ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

ಇತರೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ

ಸೌಹಾರ್ದ ಸಂಗಾತಿ ಜಯಲಕ್ಷ್ಮಿ ಕೆ “ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”   “ಲೋಕದ ಕಾಳಜಿ ಮಾಡುತ್ತೀನಂತಿ.. ನಿಂಗ್ಯಾರು ಬ್ಯಾಡಂದೋರು ಮಾಡಪ್ಪ ಚಿಂತಿ .. ಆನೆ ಅಂಬಾರಿ ಏರಬೇಕಂತಿ.. ಮಣ್ಣಲ್ಲಿ ಇಳಿಯುದ ತಣ್ಣಗ ಮರತಿ…”   ಖ್ಯಾತ ಗಾಯಕ  ಲುಂಗಿ ರಾಕ್ ಸ್ಟಾರ್ ರಘು ದೀಕ್ಷಿತ್ ರವರ ಕಂಠಸಿರಿಯಿಂದ ಮೂಡಿಬಂದು ಜನಮನ ಗೆದ್ದ ಈ ತತ್ವ ಪದದ ರಚನೆಕಾರರ ಊರೇ ಶಿಶುವಿನಹಾಳ. “ಕನ್ನಡದ ಕಬೀರ” ಎಂದೇ ಖ್ಯಾತರಾದ ಸಂತ ಶಿಶುನಾಳ ಶರೀಫರ ಸನ್ನಿಧಿ ಇರುವುದು  ಹಾವೇರಿ ಜಿಲ್ಲೆಯ ಶಿಗ್ಗಾಂವಾ ತಾಲೂಕಿನ ಶಿಶುವಿನಹಾಳದಲ್ಲಿ. ಹಿಂದೂ ಮುಸ್ಲಿಂ ಭಾವೈಕ್ಯದ ಹರಿಕಾರರಾದ ಶರೀಫರ ನಾಡಿನಲ್ಲಿ ಒಂದೇ ಮಂದಿರದಲ್ಲಿ ಎರಡು ಧರ್ಮಿಯರು   ನಡೆಸುವ ಪೂಜಾ ಕೈಂಕರ್ಯ  ನೋಡುವುದೇ ಚೆನ್ನ! ಗುರು ಗೋವಿಂದ ಭಟ್ಟರ ಮೂರ್ತಿ ಒಂದೆಡೆ.. ಶಿಶುನಾಳ ಶರೀಫರ ಮೂರ್ತಿ ಇನ್ನೊಂದೆಡೆ.  ಈ ಎರಡು ಮೂರ್ತಿಗಳ ನಡುವೆ ಶ್ವೇತ ಶಿಲೆಯಲ್ಲಿ ಕೆತ್ತಿದ    ಆಶೀರ್ವಾದ ನೀಡುವ ಭಂಗಿಯಲ್ಲಿ  ನಿಂತ ನಂದಿ, ಶಿವಲಿಂಗ. ಒಂದೆಡೆ ಹಣ್ಣು ಕಾಯಿ ಸೇವೆ, ಇನ್ನೊಂದೆಡೆ ಸಕ್ಕರೆ ಪ್ರಸಾದ ವಿತರಣೆ! ಹಿಂದೂ ಮುಸ್ಲಿಂ ಭಾವೈಕ್ಯತೆಯ ಜೊತೆ ಜೊತೆಗೆ ಗುರು ಶಿಷ್ಯ ಸಂಬಂಧದ ಪಾವಿತ್ರ್ಯತೆಯನ್ನು ಸಾರುವ  ಅಪೂರ್ವ ಚಿತ್ರಣ ! ಎಂಥವರೂ ಭಾವಪರವಶರಾಗಬೇಕು  ಹುಲಗೂರ  ಶರೀಫರ ಈ ಸನ್ನಿಧಿಯಲ್ಲಿ. ವಿಜ್ಞಾನ ತಂತ್ರಜ್ಞಾನದಲ್ಲಿ ಪಳಗಿ  ಆಧುನಿಕತೆಯ ತುತ್ತ ತುದಿಯನ್ನು ತಲುಪಿದ್ದೇವೆ ಎನ್ನುವ ಭ್ರಮೆಯಲ್ಲಿರುವ, ಜಾತಿ ಮತ ಪಂಥಗಳು ಎಂಬ ತ್ರಿಶಂಕುವಿನಿಂದ ಹೊರಬರಲಾಗದ ಸಂಕುಚಿತ ಮನೋಭಾವದವರು ಈ ದಿವ್ಯ ಕ್ಷೇತ್ರಕ್ಕೆ ಹೋಗಲೇಬೇಕು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು, ಅಲ್ಲಿನ ಜನರು  ಹೊಂದಿಕೊಂಡು ಬಾಳುವ  ಪರಿಯನ್ನು ಕಣ್ತುಂಬಿಕೊಳ್ಳಲೇಬೇಕು.  ಐದರಿಂದ ಆರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ಊರದು.  “ದೇಹವೇ ಮಸೀದಿ,ದೇಹವೇ ದೇಗುಲ ” ಎಂದು ಸಾರಿದ, ಸಾರಿದಂತೆಯೇ ಬದುಕಿ ಬಾಳಿದ  ಸಂತ ಶರೀಫರ ನೆಲದಲ್ಲಿ ನಿಂತರೆ ಸಾಕು, ಕೋಮು ಸೌಹಾರ್ದತೆ ಸಾರುವ ಅವರ ತತ್ವಪದಗಳು, ಮಾನವ ಧರ್ಮ ಸಾರುವ  ಅವರ ಪದಗಳ  ಸಾರಗಳು, ಸ್ಮೃತಿ  ಪಟಲದಲ್ಲಿ ಹಾಗೇ ತೇಲಿ ಬರುತ್ತವೆ. ಲೌಕಿಕ ದೃಶ್ಯಗಳ ಮೂಲಕ  ಪಾರಮಾರ್ಥಿಕ ಸತ್ಯಗಳನ್ನು ಸರಳ ಸುಂದರ ಆಡು ಭಾಷೆಯಲ್ಲಿ  ನಿರೂಪಿಸಿರುವ  ಶರೀಫರು  ಮೊದಲ ಸೂಫಿ ಕವಿ. ಆಕರ್ಷಕ ತತ್ವಪದಗಳ ಮೂಲಕ ಜನಮಾನಸದಲ್ಲಿ ಉಳಿದ ಸಿದ್ಧಪುರುಷ ಶರೀಫ  ಇಸ್ಲಾಂ ಧರ್ಮದಲ್ಲಿ ಹುಟ್ಟಿ, ಹಿಂದೂ ಗುರುವನ್ನು ಪಡೆದು ಜಾತಿ ಮತಗಳ ಎಲ್ಲೆ ಮೀರಿ ಬೆಳೆದು ನಿಂತವರು. ” ಕೆಲಸವಿಲ್ಲದೆ ಅಲೆಯುವ ತಿರುಕ ” ಎಂದ ಹಿಂದೂ ಧರ್ಮೀಯರ ಮಾತಿಗಾಗಲಿ, ” ಕಾಫಿರ್ ” ಎಂದ ಮುಸಲ್ಮಾನರ ತೆಗಳಿಕೆಗಾಗಲಿ ಸಂತ ಶರೀಫರ ಮನ ವಿಚಲಿತಗೊಳ್ಳಲಿಲ್ಲ. ಏಕ ತಂತಿಯ ತಂಬೂರಿ ಹಿಡಿದು ತನ್ನ ತತ್ವಗಳನ್ನು ಪದಗಳ ಮೂಲಕ ಬೀದಿಬೀದಿಯಲ್ಲಿ ಸಾರಿದರು. ಯಾವ ಖಲೀಫನಿಂದಲೂ ನಿರ್ಮಿಸಲು ಸಾಧ್ಯವಾಗದ ಮತೀಯ ಸಾಮರಸ್ಯದ ದೇಗುಲದ ನಿರ್ಮಾಣಕ್ಕೆ ಕಾರಣಕರ್ತರಾದರು. ಗೂಢಾರ್ಥದಲ್ಲಿ, ರೂಪಕಗಳನ್ನು ಬಳಸಿ ಇವರು ರಚಿಸಿರುವಂತಹ  ಕೋಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗಿ, ಬಿದ್ದಿಯಬ್ಬೇ ಮುದುಕಿ , ಹಾವು ತುಳಿದೇನೇ ಮಾನಿನಿ, ಇತ್ಯಾದಿ ತತ್ವಪದಗಳು ಕನ್ನಡಿಗರ ನಾಲಿಗೆಯಲ್ಲಿ ಸದಾ ಹರಿದಾಡುವ ನೀತಿ ಸಂಹಿತೆಗಳೇ ಸರಿ.      ಸಮಯ ಸಂದರ್ಭಗಳಿಗೆ ಅನುಗುಣವಾಗಿ ಉಪಮೆಗಳನ್ನು ಬಳಸುತ್ತಾ ಪದ ರಚಿಸಿ ಹಾಡುತ್ತಿದ್ದ ಈ ಸಂತ  ಮತೀಯ ಸಾಮರಸ್ಯದ ಹರಿಕಾರನಾಗಿ ನಮ್ಮೆಲ್ಲರ ಮನದಲ್ಲಿ ನೆಲೆ ನಿಂತ ಧೀಮಂತ. ಶಿಶುನಾಳ ಶರೀಫರು ಮತ್ತು ಅವರ ಗುರು ಗೋವಿಂದ ಭಟ್ಟರ ಸಮಾಧಿಗೆ ಜಾತಿ ಮತಗಳ ಹಂಗಿಲ್ಲದೆ ಪ್ರತಿದಿನ ಪೂಜೆ ನಡೆಯುತ್ತಿದ್ದು ಅದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ.  ಶಿಶುನಾಳ ಶರೀಫರ ದೇಗುಲಕ್ಕೆ ಹೋಗುವವರು  ಅಲ್ಲಿಂದ ಸುಮಾರು 20 -30 ಕಿಲೋ ಮೀಟರ್ ಅಂತರದಲ್ಲಿರುವ 11 ನೇ ಶತಮಾನದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಿದ್ಧೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯಗಳನ್ನು ನೋಡಬಹುದು. ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ತಾರಕೇಶ್ವರ ದೇಗುಲ,  ಹುಕ್ಕೇರಿ ಮಠ,  ಬಂಕಾಪುರದ ನಗರೇಶ್ವರ   ದೇಗುಲ ಬಂಕಾಪುರದ ಕೋಟೆ ಇತ್ಯಾದಿ ಪ್ರೇಕ್ಷಣೀಯ  ಸ್ಥಳಗಳಿವೆ. ಸಂತ ಕನಕದಾಸರ ಹುಟ್ಟೂರಾದ ಕಾಗಿನೆಲೆ ಇರುವುದೂ ಇಲ್ಲಿಯೇ.   ‘ ಏಲಕ್ಕಿ ಕಂಪಿನ ನಾಡು ‘ ಎಂದೇ ಹೆಸರಾದ ಈ ನಾಡಿನಲ್ಲಿ ಎತ್ತ ಸಂಚರಿಸಿದರೂ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳಲ್ಲಿನ ಬ್ಯಾಡಗಿ ಕೆಂಪು ಮೆಣಸಿನಕಾಯಿ  ಮತ್ತು ಕುಸಬಿ  ಎಣ್ಣೆ ಬೀಜದ ಹೊಲಗಳು ಕಣ್ಮನ ಸೆಳೆಯುವ ಆಕರ್ಷಣೆಗಳೇ ಸರಿ . ಆಧ್ಯಾತ್ಮಿಕ ಐತಿಹಾಸಿಕ ಮಹತ್ವದಿಂದ ಕೂಡಿರುವ  ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಿದು. ಜಯಲಕ್ಷ್ಮಿ ಕೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” ಆ ದಿನಗಳ ಸುತ್ತಓಡಾಡಿ ಕಳೆದುಹೋದ ಹಗಲಿಂದುಮುಕ್ತಾಯದ ಸಂಜೆಗೆಬಂದು ನಿಂತಂತಿದೆಬೆಳಕಿನ ಅರಿವಿಗೆಬಿಸಿಲಿನ ಕಿರಣಹರಡಿ ನಿಂತರವಿಗೊಂದು ಸತ್ಯಗೊತ್ತಿರುವಂತಿದೆಮೇಲಿಂದ ಕಾಣುವಸತ್ಯದ ನೆರಿಗೆಯಲ್ಲಿಕಾಣದ ನೋಟಗಳಸುಳ್ಳುಗಳು ಅಡಗಿದಂತಿದೆಹೊಸ ಹಾವ ಭಾವಮುಕ್ತಾಯದ ಸಂಜೆಗೆಇಂದು ಕಳೆಯಿತು ಹೀಗೆಉಳಿಯಬೇಕುನಾಳೆಯೆಂಬ ದುಂದುಭಿಸಂಜೆಗೆ ಬರುವಕನಸುಗಳಲ್ಲಿಭಾವ ಭವಿತದಚಿತ್ರ ಭಿತ್ತಿಯಲ್ಲಿಸುಪ್ತವಾದರೂ.  ನಾಗರಾಜ ಬಿ. ನಾಯ್ಕ 

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-118 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಮಗಳ ನೋವು ಅರ್ಥಮಾಡಿಕೊಂಡ ತಾಯಿ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? …. ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು. ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು. ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-19 ಸವಿತಾದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ-೧೯*ಜಯದೇವಿ ತಾಯಿಯವರ ಜೀವನ ವೃತ್ತಾಂತ*(ಅಸಹಾಯಕರು ಒತ್ತಿಟ್ಟ ಆಸ್ತಿ ಹಿಂದಿರುವಿಕೆ) *ಅಮರವಾಗಲು | ಭ್ರಮೆಯು ನಿಕ್ಕರಿಸಿಸಮರ ಯೋಗ ದೊರೆಬೇಕು -ಮನದತಾಮಸಾದಿ ಗುಣ ಅಳಿಬೇಕು||* ಈ ಸಾಲುಗಳು ತುಂಬಾ ಆಳವಾದ ತತ್ವವನ್ನು ಒಳಗೊಂಡಿವೆ. ಜಯದೇವಿ ತಾಯಿಯವರ ಚಿಂತನೆ ಎಷ್ಟು ಶುದ್ಧ, ಎಷ್ಟು ಜೀವನಾನುಭವದಿಂದ ಬಂದದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.“ಅಮರವಾಗಲು ಭ್ರಮೆಯು ನಿಕ್ಕರಿಸಿ” “ದೈಹಿಕವಾಗಿ ಅಮರವಾಗುವದು ಒಬ್ಬರ ಹೆಸರು, ಕಾರ್ಯ, ಮೌಲ್ಯಗಳು ಕಾಲಾಂತರಕ್ಕೂ ಉಳಿಯಬೇಕು ಎಂಬ ಅರ್ಥ. “ಭ್ರಮೆಯು ನಿಕ್ಕರಿಸಿ” ….. ಮನಸ್ಸಿನಲ್ಲಿರುವ ಅಜ್ಞಾನ, ಮಿಥ್ಯಾಭಾವನೆಗಳು,  ಜೀವನದಲ್ಲಿ ನಾವು ಕಾಣುವ ಬಹುತೇಕ ದುಃಖಗಳಿಗೆ ಕಾರಣ ನಮ್ಮ ಭ್ರಮೆಗಳೇ—ಅಹಂಕಾರ, ಆಸೆ, ಮಮಕಾರ. “ಸಮರ ಯೋಗ ದೊರೆಬೇಕು – ಮನದ”ಇಲ್ಲಿ “ಸಮರ”  ಇದು ಹೊರಗಿನ ಯುಧ್ಧ ಹಾಗೂ ನಮ್ಮೊಳಗಿನ ಯುದ್ಧ.  ವಿರುದ್ಧ ನಡೆಯುವ ಆಂತರಿಕ ಸಮರ.“ಯೋಗ ದೊರೆಬೇಕು…. ಸಮರದಲ್ಲಿ ಜಯ ಸಾಧಿಸಲು ಮನಸ್ಸು ಶಾಂತವಾಗಿರಬೇಕು, ಏಕಾಗ್ರವಾಗಿರಬೇಕು. “ತಾಮಸಾದಿ ಗುಣ ಅಳಿಬೇಕು”ತಾಮಸ ಗುಣ  ಬೇರೆಯವರಿಗೆ ನೋವು ಕೊಡುವುದು ಅವರ ಆಸ್ತಿಯ ಹಕ್ಕು ಪಡೆಯುವುದು ಇವು ನಮ್ಮನ್ನು ಕೆಳಕ್ಕೆಳೆಯುವ ಕೆಟ್ಟ ಗುಣಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಆಗ ಮಾತ್ರ ಮನಸ್ಸು ಶುದ್ಧವಾಗುತ್ತದೆ.ತನ್ನೊಳಗಿನ ಕೆಟ್ಟ ಗುಣಗಳ ವಿರುದ್ಧ ಹೋರಾಡಿ, ಶುದ್ಧ ಮನಸ್ಸಿನಿಂದ ಬದುಕಬೇಕು. ಇದೇ ನಿಜವಾದ “ಅಮರತ್ವ”ದ ಮಾರ್ಗ.ಇದು  ಕವಿತೆಯ ಸಾಲುಗಳು ಬದುಕಿಗೆ ದಾರಿ ತೋರಿಸುವ ಮಾರ್ಗಗಳು ಹಾಗೆ‌ ಜಯದೇವಿತಾಯಿಯವರು  ಬದುಕಿದರು. ೩೬ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಳ್ಳುವುದು ಯಾವ ಸ್ತ್ರೀಯಿಗೂ ಜೀವನದ ದೊಡ್ಡ ಆಘಾತದ ನೋವನ್ನು ಅನುಭವಿಸಿದ ಜಯದೇವಿ ತಾಯಿಯವರ ಮನಸ್ಸಿನಾಳದಲ್ಲಿ ತುಂಬಿದ ಶೋಕವು ನಂದಿ ಹೋಗುವ ಮುನ್ನವೇ….. ಅನೇಕ ಕಾರ್ಯಗಳನ್ನು ಕೈಕೊಂಡರು…..ಅವರು ಶಾಂತರಾಗಿ ಕುಳಿತುಕೊಳ್ಳಲಿಲ್ಲ… ಜೀವನ ಇನ್ನೂ ಅನೇಕ ಹೊಣೆಗಾರಿಕೆಗಳನ್ನು ತಮ್ಮ ಕೈಯಲ್ಲಿ ಇಟ್ಟಿದೆ ಎಂಬ ಅರಿವು ಅವರಿಗೆ ಬಹಳ ಸ್ಪಷ್ಟವಾಗಿತ್ತು.ಪತಿ ಬಿಟ್ಟಿದ್ದ ಆಸ್ತಿಪಾಸ್ತಿಗಳು, ಗರ್ಭಶ್ರೀಮಂತಿಕೆ, ಹಾಗೂ ಬಡ್ಡಿ ವ್ಯವಹಾರವು ಮುಖ್ಯವಾಗಿ ಮಕ್ಕಳ ಲಾಲನೆ ಪಾಲನೆ ಬಹು ದೊಡ್ಡ ಹೊಣೆಗಾರಿಕೆಯಾಗಿ ಅವರ ಮುಂದೆ ನಿಂತವು.  ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ದಿಕ್ಕುತೋಚದೆ ಇತರರ ಮೇಲೆ ಅವಲಂಬಿತರಾಗತಾರೆ. ಆದರೆ ಜಯದೇವಿ ತಾಯಿಯವರು ಅದಕ್ಕೆ ವಿರುದ್ಧವಾಗಿ ಸ್ವತಃ ಮುಂದೆ ಬಂದರು. *ಚಿಂತಿಸುವೆಕೆ ನೀ |ಶಾಂತವಾಗಿರುವ ಮನವೇಎಂಥ ವಿಪತ್ತು ಬಂದರರೂ- ಹೆದರದೆಧೈರ್ಯದಿ ಅಡಿ ಇಡು ಮುಂದೆ||* ಅಂತ ಹೇಳುತಅವರು ಮನೆಮಠದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರಂಭಿಸಿದರು.ಅದರಿಂದಲೇ ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡರು…… ಭರಾಟೆಯಲ್ಲಿ ನಡೆಯುತ್ತಿದ್ದ ಬಡ್ಡಿ ವ್ಯವಹಾರದಿಂದ ಬಂದ ಹಣ ಮತ್ತೊಬ್ಬರ ಕಣ್ಣೀರಿಗೆ ಕಷ್ಟಕ್ಕೆ ಕಾರಣವಾಗುತ್ತಿರುವುದನ್ನು ಗ್ರಹಿಸಿದರು. ತಾಯಿಯವರು “ಭ್ರಮೆಯು ನಿಕ್ಕರಿಸಿ, ತಾಮಸಾದಿ ಗುಣ ಅಳಿಬೇಕು” ಎಂದು ಬರೆದ್ದಂತೆ ಬದುಕಿನಲ್ಲಿ ನಡೆದು ತೋರಿಸಿದ ಸತ್ಯ.  ಬಡ್ಡಿ ವ್ಯವಹಾರವನ್ನು ನೋಡಿದಾಗ ಅವರ ಮನಸ್ಸು ಒಳಗೆ ಒಳಗೆ ಕದಡಿತು. ಈ ವ್ಯವಹಾರವನ್ನು ಪೂರ್ತಿಯಾಗಿ ಇಲ್ಲಸಬೇಕು….. ಅಂತ ಪತಿಯಲ್ಲಿ ಬಹಳಷ್ಟು ಸಲ ಕೇಳಿಕೊಂಡಿದ್ದರು ಆದರೆ ಅದರಿಂದ ಹಿಂದೆತಿರುಗುವದು ಅಸಾಧ್ಯವಾದ ಮಾತು ಎನ್ನುತಿದ್ದರು ಪತಿ ಅದರಿಂದಾಗುವ ನಷ್ಟಗಳನ್ನು ಬಹಳಷ್ಟು ಸಲ ಹೇಳಿದ್ದರು.  ಶ್ರೀಮಂತಿಕೆ ಹೆಚ್ಚಿದಂತೆಲ್ಲ ಬಡ್ಡಿಯ ವ್ಯವಹಾರವು ತನ್ನಿಂದತಾನಾಗಿ ಕುದುರಿಕೊಳ್ಳುವುದು ಸಹಜವಾಗಿತ್ತು….. ಇಂತ ಪರಿಸ್ಥಿತಿಯಲ್ಲಿ ಹಿಂದಿರುಗುವುದು ಬಹಳ ಕಠಿಣವಾಗಿರುತ್ತದೆ…. ಏಕೆಂದರೆ ಬಡ್ಡಿಯ ವ್ಯವಹಾರಗಳನ್ನು ನೋಡಿಕೊಂಡು ಹೋಗಲೇ 14 ಮುನಿಮರನ್ನು ಅವರು ನೇಮಿಸಿದ್ದರು….. ಅಂದರೆ ನಾವು ಊಹಿಸಬಹುದು ಅದು ಎಂಥ ದೊಡ್ಡ ಬಡ್ಡಿ ವಹಿವಾಟು ಅಲ್ಲಿ ನಡೆಯುತ್ತಿತ್ತು ಅನ್ನುವುದನ್ನು ಗಮನಿಸಬಹುದಾಗಿದೆ .ಒಮ್ಮಿಂದ ಒಮ್ಮಲೆ  ವ್ಯವಹಾರವನ್ನು ಸ್ಥಗಿತಗೊಳಿಸಲಾಗದಂತ ಸ್ಥಿತಿ ಇತ್ತು ಅನ್ನುವುದು ಖಚಿತವಾಗಿತು. *ಬಾರೆ ಇಚ್ಛಾಶಕ್ತಿ |ತೋರೆ  ಕ್ರಿಯಾ ಶಕ್ತಿಬೀರೆ ಮಂತ್ರಶಕ್ತಿ ಪ್ರಭಾವ -ಆದಿಶಕ್ತಿಪರಾಶಕ್ತಿ ನೀನು ದಾರಿ ತೋರೆ||* ಅಂತ ಜಯದೇವಿ ತಾಯಿಯವರು ತನ್ನ  ಇಚ್ಛಾಶಕ್ತಿ- ಆತ್ಮ ಶಕ್ತಿಯನ್ನೇ ಆದಿಶಕ್ತಿಯನ್ನಾಗಿ ಮಾಡಿಕೊಂಡು  ಕ್ಷಣಾರ್ಧದಲ್ಲಿ  ಅವರು ಒಂದು ದೊಡ್ಡ ನಿರ್ಧಾರ ಕೈಗೊಂಡರು….ಮನೆಯಲ್ಲಿದ್ದ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ.ಒಂದು ದಿನ ಎಲ್ಲ ಮುನಿಮರನ್ನು ಕರೆಯಿಸಿ ಒಂದು ಇರ್ತ್ಯಾರ್ಥಕ್ಕೆ ಬಂದರು ….ಅಡವಿಇಟ್ಟ ಜನರನೇಲ್ಲ  ಕರೆಸಿಕೊಂಡರು.ಯಾರು ಯಾರಿಗೆ ಎಷ್ಟು ಸಾಲವಿದೆ ಎಂಬುದನ್ನು ಲೆಕ್ಕ ಹಾಕಿ, ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕೂಡಿ ಮಾತನಾಡಿದರು.“ನೀವು ಕೊಟ್ಟಿದ್ದು ನಿಮ್ಮದೇ…ಇದು ನಿಮ್ಮ ಹಕ್ಕು… ತೆಗೆದುಕೊಳ್ಳಿ…”ಎಂದು ಹೇಳುತ್ತಾ, ಅವರ  ಆಸ್ತಿಯ ಕಾಗದ ಪತ್ರಗಳನ್ನು, ಅಡಿವೆ ಇಟ್ಟ ವಿವಿಧ ರೀತಿಯ ಬಂಗಾರದ ಒಡೆಯ ,ಬೆಳ್ಳಿಯ ಸಾಮಗ್ರಿಗಳು, ತಾಮ್ರದ ಹಿತ್ತಾಳೆಯ ಅಡುಗೆ ಮಾಡುವ ದೊಡ್ಡ ದೊಡ್ಡ ಪಾತ್ರೆಗಳು ಕೂಡ ಇರುತ್ತಿದ್ದವು….ದನ ಕರುಗಳನ್ನು   ತಿರುಗಿ ನೀಡಲು ಪ್ರಾರಂಭಿಸಿದರು. ಎಷ್ಟೋ ಜನರು ಅಮ್ಮ ನಮಗೆ ತಿರುಗಿಕೊಡಲು ನಮ್ಮತ್ರ ದುಡ್ಡ ಇಲ್ಲ ಅಂತ ಕಣ್ಣೀರು ಕರೆದರು… ” ಸರಿ ನಿಮಗೆ ಆದಾಗ ಸಾಧ್ಯವಾದಾಗ ತಂದು ಕೊಡಿ”  ಅಂತ ಹೇಳಿ  ಅವರ ಆಸ್ತಿ ತಿರುಗಿಸಿದರು.ಆ ಕ್ಷಣ ಕಣ್ಣುಗಳು ನಂಬಲಾರದ ಆಶ್ಚರ್ಯ,  ಕೃತಜ್ಞತೆಯ ವಾತಾವರಣ ಹರಡಿತು ಕೆಲವರು ಕಣ್ಣೀರಿನಿಂದ‌ ತಾಯಿಯವರ ಪಾದವನ್ನು ತೊಳೆದರೂ… ಹಿಂತಿರುಗಿಸುವ ಕಾರ್ಯವ ಒಂದು ಮನೆತನದ ಧರ್ಮದ ಪುನರ್ಜನ್ಮವಾಗಿತ್ತು. ಈ ಕಾರ್ಯದಿಂದ ತಾಯಿಯವರು ತಮ್ಮೊಳಗಿನ “ತಾಮಸ”ವನ್ನು ಅಳಿಸಿ, “ಸಮರ ಯೋಗ”ವನ್ನು ಸಾಧಿಸಿದವರಾಗಿ ಬೆಳಗಿದರು.ಅವರು ಹೊರಗಿನ ಯುದ್ಧಗಳೊಂದಿಗೆ, ಒಳಗಿನ ಯುದ್ಧವನ್ನು ಗೆದ್ದರು. ಇದೇ ಕಾರಣಕ್ಕೆ ಅವರು ಅಮರರಾದರು…ಜನರ ಮನಸ್ಸಿನಲ್ಲಿ, ಆಶೀರ್ವಾದಗಳಲ್ಲಿ, ಮತ್ತು ಅವರ ಮಾಡಿದ ಸತ್ಕಾರ್ಯಗಳಲ್ಲಿ….. ಅಜರಾಮರರಾದರು…!!! *ಗಳಿಸಿದ ಧನವನು | ಉಳಿಸಬೇಕಾದರೆ ಬಳಿಸಬೇಕಾಗುತ್ತದೆ ಎಚ್ಚರ- ಅಣ್ಣಯ್ಯ ಕಳೆಯಬೇಕಾದ ಅನಾಚಾರದಿ ||* ಹೌದು ಗಳಿಸಿದ ಧನವನ್ನು ಉಳಿಸಬೇಕಾದರೆ ಬಹಳ ಎಚ್ಚರದಿಂದ  ಸಆಚಾರದಿಂದ ಉಳಿಸಿ ಬೆಳೆಸಿಕೊಂಡು ಹೋಗಬೇಕು ಅಂತ ಹೇಳುತ್ತಿದ್ದರು. ಅನಾಚಾರದಿಂದ ಗಳಿಸಿದ ದುಡ್ಡು ನಮ್ಮ ಕೈಗೆ ಎಟುಕದು ಅದು ಮುಂದಿನ ಪೀಳಿಗೆಗೆ ಅನಾಹುತ ಮಾಡುವುದು ಖಚಿತ ಅನ್ನೋದನ್ನ ಯಾವಾಗಲೂ ಜಯದೇವಿ ತಾಯಿಯವರು ಹೇಳುತ್ತಿದ್ದರು. ತಾಯಿಯವರು ಅದನ್ನು ನೆನಪಿಸಿಕೊಂಡಾಗ ಅವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು…“ನಮ್ಮ ಮನೆಯ ಹಿಂದಿನ ದಿನಗಳು ತುಂಬಾ ಐಶ್ವರ್ಯವಾಗಿದ್ದವು… ಆದರೆ ಆ ಐಶ್ವರ್ಯಕ್ಕೆ ನೆರಳಾಗಿ ನಿಂತದ್ದು ಬಡ್ಡಿ ವ್ಯಾಪಾರ,” ಎಂದು ಅವರು ನಿಧಾನವಾಗಿ ಹೇಳುತ್ತಿದ್ದರು. ಅವರ ಗಂಡನ ತಂದೆ, ಅಂದರೆ ಮನೆಯ ಅಜ್ಜ, ಬಡ್ಡಿ ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಿದ್ದರು.