ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮೌನ ಯೋಗಿ ಶ್ರೀ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ.  ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ. ವ್ಯಕ್ತಿತ್ವ ಮತ್ತು ಜೀವನ  ಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು. ಮೌನಯೋಗಿ: ಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ. ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣ:  ಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ. ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವ: ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶರಣರ ಬುತ್ತಿ:  ಈ ಜಾತ್ರೆಯ ಒಂದು ವಿಶಿಷ್ಟ ಸಂಪ್ರದಾಯವೆಂದರೆ, ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಭಕ್ತರಿಗಾಗಿ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ ಮತ್ತು ಕರ್ಜಿಕಾಯಿಗಳನ್ನು ತಯಾರಿಸಿ, ಬುತ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ತರುತ್ತಾರೆ. ಸಾಮಾಜಿಕ ಸೇವೆಗಳು: ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು, ನೇತ್ರ ಚಿಕಿತ್ಸಾ ಶಿಬಿರಗಳು, ರಕ್ತದಾನ ಮತ್ತು ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಮಠವು ಜನಪರ ಕಾರ್ಯಗಳನ್ನು ಮಾಡುತ್ತದೆ. ಶ್ರೀಮಠದ ಸಮಾಜ ಸೇವೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಿಕ್ಷಣ ಸಂಸ್ಥೆಗಳು, ಉಚಿತ ಪ್ರಸಾದ ನಿಲಯ (ದಾಸೋಹ) ಮತ್ತು ಸಾವಯವ ಕೃಷಿ ಹಾಗೂ ಗೋಶಾಲೆಯನ್ನು ನಡೆಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ   ನೀಡುತ್ತಿದೆ.    ಚಿಕ್ಕೇನಕೊಪ್ಪದ ಮೌನಯೋಗಿ, ಪೂಜ್ಯ ಶ್ರೀ ಚನ್ನವೀರ ಶರಣರ ವೈಯಕ್ತಿಕ ಲೌಕಿಕ ಜೀವನ ಮತ್ತು ಅವರ ತಂದೆ-ತಾಯಿಗಳ ನಿಖರವಾದ ಹೆಸರುಗಳ ಕುರಿತು ಇತಿಹಾಸದ ದಾಖಲೆಗಳಲ್ಲಾಗಲಿ ಅಥವಾ ಸಾರ್ವಜನಿಕ  ಮೂಲಗಳಲ್ಲಾಗಲಿ ಯಾವುದೇ ಸ್ಪಷ್ಟ ಮಾಹಿತಿಯು ಲಭ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅವರ ಹಿನ್ನೆಲೆಯ ಕುರಿತಾದ ಕೆಲವು ಮುಖ್ಯ ಸಂಗತಿಗಳು  ಅವಧೂತ ಹಾಗೂ ಮೌನ ಪರಂಪರೆ:  ಶ್ರೀ ಚನ್ನವೀರ ಶರಣರು ಒಬ್ಬ ಪರಮ ಅವಧೂತರಾಗಿ ಮತ್ತು ಮೌನಯೋಗಿಯಾಗಿ ಜೀವಿಸಿದರು. ಅವರು ತಮ್ಮ ಪೂರ್ವಾಶ್ರಮದ (ಸಂಸಾರದ ಅಥವಾ ಹುಟ್ಟಿನ) ವಿವರಗಳನ್ನು ಸಂಪೂರ್ಣವಾಗಿ ತೊರೆದು, ಕೇವಲ ಲೌಕಿಕ ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬೆಳಕಿಗೆ ಬಾರದ ಹಿನ್ನೆಲೆ:  ಇತಿಹಾಸದ ಪ್ರಕಾರ, ಅವರು ಬಳಗಾನೂರಿನ ಚಿಕ್ಕೇನಕೊಪ್ಪ ಮಠಕ್ಕೆ ಬಂದು ನೆಲೆಸಿದ ನಂತರವೇ ಅವರ ದಿವ್ಯ ತಪಃಶಕ್ತಿ ಮತ್ತು ಪವಾಡಗಳು ಜನಸಾಮಾನ್ಯರಿಗೆ ತಿಳಿಯತೊಡಗಿದವು. ಹೀಗಾಗಿ ಅವರ ತಂದೆ, ತಾಯಿ ಅಥವಾ ಬಾಲ್ಯದ ಲೌಕಿಕ ವಿವರಗಳು ಮರೆಯಾಗಿ, ಅವರು ಕೇವಲ “ಚಿಕ್ಕೇನಕೊಪ್ಪದ ಶರಣರು” ಎಂದೇ ಪ್ರಸಿದ್ಧರಾದರು. ಸಾಹಿತ್ಯದಲ್ಲಿ ಉಲ್ಲೇಖ:  ಪಂ. ಪುಟ್ಟರಾಜ ಗವಾಯಿಗಳು ಬರೆದಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಗ್ರಂಥದಲ್ಲಿಯೂ ಇವರ ಅಧ್ಯಾತ್ಮಿಕ ಸಾಧನೆ, ಪವಾಡಗಳು ಮತ್ತು ಸಮಾಜ  ಮುಖಿ ಸೇವೆ ಬಗ್ಗೆ ಹೇಳಿದ್ದಾರೆಯೇ ಹೊರತು ಅವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಚಿಕ್ಕೇನಕೊಪ್ಪದ ಮಹಾನ್ ತಪಸ್ವಿ ಶ್ರೀ ಚನ್ನವೀರ ಶರಣರ ನಿಖರವಾದ ಹುಟ್ಟಿದ ದಿನಾಂಕ ಮತ್ತು ವರ್ಷ ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಲಭ್ಯವಿಲ್ಲ. ಅವರು ಒಬ್ಬ ಸಿದ್ಧ ಪುರುಷರಾಗಿದ್ದು, ಸಂಸಾರ ಹಾಗೂ ಕಾಲದ ಗಡಿಯಿಂದ ದೂರವಿದ್ದ ಕಾರಣ ಅವರ ಬಾಲ್ಯ ಮತ್ತು ಜನನದ ವಿವರಗಳು ಬೆಳಕಿಗೆ ಬಂದಿಲ್ಲ.  ಅವರ ಮಹಾಸಮಾಧಿ (ಮರಣ) ಹಾಗೂ ಪುಣ್ಯಸ್ಮರಣೆಯ   1. ಮರಣ / ಲಿಂಗೈಕ್ಯರಾದ ವಿವರ ಲಿಂಗೈಕ್ಯರಾದ ತಿಂಗಳು: ಶ್ರೀ ಚನ್ನವೀರ ಶರಣರು  1995 ಜನೆವರಿ ತಿಂಗಳ ಅವಧಿಯಲ್ಲಿ ಲಿಂಗೈಕ್ಯರಾದರು (ಮಹಾಸಮಾಧಿ ಹೊಂದಿದರು).:    ಘನಮೌನಿಗಳು:  ಶರಣರನ್ನು ಇತಿಹಾಸದಲ್ಲಿ “ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರು” ಎಂದು ಕರೆಯಲಾಗುತ್ತದೆ. ಅವರು ಮೌನವ್ರತವನ್ನು ಆಚರಿಸುತ್ತಿದ್ದರಿಂದ ತಮ್ಮ ಜನ್ಮ ವೃತ್ತಾಂತವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ದೈವೀಪುರುಷ: ಭಕ್ತರ ನಂಬಿಕೆಯ ಪ್ರಕಾರ, ಅವರು ಯಾವುದೇ ಸಾಮಾನ್ಯ ಮನುಷ್ಯನಂತೆ ಹುಟ್ಟು-ಸಾವಿನ ಬಂಧನಕ್ಕೆ ಒಳಗಾಗದೆ, ಕೇವಲ ಲೋಕ ಕಲ್ಯಾಣಕ್ಕಾಗಿ ಬಂದು ಮಠದಲ್ಲಿ ನೆಲೆಸಿದ ದೈವೀ ಸ್ವರೂಪಿಯಾಗಿದ್ದರು.ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ನಡೆಯುವ ಅವರ ಪುಣ್ಯಸ್ಮರಣೆಯ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶರಣರ ಗದ್ದುಗೆಯ ದರ್ಶನ ಪಡೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಮಾಡಿದರು. ಮೌನವೇ ತಪಸ್ಸು ಮಾತು ಬೆಳ್ಳಿ ಮೌನ ಬಂಗಾರ ಎಂದು ತಿಳಿದು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಒಬ್ಬ ಶ್ರೇಷ್ಠ ಶಿವಯೋಗ ಸಾಧಕರು. ಸಾವಿಲ್ಲದ ಶರಣರು. ಬಸವ ಮಾರ್ಗದ ರೂವಾರಿಗಳು ಚಿಕ್ಕೇನಕೊಪ್ಪದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ನಿಮ್ಮೊಂದಿಗೆ

