ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಇಲ್ಲೊಂದಿಷ್ಟು ಸಹಿಸಲಾಗದ್ದನ್ನು ಸಹಿಸಬೇಕಿದೆ ನೋಡುಕೆಲವೊಂದಿಷ್ಟು ಕೇಳಲಾಗದ್ದನ್ನು ಕೇಳಿಸಬೇಕಿದೆ ನೋಡು ಅವರಿವರ ಡೊಂಬರಾಟದ ಹೋರಾಟಗಳಾಗಾಗ ನೋಡುತ್ತಿರುಮೂರು ಮಂಗಗಳು ಉದಾಹರಣೆ ತಿಳಿಸಬೇಕಿದೆ ನೋಡು ನ್ಯಾಯ ಪ್ರಾಮಾಣಿಕತೆಗಳ ಮೂಟೆ ಕಟ್ಟಿ ಮೂಲೆ ಸೇರಿವೆಬಕೆಟ್ ಹಿಡಿದು ಬದುಕುವವರಿಗೆ ಬಿಸಿ ಮುಟ್ಟಿಸಬೇಕಿದೆ ನೋಡು ಇಲ್ಲಿ ತಿಳಿದು ತಿಳಿಯದಂತಿಹರು ಅನೇಕಾನೇಕ ಬುದ್ಧಿವಂತರುಕತ್ತಲೆಯಲ್ಲಿ ಅಡಗಿದವರಿಗೆ ಜ್ಞಾನದ ಕಿಡಿ ಹೊತ್ತಿಸಬೇಕಿದೆ ನೋಡು ಮತ್ತೊಮ್ಮೆ ಅವತಾರವೆತ್ತಬೇಕಿದೆ ಶ್ರೀಹರಿ ಭೂಗರ್ಭದಲ್ಲಿ ರೇಖೂಮುಂದಿನ ಪೀಳಿಗೆಗಾದರೂ ಸಂಸ್ಕಾರಗಳ ಕಲಿಸಬೇಕಿದೆ ನೋಡು ರೇಖಾಕ್ಷರ

