ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ  ಚೇತನ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-

   ತರಳಬಾಳು ಬೃಹನ್ಮಠವು ಬಸವ ತತ್ವ ಆಧಾರಿತ ಸಂಸ್ಕಾರ ಪರಂಪರೆಯನ್ನು ಹೊಂದಿದ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ ಜನರಿಗೆ ಆಶಾದೀಪವಾಗಿದೆ .ಬಸವಣ್ಣನವರು ಬೋಧಿಸಿದ ಸಿದ್ಧಾಂತ ಮತ್ತು ತತ್ವಗಳು. ‘ಸಮತೆ, ವಿಶ್ವಬಾಂಧವ್ಯ, ವ್ಯಕ್ತಿ ಸ್ವಾತಂತ್ಯ್ರ, ಸತ್ಯ, ಅಹಿಂಸೆ, ದಯಾಪರತೆ ಮೊದಲಾದ ತತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗ ಪ್ರವರ್ತಕ ಬಸವಣ್ಣನವರ ಜೀವನ ಆದರ್ಶಪ್ರಾಯ. ಅವರ ಸಿದ್ಧಾಂತದಲ್ಲಿ ನೂತನ ದೃಷ್ಟಿ ಇದೆ ಎಂಬುದನ್ನು ಮನಗಂಡು  ಬಸವ ನಿಷ್ಠ ಪರಂಪರೆಯನ್ನು  ಮುಂದುವರೆಸಿಕೊಂಡು ಹೋದವರು  ಶ್ರೀಮದ್ ಉಜ್ಜಯಿನಿ ಪೀಠದ  ತರಳಬಾಳು ಮಠ .
         ಬಸವಾದಿ ಶರಣರ/ಶರಣೆಯರ ಕಾಯಕ ಸಿದ್ಧಾಂತಗಳಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಸತ್ಯ ಸಮತೆ ನ್ಯಾಯ ನೀತಿ ಸಾಮಾಜಿಕ ಸಾಮರಸ್ಯದ ಬಗ್ಗೆ ಶರಣರು ಶ್ರಮ ವಹಿಸಿ ಹೊಸ ಲಿಂಗಾಯತ ಧಾರ್ಮ ಸ್ಥಾಪಿಸಿದರು

  ಬಸವಣ್ಣನವರು ಒಬ್ಬ ಅರ್ಥಶಾಸ್ತ್ರಜ್ಞರೂ ಆಗಿದ್ದವರು. ಸಮಾಜದ ಸರ್ವಾಂಗೀಣ ಪ್ರಗತಿಗೆ, ವಿಕಾಸಕ್ಕೆ “ದುಡಿಮೆಯ ಸಂಸ್ಕೃತಿ, ಬೆವರಿನ ಸಂಸ್ಕೃತಿ” ಅತ್ಯಗತ್ಯ ಎಂದು ಹೇಳುವ ಮೂಲಕ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದರು. ದುಡಿಯುವವರು ಬೇರೆ, ಅದರ ಫಲವನ್ನು ಉಣ್ಣುವವರು ಬೇರೆ ಆಗಿದ್ದ ಕಾಲಘಟ್ಟದಲ್ಲಿ ‘ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ’ ಎಂದು ಪ್ರತಿಪಾದಿಸುವ ಮೂಲಕ ವಿನೂತನವಾದ ಕಾಯಕ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ಬರೆದರು. ಕರ್ಮ ಸಿದ್ಧಾಂತವನ್ನು ಕಾಯಕ ಸಿದ್ಧಾಂತವನ್ನಾಗಿ ಪರಿವರ್ತಿಸಿದ ದಾರ್ಶನಿಕರು ಬಸವಾದಿ ಶರಣರು.
‘ಕಾಯಕವೇ ಕೈಲಾಸ’ ಎಂಬುದು ಅವರು ಜಗತ್ತಿಗೆ ನೀಡಿದ ಅಮೂಲ್ಯ ಸಂದೇಶ.

ಕಾಯಕ ಉದ್ದೇಶಿಸಿ ಬಸವಣ್ಣನವರ ಒಂದು ವಚನ.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.