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು “ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಹಾಸನ ನಗರ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್ ಅವರು   ತಮ್ಮ ಹೊಸ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಆರ್ಥಿಕ ನೆರವಿಲ್ಲದೇ ಅವರು ಕಲಾ ಪ್ರದರ್ಶನ ಮಾಡುತ್ತಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬಂದಿದ್ದಾರೆ. ಈ ಮೊದಲು  ಹಾಸನದ ಶಾಂತಲಾ ಚಿತ್ರಕಲಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಈಗ  ಆಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಗುರುತಿಸಿ ಹಾಸನ ಜಿಲ್ಲಾಡಳಿತ  ಐದಾರು ವರ್ಷಗಳ ಹಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಸಂತ್ ಅವರು ಪ್ರತಿವರ್ಷ  ವಿಶ್ವ ಪರಿಸರ ದಿನ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಏರ್ಪಡಿಸುವುದು ಮಕ್ಕಳಿಗೆ ಸ್ಫರ್ಧೆ ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡುವುದು ರೂಢಿಸಿಕೊಂಡಿದ್ದಾರೆ. ಇದು  ಹತ್ತು ವರ್ಷಗಳಿಂದ ನಿರಂತರ ನಡೆದು ಬಂದಿದೆ.  ಈ ವರ್ಷ ಇವರ ೩೫  ಸೃಜನಾತ್ಮಕ  ಕಲಾಕೃತಿಗಳು ವೀಕ್ಷಕರ ಮನ ಸೆಳೆದವು.  ಇವರ ಪರಿಸರ ಕಾಳಜಿಯ ಪ್ರಕೃತಿ ಚಿತ್ರಗಳು ಆಕರ್ಷಣೀಯವಾಗಿವೆ. ಅರಸೀಕೆರೆ ಹುಳಿಯಾರ್ ಮಾರ್ಗದಲ್ಲಿ ಸಿಗುವ ಮರಗಳು ರಸ್ತೆಯ ಪ್ರಕೃತಿ ಚಿತ್ರವು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಅದ್ಭುತವಾಗಿ ಮರುಸೃಷ್ಟಿಗೊಂಡಿದೆ.  ಬರ್ಡ್ ಸೀರಿಸ್‌ನ ೧೫ ಪಕ್ಷಿ ಚಿತ್ರಗಳು ತೈಲವರ್ಣದಲ್ಲಿ ರೂಪು ತೆಳೆದು ಹಾರಾಡಿವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಪರಿಸರದಲ್ಲಿ ಪೋಟೋಗ್ರಫಿ ಮಾಡಿದ್ದ ರಮ್ಯ ದೃಶ್ಯಾವಳಿಗಳು, ೧೫ವರ್ಷಗಳ ಹಿಂದೆ ಪ್ರವಾಸ ಮಾಡಿದ್ದ ಎರ್ನಾಕುಲಂನ ಪ್ರಕೃತಿ ದೃಶ್ಯಗಳು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್ ನಲ್ಲಿ ಮರುಸೃಷ್ಟಿಯಾಗಿ  ಜೀವಂತಿಕೆ ತಾಳಿವೆ. ಬಹುಶ: ಈಗ ಆ ಸೀನ್ಸ್ ಕಣ್ಮರೆಯಾಗಿರಬಹುದು. ಆದರೆ ವಸಂತಕುಮಾರ್ ಅವರ ಕಣ್ಣುಗಳಿಂದ ಮರೆಯಾಗಿಲ್ಲ.   ತಮ್ಮ  ಪೋಟೋಗಪ್ರಿಯಲ್ಲಿ ಸೆರೆ ಹಿಡಿದು ಈಗ ಸೃಷ್ಟಿಸಿರುವುದು ವಿಶೇಷವಾಗಿದೆ. ನಾವು ಕತೆಗಾರರು  ಬಾಲ್ಯದ ಘಟನೆಗಳನ್ನು, ಪ್ರವಾಸಿ ಅನುಭವಗಳನ್ನು ನೆನಪಿಸಿಕೊಂಡು ಬರಹದಲ್ಲಿ ಬರೆದಂತೆ ವಸಂತಕುಮಾರ್ ಚಿತ್ರ ಜೀವಂತಿಕೆ ನೀಡಿದ್ದಾರೆ. ಬಾಗೇಶಪುರದ ಲೋಕೇಶನ್, ಹಾರುತ್ತಿರುವ ಗಿಡುಗ, ನೆಗೆಯುತ್ತಿರುವ ಕುದುರೆ ಎಲ್ಲವೂ ಕ್ರಿಯಾಶೀಲತೆ ಸಾಕ್ಷೀಕರಿಸಿವೆ. ದೇಶದ ಮಾಜಿ ಪ್ರಧಾನಿಗಳ ಬಾವಚಿತ್ರವು ಚಾರ್ಕೋಲ್ ಪೆನ್ಸಿಲ್ ವರ್ಕ್ ನಲ್ಲಿ ಅವರಿಗೆ ಸಲ್ಲಿಸದ ಗೌರವವಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರಗಳನ್ನು ವೀಕ್ಷಿಸಿ ಭೇಷ್ ಎಂದಿರುವುದು ವಸಂತಕುಮಾರ್ ಅವರಿಗೆ ಖುಷಿ ನೀಡಿದೆ.   ಕಲಾವಿದರಿಗೆ ಇಂತಹ ಮೆಚ್ಚುಗೆಯ  ಮಾತೇ  ಸ್ಫೂರ್ತಿ ತಾನೇ..!   -ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧,

