ಕಾವ್ಯಯಾನ

ಕಾವ್ಯಯಾನ

ಬದುಕೆಂಬ ವಂಚಕ! ಸೌಜನ್ಯ ದತ್ತರಾಜ ಪರಿಚಿತರಾಗುತ್ತಾ ಆಗುತ್ತಾ ಪರಕೀಯತೆಯ ಭಾವವೇ ಹೆಚ್ಚಾಗಿ ಆಗೀಗ ಪೆಚ್ಚಾಗಿ ಕಾಡುತಿದೆ ಹತ್ತಿರವಾದಷ್ಟೂ ಒಬ್ಬರನೊಬ್ಬರು ದೂರುತ್ತಲೇ ದೂರವಾಗುತ್ತಿರುವ ವಿಪರ್ಯಾಸ ವಿಚಲಿತರನ್ನಾಗಿಸುತಿದೆ ಏಕೆ…. ಏನಾಯ್ತು……ಹೇಗಾಯ್ತು ಪ್ರಶ್ನಿಸಿಕೊಳ್ಳಲೇ ಭಯವಾಗುತ್ತಿದೆ ಅನುಮಾನದ ಹೆಡೆಯೊಂದು ಸದ್ದಿಲ್ಲದೆ ಆಗಾಗ ತಲೆಯೆತ್ತುತಿದೆ ಆಡಬಾರದ ಹೇಳಬಾರದ ಮಾತುಗಳನೆಲ್ಲಾ ಆಡುವ ಬಾಯಿ ಇತ್ತೀಚೆಗೆ ಇಬ್ಬದಿಯಲೂ ಬಿಗಿಯುವ ಇಕ್ಕಳದಂತಾಗಿದೆ ಇರಿಯುತ್ತಲಿದೆ ಮನದಲೊಂದು ಮುಗಿಯದ ಭಾವ ಹೊಂದಾಣಿಕೆ ಆಗದ ಸ್ವಭಾವ ಒಗ್ಗಿಕೊಳ್ಳಲಾರದೆ ಒದ್ದಾಡುತಿರುವ ಜೀವ ಪ್ರೀತಿ ಸ್ನೇಹಗಳ ಹೆಸರಲ್ಲಿ ಪ್ರತಿದಿನವೂ ನಡೆಯುತಿವೆ ಹೊಸ ಹೊಸ ನಾಟಕ ಗೆಲ್ಲುವುದು […]

ಕಾವ್ಯಯಾನ

ನಮ್ಮಳಗೊಬ್ಬ ಸಂತೆಬೆನ್ನೂರು ಫೈಜ್ನಟ್ರಾಜ್ ಮನಸಲ್ಲಿ ಕೋಟಿ ಕೋಟಿ ಯುದ್ಧ  ಸಾಮಗ್ರಿಗಳನ್ನು ಹೊತ್ತು ಕಡಲ ದಡದಿ ನೆಮ್ಮದಿ ಹುಡುಕ್ತಿದ್ದ! * ಎದುರಿಗೇ ಎಲ್ಲಾ ಐತೆ ಏನೋ ಮಿಸ್ಸಾಗಿದೆ ಅಂತ ಎದ್ದು ನಡೆದ ಇದ್ದುದನ್ನ ಬಿಟ್ಟು! * ಕಣ್ಣೆದುರು ಇದ್ರೆ ಕಣ್ ಕೆಂಪು..ಉರಿ ಉರಿ ಮರೆಯಾದ್ರೆ ಕಳ್ಕಂಡೋರ ತರ ಅಂಡ್ ಸುಟ್ ಬೆಕ್ಕು! * ಹಾಡ್ತಾನೆ,ಕುಣಿತಾನೆ,ನಗ್ತಾನೆ,ಅಳ್ತನೆ ಎಲ್ಲಾ ಸರಿ ಮತ್ ಎದುರಿರೋ ಬಳಿ ಏನೈತ್ರಿ ಈ ಬಾಳ್ನಾಗೆ….ರಾಗ * ನಾಯಿ ಬಾಲ ನೇರ ಮಾಡಬಹುದಂತೆ ಹೆಂಗೋ ನಮ್ಮೊಳಗಿದ್ದಾನಲ್ಲಾ ಅವನ್ನ ಊಹ್ಞುಂ….ಗುಂಡ್ಕಲ್ಲದು!!

