Category: ಕಾವ್ಯಯಾನ

ಕಾವ್ಯಯಾನ

ಅಪರಿಚಿತನಾಗಿಬಿಡು

ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ

ಗಜಲ್

ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ

ಗಜಲ್

ಕತ್ತಲಲ್ಲಿ ಮಿಂಚು ಹೊಡೆದು ಬೆಳಕಾಗ ಹಾಗೆ ನಿನ್ನ ಮಾತು ಹಿತವೆನಿಸುತ್ತಿತ್ತು
ಈಗೀಗ ದಟ್ಟ ಕಾರಿರುಳ ಕತ್ತಲಲ್ಲಿ ನಿನ್ನ ಧ್ಯಾನ ಮನಸಿಗೆ ಸುಖ ನೀಡುತ್ತದೆ.

ಗಜಲ್

ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ

ಮಾಂತ್ರಿಕ ಬದುಕು

ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ

ಬರೆಯಬೇಕಾದ ಹಾಡು…

ಇತಿಹಾಸದ ಯಾವ‌ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ‌ ಹಿಡಿದು‌
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?

ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ

ಮುಸ್ಸಂಜೆ

ಕೊರಡಿನ ಆಸನ ಕೂಡಾ
ನಿನ್ನ ತೋಳ ದಿಂಬಿಗೆ
ನಾ ತಲೆ ಆನಿಸಲು
ರೇಶಿಮೆ ಸುಪ್ಪತ್ತಿಯ
ಸ್ಪರ್ಶ ಆಗಿದೆ

ಮಾತು ಮತ್ತು ಹೂ

ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು […]

Back To Top