ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮನೆಯೆಂದರೆ” ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಅವರ ಗಜಲ್‌

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್‌ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ     ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು  ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ  ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಗಜಲ್‌ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” ಐದು ದಶಕದ ಹಿಂದೆ,ಕಾಲ ಸರಳವಾಗಿತ್ತು,ಬದುಕು ಹಸನಾಗಿತ್ತು;ಮಣ್ಣ ಗೋಡೆಯ ತೊಲೆಯ ಹಳೆ ಮನೆಯೊಳಗೆ,ಬೆಳಕಿಂಡಿಯ ಪ್ರೀತಿ ಬೆಳಕುಬಡ ರೈತರ ಬದುಕು ಮೊಬೈಲ್ ಇರದ ದಿನಗಳಲ್ಲಿ,ಮಾತುಗಳು ಮನಸ್ಸನ್ನು ಮುಟ್ಟುತ್ತಿದ್ದವು;ಪತ್ರದ ಬರುವಿಕೆಗಾಗಿ ಕಾಯುವ ಕಣ್ಣುಗಳು,ಬಾಂಧವ್ಯದ ಆಳ ಅಳೆಯುತ್ತಿದ್ದವು. ಜಾತ್ರೆ ಪಾರಿಜಾತದ ಸದ್ದುಓಣಿ ತುಂಬಾ ಆಟದ ಗದ್ದಲ,ಸಿಡಿಯಲು ಸಿದ್ಧ ಪಟಾಕಿ ಮದ್ದುಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,ಕೂಡು ಕುಟುಂಬವೇ ನಮಗೆಒಂದು ದೊಡ್ಡ ನೀತಿ. ಬೀದಿ ದೀಪದ ಕೆಳಗಿನ ಓದು,ಚಿಮಣಿ ಬಡ್ಡಿಯ ಸುತ್ತ ಮಸುಕಾದ ಬೆಳಕು;ಕಷ್ಟ ದುಃಖದ ಮಧ್ಯೆಮಂದಹಾಸದ  ನಗೆ ಇತ್ತು,ಬರಿಗಾಲಲಿ ಶಾಲೆ ಪಾಠನಿತ್ಯ ಕಸರತ್ತು ಇಂದು ಕಾಲ ಬದಲಾಗಿದೆ, ವೇಗ ಹೆಚ್ಚಾಗಿದೆ,ಕೈಯಲ್ಲಿ ಜಗತ್ತಿದೆ, ಆದರೆ ಮನುಜ ಒಂಟಿಯಾಗಿರುವಐದು ದಶಕದ  ಆ ದಿನಗಳು,ನೆನಪಿನ ಪುಟಗಳಲ್ಲಿಅಚ್ಚಳಿಯದೆ ಉಳಿದಿವೆ. ಎಷ್ಟೋ ವರುಷಗಳ ಮೇಲೆಅವಳ ಭೇಟಿಕಣ್ಣಿನಲ್ಲಿ ಮಾತು ಹರಿದವುಮೌನ ಮುರಿದು ಮಾತುಸಂಜೆ ಬಾನಿನ  ಚುಕ್ಕಿ ಮೂಡಿದವುಹುಣ್ಣಿಮೆಯ ಚಂದ್ರ ನಕ್ಕನುಮತ್ತೆ ಗೂಡು ಸೇರಿದೆವು ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನಿನ್ನ ಪ್ರೇಮದ ಸುತ್ತ ಅನುದಿನವೂ ಸುತ್ತುತಿದೆ ಮನಸುನಿನ್ನ ಅನುರಾಗಭರಿತ ಪುಟಗಳನು ಮುತ್ತುತಿದೆ ಮನಸು ನಿನ್ನ ಸಾಂಗತ್ಯವು ನನ್ನ ಕನಸುಗಳಿಗೆ ರೆಕ್ಕೆಯಾಗಿದೆ ಬೇಬಿನನ್ನ ಜೀವತಾಣದ ನೆಲದಲಿ ನಿನ್ನಾಸೆ ಬಿತ್ತುತಿದೆ ಮನಸು ನನ್ನ ಉಸಿರಿನ ಪ್ರತಿತಾಳವೂ ನಿನ್ನ ಹೆಸರು ಗುನುಗುತಿದೆಕಣ್ಣೊಳಗಿನ ಕನಸಲಿ ನಿನ್ನ ರೂಪವೇ ಕೆತ್ತುತಿದೆ ಮನಸು ನನ್ನ ಬದುಕಿಗೆ ವಸಂತ ಮೂಡಿದೆ ನಿನ್ನ ಆಗಮನದಿಂದನಿನ್ನ ನಗುವಿನ ಪ್ರಭೆಯಲಿ ಬಾಳನು ಎತ್ತುತಿದೆ ಮನಸು   ಪರಿಮಳವಾಗಿದೆ ನಿನ್ನ ಸನಿಹವೇ ನನ್ನ ಜೀವಕೆ ಅರಗಿಣಿಮಲ್ಲಿಗೆಯ ಸುಮವನು ಉಸಿರಾಗಿ ಹೊತ್ತುತಿದೆ ಮನಸು ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!”