ಆದರೆ ಅದು  … ಕಠೋರವಾದ   ಮಾರ್ಗವಾಗಿತ್ತು ಧಡೂತಿ ಜನರನ್ನು ಇಟ್ಟುಕೊಂಡು ಬಡವರ ಮನೆ ಬಾಗಿಲು ತಟ್ಟಿಸುತ್ತಿದ್ದರು. ಸಾಲ ತೀರಿಸಲಾಗದವರ ಕಣ್ಣೀರನ್ನು ಲೆಕ್ಕಿಸದೇ, ಅವರ ಆಸ್ತಿಪಾಸ್ತಿಯನ್ನು ಕಸಿದುಕೊಳ್ಳುತ್ತಿದ್ದರು. ಬಡವರ ಅಳಲು, ತಾಯಿಯರ ನೋವು, ಮಕ್ಕಳ ಭಯದ ನೆರಳು ನಮ್ಮಮನೆಯ ಗೋಡೆಗಳಲ್ಲಿ  ಉಳಿದುಕೊಂಡಿದ್ದವೆಂದು…. ತಾಯಿಯವರು ಹೇಳುತ್ತಿದ್ದರು.“ಅವರು ತಮ್ಮ ಆಸ್ತಿಗಳನ್ನು ಬಿಟ್ಟು ಕೊಡುವಾಗ ಎಷ್ಟೊಂದು ಅಳಲುಗಳ ಶಾಪ ಇತ್ತರೋ ಏನೋ…”ಕಾಲ ಕಳೆಯಿತು… …..ಅಜ್ಜ ಕೂಡಿಟ್ಟ ಸಂಪತ್ತಿನ ವೈಭವದಲ್ಲಿ ನಾವೆಲ್ಲ ಇರಬಹುದು. ಆದರೆ ಆ ಪಾಪದ ಶಾಪ ಮನೆಯ ಮೇಲೆ ಹಬ್ಬುತ್ತಲೇ ಹೋಯಿತು.ಅದರ ಪರಿಣಾಮವಾಗಿ ನನ್ನ ಪತಿ ಹಾಗೂ ಅತ್ತೆಯಂದಿರು ಅನುಭವಿಸಬೇಕಾಯಿತು.“ನನ್ನ ಗಂಡ ಒಳ್ಳೆಯ ಮನಸ್ಸಿನವರು… ಯಾರಿಗೂ ನೋವು ಕೊಡದವರು…” ಎಂದು ಹೇಳುವಾಗ ತಾಯಿಯವರ ಧ್ವನಿ ನಡುಗುತ್ತಿತ್ತು.“ಆದರೂ… ಅವರ ಜೀವನ ಬಹಳ ಚಿಕ್ಕದಾಯಿತು… ಬೇಗನೇ ನನ್ನನ್ನು ಬಿಟ್ಟು ಹೋದರು…”ಅವರು ಹೇಳುತ್ತಿದ್ದಾಗ,  ಆ ಸಾವು …  ಕುಟುಂಬದ ಮೇಲೆ ಬಿದ್ದ ಪಾಪದ ಪ್ರತಿಫಲ ಎಂಬ ಭಾವನೆ ಮೂಡುತ್ತಿತ್ತು. “ಬೇರೆಯವರ ಕಣ್ಣೀರಿಂದ ಕಟ್ಟಿದ ಮನೆ, ಒಂದು ದಿನ ತನ್ನವರ ಕಣ್ಣೀರಿಂದಲೇ ಕರಗುತ್ತದೆ…”ಅವರ ಮಾತಿನಲ್ಲಿ ನೋವು ಇತ್ತು… ಆದರೆ ಅದರಲ್ಲಿ ಒಂದು ದೊಡ್ಡ ಪಾಠವೂ ಇತ್ತುಅನ್ಯಾಯದಿಂದ ಬಂದ ಹಣ ಸುಖ ಕೊಡದು…ಪಾಪದ ಬೀಜ ಯಾವಾಗಲಾದರೂ ಮೊಳೆಯುತ್ತದೆ… ಮತ್ತು ಅದರ ಫಲವನ್ನು ನಿರಪರಾಧಿಗಳೂ ಅನುಭವಿಸಬೇಕಾಗುತ್ತದೆ…ಎನ್ನುವ ಸತ್ಯವನು ಅನೇಕ ಉದಾಹರಣೆಗಳೊಂದಿಗೆ ಹೇಳುತ್ತಿದ್ದರು. ಅಂತಹ ಉದಾಹರಣೆಗಳಲ್ಲಿ ಒಂದು ಉದಾಹರಣೆಯನ್ನು ತಾಯಿಯವರು ಮೇಲಿಂದ ಮೇಲೆ ಹೇಳುತ್ತಿದ್ದರುಅಜ್ಜ ಬಹಳ ಕಾಯಿಲೆ ಇದ್ದಾಗ ಜ್ವರ ಹೆಚ್ಚಾಗಿ ಅವರು  ತಾಯಿಯವರನ್ನು ಕರೆದು“ಅಲ್ಲಿ ಹೊರಗಡೆ ಯಾವುದು ಅಮಾಯಕ ಹೆಣ್ಣುಮಗಳು ನನ್ನನ್ನು ಶಪಿಮಿಸುತ್ತಿರುವಳು… ಅವಳನ್ನು ಇಲ್ಲಿಂದ ಕಳಿಸಿಕೊಡು “ಅನ್ನುತ್ತಿದ್ದರಂತೆ. ತಾಯಿಯವರು ನೋಡಿದರೆ ಅಲ್ಲಿ ಯಾರು ಇರುತ್ತಿರಲಿಲ್ಲ ಆದರೂ ಕೂಡ “ಅವಳು ಇಲ್ಲೇ ಇದ್ದಾಳೆ ಹೇಳು ಅವಳಿಗೆ ಹೋಗಲು ಹೇಳು ನೀನು ಹೇಳಿದರೆ ಮಾತ್ರ  ಹೋಗುವಳು ಅವಳಿಗೆ ಬೆದರಿಸಿ ಹೇಳು…..”ಅನ್ನುತ್ತಿದ್ದರಂತೆ.ಅದೇ ರೀತಿಯಾಗಿ ತಾಯಿಯವರು “ನೀನು ಹೋಗಮ್ಮ ಇಲ್ಲಿಂದ” ಅಂತ ಬೆದರಿಸಿದಂತೆ ನಟಿಸುತ್ತಿದ್ದರಂತೆ ….ಆಗ ಅಜ್ಜ ಸಮಾಧಾನರಾಗಿ “ನೋಡು ಅವಳು ನಿನಗೆ ಹೆದರಿ ಹೋಗಿಬಿಟ್ಟ ನೋಡು “ಅನ್ನುತ್ತಿದ್ದರಂತೆ … ನಂತರ ಜಯದೇವಿ ತಾಯಿಯವರು ಸಿದ್ದರಾಮೇಶ್ವರನ ಪ್ರಸಾದವನ್ನು ಹಣೆಗಿಟ್ಟು ಮಲಗಿಸುತ್ತಿದ್ದರಂತೆ.ಇದೆಲ್ಲಾ ಕರ್ಮದ ಫಲಗಳು ಅಂತ ತಾಯಿಯವರು ಹೇಳುತ್ತಿದ್ದರು. ನಾವು ಮಾಡಿದ ಪಾಪ ಪುಣ್ಯಗಳ ಕರ್ಮವನ್ನು ನಮ್ಮ ಮುಂದಿನ ಪೀಳಿಗೆಯು ಭೋಗಿಸಬೇಕಾಗುತ್ತದೆ. ತಾಯಿಯವರು ಜೀವನವನ್ನು ಕೇವಲ ಘಟನೆಗಳ ಸರಣಿ ಹೇಳುತಿದ್ದರು…. ನಮ್ಮ ಕರ್ಮದ ಹಾದಿ ಎಂದು ಗಾಢವಾಗಿ ನಂಬಿದವರು…“ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಇರುತ್ತದೆ… ಅದು ನಮ್ಮನ್ನು, ನಮ್ಮ ಮಕ್ಕಳನ್ನೂ ತಟ್ಟುತ್ತದೆ…” ಎಂದು ಅವರು ಮನಸ್ಸು ತುಂಬಿ ಹೇಳುತ್ತಿದ್ದರು.ಅವರ ಧ್ವನಿಯಲ್ಲಿ… ಅನುಭವದ ಕಿಡಿ ಹೊತ್ತಿತ್ತು… “ನಾವು ಮಾಡಿದ ಪಾಪ… ನಮ್ಮ ನೆರಳಾಗಿ ನಮ್ಮನ್ನು ಹಿಂಬಾಲಿಸುತ್ತದೆ…ನಾವು ಮಾಡಿದ ಪುಣ್ಯ… ನಮ್ಮ ಮಕ್ಕಳಿಗೆ ದಾರಿಯಾಗಿ ಬೆಳಗುತ್ತದೆ…”ಅವರು ನಿಧಾನವಾಗಿ ಮುಂದುವರಿಸುತ್ತಿದ್ದರು:“ಮಕ್ಕಳು ನಮ್ಮ ಸಂಪತ್ತಾದರೆ… ನಮ್ಮ ಕರ್ಮದ ಸಾಲಿಗೂ ವಾರಸುದಾರರಾಗುತ್ತಾರೆ…”ಈ ಮಾತು ಹೇಳುವಾಗ ಅವರ ಕಣ್ಣುಗಳಲ್ಲಿ ಒಂದು ಗಾಢ ನೋವು ಮೂಡುತ್ತಿತ್ತು… ನಾವು ಬದುಕುವ ಪ್ರತಿದಿನವೂ ಜಾಗ್ರತೆ ಇರಬೇಕು…” ಎಂದು ಅವರು ಹೃದಯದಿಂದ ಹೇಳುತ್ತಿದ್ದರು…ಅವರ ಮಾತುಗಳಲ್ಲಿ  ಎಚ್ಚರಿಕೆ ಇತ್ತು…ಪ್ರಾರ್ಥನೆ ಇತ್ತು…ಒಂದು ಪಾಠ ಇತ್ತು…“ನಾವು ಬಿತ್ತಿದ ಬೀಜವೇ ಮರವಾಗಿ ನಮ್ಮ ಮಕ್ಕಳ ಮೇಲೆ ನೆರಳಾಗುತ್ತದೆ…ಅದು ನೆರಳೋ… ಇಲ್ಲ ಬೆಂಕಿಯೋ… ಅದು ನಮ್ಮಕ್ಯೆಯಲ್ಲಿದೆ……ಎಂದು ಯಾವಾಗಲೂ ತಿಳಿ ಹೇಳುತ್ತಿದ್ದರು.  ನೈತಿಕವಾಗಿಯೂ ತಮ್ಮ ಮನೆತನವನ್ನು ಬಲಪಡಿಸಿದರು. ಅವರ ಈ ಕ್ರಮಶೀಲತೆ ಮತ್ತು ಧೈರ್ಯವು ಇತರ ಮಹಿಳೆಯರಿಗೂ ಮಾದರಿಯಾಗಿ ಪರಿಣಮಿಸಿತು.