ಕಾಯಕ ಶರಣರ ಪಾಲಿಗೆ ಕೈಲಾಸವಿದ್ದಂತೆ .ಶ್ರಮ ಸಂಸ್ಕೃತಿಯನ್ನು ಅಪ್ಪಿಕೊಂಡು ಜಾತಿ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಬಸವಣ್ಣ ಮತ್ತು ಇತರ ಶರಣರು ಯಶಸ್ವಿಯಾದರು.
ಇಂತಹ ಬಸವ ತತ್ವಗಳಲ್ಲಿ ನಂಬಿಕೆ ಶೃದ್ಧೆ ಇತ್ತು ಬಸವ ಕಾಲಿನ ಪರಂಪರೆಯ ಅತಿ ಮುಖ್ಯ ಮಠ ಅಥವ ಸಂಸ್ಥೆಯೆಂದರೆ ಅದು ಸಿರಿಗೆರೆಯ ತರಳಬಾಳು ಮಠ .
ತರಳು ಬಾಳು ಹೇಗೆ ಬಂತು ಎಂಬುದನ್ನು ಲೇಖನದಲ್ಲಿ ಕಾಣಬಹುದು ತಾರಾಳ ಅಂದರೆ ಮಗು ಬಾಳು ಎಂದರೆ ಮಗು ಬಾಳು ಎಂದು ಆಶೀರ್ವಾದ ಪಡೆದ ತತ್ವ ನಿಷ್ಠ ಮಠ ಎಂತಲೂ ತೆಲಗುಬಾಳು ಸಿದ್ಧರಿಂದ ಪೀಠ ಪ್ರಾರಂಭವಾಗಿದೆ ಎನ್ನುವ ವಿಚಾರದಲ್ಲಿಯೂ  ಕೂಡ  ತರಳಬಾಳು ಎಂದು ಬಂದಿರಬಹುದು ಎಂಬ ತರ್ಕವಿದೆ. ಬಸವ ತತ್ವಕ್ಕೆ ನಿಷ್ಠವಾದ ಈ ಮಠವು ಹಲವು ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ನೈತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ನಾಡಿನ ರಾಷ್ಟ್ರದ ಗಮನ ಸೆಳೆದಿದೆ.  

ತರಳಬಾಳು ಇದಕ್ಕೆ ಮಹತ್ವ ಇದೆ. ‘ತರಳ’ ಎಂದರೆ ‘ಮಗು’,’ಬಾಳು’ ಎಂದರೆ ಬದುಕು ಎಂದರ್ಥ.  ಶ್ರೀ ತರಳಬಾಳು ಬೃಹನ್ಮಠವು ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿದೆ.

ಸಿರಿಗೆರೆಯ ಮೂಲ ಮಠ ಉಜ್ಜಯಿನಿ ಸದ್ಧರ್ಮ ಪೀಠ

ವಿಶ್ವಬಂಧು ಮರುಳಸಿದ್ದರು 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಹಿರಿಯ ಸಮಕಾಲೀನರು.ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ.

ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು…

ವಚನ ಚಳವಳಿ ತಾತ್ವಿಕ ಸ್ವರೂಪ ಪಡೆದು ಸಾಮಾಜಿಕ ಸಂಘರ್ಷ ಆರಂಭಿಸುವ ಮುನ್ನವೇ ಇಂತಹ ಚಳವಳಿಯಲ್ಲಿ ತೊಡಗಿಸಿಕೊಂಡ ಮಹಾನ್ ಸಾಧಕರು. ಸಮಾಜದಲ್ಲಿ ಮೂಢನಂಬಿಕೆ, ಮೌಢ್ಯ ಬಿತ್ತಿದ್ದ ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಸಾಮಾಜಿಕ ಆಂದೋಲನವನ್ನೇ ರೂಪಿಸಿದ ಮಹಾನ್‌ ಶರಣರು.

