿಹಣದಾಸೆ ತೋರಿಸಿಕುರ್ಚಿಯ‌ ವ್ಯಾಮೋಹದಿಪ್ರಾಣ ತೆಗೆದವಿನಯದದುರಹಂಕಾರಮಣ್ಣಾಗಿದೆ; ಕಾನೂನಿನರಕ್ಷಕರೇಅಪರಾಧಿಗಳಆಮಿಷಕ್ಕೆ ಬಲಿಯಾಗಿಸಹಾಯ ಹಸ್ತಚಾಚಿದಮೃಗಗಳ ಮೇಲೆನ್ಯಾಯ ದೇವತೆಯಕಣ್ಣು ಬಿದ್ದಿದೆ; ಬಾಳಿ ಬದುಕಬೇಕಾದಮುಗ್ದ ಯುವಕನನ್ನುದಬ್ಬಾಳಿಕೆಯಕೆಂಡದಲಿಕೊಲೆ ಮಾಡಿದಕಟುಕರನ್ನುಕಾರಾಗೃಹ  ಕೈಬೀಸಿಕರೆದಿದೆ; ತೆರೆ ಹಿಂದಿನಕುತಂತ್ರಗಳು ಕರಗಿಹಣ ಅಧಿಕಾರ  ಪ್ರಭುತ್ವದಕೈಗಳುಕಾನೂನಿನ ಕುಣಿಕೆಗೆಸಿಲುಕಿಸಂವಿಧಾನವುತನ್ನ ಅಭೇದ್ಯಶಕ್ತಿಯನ್ನುನ್ಯಾಯದ ಚಾಟಿಯಲಿಕರ್ಮವುಮರುಕಳಿಸಿದೆ;ಡಾ.ಕಾಡಜ್ಜಿ ಮಂಜುನಾಥ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ” Read Post »

You cannot copy content of this page

Scroll to Top