ಶಾನಿಯ ಡೆಸ್ಕಿನಿಂದ…….

ನನ್ನ ಬಾಲ್ಯದ ದೀಪಾವಳಿ ಚಂದ್ರಾವತಿ ಬಡ್ಡಡ್ಕ ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.) ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ […]

ಭಾಷೆ

ಕನ್ನಡದ ಕಲಿಸುವಿಕೆಯ ಒಂದು ಅನುಭವ ದಾಕ್ಷಾಯಣಿ ನಾಗರಾಜ್            ಭಾಷೆಯೂ ಮಾನವನಿಗೆ ಒದಗಿಬಂದ ಅತ್ಯಾದ್ಭುತವಾದ ಶಕ್ತಿಯಾಗಿದೆ.ಅದನ್ನು ಬಳಸಿ ರೂಢಿಸಿಕೊಂಡು ಸಿದ್ದಿಸಿದರೆ ಅದು ಮಾಂತ್ರಿಕ ಶಕ್ತಿಯಾಗಿ ಪರಿವರ್ತಿನೆಯಾಗಿ ಅವನಿಗೆ ಜೀವಂತಿಕೆಯನ್ನು ತಂದುಕೊಡುತ್ತದೆ. ಭಾಷಾ ಕಲಿಕೆಯನ್ನು ಕಲಿಸುವ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ.          ಮಗುವಿನ ಸರ್ವತೋಮುಖ ಬೆಳೆವಣಿಗೆಯಲ್ಲಿ ಮಾತೃಭಾಷೆಯ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಬೇಕು.            ಮಗು,ಮನೆ ,ಪರಿಸರ ,ಕೌಟುಂಬಿಕ ಸದಸ್ಯರು, ಸಹಪಾಠಿಗಳು ಸಮಾಜದ ಇತರರೊಂದಿಗೆ ಎಳವೆಯಿಂದಲೇ ಹಲವಾರು ಭಾಷಿಕ ಸಾಮರ್ಥಗಳನ್ನು […]

ಪಸ್ತಕ ಲೋಕ

ಕೃತಿ: ಹಾಣಾದಿ(ಕಾದಂಬರಿ ಲೇಖಕರು: ಕಪಿಲ ಪಿ.ಹುಮನಾಬಾದ್ ದೀಪಾಜಿ “ಹಾಣಾದಿ‌‌‌‌” ಕಾದಂಬರಿ ಒಬ್ಬ ಅದ್ಭುತ ಕಲಾಕಾರನ ಕೈಚಳಕದ ಪ್ರತೀಕದಂತಿದೆ. ಹಾಣಾದಿಯ ಹಾದಿಯಲ್ಲಿ ನಡೆಯುವ ಪ್ರತಿ ಸಂಗತಿಯು ಇಲ್ಲೆ ಓದುಗನೆದುರಲ್ಲೆ ಜರುಗುತ್ತಿರುವಂತೆ ಗೋಚರಿಸುತ್ತವೆ. ಅದಕ್ಕೆ ಕಾರಣ ಕಥೆಗಾರನ ತೂಕದ ಶಬ್ಧಗಳು ಹಾಗೂ ಆ ಶಬ್ದಗಳನ್ನು ಹಂದರದಂತೆ ಅಚ್ಚುಕಟ್ಟಾಗಿ ಹೊಂದಿಸಿದ ಕಲ್ಪಾನಾ ಶಕ್ತಿ. ಜೊತೆಗೆ ಉತ್ತರ ಕರ್ನಾಟಕದ ಕಿರೀಟ‌ ಬೀದರದ ಮೆದು ಹೃದಯದ ಗಂಡು ಭಾಷೆ.     ಕಥೆ ಓದುತ್ತ ಹೋದಂತೆ ಉಪಮೇಯಗಳು ಎದುರಾಗುತ್ತವೆ . “ಚಂದ್ರನಿಗೆ ಒದ್ದು ಸೂರ್ಯ ಹುಟ್ಟಲೇಬಾರದು […]

