ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ […]

ಗಝಲ್

ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************

ಹಗಲಲಿ ಅರಳದ ವಿರಹಿಣಿ

ಕವಿತೆ ಹಗಲಲಿ ಅರಳದ ವಿರಹಿಣಿ ಅನಿತಾ ಪಿ. ಪೂಜಾರಿ ತಾಕೋಡೆ ಅಂದು…ಹಿಂದೆಂದೂ ಮೂಡದ ಒಲವೊಂದು ಅನುವಾದಾಗಅವನ ಹಿರಿತನವನು ಮರೆತುನನ್ನ ಮಗುತನವನೇ ಪೊರೆದುಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಅವನು ಕೇಳುತ್ತಿದ್ದುದೊಂದೇ ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವಮುಟ್ಟಿದರೆ ಮುನಿದು ಬಿಡುವಕಟು ಮನಸ್ಸಿನ ಸೂರ್ಯ ನಾನುಎಲೇ ಮುದ್ದು ಪಾರಿಜಾತವೇನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ ಆಗ…ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇನಾನೆಂದಿಗೂ ನಿನ್ನವಳೆನ್ನುತಿದ್ದೆ ಅವನೂ ಸುಮ್ಮನಿರುತಿರಲಿಲ್ಲನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದಸುರಭಿ ವಾರಿಣಿಯರ ಸಾಲಿನವಳುಕ್ಷೀರ ಸಮುದ್ರದೊಳವಿರ್ಭವಿಸಿದಪಂಚವೃಕ್ಷಗಳಲಿ […]

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು

ಕವಿತೆ ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು ಸುಧಾ ಹಡಿನಬಾಳ ಹೇ ದುರುಳ ವಿಕೃತ ಕಾಮಿಗಳೆನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು? ನೀವು ಪೂಜಿಸುವ ಜಗನ್ಮಾತೆ ಹೆಣ್ಣುನಿಮ್ಮ ಹೆತ್ತ ಜನ್ಮದಾತೆ ಹೆಣ್ಣುನಿಮ್ಮ ಪೊರೆವ ಭೂಮಿತಾಯಿ ಹೆಣ್ಣುನಿಮ್ಮ ಮನೆ ಬೆಳಗುವ ಮಡದಿ ಹೆಣ್ಣುಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣುಎಲ್ಲಾ ಹೆಣ್ಣು ಹೆಣ್ಣು ಹೆಣ್ಣುಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು? ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿನಿಮಗೂ ಒಬ್ಬ ಹೆಣ್ಣು ಮಗಳಿದ್ದುಅವಳ ಮೇಲೂ ಇಂತದೆ ಭಯಾನಕದೌರ್ಜನ್ಯ, ಕ್ರೌರ್ಯ ನಡೆದರೆಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ? ಎಲ್ಲಾ ಹೆಣ್ಣು ಮನೆಯ […]

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ […]

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ […]

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ […]

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ […]

Back To Top