ಮಾದಿಗ ಸಮುದಾಯದಲ್ಲಿ ಜನಿಸಿದ ಮರುಳಸಿದ್ದರು, ಬಾಲ್ಯದಲ್ಲೇ ತಾಯಿ–ತಂದೆ ಕಳೆದುಕೊಂಡು ಕಗ್ಗಲುಪುರದ ಬಾಚಣ್ಣನ ಮನೆಯಲ್ಲಿ ಸಾಕು ಮಗನಂತೆ ಬೆಳೆಯುತ್ತಾರೆ. ದನಕರು ಕಾಯುವ ಕಾಯಕ ಮಾಡಿಕೊಂಡಿದ್ದರು. ಪ್ರಾಣಿಗಳ ಜತೆ ಒಡನಾಟ ಇದ್ದ ಅವರಿಗೆ ಒಮ್ಮೆ ಅವರ ಊರಿನಲ್ಲಿ ನಡೆದ ಮಾರಿ ಜಾತ್ರೆಗೆ ಕೋಣ ಬಲಿ ಕೊಡುವ ಪ್ರಸಂಗ ಬಂದಾಗ ನೊಂದುಕೊಂಡರು.

ಮೂಢನಂಬಿಕೆಯ ನಡುವೆ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಇಂತಹ ಆಚರಣೆ ವಿರುದ್ಧ ಧ್ವನಿ ಎತ್ತಿದರು. ಪಟ್ಟಭದ್ರರ ಬಲದ ಮುಂದೆ ಅವರ ದನಿ ಚಿಕ್ಕದೆನಿಸಿತು. ಅದರಿಂದ ಬೇಸರಗೊಂಡ ಅವರು ಊರು ತೊರೆದು ಕಾಡು–ಮೇಡು ಅಲೆಯುತ್ತಾರೆ. ಸಾಧಕರ ಬೀಡು ಎಂದೇ ಪ್ರಸಿದ್ಧಿ ಪಡೆದಿದ್ದ ಚಿನ್ಮೂಲಾದ್ರಿ ಬೆಟ್ಟ ತಲುಪುತ್ತಾರೆ.

ಅಲ್ಲಿ ಗುರು ರೇವಣಸಿದ್ದರ ಸಂಗ ದೊರೆಯುತ್ತದೆ. ಅಲ್ಲಿ ಅವರು ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ.

ತರಳ… ಬಾಳು… ತಾವು ಮಾಡಿದ ವೈಚಾರಿಕ ಕ್ರಾಂತಿ ಜ್ಯೋತಿಯನ್ನು ನಿರಂತರ ಉರಿಸುವ ಉದ್ದೇಶದಿಂದ ಮಾಘ ಶುದ್ಧ ಭಾರತ ಹುಣ್ಣಿಮೆಯ ದಿನ ತಮ್ಮ ಶಿಷ್ಯ ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು… ತರಳಬಾಳು ಎಂದರೆ ‘ದೀರ್ಘ ಕಾಲ ನೀ ಚಿರಂಜಿೀವಿಯಾಗಿ ಬಾಳು ಮಗು’ ಎಂದು.