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಇಂದಿಗೆ ಬಾಳಲಿ ನಿನ್ನ ನನ್ನ ಹಿಸಾಬ್ ಚುಕ್ತಾ ಆಯ್ತುಮಂದಿಗೆ ಬಾಯಲಿ ನಮ್ಮಿಬ್ಬರ  ಕಿತಾಬ್ ಮಕ್ತಾ ಆಯ್ತು ಹೃದಯದಿಂದ ಲೆಕ್ಕದ ಪನ್ನಾಪನ್ನಾ ಕಿತ್ತು ಬಿಸಾಕಿದ್ದೇನೆಧೋಕಾ ಎಲ್ಲ ಸರಿಸಿದಾಗ ಬಜಾರಿನಲೇ ನಕಾಬ್ ಬಯಲಾಯ್ತು  ರಂಗಿಗೆ ಬಂಗು ಹತ್ತಿದಾಗ ಎಲ್ಲಿದೆ ಹೇಳು ಖೂಬ್ಸೂರ್ತಿಕಟ್ಟ ಕಡೆಗೆ ನಿನ್ನೆಲ್ಲ ಕರ್ತುತಗಳಿಗೆ ಜವಾಬ್ ಕೊಟ್ಟಾಯ್ತು ನಂಬಿಕೆಗಳ ಮೇಲೆಯೆ ನಂಬಿಕೆ ಸತ್ತು ಹೋಗಿದೆ ನನ್ನಲ್ಲಿನಟ್ಟನಡುರಾತ್ರಿಯಲೇ ರಾತ್ರಿಯಲೇ ನಕ್ಷತ್ರಗಳ ಶಬಾಬ್ ಹೊರಟೋಯ್ತು  ಸ್ವಪ್ನಗಳ ಸವಾರಿ ಮಾಡಿ ಆಸೆ ತೀರ ಮುಟ್ಟಲಿಲ್ಲ ಜ್ಯೋತಿ ಬದುಕಿನ ನಶೆ ಏರುವ ಮುನ್ನವೇ ಜಾಮಿನಿಂದ ಶರಾಬ್ ಚೆಲ್ಲೋಯ್ತು ಜ್ಯೋತಿ ಮಾಳಿ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” ಪ್ರತಿ ಮುಂಜಾನೆಯುನನ್ನ ಮನೆ ಕಿಟಕಿಯ ಮುಂದೆಸೂರ್ಯೋದಯ ಬಂದು ನಿಲ್ಲುತ್ತದೆ!ಅದನ್ನು ತೆರೆಯುವ ಕೀಲಿಕೈಈ ಕಾಂಕ್ರೀಟಿನ ಮನೆ ಅಡಿಪಾಯದೊಳಗೆಹೂತುಹೋಗಿದೆ! ಈ ಮನೆಯ ಗೋಡೆಗಳುಇಟ್ಟಿಗೆ ಗಾರೆಯಿಂದಲ್ಲಅರ್ಧಕ್ಕೆ ಮುರಿದ ಸಂಭಾಷಣೆಗಳಿಂದಕಟ್ಟಲ್ಪಟ್ಟಿವೆ!ಅವುಗಳ ನಡುವೆಒಂದು ನಗು ಸಿಕ್ಕಿಕೊಂಡುವರ್ಷಗಳಿಂದ ಪ್ರತಿಧ್ವನಿಯಾಗಲು ಕಲಿಯುತ್ತಿದೆ! ನಗರದ ರಸ್ತೆಗಳುಮನುಷ್ಯರ ಕಾಲುಗಳನ್ನುಗಮ್ಯದ ಕಡೆಗೆ ಕರೆದೊಯ್ಯುವುದಿಲ್ಲ!ಹೆಜ್ಜೆಗಳ ನೆನಪುಗಳನ್ನುಡಾಂಬರಿನ ಕೆಳಗೆ ಸಮಾಧಿ ಮಾಡುತ್ತವೆ! ನನ್ನ ನೆರಳು ಸಂಜೆಯಾಗುತ್ತಿದ್ದಂತೆನನ್ನನ್ನು ಬಿಟ್ಟುಬೀದಿದೀಪದ ಕೆಳಗೆ ಕೆಲಸಕ್ಕೆ ಸೇರಿಕೊಳ್ಳುತ್ತದೆ! ರಾತ್ರಿ ಮನೆಗೆ ಬಂದಾಗಕನ್ನಡಿಯ ಮುಖದಲ್ಲೂ ನನ್ನಷ್ಟೇ ಆಯಾಸ! ಕನ್ನಡಿಯೊಳಗಿನ ನಾನು ಪ್ರತಿದಿನಸ್ವಲ್ಪ ಸ್ವಲ್ಪವಾಗಿ ಪಾರದರ್ಶಕನಾಗುತ್ತಿದ್ದೇನೆಮುಖ ಮರೆತು ಹೋಗದಂತೆ! ಮರಗಳು ಈಗಎಲೆಗಳನ್ನು ಉದುರಿಸುವುದಿಲ್ಲಹಕ್ಕಿಗಳ ವಿಳಾಸಗಳನ್ನುಒಂದೊಂದಾಗಿ ಕೆಳಗೆ ಬೀಳಿಸುತ್ತಿವೆ! ಗಾಳಿಯ ಕೈಯಲ್ಲಿ ಹೂವಿನ ಪರಿಮಳವಿಲ್ಲಬೀಗ ಹಾಕಿದ ಮನೆಗಳಕೊನೆಯ ನಿಟ್ಟುಸಿರನ್ನು ಹೊತ್ತು ತಿರುಗುತ್ತಿದೆ! ನಾನು ಇನ್ನೂ ಆಕಾಶವನ್ನು ನೋಡುತ್ತೇನೆಅದು ಮೇಲಿಲ್ಲನನ್ನ ಕಣ್ಣಿನಲ್ಲಿ ಬಿರುಕು ಬಿಟ್ಟ ನೀಲಿ ಬಣ್ಣವಾಗಿಮೆಲ್ಲಗೆ ಉದುರುತ್ತಿದೆ! ಆಕಾಶದಿಂದ ಬೀಳುವಪ್ರತಿ ಹನಿಯುಸತ್ತ ಕನಸಿನ ಕೊನೆಯ ಬೆಳಕು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” Read Post »

