ಬೆಳಕು

ಬೆಳಕು

ಕವಿತೆ ಬೆಳಕು ಬಸವರಾಜ ಕಾಸೆ ಕತ್ತಲು ಎಲ್ಲೆಲ್ಲಿ ಇದೀಯೋಅಲ್ಲಿ ಎಲ್ಲಾ ಒಮ್ಮೆಯಾದರೂತೂಗಿ ಬಿಡಬೇಕು ಆಕಾಶಬುಟ್ಟಿಮಮತೆಯ ತೊಟ್ಟಿಲಂತೆ* ನಾ ಬೆಳಕು ಬಯಸಿದೆಕತ್ತಲೆಯಲ್ಲಿ ನಿಂತುಒಂದು ಹಣತೆ ಹಿಡಿದುಆದರೆ ಆ ಕತ್ತಲೆತಾನೇ ಬೆಳಗಾಗ ಬಯಸಿತ್ತು* ಮನೆಯೊಳಗಿನ ಮನಗಳ ದೀಪಹಪಾಹಪಿಸುತ್ತಿತ್ತುಹೊರಗೂ ಬೆಳಕಾಗಲುಅದಕ್ಕಾಗಿಯೇ ಹಚ್ಚಿದರುಹೆಚ್ಚು ಸಾಲುಗಳ ದೀಪ* ನಾವು ಹಚ್ಚಿದೆವೆಂದು ಹತ್ತು ದೀಪಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ ಆದರೆ ಬೆಳಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆಸದ್ದಿಲ್ಲದೆ ಪ್ರಸಾರವಾಗಿಪರಸ್ಪರ ವಿನಿಮಯವಾಗುತ್ತಿತ್ತು* ಅತ್ತಿತ್ತ ಓಲಾಡಿ ಕುಲುಕುವ ದೀಪಕ್ಷಣ ಕ್ಷಣ ಚಂಚಲವಾಗಿಮತ್ತೆ ಧೃಡವಾಗುವಈ ಮನಸ್ಸಿನ ವಯ್ಯಾರದಷ್ಟೆ ಸಹಜ* ಕತ್ತಲೆಗೆ ತೋರಿಸಬೇಕು ಅಲ್ವಾಬೆಳಕು […]

ವಾರದ ಕವಿತೆ

ವಾರದ ಕವಿತೆ ಆಟ ದೀಪ್ತಿ ಭದ್ರಾವತಿ ಸಾವಿನ ಆಟವಾಡುವಾಗನಿಶ್ಯಬ್ಧ ನಿಶ್ಯಬ್ಧ ಮತ್ತು ನಿಶ್ಯಬ್ಧತೂಕದ ತೋಳುಗಳಹವಣಿಕೆಗೆ ನಿಲುಕದ್ದುಯಾವುದಿದೆ ಇಲ್ಲಿ? ಮರೆ ಮರೆವ ಆಟಬಿಟ್ಟು ಹೋಗುವ ಆಟಸುತ್ತೆಲ್ಲ ಸಮಚಿತ್ತದಲಿಕೂತ ಕೊಕ್ಕೆಗಳನೂರು ಚಿತ್ತಾರಕೆಇಹಪರದ ತರತಮವೆಲ್ಲಿ? ಜೊತೆಗಿದ್ದವರು ಕೈ ಬೀಸುವಬೆನ್ನು ಬಿದ್ದವರುಹೆಗಲು ನೀಡುವ ಸಾಕಾರ ಕ್ರಿಯೆಗಿಲ್ಲಿಸಾವಿರದ ಸಾಸಿವೆ ದೀಕ್ಷೆಬಿಟ್ಟು ಬಿಡುವ ರೆಕ್ಕೆಗಳಪೇರಿಸಿಟ್ಟುಕೊಳ್ಳುವ ಸಾಹಸಕ್ಕೆತುದಿ ಮೊದಲೇ ಭಾವ ಭಂಗಿ? ಆದಿ ಅನಾದಿಗಳ ಲಕ್ಷ ಪ್ರಶ್ನೆಗೆಉತ್ತರ ಹುಡುಹುಡುಕಿ ಸೋತವರಪಟ್ಟಿಯೊಂದೆಜಗದ ಜಂತಿಯಲಿ ನೇತುಬೀಳುವಹೊಸ ಅಂಗಿ ******************************