ಕಾವ್ಯಯಾನ

ನೆನಪುಗಳ ಪಾಲೀಶ್ ಪಾಲಿಸಿ ಬಸವರಾಜ ಕಾಸೆ ಮರೆಯದ ನೆನಪುಗಳತೊಳೆಯುವೆ ಕೊಳೆಯಲು ಕಣ್ಣೀರಲ್ಲಿಅಚ್ಚಳಿಯದೆ ಸ್ವಚ್ಛ ಪಾಲಿಶ್ ಆಗಿಫಳಪಳವೆಂದು ಬೆನ್ನೆತ್ತವುದು ಕ್ಷಣದಲ್ಲಿ ಕಳಿಸಿ ಕೊಡಲು ಕಲಿಸಿದೆಕೇಳಿ ನಗುವಿನ ಆಮಂತ್ರಣಸಪ್ಪೆಯಾದರೂ ನಟಿಸಿದೆನಿರಾಳವಾಗಲು ನಿನ್ನ ಮೈಮನ ಹೇಳಿ ಹೋಗದ್ದಿದರೆಚೆಂದವಿತ್ತು ಏನೋ ಕಾರಣತಿಳಿ ಹೇಳಿ ರಮಿಸಿದ ಪರಿಬಿಗಿಗೊಳಿಸಿತು ಭಾವ ಬಂಧನ ಬಿಟ್ಟು ಕೊಡದ ಪ್ರೀತಿಪಡೆಯಲಾಗದ ಬದುಕುಧಿಕ್ಕಾರ ಕಿರುಚಲು ನನ್ನೊಳಗೆನನಗೆ ನಿರಂತರ ಕುಟುಕು ಇಡಿ ಸಾಗರದ ಉಪ್ಪುತೆವಳಿಯೇ ಹಿಂದಿಕ್ಕುತ್ತೆ ನೋವಿನಾಳದಲ್ಲಿತಡೆತಡೆದು ಬಿಕ್ಕಿ ಜಾರುವಹನಿ ಹನಿ ನೀರಲ್ಲಿ ಬಿಟ್ಟು ಹೋಗುವ ಮುನ್ನಪ್ರೇಮದ ನಿನಾದಗರಿಗೆದರಿ ತಬ್ಬಿ ಅಲವತ್ತಿತುನೆನೆದು ತವಕಿಸಿ […]

ಕಾವ್ಯಯಾನ

ಸೊಡರು ಚಂದ್ರಪ್ರಭ .ಬಿ. ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ ಅದ್ದಿ ಬಂದವಳೆ…ಸಖಿ ಅನುಪಮ..ಅಪಾರ ನಿನ್ನ ಮಮತೆ..ಹೃದಯವಂತಿಕೆ..! ಹಲವು ಮೈಲುಗಲ್ಲುಗಳಿಗೆ ಸಾಕ್ಷಿ ನಿನ್ನ ನಿರ್ಗಮನ ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ ಏನೆಲ್ಲಕೆ ತೆರೆದುಕೊಳುವಾಸೆಗೆ ಬಲಿತ ರೆಕ್ಕೆ ನೀ ಹೊತ್ತು ತರುತ್ತಿದ್ದ ವೇದನೆ ಈಗ ಕಾಡುತ್ತಿದೆ ಮಧುರ ನೆನಪಾಗಿ! ಅಜ್ಜಿ ಅವ್ವನ ಕಾಲದಲಿ ಅರವತ್ತರ ವರೆಗೂ ಜತೆಯಾದವಳು ನೀ ಅವರ ಹಿಂದೆ ಹಿಂದೆ ನಾ… ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ? ಮೂವ್ವತ್ತರ ಬಳಿಕ […]