ಅಂದರೆ, ಸದ್ಧರ್ಮ ಪೀಠ ಸೂರ್ಯ ಚಂದ್ರರು ಇರುವವರೆಗೂ ಬಾಳಲಿ… ಜಗತ್ತಿನ ಎಲ್ಲ ಜನರ ಬಾಳು ಹಸನಾಗಲಿ ಎನ್ನುವ ತತ್ವಾರ್ಥ. ತರಳಬಾಳು ಪೀಠ ಸ್ಥಾಪನೆಯ ಉದ್ದೇಶವೇ ನೈತಿಕ, ಸಮಾನತೆ, ಕಾಯಕ ತತ್ವದ ಆಧಾರದ ಮೇಲೆ ಧರ್ಮದ ಆಚರಣೆ ಸಾಗಬೇಕು ಎಂಬುದು. ಹೀಗೆ ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ವಿಶ್ವ ಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲುಗುಬಾಳು (ಬಳ್ಳಾರಿ ಜಿಲ್ಲೆ) ಸಿದ್ದರನ್ನು ಸಿಂಹಾಸನದಲ್ಲಿ ಪೀಠಾರೋಹಣ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನ ತರಳಬಾಳು ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಸಿರಿಗೆರೆ ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ವಂಚಿತ ದೂರದ ಮತ್ತು ಹಿಂದುಳಿದ ಚಿಕ್ಕ ಹಳ್ಳಿಯಾಗಿತ್ತು. ನಂತರ ಶಾಲೆಯ ಕಟ್ಟಡವನ್ನು1937 ರಲ್ಲಿ ಸ್ವಾಮೀಜಿ ಕೊಡುಗೆಯೆಂದೂ, ಕಲ್ಲು ಫಲಕವೊಂದು ತಿಳಿಸುತ್ತದೆ. ಸಿರಿಗೆರೆ ಮತ್ತು ಇಂದಿಗೂ ಒಂದು ಶಾಲೆಯ ಆರಂಭಿಕ ಬೆಂಬಲಿಸುವ ಮೂಲಕ ಅವರ ಅತ್ಯುತ್ತಮ ಮಾಡಿದರು ಈ ಪೀಠಗಳಲ್ಲಿ ಶ್ರೀಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಸ್ವಾಮೀಜಿ ಹಾಗೆಯೇ ಅವರು ಜವಾಬ್ದಾರಿಯನ್ನು  ಸಿರಿಗೆರೆರಲ್ಲಿ ತರಳಬಾಳು ಜಗದ್ಗುರು ಡಿಸ್ಪೆನ್ಸರಿ ಪ್ರಾರಂಭಿಸಿ ಜನರ ಸಾರಿಗೆ ಸೌಲಭ್ಯಕ್ಕಾಗಿ  ಸಿರಿಗೆರೆಗೆ ಎನ್ ಹೆಚ್ ೪ ಗೆ ಒಂದು ಪಕ್ಕ ರಸ್ತೆಯನ್ನು ನಿರ್ಮಿಸಿದ್ದಾರೆ.ಈ ಮಠವು ಕೆವಲ ರಾಜ್ಯವಲ್ಲದೆ,ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿದೆ. ಹೆಚ್ಚು ಭಕ್ತರು ಸಂಹೂವನ್ನುಗಳಿಸಿದೆ. ಈ ಮಠವು ಬಹಳ ಪಾರಂಪರಿಕ ಕಾಲದಿಂದಲೇ ಆಸ್ಥಿತ್ವಕ್ಕೆ ಬಂದಿದೆ. ಈ ಮಠವನ್ನು 12 ನೇ ಶತಮಾನದಲ್ಲಿ ಶ್ರೇಷ್ಟ ಸನ್ಯಾಸಿಯಾದ “ಮರುಳಸಿದ್ದ”ರು ಸ್ಥಾಪಿಸಿ, ‘ತರಳಬಾಳು’ ಎಂದು ಆರ್ಶೀವದಿಸಿದ್ದಾರೆ.
ಈ ಹಿಂದಿನ ಗುರುಗಳಾದ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳು ಮನೆ ಮನೆಗೆ ಬಸವಣ್ಣನವರ ವಚನಗಳನ್ನು ಶರಣರ ವಚನಗಳನ್ನು ಒಯ್ದು ಬಸವ ತತ್ವ ಪ್ರಸಾರ ಮಾಡಿದರು .ಸಾದು ಲಿಂಗಾಯತ ಸಮಾಜಕ್ಕೆ ಬಸವ ತತ್ವ ತಿಳುವಳಿಕೆ ಮಾಡಿ ನಾವೆಲ್ಲಾ  ಅಪ್ಪಟ ಬಸವ ಭಕ್ತರು ಎಂಬ ಭಕ್ತಿಯ ಸ್ಪೂರ್ತಿಯ ಚೈತನ್ಯದ ಚಿಲುಮೆಯನ್ನು ತುಂಬಿದರು. ಕಠೋರ ದಿಟ್ಟ ಗಣಾಚಾರಿಗಳಾದ ಅವರು ಒಂದೊಮ್ಮೆ ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಾದ ಲಿಂಗೈಕ್ಯ ಶ್ರೀ ಎಸ ನಿಜಲಿಂಗಪ್ಪನವರನ್ನು ಚುನಾವಣೆಯಲ್ಲಿ ಭಕ್ತರ ಮೂಲಕ  ಸೋಲಿಸಿದರು.
ಈಗಿನ ಸ್ವಾಮೀಜಿಗಳು
