ಮಾಲತಿ ಶಶಿಧರ್ ಕಾವ್ಯಗುಚ್ಛ

ಮಾಲತಿ ಶಶಿಧರ್ ಕಾವ್ಯಗುಚ್ಛ

ಮಾಲತಿ ಶಶಿಧರ್ ಕಾವ್ಯಗುಚ್ಛ ಥೇಟ್ ನೀನು ಥೇಟ್ನನ್ನ ಕವಿತೆಯಂತೆಗೆಳೆಯ.ಒಮ್ಮೊಮ್ಮೆನಾನೆ ಬರೆದಿದ್ದರೂನನಗೇ ಅರ್ಥವಾಗದಹಾಗೆ.. ನೀನು ಥೇಟ್ನನ್ನ ನಗುವಿನಂತೆಗೆಳೆಯಕಿವಿಗಳೊರೆಗೂತುಟಿಯಗಲಿಸಿದರುನಕ್ಕಂತೆ ಕಾಣದಹಾಗೆ.. ನೀನು ಥೇಟ್ನನ್ನ ಮುಂಗುರುಳಂತೆಗೆಳೆಯಕಂಗಳಿಗೆ ಬಿದ್ದಾಗಲೆಲ್ಲಾಕಣ್ಣೀರು ಬರಿಸುವಹಾಗೆ.. ನೀನು ಥೇಟ್ನನ್ನ ಮೂಗು ನತ್ತಿನಂತೆಗೆಳೆಯಮುಂದೆಯೇಎಷ್ಟೇ ಅತ್ತರುಕೈಚಾಚಿ ಕಣ್ಣೀರುಮಾತ್ರ ಒರೆಸದಹಾಗೆ.. ಅಳಲು ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು.. ಮೋಡದಲ್ಲಿ ಮರೆಯಾಗಿರುವ ಹನಿಯೇಹೊಡೆದು ಜೇನ ಮಳೆ ಸುರಿಸಿಬಿಡು.. ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು… ಅಡವಿಯಲಿ ಅಡಗಿರುವ ಕಾಡ್ಗಿಚ್ಛೇಬಂದು ಚಿಂತೆಗಳ ಸುಟ್ಟುಬಿಡು… ನೀರಿನಲ್ಲಿ ಲೀನವಾಗಿರುವ ಸುನಾಮಿಯೇಬಂದು ನನ್ನಳಲ ನುಂಗಿಬಿಡು.. […]

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ‌ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ […]

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ

ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ […]

ಪುಸ್ತಕ ಸಂಗಾತಿ

ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ […]

ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್  ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ […]

ಕೊಂಕಣಿ ಕವಿಗಳ ಪರಿಚಯ

ಕೊಂಕಣಿ ಕವಿಗಳ ಪರಿಚಯ ಪರಿಚಯಿಸಿದವರು ಶ್ರೀಯುತ ಗುರುದತ್ ಬಂಟ್ವಾಳಕಾರ್.(ಗುರು ಬಾಳಿಗಾ) ಕರ್ನಾಟಕದ ಕೊಂಕಣಿ ಕವಿಗಳನ್ನು ಪರಿಚಯಿಸುವ ಒಂದು ಜವಾಬ್ದಾರಿಯನ್ನು ಸಂಗಾತಿ ಪತ್ರಿಕೆ ನನಗೆ ಕೊಟ್ಟಿದೆ. ಮೊದಲಿಗೆ ನಾನು ಪರಿಚಯಿಸಲು ಇಚ್ಛಿಸುವ ಕವಿ ಶ್ರೀಯುತ ಗುರುದತ್ ಬಂಟ್ವಾಳಕಾರ್. ಗುರು ಬಾಳಿಗಾ ಎಂಬ ಕಾವ್ಯನಾಮದಿಂದ ಬರೆಯುವ ಇವರ ಕವಿತೆಗಳು ಸರಳ ಶಬ್ದಗಳಲ್ಲಿ ಆಳವಾದ ವಿಚಾರಗಳನ್ನು ಮಂಡಿಸುವುದರಲ್ಲಿ ಯಶಸ್ವಿಯಾಗುತ್ತವೆ. ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿರುವ “ವಿಶ್ವ ಕೊಂಕಣಿ ಕೇಂದ್ರ” ದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುದತ್ ಬಂಟ್ವಾಳಕಾರ್ ಅವರು ಅಲ್ಲಿನ ಕೊಂಕಣಿ ಭಾಷಾ […]

ಕ್ಷಮಯಾ ಧರಿತ್ರೀ …

ಕ್ಷಮಯಾ ಧರಿತ್ರೀ … ಲಕ್ಷ್ಮಿ ನಾರಾಯಣ ಭಟ್ ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ […]

ಪುಸ್ತಕ ಪರಿಚಯಗಳು

ನಮ್ಮೂರ ಮಣ್ಣಿನಲಿ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಶಾಂತೇಶ ಪ್ರಕಾಶನ, ಧಾರವಾಡ ಪುಟ : ೧೦೨ ಬೆಲೆ : ₹ ೮೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB000400 “ಕೊರೊನಾ ಜೊತೆಗೆ ಶಾಲಾಬದುಕು” ಲೇಖಕರು: ಡಾ.ಪ್ರಸನ್ನ ಹೆಗಡೆ ಮೈಸೂರುಪುಟಗಳು 176ಬೆಲೆ 150/ಪ್ರಕಾಶಕರ ಹೆಸರು: […]

ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ […]

ನೀ ಒಂದು ಸಾರಿ ನನ್ನ ಮನ್ನಿಸು

ನೀ ಒಂದು ಸಾರಿ ನನ್ನ ಮನ್ನಿಸು ಜಯಶ್ರೀ ಜೆ.ಅಬ್ಬಿಗೇರಿ ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು […]

Back To Top