ಕಾವ್ಯ ಸಂಗಾತಿ ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ,ಮೇಲೊಂದು ಒಳಗೊಂದ ಮಾಡುವುದ ಬಿಡು!! ಅರಿತುಕೊ ನಿನ್ನ., ಕಲಿತುಕೊ ಒಳಿತನ್ನ !! ಬಯಸ ಬೇಡ ನೀ ನನ್ನಿಂದ ಎಂದಿಗೂ,ದುರಾಸೆಯ ನೀ ಬಿಟ್ಟುಬಿಡು!!ಕೊಡುವೆ ನಾ ನಿನ್ನ ರ‍್ಮದ ಫಲ ವ ಕೇಳಿ ಪಡೆಯುವ ಆಸೆ ನೀ ಬಿಟ್ಟುಬಿಡು ಮನುಜ!!ನಿನ್ನಿಂದ ನನಗೆ ಯಾವುದೇ ಆಸೆಯೂ ಇಲ್ಲ,ಕೊಡುತ್ತಿರುವೆ ನಾ ನಿನಗೆ ಕುರಿಯ-ತಲಿ, ಪ್ರಾಣಿಯ-ಬಲಿ ಎಂಬ,ನಾಲಕ್-ಕಾಸಿನ ತೋರಿಕೆಯ ಜೀವನ ನೀ ಬಿಟ್ಟುಬಿಡು ಮನಜ!! ಹಿಂಸೆಯ ಬದಿಗಿಟ್ಟು ದ್ವೇಷವ ನೀ ತೋರದುಬಿಡು,ಪ್ರೇಮದ ದಾರಿಯ ನೀ ಸ್ವೀಕರಿಸು ಮನುಜ !!ಅಸಹಾಯನಿಗೆ ಸಹಾಯ, ಪೀಡಿತನಿಗೆ ಧಾನ,ಸಹಜ ಕರುಣೆಯಲಿ ನೀ ನನ್ನ ಕಾಣುವೆ ಮನುಜ !! ನೀ ಸಹಕರಿಸಿದ, ದೇಹವು ವೊಂದಿಸುತ್ತಿರುವ ಪ್ರತೀ ವೊಂದನೆಯೂ ನನಗೆ ಸ್ವೀಕಾರವಿದೆ. ನಿನ್ನ ನಮನ ಯಾಚಿಸುವ ಆಸೆ ನನಗಿಲ್ಲ,ನೀ ಧ್ಯಾನವೇ ಆಚರಿಸು. ನನಗೆ ನಿನ್ನ ವೊಂದನೆಯೂ ರ‍್ಮವೇ ಸೂಚಿಸಲು ಬಿಡು,ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ!! ಒಪ್ಪಿಕೋ ಪ್ರೇಮವ ದುಃಖದ ಜೀವನ ನೀಬಿಟ್ಟುಬಿಡು ಮನುಜ ನೀ ಬಿಟ್ಟುಬಿಡು ಮನುಜ!! -ವಿನೋದ ತಾವ್ಡೆಕರ್

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ”

