ಇಳಿಸಂಜೆ

ಕಾವ್ಯಯಾನ

ಇಳಿಸಂಜೆ

ಶಂಕರಾನಂದ ಹೆಬ್ಬಾಳ

ಒಂದು ಶ್ಯಾಮಲ ಸಂಜೆ
ವಿಶಾಲ ನೀರವದ ಇಳಿಮೌನದಿ
ಏಕಾಂತದ ಭಾವದೊಳು
ತೆರಳುತ್ತಿದ್ದೆ,
ಅದೇಕೋ ಮನ ಮೆಲ್ಲ ಅದುರಿತು…!

ತೆರಗಲೆ ಒಮ್ಮೆಲೆ
ಬೀಸುವ ತಂಗಾಳಿಗೆ
ಜಾರಿ ಇಳೆಗೆ ತಾಗುವ
ಸಮಯ ವಾವ್…..ಎನ್ನುವ
ಉದ್ಘಾರದ ಭಾವ….!

ಜಾರುತಿರುವ ನನ್ನ ನೋಡಿ
ಹಲ್ಕಿರಿಯಿತು..
ಸ್ತಬ್ದನಾದೆ
ದುರ್ದೇಸೆಯ,
ಚಿಂತಾಕ್ರಾಂತ ಪರ್ಣ ಅಳುತ್ತಲೆ
ಜಾರುತ್ತಿದೆ.
ಮುಂದೊಮ್ಮೆ ನೀನು ಹೀಗೆಯೆ…!

ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…!

****************************

Leave a Reply

Back To Top