ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”. ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆದೇವರಲಿ ನೀಡಿ ಬೇಡಿದೆ ಬೊಗಸೆಹೃದಯದಲಿ ನೀನೆಂದು ಸ್ಥಿರ ಮನಸೇನಿತ್ಯ ನೂತನ ನೆನಪೆoದು ನನಸೇ ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇಸಂಸಾರದ ರಥ ನಡೆಸುವ ಕನಸೇತುಂಬುವುದು ಸಂತಸದ ಹೊಸ ಹಸಿರೇ ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದುಅನುಭವದ ಸವಿಸ್ತಾರ ಕೇಳುವುದುಜೀವನ ಚಕ್ರ ನಿಲ್ಲದೆ ಉರುಳುವುದುಸುಮಧುರ ಪ್ರೀತಿ ಅಳಿಯದೆ ಉಳಿಯುವುದು ಅನನ್ಯ ಅವಿಸ್ಮರಣೀಯ ಕಂಡ ಬೆರಗುಬೇಕಿಲ್ಲ ಜಂಜಾಟದ ಯಾವ ಕೊರಗುನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗುದೊರಕಿದೆ ಹೊಸತನದ ಹೊಸ ಮೆರಗು ಡಾ. ಲತಾ ಎ ಆರ್ ಬಾಳೆಹೊನ್ನೂರು.

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಕವಿತೆ”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಕವಿತೆ ಎನಿತೊ‌ ಮಾತುಗಳುಮೌನದಲಿ‌ ಕರಗಿನಿಂತು ಹೋಗಿದೆಬಂಧವದು ಸೊರಗಿ ಎದೆಯ ಭಾವಗಳುಆಡದೆಯೆ ಉಳಿದುದೂರವಾದ ಹೃದಯಅಳುತಿದೆ ಮನದಿ ಕಾರಣವೆ ಇರದನೋವಿನ ಸರಮಾಲೆಯಾರದೇನೋ ಶಾಪವುತಿಳಿಯದಾವ ಲೀಲೆ ದಾಟದ ಸಾಗರವುಎದೆಗಳ ನಡುವೆಮುಗಿದು ಹೋದ ಮೇಲೆಮಾತವು ಬರಿ ಸಪ್ಪೆ ಕಡಿದ ಬಂಧವನುಜೋಡಿಸುವದೇ ತಂತುದಾರಿ ಕಾಣದ ಮನಮರುಗುತಿದೆ ಇಂತು ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಕವಿತೆ” Read Post »

ಕಾವ್ಯಯಾನ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸುಕೊಚ್ಚಿ ಹರಿದು ಹೋದ ಹಾಸುಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!! ಕನಸು ನನಸಾಗುವ ಕನವರಿಕೆಕಳೆದು ಹೋದವೆಷ್ಟೋ ಮನದ ಅರಿಕೆಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!! ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂಅದೆಂದೊ ಕಾಲ ಗರ್ಭದಿ ಅವಿತವುಮರೆಯಾದವೆಂದು ವಿಷಾದದಿ ಕುಳಿತಿರೆ..!!೩!! ಅದು ಎಲ್ಲಿಯೋ ಎನಿತೋ ಹೊಳೆದಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದಥಳುಕು..ಕರೇಯುತಿರೆ ಅಕ್ಕರದಿ….!!೪!! ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆತರುತ್ತೀವಿ ಸಕಾರತೆ ಋಣ ಹೊತ್ತುಹರಡಿವೆ ಉಡಿ ತುಂಬ ನುಡಿ ಮುತ್ತು!!೫!! ಎದೆ ತುಂಬಿ ಬಂದ ನುಡಿ ಬೆಳಕು,ಪ್ರಕಾಶಮಾನ ಹೊಂಬೆಳಕಿನ ತುಳುಕುನುಡಿ ಅಮ್ಮನ ಶಬ್ದಗಳ ಚಳಕು…!!೬!! ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನಗಂಟಿನ ನಂಟು ನೋಡಿ ನಿಬ್ಬೆರಗಾಗಿಹರುಷದಿ ಮತ್ತೆ ನಲಿದಾಡುತ!!೭!! ಕಂಡ ಕಿರು ಗನಸು ಹೆಮ್ಮರವಾಗಿಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!! ಪಡೆದ ಸನ್ಮಾನದ ಸುಮ್ಮಾನವಾಗಲು.. ಸವಿತಾ ದೇಶಮುಖ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »

ಕಾವ್ಯಯಾನ, ಗಝಲ್

 ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ  ವಾಣಿ ಭಂಡಾರಿ ಗಜಲ್ ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟುಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ. ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ. ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗುಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ. ವಾಣಿ ಭಂಡಾರಿ                    

 ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಕೊರಳು ಕಂಪಿಸಿ ಬಿಗಿಯಾದರೆ ಪ್ರೇಮಕಣ್ಣೆರಡು ಮಿಳಿಸಿ ಹಸಿಯಾದರೆ ಪ್ರೇಮ ಮನದ ಬಯಲಲ್ಲೆಲ್ಲಾ ಅರಳಿ ಮಲ್ಲಿಗೆಜೀವ ಆಲಾಪಿಸಿ ಬಿಸಿಯಾದರೆ ಪ್ರೇಮ ದೇಹದರಮನೆಯ ತುಂಬಾ ಸಂಚಲನಭಾವ ಬಯಸಿ ಖುಷಿಯಾದರೆ ಪ್ರೇಮ ಹಂಬಲದಲೆ ಬೋರ್ಗರೆದು ಅಪ್ಪಳಿಸಿಆಸೆ ಅಂಕುರಿಸಿ ಹಸಿಯಾದರೆ ಪ್ರೇಮ ಬಯಕೆ ಬಾಂದಳ ಕುಣಿಕುಣಿದು ನಲಿದುಮಿಡಿವ ಎದೆ ಕಲಕಿ ತೃಷೆಯಾದರೆ ಪ್ರೇಮ ನರನಾಡಿಗಳಲಿ ನಾದಂತರಂಗ ಮೃದಂಗಹೃದಯ ಮಂಪರಿಸಿ ನಿಶೆಯಾದರೆ ಪ್ರೇಮ ಅನುಳ ಪ್ರೀತಿಯ ಶಿಶೆ ತುಂಬಿ ತುಳುಕುತ್ತಿರೆಬಾನು ಭುವಿ ರಮಿಸಿ ಒಂದಾದರೆ ಪ್ರೇಮ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ” Read Post »

ಕಾವ್ಯಯಾನ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ”

ಕಾವ್ಯ ಸಂಗಾತಿ ಜಯಂತಿ ಕೆ ವೈ “ಸಾವಿನ ಮನೆ ಸೇರುವ ಸತ್ಯ” ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ! ಕಾರಣವೇ ಇಲ್ಲದೆ ಕತೆಯಾಗುವಸುಳ್ಳಿನ ಬಲೆಯೊಳಗೆ ಸಿಲುಕುವಬೇಡವೆಂದರೂ ಬೇಕೆನಿಸುವಬಯಕೆ ಬಿಸಿಯ ಕಾವಿಗೆಪದಗಳು ಕರಗಿದವು. ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗುಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆಅಲ್ಲೊಂದು ಕಥಾನಕದ ಅನಾವರಣ ಸುಳ್ಳು ಸತ್ಯವಾಗಿಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿಹೊರಳಾಡುತ್ತಾ ಹೊರಬಿದ್ದವು ಮಾತಾಗಿದಾಖಲಾದವು ಮಸಿಯಾಗಿ. ಹೇಳಲೇನಿದೆ ಕೇಳಿದವರಿಗೆಲ್ಲಒಂದೇ ಪ್ರಶ್ನೆಉತ್ತರವೇ ಇಲ್ಲದಮಾರುತ್ತರ ಬಯಸದ ಹಾಗೆದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು! ಅಲ್ಲೊಂದು ದಿವ್ಯಮೌನರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತುಮೌನ ಮಾತನಾಡಿತು‘ನ ಬ್ರೂಯಾತ್ ಸತ್ಯಮಪ್ರಿಯಮ್’ಸತ್ಯ ಸಾವಿನಮನೆ ಸೇರಿತುಪದಗಳಾಗುವ ಆಸೆಯೇಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿಮೂಡಿತ್ತು ಮಂದಹಾಸ!! ಜಯಂತಿ ಕೆ ವೈ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ “ಒಲುಮೆಯ ಸಾಂಗತ್ಯ” ಇರಬೇಕು ಒಲುಮೆಯ ಸಾಂಗತ್ಯಮಧುರ ಭಾವಗಳು ಬೆಸೆದುಒಲವಿನ ಹೊನಲು ಹರಿಸಲು ಇರಬೇಕು ಒಲುಮೆಯ ಸಾಂಗತ್ಯಮಾತುಗಳು ನೂರಿದ್ದರೂಮೌನದ ಭಾಷೆ ಅರಿಯಲು ಇರಬೇಕು ಒಲುಮೆಯ ಸಾಂಗತ್ಯಬಯಕೆಯ ಬಳ್ಳಿಗೆಆಸರೆಯಾಗಿ ನಿಲ್ಲಲು ಇರಬೇಕು ಒಲುಮೆಯ ಸಾಂಗತ್ಯತಪ್ಪು ಒಪ್ಪುಗಳ ನಡುವೆತಿದ್ದಿ ಸರಿದಾರಿ ತೋರಲು ಇರಬೇಕು ಒಲುಮೆಯ ಸಾಂಗತ್ಯಪ್ರೀತಿ ಸ್ನೇಹಗಳ ಸಮ್ಮಿಲನಮನದಂಗಳದಿ ಅರಳಲು ಇರಬೇಕು ಒಲುಮೆಯ ಸಾಂಗತ್ಯಮನದ ಮಧುರ ಮಿಲನಕೆಅಮೃತಧಾರೆ ಹರಿಸಲು ಇರಬೇಕು ಒಲುಮೆಯ ಸಾಂಗತ್ಯಸಮಸ್ಯೆ ಸವಾಲುಗಳಿಗೆಭರವಸೆ ಬಾಳು ಬೆಳಗಲು ಇರಬೇಕು ಒಲುಮೆಯ ಸಾಂಗತ್ಯದೂರ ದಾರಿಯ ಪಯಣಕೆಸದಾಕಾಲ ಸಿಹಿ ಸ್ಪರ್ಶ ನೀಡಲು ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ” Read Post »