ಕವಲೊಡೆದ ದಾರಿ

ರಾಬರ್ಟ್ ಪ್ರಾಸ್ಟ್ ಅವರ ಕವಿತೆಯ ಕನ್ನಡಾನುವಾದ ಗಣೇಶ್ ವಿ. ಕವಲೊಡೆದ ದಾರಿ ಪಯಣಿಸುವ ದಾರಿಯಲಿ ಕವಲೆರಡು ಒಡೆದಿತ್ತುಒಂಟಿ ಪಯಣಿಗ ನಾನು ನೋಡುತ್ತ ನಿಂತೆನಾನೆರಡು ದಾರಿಯ ಚಲಿಸುವಂತಿರಲಿಲ್ಲತುದಿಕಾಣದಾ ಆ ಪಥವು ಓಡುತ್ತಲಿತ್ತುಅನತಿ ದೂರದವರೆಗೆ ಅದು ಮಿಂಚುತ್ತಲಿತ್ತು ಮತ್ತೊಂದು ಮಾರ್ಗವನು ತುಳಿಯುತ್ತ ನಾ ಹೊರಟೆಬದುಕಿನೊಳಗೊಂದು ಹೊಸತನವ ಕಾಣಲುತುಸು ತುಳಿದ ಪಥವೆಂದೆಣಿಸುತ್ತ ನಾ ಚಲಿಸಿದರೆನಡೆಯುತ್ತ ನಡೆಯುತ್ತ ಸತ್ಯವೊಂದನು ಅರಿತೆಎಲ್ಲಾ ಪಯಣದೊಳಗಿರುವ ತಿರುಳೊಂದೇ ಎಂದು. ಅಂದು ಬೆಳಗಿನ ಝಾಮ ಕವಲೊಡೆದ ಹಾದಿಯಲಿಮೊದಲನೆಯ ಮಾರ್ಗವನು ಮತ್ತೊಂದು ದಿನಕುಳಿಸಿಎರಡನೆಯ ಮಾರ್ಗವನು ತುಳಿಯುತ್ತ ನಾ ಬಂದೆಹಾದಿಗೆ ಹಾದಿ […]

ಮೌನ

ಕವಿತೆ ಮೌನ ತಿಲಕ ನಾಗರಾಜ್ ಹಿರಿಯಡಕ ನಾನು ಸುಮ್ಮನಿದ್ದೆನೀನೂ ಸುಮ್ಮನಾದೆ ನಿನ್ನೆದೆಯ ಭಾವಾಂತರಂಗದತುಡಿತಗಳ ಅರಿವತವಕ ನನ್ನೊಳಗಿತ್ತು… ದಿನ ಕಳೆಯುತ್ತಲೇ ಹೋಯಿತುಜಡಿದ ಮೌನದ ಬೀಗಬಿಚ್ಚದೆ ಅಲ್ಲೇ ತುಕ್ಕುಹಿಡಿದಿತ್ತು.. ಜತೆಗೆ ಹಿಡಿದ ಹಠವೂಕರಗದೆ ಹೆಪ್ಪುಗಟ್ಟಿತ್ತು..ನೀ ಸೋಲುವೆಯೋ?ಇಲ್ಲ ನಾನೋ?ಇಲ್ಲ ಯಾರಿಗೂ ಸೋಲುವ ಮನಸ್ಸಿಲ್ಲದೆ ಬದುಕುಕವಲು ದಾರಿಯಲ್ಲಿ ಸಾಗಿತ್ತುನೀ ಎಲ್ಲೋ… ನಾ ಇನ್ನೆಲ್ಲೋ.. *************************

ಇನ್ನೆಷ್ಟು ತ್ಯಾಗ ಮಾಡಬೇಕು.

ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************

ಹನಿಗಳು

ಹನಿಗಳು ಭಾರತಿ ರವೀಂದ್ರ ಕೆಂಪಿನ ಮುತ್ತು ಬೆಳಗಿನಿಂದ ಕೆಂಪಾದಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇಖುಷಿ, ಬಿಡಿಸಿ ಹೇಳಲಿಹೇಗೆ? ಆ ಕೆಂಪಿಗೆಕಾರಣ ನಾನಲ್ಲಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ ನೆನಪು ನಸು ನಾಚುತ ನಲ್ಲೆಕೇಳಿದಳು. ನೆನಪಿದೆಯಾ ನಿಮಗೆನಾ ಮೊದಲ ಬಾರಿಮಾಡಿದ ಹಲ್ವಾ…ಮೊಗದಿ ನಗು ಸೂಸಿಮನದಲ್ಲಿ ಅಂದು ಕೊಂಡೆ ಹೇಗೆ ಕಣೆಮರೆಯಲು ಸಾಧ್ಯಕಾಗದ ಅಂಟಿಸೋಅಂಟಿನ ಹಾಗೆ ಬಳಸಿದ್ದೆಅಂತಾ… ಮುಡಿದ ಮಲ್ಲಿಗೆ ಮದುವೆ ಮನೆಯಲ್ಲಿಮುಡಿ ತುಂಬಾ ಮಲ್ಲಿಗೆದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,ಪಾಪ ಅದೇನಾಯಿತೋ ಗದ್ದಲದಿ ಅವಸರದಿಓಡಿ ಬರೋ ಹುಡುಗನಕೈಲಿ ದಂಡೆ […]