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” ಸುರಿದಿದೆ ಸೋನೆಯುಮುತ್ತುಗಳಂದದಿಮುಂಗಾರಿನ ಮಳೆಯುಇಳಿಯುತ ಬಳುಕಿಹಾಲ್ನೊರೆಯಂದದಿಇಳೆಯೊಡಲಿಗೆ  ಧಾರೆಯು… ಬೀಸಿದೆ ಮೆಲ್ಲನೆಸುಳಿಗಾಳಿಯು ಸುತ್ತಲೂತೂಗಿವೆ  ಬೆಳೆಗಳುತಲೆ  ಎತ್ತುತಲಿಹಸಿರಿನ ಶಾಲನುಹೊದೆದಿದೆ  ಕಾನುಬೆಚ್ಚಗೆ ನಿದ್ರೆಯ ಮಾಡುವೊಲು… ಸುಂದರ  ಸಂಜೆಯಜಿಟಿ  ಜಿಟಿ  ಮಳೆಯಲಿಸಾಗುವಾ ಜೊತೆಯಲಿದೂರದ ನಮ್ಮೊಲವಿನ ಮನೆಗೆ… ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್‌ “ಮದ್ದಾಗಬಹುದಿತ್ತು” ಈ ಹೊತ್ತಿಗುನಿನಗು ಹೇಳದಮಾತೊಂದು ಎದೆಯಲ್ಲೇಉಳಿದು ಮುಳ್ಳಾಗಿ ಚುಚ್ಚು ತ್ತಿದೆ ಆಮಾತು ಏನೆಂದು ಕೇಳುವಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದಗಾಯಕ್ಕಾದರೂ ಮದ್ದಾಗಬಹುದಿತ್ತು ಅದೆಲ್ಲಾ ಬಿಡುನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದುಗಾಯವಾಗಿ ಈಗ ಬದುಕನ್ನೇಬಲಿ ಕೇಳುತ್ತಿದೆಎನ್ನುವ ಸತ್ಯದ ಅರಿವು ನಿನಗಿಲ್ಲ ನನಗೋಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನುಬದುಕಿಸಿಬಿಡುವ ತಹತಹಿಕೆ ಈಗಬದುಕಿನ ಬದಲಾಗಿನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನುಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆನಾನೂ ಗೆದ್ದುಬಿಡುವೆ ಡಾ.ಭಾರತಿ ಅಶೋಕ್

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಮಳೆಯ ಹನಿಯೊಂದು ಮುತ್ತಿಕ್ಕಿತ್ತು ಧರೆಗೆಕಾನನದ ಹೂವೊಂದು ಅರಳಿತ್ತು ಕೊನೆಗೆ ಪ್ರಕೃತಿ ಸೊಬಗ ಸವಿಯಲು ಕಾದು ನಿಂತಿಹೆಹರ್ಷದಿ ನವಿಲೊಂದು ನರ್ತಿಸಿತ್ತು ಮಳೆಗೆ ಅಲ್ಲೊಂದು ಕುಹೂ ಗಾನ ಮೈಮರೆಸಿತ್ತು ಕ್ಷಣನಿನ್ನೊಲವಿನ ಓಲೆಯೊಂದು ತಲುಪಿತ್ತು ನನಗೆ ಮೇಘ ಸಂದೇಶದೊಳು ರವಾನಿಸುವ ತವಕಪ್ರೇಮದ ಬಾಣವೊಂದು ಚುಚ್ಚುತ್ತಿತ್ತು ಎದೆಗೆ ಒಲವಿನ ಜಾಲದೊಳು ಸಿಲುಕಿಹಳು ರೇಖೂಮಳೆಬಿಲ್ಲ ಬಣ್ಣವೊಂದು ಸಿಂಗರಿಸಿತ್ತು ಮುಡಿಗೆ ರೇಖಾಕ್ಷರ 