ಕಾವ್ಯಯಾನ, ಗಝಲ್

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ನಾನಿರದ ಬದುಕಲಿ ನೀ ಸಂತಸದಿಂದಿದ್ದರೆ ಬೇರೇನು ಬೇಕೆನಗೆನಿನ್ನದೆ ಲೋಕದಲಿ ನೀ ಬಯಸಿದಂತಿದ್ದರೆ ಬೇರೇನು ಬೇಕೆನಗೆ ಒಲವ ಮಳೆಯಲಿ ಜೊತೆ ನೆನೆದ ನೆನಪು ನನ್ನ ಪಾಲಿಗಿದೆಯಲ್ಲಲಾಲಸೆ ಮತ್ತಿನಲಿ ನೀ ಓಲಾಡುತಲಿದ್ದರೆ ಬೇರೇನು ಬೇಕೆನಗೆ ಹಾರೈಸುವೆ ನಿನ್ನ ಸಂಕಷ್ಟದ ದೆಸೆಗಳು ನನ್ನೊಂದಿಗೆ ತೆರಳಲಿಸುಯೋಗದೊಂದಿಗೆ ನಿನ್ನ ಗೆಳೆತನವಿದ್ದರೆ ಬೇರೇನು ಬೇಕೆನಗೆ ಕಂಡೆನಂದೇ ನಾ ಜೊತೆಯಲಿರೆ ಅನ್ಯರೆಡೆಗೆ ವಾಲಿದ ನಿನ್ನ ಒಲವಅವರೊಲವೊಂದಿಗೆ ಹೊಂದಾಣಿಕೆಯಿದ್ದರೆ ಬೇರೇನು ಬೇಕೆನಗೆ ನೀ ಬಯಸಿದ ಬಯಕೆಗಳ ನಾ ಪೂರೈಸಲು ಸೋತೆನೇನೊ ನಲ್ಲನಿನ್ನಿಚ್ಚೆಗೆ  ರೂಪಕೊಡುವ ಗೆಣಿಕಾರರಿದ್ದರೆ ಬೇರೇನು ಬೇಕೆನಗೆ ಮಲ್ಲಿಗೆ ಸುಮ ಪರಿಮಳಕಷ್ಟೆ, ಮುಡಿದವರ ನಸೀಬು ತಿದ್ದಲಾಗದುಅದೃಷ್ಟದೊಂದಿಗೆ ನಿನ್ನ  ಒಪ್ಪಂದವಾಗಿದ್ದರೆ ಬೇರೇನು ಬೇಕೆನಗೆ ಸುಕನಸು

ಸುಕನಸು ಅವರ ಗಜಲ್ Read Post »

ಕಾವ್ಯಯಾನ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ”

