ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ  ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ  ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ.  ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857).  ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ:  ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ.  ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ.  ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು.  ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ  ದ್ರೋಹ ಎಸಗಿ  ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ  ತಿಳಿಸಿರುವ  ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು.  ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು.  ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು.  ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು.  ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು.  1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.

Read Post »

ಕಾವ್ಯಯಾನ

  ರಮೇಶ್ ಅಂಬಳಿ ಅವರ ಕವಿತೆ “ನಾನು”

ಕಾವ್ಯ ಸಂಗಾತಿ   ರಮೇಶ್ ಅಂಬಳಿ ನಾನು ನಾನು, ಯಾರು ಈ ನಾನು?..ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಅಡಗಿಕುಳಿತಿರುವನು ಈ ನಾನು,ಇವನಿಂದ ಎಲ್ಲಿಯೂ ಶಾಂತಿ ಇಲ್ಲ, ಎಲ್ಲಿಯೂ ಸಮಾಧಾನವಿಲ್ಲ,ಶಾಂತಿಗೆ ಭಂಗ ತರುವುದೇ ಈ ನಾನು ಕೆಲಸ,ಯಾರು ಈ ನಾನು?.. ಇವನಿದ್ದ ಕಡೆಯಲ್ಲಾ ಬರೀ ಹೊಡೆದಾಟ ಬಡಿದಾಟ,ಇವನಿದ್ದ ಕಡೆಯಲ್ಲಾ ನಾನು ಹೆಚ್ಚು, ನೀನು ಕೀಳು,ಇವನಿದ್ದಕಡೆಯಲ್ಲಾ ಬೇಧಾ ಬಾವ,ಇವನಿದ್ದಕಡೆಯಲ್ಲಾ ಜಾತಿ ಮತಗಳ ಗಲಭೆಇವನಿದ್ದಕಡೆಯಲ್ಲಾ ಹಿಂಸೆ, ಶಾಂತಿಗೆ ಇವನ ಬಳಿ ಸ್ಥಳವೇ ಇಲ್ಲ, ಯಾರು ಈ ನಾನು ?.. ಪ್ರೀತಿ ಎಂದರೆ ಇವನಿಗೆ ವಾಕರಿಕೆ, ಸ್ನೇಹಕ್ಕೆ ಇವನಲ್ಲಿ ಬೆಲೆಯೇ ಇಲ್ಲಾ, ಇವನದು ಯಾವಾಗಲೂ ತರ್ಲೆ,ಇವನು ವಾಸಿಸುವ ಕುಟುಂಬದಲ್ಲಿ ಕಲಹಾ,ಇವನಿರುವ ಸಂಘ ಸಂಸ್ಥೆಗಳಲ್ಲಿ ಕಲಹಾ,ಇವನು ನಡೆದಾಡುವ ಸ್ಥಳದಲ್ಲೆಲ್ಲಾ ಕಲಹಾ,ಇವನೇ ಯಾಕೆ ಹೀಗೆ ?.. ಯಾರು ಈ ನಾನು?.. ಈ ನಾನು, ಲೋಕವನ್ನು ಬಿಟ್ಟು ತೊಲಗಲಿ,ಈ ನಾನು ಕುಟುಂಬವನ್ನು ಬಿಟ್ಟು ತೊಲಗಲಿ,ಈ ನಾನು ಸಮಾಜವನ್ನು ಬಿಟ್ಟು ತೊಲಗಲಿ,ಈ ನಾನು ನನ್ನನ್ನು ಬಿಟ್ಟು ತೊಲಗಲಿ,ಈ ನಾನು ನಿನ್ನನ್ನು ಬಿಟ್ಟು ತೊಲಗಲಿ,ಆಗ ಸಮಾಜದಲ್ಲಿ ಶಾಂತಿ, ಕುಟುಂಬದಲ್ಲಿ ಶಾಂತಿ,ನಿನ್ನಲ್ಲಿ ಶಾಂತಿ, ನನ್ನಲ್ಲಿ ಶಾಂತಿ, ಲೋಕವೆಲ್ಲಾ ಶಾಂತಿ ಯಿಂದ ತುಂಬುವುದು ನೋಡಾ ಮನುಜಾ..!! ರಮೇಶ್ ಅಂಬಳಿ

  ರಮೇಶ್ ಅಂಬಳಿ ಅವರ ಕವಿತೆ “ನಾನು” Read Post »

ಕಾವ್ಯಯಾನ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ”

ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ‌ “ನಿಜ ದೈವ” ನಾನು ಹುಟ್ಟಿದ್ದು ದೇವಸ್ಥಾನ ದಪಕ್ಕದಲ್ಲಿಯೇ ಆದ್ದರಿಂದ ಗಂಟೆಗಳ ಶಬ್ದವೇಜೋಗುಳವಾದವುಅಜಾನಗಳೇ ಸುಪ್ರಭಾತ ಗಳಾದವು ಜೀವನದ ಭಾಗವಾಗಿ  ಜೀವಕ್ಕೆ ತಣು ವಾಗಿಯಾರು ಹಾಡಿದರು ಯಾರು ಬರೆದವರುಎಂಬೆಲ್ಲ ಪ್ರಶೆಗಳಿಗೆ ಉತ್ತರವೇ ಬೇಕಿರಲಿಲ್ಲ ನೆಮ್ಮದಿಯಾಗಿದ್ದ ನೆಮ್ಮದಿ ಹಾಳಾಯಿತೇಕಿಂದುಗಂಟೆ  ಪ್ರಾರ್ಥನೆ ಗಳೇ ಕತ್ತು ಹಿಸುಕುತಿವೆಯಿಂದುಜನಮನದ ಭಾವನೆಯ ಕೊಲ್ಲುತಿವೆ ಇಂದು ಗೊಂದಲದ ಗೂಡಾಗಿಡೆ  ನನ್ನೀ ಮನವುಆ ಬಹುರೂಪಿ ಪರಮಾತ್ಮನ  ಕಂಡುಅಯ್ಯೋ ಏನಿತು ರೂಪ ಏನು ವೇಷ ಸುಂದರವಾಗಿಹೆ ವೇಷಭೂಷದಲಿಇಂಪಾಗಿರುವೆ ವೇದ ಪದಗಳಲಿನೋಡಲು ಕೇಳಲು ಚಂದವೋ ಚಂದ ಹೇ ದೇವನೇ ನಂಗೊತ್ತು ನೀನಲ್ಲಿಲ್ಲಪದ ರೂಪವ ಮೀರಿಹೆ ನೀನುಅಯ್ಯೋ ಎಂದು ಕಾಣಬಲ್ಲೆ ನಿಜ ದೈವವನು. ರಾಜೇಶ್ವರಿ ಪ್ರಕಾಶ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ” Read Post »

ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಆಸೆ ( ಅತಿಯಾಸೆ)” ಕಣ್ಣು ಮುಚ್ಚಿವೆಮಣ್ಣು ಮುಚ್ಚುವ ಮುನ್ನನಿನ್ನ ಮುಖವನ್ನೋಮ್ಮೆನನ್ನ ಮುಚ್ಚಿದ ಕಣ್ಣುಗಳೊಳಗಿಂದ ನೋಡುವಾಸೆ ಉಸಿರಾಡುವದ ಮರೆತ ನನ್ನಉಸಿರ ತಿತ್ತಿಗಳಪ್ರತಿ ಪದರಲಿನಿನ್ನ ಹೆಸರಿರುವದ ನಿನಗೆ ತೋರಿಸುವಾಸೆ ನಿನ್ನವಳು ನಾನೆಂದುಡಂಗುರಸಾರಿದ ಸಮಕರಿಗೇನೀನು ನನ್ನವನೆಂದು ತೋರಿಸುವಾಸೆ ಮರಳಿ ಬಾರದೂರಿಗೆ ಹೊರಟಿರುವೆಹೂವಿನಾ ತೇರನೇರಿ.ಮುಡಿಗೆ ಮೊಳ ಮಲ್ಲಿಗೆ ಇಲ್ಲೆಂಬಸುದ್ದಿ ಹಬ್ಬಬಾರದೆಂಬಾಸೆ. ನಿನ್ನ ಆರುಮೆ ಅಮೂರ್ತ !ಅರಿವಿದೆ ನನಗೆ.ಅರ್ಥಕಪಾರ್ಥ ಕಲ್ಪಿಸುವಕಮಂಗಿ ತಿಮಿಂಗಿಲಗಳಹಸಿವಿಗಹಾರ ನೀನಾಗ ಬಾರದೆಂಬಾಸೆ ಒಂದೇ ವಾಕ್ಯದಲ್ಲೊಮ್ಮೆಮರಣಕ್ಕೆ ಮದ್ದಿಲ್ಲನನ್ನೊಲುಮೆಗೆ ಸಾವಿಲ್ಲ ಎಂದುನೀ ಉಸುರ ಬೇಕೆಂಬಾಸೆ ಬಿಂದುಗಳಿಂದಲೇ ಬಿಗಿದ ನಿನ್ನ ಕಣ್ಣುಗಳಿಂದನನ್ನ ನೋಡುತ್ತಾ..ನನ್ನ ಹಣೆಬರಹ ದಲ್ಲಿಲ್ಲದ ನೀನು ನನ್ನಹಣೆಗೊಮ್ಮೆ ಮುತ್ತಿಕ್ಕಿ ಮಣ್ಣಿನಾ ದೇಹತಣ್ಣಗೆ ಮಣ್ಣಿಗೆ ಕಳಿಸುವೆ ಎಂಬಾಸೆ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)” Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ *ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? “ಹುಟ್ಟಿನಿಂದ ಬಂದ ಗುಣ ಅಥವಾ ನೈಜ ಸ್ವಭಾವವನ್ನು ಎಂತಹ ಭವ್ಯ ಪರಿಸರದಲ್ಲೇ ಇಟ್ಟರೂ ಬದಲಾಯಿಸಲು ಸಾಧ್ಯವಿಲ್ಲ.” ಈ ಅನುಭವದ ಸಾರವನ್ನು ಹಿಡಿದಿಟ್ಟ ಗಾದೆಗಳು ನಮಗೆ ನೀಡಿದ ಅಮೂಲ್ಯ ಜ್ಞಾನದ ಮುತ್ತುಗಳು. ಹನಿ ಹನಿ ಸೇರಿದರೆ ಹಳ್ಳವಾಗುವಂತೆ, ಸಣ್ಣ ಸಾಲುಗಳಲ್ಲಿ ಇಡೀ ಜಗತ್ತಿನ ಸತ್ಯವನ್ನು ದರ್ಶಿಸುವ ಶಕ್ತಿ ಗಾದೆ ಮಾತಿನಲ್ಲಿವೆ. ಅಂತಹ ಅದ್ಭುತ ಗಾದೆಗಳಲ್ಲಿ “ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?” ಎನ್ನುವುದು ಪ್ರಮುಖವಾದದ್ದು. ಇದು ಕೇವಲ ಪಕ್ಷಿ ಪ್ರಪಂಚಕ್ಕೆ ಸೀಮಿತವಾಗದೆ, ಮನುಷ್ಯನ ಸಹಜ ಗುಣ, ಯೋಗ್ಯತೆ ಮತ್ತು ಅಹಂಕಾರದ ಮುಖವಾಡಗಳನ್ನು ಕಳಚಿಡುವ ಒಂದು ತತ್ವವಾಗಿದೆ.​​ಕಾಗೆಯ ಸ್ವರ ಬಹು ಕರ್ಕಶ ಧ್ವನಿ, ಸಾಮಾನ್ಯತೆ ಅಥವಾ ಕೀಳು ಗುಣದ ಸಂಕೇತ ಇಲ್ಲಿ ಕಾಗೆಯನ್ನು ಕೀಳಾಗಿ ಕಾಣುವುದಕ್ಕಿಂತ ಅದರ ಸಹಜ ಗುಣವನ್ನು ಗುರುತಿಸುವುದು ಮುಖ್ಯ.​ಪಂಜರ (ಚಿನ್ನದ ಪಂಜರ): ಇದು ವೈಭೋಗ, ಕೃತಕವಾಗಿ ಸೃಷ್ಟಿಸಿದ ಉನ್ನತ ಪರಿಸರ ಅಥವಾ ಯೋಗ್ಯತೆಗೂ ಮೀರಿದ ಸ್ಥಾನದ ಸಂಕೇತ.​ಪಂಚಮ ಸ್ವರದ ವಿಶೇಷತೆ ಎಂದರೆ ಸಂಗೀತದ ಅತ್ಯಂತ ಮಧುರವಾದ, ಕೋಗಿಲೆಯು ಹೊರಡಿಸುವ ಶ್ರೇಷ್ಠ ಧ್ವನಿಯ ಸಂಕೇತ.​ಕೋಗಿಲೆಯನ್ನು ಚಿನ್ನದ ಪಂಜರದಲ್ಲಿಟ್ಟರೆ ಅದು ತನ್ನ ಮಧುರವಾದ ಪಂಚಮ ಸ್ವರದಿಂದ ಹಾಡುತ್ತದೆ. ಆದರೆ, ಕಾಗೆಯನ್ನು ತಂದು ಎಷ್ಟೇ ದುಬಾರಿ, ರತ್ನಖಚಿತ ಪಂಜರದಲ್ಲಿ ಕೂರಿಸಿದರೂ ಅದು ತನ್ನ ಸಹಜ ಗುಣವಾದ ‘ಕಾವ್ ಕಾವ್’ ಎಂಬ ಕರ್ಕಶ ಧ್ವನಿಯನ್ನೇ ಹೊರಡಿಸುತ್ತದೆಯೇ ಹೊರತು ಕೋಗಿಲೆಯಂತೆ ಹಾಡಲು ಸಾಧ್ಯವಿಲ್ಲ.​ನೈಜ ಸ್ವಭಾವ ಮತ್ತು ಪರಿಸರದ ಮಿತಿ​ಮಾನವನ ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಮತ್ತು ವಂಶವಾಹಿ (ಹುಟ್ಟುಗುಣ) ಎರಡೂ ಪಾತ್ರ ವಹಿಸುತ್ತವೆ. ಆದರೆ ಕೆಲವು ಮೂಲಭೂತ ಗುಣಗಳು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿರುತ್ತವೆ. ಹೊರಗಿನ ಆಡಂಬರ, ಸಂಪತ್ತು ಅಥವಾ ಉನ್ನತ ಹುದ್ದೆಗಳು ಮನುಷ್ಯನ ಬಾಹ್ಯ ರೂಪವನ್ನು ಬದಲಾಯಿಸಬಹುದೇ ಹೊರತು ಆತನ ಆಂತರಿಕ ಯೋಗ್ಯತೆ ಅಥವಾ ದುರ್ಗುಣವನ್ನು ಬದಲಾಯಿಸಲಾರವು.​ಒಬ್ಬ ಅಯೋಗ್ಯನಿಗೆ ರಾಜಸಿಂಹಾಸನವನ್ನು ನೀಡಿದರೂ ಆತ ಯೋಚಿಸುವ ರೀತಿ ಮತ್ತು ನಡೆದುಕೊಳ್ಳುವ ರೀತಿ ಆತನ ಅಲ್ಪತನವನ್ನೇ ಪ್ರದರ್ಶಿಸುತ್ತದೆ. ಕೆಸರಿನಲ್ಲಿ ಹುಟ್ಟಿದ ಕಮಲ ಪವಿತ್ರವಾಗುತ್ತದೆ, ಆದರೆ ಹಾವಿಗೆ ಹಾಲನ್ನು ಕುಡಿಸಿದರೂ ವಿಷವೇ ಹೊರಬರುತ್ತದೆ ವಿನಃ ಅಮೃತವಲ್ಲ. ಹಾಗೆಯೇ, ಆಂತರಿಕವಾಗಿ ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅತ್ಯುನ್ನತ ಸಮಾಜದಲ್ಲಿ ಕೂರಿಸಿದರೂ ಆತನ ನೈಜ ಗುಣ ಒಂದಲ್ಲಾ ಒಂದು ದಿನ ಹೊರಬಂದೇ ತೀರುತ್ತದೆ.​ಸಾಮಾಜಿಕ ಮತ್ತು ರಾಜಕೀಯ ಪ್ರಸ್ತುತತೆಯಲ್ಲಿನ​ಇಂದಿನ ಆಧುನಿಕ ಸಮಾಜಕ್ಕೆ ಈ ಗಾದೆ ಮಾತು ಅತ್ಯಂತ ಪ್ರಸ್ತುತವಾಗಿದೆ. ಇಂದು ಹಣ, ಅಧಿಕಾರ ಅಥವಾ ವಂಶಪಾರಂಪರ್ಯದ ಪ್ರಭಾವದಿಂದ ಅನೇಕರು ಉನ್ನತ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಆ ಸ್ಥಾನಕ್ಕೆ ಬೇಕಾದ ಅರ್ಹತೆ, ಕರುಣೆ, ವಿವೇಕ ಅವರಲ್ಲಿ ಇರುವುದಿಲ್ಲ.​ರಾಜಕೀಯದಲ್ಲಿ ಅರ್ಹತೆಯಿಲ್ಲದ ನಾಯಕನಿಗೆ ಎಷ್ಟೇ ದೊಡ್ಡ ಅಧಿಕಾರ ನೀಡಿದರೂ ಆತ ಜನಕಲ್ಯಾಣ ಮಾಡಲಾರ. ಆತನ ಭ್ರಷ್ಟ ಮತ್ತು ದುರಹಂಕಾರದ ಗುಣಗಳು ಹೊರಬೀಳುತ್ತವೆ. ಇದು ಕಾಗೆಯನ್ನು ಪಂಜರದಲ್ಲಿಟ್ಟಂತೆ.​ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಅಷ್ಟೆ .ಕೇವಲ ಶಿಫಾರಸಿನಿಂದ ದೊಡ್ಡ ಹುದ್ದೆ ಪಡೆದ ವ್ಯಕ್ತಿ ಆ ಕೆಲಸದಲ್ಲಿ ಸೃಜನಶೀಲತೆ ತೋರಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದವನಿಗೆ ಐಷಾರಾಮಿ ಕಚೇರಿ (ಪಂಜರ) ಕೊಟ್ಟರೂ ಆತನಿಂದ ಗುಣಮಟ್ಟದ ಕೆಲಸ (ಪಂಚಮ ಸ್ವರ) ನಿರೀಕ್ಷಿಸಲು ಸಾಧ್ಯವಿಲ್ಲ.