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು Read Post »

ನಿಮ್ಮೊಂದಿಗೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ

ಪುಸ್ತಕ ಸಂಗಾತಿ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರುರವರು ಸನ್ 2025ನೇ ಸಾಲಿನ ಪುಸ್ತಕ ಸೊಗಸು ಮುದ್ರಣ ಸೊಗಸು ಯೋಜನೆ ಅಡಿಯಲ್ಲಿ ಪುಸ್ತಕ ಗಳನ್ನು ಆಯ್ಕೆ ಮಾಡಲಾಗಿದ್ದು. ಹಿರಿಯ ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನದ ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.               ನಿರಂತರ ಪ್ರಕಾಶನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿ ಗಳನ್ನು ನೀಡಿದ ಮಕಾನದಾರ ಅವರ ಅಕ್ಕಡಿ ಸಾಲು ಮತ್ತು ಪ್ಯಾರಿ ಪದ್ಯ ಸಂಕಲನಗಳ ಕವಿತೆಗಳು  ಆರು ಭಾಷೆಗಳಿಗೆ ತರ್ಜುಮೆಗೊಂಡಿದ್ದು. ಕುವೆಂಪು ವಿಶ್ವ ವಿದ್ಯಾಲಯ, ವಿಜಯ ನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ ಹಾಗೂ ಪುಣ್ಯ ಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯಗಳಿಗೆ ಗಜಲ್ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಗೊಂಡಿವೆ.           ಬೀದರ್ ಜಿಲ್ಲೆ ಬೇಲೂರ್ ಉರಿಲಿಂಗ ಪೆದ್ದಿ ಸಂಸ್ಕೃತಿ ಕ ವೇದಿಕೆ ಯ ರಾಜ್ಯಮಟ್ಟದ ಅತ್ಯುತ್ತಮ ಪ್ರಕಾಶನ ಪುರಸ್ಕಾರ ನಿರಂತರ ಪ್ರಕಾಶನಕ್ಕೆ ಲಭಿಸಿದ್ದನ್ನಿಲ್ಲಿ ಸ್ಮರಿಸ ಬಹುದು ದರ್ವೇಶಿ ಪದ್ಯ ಒಡಲ ಸಂಕಟದ ಆಯ್ದ ಪದಗಳ ಕಟ್ಟು ಸಂಕಲನದ ಮುಖಪುಟ ಚಿತ್ರ ಕಲಾವಿದ ಈಶ್ವರ. ಬಡಿಗೇರ್ ಅವರು ರಚಿಸಿದ್ದು ನಿರಂತರ ಪ್ರಕಾಶನದಿಂದ ಪ್ರಕಟಣೆಯಾಗಿದೆ. ಸಾಹಿತಿ ಎ ಎಸ್. ಮಕಾನದಾರ ಮತ್ತು ಚಿತ್ರ ಕಲಾವಿದ ಈಶ್ವರ್ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾರಸ್ವತ ಲೋಕದ ಗೆಳೆಯರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ Read Post »