ಕಾವ್ಯ ಸಂಗಾತಿ ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” ಭೀಮನ ಅಮಾವಾಸ್ಯೆಯಂದುನನ್ನ ಪಾದಗಳ ಮೇಲೆನೀ ಹೂವಿಟ್ಟಾಗನಿನ್ನ ಬೆರಳ ತುದಿಯ ಸ್ಪರ್ಶದಲ್ಲಿನನ್ನ ಹೃದಯನಿನ್ನ ಹೆಸರನ್ನೇ ಜಪಿಸಿತ್ತು ನೀ ಅದನ್ನು ಪೂಜೆ ಎಂದೆ,ನನಗದು ಪೂಜೆಯಾಗಿರಲಿಲ್ಲನನ್ನ ಬದುಕಿಗೆನೀ ನೀಡಿದ ಪ್ರೀತಿಯಮೌನ ಪ್ರಮಾಣವಾಗಿತ್ತು ನಿನ್ನ ಕಂಗಳಲ್ಲಿಆ ಕ್ಷಣ ಕಂಡ ಭಕ್ತಿಗಿಂತನಿನ್ನ ಹೃದಯದಲ್ಲಿದ್ದನನ್ನ ಮೇಲಿನ ಪ್ರೀತಿಯೇನನ್ನನ್ನು ಹೆಚ್ಚು ತಲೆಬಾಗಿಸಿತ್ತು ಇಂದು ಬೇಬಿಮಾ…ನಿನ್ನ ಪಾದಗಳ ಮುಂದೆಕೈಗಳನ್ನಿಡುವ ಸರದಿ ನನ್ನದು ನೀ ಇಷ್ಟು ವರ್ಷನನ್ನ ಬದುಕಿನ ದಾರಿಯಲ್ಲಿನನ್ನೊಂದಿಗೆ ನಡೆದಿರುವೆಈಗ ನಿನ್ನ ಪಾದಗಳಿಗೆ ಹೂವಿಡುವಾಗಆ ಹೂವಿನೊಂದಿಗೆನನ್ನ ಕೃತಜ್ಞತೆಯನ್ನೂ ಇಡುವೆ. ಕಷ್ಟದ ದಿನಗಳಲ್ಲಿ ಮುಖ ನೋಡಿಕೊಂಡೇನನ್ನ ನೋವನ್ನು ಅರಿತವಳು ನೀನುನನ್ನ ಸೋಲಿನ ದಿನಗಳಲ್ಲಿ“ನಾನಿದ್ದೇನೆ” ಎಂದುನನ್ನ ಕೈ ಹಿಡಿದವಳು ನೀನು. ನಾನು ಕುಗ್ಗಿದಾಗನನ್ನೊಳಗೆ ಧೈರ್ಯ ತುಂಬಿದವಳುನಾನು ಮೌನವಾದಾಗನನ್ನ ಮೌನವನ್ನು ಓದಿದವಳುನಾನು ಗೆದ್ದಾಗನನಗಿಂತ ಹೆಚ್ಚು ಸಂತೋಷಪಟ್ಟವಳು ನೀನೇ ಅಲ್ಲವೇ ಬೇಬಿಮಾ… ನನ್ನ ಬಾಳ ಬಾಗಿಲಿಗೆನೀ ಕಾಲಿಟ್ಟ ದಿನದಿಂದಈ ಮನೆಕೇವಲ ಗೋಡೆಗಳ ಮನೆಯಲ್ಲನಿನ್ನ ನಗುವಿನಿಂದಮನೆಯಾಯಿತುನಿನ್ನ ಮಮತೆಯಿಂದಮಂದಿರವಾಯಿತುನಿನ್ನ ಹೆಜ್ಜೆ ಗುರುತುಗಳಿಂದನನ್ನ ಬದುಕಾಯಿತು ನಿನ್ನ ಪಾದದ ಗೆಜ್ಜೆಯ ನಾದವೇನನ್ನ ಬೆಳಗಿನ ರಾಗನಿನ್ನ ಹೆಜ್ಜೆಯ ಸದ್ದೇನನ್ನ ಸಂಜೆಯ ನಿರೀಕ್ಷೆನೀ ಹತ್ತಿರವಿದ್ದರೆಮೌನವೂ ಮಾತಾಗುತ್ತದೆನೀ ದೂರವಿದ್ದರೆಮಾತುಗಳಿದ್ದರೂಮನಸ್ಸು ಮೌನವಾಗುತ್ತದೆ ಬಾ ಬೇಬಿಮಾ…ನಿನ್ನ ಪಾದಗಳನ್ನುಒಮ್ಮೆ ನನ್ನ ಮಡಿಲಲ್ಲಿರಿಸುಹೂವಿಡುವ ನೆಪದಲ್ಲಿನಿನ್ನ ಕೈ ಹಿಡಿದುಒಂದು ಮಾತು ಹೇಳಬೇಕು“ನನ್ನ ಬದುಕಿಗೆನೀ ಬಂದದ್ದುನನ್ನ ಅದೃಷ್ಟವಲ್ಲನನ್ನ ಬದುಕೇನಿನ್ನಿಂದ ಅದೃಷ್ಟವಾಯಿತು” ನಿನ್ನ ಪಾದಗಳಿಗೆನಾನು