​​ಈ ಗಾದೆಯು ನಮಗೆ ಕೃತಕತೆ ಮತ್ತು ನೈಸರ್ಗಿಕತೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಕಾಗೆಗೆ ತನ್ನದೇ ಆದ ಮಹತ್ವವಿದೆ—ಅದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ, ಪಿತೃಕಾರ್ಯಗಳಲ್ಲಿ ಅದಕ್ಕೆ ಪ್ರಾಧಾನ್ಯತೆಯಿದೆ. ಆದರೆ, ಅದರ ಮಿತಿ ಅದಕ್ಕಿದೆ. ಕಾಗೆ ಕೋಗಿಲೆಯಾಗಲು ಯತ್ನಿಸುವುದು ಕೃತಕತೆ.​ಅದೇ ರೀತಿ, ಮನುಷ್ಯ ತಾನು ಅಲ್ಲದೇ ಇರುವುದನ್ನು ತೋರಿಸಿಕೊಳ್ಳಲು ‘ಮುಖವಾಡ’ ಧರಿಸಿದಾಗ ಈ ಗಾದೆ ಅನ್ವಯಿಸುತ್ತದೆ. ಎಷ್ಟೇ ಶ್ರೀಮಂತಿಕೆಯ ಪ್ರದರ್ಶನ ಮಾಡಿದರೂ, ಆಚಾರ-ವಿಚಾರಗಳಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಶ್ರೀಮಂತಿಕೆ ವ್ಯರ್ಥ. ಬೂದಿಗೆ ತುಪ್ಪ ಸುರಿದರೆ ಹೋಮವಾಗುವುದಿಲ್ಲ, ಹಾಗೆಯೇ ಸಂಸ್ಕಾರಹೀನನಿಗೆ ಸಕಲ ಸೌಲಭ್ಯ ನೀಡಿದರೂ ಆತ ಸತ್ಪ್ರಜೆಯಾಗಲಾರ.​ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ​ಕನ್ನಡದ ಅನೇಕ ಶರಣರು ಮತ್ತು ದಾಸರು ಈ ಕಲ್ಪನೆಯನ್ನು ತಮ್ಮ ವಚನ ಹಾಗೂ ಕೀರ್ತನೆಗಳಲ್ಲಿ ಬಳಸಿದ್ದಾರೆ.​”ಕಾಗೆಯ ತಂದು ಪಂಜರದೊಳಗಿಟ್ಟರೆ ಕೋಗಿಲೆಯಾಗಬಲ್ಲದೇ?”​ಎಂದು ಜಗತ್ತಿನ ಕೃತಕತೆಯನ್ನು ವಚನಕಾರರು ಪ್ರಶ್ನಿಸಿದ್ದಾರೆ. ಆಧ್ಯಾತ್ಮಿಕವಾಗಿ, ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಗಳೆಂಬ ಮಲಿನತೆ ತುಂಬಿರುವಾಗ, ದೇಹಕ್ಕೆ ಕಾವಿ ಬಟ್ಟೆ ಧರಿಸಿದ ತಕ್ಷಣ ಅಥವಾ ದೇವಸ್ಥಾನದೊಳಗೆ ಕುಳಿತ ತಕ್ಷಣ ಒಬ್ಬ ವ್ಯಕ್ತಿ ಮಹಾತ್ಮನಾಗಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದ ಹೊರತು ಬಹಿರಂಗದ ಆಡಂಬರವೆಲ್ಲವೂ ಶೂನ್ಯ. ಕಾಗೆಯ ಕಪ್ಪು ಬಣ್ಣವನ್ನು ತೊಳೆದರೆ ಬಿಳಿಯಾಗುವುದಿಲ್ಲ, ಹಾಗೆಯೇ ದುರ್ಬುದ್ಧಿಯುಳ್ಳವನಿಗೆ ತೀರ್ಥಸ್ನಾನ ಮಾಡಿಸಿದರೂ ಆತನ ಪಾಪ ಅಥವಾ ಕುಟಿಲತೆ ದೂರವಾಗುವುದಿಲ್ಲ.ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? ಎಂಬ ಮಾತು ನಮಗೆ ಬದುಕಿನ ದೊಡ್ಡ ಸತ್ಯವನ್ನು ಬೋಧಿಸುತ್ತದೆ.​ಸ್ವಯಂ ಅರಿವು ಉಂಟಾಗುತ್ತದೆ.ನಾವು ಯಾರೋ ಆಗಲು ಪ್ರಯತ್ನಿಸದೇ, ನಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿ ಬೆಳೆಯಬೇಕು.​ ಬಾಹ್ಯ ವೈಭವವನ್ನು ನೋಡಿ ವ್ಯಕ್ತಿಯನ್ನು ಅಳೆಯಬಾರದು, ಆತನ ಆಂತರಿಕ ಯೋಗ್ಯತೆ ಮತ್ತು ನಡತೆಗೆ ಬೆಲೆ ಕೊಡಬೇಕು.​ಕೇವಲ ಪರಿಸರ ಬದಲಾದರೆ ಸಾಲದು, ವ್ಯಕ್ತಿಯ ಆಂತರಿಕ ಗುಣ ಮತ್ತು ಯೋಚನಾ ಲಹರಿ ಬದಲಾಗಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿತಿಯನ್ನು ಅರಿತು, ಕೃತಕ ಮುಖವಾಡಗಳನ್ನು ಕಳಚಿ ಹಾಕಿ, ಸತ್ಸಂಗ ಮತ್ತು ಸದ್ವಿಚಾರಗಳ ಮೂಲಕ ತನ್ನ ಆಂತರಿಕ ಗುಣವನ್ನು ಕೋಗಿಲೆಯಂತೆ ಮಧುರವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ​ಈ ಮಾತು ಮನುಷ್ಯನ ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಭಾವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು ಹುಟ್ಟುಗುಣ ಅಥವಾ ಬೆಳೆಸಿದ ವಾತಾವರಣ ಎನ್ನಲಾಗುತ್ತದೆ. ​ ಇಂದು ಜಗತ್ತು ಕೇವಲ ‘ಪಂಜರ’ಗಳನ್ನು ಅಂದರೆ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳನ್ನು ನೋಡಿ ವ್ಯಕ್ತಿಯ ಯೋಗ್ಯತೆಯನ್ನು ಅಳೆಯುತ್ತದೆ. ಆದರೆ, ಮಾನಸಿಕವಾಗಿ ವಿಕಾಸಗೊಳ್ಳದ, ಸಣ್ಣತನದ ಯೋಚನೆ ಇರುವ ವ್ಯಕ್ತಿಯನ್ನು ಎಷ್ಟೇ ದೊಡ್ಡ ಶ್ರೀಮಂತಿಕೆಯಲ್ಲಿ ಇಟ್ಟರೂ ಆತನ ಮಾತುಗಳು ಮತ್ತು ವರ್ತನೆಗಳು ಕಾಗೆಯ ಕರ್ಕಶ ಧ್ವನಿಯಂತೆಯೇ ಇರುತ್ತವೆ.ಕಾಗೆಯು, ಕೋಗಿಲೆಯನ್ನು ನೋಡಿ ನಕಲು ಮಾಡಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಾವೂ ಹಾಗೆಯೇ ಬದುಕಲು ಕೃತಕವಾಗಿ ಪ್ರಯತ್ನಿಸುತ್ತಿದೆ. ತನ್ನ ಮೂಲ ಅಸ್ತಿತ್ವವನ್ನು ಮರೆತು, ಬೇರೊಬ್ಬರ ಮುಖವಾಡ ಧರಿಸಿದಾಗ ಮನುಷ್ಯ ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಕಾಗೆಗೆ ತನ್ನದೇ ಆದ ಸ್ವಾತಂತ್ರ್ಯವಿದೆ, ಆದರೆ ಅದು ಕೋಗಿಲೆಯಾಗಲು ಹೋದಾಗ ಮಾತ್ರ ಹಾಸ್ಯಾಸ್ಪದವಾಗುತ್ತದೆ.​​ಕುಟುಂಬ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ಈ ಗಾದೆಗೆ ಭಿನ್ನವಾದ ಅರ್ಥವಿದೆ. ಕೇವಲ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದಲ್ಲಿ ಹುಟ್ಟಿದ ತಕ್ಷಣ ಒಬ್ಬ ವ್ಯಕ್ತಿಗೆ ಯೋಗ್ಯತೆ ಬಂದುಬಿಡುವುದಿಲ್ಲ. ಸಮಾಜದಲ್ಲಿ ದೊಡ್ಡ ಮನೆತನದಲ್ಲಿ ಹುಟ್ಟಿ, ಸಕಲ ಸೌಕರ್ಯಗಳ ಮಧ್ಯೆ ಬೆಳೆದ ಎಷ್ಟೋ ಮಕ್ಕಳು ದುಶ್ಚಟಗಳಿಗೆ ದಾಸರಾಗಿ, ಸಮಾಜಕ್ಕೆ ಕಂಟಕರಾಗುವುದನ್ನು ನಾವು ನೋಡುತ್ತೇವೆ. ಇಲ್ಲಿ ‘ದೊಡ್ಡ ಮನೆತನ’ ಎನ್ನುವುದು ಚಿನ್ನದ ಪಂಜರ ಇದ್ದಂತೆ. ಆದರೆ ಆ ಮಗುವಿನಲ್ಲಿ ಮೂಲತಃ ಒಳ್ಳೆಯ ಗುಣ, ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೆ, ಆತ ಸಮಾಜದಲ್ಲಿ ‘ಪಂಚಮ ಸ್ವರ’ದಂತಹ ಕೀರ್ತಿಯನ್ನು ತರಲಾರ.