ನಿಮ್ಮೊಂದಿಗೆ

ಸವಿತಾ ಇನಾಮದಾರ್ “ಯೋಗ”

ಕಾವ್ಯ ಸಂಗಾತಿ ಸವಿತಾ ಇನಾಮದಾರ್ “ಯೋಗ” 12ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ- 2026 ಯೋಗಮಯ ಜೀವನಆನಂದಮಯ ತನುಮನ…ಆರೋಗ್ಯಮಯ ತನುಮನ … ಸೂರ್ಯ ನಮಸ್ಕಾರದಿ ದಿನದಾರಂಭದೇಹದಲ್ಲಿ ಚೈತನ್ಯಾರಂಭ  ಸೂರ್ಯ ಕಿರಣದಂತೆ ಶಕ್ತಿ ಹರಿಯುವುದುಎಲ್ಲಾ ಅಂಗಗಳು ಚುರುಕಾಗುವುದು. ಜೀರ್ಣಕ್ರಿಯೆ ಸುಲಭವಾಗುವುದುಬೊಜ್ಜು ಕರಗಿ ದೇಹ ಹಗುರವಾಗುವುದುರೋಗನಿರೋಧಕ ಶಕ್ತಿ ಹೆಚ್ಚುವುದುತ್ವಚೆಯೂ ಫಳಫಳನೆ ಹೊಳೆಯುವುದು… ಬಾಲ್ಯದ ಸ್ಮರಣೆ ಬಾಲಾಸನದಿ,ಸ್ಥಿರತೆ ಬೆಳೆಯುವುದು ವೃಕ್ಷಾಸನದಿ,ವಿಶ್ರಾಂತಿ ಸಿಗುವುದು ಶವಾಸನದಿ,  ಶಾಂತಿ ನೆಲೆಸುವುದು ಧ್ಯಾನಾಸನದಿ.. ನಿತ್ಯ ಯೋಗಾಭ್ಯಾಸದಿಂದಲಿ…ಶಕ್ತಿ ಹರಿಯುವುದು ಉಸಿರಿನಲ್ಲಿ…ಚೈತನ್ಯ ತುಂಬುವುದು ದೇಹದಲ್ಲಿ ..ಶಾಂತಿ ನೆಲೆಸುವುದು ಮನದಲ್ಲಿ  ..ಯೋಗಮಯ ಜೀವನ…ಆರೋಗ್ಯಮಯ ತನುಮನ.. ಸವಿತಾ ಇನಾಮದಾರ್ 

ಸವಿತಾ ಇನಾಮದಾರ್ “ಯೋಗ” Read Post »

ನಿಮ್ಮೊಂದಿಗೆ

“ಇಂದಿರಾ ಲಂಕೇಶ್ ನಿಧನ”

ವ್ಯಕ್ತಿ ಸಂಗಾತಿ ಇಂದಿರಾ ಲಂಕೇಶ್ ನಿಧನ “ಹುಳಿ ಮಾವು ಮತ್ತು ನಾನು” ಕೃತಿಯ  ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ  ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು  ನಿಧನರಾಗಿದ್ದಾರೆ.  ‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು. ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ ,  ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.  ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.  ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ,  ಸಾಹಿತ್ಯ  ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು. ನಾಗರಾಜ್‌ ಹರಪನಹಳ್ಳಿ

“ಇಂದಿರಾ ಲಂಕೇಶ್ ನಿಧನ” Read Post »

ನಿಮ್ಮೊಂದಿಗೆ

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ”