ಬಾಗುವಾಗನಿನ್ನ ಭಗವಂತನಾಗಿ ಇರುವುದಿಲ್ಲನಿನ್ನ ಪ್ರೀತಿಯಲ್ಲಿಜೀವಮಾನವಿಡೀಸೋತು ಬದುಕಲು ಬಯಸುವಒಬ್ಬ ಪ್ರೇಮಿಯಾಗಿ ಬಾಗುವೆ ನೀ ನನ್ನ ಅರ್ಧಾಂಗಿಯೆಂದುಹೇಳುವುದು ಬಹಳ ಸಣ್ಣ ಮಾತುನೀ ನನ್ನ ಬದುಕಿನಅರ್ಧವಲ್ಲ ಬೇಬಿಮಾ—ನನ್ನ ಬದುಕಿನಪೂರ್ಣ ಅರ್ಥ ನೀನು ನನ್ನ ನಗುವಿನ ಹಿಂದೆನಿನ್ನ ಮಮತೆಯಿದೆನನ್ನ ಧೈರ್ಯದ ಹಿಂದೆನಿನ್ನ ನಂಬಿಕೆಯಿದೆನನ್ನ ಪ್ರತಿಯೊಂದು ಹೆಜ್ಜೆಯ ಹಿಂದೆನಿನ್ನ ಮೌನ ಪ್ರಾರ್ಥನೆಯಿದೆ ನಾನು ಹೊರಗೆಜಗತ್ತಿನ ಮುಂದೆಎಷ್ಟೇ ದೊಡ್ಡವನಾಗಿ ನಿಂತರೂಮನೆಗೆ ಮರಳಿದಾಗನಿನ್ನ ಒಂದು ನೋಟಕ್ಕಾಗಿಕಾಯುವ ಸಾಮಾನ್ಯ ಮನುಷ್ಯ ನಾನು ನಿನ್ನ ಪಾದಗಳ ಮೇಲೆಒಂದು ಹೂವಿಡುವೆಅದರೊಳಗೆನನ್ನ ಕೃತಜ್ಞತೆಒಂದು ಮುತ್ತಿಡುವೆಅದರೊಳಗೆನನ್ನ ಜೀವಮಾನ ಪ್ರೀತಿ ಒಂದು ಕ್ಷಣಕಣ್ಣುಮುಚ್ಚುವೆಆ ಕ್ಷಣದಲ್ಲಿನನ್ನ ಮನಸ್ಸುಒಂದೇ ಒಂದು ಪ್ರಾರ್ಥನೆ ಮಾಡುವುದು “ದೇವರೇ,ಮುಂದಿನ ಏಳೇಳು ಜನ್ಮಗಳಲೂಮತ್ತೆ ಈ ಮಲ್ಲಿಗೆ ಸುಮವನ್ನೇ ಕೊಡುಅವಳ ಪಾದಗಳ ಬಳಿಯೇಮತ್ತೊಮ್ಮೆ ನನ್ನ ಬದುಕನ್ನುಆರಂಭಿಸುವ ಅವಕಾಶ ಕೊಡು” ನಿನ್ನ ಪಾದಪೂಜೆನನ್ನ ಭಕ್ತಿಯಲ್ಲ ಬೇಬಿಮಾ;ನೀ ನನ್ನನ್ನುಎಷ್ಟು ಪ್ರೀತಿಸಿದ್ದೀಯೋಅದಕ್ಕಿಂತಲೂ ಹೆಚ್ಚು ಪ್ರೀತಿಯಿಂದನಿನ್ನನ್ನು ಗೌರವಿಸುವನಮ್ಮ ದಾಂಪತ್ಯದ ಹಬ್ಬ ಇದುಗಂಡ ಹೆಂಡತಿಗೆ ಬಾಗಿದ ಕ್ಷಣವಲ್ಲಎರಡು ಹೃದಯಗಳುಒಬ್ಬರಿಗೊಬ್ಬರು“ನೀ ಇಲ್ಲದೆ ನಾನು ಪೂರ್ಣನಲ್ಲ”ಎಂದು ಅಪ್ಪಿಕೊಂಡ ಕ್ಷಣ ನೀ ಬರಿ ನನ್ನ ಹೆಂಡತಿಯಲ್ಲ…ನನ್ನ ಉಸಿರು,ನನ್ನ ನೆಮ್ಮದಿ,ನನ್ನ ಮೌನದ ಭಾಷೆ,ನನ್ನ ಕಣ್ಣೀರಿನ ಅರ್ಥ,ನನ್ನ ನಗುವಿನ ಕಾರಣ,ನನ್ನ ಸುಕನಸು,ನನ್ನ ಬದುಕು… ನನ್ನ ಕೊನೆಯ ಉಸಿರಿನವರೆಗೂನಿನ್ನ ಕೈ ನನ್ನ ಕೈಯಲ್ಲಿರಲಿನನ್ನ ಕೊನೆಯ ಹೆಜ್ಜೆಯವರೆಗೂನಿನ್ನ ಹೆಜ್ಜೆ ನನ್ನ ಹೆಜ್ಜೆಯ ಜೊತೆಯಿರಲಿಜೊತೆ ಜೊತೆಯಾಗಿ ಈ ಸಂಸಾರ ನೌಕೆ ಸಾಗಿಸೋಣ ರತ್ನರಾಯಮಲ್ಲ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” Read Post »

