Category: ಕಾವ್ಯಯಾನ

ಕಾವ್ಯಯಾನ

ಇಳಿಸಂಜೆ

ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…

ಸ್ಮಿತಾ ಭಟ್ ಅವರ ಕವಿತೆಗಳು

ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ […]

ನಾನು-ನೀನು

ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ ಅತ್ತಿಂದಿತ್ತಸರಿದಾಡಿ, ಭಾವ ತನ್ಮಯಗೊಳಿಸುವ ನಾನು..ನಿನ್ನೆದುರಿಗೆ ಬೆದರಿ, ನಾಚಿ..ಕಣ್ಮುಚ್ಚುವ ಕುರುಡಿ! ಹುಣ್ಣಿಮೆಯ ಚಂದಿರನಿಗಾಗಿಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,ಚಂಗನೆ, ಸರಸರನೆ ಜಿಗಿಯುವ ನಾನು..ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು **********************

ರೇಖಾ ಭಟ್ ಅವರ ಕವಿತೆಗಳು

ಅವರೀಗ ಮತ್ತೆ ಕತ್ತಲು
ಹಾದಿಯಲ್ಲಿ ಸಾಗುತ್ತಿದ್ದಾರೆ
ಮತ್ತಷ್ಟು ಬೆಳಕಿನ ಬಿಲ್ಲೆಗಳ ಆಯಲೆಂದು

ಡಾ. ನಿರ್ಮಲಾ ಬಟ್ಟಲ ಕವಿತೆಗಳು

ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ ಸುಂದರಕೈಗೆ ಸಿಗದ ಒಲವು….! ಕನಸುಗಳ ಹಿಂದೆದೂಬೆನ್ನಟ್ಟಿ ಓಡಿದವಳಲ್ಲಕಾಡಿದವಳೂ ಅಲ್ಲ….! ಕನಸಿಗೆ ಬಣ್ಣ ತುಂಬುವಕಲೆಗಾರ ಚಿತ್ರಿಸದಿರುಬಣ್ಣಗಳ ಚೌಕಟ್ಟಿನೊಳಗೆಬಯಲ ಪ್ರೀತಿಸುವವಳು ನಾನು..! ಕನಸುಗಳ ಮೀನು ಹಿಡಿವಬೆಸ್ತಗಾರ ಸಿಕ್ಕಿಸದಿರು ನನ್ನಬಲೆಯೊಳಗೆಹರಿವ ನೀರು ಸೇರುವವಳು ನಾನು..! ಕನಸಿಗೆ ರೆಕ್ಕೆ ಕಟ್ಟುವಮಾಯಗಾರಮೋಡಿಮಾಡದಿರುಮುಗಿಲೊಳಗೆನೆಲದೊಳಗೆ ಕಾಲುರಿ ನಿಂತವಳು ನಾನು….! ನನಗಾಗಿನೀನು ಹೊತ್ತು ತಂದನೂರು ಕನಸುಗಳಲಿಯಾವುದನ್ನು ಆರಿಸಲಿ….? ನೀನು ಪ್ರೀತಿಯಿಂದಕೊಟ್ಟರೆ ಯಾವುದಾದರೂ ಸರಿಇಟ್ಟು ಕೊಳ್ಳುವೆನನಸಾಗಿಸುವ ಪಣತೊಟ್ಟುಕೊಳ್ಳುವೆ…! ಕನಸು […]

Back To Top