​ ರಾಜನ ಮಗ ರಾಜನಾಗಬಹುದು, ಆದರೆ ಆತ ಪ್ರಜಾವತ್ಸಲನಾದ ನಾಯಕನಾಗಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದ ಉತ್ತರಾಧಿಕಾರಿಗೆ ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಹಸ್ತಾಂತರಿಸಿದರೂ ಆತ ಅದನ್ನು ನಾಶ ಮಾಡುತ್ತಾನೆಯೇ ಹೊರತು ರಕ್ಷಿಸುವುದಿಲ್ಲ. ಯೋಗ್ಯತೆಯನ್ನು ತರಬೇತಿಯಿಂದ ಕೊಡಬಹುದೇ ಹೊರತು, ಜನ್ಮಸಿದ್ಧ ಹಕ್ಕಾಗಿ ಅಥವಾ ಆಸ್ತಿಯ ರೂಪದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ.​​ಕಲೆ ಮತ್ತು ಸಾಹಿತ್ಯದ ಲೋಕದಲ್ಲಿ ಈ ಗಾದೆಯು ‘ಪ್ರತಿಭೆ’ ಮತ್ತು ‘ಅವಕಾಶ’ಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ. ​ಕಲೆ ಎನ್ನುವುದು ದೈವದತ್ತವಾದದ್ದು ಮತ್ತು ಕಠಿಣ ಪರಿಶ್ರಮದಿಂದ ಒಲಿಯುವಂತದ್ದು. ಇಂದು ಕಲಾ ಜಗತ್ತಿನಲ್ಲಿ ಅಥವಾ ಸಿನಿಮಾ ರಂಗದಲ್ಲಿ ಯಾವುದೇ ಪ್ರತಿಭೆಯಿಲ್ಲದ ವ್ಯಕ್ತಿಗೆ ಹಣದ ಬಲದಿಂದ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು. ಆದರೆ, ಜನಮನ ಗೆಲ್ಲುವಂತಹ ‘ಪಂಚಮ ಸ್ವರ’ವನ್ನು ಸೃಷ್ಟಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ನೈಜ ಪ್ರತಿಭೆಯಿಲ್ಲದ ನಟನೆ ಅಥವಾ ಸಂಗೀತ ಕೃತಕವಾಗಿ ಕಾಣುತ್ತದೆ.ಕಾಗೆ ಕಪ್ಪಗಿದ್ದರೂ ಸಮಾಜಕ್ಕೆ ಅದರದೇ ಆದ ಕೊಡುಗೆಯಿದೆ. ಆದರೆ ಅದನ್ನು ಕೋಗಿಲೆಯ ಸ್ಥಾನದಲ್ಲಿ ಕೂರಿಸುವುದು ಕಲೆಯ ಅಪಚಾರವಾಗುತ್ತದೆ. ಅದೇ ರೀತಿ, ಅನರ್ಹರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಉನ್ನತ ಪೀಠದಲ್ಲಿ ಕೂರಿಸಿದಾಗ ಇಡೀ ಸಾಂಸ್ಕೃತಿಕ ವ್ಯವಸ್ಥೆಯೇ ಹದಗೆಡುತ್ತದೆ ಎಂಬುದನ್ನು ಈ ಗಾದೆ ಎಚ್ಚರಿಸುತ್ತದೆ.​​ನಮ್ಮ ಭಾರತೀಯ ದರ್ಶನಗಳಲ್ಲಿ ಅಥವಾ ವೇದಾಂತದಲ್ಲಿ ಈ ಗಾದೆಗೆ ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಿದೆ. ಇಲ್ಲಿ ಪಂಜರ ಎನ್ನುವುದು ‘ಐಹಿಕ ಜಗತ್ತು’ ಅಥವಾ ‘ದೇಹ’, ಕಾಗೆ ಎನ್ನುವುದು ‘ಅಹಂಕಾರ’ ಅಥವಾ ‘ಅಜ್ಞಾನ’.​ಅಂತರಂಗದ ಶುದ್ಧಿಯೆನ್ನಬಹುದು. ಮನುಷ್ಯನು, ಕಾಶಿ, ರಾಮೇಶ್ವರ ಅಥವಾ ಮಕ್ಕಾಗೆ ಹೋಗಿ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದರೂ ಆತನ ಮನಸ್ಸಿನಲ್ಲಿರುವ ಕ್ರೌರ್ಯ, ಅಸೂಯೆ ಮತ್ತು ಕಾಮನೆಗಳು ದೂರವಾಗುವುದಿಲ್ಲ. ದೇಹಕ್ಕೆ ಚಂದನ ಸವರಿದರೂ ಒಳಗಿರುವ ಕೊಳಕು ನಾಶವಾಗುವುದಿಲ್ಲ. ಧಾರ್ಮಿಕ ಆಚರಣೆಗಳು ಕೇವಲ ಬಾಹ್ಯ ಪಂಜರದಂತೆ. ಮನಸ್ಸು ಶುದ್ಧವಾಗದ ಹೊರತು ಭಗವಂತನ ಸಾಕ್ಷಾತ್ಕಾರವೆಂಬ ಪಂಚಮ ಸ್ವರ ಹೊರಹೊಮ್ಮಲು ಸಾಧ್ಯವಿಲ್ಲ. ​ ಹಿಂದೂ ತತ್ತ್ವಶಾಸ್ತ್ರದ ಪ್ರಕಾರ, ಮನುಷ್ಯ ತನ್ನ ಹಿಂದಿನ ಜನ್ಮಗಳ ‘ವಾಸನೆ’ (ಗುಣಗಳು) ಮತ್ತು ಕರ್ಮಗಳನ್ನು ಹೊತ್ತು ತರುತ್ತಾನೆ. ಆ ಹುಟ್ಟುಗುಣವನ್ನು ಕೇವಲ ಬಾಹ್ಯ ಪರಿಸರದಿಂದ ಬದಲಾಯಿಸುವುದು ಕಷ್ಟ. ಕಟುಕನ ಕೈಯಲ್ಲಿರುವ ಕತ್ತಿಗೆ ಚಿನ್ನದ ಹಿಡಿ ಹಾಕಿದರೂ ಅದು ರಕ್ತವನ್ನೇ ಹರಿಸುತ್ತದೆಯೆ ಹೊರತು ಕಬ್ಬಿನ ಹಾಲನ್ನು ಹರಿಸಲಾರದು .ಹಾಗೆಯೇ, ತಾಮಸ ಗುಣವುಳ್ಳ ವ್ಯಕ್ತಿಗೆ ಸಾತ್ವಿಕ ವಾತಾವರಣ ಕಲ್ಪಿಸಿದರೂ ಆತನ ಆಲೋಚನೆಗಳು ತಾಮಸಿಕವಾಗಿಯೇ ಇರುತ್ತವೆ.​ಜಾಗತಿಕ ಮಟ್ಟದಲ್ಲಿ ಅಥವಾ ಇಂದಿನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಈ ಗಾದೆ ಅತ್ಯಂತ ಮಾರ್ಮಿಕವಾದ ವಿಡಂಬನೆಯನ್ನು ಮಾಡುತ್ತದೆ.​ಪದವಿಗಳು ಮತ್ತು ಪ್ರಬುದ್ಧತೆಗಳಿಗೂ ಬೇರೆ ಮಾತು ಹೇಳಬೇಕಾಗಿಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರೂಪಾಯಿ ಕೊಟ್ಟು ಪದವಿ (Degrees) ಪಡೆದವರು ದೇಶದಲ್ಲಿದ್ದಾರೆ. ಈ ಪದವಿಗಳು ಕೇವಲ ಒಂದು ಪಂಜರವಿದ್ದಂತೆ. ಆದರೆ, ಸಮಾಜಕ್ಕೆ ಬೇಕಾದ ಕರುಣೆ, ನೈತಿಕತೆ, ಮತ್ತು ದೇಶಪ್ರೇಮ ಅವರಲ್ಲಿ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಜ್ಞಾನವಿದ್ದಲ್ಲಿ ವಿನಯವಿರಬೇಕು, ಆದರೆ ಕೇವಲ ಅಹಂಕಾರದ ‘ಕಾವ್ ಕಾವ್’ ಧ್ವನಿ ಕೇಳಿಬಂದರೆ ಆ ಶಿಕ್ಷಣ ಸಂಪೂರ್ಣ ವಿಫಲ ಎಂದರ್ಥ.​ವ್ಯವಸ್ಥೆಯ ವೈಫಲ್ಯವು ಎಷ್ಟು ಕೆಟ್ಟು ಹೋಗಿದೆ ಎಂದರೆ, ಯಾವುದೇ ಒಂದು ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ನೌಕರನನ್ನು ಮೂಲೆಗುಂಪು ಮಾಡಿ, ಕೇವಲ ಹಿತೈಷಿ ಅಥವಾ ಚಮಚಾಗಿರಿ ಮಾಡುವ ವ್ಯಕ್ತಿಗೆ ಉನ್ನತ ಮ್ಯಾನೇಜರ್ ಹುದ್ದೆ ನೀಡಿದರೆ ಆ ಸಂಸ್ಥೆ ದಿವಾಳಿಯಾಗುತ್ತದೆ. ಕಾಗೆಯನ್ನು ಸಿಂಹಾಸನದ ಮೇಲೆ ಕೂರಿಸಿದಾಗ ಇಡೀ ಸಾಮ್ರಾಜ್ಯವೇ ಪತನದ ಹಾದಿ ಹಿಡಿಯುತ್ತದೆ ಎಂಬ ರಾಜನೀತಿಯ ಸತ್ಯವನ್ನು ಇದು ಜ್ಞಾಪಿಸುತ್ತದೆ.​​ಈ ಗಾದೆ ಮಾತು ಕೇವಲ ನಕಾರಾತ್ಮಕವಾಗಿ ಕಾಗೆಯನ್ನು ನಿಂದಿಸುವ ಮಾತಲ್ಲ; ಬದಲಿಗೆ ಇದು ಪ್ರಕೃತಿಯ ನಿಯಮವನ್ನು ಎತ್ತಿಹಿಡಿಯುವ ಸತ್ಯ. “ಯಾರಿಗೆ ಎಲ್ಲಿ ಗೌರವ ಸಿಗಬೇಕೋ ಅಲ್ಲಿ ಸಿಗಬೇಕು ಮತ್ತು ಯಾರು ತಮ್ಮ ನೈಜ ಗುಣಕ್ಕೆ ತಕ್ಕಂತೆ ಬದುಕಬೇಕೋ ಹಾಗೆ ಬದುಕಬೇಕು.”​ಕಾಗೆ ಮುಕ್ತವಾಗಿ ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯನ್ನು ಸ್ವಚ್ಛಗೊಳಿಸುವಾಗ ಸುಂದರವಾಗಿರುತ್ತದೆ. ಅದನ್ನು ತಂದು ಪಂಜರದಲ್ಲಿಟ್ಟು ಕೋಗಿಲೆಯಾಗಲು ಒತ್ತಾಯಿಸುವುದು ಕಾಗೆಗೂ ಮಾಡುವ ಅನ್ಯಾಯ, ಪಂಜರಕ್ಕೂ ಮಾಡುವ ಅಪಚಾರ. ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ತನ್ನ ನೈಜ ಸಾಮರ್ಥ್ಯವನ್ನು ಅರಿತು, ಕೃತಕ ಆಡಂಬರಗಳಿಗೆ ಮಾರುಹೋಗದೆ, ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗುವ ‘ಪಂಚಮ