ಕಾವ್ಯಯಾನ, ಗಝಲ್

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ (ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಜೀವನದಿ ಒಮ್ಮೆ ಪ್ರೇಮವೆಂಬ ಸುಳಿಗೊಮ್ಮೆ ಬೀಳಿರಿವಿರಹದ ಬಗ್ಗೆ ಹೇಗೆಂದು ನಂತರ ನೀವಯೇ ಹೇಳಿರಿ ಮನೋರಮೆಯ ಒಮ್ಮೆ ಏಕಾಂತದಿ ಭೇಟಿಮಾಡಿಅಗಲಿಗೆಯ ಸಮಯದಿ ನೋವಾದರೆ ತಾಳ್ಮೆ ತಾಳಿರಿ ಒಳ್ಳೆಯ ಗಂಡ ಚಂದದ ಪತ್ನಿ ಎಲ್ಲವೂ ಮಾತಷ್ಟೇದಕ್ಕಿದ ಹೆಣ್ಣ ಚಂದ ಹೆಂಡತಿಯಾಗಿಸಿ ಬಾಳ ಬಾಳಿರಿ ಹೊಂದಿಕೆಯ ಬಾಳಲಿ ನಿಜ ಸುಖವಿದೆ ತಿಳಿದಿರಲಿಸುಪ್ರೇಮ ಲೋಕವನು ಮಹಾರಾಜನಂತೆ ಅಳಿರಿ ಬತ್ತದ ಗದ್ದೆಯಲಿ ನಡೆದಂತೆ ಜೀವನ ಜಾರಬಹುದುಕೆಸರಲಿ ಬಿದ್ದರೂ ಸ್ವ ಸಂಬಾಳಿಸಿಕೊಂಡು ಏಳಿರಿ ಕೃಷ್ಣಾ! ಗೀತೆಯ ವಾಕ್ಯದಂತೆ ಜಾಗೃತ ಜಾಗೃತರಾಗಿರಿಭುವಿಯ ಸುಖದಲಿ ಸ್ವರ್ಗ ಸುಖವ ಕೂಡಿ ಕಳೀರಿ. ಬಾಗೇಪಲ್ಲಿ