ಕಾವ್ಯ ಸಂಗಾತಿ ಅನಿತಾ ಕೃಷ್ಣಮೂರ್ತಿ “ನನ್ನ ಅಮ್ಮ” ನನ್ನೆಲ್ಲಾ ಕನಸುಗಳಿಗೆ ರೆಕ್ಕೆ ಕಟ್ಟಿ,ರಾಶಿ ರಾಶಿ ಪ್ರಯತ್ನಗಳು ಫಲಿಸಲೆಂದು ದೇವರಲ್ಲಿ ಹರಕೆ ಹೊತ್ತು,ಉಪವಾಸ–ವ್ರತ ಮಾಡಿ ನನ್ನ ಬದುಕನ್ನು ಸಾರ್ಥಕತೆಯ ದಾರಿಯತ್ತ ದೂಡಿದಳು…ಅವಳು ನನ್ನ ಅಮ್ಮ  ಅವಳ ಪ್ರಾರ್ಥನೆಗಳಲ್ಲಿ ನನ್ನ ಭವಿಷ್ಯ ಇತ್ತು,ಅವಳ ತ್ಯಾಗಗಳಲ್ಲಿ ನನ್ನ ಯಶಸ್ಸು ಇತ್ತು,ಅವಳ ನಂಬಿಕೆಯಲ್ಲಿ ನನ್ನ ಜೀವನದ ಬೆಳಕು ಇತ್ತು… ಸೋತಾಗ ಸೋಲಿಗೆ ಹೆದರಿ,ಖಿನ್ನತೆಯತ್ತ ಮುಖ ಮಾಡಿ ನರಳಲುಬಾನೆತ್ತರ ಭರವಸೆ ತುಂಬಿ,ತೂಗಾಡುವ ಮಂಚದಲ್ಲಿರಿಸಿ,ತೊಡೆಯ ಮೇಲೆ ಮಲಗಿಸಿ,ಮಮತೆಯ ಸ್ಪರ್ಶದಿಂದ ಹುರಿದುಂಬಿಸಿದಳು…ಅಮ್ಮ.  ಹೇಗೆ ತೀರಿಸಲಿ ಋಣವ,ಮತ್ತೊಮ್ಮೆ ಮಗುವಾಗಿ ಜನ್ಮವೆತ್ತಲೇ…ಅವಳಿಗೇ ತಾಯಿಯಾಗಿ ಮಡಿಲಾಗಲೇ,ಅಕ್ಕನಾಗಿ ಅಪ್ಪುಗೆಯ ಕೊಡಲೇ,ತಂಗಿಯಾಗಿ ತುಂಟಾಟವಾಡಲೇ,ಯಾವ ಬಂಧವಾಗಿ ಬಂದರೂ ಸರಿ,ಅವಳ ಪ್ರೀತಿಯ ನೆರಳಲ್ಲಿ ಮತ್ತೆ ಬದುಕಲೇ…  ಸರಿ ಸಾಟಿ ಯಾರಿಹರು ಆ ಕರುಣೆಗೆ,ದೇವರಿಗಿಂತ ಹೆಚ್ಚಾದ ಜೀವಕೆ…ನೋವನ್ನೆಲ್ಲ ನಗುವಿನಲ್ಲಿ ಮರೆಮಾಚಿ,ತನ್ನ ಕನಸುಗಳನ್ನೇ ತ್ಯಾಗಮಾಡಿ,ನಮ್ಮ ಬದುಕಿಗೆ ಬೆಳಕಾದ ಮಹಾತಾಯಿಗೆ…ಈ ಜನ್ಮ ಸಾಲದು ಕೃತಜ್ಞತೆ ಸಲ್ಲಿಸಲು…  ಅನಿತಾ ಕೃಷ್ಣಮೂರ್ತಿ      

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ” Read Post »

ನಿಮ್ಮೊಂದಿಗೆ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ”

ಕಾವ್ಯ ಸಂಗಾತಿ ನಾಗರಾಜ್‌ ಹರಪನಹಳ್ಳಿ “ಭೂಮಿಗೆ ಆಕಳಿಕೆ ಸಮಯ” ಸೀರೆ ಸೆರಗ ತಾಗಿದ ಗಾಳಿಪ್ರೇಮದ ನವಿರು ಹೊತ್ತುತಂತುಆಡಿದ  ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿಚಿತ್ರ ಬಿಡಿಸಿತುನೀನಿಡುವ ಪ್ರತಿ ಹೆಜ್ಜೆಯಲಿಕನಸು ಇಣುಕುತ್ತಿದೆ ಗೆಳತಿಮನಸುಗಳ ಅಗಣಿತ ತರಂಗಗಳುಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?*** ನಿನ್ನ ದನಿ ಕೇಳದ ಭೂಮಿಗೆಆಕಳಿಕೆ ಸಮಯಅದಕ್ಕೆ ಮಗ್ಗಲು ಬದಲಿಸುತ್ತಿದೆಮುಗಿಲಿಗೆ ದಿಗಿಲು ಬಡಿದಿದೆಎಲ್ಲಿ ಹೋದೆ ?ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ              ***                               ನಾನು ಸುಳಿದಾಡುವೆ  ಒಬ್ಬಳೇ ಇರುವೆ ಎಂದು ಭಾವಿಸಬೇಡಸುಳಿಯುವ ಗಾಳಿಯಲ್ಲಿಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿಬದಲಾಗಿ ಬಿಡಲಿಕಣ್ಣಲ್ಲಿ ನಕ್ಷತ್ರಗಳು ಹಾಡಲಿಕಾಲ್ಗೆಜ್ಜೆಗಳಲ್ಲಿ  ಏಳು ಸುತ್ತಿನ ಮಲ್ಲಿಗೆ ಅರಳಲಿ****ರುತುಗಳಿಗೆ ತಕ್ಕಂತೆಬಣ್ಣ ರೂಪ ಪಡೆಯುವ ಭೂಮಿಮನಸ್ಸಿನ ಏರಿಳಿತಕ್ಕೆ ತಕ್ಕಂತೆಬಣ್ಣಗಳ ಸೀರೆ ತೊಡುವ ಆಕೆಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆನಿಬ್ಬೆರಗಾಗುವುದು ಮಾತ್ರ ………**** ನೀನು ನಡೆದರೆಭೂಮಿ ಪಿಸುಗುಡುತ್ತದೆಮಣ್ಣ ಕಣ ಕಣವೂಜೀವಸೆಲೆಯಿಂದ ಪುಟಿದೇಳುತ್ತದೆ  ದಾರಿ ಪಕ್ಕದ ಗಿಡ ಮರಗಳುಕಣ್ಣು ಮಿಟುಕಿಸುತ್ತವೆಮುಂಗುರುಳ ಲಾಸ್ಯಕ್ಕೆಗಾಳಿ ರೋಮಾಂಚನಗೊಳ್ಳುತ್ತದೆ ನಾಗರಾಜ್ ಹರಪನಹಳ್ಳಿ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ” Read Post »