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಕಣ್ಣೆದುರಿನ ಸತ್ಯ” ಕೇಳಿ…!ಇದು ಕಥೆಯಲ್ಲ…ಕಲ್ಪನೆಯೂ ಅಲ್ಲ…ನಮ್ಮ ಕಣ್ಣೆದುರೇ ಪ್ರತಿದಿನ ನಡೆಯುವಕಟು ಸತ್ಯ! ರಸ್ತೆಯ ಬದಿಯಲ್ಲಿಹಸಿವಿನಿಂದ ಅಳುವ ಮಗುವನ್ನುನೋಡಿದ ಕಣ್ಣುಗಳೇ…ಮೊಬೈಲ್ ಪರದೆಯ ಮೇಲೆನಗುವಿನ ಚಿಹ್ನೆಗಳನ್ನು ಹುಡುಕುತ್ತಿವೆ! ಒಂದು ಕಡೆಅನ್ನ ಕಸದ ಬುಟ್ಟಿಗೆ ಬೀಳುತ್ತಿದೆ…ಮತ್ತೊಂದು ಕಡೆಒಂದು ತುತ್ತಿಗಾಗಿಪ್ರಾಣವೇ ಒಣಗುತ್ತಿದೆ! ಹೆಣ್ಣಿನ ಕಣ್ಣೀರಿಗೆಬೆಲೆ ಕಟ್ಟುವ ಸಮಾಜ…ಅವಳ ಕನಸುಗಳಿಗೆ ಮಾತ್ರಬೆಲೆಯೇ ಇಲ್ಲ!ನ್ಯಾಯದ ಮಾತು ದೊಡ್ಡದು…ನ್ಯಾಯದ ನಡೆ ಮಾತ್ರಇನ್ನೂ ಕುಂಟುತ್ತಲೇ ಇದೆ! ಮರವನ್ನು ಕಡಿಯುವ ಕೊಡಲಿಯೇಬಿಸಿಲಿಗೆ ನೆರಳು ಹುಡುಕುತ್ತಿದೆ.ಪ್ರಕೃತಿಯನ್ನು ಗಾಯಗೊಳಿಸಿದ ಮನುಷ್ಯ,ಪ್ರಳಯ ಬಂದಾಗಆಕಾಶವನ್ನೇ ಪ್ರಶ್ನಿಸುತ್ತಿದ್ದಾನೆ! ಧರ್ಮದ ಹೆಸರಿನಲ್ಲಿಗೋಡೆಗಳನ್ನು ಕಟ್ಟಿದ್ದೇವೆ…ಮಾನವೀಯತೆಯ ಹೆಸರಿನಲ್ಲಿಒಂದು ಸೇತುವೆಯನ್ನಾದರೂ ಕಟ್ಟಿದ್ದೇವೆಯೇ? ಕಣ್ಣೆದುರಿನ ಸತ್ಯವನ್ನುಮುಚ್ಚಲು ಸಾಧ್ಯವಿಲ್ಲ!ಮೌನದಿಂದಬದಲಾವಣೆ ಬರಲಾರದು! ಎದ್ದೇಳಿ!ಪ್ರಶ್ನಿಸಿ!ಅನ್ಯಾಯದ ಮುಂದೆತಲೆಬಾಗಬೇಡಿ! ಒಂದು ಧ್ವನಿಸಾವಿರ ಧ್ವನಿಗಳಿಗೆ ದಾರಿ.ಒಂದು ಹೆಜ್ಜೆಹೊಸ ಸಮಾಜದ ಆರಂಭ. ನೆನಪಿರಲಿ…ಸತ್ಯಕ್ಕೆ ಕಣ್ಣುಗಳಿಲ್ಲ,ಆದರೆಅದನ್ನು ನೋಡುವ ಕಣ್ಣುಗಳುನಮ್ಮಲ್ಲಿರಬೇಕು! ಕಣ್ಣೆದುರಿನ ಸತ್ಯವನ್ನುಕಂಡು ಮೌನವಾಗಬೇಡಿ…ಕಂಡು ಬದಲಾಗಿ…ಕಂಡು ಬದಲಾಯಿಸಿ…ಏಕೆಂದರೆ,ನಾಳೆಯ ಇತಿಹಾಸನಮ್ಮ ಇಂದಿನ ಧೈರ್ಯದಿಂದಲೇ ಬರೆಯಲ್ಪಡುತ್ತದೆ! ಎನ್.ಜಯಚಂದ್ರನ್. ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ” Read Post »

You cannot copy content of this page

Scroll to Top