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ” ನನಗೊಂದು ವರ” ಮಾತುಗಳಿಲ್ಲದ ಮೌನದಲ್ಲೂ,ಮನದ ಭಾವತಿಳಿಯುವೆ ನೀನು.ಕಷ್ಟದ ಹಾದಿಯ ಪಯಣದಲ್ಲೂ, ಜೊತೆಯಲಿನಡೆವೆ ನೀನು. ನಗುವಿನ ಅಲೆಯಲ್ಲಿ ಜೊತೆಯಾಗಿ ತೇಲಿ,ಕಣ್ಣೀರಿನ ಹನಿಗೂ ಹೆಗಲಾದೆ ನೀನು.ಲೋಕವೇ ಎದುರಾಗಿ ನಿಂತರೂ ಕೂಡ,ನನ್ನ ಹೆಜ್ಜೆಗೆ ಶಕ್ತಿ ತುಂಬುವೆ ನೀನು. ಕಾಲದ ಚಕ್ರವುಉರುಳಿದರೂ ,ನಮ್ಮೀ ಪ್ರೀತಿಯಬಂಧವು ಅಜರಾಮರ.ನಿನ್ನೊಲವ ಸನಿಹವೇ ನನಗೊಂದು ವರ.ಶ್ರಮ ಪೂಜೆಬಸವನಿಗೆ ಹೂಹಾರ ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಅಪರೂಪದ ಕನಸು” ಅಪರೂಪದ ಕನಸು ಕಂಡೆಇಪ್ಪತ್ತೈದರ ಮುಂಜಾವಲಿ;ಮಣ್ಣೆಣ್ಣೆ ದೀಪದ ಮಬ್ಬಿನಲಿಆಲವೂ ಅತ್ತಿಯೂ ಚಿಗುರಿದ್ದವು,ಒಂದೇ ಮಣ್ಣಿನ ಮಡಿಲಲಿ. ಆಲದ ಕೆಳಗೆ ಭೀಮ ನಿಂತ,ಬಾವಿಯ ಬಳಿ ಕೇರಿಯ ಮಗು;ಬೊಗಸೆ ತುಂಬ ನೀರು ಕೊಟ್ಟಾಗಮಗುವಿನ ಮುಖ ಅರಳಿತುನೀರೊಳಗೆ ಆಕಾಶವೂ ಅರಳಿತು. ಅತ್ತಿಯ ಕೆಳಗೆ ದುರ್ಯೋಧನ,ಮಡಿಲಲ್ಲಿ ಹಳೆಯ ಓಲೆ;ಕೋಲ ತುದಿಯಿಂದ ನೆಲವ ಗೀರಿಗೆರೆಯ ಮೇಲೆ ಗೆರೆ ಎಳೆದಮಣ್ಣಿನ ಎದೆಯಲಿ ಗಾಯವಾಯಿತು. ಆಲ ಮೆಲ್ಲಗೆ ಬೇರು ಚಾಚಿತುಕೇರಿಯಿಂದ ಬಾವಿಗೆ,ಬಾವಿಯಿಂದ ಶಾಲೆಯ ಹೊಸ್ತಿಲಿಗೆ;ಭೀಮ ಗದೆಯನ್ನು ನೆಲಕ್ಕಿಟ್ಟುಮಗುವಿನ ಕೈಗೆ ಸ್ಲೇಟು ಕೊಟ್ಟ. ಅತ್ತಿಯ ಕೊಂಬೆ ಹಣ್ಣಾಯಿತು,ಹಣ್ಣಿನೊಳಗೆ ಸಾವಿರ ಬೀಜ;ದುರ್ಯೋಧನ ಬೇಲಿ ಕಟ್ಟಿದರೂಹಕ್ಕಿಗಳು ಕೊಂಬೆಯಿಂದ ಹಾರಿದವುಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ. ಒಂದು ಸಂಜೆ ಬೆಂಕಿ ಎದ್ದಿತು,ಹಳೆಯ ಓಲೆ ಉರಿದು ಬೂದಿಯಾಯಿತು;ಬೂದಿ ಗಾಳಿಯ ಜೊತೆಗೆ ಹಾರಿದಾಗಆಲದ ಬರಿದ ಕೊಂಬೆಯ ತುದಿಯಲ್ಲಿಹೊಸ ಚಿಗುರೊಂದು ನಗುತ್ತಿತ್ತು. ಮಳೆ ಸುರಿಯಿತು, ಮಣ್ಣು ಘಮಿಸಿತು;ಆಲದ ನೆರಳಿಗೆ ಕೇರಿ ಬಂತು,ಕೇರಿಯ ಬೆನ್ನಿಗೆ ಊರೂ ಬಂತು;ಒಂದೇ ಚಾಪೆಯ ಮೇಲೆ ಕೂತುಅಕ್ಷರದ ದೀಪ ಹಚ್ಚಿದರು. ಅತ್ತಿಯ ಕೆಳಗೆ ದುರ್ಯೋಧನರಾತ್ರಿಯಿಡೀ ನಿದ್ದೆಗೆಟ್ಟ“ಎಲ್ಲರೂ ನೆಟ್ಟಗೆ ನಿಂತರೆನನ್ನ ಸಿಂಹಾಸನದ ಎತ್ತರಇನ್ನು ಯಾರಿಗೆ ಕಾಣುವುದು?” ಬೆಳಕು ಹರಿಯಿತುಭೀಮನ ಗದೆ ಮಣ್ಣಲ್ಲೇ ಉಳಿಯಿತು;ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತಹೊಸ ಪುಸ್ತಕ ತೆರೆದುಕೊಂಡಿತುಅತ್ತಿಯ ನೆರಳು ಕಿರಿದಾಗುತ್ತಿತ್ತು. ಎಚ್ಚರವಾದಾಗಕಿಟಕಿಯಾಚೆ ಎರಡೂ ಮರಗಳಿದ್ದವು;ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತುನಿನ್ನೆ ಎಳೆದ ಗೆರೆಇಂದು ಮಣ್ಣಾಗುತ್ತಿತ್ತು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು” Read Post »

