ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ

ಮಹಿಳಾ ಸಂಗಾತಿ ಮೇಘ ರಾಮದಾಸ್ ಜಿ “ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಭಾರತ ಸಂವಿಧಾನದ 73 ನೇ ತಿದ್ದುಪಡಿ ಬಹಳ ಮಹತ್ವವಾದದ್ದು. ಅಧಿಕಾರ ವಿಕೇಂದ್ರೀಕರಣದ ಮುನ್ನುಡಿಯಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಜನನ ಆಗಿದ್ದು ಇದರಿಂದಲೇ. ಅಭಿವೃದ್ಧಿ ಎಂದಿಗೂ ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಕೇಂದ್ರೀಕೃತವಾಗಿರಬಾರದು, ಬದಲಿಗೆ ತಳಮಟ್ಟದಿಂದ ಅಂದರೆ ಗ್ರಾಮಗಳಿಂದ ಅಭಿವೃದ್ಧಿಯ ಪರಿಕಲ್ಪನೆ ರಚನೆಯಾಗಬೇಕು ಎನ್ನುವುದು ಈ ಅಧಿಕಾರ ವಿಕೇಂದ್ರೀಕರಣದ ಆಶಯವಾಗಿದೆ. ಕೇವಲ ಅಭಿವೃದ್ಧಿಯ ಕಾರಣಕ್ಕೆ ಅಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಗಳಾಗಿಯೂ ಸಹಾ ಈ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿಯೇ ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳ ರಚನೆ ಕಡ್ಡಾಯವಾಗಿದೆ. ಈ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತು ಗಮನ ಹರಿಸಬೇಕಿದೆ. ಆದರೆ ವಾಸ್ತವದಲ್ಲಿ ಈ ಸಮಿತಿಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಾಗರಿಕರಾಗಿ ನಮ್ಮ ಕರ್ತವ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಎಂದರೇನು?ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಅರಿವು ಮೂಡಿಸುವುದು ಮತ್ತು ರಕ್ಷಣೆ ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯ ಸದಸ್ಯರು ಯಾರ್ಯಾರು? ಅಧ್ಯಕ್ಷರು – ಗ್ರಾಮ ಪಂಚಾಯತಿ ಅಧ್ಯಕ್ಷರು (ಮಹಿಳೆ)ಉಪಾಧ್ಯಕ್ಷರು – ಗ್ರಾಮ ಪಂಚಾಯತಿ ಉಪಾಧ್ಯಕ್ಷರು (ಮಹಿಳೆ)ಸದಸ್ಯರು – ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು (ಒಬ್ಬರು ಮಹಿಳೆ ಕಡ್ಡಾಯ)ಸದಸ್ಯರು – ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖೋಪಾಧ್ಯಾಯರು (ಪುರುಷವಿದ್ದಲ್ಲಿ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು)ಸದಸ್ಯರು – ಗ್ರಾಮಲೆಕ್ಕಿದರುಸದಸ್ಯರು – ಆಶಾ ಕಾರ್ಯಕರ್ತೆಸದಸ್ಯರು – ಬಿಟ್ ಪೊಲೀಸ್ಸದಸ್ಯರು – ICDS ಮೇಲ್ವಿಚಾರಕಿಸದಸ್ಯರು – ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿಸದಸ್ಯರು – ಅಂಗನವಾಡಿ ಕಾರ್ಯಕರ್ತೆಸದಸ್ಯರು – ಸ್ತ್ರೀಶಕ್ತಿ ಸಂಘದ ಪ್ರತಿನಿಧಿಸದಸ್ಯರು – ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಸದಸ್ಯ ಕಾರ್ಯದರ್ಶಿ – ಪಿಡಿಒ/ಕಾರ್ಯದರ್ಶಿ ಸಮಿತಿಯ ಜವಾಬ್ದಾರಿಗಳು ಈ ಸಮಿತಿಗಳು ಸ್ಥಳೀಯ ಮಟ್ಟದ ಮಹಿಳೆ ಮತ್ತು ಮಕ್ಕಳ ರಕ್ಷಣಾ ಗೋಡೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಮಿತಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಗ್ರಾಮದ ನಾಗರೀಕರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಮಿತಿಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದಾಗ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ. ಮೇಘ ರಾಮದಾಸ್ ಜಿಮಕ್ಕಳು ಮತ್ತು ಯುವಜನ ಕಾರ್ಯಕರ್ತರುಗುಳಿಗೇನಹಳ್ಳಿ ಸಿರಾ ತುಮಕೂರು7760908097

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ Read Post »

ಕಾವ್ಯಯಾನ

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ”

