ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಮಳೆ” ಮನೆ ತುಳಸಿ ಬಾಡಿತು,ಹೊಸ್ತಿಲ ದೀಪ ಆರಿತು;ಒಂದೇ ಸೂರಿನ ನೆರಳಲಿನಗುವು ಮೌನ ಸೇರಿತು. ಮಾತು ಹಕ್ಕಿ ಹಾರಿತು,ಮೌನ ಗೂಡು ಕಟ್ಟಿತು;ಕೈಯ ಸ್ಪರ್ಶವಿದ್ದರೂಮನಸು ದೂರ ಸರಿಯಿತು. ನಂಬಿಕೆ ಮೊಗ್ಗು ಬಾಡಿತು,ಸ್ವಾರ್ಥ ಗಾಳಿ ಬೀಸಿತು;ಅರಳುವ ಮೊದಲೇ ಪ್ರೀತಿಧೂಳಾಗಿ ಉದುರಿತು. ಕಾದ ಕಣ್ಣ ಬೆಳಕಲಿಹೊಸ್ತಿಲ ನೆರಳು ನಿಂತಿತು;ಹೆಜ್ಜೆ ಸದ್ದು ಮೂಡದೆಸಂಜೆ ಮೌನ ಹರಡಿತು ಒಣ ಮಣ್ಣ ಮಡಿಲಲಿಬೀಜ ಇನ್ನೂ ಮಲಗಿತು;ಪ್ರೀತಿಯ ಮೊದಲ ಹನಿಯಲಿಬಂಧ ಮತ್ತೆ ಚಿಗುರಿತು. ✍️ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮೌನ” ಮೌನವೆಂದರೆ ಮಾತಿಲ್ಲದ ಸ್ಥಿತಿಯಲ್ಲಮನದ ಮಾತುಗಳ ಸಮ್ಮಿಲನ ಮೌನವೆಂದರೆ ಶೂನ್ಯವಲ್ಲಸಾವಿರ ಭಾವನೆಗಳ ಸಾಗರ ಮೌನವೆಂದರೆ ಪದಗಳ ಅಂತ್ಯವಲ್ಲಅಂತರಂಗದ ಅರಿವಿನ ಆರಂಭ ಮೌನವೆಂದರೆ ಅಂತರವಲ್ಲಜೀವ ಭಾವದ ಸೇತುವೆ ಮೌನವೆಂದರೆ ದೌರ್ಬಲ್ಯವಲ್ಲಸಂಯಮ ಸಹನೆಯ ಪ್ರತಿಕ ಮೌನವೆಂದರೆ ಕತ್ತಲೆಯಲ್ಲಆತ್ಮಜ್ಞಾನದ ಹೊಂಬೆಳಕು ಮೌನವೆಂದರೆ ಖಾಲಿತನವಲ್ಲಸಚ್ಛಿಂತನೆಗಳ ಚಿಲುಮೆ ಮೌನವೇ ಆತ್ಮಾವಲೋಕದ ಆಗರಮೌನವೇ ಮನಶಾಂತಿಯ ಮಂದಿರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ”

ಕಾವ್ಯಸಂಗಾತಿ ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” ಮಕ್ಕಳ ಮೊದಲ ಹೀರೋ ಅಪ್ಪನೆಂಬ ದಿವ್ಯಪುರುಷಈ ಜಗದಲ್ಲಿ ಕಾಣಸಿಗುವ ಒಂದು ಅದ್ಭುತ ಹರುಷ ಮನದಲ್ಲಿ ಮನೆ ಮಾಡುವ ಈ ನಗುವಿನ ಸ್ಪರುಷಜೊತೆಯೊಳು ಸದಾ ಇದ್ದರೆ ಎಲ್ಲಿಲ್ಲದ ಒಂದು ಪೌರುಷ ಹಗಲಿರಲು ದುಡಿದು ದಣಿದು ಬೆವರ ಹನಿಯ ಹರಿಸುತ್ತಾ ಸಂಸಾರಕ್ಕೆ ನೀನಾದೆ ಗಟ್ಟಿ ಶಕ್ತಿ ಜವಾಬ್ದಾರಿಯೊಳು ಕಟು ಭಕ್ತಿ ಹಗಲು ಇರುಳು ಬೆಳಗಲು ಇರುವಂತೆ ಸೂರ್ಯ ಚಂದ್ರಮಕ್ಕಳ ಮುದನಗು ಮೂಡಲುಇರೋತ್ಯಾಗಿ ಅಪ್ಪನೆಂಬ ವಜ್ರ ಹೃದಯದಲ್ಲಿ ಜನ್ಮಿಸಿದಈ ಭಕ್ತಿಯ ಸಾಲುಗಳು ನಿನಗರ್ಪಣೆ ಓ ಜನ್ಮದಾತನೆ ಅಪ್ಪನೆಂಬ ಸ್ಪೂರ್ತಿದಾತನೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” Read Post »

ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಣುಕಾತಾಯಿ. ಸಂತಬಾ ಗಜಲ್ ಬಾಳ ತಿರುಗುಣಿಯಲಿ ತಿರುಗಿ ತಿರುಗಿ ತಂದನು ತರಹೇವಾರಿ ಕನಸನುಸಂಸಾರದ ಸಂತೆಯಲಿ ತೂಗಿ ತೂಗಿ ತಂದನು ತರಹೇವಾರಿ ಬಣ್ಣವನು.ll ರಾತ್ರಿ ಹಗಲೆನ್ನದೆ ಗಾಣದ ಎತ್ತಿನಂತೆ ದಣಿಯಲಾರದ ದಣಿಯಿವನು,ದೋತರದಲಿ ಕಷ್ಟದ ಗಂಟು ಕಟ್ಟಿ ತಂದನು ತರಹೇವಾರಿ ಸುಖವನು.ll ಬಿಸಿಲು ಮಳೆಯನ್ನದೆ ದುಡಿ ದುಡಿದು ಸಣ್ಣಗೇನೆ ನರಳಿದವನು,ಮಮತೆಯಲಿ ಬಾನಷ್ಟು ಬಾಗಿ ತಂದನು ತರಹೇವಾರಿ ನಕ್ಷತ್ರವನು.ll ಬೊಗಸೆಯಷ್ಟು ನಿದ್ರೆಯನು ಮಾಡಿ ಸಾಗರದಷ್ಟು ಎಚ್ಚರವಿದ್ದವನು.ಗಂಧದಂತೆ ನುಣ್ಣಗೆ ತೇದು ತೇದು ತಂದನು ತರಹೇವಾರಿ ಸುಗಂಧವನು.ll ತಾಯಿಗೆ ಕೈ ತುಂಬಾ ಪ್ರೀತಿಯ ಮಲ್ಲಿಗೆ ಕೊಟ್ಟು ಮೆಲ್ಲಗೆ ಸರಿದವನು,ಅವ್ವನ ಸಿಡುಕಿಗೆ ನಕ್ಕು ಮರಳಿ ತಂದನು ತರಹೇವಾರಿ ಸಾಮಾನನು.ll ಡಾ.ರೇಣುಕಾತಾಯಿ. ಸಂತಬಾ.