ಕಾವ್ಯಯಾನ

ಶಿವರಾಜ ಅರಳಿ ಅವರ ಕವಿತೆ “ಸೆರಗು”

ಕಾವ್ಯ ಸಂಗಾತಿ ಶಿವರಾಜ ಅರಳಿ ಸೆರಗು ೧ಕಪ್ಪುಗಟ್ಟಿದ ಮೋಡದ ಎದೆಬಹುವಾಗಿ ಬಿಗಿದಿದೆ;ಕಳೆಯ ಕಳೆದು.ಸಹಜ ಸ್ಥಿತಿಗೆ ಮರಳದಸವಿತೃವಿನ ಗಂಟಲಲಿಉಸಿರು ಸಿಕ್ಕು ರೋಧಿಸುತಿದೆಹೆಜ್ಜೆ ಮೂಡದ ಕಾಡಲ್ಲಿಆಕ್ರಂದನ;ಆತ೯ನಾದಬೆಂದು ಬಾಡಿದ ಆತ್ಮನಿವಾ೯ತಕ್ಕೆ ನೇಣು ಬಿಗಿದುಕೊಂಡಿದೆಅಂತೆ-ಕಂತೆಗಳ ಕಟ್ಟಲ್ಲ ಇದುನುರಿತು ಪಾಕವಾದ ಎಸಳನ್ನು ಕೇಳಿಬಾಗಿ ದಾಟಿದ ಕಥೆಯನೂಲು ಬಿಡಿಸುತ್ತದೆ ಎಳೆಯಾಗಿ ೨ಆತ್ಮಕ್ಕೂ ಗೊತ್ತಿದೆ;ಅಂಚಿನ ಅಲೌಕಿಕತೆನಾಲಿಗೆಯ ತುಂಡು ದೇಹಕೆ ಕಣ್ಣಿಲ್ಲತುದಿಯಲಿ ಸಿಕ್ಕುಮಾಯವಾಗುವ ನೆರಳಿಗೆಬೆಳಕಿನ ಮೊರೆತ ಎಂದೂ ಕೇಳಿಸದುಬಹುಶಃ ಹುದುಗಿರಬಹುದುಅನುಭೂತಿ, ಅನುಭಾವದ ಕನ್ನಡಿ.ಅನುಗಾಲದ ತುಂತುರು ಹನಿಗಳಲಿಮೊಳೆತ ಚಿಗುರುಗಳುಮಾಯೆಯ ಸರಳಿನ ಉಸಿರುಗಳು.ನಿತ್ಯ ನೆಗೆವ ಜೀವತಂತುವಿನತೆವಲನು ಕಟ್ಟಿ ಹಾಕಲು ಸಾಧ್ಯವೇ.?ಆಳದ ಕೂಪದಲಿ  ಸಿಲುಕಿವಿಹಗನಂತೆ ಕಾಣುವುದು ವಿರಳ..!! ಶಿವರಾಜ ಅರಳಿ

ಶಿವರಾಜ ಅರಳಿ ಅವರ ಕವಿತೆ “ಸೆರಗು” Read Post »

You cannot copy content of this page

Scroll to Top