ಕಾವ್ಯ ಸಂಗಾತಿ ರೇಖಾಪ್ರಕಾಶ್ “ಹೆಣ್ಣಿನ ಅಂತರಂಗ” ಉಮ್ಮಳಿಸಿ ಬರುವ ದುಃಖಕ್ಕೆ,ಎದೆಗಪ್ಪಿಕೊಂಡು ಸಾಂತ್ವನ ಹೇಳುವವರಿಲ್ಲ ಇಲ್ಲಿ,ಅವಕಾಶ ಸಿಕ್ಕಿತೆಂದು ಬಿಗಿದಪ್ಪಲು ಬರುವವರೆ ಎಲ್ಲ ಮನದ ನೋವಿಗೆ ಮುಲಾಮು ಸವರುವವರಿಲ್ಲ ಇಲ್ಲಿಮದ್ದರೆಯುವ ನೆಪದಲ್ಲಿಮನವ ಕಲಕಿ ರಾಡಿ ಎಬ್ಬಿಸಿದವರೇ ಹೆಚ್ಚು ಮುರಿದ ಮನಸ್ಸುಗಳಮರು ಜೋಡಿಸುವವರಿಲ್ಲ ಇಲ್ಲಿಜೋಡಿಸುವ ನೆಪದಲ್ಲಿ ಸೂಜಿಯಿಂದ ಚುಚ್ಚಿ ನೋಯಿಸಿದವರೇ ಹೆಚ್ಚು ನಿಜ! ನಿನ್ನೊಲವಲ್ಲಿ ನಾ ಬಂಧಿಯಾಗಲಿಲ್ಲಉಸಿರುಗಟ್ಟುವಂತೆ ಬಿಗಿದಪ್ಪಿದ ಆ….ಆಲಿಂಗನವ ಒಲವೆಂದೊಪ್ಪಲಿ ಹೇಗೆ? ಹೆಣ್ಣಿನ ಅಂತರಾಳವನ್ನರಿಯದವನುಆತ್ಮಸಖನೇಗಾಗುವನು? ಎದೆಯೊಳಗೆ ನಡೆಯುವತುಮುಲಗಳೊಂದಿಗೆಸ್ಪರ್ದಿಸಲಾಗದೆಒಳಗೊಳಗೇ ನೊಂದು, ಬೆಂದು, ಕುದ್ದು, ಆವಿಯಾಗಿಹಿಂಗಿದ ಕಂಬನಿಯ ಗೆರೆಗಳು ಮುಖದಲ್ಲಿ ಮೂಡಿಸಿದ್ದು ಪ್ರೇತಕಳೆಹಾ!…. ಕಣ್ಣಿಂದ ಸುರಿದದ್ದು ಬರೀ ಕಂಬನಿಯಲ್ಲನೋವಿನ, ಅಸಹಾಯಕತೆಯರಕ್ತ ಕಣ್ಣೀರು ಸ್ವಾರ್ಥವೇ ತುಂಬಿರುವ ಈ ಜಗದೊಳಗೆನಿಸ್ವಾರ್ಥ ಪ್ರೀತಿಯ ನೀರೀಕ್ಷಿಸಿದಮೂರ್ಖಳು ನಾನುಮೂರ್ಖರ ದಿನದಂದು ಶುಭಾಶಯ ಕೋರಿಬಿಡಿ ಎನಗೊಂದು. ರೇಖಾಪ್ರಕಾಶ್

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ”

ಕಾವ್ಯಸಂಗಾತಿ ಲಲಿತಾ ಪ್ರಭು ಅಂಗಡಿ ಮುಂಬೈ “ಎಂದೊಹಾಡಿದ ಭಾವಕೆ” ಎಂದೊ ಹಾಡಿದ ಭಾವಕೆಇಂದು ತಾಳತೀಡಿಮಧುರ ನೆನಪು ಕಾಡಿದೆ ಹೃದಯ ತಂತಿ ಮೀಟಿದೆಸ್ವರ ಭಾವನೆಗಳಿಗೆಆಲಾಪ ಹಚ್ಚಿ ಗುನುಗುತಿದೆ ಕಟ್ಟಿ ಹಾಕಿದ ಬಿಗಿಗಂಟುಸಡಿಲಿಸಿ ಸನಿಹ ಬಂದುಸರಿಗಮಪದ ಸವಿಜೇನಿಂದ  ಸನಿದಪ ಹೇಳುತಿದೆಭಾವನೆಗಳಿಗೆ ಬಣ್ಣ ಹಚ್ಚಿ ಹಾಡಬಯಸಿದೆ ರೆಕ್ಕೆ ಬಿಚ್ಚಿ ಹಾರಾಡಬಯಸಿದನೆನಪಿನ ದೋಣಿಯ ಆ ಹಾಡುಕಾಡಿ ಕಾಡಿ ಕುಣಿಯುತಿದೆಗೆಜ್ಜೆಯ ಗುಂಗಿಗೆತಾಳ ಹಾಕಿ ತಕದಿಮಿ ಹೇಳುತಿದೆಹಾಡಿ ಆಲಾಡಿತೇಲಾಡಬಯಸಿದೆ ಕೊಚ್ಚಿ ಹೋಗುವ ಆಸೆಗಳಿಗೆಆಸರೆಯಾಗಿ  ಕೈಹಿಡಿದುದಿಕ್ಸೂಚಿಯಂತೆ ಬಾಳ ಬಳ್ಳಿಬೆಳಗುವ ಉತ್ಸಾಹಕೆಮತ್ತೆ ಚಿಗುರಿ ಚೈತ್ರಗೀತೆ ಹಾಡಿದೆ ಒಣಗಿದರೂ ಕೊಸರಿ ಉಸುರಿಸುವಜೀವನೋತ್ಸಹಕೆ ಪಲ್ಲವಿ ಬರೆದುಕತೆಯ ಬದುಕಿಗೆಸುಂಗಧ ತೀಡಿಕಾವ್ಯ ಲಹರಿಯಾಗಿಹಾಡಾಗಿ ಒಡಮೂಡಿದೆ. ಲಲಿತಾ ಪ್ರಭು ಅಂಗಡಿ.

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ” Read Post »

You cannot copy content of this page

Scroll to Top