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ

ಲೇಖನ ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ    – ಡಾ. ಎಸ್.ಬಿ. ಬಸೆಟ್ಟಿ ಬಹುಶಃ ಭಾರತಕ್ಕಿಂತ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವ ಹೊಸ ರಾಷ್ಟ್ರವೂ ಎದುರಿಸಿರಲಿಕ್ಕಿಲ್ಲ. ಬ್ರಿಟಿಷರು ಆಖ್ಯೇರಾಗಿ ಉಪಖಂಡದ ಮೇಲಿನ ಹತೋಟಿಯನ್ನು ತ್ಯಜಿಸಿದಾಗ ಅವರು ತಮ್ಮ ಬೆನ್ನಿಗೆ ಒಂದಲ್ಲ ಎರಡು ರಾಷ್ಟ್ರಗಳನ್ನು ಬಿಟ್ಟು ಹೋಗಿದ್ದರು. ಒಂದು ಹೊಸ ರಾಷ್ಟ್ರವಲ್ಲ   ಎರಡು, ಭಾರತ ಮತ್ತು ಪಾಕಿಸ್ತಾನ. ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ವದೇಶವಾಗಿ ಪಾಕಿಸ್ತಾನವನ್ನು ಸೃಷ್ಠಿಸಲಾಯಿತು. ಈ ಕೋಮುಗಲಭೆಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಪೂರ್ವ […]

ದೀಪಾವಳಿ

ಕವಿತೆ ದೀಪಾವಳಿ ವಿದ್ಯಾಶ್ರೀ ಅಡೂರ್ ಮನಗಳ ನಡುವಿನ ತಮಗಳ ಕಳೆಯಲಿಬೆಳಕಿನ ಹಬ್ಬ ದೀಪಾವಳಿನೀಗದ ಬೆಳಕು ತುಂಬುತ ಬದುಕಲಿಕಳೆಯಲಿ ಕತ್ತಲ ಅಸುರನ ಧಾಳಿ ಬಗೆಬಗೆ ಖಾದ್ಯದ ಚಪಲವ ಮನದಲಿಹುಟ್ಟಿಸುವಂತ ಖಾನಾವಳಿಸುಡುಮದ್ದಿನಲಿ ಪರಿಸರ ಕೆಡಿಸದೆಮಾಡದೆ ಇರೋಣ ಹಾವಳಿ ಹಿಂದಿನ ದಿನಗಳ ಹಬ್ಬದ ನೆನಪುಬಿಟ್ಟಿದೆ ಮನದಲಿ ಕಚಗುಳಿಹಿಂದೆಗೂ ಮುಂದೆಗೂ ಕೊಂಡಿಗಳಾಗುತಹರಡುವ ಹಬ್ಬದ ಬಳುವಳಿ. ****************************

ಶ್ರೀಗಂಧದ ಕೊರಡು

ಕಥೆ ಶ್ರೀಗಂಧದ ಕೊರಡು  ಸುಧಾ ಭಂಡಾರಿ‌ ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು […]

ಆರದಿರಲೀ ದೀಪ

ಕವಿತೆ ಆರದಿರಲೀ ದೀಪ ಶಾಂತಲಾ ಮಧು ಆರದಿರಲೀ ದೀಪಉತ್ಸಾಹದೀ ದೀಪಆರದಿರಲಿ ಕ್ಷಣಿಕ ಬದುಕಿನಸುಡುವ ಗಾಳಿಯಕನಸ ಮಾತಿನಭ್ರಮೆಯ ಬೆಂಕಿಗೆಆರದಿರಲಿ ದೀಪ ಮುಗಿಲ ಮೋಡದನಡುವೆ ಇಣುಕುವತಮವ ಕಳೆಯುವರವಿಯ ತೆರದಲಿ ಸ್ನೇಹ ಸಿಂಚನ ರಕ್ಷೆ ಇರಲಿಹರಿವ ನದಿಯ ಹರಿತವಿರಲಿಆರದಿರಲಿ ಉತ್ಸಾಹದೀ ದೀಪಆರದಿರಲಿ ಪ್ರೀತಿಉಸಿರ ಹಸಿರು ಉಳಿಯಲಿಮನಸು ಮನಸಿಗೆದೀಪವಾಗಲಿಆರದಿರಲಿ ದೀಪಉತ್ಸಾಹದೀ ದೀಪಆರದಿರಲಿ *******************

Back To Top