Read Post »

ಕಾವ್ಯಯಾನ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ”

ಕಾವ್ಯ ಸಂಗಾತಿ ಭಾಗ್ಯ ಸಂ ಕೋಟಿ “ಮೌನದೊಳಗೆ ಏನೆಲ್ಲಾ” ಮೌನವೆಂದರೆ ಶೂನ್ಯವಲ್ಲಮನದ ಬೆಳಕು ಹೇಳದ ನಿಶಬ್ದ ನಾದಹೇಳಲಾಗದ ಆಳವಾದ ಹಾಡು ಗದ್ದಲದಲ್ಲಿ ಕಳೆದುಹೋದ ಸತ್ಯನಿಶ್ಚಲದಲ್ಲಿ ಕಾಣುವ ನಿತ್ಯ ಕಣ್ಣೀರಲ್ಲಿ ಮರೆಯಾದ ಕಥೆನಗುಮುಖದ ಹಿಂದಿನ  ವ್ಯಥೆ ಮೌನವು ಸಹನೆಯ ಸುಹಾಸನೆಸಮಾಧಾನದ ಪ್ರೇರಣೆ ಹ್ರದಯದ ಹಂಬಲಆತ್ಮದೊಳಗಿನ ನಂಬಲ ಅಹಂಕಾರ ಶಮನವಾದಾಗಆಂತರಿಕ ಶಾಂತಿ ಅರಳುವಾಗ ಮಾತು ಮೀರಿದ ಭಾಷೆಮಾನವೀಯತೆ ಉಳಿಸುವ  ಆಶೆ ಮೌನ ಅರಿತ ಮನದೊಳಗೆಜೀವನವೇ ಕಾವ್ಯವಾಯಿತು ಮೌನವೆಂದರೆ ಖಾಲಿತನವಲ್ಲಮನದ ಆಳದ  ಅಲೆ  ಮೌನದಲ್ಲಿಯೇ  ಸಾಧನೆ ಮೌನದಲ್ಲಿಯೇ ಶಿಖಿರ ಭಾಗ್ಯ  ಸಂ ಕೋಟಿಜಮಖಂಡಿ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು  ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.

Read Post »

ಕಾವ್ಯಯಾನ

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ”

ಕಾವ್ಯ ಸಂಗಾತಿ ಪೃಥ್ವಿ ಬಸವರಾಜ್‌ “ಪಂಜರದ ಹಕ್ಕಿ” ಎಲ್ಲರಂತೆ ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಕನಸು ನನಗೂ ಇತ್ತು,ಆದರೆ ನನ್ನ ದಾರಿಯ ತಿರುವುಗಳನ್ನು ನನ್ನ ಹೆಜ್ಜೆಗಳು ಬರೆಯಲಿಲ್ಲ.ನಗುವಿನ ಹಿಂದೆ ಮರೆತಿದ್ದ ಸಾವಿರ ಪ್ರಶ್ನೆಗಳು ಮಾತಾಗಲಿಲ್ಲ,ಮೌನವೇ ನನ್ನ ಭಾಷೆಯಾಗಿ ಹೃದಯದೊಳಗೆ ನೆಲೆಸಿತು. ಪಂಜರವು ಕಬ್ಬಿಣದಿಂದ ಕಟ್ಟಿದ್ದಲ್ಲ, ಸಂಪ್ರದಾಯದ ನೋಟಗಳಿಂದ ಹೆಣೆದಿತ್ತು;ರಕ್ಷಣೆ ಎಂಬ ಹೆಸರಿನಲ್ಲಿ ನನ್ನ ಕನಸುಗಳ ಕಿಟಕಿಗಳು ನಿಧಾನವಾಗಿ ಮುಚ್ಚಿಕೊಂಡವು.ನಾನು ಹಾರಲು ಬಯಸಿದ್ದು ಆಕಾಶವನ್ನು ಗೆಲ್ಲಲು ಅಲ್ಲ,ನನ್ನದೇ ದಿಕ್ಕನ್ನು ಒಮ್ಮೆ ನಾನು ಆರಿಸಿಕೊಳ್ಳಲು ಮಾತ್ರ. ಪ್ರೀತಿಯೂ ಬೇಕು… ಗೌರವವೂ ಬೇಕು… ಆದರೆ ಉಸಿರಾಡುವಷ್ಟು ಸ್ವಾತಂತ್ರ್ಯವೂ ಬೇಕು.ಹಕ್ಕಿಗೆ ಪಂಜರ ಎಷ್ಟೇ ಬಂಗಾರವಾದರೂ, ಅದು ಆಕಾಶವಾಗುವುದಿಲ್ಲ.ಒಂದು ದಿನ ನನ್ನ ರೆಕ್ಕೆಗಳ ಸದ್ದನ್ನು ಲೋಕ ಕೇಳುತ್ತದೆ—ಏಕೆಂದರೆ ಹೆಣ್ಣಿನ ಕನಸುಗಳಿಗೆ ಧರ್ಮವಿಲ್ಲ… ಅವಕ್ಕೂ ಆಕಾಶವೇ ಗಡಿ. ಪೃಥ್ವಿ ಬಸವರಾಜ್‌

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ” Read Post »