ಪತಿಯನ್ನು ಕಳೆದುಕೊಂಡ ದುಃಖವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡು, ಜಯದೇವಿ ತಾಯಿಯವರು ತಮ್ಮ ಜೀವನವನ್ನು ತಮ್ಮ ಸುತ್ತಲಿನ ಜನರ ಜೀವನವನ್ನೂ ಸುಧಾರಿಸುತ ಮಹಾನ್ ವ್ಯಕ್ತಿತ್ವವಾಗಿ ಬೆಳಗಿದರು. “ನೀರಿನಂತೆ ನಿರ್ಮಲ | ಹಿರಿದಾದ ಮನವಾಗಿ ಪರರಿಗಾಗಿ ಸವೆದು ತಣಿಬೇಕು -ದೇವನಬರುವಿಗಾಗಿ ದಾರಿ ಕಾಯಬೇಕು ||” ಎನ್ನುವಂತೆ ಜೀವನವನ್ನು ಸಮರ್ಪಿಸಿಕೊಂಡಿದ್ದರು. (ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರುಮಾಲಿಕೆ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ದೇಶವು ಕಂಡ ಅಪ್ರತಿಮ ರಾಜಕಾರಣಿ ಸ್ವಾತಂತ್ರ್ಯ ಹೋರಾಟಗಾರ ಬಡವರ ಬಂಧು ಧೀಮಂತ ನಾಯಕ ಮಹಾತ್ಮ ಗಾಂಧಿಯವರ ಆಪ್ತ ಶ್ರೀ ಕುಮಾರ ಸ್ವಾಮಿ ಕಾಮರಾಜ ಭಾರತದ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದೇ ಖ್ಯಾತರಾದ ಕುಮಾರಸ್ವಾಮಿ ಕಾಮರಾಜ್ (ಕೆ. ಕಾಮರಾಜ್)   ಜನನ: ಜುಲೈ ೧೫, ೧೯೦೩ ರಂದು ತಮಿಳುನಾಡಿನ ವಿರುಧುನಗರದಲ್ಲಿ  (ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ) ಜನಿಸಿದರು. ತಂದೆ-ತಾಯಿ: ಇವರ ತಂದೆ ಕುಮಾರಸ್ವಾಮಿ ನಾಡಾರ್  ಮತ್ತು ತಾಯಿ ಶಿವಕಾಮಿ ಅಮ್ಮಾಳ್. ವೃತ್ತಿ: ಇವರ ತಂದೆ ತೆಂಗಿನಕಾಯಿ ವ್ಯಾಪಾರಿಯಾಗಿದ್ದರು. ಕಾಮರಾಜ್ ಅವರಿಗೆ ಕೇವಲ ೬ ವರ್ಷ ವಯಸ್ಸಿದ್ದಾಗ ತಂದೆ ನಿಧನರಾದರು. ಬಾಲ್ಯ ಮತ್ತು ಶಿಕ್ಷಣ:  ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿ ತಾಯಿಯ ಮೇಲೆ ಬಿತ್ತು. ಬಡತನದ ಕಾರಣದಿಂದಾಗಿ ಕಾಮರಾಜ್ ಅವರು ಕೇವಲ ೧೨ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು, ಸೋದರಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಮುಖ್ಯಮಂತ್ರಿಯಾಗಿ: ತಮಿಳುನಾಡಿನ ೩ನೇ ಮುಖ್ಯಮಂತ್ರಿಯಾಗಿ (೧೯೫೪–೧೯೬೩) ಸೇವೆ ಸಲ್ಲಿಸಿದರು. ಇವರ ಅವಧಿಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದ್ದು ಅತ್ಯಂತ ಪ್ರಮುಖ ಸಾಧನೆಯಾಗಿದೆ. ಎಸ್. ನಿಜಲಿಂಗಪ್ಪನವರ ಜೊತೆಗಿನ ಒಡನಾಟ ಕೆ. ಕಾಮರಾಜ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಆಪ್ತ ಒಡನಾಟ ಹೊಂದಿದ್ದರು: ಉತ್ತಮ ಸ್ನೇಹಿತರಾಗಿದ್ದರು. ಸಿಂಡಿಕೇಟ್ ನಾಯಕರು:  1960ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಒಳಗೆ ಪ್ರಭಾವಿ ನಾಯಕರ ಗುಂಪಾಗಿದ್ದ ಸಿಂಡಿಕೇಟ್’ನಲ್ಲಿ ಕಾಮರಾಜ್ ಮತ್ತು ನಿಜಲಿಂಗಪ್ಪ ಪ್ರಮುಖ ಸದಸ್ಯರಾಗಿದ್ದರು. ಇವರಿಬ್ಬರೂ ಪಕ್ಷದ ಆಡಳಿತ ಮತ್ತು ಪ್ರಧಾನ ಮಂತ್ರಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಪ್ರಧಾನಿಗಳ ಆಯ್ಕೆ:  ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನಂತರ ಇಂದಿರಾ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ತರುವಲ್ಲಿ ಈ ಇಬ್ಬರು ನಾಯಕರು ಒಟ್ಟಾಗಿ ಶ್ರಮಿಸಿದ್ದರು. ಕಾಂಗ್ರೆಸ್ ವಿಭಜನೆ  (೧೯೬೯): ಇಂದಿರಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗ, ಕಾಂಗ್ರೆಸ್ ಪಕ್ಷವು ಎರಡು ಹೋಳಾಯಿತು. ಆಗ ಕಾಮರಾಜ್ ಮತ್ತು ನಿಜಲಿಂಗಪ್ಪ ಅವರು ಹಳೆಯ ಕಾಂಗ್ರೆಸ್ ನಾಯಕರ ಗುಂಪಾದ ಕಾಂಗ್ರೆಸ್ (O) ಅಡಿಯಲ್ಲಿ ಒಟ್ಟಾಗಿ ನಿಂತರು. ಆದರ್ಶಗಳು: ಇಬ್ಬರೂ ನಾಯಕರು ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಸಾಮಾನ್ಯ ಜನರ ಬದುಕನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು.ಕಾಮರಾಜ್ ಅವರನ್ನು ಇಂದಿಗೂ ತಮಿಳುನಾಡಿನ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಸ್ಮರಿಸಲಾಗುತ್ತದೆ. ಇವರಿಗೆ ೧೯೭೬ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು. ಕೆ. ಕಾಮರಾಜ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಜೀವನದ ಪ್ರಮುಖ ಘಟ್ಟಗಳು  :ಸ್ವಾತಂತ್ರ್ಯ ಹೋರಾಟ (೧೯೨೦–೧೯೪೭) ಕಾಮರಾಜ್ ಅವರು ಕೇವಲ ೧೬ನೇ ವಯಸ್ಸಿನಲ್ಲಿ ಕಾಂಗ್ರೆಸ್ ಸೇರುವ ಮೂಲಕ ದೇಶದ ಸೇವೆಗೆ ಧುಮುಕಿದರು. ಪ್ರೇರಣೆ: ೧೯೧೯ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಅವರನ್ನು ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿಸಿತು. ಚಳುವಳಿಗಳಲ್ಲಿ ಭಾಗವಹಿಸುವಿಕೆ:  ಅವರು ಅಸಹಕಾರ ಚಳುವಳಿ (೧೯೨೧),  ನಾಗಪುರ ಧ್ವಜ ಸತ್ಯಾಗ್ರಹ (೧೯೨೩), ಮತ್ತು ಸತ್ಯಮೂರ್ತಿಯವರ ನಾಯಕತ್ವದಲ್ಲಿ ನಡೆದ ಅನೇಕ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನ ಸತ್ಯಾಗ್ರಹ: ೧೯೩೦ರಲ್ಲಿ ರಾಜಗೋಪಾಲಾಚಾರಿ ಅವರ ನೇತೃತ್ವದಲ್ಲಿ ನಡೆದ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಮೊದಲ ಬಾರಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಕ್ವಿಟ್ ಇಂಡಿಯಾ ಚಳುವಳಿ:  ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಅಮರಾವತಿ ಜೈಲಿನಲ್ಲಿ ಇರಿಸಲಾಯಿತು. ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟು ಆರು ಬಾರಿ ಸುಮಾರು ಎಂಟು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ರಾಜಕೀಯ ಜೀವನ ಮತ್ತು ಸಾಧನೆಗಳು (೧೯೪೭–೧೯೭೫)ಸ್ವಾತಂತ್ರ್ಯದ ನಂತರ ಕಾಮರಾಜ್ ಅವರು ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಪ್ರತಿಮ ನಾಯಕರಾಗಿ ಬೆಳೆದರು. ತಮಿಳುನಾಡು ಮುಖ್ಯಮಂತ್ರಿಯಾಗಿ  (೧೯೫೪–೧೯೬೭): ಒಂಬತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಇವರ ಅವಧಿಯನ್ನು ತಮಿಳುನಾಡಿನ ‘ಸುವರ್ಣ ಯುಗ’ ಎನ್ನಲಾಗುತ್ತದೆ.ಶಿಕ್ಷಣ ಕ್ರಾಂತಿ: ಬಡ ಮಕ್ಕಳು ಶಾಲೆಗೆ ಬರುವಂತೆ ಮಾಡಲು ವಿಶ್ವದಲ್ಲೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಉಚಿತ ಶಿಕ್ಷಣವನ್ನು ಜಾರಿಗೆ ತಂದರು. ಕೈಗಾರಿಕೆ ಮತ್ತು ನೀರಾವರಿ:  ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ನೆರವಾದರು ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಕಾಮರಾಜ್ ಯೋಜನೆ (K-Plan): ೧೯೬೪ರಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಅಧಿಕಾರ ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರಸ್ತಾಪಿಸಿದರು. ಸ್ವತಃ ತಾವೇ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾದರು.ಕಿಂಗ್ ಮೇಕರ್: ಕಾಂಗ್ರೆಸ್ ಅಧ್ಯಕ್ಷರಾಗಿ (೧೯೬೪–೧೯೬೬), ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಅವರನ್ನ ಪ್ರಧಾನ ಮಂತ್ರಿಗಳನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸರಳತೆ: ಅಧಿಕಾರದಲ್ಲಿದ್ದರೂ ಅತ್ಯಂತ ಸಾಮಾನ್ಯ ಜೀವನ ನಡೆಸುತ್ತಿದ್ದ ಇವರು, ನಿಧನರಾದಾಗ ಅವರ ಬಳಿ ಕೇವಲ ಕೆಲವು ಜೊತೆ ಬಟ್ಟೆಗಳು ಮತ್ತು ಅಲ್ಪ ಹಣ ಮಾತ್ರ ಇತ್ತು.ಇವರ ಅಗಾಧ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ೧೯೭೬ ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕೆ. ಕಾಮರಾಜರ ಸರಳತೆ ಇಡೀ ದೇಶಕ್ಕೆ ಮಾದರಿಯಾದದ್ದು. ಅಧಿಕಾರದ ಉತ್ತುಂಗದಲ್ಲಿದ್ದರೂ ಅವರು ಸಾಮಾನ್ಯ ಮನುಷ್ಯನಂತೆ ಬದುಕಿದ ರೀತಿ ಅನನ್ಯ. ಅವರ ಸರಳ ಬದುಕಿನ ಕೆಲವು ಆಸಕ್ತಿದಾಯಕ ಅಂಶಗಳು  ೧. ವಸ್ತ್ರವಿನ್ಯಾಸ ಮತ್ತು ವಾಸಸ್ಥಳ:ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೇವಲ ಒಂದು ಬಿಳಿ ಶರ್ಟ್ ಮತ್ತು ವೇಷ್ಟಿ (ಧೋತಿ) ಧರಿಸುತ್ತಿದ್ದರು. ಇಡೀ ಜೀವನದಲ್ಲಿ ಅವರು ಎಂದಿಗೂ ಆಡಂಬರದ ಬಟ್ಟೆಗಳನ್ನು ಬಳಸಲಿಲ್ಲ.ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಒಂಬತ್ತು ವರ್ಷಗಳ ಕಾಲವೂ ಅವರು ಸರಕಾರಿ ಬಂಗಲೆಯಲ್ಲಿ ವಾಸಿಸದೆ, ತಮ್ಮ ಹಳೆಯ ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದರು. ೨. ಆಸ್ತಿ-ಪಾಸ್ತಿ ಇಲ್ಲದ ನಾಯಕ:ರಾಷ್ಟ್ರ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದು ಕರೆಸಿಕೊಂಡರೂ, ಅವರು ನಿಧನರಾದಾಗ ಅವರ ಬಳಿ ಇದ್ದದ್ದು ಕೇವಲ ಎರಡು ಜೊತೆ ಬಟ್ಟೆಗಳು, ಕೆಲವು ಪುಸ್ತಕಗಳು ಮತ್ತು ಕೇವಲ ೧೩೦ ರೂಪಾಯಿಗಳು ಮಾತ್ರ.ಅವರಿಗೆ ಸ್ವಂತ ಮನೆ ಅಥವಾ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ. ೩. ಕುಟುಂಬ ಮತ್ತು ಅಧಿಕಾರ:ಅವರು ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬದವರಿಗಾಗಿ ಬಳಸಲಿಲ್ಲ. ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಕೊನೆಯವರೆಗೂ ತಮ್ಮ ಹಳ್ಳಿಯ ಮನೆಯಲ್ಲಿಯೇ ಸರಳವಾಗಿ ಬದುಕಿದರು.ಒಮ್ಮೆ ಅವರ ತಾಯಿ ಮಗನ ಬಳಿ ಒಂದು ಫ್ಯಾನ್ ಕೇಳಿದಾಗ, “ಇದು ಸರಕಾರಿ ಹಣದಲ್ಲಿ ನಡೆಯುತ್ತಿರುವ ಮನೆ, ಜನರ ತೆರಿಗೆ ಹಣದಲ್ಲಿ ನಾನು ಕುಟುಂಬಕ್ಕೆ ಸೌಲಭ್ಯ ಒದಗಿಸುವುದಿಲ್ಲ” ಎಂದು ನಿರಾಕರಿಸಿದ್ದರು. ೪. ಪ್ರಯಾಣ ಮತ್ತು ಶಿಷ್ಟಾಚಾರ:ಅವರು ಎಲ್ಲಿಗೆ ಹೋದರೂ ತಮಗೆ ವಿಐಪಿ ಶಿಷ್ಟಾಚಾರ (VIP Protocol) ಬೇಕೆಂದು ಬಯಸುತ್ತಿರಲಿಲ್ಲ. ಎಷ್ಟೋ ಬಾರಿ ಸಾಮಾನ್ಯರಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. . ಕಾರಿನಲ್ಲಿ ಹೋಗುವಾಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಾಮಾನ್ಯರಂತೆ ಕಾಯುತ್ತಿದ್ದರು; ತನಗಾಗಿ ಜನರಿಗೆ ತೊಂದರೆಯಾಗಬಾರದು ಎಂಬುದು ಅವರ ಆಶಯವಾಗಿತ್ತು. ೫. ಹಸಿವಿನ ಅರಿವು: ತಮ್ಮ ಬಡತನದ ಬಾಲ್ಯವೇ ಅವರ ಸರಳತೆಗೆ ಕಾರಣವಾಗಿತ್ತು. ತಾನು ಉಣ್ಣದಿದ್ದರೂ ಪರವಾಗಿಲ್ಲ, ದೇಶದ ಮಕ್ಕಳು ಹಸಿವಿನಿಂದ ಇರಬಾರದು ಎಂದು ಭಾವಿಸಿದ್ದರಿಂದಲೇ ‘ಬಿಸಿಯೂಟ ಯೋಜನೆ’ ಜನ್ಮತಾಳಿತು. ಕಾಮರಾಜರು ರಾಜಕೀಯ ಎಂದರೆ ಅಧಿಕಾರವಲ್ಲ, ಅದೊಂದು ಸಮಾಜ ಸೇವೆ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು.ಕಾಮರಾಜರ ಅವರು ಮದುವೆಯಾಗಿರಲಿಲ್ಲ .  ಕೆ. ಕಾಮರಾಜ್ ಅವರು ತಮ್ಮ ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದರು. ಅವರು ಮದುವೆಯಾಗದಿರಲು ಕೆಲವು ಮುಖ್ಯ ಕಾರಣಗಳು ಮತ್ತು ಅವರ ಬದ್ಧತೆ ಹೀಗಿತ್ತು: ದೇಶಸೇವೆಯೇ ಮೊದಲ ಆದ್ಯತೆ:  ಕಾಮರಾಜ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ದೇಶದ ಬಿಡುಗಡೆ ಮತ್ತು ಜನರ ಸೇವೆಯೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಸಂಸಾರ ಎಂಬ ಬಂಧನಕ್ಕೆ ಸಿಲುಕಿದರೆ ಸಾರ್ವಜನಿಕ ಸೇವೆಗೆ ಅಡ್ಡಿಯಾಗಬಹುದು ಎಂಬುದು ಅವರ ಭಾವನೆಯಾಗಿತ್ತು. ತಾಯಿಯ ಆಸೆ: ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಮಗ ಮದುವೆಯಾಗಬೇಕೆಂದು ಬಹಳ ಆಸೆಪಟ್ಟಿದ್ದರು. ಆದರೆ, ಕಾಮರಾಜ್ ಅವರು “ನನಗೆ ಇಡೀ ದೇಶದ ಮಕ್ಕಳೇ ನನ್ನ ಮಕ್ಕಳಿದ್ದಂತೆ, ತಮಿಳುನಾಡಿನ ಜನತೆಯೇ ನನ್ನ ಕುಟುಂಬ” ಎಂದು ಹೇಳಿ ಮದುವೆಯನ್ನು ನಿರಾಕರಿಸುತ್ತಾ ಬಂದರು.ಸರಳ ಮತ್ತು ಸಂನ್ಯಾಸಿ ಜೀವನ: ಒಬ್ಬ ರಾಜಕಾರಣಿಯಾಗಿ ಅವರು ಬದುಕಿದ ರೀತಿ ಒಬ್ಬ ಸಂನ್ಯಾಸಿಗಿಂತ ಕಡಿಮೆ ಇರಲಿಲ್ಲ. ಸ್ವಾರ್ಥವಿಲ್ಲದ, ಆಸ್ತಿ ಮಾಡದ ಅವರ ಜೀವನಶೈಲಿಗೆ ಅವರ ಅವಿವಾಹಿತ ಜೀವನವೂ ಒಂದು ಕಾರಣವಾಗಿತ್ತು.ಕಾಮರಾಜ್ ಅವರಂತೆ ಜೀವನಪೂರ್ತಿ ಬ್ರಹ್ಮಚಾರಿಯಾಗಿದ್ದರು. ದೇಶಕ್ಕಾಗಿ ಶ್ರಮಿಸಿದ  ಮಹಾನ್ ನಾಯಕರು . ಕಾಮರಾಜರು ತಮ್ಮ ತಾಯಿ ಶಿವಕಾಮಿ ಅಮ್ಮಾಳ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ, ವೈಯಕ್ತಿಕ ಪ್ರೀತಿ ಮತ್ತು ಸಾರ್ವಜನಿಕ ಧರ್ಮದ ನಡುವೆ ಅವರು ಎಂದಿಗೂ ತಾರತಮ್ಯ ಮಾಡಲಿಲ್ಲ. ಅವರ ಮತ್ತು ತಾಯಿಯ ನಡುವಿನ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇಲ್ಲಿವೆ: ೧. ಫ್ಯಾನ್ ಮತ್ತು ನಲ್ಲಿಯ ಘಟನೆ:ಕಾಮರಾಜರು ಮುಖ್ಯಮಂತ್ರಿಯಾದಾಗ ಅವರ ತಾಯಿ ಹಳ್ಳಿಯಲ್ಲೇ ವಾಸವಿದ್ದರು. ಮಗ ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಅನುಕೂಲ ಮಾಡಿಕೊಡುತ್ತಾನೆ ಎಂದು ಹಳ್ಳಿಯವರು ಅಂದುಕೊಂಡಿದ್ದರು. ಒಮ್ಮೆ ತಾಯಿ ಮಗನ ಬಳಿ ಮನೆಗೆ ಒಂದು ಫ್ಯಾನ್ ಮತ್ತು ನಲ್ಲಿಯ (Tap) ವ್ಯವಸ್ಥೆ ಮಾಡಿಸಿಕೊಡು ಎಂದು ಕೇಳಿದರು. ಆಗ ಕಾಮರಾಜರು, “ಅಮ್ಮಾ, ನಾನು ಜನರ ಹಣದಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ನಿನಗೆ ಈ ಸೌಲಭ್ಯ ಮಾಡಿಕೊಟ್ಟರೆ, ನಾಳೆ ಊರಿನವರೆಲ್ಲಾ ನನ್ನ ಬಳಿ ಬಂದು ಕೇಳುತ್ತಾರೆ. ನಿನಗೆ ಇದು ಬೇಡ” ಎಂದು ಮೃದುವಾಗಿ ನಿರಾಕರಿಸಿದರು. ೨. ಮುನ್ಸಿಪಾಲಿಟಿ ಟ್ಯಾಪ್ ಕಿತ್ತಿಸಿದ ಪ್ರಸಂಗ:ಅವರು ಮುಖ್ಯಮಂತ್ರಿಯಾಗಿದ್ದಾಗ, ಮುನ್ಸಿಪಾಲಿಟಿ ಅಧಿಕಾರಿಗಳು ತಾಯಿಯ ಮನೆಯ ಮುಂದೆ ಅವರಿಗೊಂದು ಪ್ರತ್ಯೇಕ ನೀರಿನ ನಲ್ಲಿ (Tap) ಅಳವಡಿಸಿದ್ದರು. ಇದನ್ನು ತಿಳಿದ ಕಾಮರಾಜರು ತಕ್ಷಣವೇ ಅದನ್ನು ಕಿತ್ತಿಸಲು ಆದೇಶಿಸಿದರು. “ನನ್ನ ತಾಯಿಗೆ ವಿಶೇಷ ಸೌಲಭ್ಯ ಬೇಡ, ಊರಿನವರೆಲ್ಲಾ ಎಲ್ಲಿ ನೀರು ತುಂಬುತ್ತಾರೋ ಅಲ್ಲೇ ನನ್ನ ತಾಯಿಯೂ ತುಂಬಲಿ” ಎಂಬುದು ಅವರ ತತ್ವವಾಗಿತ್ತು. ೩. ಹಣದ ನೆರವಿನ ಮಿತಿ: ತಾಯಿಯ ನಿರ್ವಹಣೆಗಾಗಿ ಕಾಮರಾಜರು ಪ್ರತಿ ತಿಂಗಳು ಕೇವಲ ೧೨೦ ರೂಪಾಯಿಗಳನ್ನು ಮಾತ್ರ ಕಳುಹಿಸುತ್ತಿದ್ದರು. ಆ ಕಾಲದಲ್ಲಿ ಅದು ತಾಯಿಯ ಜೀವನಕ್ಕೆ ಸಾಕಾಗುತ್ತಿತ್ತು. ಅವರ ತಾಯಿ ಇನ್ನೂ ಸ್ವಲ್ಪ ಹೆಚ್ಚು ಹಣ ಕೇಳಿದಾಗ, “ಒಬ್ಬ ಬಡವನ ತಾಯಿಗೆ ಎಷ್ಟು ಹಣ ಬೇಕೋ ಅಷ್ಟನ್ನು ನಾನು ಕೊಡುತ್ತಿದ್ದೇನೆ, ನಿನಗೆ ಐಷಾರಾಮಿ ಬದುಕು ಬೇಡ” ಎಂದು ಹೇಳಿದ್ದರು. ೪. ತಾಯಿಯ ಮರಣದ ನಂತರ:ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬಕ್ಕಾಗಿ ಬಳಸದ ಕಾಮರಾಜರು, ತಾಯಿ ನಿಧನರಾದಾಗಲೂ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲಿಲ್ಲ. ಒಬ್ಬ ಸಾಮಾನ್ಯ ಮಗನಂತೆ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದರು.ಅಧಿಕಾರ ಎನ್ನುವುದು ಜನರಿಗೆ ಸೇವೆ ಸಲ್ಲಿಸಲು ಇರುವ ಸಾಧನವೇ ಹೊರತು ಕುಟುಂಬವನ್ನು ಬೆಳೆಸಲಿಕ್ಕಲ್ಲ ಎಂಬುದನ್ನು ಕಾಮರಾಜರು ಈ ಪ್ರಸಂಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು.  ಅವರು ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳು : ೧. ಶಿಕ್ಷಣ ಕ್ರಾಂತಿಕಾಮರಾಜರನ್ನು ತಮಿಳುನಾಡಿನಲ್ಲಿ ‘ಕಲ್ವಿ ತಂತೈ’ (ಶಿಕ್ಷಣದ ಪಿತಾಮಹ) ಎಂದು ಕರೆಯಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ

ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಇತರೆ, ಜೀವನ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್ “ಬೂದಿ ಮುಚ್ಚಿದ ಕೆಂಡ” ನಿಮ್ಮೊಳಗಿನ ಸುಪ್ತ ಚೈತನ್ಯದ ಅನ್ವೇಷಣೆ​”ಬೂದಿ ಮುಚ್ಚಿದ ಕೆಂಡ” ಎಂಬುದು ಕೇವಲ ಒಂದು ಗಾದೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಆಳವನ್ನು ಅಳೆಯುವ ಒಂದು ಸುಂದರ ರೂಪಕ.​ಕೆಂಡವು ಬೂದಿಯ ಅಡಿಯಲ್ಲಿ ಅಡಗಿದ್ದರೂ ತನ್ನ ಶಾಖವನ್ನು ಕಳೆದುಕೊಂಡಿರುವುದಿಲ್ಲ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಜನ್ಮಜಾತವಾದ ಒಂದು ಪ್ರತಿಭೆ ಅಥವಾ ಕೌಶಲ ಇರುತ್ತದೆ. ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿ ಅಥವಾ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪ್ರತಿಭೆಯ ಮೇಲೆ ‘ಬೂದಿ’ ಮುಚ್ಚಿರುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ಆ ಕೆಂಡವನ್ನು ಮತ್ತೆ ಪ್ರಜ್ವಲಿಸಲು ಸಾಧ್ಯ.​ವ್ಯಕ್ತಿತ್ವ ವಿಕಸನದಲ್ಲಿ ‘ಮೌನ’ಕ್ಕೆ ದೊಡ್ಡ ಸ್ಥಾನವಿದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ವ್ಯಕ್ತಿ ಅತಿ ಹೆಚ್ಚು ಪ್ರಚಾರ ಬಯಸುವುದಿಲ್ಲ.ಅವರು ಸದ್ದಿಲ್ಲದೆ ತಮ್ಮ ಗುರಿಯತ್ತ ಕೆಲಸ ಮಾಡುತ್ತಾರೆ.ಅತಿಯಾಗಿ ಮಾತನಾಡಿ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಆ ಶಕ್ತಿಯನ್ನು ಒಳಗಡೆ ಶೇಖರಿಸಿಟ್ಟುಕೊಂಡು ಸರಿಯಾದ ಸಮಯ ಬಂದಾಗ ತಮ್ಮ ಸಾಧನೆಯ ಮೂಲಕ ಉತ್ತರ ನೀಡುತ್ತಾರೆ.​ಪರಿಸ್ಥಿತಿಗಳೇ ಬೂದಿಯಿದ್ದಂತೆ​ಜೀವನದಲ್ಲಿ ಬರುವ ಸೋಲುಗಳು, ಅವಮಾನಗಳು ಅಥವಾ ಟೀಕೆಗಳು ನಮ್ಮ ವ್ಯಕ್ತಿತ್ವದ ಮೇಲೆ ಬೂದಿಯಂತೆ ಬಂದು ಬೀಳುತ್ತವೆ. ಆಗ ನಾವು ನಿಸ್ತೇಜರಾದಂತೆ ಕಾಣಬಹುದು.ಆದರೆ ನೆನಪಿಡಿ, ಬೂದಿ ಕೆಂಡವನ್ನು ತಾತ್ಕಾಲಿಕವಾಗಿ ಮುಚ್ಚಬಹುದೇ ಹೊರತು ಆರಿಸಲು ಸಾಧ್ಯವಿಲ್ಲ. ಒಳಗೆ ಹಂಬಲದ ಕಿಚ್ಚು ಜೀವಂತವಾಗಿದ್ದರೆ,ಎಂತಹ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಮತ್ತೆ ಪುಟಿದೇಳಬಹುದು.​ಕೆಂಡ ಹೊರಬರಬೇಕಾದರೆ ಗಾಳಿಯ ಅವಶ್ಯಕತೆ ಇದೆ.ವ್ಯಕ್ತಿತ್ವ ವಿಕಸನದಲ್ಲಿ ಆ ಗಾಳಿಯೇ ‘ನಿರಂತರ ಪ್ರಯತ್ನ’.​ನಿಮ್ಮ ಒಳಗೆ ಸಾಧನೆಯ ಕಿಚ್ಚಿದೆ. ಸಂದರ್ಭಗಳು ಅದನ್ನು ಮುಚ್ಚಿರಬಹುದು.ಆದರೆ ನಿಮ್ಮ ಪ್ರತಿಭೆಯನ್ನು ನೀವು ನಂಬಿ,ಶ್ರಮದ ಗಾಳಿಯನ್ನು ಬೀಸಿದರೆ ಖಂಡಿತವಾಗಿಯೂ ನೀವು ಜಗತ್ತು ಬೆರಗಾಗುವಂತೆ ಪ್ರಕಾಶಿಸುತ್ತೀರಿ. ನಿಮ್ಮ ಅಸ್ತಿತ್ವ ಬೂದಿಯಂತಿರಲಿ, ಆದರೆ ನಿಮ್ಮ ವ್ಯಕ್ತಿತ್ವ ಕೆಂಡದಂತೆ ಪ್ರಖರವಾಗಿರಲಿಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ,ಉಡುಪಿ ಜಿಲ್ಲೆ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದುಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅನುವಾದ

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

ಅನುವಾದ ಸಂಗಾತಿ “ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು, ಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಲ್ಲಿ ನಗುವುದೇ ನಿಷಿದ್ಧ,ನನಗೆ ನಗುವುದು ಗೊತ್ತು.ಇಲ್ಲಿ ಶಬ್ದವೇ ನಿಷಿದ್ಧ,ನನಗೆ ಮಾತಾಡುವುದು ಗೊತ್ತು.ಇಲ್ಲಿ ಪ್ರಶ್ನೆಗಳೇ ನಿಷಿದ್ಧ,ನನಗೆ ಕಾರಣಗಳನ್ನು ಹುಡುಕುವುದು ಗೊತ್ತು.ನಾನು ಮೇಣದ ದೀಪ.ಸುಡುತ್ತಾ ಕರಗಿಹೋಗುವುದು ಗೊತ್ತು;ಬೆಳಗಾಗುವವರೆಗೂ ಹೊಳೆಯುವುದೂ ಗೊತ್ತು.ಕಣ್ಣೀರು ವಿಚಿತ್ರವಾದ ಇತಿಹಾಸ ಹೊಂದಿವೆ.ಕೋಪದಂತೆ ಉರಿಯಾಗಿ ಬರುತ್ತವೆ,ಶಾಂತಿಯಂತೆ ತಂಪಾಗಿ ಇಳಿಯುತ್ತವೆ.ಸೋತಾಗ ಉಕ್ಕಿ ಹರಿಯುತ್ತವೆ,ಗೆದ್ದಾಗಲೂ ಮಿನುಗುತ್ತವೆ.ವೀರರು ಇದನ್ನೇ ಧೈರ್ಯ ಎನ್ನುತ್ತಾರೆ,ಕವಿಗಳು ಇದನ್ನೇ ಅಲುಗದ, ಬೆದರದ ಬದುಕು ಎನ್ನುತ್ತಾರೆ! ತೆಲುಗು ಮೂಲ: ಆಶಾರಾಜುಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್ Read Post »

You cannot copy content of this page

Scroll to Top