ಈಗ ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ೧೧೦೮ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರು[೨] ೧೯೭೯ರಿಂದ ಈ ಮಠದ ಉತ್ತರಾಧಿಕಾರಿಯಾಗಿದ್ದಾರೆ. ಇವರು ಸಂಸ್ಕ್ರತದಲ್ಲಿ ದೊಡ್ಡ ವಿದ್ವಾಂಸರು ಜೊತೆಗೆ ಬನಾರಸ್ ಹಿಂದು ವಿಶ್ವವಿದ್ಯಾನೀಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ.ಇವರು ಹಲವು ಭಾಷಾಪಂಡಿತರು ಮತ್ತು ಶ್ರೀ ಮಠದ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.ಅವರ ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಸ್ವಾಮೀಜಿಯವರು ಗ್ರಾಮೀಣ ಬಡವರ ದೀನರ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಈ ಮಠವು ಯಾವುದೇ ಜಾತಿ ಬೇದ,ಪುರುಷ-ಸ್ತ್ರೀ ಎನ್ನದೆ ಗ್ರಾಮೀಣ ಶಿಕ್ಷಣಕ್ಕೆ ಬಹಳ ಮಹತ್ವವನ್ನು ಸ್ವತಂತ್ರ ಪೂರ್ವದಿಂದಲು ನೀಡುತ್ತಾ ಬಂದಿದೆ. ಪ್ರಸ್ತುತ ನರ್ಸರಿಯಿಂದ ಇಂಜಿನಿಯರಿಂಗ್ ವರೆಗೆ ೧೭೨ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು, ಇಡೀ ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಸುತ್ತಿದ್ದಾವೆ.೪೦ಸಾವಿರ ವಿದ್ಯಾರ್ಥಿಗಳು ಶ್ರೀ ಮಠದ ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದು ಒಂದು ಕರ್ನಾಟಕದಲ್ಲಿ ದೊಡ್ಡ ಖಾಸಗಿ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಹೆಸರುವಾಸಿಯಾಗಿದೆ.೬೦೦೦ಕ್ಕೂ ಹೆಚ್ಚುವಿದ್ಯಾರ್ಥಿಗಳು ಉಚಿತ ಶಿಕ್ಷಣ ಮತ್ತು ವಸತಿಯನ್ನು ಪಡೆಯುತ್ತಿದ್ದಾರೆ. ಈ ಮಠವು ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ,ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿಯು ಹೆಸರುವಾಸಿಯಾಗಿದೆ.ಸಮಾಜದ ಎಲ್ಲ ವರ್ಗದವರಿಗು ಸಮಾನತೆಯನ್ನು ಕೊಡುತ್ತಾ ಬಂದಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಳಬಾಳು ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಶ್ರೀ ಮಠದಲ್ಲಿ ದಿನನಿತ್ಯವು ಅನ್ನದಾಸೋಹ ನಡೆಯುತ್ತದೆ. ಸಿರಿಗೆರೆಯಲ್ಲಿ ಸಂಸ್ಥೆಯ ಆಡಳಿತ ಕಛೇರಿ ಇದ್ದು,ಇಲ್ಲಿ ಶಾಲಾ ಕಾಲೇಜುಗಳ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಶ್ರೀ ಮಠದಲ್ಲಿ ಸಾಮೂಹಿಕ ಮದುವೆಗಳನ್ನು, ಸಮಾಜದ ಬಡಜನರಿಗೆ ಉಚಿತವಾಗಿ ನೆರೆವೇರಿಸುತ್ತಾರೆ. ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರು ಪ್ರತಿ ಸೋಮವಾರದಂದು ‘ಸದ್ದರ್ಮ ನ್ಯಾಯಪೀಠವನ್ನು’ ನಡೆಸಲಾಗುತ್ತದೆ, ಇದರ ಮೂಲಕ ಜನರು ಯಾವುದೇ ಕೋರ್ಟ, ಕಛೇರಿಗೆ ಹೋಗದೆ ಶ್ರೀಗಳ ಹತ್ತಿರವೇ ನ್ಯಾಯವನ್ನು ಪಡೆಯುತ್ತಾರೆ.