ಕಥಾಗುಚ್ಛ

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ

ಕಥಾ ಸಂಗಾತಿ ಡಾ.ವೆಂಕಟೇಶ ಪಿ.ಗುಡೆಪ್ಪನವರ “ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ” ಬ್ಲರ್ಬ     “ಇಲ್ಲಿ ಬರೀ ಸಿಮೆಂಟ್ ದೂಳು ಮಳೆಯಾಗಿ ಸುಳಿಯುವುದಿಲ್ಲ; ಬಡತನದ ಒರಟುತನದಲ್ಲೂ ಚಿಗುರಿದ ಶುದ್ಧ ಪ್ರೀತಿಯೊಂದು ಅಂದದ ಜೀವಗಳನ್ನೇ ಬೂದಿ ಮಾಡಿತು!”   ಹಸಿರಿನಿಂದ ಕಂಗೊಳಿಸುತ್ತಿದ್ದ ಅವಳಿ ನಗರದ ತೋಟದ ಪಕ್ಕ ಕಾರ್ಖಾನೆಯೊಂದು ತಲೆಎತ್ತಿದಾಗ, ಅಲ್ಲಿನ ಪ್ರಕೃತಿಯಷ್ಟೇ ಮನುಷ್ಯರ ಉಸಿರೂ ಕಲುಷಿತವಾಯಿತು. ಅದೇ ದೂಳಿನಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಒರಟು ಮೈಯ ಮರಗಪ್ಪ ಮತ್ತು ಶ್ರೀಮಂತ ಸಾವುಕಾರನ ಮುದ್ದಿನ ಮಗಳು ಗೌರಮ್ಮನ ನಡುವೆ ಚಿಗುರಿದ ಮೂಕ ಪ್ರೀತಿ, ವರ್ಗ-ಜಾತಿಯ ಗೋಡೆಗಳನ್ನು ಮೀರಿ ಬೆಳೆಯುತ್ತದೆ.ಆದರೆ, ವಿಧಿಯ ಕ್ರೂರ ಆಟವೆಂಬಂತೆ, ಅದೇ ಸಿಮೆಂಟ್ ದೂಳು ನಿಧಾನವಾಗಿ ಅವರ ಶ್ವಾಸಕೋಶವನ್ನು ತಿಂದುಹಾಕಿ ಮಾರಕ ‘ಕ್ಯಾನ್ಸರ್’ ಎಂಬ ಮಹಾಮಾರಿಯಾಗಿ ಪರಿಣಮಿಸುತ್ತದೆ. ಸಮಾಜದ ಕಣ್ಣಿಗೆ ಬಿಸುಕಿಸಲ್ಪಟ್ಟ ಆ ಪ್ರೇಮಿಗಳು ಕೊನೆಗೆ ಅದೇ ಬೂದಿ ಮಳೆಯ ನಡುವೆ ಒಂದೇ ಚಿತೆಯಲ್ಲಿ ಅಮರರಾಗುತ್ತಾರೆ.ಜಾತಿ-ಅಂತಸ್ತಿನ ಅಹಂಕಾರವನ್ನು ಕರಗಿಸಿ, ಓದುಗರ ಕಣ್ಣಾಲೆಗಳನ್ನು ಒದ್ದೆ ಮಾಡುವ ಈ ಕರುಳು ಹಿಂಡುವ ಪ್ರೇಮ ಕಥೆಯೇ  ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ… ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ ಅವಳಿ ನಗರಗಳ ಅಂಚಿನಲ್ಲಿ ಹಬ್ಬಿರುವ ಆ ಮಣ್ಣಿನ ವಾಸನೆಯೇ ಹಂಗೆ, ಅದಕ್ಕೊಂದು ಒಂಥರಾ ವಿಶಿಷ್ಟವಾದ ಗತ್ತು, ಗಮ್ಮತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆ ಗಾಳಿಯ ಹಂಗೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಕೆಂಪು ಮಣ್ಣಿನ ಘಮಲು ಮಾಸಿ, ಯಂತ್ರಗಳ ಗರ್ಜನೆ ಆ ಪ್ರಾಂತ್ಯವನ್ನು ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸತ್ಯಪ್ಪ ಸಾವುಕಾರನ ನೂರಾರು ಎಕರೆ ವಿಶಾಲವಾದ ತೋಟದ ಪಕ್ಕದಲ್ಲೇ ದೈತ್ಯಾಕಾರದಲ್ಲಿ ತಲೆಎತ್ತಿದ ಆ ಸಿಮೆಂಟ್ ಕಾರ್ಖಾನೆಯಂತೂ ಆ ಇಡೀ ಪ್ರದೇಶದ ಜೀವಸೆಲೆಯನ್ನು ಬತ್ತಿಸಿಬಿಟ್ಟಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಬಾಳೆ ತೋಟ, ಮಾವಿನ ತೋಪು, ಸಪೋಟಾ ಗಿಡಗಳು ಈಗ ಜೀವ ಕಳೆದುಕೊಂಡು ನಿಂತಿವೆ. ಆ ತೋಟದ ಎಲೆಗಳ ಮೇಲೆಲ್ಲಾ ಹಸಿರು ಬಣ್ಣ ಮಾಸಿ, ಕಾರ್ಖಾನೆಯ ಬೂದಿ ಬಣ್ಣ ಮೈಮೇಲೆ ಅಂಟಿಕೊಂಡಿದೆ. ಇಲ್ಲಿನ ಜನರ ಬದುಕು ಕೂಡ ಆ ಸಿಮೆಂಟ್ ದೂಳಿನ ಮಳೆಯಲ್ಲಿ ನಲುಗಿ, ಬೂದಿಯಾಗಿಹೋಯ್ತು ಎಂದರೆ ತಪ್ಪಾಗಲಾರದು.ಅದೇ ತೋಟದ ಮೂಲೆಯಲ್ಲಿ, ಬಿರು ಬೇಸಿಗೆಯ ಸುಡು ಬಿಸಿಲಿಗೂ ಕ್ಯಾರೆ ಎನ್ನದೆ ಮೈಯೆಲ್ಲಾ ಕರಗಿ ಹೋದ ಬೆವರನ್ನು ಹರಿಸಿ ದುಡಿಯುವ ಒಬ್ಬ ಅಪ್ಪಟ ಒರಟು ಮನುಷ್ಯ ಮರಗಪ್ಪ. ಎದೆಗೆ ಬಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೂ ಹೂವಿನಂತೆ ಎತ್ತುವ ಗಟ್ಟಿಮುಟ್ಟು ಮೈಕಟ್ಟು ಅವನದು. ಕುತ್ತಿಗೆಯ ಮೇಲೆ ಬಿದ್ದ ಬಿಳಿ ಸಿಮೆಂಟ್ ದೂಳು ಅವನ ಇಡೀ ಮೈಯನ್ನು ಆವರಿಸಿಕೊಂಡು, ನೋಡಲು ಯಾವುದೋ ಶಿಲ್ಪಿಯ ಕೈಯಲ್ಲಿ ರೂಪುಗೊಂಡ ಬಿಳಿ ಕಲ್ಲಿನ ಮೂರ್ತಿಯಂತೆ ಕಾಣುತ್ತಿದ್ದ. ಬಡತನದ ರೇಖೆಗಿಂತಲೂ ಕೆಳಗೆ ಹುಟ್ಟಿ, ಹೊಟ್ಟೆಪಾಡಿಗೆ ದಿನಗೂಲಿ ನಂಬಿ ಬದುಕುತ್ತಿದ್ದರೂ, ಅವನ ಒರಟು ಎದೆಯ ಒಳಗೆ ಮೃದುವಾದ ಹೃದಯವಿತ್ತು; ಕಣ್ಣುಗಳಲ್ಲಿ ಮಾತ್ರ ಒಂಥರಾ ಜೀವನದ ಕಳೆಯಿತ್ತು. ಮುಖದ ಮೇಲಿನ ಸಿಮೆಂಟ್ ದೂಳನ್ನು ಆಗಾಗ್ಗೆ ಬಿಳಿ ಕೈಯಿಂದ ಒರೆಸಿಕೊಳ್ಳುತ್ತಾ, ಸೂರ್ಯ ಮೂಡುವುದರಿಂದ ಹಿಡಿದು ಮುಳುಗುವವರೆಗೂ ದುಡಿಯುವುದೇ ಅವನ ಏಕೈಕ ಕಾಯಕವಾಗಿತ್ತು.ಅದೇ ಸತ್ಯಪ್ಪ ಸಾವುಕಾರನ ಮುದ್ದಿನ ಹಾಗೂ ಏಕೈಕ ಮಗಳು ಗೌರಮ್ಮ. ಆ ಊರಿನ ದೊಡ್ಡ ಶ್ರೀಮಂತನ ಮಗಳಾದ್ದರಿಂದ ಅವಳಿಗೆ ಯಾವುದೇ ರೀತಿಯ ಕೊರತೆ ಇರಲಿಲ್ಲ. ಅಪ್ಪನ ಆಸ್ತಿ-ಪಾಸ್ತಿಗೆ ಇವಳೇ ಕಣ್ಣಿನುಸಿರು, ರಾಣಿ. ಮೈತುಂಬಾ ಒಡವೆಗಳನ್ನು ಹಾಕಿಕೊಳ್ಳದಿದ್ದರೂ, ಅವಳ ಸ್ವಾಭಾವಿಕ ಅಂದವೇ ಆ ಊರಿನ ಯುವಕರ ನಿದ್ದೆಗೆಡಿಸಿತ್ತು. ಸಿಂಗಾರಗೊಂಡು ಕಾಲೇಜಿಗೆ ಹೋಗುವ ವಯಸ್ಸು ಅವಳದ್ದು. ಪಟ್ಟಣದ ದೊಡ್ಡ ಕಾಲೇಜಿನಲ್ಲಿ ಸೈನ್ಸ್ ಓದುತ್ತಿದ್ದರೂ, ವಾರಾಂತ್ಯದಲ್ಲಿ ಅಥವಾ ರಜೆ ದಿನಗಳಲ್ಲಿ ತಂದೆಯ ಈ ತೋಟಕ್ಕೆ ಬಂದಾಗಲೆಲ್ಲಾ ಆ ನಿಸರ್ಗದ ಮಡಿಲಲ್ಲಿ ಪಕ್ಷಿಯಂತೆ ಉಲ್ಲಾಸದಿಂದ ಓಡಾಡುತ್ತಿದ್ದಳು. ಬಿಳಿಯ ಸಲ್ವಾರ್ ಧರಿಸಿ, ಮುಡಿಯಲ್ಲಿ ಯಾವಾಗಲೂ ತಾಜಾ ಮಲ್ಲಿಗೆ ಹೂವನ್ನು ಮುಡಿದು ಆಕೆ ನಡೆದುಬರುತ್ತಿದ್ದರೆ, ಕಳೆಗುಂದಿದ್ದ ಆ ಸಾವುಕಾರನ ತೋಟಕ್ಕೆ ಮರಳಿ ಹೊಸ ಜೀವ ಬಂದಹಾಗಾಗುತ್ತಿತ್ತು. ಅವಳ ನಗು ಆ ಬಿಸಿಲಿನ ತಾಪವನ್ನೂ ತಣಿಸುವಂತಿತ್ತು.