ನಿಮ್ಮೊಂದಿಗೆ

ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು”

ಕಾವ್ಯ ಸಂಗಾತಿ ಎ ಎಸ್ ಮಕಾನದಾರ ಗದಗ “ಶಾಯಿರಿಗಳು” ಶಾಯಿರಿಗಳುಧರ್ಮ ದೇವರ ಹೆಸರಿನ್ಯಾಗಹಿಡಿಬ್ಯಾಡ್ರಿ ಕೈಯಾಗ ಕಲ್ಲು ಕಲ್ಲು ಮಣ್ಣಿನ್ಯಾಗಹುಟ್ಟಿಲ್ಲ ದೇವರೆಲ್ಲೂ ***ಪ್ರೀತಿ ಅನ್ನೂ ದೇವರಮುಂದಯಾವ ದೇವರೂ ದೊಡ್ಡವಲ್ಲ ಸತ್ಯ ಅನ್ನೂ ತತ್ವದ ಮುಂದಯಾವ ಗ್ರಂಥವೂ ದೊಡ್ಡದಲ್ಲ***ಉಸಿರಾಡುವವರು ಜೀವಂತಅದಾರಂತ ಎನ್ ಗ್ಯಾರಂಟಿಸತ್ತವರಲ್ಲಿ ಕೆಲವರುಇನ್ನೂ ಜೀವಂತ ಅದಾರಲ್ಲಇದಕೆ ನೀ ಏನಂತೀ*** ಎ ಎಸ್ ಮಕಾನದಾರ ಗದಗ

ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು” Read Post »

ನಿಮ್ಮೊಂದಿಗೆ

ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಕಾಡಿನ ಕಣ್ಣೀರು” ಕಾನನಳ ಕಂಗಾಲ ಕಂಗಳ ಕಣ್ಣೀರುಕಾಣದಾದರೆ ಇಹದ ಮನುಜ ಕುಲದವರುಆಧುನಿಕ ಭರ ಭರಾಟೆಯಲಿ ನಿಂದವರು!!೧!! ಕಾಡಮ್ಮಳ ಒಡಲು ಪಶು ಪಕ್ಷಿ ಪ್ರಾಣಿವನ್ಯಜೀವಿ ಮರ ಗಿಡ ಗುಡ್ಡ-ಹಳ್ಳ ಕೊಳ್ಳಅವಳ ಬೆಚ್ಚನೆಯ ಗರ್ಭವೇ ಅವರ ತಾಣ!!೨!! ಸಕಲ ಜೀವ ರಾಶಿಗಳಿಗೆ ಉಸಿರಾಗಿಅಮೃತ ನಿಯುತ ನಿಂದಿಹಳು ಹಸಿರಾಗಿಸಕಲ ಪ್ರಾಣಿ ಪ್ರಾಣ ಸಂಜೀವಿನಿಯಾಗಿ !!೩!! ಹಚ್ಚ ಹಸಿರು ಬೆಚ್ಚನೆ ಸೌಖ್ಯದ ಹೊದಿಕೆಹೊಚ್ಚಿ ,ಕೊಡುತಿಹಳು ಪೋಷಣೆ ಪುಷ್ಟಿಕೆಸರ್ವರನು ಬೆಳೆಸಿ ತನ್ನೊಳಗೆ ಹುದುಗಿಸಿ !!೪!! ಸಾವಿರಾರು ಗಿರಿ-ಪರ್ವತಗಳ ತೊಟ್ಟಜಲ-ಹಣ್ಣು ಹಂಪಲ ಆಸರೆ ಕೊಟ್ಟುತಾಯಿಯಾಗಿ ನಿಂದವಳ ಕಟ್ಟಿಹರು ಚಟ್ಟ!!೫!! ಇಂದು ಬಾಡಿ ಒಣಗಿ ನಸಿಸುತಿಹಳುಲೆಕ್ಕವಿರದ ಪಶುಗಳ ಮರಗಿಡಗಳುಉರುಳಿತಿವೆ ನಿರ್ದಾಕ್ಷಣೆ ಮತಿಗೇಡಿತನದಿ!!೬!! ಎನಿತು ಪೇಳುಲಿ..ವೇದನೆಲಿ ಮರಗುತಿವೆಕರುಣೆ ತೋರಿ ನಿಲ್ಲಿಸಿ ನಾಶ ಕನವರಿಸುತ್ತಿವೆನದಿ ಹಳ್ಳ ಕೊಳ್ಳ ಬತ್ತುತಿವೆ ಬರಡಾಗುತಿವೆ!!೭!! ಕಾಡಿನ ಕಂಗಳಂಚಿನಲ್ಲಿ ಕಣ್ಣಿರ ಹನಿಹನಿಸುರಿಯುತ್ತಿವೆ ಬರಗಾಲದ ನೊರೆಯಾಗಿಮನುಕುಲದ ವಿನಾಶದ ಕರೆ ಓಲೆಯಾಗಿ ‌‌!!೮!! ಇನ್ನಾದರೂ ಎಚ್ಚೆತ್ತಲೇಬೇಕು- ಸಂರಕ್ಷಿಸು,ಮನವಿಟ್ಟು ಒನವ ಸೀರಿಯ ಉಳಿಸಿಬೆಳಿಸುಸ್ವಾರ್ಥ ಬಿಟ್ಟು- ಮುಂದಿನ ಪೀಳಿಗೆ ನೆನಸು!!೯!! ತಾಂತ್ರಿಕತೆ ಮುಂದುವರೆವ ವ್ಯವಹಾರದಿಅನಿವಾರ್ಯತೆ ಒಡ್ಡಿದರೂ,ಮರ ಕೆಡವಿದರೆವಿನಾಶ ನಿಶ್ಚಿತತೆ ಪರಿಜ್ಞಾನದ ಅರಿವು..!!೧೦!! ಇಲ್ಲವೇ ನಮ್ಮಲಿ..!! ಬನ್ನಿ ಕೈಗೂಡಿಸೋಣಒಂದು ಮರ ಕೆಡವಿದರೆ ಎರಡು ಮರವ ನೆಟ್ಟಿ…, ನಮ್ಮ ಕೃತಜ್ಞತೆ ಸಲ್ಲಿಸೋಣ!!೧೧!! ಅವಳ ಉಸಿರಿಗೆ ನಾವು ಉಸಿರಾಗದ ಹೊರತು ನಮ್ಮ ಉಸಿರು ಉಳಿಯದು !!೧೨!! ತಿಳಿದು ಎಚ್ಚರದಿ ಮುನ್ನಡೆದರೆ ಮಾತ್ರ ಉಳಿವು ನಿಮ್ಮದು..ನಮ್ಮ ಪ್ರತಿಯೊಬ್ಬರದು ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು” Read Post »