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

 ಮಧು ವಸ್ತ್ರದ ಅವರ ಗಜಲ್               

ಕಾವ್ಯ ಸಂಗಾತಿ  ಮಧು ವಸ್ತ್ರದ ಗಜಲ್                ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವುಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ ತುಂಬಿಸುವ ಹೊಣೆ ನಿನ್ನದಾಗಿದೆಉತ್ತು ಬಿತ್ತಿ, ಸಮೃದ್ಧ ಫಸಲ ಬಯಸುವ ರೈತನೊಡನೆ ನೇಗಿಲ ಹೂಡಲು ಬಾ ಮುಂಗಾರು ಮಳೆಯೇ ಓಡುತಿಹ ಕರಿಮೋಡಗಳ ಕಂಡು ಗಿರಿನವಿಲು, ಮಳೆ ಸುರಿಸಿರಿ, ನಾ ಗರಿಗೆದರಿ ನರ್ತಿಸುವೆ ಎನುತಿದೆಕಾಡಿನ ಕೋಗಿಲೆಯೊಡನೆ ಮೇಘಮಲ್ಹಾರ ರಾಗದಿ ಋತುಗೀತೆ ಹಾಡಲು ಬಾ ಮುಂಗಾರು ಮಳೆಯೇ ಅಡ್ಡಾದಿಡ್ಡಿಯಾಗಿ ಸುರಿಯುತ ನಿನ್ನೆಲ್ಲ ಉತ್ಸಾಹ ಉಲ್ಲಾಸವನು ಧರಣಿಯೊಡನೆ ಹಂಚಿಕೊಂಡುಬಿಡುಗುಡ್ಡಗಾಡಿನಿಂದಿಳಿದು ಶರಧಿಯ ಸೇರಲು ತುಡಿವ ನದಿಯೊಡನೆ ಓಡಲು ಬಾ ಮುಂಗಾರು ಮಳೆಯೇ ಗುಡುಗು ಸಿಡಿಲುಗಳ ನಡುವೆ ಮಿಂಚುತ ಆರ್ಭಟಿಸುತ ಆಕಾಶದಿಂದ ಧರೆಯೆಡೆಗೆ ಸುರಿಯಬಾರದೇಗಡಗಡ ನಡುಗುತ ಶಾಲೆಗೆ ಹೋಗುವ ಮಕ್ಕಳೊಡನೆ ನೀರಾಟ ಆಡಲು ಬಾ ಮುಂಗಾರು ಮಳೆಯೇ ಮಧುರ ಭಾವದ ಕಬ್ಬಿಗರ ಮನದಲಿ ಮೊದಲ ಮಳೆ ಸ್ಪೂರ್ತಿ ಕಾರಂಜಿಯನು ಉಕ್ಕಿಸಬಲ್ಲದುಅಧರದಂಚಲಿ ನಗೆ ಸೂಸುವಂತಹ ಚೆಂದದ ಕವಿತೆಯಾಗಿ ಮೂಡಲು ಬಾ ಮುಂಗಾರು ಮಳೆಯೇ ————- ಮಧು ವಸ್ತ್ರದ

 ಮಧು ವಸ್ತ್ರದ ಅವರ ಗಜಲ್                Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ಅರುಣಾ ಮೇಡಂ ಅವರ ಗಜಲ್ ನಿಂದ ಪ್ರೇರಿತ ) ಅಂತರವಿದ್ದರೂ ಅಂತರಂಗ ಸೇರುವ ನಿನ್ನ ಕಲೆಗೆ ಏನೆನ್ನಲಿಇರುಳಾದರೆ ಕಣ್ಣ ಸೇರಿ ಕನಸಾಗುವ ಪರಿಗೆ ಏನೆನ್ನಲಿ ನಾ ನೋಡಿದರೇ, ನಾನೇ ಕಾಣಿಸಬೇಕಲ್ಲವೇ ಸಾಕಿದರ್ಪಣದಿ ನೀ, ನನ್ನ ಪ್ರತಿಬಿಂಬವಾಗುವ ಪ್ರೀತಿಗೆ ಏನೆನ್ನಲಿ ಮೌನವೂ,ಪದಗಳಾಗಿ ಮನ ಸೇರಲು ಹಪಹಪಿಸುವವೇನನ್ನ ಏಕಾಂತಕೆ,ನೀ ದನಿಯಾಗುವ ನಡೆಗೆ ಏನೆನ್ನಲಿ ಪ್ರತಿ ನೋವಿಗೂ ಹಕೀಮನಲ್ಲಿ ಔಷಧಿಯಿರುವುದಿಲ್ಲ ನಿಜನೀ ಕಾಣದ ಗಾಯಗಳನೂ ಮಾಯಿಸುವ ಮೋಡಿಗೆ ಏನೆನ್ನಲಿ ಬಿಸಿಲಿಗೆ ವಾಣಿ ನಿಂತರೇ,ನೀ ಬೆವರುವೆಯಾ ಗೆಳೆಯದೂರವಿದ್ದು ಹೀಗೆ ಸನಿಹವಾಗುವ ಸನ್ನೆಗೆ ಏನೆನ್ನಲಿ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

“ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ

ಕಾವ್ಯ ಸಂಗಾತಿ ಡಾ.ಶಿವಕುಮಾರ್ ಮಾಲಿಪಾಟೀಲ “ನಮಗ ಮಳೆ ಯಾಕ ಬೇಕು” *ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಡಿವಿ**ಹೊಲ ಗದ್ದೆ ಮುಚ್ಚಿ ಬಂಗಲೆ ,ಬಾರ್ ಕಟ್ಟಿವಿ**ಕೆರೆ,ಬಾವಿ ಮುಚ್ಚಿ ಮೆಟ್ರೋಮಾಲ್ ಕಟ್ಟಿವಿ**ಇನ್ವೆಸ್ಟ್ ಕರ್ನಾಟಕ ಹೆಸರಲ್ಲಿ ಬಂಡವಾಳ ಶಾಹಿಗಳಿಗೆ  ಸಾವಿರಾರು ಎಕರೆ ಭೂಮಿ ಕೊಟ್ಟಿವಿ ಹಿಂಗಿದ್ದಾಗ**ನಮಗ ಮಳೆ ಯಾಕೆ ಬೇಕು?*  *ವಿಂಡ್ ಪ್ಯಾನ್ , ಸೋಲಾರ್*,*ರಿಯಲ್ ಎಸ್ಟೇಟ್ , ರೇಸಾಲ್ಟ್ ಫ್ಯಾಕ್ಟರಿಗಳ ಹೆಸರಲಿ ಹೊಲ ಬರಡು ಮಾಡಿವಿ**ಅಭಿವೃದ್ಧಿ ಹೆಸರಲ್ಲಿ ಸಿಕ್ಕ ಸಿಕ್ಕಂಗ ಗಿಡ ಮರಗಳ ಕಡದಿವಿ**ಹಿಂಗಿದ್ದಾಗ  ನಮಗ ಮಳೆ ಯಾಕೆ ಬೇಕು?* *ಹಳ್ಳಿ ಯಾರಿಗೆ ಬೇಕಾಗೈತಿ?**ಊರು ಗೌಡನಿಗೆ ನಗರದಲ್ಲಿ ಸೆಕ್ಯೂರಿಟಿ ಗಾರ್ಡ ನೌಕರಿ ಸಿಕ್ಕೈತಿ**ನಾಯಕರು ನೀರಾವರಿ ಇಲಾಖೆ ಬೇಡ ,  ನಗರಾಭಿವೃದ್ಧಿ ಇಲಾಖೆ ಬೇಕು ಅಂತಾರ ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* *ದನ ಕರು , ಹೈನದ ಚಿಂತಿಯಾಕ*,*ಹಾಲು ಮೊಸರು ತುಪ್ಪ  ಪ್ಯಾಕೇಜ್ ನಲ್ಲಿ ಸಿಗತೈತೆ**ಹಬ್ಬದಾಗ ಸೆಗಣಿ ಬೇಕೆಂದರೆ online ನಲ್ಲಿ ಸಿಗತೈತೆ**ಒಕ್ಕಲುತನ ಎಲ್ಲರಿಗೂ ಬ್ಯಾಡ ಆಗೈತೆ ಹಿಂಗಿದ್ದಾಗ  ನಮಗ ಮಳೆ ಯಾಕೆ ಬೇಕು?* *ಯೋಚಿಸುವುದಕ್ಕೆ AI ,ChatGPT ಐತೆ**ಕೆಲಸ ಮಾಡಾಕ Robots ಅದಾವು**ಬದುಕಲು ಸರಕಾರ ಉಚಿತ ಭಾಗ್ಯಗಳ ಕೊಟ್ಟೈತೆ*,*ಮಹಿಳೆಯರು ತಿರಿಗ್ಯಾಡಲು ಬಸ್ ಫ್ರೀ ಬಿಟ್ಟೈತೆ**ಅಡಿಗೆ ಮಾಡೋದೆ ಬೇಕಿಲ್ಲ , Zomato ,Swiggy ಹೊಟ್ಟೆ ತುಂಬಿಸಿ ಬಿಡತಾವು**ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* *ಕುಡಿಯಾಕ ನೀರು ಬೇಕೆಂದರೆ**ಖಗ್ರಾಸ ಹಳ್ಯಾಗು  ಬಾಟಲ್ ನೀರು ಸಿಗತೈತೆ**ನೀರ ಸಿಗದಿದ್ದರೂ ಬೀರಂತು ಸಿಕ್ಕ ಸಿಗತೈತೆ**ಸರಕಾರ ಮುಜರಾಯಿ , ಸರಾಯಿ ಹಣ ಮೇಲೆ ನೆಡಿತೈತೆ ಅಂದರೆ  ನಮಗ ಮಳೆ ಯಾಕ ಬೇಕು?* *ರೊಕ್ಕ ಬೇಕೆಂದರೆ ಪೊನ್ ಪೇ , ಗೂಗಲ್ ಪೇ ಐತೆ**ಟೈಮ್ ಪಾಸ್ ಮಾಡಾಕ* *WhatsApp ,FB , Instagram ಐತೆ ,reels ಮಾಡಿ ಬಿಡಾಕ social media ಐತೆ* *ಜನರು ಜಗಳಾಡಾಕ ಜಾತಿ ಧರ್ಮ ಅದಾವು**ಹಸಿರು , ಕೆಸರಿನಲ್ಲಿ ನಾಯಕರಿಗೆ ಅಧಿಕಾರ ಸಿಗತೈತೆ**ಬರಗಾಲ ಬಂದರೂ ಅನುದಾನ ಸಿಗತೈತೆ ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* ಡಾ.ಶಿವಕುಮಾರ್ ಮಾಲಿಪಾಟೀಲ 

“ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು” ಅಪ್ಪಾ ಹಗಲಿನ ಸೂರ್ಯನಂತೆ ,ಸಲಿಗೆ , ಸಾಮೀಪ್ಯ ಇರದ ,ಹತ್ತಿರ ಹೋಗಲು ಒಂದು ರೀತಿಯ ಭೀತಿ ,ಮಾತಿನಲ್ಲಿ ಬಿಗಿಯಾದ ಗತ್ತು , ಗಾಂಭೀರ್ಯ.ಒಮ್ಮೆ ತಣ್ಣಗಿನ ಮುಖ ಛಾಯೆ ,ಮರು ಘಳಿಗೆ ಕೆಂಡಾಮಂಡಲ ,ಆದರೂ ಅವನಿಲ್ಲದೆ ಬಾನು ಇಲ್ಲಬದುಕು ಇಲ್ಲ……. ಅವ್ವಾ ರಾತ್ರಿಯ ಚಂದಿರನಂತೆ ,ಸದಾ ಸುಸೂವ ಚಂದ್ರಿಕೆಯ ತಂಪು ,ಮಂದವಾಗಿ ಬೆಳಗುವಳು ನಿರಂತರ .ಎಂದೂ ಕುಪಿತಳಾಗದ ಹಸನ್ಮುಖಿ ,ಮಕ್ಕಳನು ಮುದ್ದಿಸಿ , ಬಾಚಿ ತಬ್ಬುವಳು ,ಅಪ್ಪಾ ಇದ್ದಾಗ ಅವಳಿಗೆ ಸ್ವತಂತ್ರ ಇಲ್ಲ……. ನಾವು ಮಕ್ಕಳು ಅವರಿಬ್ಬರ ಬೆಳಕಿನಲ್ಲಿನಲಿಯುವ ತಾರೆಗಳು.ಅಪ್ಪನ ಆಸರೆ ಹಗಲಿಗೆ ,ಅವ್ವನ ಆಸರೆ ಇರುಳಿಗೆ ,ಇಬ್ಬರು ಇದ್ದರೆ ಮಾತ್ರನಮ್ಮ ಅಸ್ತಿತ್ವ ಜೀವ ಕಳೆ …… ಬಾಳ ಬಾನಿನ ಸುಖಿ ಕುಟುಂಬನಮ್ಮದೇಂಬ ಹೆಮ್ಮೆ ನನ್ನದು…..                                    . ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು” ತಮ್ಮ ಹರಿವಿನ ದಾರಿಯಲ್ಲಿ ಸಿಕ್ಕಪ್ರತಿಯೊಂದರ ದಾಹವನ್ನೂ ತಣಿಸುತ್ತಾಪ್ರತಿ ತೀರವನ್ನೂ ಸ್ಪರ್ಶಿಸುತ್ತಾಮುಂದೆ ಸಾಗುವವು ನದಿಗಳು!ತಮ್ಮ ನೀರ ತುಳಿದು ಆಡಿದವರಕುಡಿದು ಉಗಿದವರತೆಗೆದುಕೊಂಡು ಬಳಸಿಕೊಂಡವರ ಲೆಕ್ಕವಿಡುವುದಿಲ್ಲ! ನಾವು ನದಿಗಳ ಆಳವನ್ನು ಅರಿಯದೆಅವುಗಳ ಉದಾರತೆಯನ್ನೇ ಉದಾಸೀನ ಮಾಡಿಮಮತೆಯನ್ನೇ ಮೈಲಿಗೆ ಮಾಡಿದುರುಪಯೋಗಪಡಿಸಿಕೊಳ್ಳುತ್ತೇವೆ! ಒಂದು ಕಾಲದಲ್ಲಿಚೀರುತ್ತಾ ಹಾಡುತ್ತ ಹಾರುತ್ತ ಹರಿಯುತ್ತಿದ್ದ ನದಿಒಳಗೊಳಗೇ ಕುಸಿಯುತ್ತಾ ಕುದಿಯುತ್ತಾ ಕರಗುತ್ತಾಮೌನವಾಗಿಬಿಡುತ್ತದೆ! ಅತ್ಯಂತ ದಯೆಯುಳ್ಳ ಹೃದಯಗಳಿಗುದಣಿವು ಆಗುತ್ತದೆ!