ಅದೊಂದು ದಿನ ಮಧ್ಯಾಹ್ನದ ಹೊತ್ತು. ಬಿಸಿಲು ತನ್ನ ಪ್ರತಾಪವನ್ನು ಸಂಪೂರ್ಣವಾಗಿ ತೋರುತ್ತಿತ್ತು. ಕಾರ್ಖಾನೆಯಿಂದ ಹೊರಬರುತ್ತಿದ್ದ ದೂಳು ಗಾಳಿಯಲ್ಲಿ ತೇಲಾಡುತ್ತಾ ಎಲ್ಲರ ಮೇಲೂ ಸುರಿಯುತ್ತಿತ್ತು. ಮರಗಪ್ಪ ತೋಟದ ಒಂದು ಮೂಲೆಯಲ್ಲಿ ಮರದ ನೆರಳಿನಲ್ಲಿ ನಿಂತು ಕೆಲಸ ಮಾಡಿ ಸುಸ್ತಾಗಿ ಹೋಗಿದ್ದನು. ಗಂಟಲು ಒಣಗಿಹೋಗಿತ್ತು, ಬಾಯಾರಿಕೆ ತೀವ್ರವಾಗಿತ್ತು. ನೀರು ಕುಡಿಯಲು ತೋಟದ ಮೂಲೆಯಲ್ಲಿದ್ದ ಪುರಾತನ ಕಲ್ಲು ಬಾವಿಯ ಬಳಿಗೆ ಹೆಜ್ಜೆ ಹಾಕಿದನು. ಅದೇ ಸಮಯದಲ್ಲಿ, ಅಪ್ಪನಿಗೆ ಊಟ ತಂದಿದ್ದ ಗೌರಮ್ಮ, ಕೈಯಲ್ಲಿ ತಣ್ಣನೆಯ ನೀರಿರುವ ತಾಮ್ರದ ಬಿಂದಿಗೆ ಹಿಡಿದು ಅದೇ ಬಾವಿಯ ಕಡೆಗೆ ಬಂದಿದ್ದಳು.ಅನಿರೀಕ್ಷಿತವಾಗಿ ಇಬ್ಬರ ಕಣ್ಣುಗಳೂ ಒಂದಕ್ಕೊಂದು ನೇರವಾಗಿ ಬೆಸೆದುಕೊಂಡವು. ಆ ಕ್ಷಣದಲ್ಲಿ ಜಗತ್ತೇ ನಿಂತುಹೋದ ಅನುಭವ. ಮಾತೇ ಆಡದ ಆ ಮೂಕ ಸೆಳೆತದಲ್ಲಿ, ಇಬ್ಬರ ಮನಸ್ಸಿನ ಆಳದಲ್ಲೂ ಏನೋ ಒಂದು ಹೊಸ ಅಲೆಯೊಂದು ಹುಟ್ಟಿಕೊಂಡಿತು. ಬಡತನದ ಮುಖವಾಡ ಧರಿಸಿದ ಮರಗಪ್ಪನ ಕಣ್ಣುಗಳಲ್ಲಿ ಬೆರಗು ಮೂಡಿದರೆ, ಶ್ರೀಮಂತಿಕೆಯ ಅಹಮಿಕೆಯಿಲ್ಲದ ಗೌರಮ್ಮನ ಕಣ್ಣುಗಳಲ್ಲಿ ಮೃದುವಾದ ಅರಿವು ಮೂಡಿತು.ಗೌರಮ್ಮ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದ ತಣ್ಣನೆಯ ನೀರನ್ನು ಒಂದು ಲೋಟಕ್ಕೆ ಸುರಿದು ಮರಗಪ್ಪನ ಕಡೆಗೆ ಚಾಚುತ್ತಾ, ತನ್ನ ಮೃದು ಧ್ವನಿಯಲ್ಲಿ ನಸುನಗುತ್ತಾ ನುಡಿದಳು: “ಏನ್ಲಾ ಮರಗಪ್ಪ, ಮೈಯೆಲ್ಲಾ ಸಿಮೆಂಟ್ ದೂಳು ತುಂಬಿಕಂಡೈತಿ, ಗಂಟಲು ಒಣಗಿರಬೇಕಲ್ಲ, ಈ ನೀರು ಕುಡಿದು ಸ್ವಲ್ಪ ತಣ್ಣಗಾಗು.”ಅವಳ ಆ ಸಣ್ಣ ಎರಡು ಮಾತುಗಳು ಮರಗಪ್ಪನ ಒಣಗಿದ ಗಂಟಲಿಗೆ ಮಾತ್ರವಲ್ಲ, ಇಡೀ ಎದೆಗೆ ತಂಪಾದ ಮಳೆಯ ಅಲೆ ಅಪ್ಪಳಿಸಿದಂತಾಯಿತು. ಕೈಲಿದ್ದ ಲೋಟವನ್ನು ನಡುಗುವ ಕೈಗಳಿಂದ ಪಡೆದುಕೊಂಡು ನೀರು ಕುಡಿದ ಮರಗಪ್ಪನಿಗೆ, ಜಗತ್ತಿನ ಸಮಸ್ತ ಸಿಹಿಯೂ ಆ ನೀರಿನಲ್ಲೇ ಇದ್ದಹಾಗೆನಿಸಿತು. ಅಂದಿನಿಂದ ಆ ಸಿಮೆಂಟ್ ದೂಳು ತುಂಬಿದ ಕಲುಷಿತ ವಾತಾವರಣದಲ್ಲೂ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯ ಅಪುರೂಪದ ಚಿಗುರು ಒಡೆಯಲು ಶುರುವಾಯಿತು.ದಿನಗಳು ಕಳೆದಂತೆ ಆ ಭೇಟಿಗಳು ನಿತ್ಯದ ಅಭ್ಯಾಸವಾಯಿತು. ಫ್ಯಾಕ್ಟರಿಯಿಂದ ದಿನನಿತ್ಯ ಹೊರಬರುವ ಆ ಕೆಟ್ಟ ವಾಸನೆ ಮತ್ತು ಬಿಳಿ ದೂಳು ಇಡೀ ಊರನ್ನೆಲ್ಲಾ ಆವರಿಸುತ್ತಿದ್ದರೂ, ಆ ದೂಳಿನ ಕಣ ಕಣದಲ್ಲೂ ಅವರಿಬ್ಬರ ಪ್ರೀತಿ ಮಾತ್ರ ಮಕರಂದದಂತೆ ಹರಡಿಕೊಳ್ಳುತ್ತಾ ಹೋಯ್ತು. ಸತ್ಯಪ್ಪ ಸಾವುಕಾರನ ಕಣ್ಣಿಗೆ ಮಣ್ಣೆರಚಿ, ಯಾರೂ ಇಲ್ಲದ ವೇಳೆಗಳಲ್ಲಿ ಆ ಬೃಹತ್ ಬಾಳೆ ತೋಟದ ದಟ್ಟ ಮರಗಳ ಮರೆಯಲ್ಲಿ ಇಬ್ಬರೂ ಗುಟ್ಟಾಗಿ ಮಾತುಕತೆ ಆಡಲಾರಂಭಿಸಿದರು. ಗೌರಮ್ಮ ತನ್ನ ಕಾಲೇಜಿನ ಕಥೆಗಳನ್ನು ಹೇಳುತ್ತಿದ್ದರೆ, ಮರಗಪ್ಪ ತಾನು ಅನುಭವಿಸುತ್ತಿದ್ದ ಕಷ್ಟಗಳನ್ನೂ, ಈ ಕಾರ್ಖಾನೆ ಬಂದು ತೋಟ ಹಾಳಾಗುತ್ತಿರುವುದರ ನೋವನ್ನೂ ಹಂಚಿಕೊಳ್ಳುತ್ತಿದ್ದನು. ಪ್ರೀತಿ ಎನ್ನುವುದು ವರ್ಗ, ಜಾತಿ, ಬಡತನ, ಸಿರಿತನದ ಗಡಿಗಳನ್ನು ಮೀರಿ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಇವರೇ ಸಾಕ್ಷಿಯಾದರು.ಆದರೆ, ಈ ಪ್ರೀತಿಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಮುಳ್ಳು ಹಾಸಿದ ಹಾದಿಯಾಗಿತ್ತು. ಕಾರ್ಖಾನೆಯಿಂದ ಸದಾ ಕಾಲ ಹೊರಬರುತ್ತಿದ್ದ ಆ ವಿಷಪೂರಿತ ಅನಿಲ, ಕೆಟ್ಟ ವಾಸನೆ ಮತ್ತು ದೂಳು ಕೇವಲ ಪ್ರಕೃತಿಯ ಹಸಿರನ್ನಷ್ಟೇ ಅಲ್ಲ, ಅಲ್ಲಿನ ಜನರ ಉಸಿರಾಟವನ್ನೂ ನಿಧಾನವಾಗಿ ಹೈರಾಣು ಮಾಡುತ್ತಿತ್ತು. ಆ ಬಿಳಿ ದೂಳು ಮನುಷ್ಯರ ಒಳಹೊಕ್ಕು ಶ್ವಾಸಕೋಶವನ್ನು ಗಾಯಗೊಳಿಸುತ್ತಿತ್ತು, ಉಸಿರುಗಟ್ಟಿಸುತ್ತಿತ್ತು. ಆದರೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿಯ ಉಸಿರು ಮಾತ್ರ ಆ ದೂಳಿನ ಮಧ್ಯೆಯೂ ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಂತಿತ್ತು….