ಕಾವ್ಯಯಾನ

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.”

ಕಾವ್ಯ ಸಂಗಾತಿ ಎನ್. ಜಯಚಂದ್ರನ್  “ನೆರಳು ದಾಟಿದ ಹೆಜ್ಜೆ.”             ಬಾಳ ಹಾದಿಯಲಿ ನಡೆದು ಬಂದಹಾದಿಯ ಗುರುತುಗಳೆಲ್ಲಾ ಕಥೆಗಳಾದವು,ನಗುವಿನ ಹನಿಗಳು  ಮುತ್ತಾಗಿ ಮೂಡಿನೆನಪಿನ ಮಡಿಲಲ್ಲಿ ಶಾಶ್ವತವಾದವು. ಕಳೆದ ದಿನಗಳ ಸುವರ್ಣ ಕ್ಷಣಗಳುಕನಸಿನಂತೆ ಮನದೊಳಗೆ ಉಳಿದವು,ಸ್ನೇಹದ ಸ್ಪರ್ಶದ ಸಿಹಿ ಮಾತುಗಳುಹೃದಯದ ತಂತಿಗಳಲಿ ಹಾಡಾದವು. ಬಿರುಗಾಳಿಗಳ ನಡುವೆ ನಿಂತ ಧೈರ್ಯಜೀವನದ ಪಾಠವಾಗಿ ಬೆಳೆದಿತು,ಸೋಲಿನ ನೆರಳನ್ನು ದಾಟಿದ ಹೆಜ್ಜೆಗೆಲುವಿನ ಬೆಳಕಾಗಿ ಅರಳಿತು. ತಾಯಿಯ ಮಮತೆ, ತಂದೆಯ ಆಶೀರ್ವಾದಬಾಳ ದಾರಿಯ ದೀಪಗಳಾದವು,ಗುರುವಿನ ಜ್ಞಾನ, ಗೆಳೆಯರ ಪ್ರೀತಿಮನದ ಸಂಪತ್ತಾಗಿ ನೆಲೆಗೊಂಡವು. ಕಾಲದ ಚಕ್ರವು ಮುಂದೆ ಸಾಗಿದರೂಆ ಕ್ಷಣಗಳು ಹಿಂದೆ ಮರೆಯಾಗಲಿಲ್ಲ,ಸಾರ್ಥಕ ಬದುಕಿನ ಸುಂದರ ನೆನಪುಗಳುಮನದ ತೋಟದಲ್ಲಿ ಎಂದೂ ಒಣಗಲಿಲ್ಲ. ಕೊನೆಗೆ ಉಳಿಯುವುದು ಸಂಪತ್ತು ಅಲ್ಲ,ಹೆಸರಿನ ವೈಭವವೂ ಅಲ್ಲ,ಪ್ರೀತಿಯಿಂದ ಬದುಕಿದ ಕ್ಷಣಗಳೇಜೀವನದ ನಿಜವಾದ ಹಬ್ಬವಾಗುವವು. ಸಾರ್ಥಕ ಬದುಕಿನ ನೆನಪುಗಳುಸಂಜೆಯ ಸೂರ್ಯನ ಕಿರಣಗಳಂತೆ,ಅಸ್ತವಾಗುವ ಹೊತ್ತಿನಲ್ಲಿಯೂ ಸಹಮನದ ಆಕಾಶವನ್ನು ಬೆಳಗಿಸುವವು.ನೆರಳು ದಾಟಿದ ಹೆಜ್ಜೆ.            ಎನ್. ಜಯಚಂದ್ರನ್ 

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.” Read Post »

You cannot copy content of this page

Scroll to Top