ಅದು ಅಸಹಾಯಕತೆ ಕೋಪದನಿರ್ಬಲತೆ ನಿರಾಸೆಯ ದಣಿವಲ್ಲ!ಯಾರನ್ನೂ ದ್ವೇಷಿಸದ ದಣಿವು!ಯಾರನ್ನು ಬೇಸರಿಸದ ದಣಿವು!ಯಾರನ್ನು ಹಚ್ಚಿಕೊಳ್ಳದ ದಣಿವು!ಯಾರನ್ನು ಅಪ್ಪಿಕೊಳ್ಳದ ದಣಿವು! ನದಿಗಳುಪ್ರೀತಿಯ ಬಾಹುಗಳು!ಮಮತೆಯ ಮಡಿಲುಗಳು!ಭೂಮಿಯ ಎದೆಯ ಮೇಲೆಹರಿದ ಕರುಣೆಯ ರೇಖೆಗಳು!ಬತ್ತಿದ ಕನಸುಗಳಿಗೆ ಜೀವ ತುಂಬುವಅಮೃತದ ಉಸಿರುಗಳು!ತಮ್ಮ ದಾಹ ಮರೆತುಇತರರ ಬದುಕು ಹಸಿರಾಗಿಸುವನಿಸ್ವಾರ್ಥ ಆತ್ಮಗಳು! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಏಕೈಕ ಜೀವ, ನನ್ನಪ್ಪ” Background ನಲ್ಲಿ ಅಳುವನಮ್ಮ ಮುಂದೆ ನಗುತ ಇರುವಏಕೈಕ ಜೀವ ಅದೇ ಅಪ್ಪ… ಆತನ ಬೆವರ ಹನಿ ಕಾಣ್ತದಆದ್ರ ಆತನ ಕಣ್ಣೀರ ಹನಿಯಾರಿಗೂ ಕಾಣದು… ತನ್ನವರ ಮೊಗದ ಮೇಲಿನನಗುವ ಕಂಡು ನಗುತಲಿರುವತನ್ನ ನೋವನೆಂದು ತೋರಿಸದವ… ಉಸಿರು ಕೊಟ್ಟ ಜೀವಕೆ ಹೆಸರುಕೊಟ್ಟ ಹೃದಯ ಅವನ ಹೆಸರೆಹೆಮ್ಮೆಯದು ಮಕ್ಕಳಿಗೆ… ಈ ಒಂದಿನ ಸಾಕೇನು ಮಾಡಲುಅಪ್ಪನ ಗುಣಗಾನ ಈ ಕಾಲ ಸಾಲದುಪಡೆಯಬೇಕು ಮರುಜನ್ಮಾನ… ಈ ಅಕ್ಷರಗಳಿಗೆ ಹೋಲಿಸಲಾಗದವನಮ್ಮ ಭಾವಕ್ಕೂ ನಿಲುಕದವಆಗಸದಗಲ ವಿಶಾಲ ಮನೋಭಾವದವ…. ನಗುವ ನಗಿಸುವ ಹೂವಿಗಿಂತಲೂಮೃದು ಮನದವ ಕೋಪಬಂದರಂತೂ ಕಾಲಭೈರವ… ಈ ಜಗದಲಿ ಅಪ್ಪನ ಮುಂದೆಸರಿಸಾಟಿ ಯಾರಿಲ್ಲವೊಅವ ನಮ್ಮ ಜೀವ ದೈವ…. ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ” Read Post »

You cannot copy content of this page

Scroll to Top