ವಿವಿಧ ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಸೊಸೈಟಿಯು ರಾಜ್ಯದ ೧೩ಜಿಲ್ಲೆಗಳಲ್ಲಿ ಹರಡಿದೆ ಮತ್ತು ೨೧೮ಸಂಸ್ಥೆಗಳು ಚಾಲನೆಯಲ್ಲಿದೆ


ಪ್ರೌಢಶಾಲೆಗಳು-೭೯
ಪದವಿ ಪೂರ್ವ ಕಾಲೇಜುಗಳು-೧೫
ವೃತ್ತಿಪರ ಶಿಕ್ಷಣ-೭
ಡಿ.ಎಡ್. ಕಾಲೇಜುಗಳು-೩
ಪದವಿ ಕಾಲೇಜುಗಳು-೫
ಬಿ.ಎಡ್ ಕಾಲೇಜ್-೧
ಬಿ.ಪಿ.ಎಡ್ ಕಾಲೇಜ್-೧
ಪಾಲಿಟೆಕ್ನಿಕ್-೧
ಇಂಜಿನಿಯರಿಂಗ್ ಕಾಲೇಜ್-೧
ಸಂಸ್ಕ್ರತ ಮತ್ತು ವೇದಶಾಲೆ-೪
ನರ್ಸರಿ ಶಾಲೆಗಳು-೧೧
ಪ್ರಾಥಮಿಕ ಶಾಲೆಗಳು-೧೨
ಸಿಬಿಎಸ್ಇ ಶಾಲೆಗಳು-೨
ವಸತಿ ನಿಲಯಗಳು-೫೭
ನಿರ್ಗತಿಕ ಹೋಮ್ಸ್-೮
ಅಂಗನವಾಡಿ ತರಬೇತಿ ಕೇಂದ್ರ-೧
ಧಾರ್ಮಿಕ ಕೇಂದ್ರಗಳು-೧೧
ಶಿಕ್ಷಣ ಸೊಸೈಟಿ ಚಟುವಟಿಕೆಗಳು


ಶಿಕ್ಷಣ ಸೊಸೈಟಿ ಚಟುವಟಿಕೆಗಳನ್ನು ಅಧ್ಯಯನದ ಸಾಮಾನ್ಯ ಕೋರ್ಸ್ ಶಿಕ್ಷಣ ಶ್ರುತಪಡಿಸುವ ಒದಗಿಸುತ್ತಿರುವ ಸೌಲಭ್ಯಗಳಿಂದ ಮಾತ್ರ ಸ್ವೀಕರಿಸುವುದಿಲ್ಲ. ರಾಣಿಬೆನ್ನೂರಿನ ಇಂಜಿನಿಯರಿಂಗ್ ಕಾಲೇಜ್ ಮತ್ತು ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಹರಪನಹಳ್ಳಿ ನಲ್ಲಿ ಸ್ಥಾಪನೆ ಈ ಸೊಸೈಟಿಯ ಉದ್ಯಮದ ಪ್ರಮುಖ ಇವು. ಈ ತಾಂತ್ರಿಕ ಶಿಕ್ಷಣ ಈ ಸಂಸ್ಥೆಗಳಿಗೆ ಉತ್ಪನ್ನಗಳು ನ್ಯಾಯಸಮ್ಮತ ವೃತ್ತಿಪರ ಅವಕಾಶಗಳನ್ನು ಒದಗಿಸಲು ವಿನ್ಯಾಸ ಮಾಡಲಾಗಿದೆ. ಸಮಾಜದ ಚಟುವಟಿಕೆಗಳನ್ನು ಮಾತ್ರ ಶಿಕ್ಷಣ ವಿಸರಣವಾಗುವುದಕ್ಕೆ ಸೀಮಿತವಾಗಿಲ್ಲ. ಸಮಾಜದ ಮತ್ತಷ್ಟು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಶರಣ ಸಾಹಿತ್ಯ ಒಳಗೆ ವಿಸ್ತರಮಾಡಲಾಗಿದೆ. ೮ನೇ ತರಗತಿ ವಿದ್ಯಾರ್ಥಿಗಳಿಂದ ಅಂತಿಮ ವರ್ಷ ಪದವಿ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಜ್ಞಾನವನ್ನು ಪಡೆಯುತ್ತಿದ್ದಾರೆ. ಸುಮಾರು ಒಟ್ಟು ೨೦೦೦ ಶಾಶ್ವತ ಸಿಬ್ಬಂದಿಯು ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮತ್ತು ಪ್ರತಿ ವರ್ಷ ೩೦,೦೦೦ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಖಾ ಮಠ: ೧.ಸಾಣೇಹಳ್ಳಿ: ಇದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿದೆ. ಇಲ್ಲಿ ನಾಟಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ. ಈ ಮಠದ ಆಡಳಿತವನ್ನು ಚರಪಟ್ಟಾದ್ಯಾಕ‍್ಷರಾದ ಮತ್ತು ರಂಗಕಲಾವಿದರಾದ ಪರಮ ಪೂಜ್ಯ ಡಾ!!ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ನೋಡಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳು ಪ್ರತಿ ಗುರುವಾರ ವಿಜಯ ಕರ್ನಾಟಕ ಜನಪ್ರಿಯ ಕನ್ನಡ ನ್ಯೂಸ್ ಪೇಪರ್ ನಲ್ಲಿ ‘ಬಿಸಿಲು ಬೆಳೆದಿಂಗಳು’ ಅಂಕಣವನ್ನು ಬರೆಯುತ್ತಾರೆ. ಪಾಣಿನಿಯ ಸಂಸ್ಕ್ರತ ಸ್ತೂತ್ರಗಳನ್ನು ಆಧರಿಸಿದ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ೧೨ನೇ ಶತಮಾನದ ವಚನ ಸಾಹಿತ್ಯ ಕುರಿತು ‘ಗಣಕ ವಚನ ಸಂಪುಟ’ ತಂತ್ರಾಂಶವನ್ನು ಸಿದ್ದಪಡಿಸಿದ್ದಾರೆ. ಶ್ರೀ ಪರಮ ಪೂಜ್ಯ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಜಿಯವರ ಸುಂದರ ಐಕ್ಯಮಂಟಪವಿದ್ದು ನೋಡಲು ಸುಂದರ ಹಾಗು ಮನಸ್ಸಿಗೆ ಶಾಂತಿ ನೆಮ್ಮದೆಯನ್ನು ತಂದು ಕೊಡುತ್ತದೆ. ದಿನನಿತ್ಯವೂ ಬೆಳಗ್ಗೆ ಸಾಯಂಕಾಲ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಬಂದು ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಇಲ್ಲಿ ನವಿಲು, ಮೊಲ, ಮತ್ತು ಜಿಂಕೆಗಳು ಮತ್ತು ಬಾತುಕೊಳಿಗಳು ಕಂಡುಬರುತ್ತವೆ. ಯಾವುದೇ ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಮುಖ್ಯವಾದುದು. ದೇಶದಲ್ಲಿನ ತಂತ್ರಜ್ಞಾನದ ಲಭ್ಯತೆಯನ್ನು ಖಾತ್ರಿಗೊಳಿಸುವುದು ವಿಷಯ ಮತ್ತು ತಾಂತ್ರಿಕ ಶಿಕ್ಷಣ ಗುಣಮಟ್ಟ. ಇಡೀ ವಿಶ್ವವೇ ಒಂದು ಜಾಗತಿಕ ಹಳ್ಳಿಯಲ್ಲಿಯಾಗಿ ಹೊರಹೊಮ್ಮುತ್ತಿದೆ, ಅದು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಶಕ್ತಗೊಳಿಸುವ ಒಂದು ದೇಶದ ತಾಂತ್ರಿಕ ಅಂಚಿನ ಹೊಂದಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳನ್ನ ಪ್ರಬುದ್ಧ ನಿರ್ವಹಣೆ ಮತ್ತು ದೇಶದ ಅಗತ್ಯಗಳಿಗೆ ತಾಂತ್ರಿಕ ಸಿಬ್ಬಂದಿಯನ್ನಾಗಿ ಹೊರಹೊಮ್ಮಿಸುತ್ತದೆ, ಮೀಸಲಾದ ಸಿಬ್ಬಂದಿ ಮಾತ್ರ ಹೊಂದಿರುವ ಸಂಸ್ಥೆಯಾಗಿದೆ.