ಬಾಲ್ಯದ ದೀಪಾವಳಿ

ಅಪ್ಪ ಸಿಡಿಸಿದ ಪಟಾಕಿ ಸಿಂಧು ಭಾರ್ಗವ್. ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಪುಟಾಣಿಗಳಿಗೆ ಹೊಸ ಝಯಿತಾರಿ ಅಂಗಿ ಕೊಡಿಸುವರು. ಬೊಗಸೆ ತುಂಬಾ ಸಿಹಿಯನ್ನು ನೀಡುವರು. ಯಾರ ಮನೆಗೆ ಹೋದರೂ ಸಿಹಿತಿಂಡಿ ನೀಡಿ ಆ ಪುಟ್ಟ ಮಕ್ಕಳ ಖುಷಿಯನ್ನು ತಾವೂ ಅನುಭವಿಸುವರು. ಅದಲ್ಲದೇ ಇದಕ್ಕಿಂತ ಹೆಚ್ಚೆಂದರೆ ಅಪ್ಪ ಪಟಾಕಿ ತರುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಟ್ಟಡಗಳ ಹಾವಳಿಯೇ ವಿನಃ, ಮಕ್ಕಳಿಗೆ ಆಡಲು ಅನುಕೂಲವಾಗುವಂತಹ ವಾತಾವರಣ ಕಡಿಮೆ. ಆದರೂ ಈ ದೀಪಾವಳಿ ಹಬ್ಬ […]

ಸಂಪಾದಕರ ಮಾತು

ಕು.ಸ.ಮಧುಸೂದನರಂಗೇನಹಳ್ಳಿ           ಮೊದಲಿಗೆ ನಿಮಗೆಲ್ಲ ಬೆಳಕಿನಹಬ್ಬದ ಶುಭಾಶಯಗಳು.  ಅನಗತ್ಯ  ಖರ್ಚು ಮತ್ತು ಅಪಾಯವನ್ನು ಮೈಮೇಲೇಳೆದುಕೊಳ್ಳದೆ, ಸರಳವಾಗಿ,ಅನ್ಯರಿಗೆ ತೊಂದರೆ ಕೊಡದ ರೀತಿಯಲ್ಲಿ ಹಬ್ಬ ಆಚರಿಸಿ. ಹಬ್ಬದಂದು ಹಚ್ಚುವ ದೀಪದ ಬೆಳಕು ಮನದೊಳಗಿನ ಕತ್ತಲೆಯನ್ನೂ ಕಳೆಯುವಂತಿರ ಬೇಕು.ಆಗಲೇ ಹಬ್ಬಕ್ಕೆ ಸಾರ್ಥಕತೆ ಬರುವುದು    ಇನ್ನು ‘ಸಂಗಾತಿ’ಬಗ್ಗೆ ಏನು ಹೇಳಲಿ?ನಗರದ ಸಾಹಿತ್ಯಕ್ಷೇತ್ರದ ಕಣ್ಣು ಕುಕ್ಕುವ ಬೆಳಕಿನಿಂದ ಬಹುದೂರದಲ್ಲಿರುವ ಹಳ್ಳಿಯೊಂದರಿಂದ ಹೊರಬರುತ್ತಿರುವ  ಪತ್ರಿಕೆಗೆ ನೀವು ತೋರಿಸುತ್ತಿರುವ ಪ್ರೀತಿ ದೊಡ್ಡದೇ ಸರಿ. ಪತ್ರಿಕೆಯ ಬಗ್ಗೆ ಹಲವರ ಮೆಚ್ಚುಗೆಯಜೊತೆಗೆ ಕೆಲವು ದೂರುಗಳೂ ಇವೆ. ಅವನ್ನೂ […]

ಸಂಪಾದಕೀಯ

ಗೆಳೆಯರೆ, ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ […]

Back To Top