ಅವಳಿ ನಗರಗಳ ಆ ಹವಾಮಾನ ದಿನದಿಂದ ದಿನಕ್ಕೆ ಉಸಿರುಗಟ್ಟುವಂತಾಗುತ್ತಿತ್ತು. ಸತ್ಯಪ್ಪ ಸಾವುಕಾರನ ತೋಟದ ಅಂಚಿನಲ್ಲಿ ನಿಂತು ನೋಡಿದರೆ, ಆಕಾಶದಲ್ಲಿ ಮೋಡ ಕವಿದಿದೆಯೋ ಅಥವಾ ಸಿಮೆಂಟ್ ಕಾರ್ಖಾನೆಯ ಬೂದಿ ಆವರಿಸಿದೆಯೋ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಮೇಲ್ನೋಟಕ್ಕೆ ಅದೊಂದು ಹವಾಮಾನ ವೈಪರೀತ್ಯದಂತೆ ಕಂಡರೂ, ವಾಸ್ತವದಲ್ಲಿ ಅದೊಂದು ನಿಧಾನವಾಗಿ ಹರಡುತ್ತಿದ್ದ ಮಾರಕ ವಿಷವಾಗಿತ್ತು. ಆ ಬಿಳಿ ದೂಳು ದಿನವಿಡೀ ಮಳೆಯ ಹನಿಗಳಂತೆ ಇಡೀ ಊರಿನ ಮೇಲೆ ಸುರಿಯುತ್ತಿತ್ತು. ಗಿಡಮರಗಳ ಎಲೆಗಳು ತಮ್ಮ ಅಸಲಿ ಹಸಿರು ಬಣ್ಣವನ್ನು ಕಳೆದುಕೊಂಡು, ಬಿಳಿಚಿಕೊಂಡಿದ್ದವು. ಆದರೆ, ಪ್ರಕೃತಿಯ ಈ ವಿನಾಶದ ನಡುವೆಯೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿ ಮಾತ್ರ ಆ ಬೂದಿಯ ಮಳೆಯಲ್ಲೂ ಗಟ್ಟಿಯಾದ ಬೇರು ಬಿಟ್ಟು ಬೆಳೆಯುತ್ತಿತ್ತು.ದಿನಗಳು ಕಳೆದಂತೆ ಅವರ ಭೇಟಿಗಳ ಕಾತರ ಹೆಚ್ಚಾಯಿತು. ಸಾವುಕಾರ ಸತ್ಯಪ್ಪ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ರಾಜಕೀಯ ತಿಕ್ಕಾಟಗಳಲ್ಲಿ ಸಿಲುಕಿಕೊಂಡು ದಿನದ ಹೆಚ್ಚಿನ ಸಮಯ ಮನೆಯ ಹೊರಗಿರುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆ ಜೋಡಿ, ತೋಟದ ಕಡೆಗೆ ಯಾರೂ ಬಾರದ ನಿರ್ಜನ ಮೂಲೆಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕಾಲ ಕಳೆಯುತ್ತಿತ್ತು. ಮರಗಪ್ಪ ತನ್ನ ಒರಟು ಕೈಗಳಿಂದ ಗೌರಮ್ಮಳ ಕೈಯನ್ನು ಸ್ಪರ್ಶಿಸಿದಾಗ, ಆ ಕೈಗಳಲ್ಲಿನ ಬೆವರು ಮತ್ತು ಸಿಮೆಂಟ್ ದೂಳು ಕೂಡ ಅವರಿಗೆ ಒಂದು ಪವಿತ್ರವಾದ ಗಂಧದಂತೆ ಭಾಸವಾಗುತ್ತಿತ್ತು. ಗೌರಮ್ಮ ಕಾಲೇಜಿನಿಂದ ತಂದ ಪುಸ್ತಕಗಳನ್ನು ಮರಗಪ್ಪನ ಕೈಗೆ ನೀಡಿ, “ಇದನ್ನು ಓದು ಮರಗಪ್ಪ, ಅಕ್ಷರ ಕಲಿತರೆ ಈ ಜಗತ್ತನ್ನು ಬೇರೆ ರೀತಿಯಲ್ಲಿ ನೋಡಬಹುದು” ಎಂದು ಪ್ರೀತಿಯಿಂದ ಹೇಳುತ್ತಿದ್ದಳು. ಅಕ್ಷರದ ಗಂಧವೇ ಇಲ್ಲದ ಮರಗಪ್ಪ, ಗೌರಮ್ಮಳಿಗಾಗಿ ಅಕ್ಷರಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದ. ಅವಳ ಆ ಮಾತುಗಳು ಅವನಿಗೆ ಜಗತ್ತಿನ ಯಾವುದೇ ದೊಡ್ಡ ವಿಶ್ವವಿದ್ಯಾಲಯದ ಪಾಠಕ್ಕಿಂತ ಮಿಗಿಲಾಗಿ ಕಾಣುತ್ತಿದ್ದವು.ಅಂದು, ಕಾರ್ಖಾನೆಯ ಸೈರನ್ ಭೀಕರವಾಗಿ ಮೊಳಗಿತು. ಆ ಶಬ್ದಕ್ಕೆ ಬೆಚ್ಚಿಬಿದ್ದ ಪಕ್ಷಿಗಳು ಗೂಡಿಗೆ ಹಾರಿದವು. ಅದೇ ಸಮಯದಲ್ಲಿ ಬಾಳೆ ತೋಟದ ನಡುವೆ ನಿಂತಿದ್ದ ಆ ಇಬ್ಬರ ಪ್ರೇಮಿಗಳ ಲೋಕದಲ್ಲಿ ದೊಡ್ಡದೊಂದು ಆತಂಕದ ಅಲೆ ಹರಿಯಿತು. ದೂರದಿಂದ ಕೆಲಸಗಾರನೊಬ್ಬ ಕೂಗುವ ಸದ್ದು ಕೇಳಿಸಿತು. “ಸಾವುಕಾರರು ಬರ್ತಿದಾರೆ! ಜಲ್ದಿ ಬನ್ನಿ!” ಎಂಬ ಆ ಮಾತು ಕೇಳುತ್ತಿದ್ದಂತೆ ಗೌರಮ್ಮನ ಮುಖದಲ್ಲಿ ಭಯದ ಛಾಯೆ ಆವರಿಸಿತು. ಅವಳ ತಂದೆ ಸತ್ಯಪ್ಪ ಸಾವುಕಾರನ ಕೋಪದ ಬಗ್ಗೆ ಆ ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಬಡವ-ಸಿರಿವಂತರ ನಡುವಿನ ಈ ಅಂತರ ಮುರಿದುಬಿದ್ದರೆ, ಆತ ಏನು ಬೇಕಾದರೂ ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂಬ ಸತ್ಯ ಅವರಿಬ್ಬರಿಗೂ ಚೆನ್ನಾಗಿ ತಿಳಿದಿತ್ತು.ಆದರೂ ಆ ಭಯವೇ ಅವರ ಪ್ರೀತಿಗೆ ಇನ್ನಷ್ಟು ಬಲ ತುಂಬಿತು. ವಿಧಿಯ ಆಟವೇ ವಿಚಿತ್ರವಲ್ಲವೇ? ಎಷ್ಟು ದಿನಗಳವರೆಗೆ ಈ ಕದ್ದುಮುಚ್ಚಿದ ಪ್ರೀತಿ ಮುಂದುವರಿಯಲು ಸಾಧ್ಯ? ಒಂದು ದಿನ ಸತ್ಯಪ್ಪ ಸಾವುಕಾರನ ಕಣ್ಣಿಗೆ ಆ ದೃಶ್ಯ ಬಿತ್ತು. ಅಂದು ಮಧ್ಯಾಹ್ನ ಸಾವುಕಾರ ತೋಟದ ಲೆಕ್ಕಪತ್ರಗಳನ್ನು ನೋಡಲು ಅನಿರೀಕ್ಷಿತವಾಗಿ ಬಂದಿದ್ದನು. ಎಂದೂ ಇಲ್ಲದಂತೆ ಆತ ಕಾರ್ಮಿಕರು ವಿಶ್ರಾಂತಿ ಪಡೆಯುವ ಶೆಡ್‌ಗಳ ಕಡೆಗೆ ಹೆಜ್ಜೆ ಹಾಕಿದನು. ದಟ್ಟವಾದ ಬಾಳೆ ಮರಗಳ ಮರೆಯಲ್ಲಿ ಗೌರಮ್ಮ ಮರಗಪ್ಪನ ಜೊತೆ ಮಾತನಾಡಿ ನಗುತ್ತಿರುವುದನ್ನು ಆತ ದೂರದಿಂದಲೇ ಕಣ್ಣಾರೆ ಕಂಡನು. ಆ ಕ್ಷಣದಲ್ಲಿ ಸಾವುಕಾರನ ಕಣ್ಣುಗಳು ಕೆಂಪಾದವು. ರಕ್ತದ ಕುದಿ ತಲೆಗೆ ಏರಿತು. ತನ್ನ ಮರ್ಯಾದೆ, ತನ್ನ ಆಸ್ತಿ, ತನ್ನ ಇಡೀ ವಂಶದ ಪ್ರತಿಷ್ಠೆ ಆ ಬಡ ಕಾರ್ಮಿಕನ ಕಾಲ್ತುಳಿತಕ್ಕೆ ಸಿಲುಕಿತು ಎಂದು ಭಾವಿಸಿದ ಆತನ ಮತಿ ಭ್ರಮಣೆಯಾಯಿತು.“ಏಯ್ ಮರಗಪ್ಪ!” ಎಂಬ ಆ ಸಿಂಹಘರ್ಜನೆ ಇಡೀ ತೋಟದಲ್ಲೇ ಪ್ರತಿಧ್ವನಿಸಿತು. ಆ ಧ್ವನಿಯನ್ನು ಕೇಳಿದ ತಕ್ಷಣ ಮರಗಪ್ಪ ಮತ್ತು ಗೌರಮ್ಮ ಬೆಚ್ಚಿಬಿದ್ದರು. ಸಾವುಕಾರ ಕೋಪದಿಂದ ಹತ್ತಿರ ಬಂದು, ಮರಗಪ್ಪನ ಕಾಲರ್ ಹಿಡಿದು ಎಳೆದಾಡಿದನು. “ನನ್ನ ಮನೆತನದ ಮರ್ಯಾದೆಯೊಂದಿಗೆ ಆಟವಾಡ್ತಿಯೇನ್ಲಾ ಬಡಪಾಯಿ ಮೂರ್ಖ? ನಿನ್ನ ಯೋಗ್ಯತೆಗೆ ನನ್ನ ಮಗಳನ್ನು

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ Read Post »

You cannot copy content of this page

Scroll to Top