ಮಾರ್ಗ
ಇದು ಬೆಂಗಳೂರಿನಿಂದ ೨೨೭ಕಿಮೀ ದೂರದಲ್ಲಿ ಮತ್ತು, ಚಿತ್ರದುರ್ಗದಿಂದ ೨೭ ಕಿ.ಮೀ ಮತ್ತು ದಾವಣಗೆರೆಯಿಂದ ೫೦ ಕಿ.ಮೀ, ಜಿಲ್ಲಾ ಹೆಡ್ ಕ್ವಾರ್ಟರ್ಸ್ ನಡುವೆ ಇದೆ. ನ್ಯಾಷನಲ್ ಹೈವೇಗೆ ಸಿರಿಗೆರೆ ಕೇವಲ ೬ಕಿಲೋಮೀಟರ್ ಅಂತರದಲ್ಲಿದೆ.

 ಸಿರಿಗೆರೆಯ ಸದ್ಧರ್ಮ ನ್ಯಾಯ ಪೀಠವು ಕರ್ನಾಟಕದಲ್ಲಿ ಪ್ರತೀತಿ ಪಡೆದಿದೆ . ಯಾವ ನ್ಯಾಯಾಲಯದಲ್ಲಿಯೂ ಬಗೆ ಹರೆಯದ ವ್ಯಾಜ್ಯಗಳು ಇಲ್ಲಿ ಮುಗಿಯುತ್ತವೇ .ಚಿತ್ರದುರ್ಗ ದಾವಣಗೆರೆ ಚಿಕ್ಕಮಗಳೂರು ಶಿವಮೊಗ್ಗಾ ಹಾಸನ ಮಂಡ್ಯ ತುಮಕೂರು ಮುಂತಾದ ಭಾಗಗಳಲ್ಲಿ    ಸಿರಿಗೆರೆಯ ಸದ್ಧರ್ಮ ನ್ಯಾಯ ಪೀಠವು ಮತ್ತು ಶ್ರೀಮಠದ ಕಾರ್ಯಗಳನ್ನು ಒಪ್ಪಿಕೊಂಡು ಬದುಕುವ ಸರ್ವ ಜನಾಂಗದ ಜನರಿದ್ದಾರೆ. ಸಾಮಜಿಕ ಕಾಳಜಿ ಭಾವೈಕ್ಯತೆ ಸಾಮರಸ್ಯ ಸಾರುವಲ್ಲಿ ಶ್ರೀ ಮಠವು ಅಗ್ರಗಣ್ಯವೆಂದೇ ಹೇಳಬಹುದು.


One thought on “ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ  ಚೇತನ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-

  1. ಅರ್ಥ ಪೂರ್ಣ ವಿವರಗಳನ್ನು ನಮಗೆ ತಿಳಿಸಲು ಯತ್ನಿಸುವ ನಿಮ್ಮ ಕಾರ್ಯ ನಿಜಕ್ಕೂ ಮೆಚ್ಚುಗೆ ಪಡೆಯುವಲ್ಲಿ ಯಶವು ಕಂಡಿದೆ

Leave a Reply

Back To Top