ನಿಮ್ಮೊಂದಿಗೆ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ

ಅನುವಾದ ಸಂಗಾತಿ ೧೯೩೦೦ ರ ಹೆಣ ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ ಬ್ಯಾಂಕಿನ ಹೊಸ್ತಿಲಿಗೆಇವತ್ತು ಯಾವ ಗ್ರಾಹಕನೂ ಬಂದಿಲ್ಲಬAದಿರುವುದು ಒಂದು ಪ್ರಶ್ನೆಅವನ ಕೈಯಲ್ಲಿ ಪಾಸ್‌ಬುಕ್ ಇಲ್ಲಒಂದು ಅಸ್ಥಿಪಂಜರವಿದೆಅವನು ಅರ್ಜಿ ತುಂಬಲಾರಸಹಿ ಹಾಕಲಾರಆದರೆ ಅವನು ಇತಿಹಾಸದ ಪುಟಗಳಲ್ಲಿಮೂಳೆಗಳಿಂದಲೇ ಒಂದು ಹೆಗ್ಗುರುತು ಮಾಡಿದ್ದಾನೆ ಸಮಾಧಿಯ ಮಣ್ಣು ಇನ್ನು ಹಸಿಯಾಗಿಯೇ ಇದೆತಂಗಿಯ ಕೊನೆಯ ಉಸಿರುನೆಲದಲ್ಲಿ ಸಿಲುಕಿಕೊಂಡಿವೆಯೇನೋ ಎಂಬಂತ್ತಿದೆಆ ಅಣ್ಣ ತನ್ನದೇ ರಕ್ತದ ಮೂಳೆಗಳನ್ನು ಅಗೆಯುತ್ತವ್ಯವಸ್ಥೆಯ ಬಾಗಿಲು ತಟ್ಟುತ್ತಿದ್ದಾನೆ “ಪುರಾವೆ ತನ್ನಿ; ಬದುಕಿರುವಳೋ ಅಥವಾ ಸತ್ತಿರುವಳೋ”ಕಾಗದಗಳ ಕಾಡನಲ್ಲಿ ಕುಳಿತಬಾಯಲ್ಲಿ ನಿಯಮಗಳ ಮೊಳೆ ಹೊಡೆದ ಅಧಿಕಾರಿಗಳು ಹೇಳಿದರು ಹೇಳುತ್ತಾರೆಇದು ವ್ಯವಸ್ಥೆ, ಇದು ನಿಯಮ,ಇದು ಪ್ರಕ್ರಿಯೆ, ಇದು ಕಾನೂನು…ಆದರೆ ಇವತ್ತುಒಬ್ಬ ಬಡ ಆದಿವಾಸಿನಿಮ್ಮ ನಿಯಮಗಳನ್ನುತನ್ನ ತಂಗಿಯ ಮೂಳೆಗಳಲ್ಲಿ ಸುತ್ತಿನಿಮ್ಮ ಮುಂದೆ ಎಸೆದಿದ್ದಾನೆ ನೀವು ಹೇಳುತ್ತೀರಿ“ಖಾತೆದಾರ ಬಂದರೆ ಮಾತ್ರ ಹಣ ಸಿಗುವುದು”ಅವನು ಕೇಳುತ್ತಾನೆ“ಸತ್ತ ನಂತರ ಯಾರು ಬರುತ್ತಾರೆ?”ನಿಮ್ಮ ಬಳಿ ಯಾವ ಉತ್ತರವೂ ಇಲ್ಲಬರೀ ಮೌನಅದೂ ಸಹ ಎಸಿ ಕೋಣೆಯಲ್ಲಿ ಕುಳಿತ ಮೌನ ಎರಡು ತಿಂಗಳ ಕಾಲಅವನು ನಿಮ್ಮ ಬಾಗಿಲಿಗೆ ಮನುಷ್ಯನಾಗಿ ಬರುತ್ತಿದ್ದನೀವು ಅವನನ್ನು ಅಟ್ಟಿಸಿದಿರಿಇವತ್ತು ಅವನು ಅಸ್ಥಿಪಂಜರವಾಗಿ ಬಂದಿದ್ದಾನೆನೀವು ಬೆಚ್ಚಿಬಿದ್ದಿದ್ದೀರಿ ಕೇಳಿಇದು ನೀವೇ ಹುಟ್ಟಿಸಿದ ಭಯಈ ಅಸ್ಥಿಪಂಜರಕೇವಲ ಆ ತಂಗಿಯದ್ದಲ್ಲಎಂದೋ ಸತ್ತ ನಿಮ್ಮ ಮನುಷ್ಯತ್ವದ್ದು ಊರಿನವರು ಹುಚ್ಚ ಎಂದರುಬ್ಯಾಂಕಿನವರು ನಿಯಮ ಹೇಳಿದರುಪೊಲೀಸರು ಪ್ರಕರಣ ದಾಖಲಿಸಿದರುಆದರೆ ಯಾರಿಗೂ ಕಾಣಲಿಲ್ಲಇವನೇ ಎಲ್ಲರಿಗಿಂತ ಬುದ್ಧಿವಂತನೆಂದುಏಕೆಂದರೆ ಇವನು ಅರ್ಥಮಾಡಿಕೊಂಡಿದ್ದಾನೆಈ ದೇಶದಲ್ಲಿಬದುಕಿರುವ ಮನುಷ್ಯನಿಗೆ ಯಾವ ಅಸ್ತಿತ್ವವೂ ಇಲ್ಲಆದರೆ ಸತ್ತ ದೇಹಕ್ಕೆ ಪೋಸ್ಟ್ಮರ‍್ಟಂ ಮಾಡಲಾಗುವುದುಇಲ್ಲಿ ಮನುಷ್ಯರಿಗಿಂತ ಹೆಣಗಳೇ ಅಧಿಕೃತ ದಾಖಲೆಗಳು ಇವನು ಕೇವಲ ಒಬ್ಬ ಅಣ್ಣನಲ್ಲಇಡೀ ಸಮಾಜದ ಹರಿದಹೋದ ನರನಾಡಿಇದರಿಂದ ರಕ್ತವಲ್ಲವ್ಯವಸ್ಥೆಯ ಕೊಳೆತ ವಾಸನೆ ಸೋರುತ್ತಿದೆಸಮಾದಿಯಿಂದ ತೆಗೆದ ಅಸ್ಥಿಪಂಜರಈಗ ಕೇವಲ ತಂಗಿಯದ್ದಾಗಿ ಉಳಿದಿಲ್ಲಅದು ಈ ಪ್ರಜಾಪ್ರಭುತ್ವದಎಂದೋ ಮುರಿದುಹೋದ ಬೆನ್ನೆಲುಬು ಇವತ್ತು ಅವನು ನಿಂತಿದ್ದಾನೆಜನರ ನಡುವೆಹಾಸ್ಯ ಮತ್ತು ಭಯದ ನಡುವೆಒಂದು ಪ್ರಶ್ನೆಯಾಗಿ“ಈಗಲಾದರೂ ನಂಬುವಿರಾ?”ಈ ಅಧಿಕಾರ?ಅದು ತಲೆ ತಗ್ಗಿಸಿ ಫೈಲ್ ತಿರುವುತ್ತಿದೆ…ಯಾಕೆಂದರೆಅದರ ಬಳಿ ಪ್ರತಿ ಸಾವಿನ ದಾಖಲೆಯಿದೆಆದರೆ ಪ್ರತಿ ಅನ್ಯಾಯಗಳದ್ದು ಇಲ್ಲ ಇದು ಕವಿತೆಯಲ್ಲ ಇದೊಂದು ಚಾರ್ಜ್ಶೀಟ್ಇದರಲ್ಲಿ ಆರೋಪಿಗಳು:ನಿಮ್ಮ ವ್ಯವಸ್ಥೆನಿಮ್ಮ ಕಾನೂನುಮತ್ತು ಆ ಇಡೀ ಚೌಕಟ್ಟುಯಾವುದು ಬಡವರಿಗೆ ಹೇಳುತ್ತದೆಯೋ ಅದು“ಮೊದಲು ಸತ್ತಿದ್ದಕ್ಕೆ ಪುರಾವೆ ತನ್ನಿನಂತರ ಬದುಕುವ ಹಕ್ಕು ಸಿಗುತ್ತದೆ” ಸುಧೀರ್ ಧಾವಳೆ : ಸುಧೀರ್ ಧಾವಳೆ ಅವರು ಮಹಾರಾಷ್ಟçದ ಪ್ರಸಿದ್ಧ ಸಾಹಿತಿ, ಸಾಮಾಜಿಕ ಕಾರ್ಯಕರ್ತರು. ‘ವಿದ್ರೋಹಿ’ ಎಂಬ ಮರಾಠಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು. ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇವರು ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು. ಇವರ ಕವಿತೆಗಳು ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಅಸ್ತ್ರಗಳಾಗಿವೆ. ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ Read Post »

You cannot copy content of this page

Scroll to Top