ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನ್ನಪೂರ್ಣ ಪದ್ಮಸಾಲಿ ಅವರ ಕವಿತೆ “ಹೂವು ಮತ್ತು ಕದನ”

ಕಾವ್ಯ ಸಂಗಾತಿ ಅನ್ನಪೂರ್ಣ ಪದ್ಮಸಾಲಿ “ಹೂವು ಮತ್ತು ಕದನ” ಹೂವುಕಂಡಾಗ ನದಿಯ ನೀರಿನೊಡನೆಈಜಾಡಿದ ಹಾಗೆಕದನಕಂಡಾಗ ಬೆಂಕಿಯೊಡನೆಕಾದಾಡಿದ ಹಾಗೆಪರಿಹಾರ ಕಾಣದ ತಂಪು – ಬಿಸಿಕದನವಿದು ಖಾಲಿ ಖಾಲಿ ಇದ್ದಂತೆಇಬ್ಬರಲ್ಲೂ ….ಗೆದ್ದವರು ಸೋತ ಹಾಗೆ!ಸೋತವರು ಸತ್ತ ಹಾಗೆ! ಹೂವಿನಂತಹ ಬದುಕಿನೊಡನೆಇರುವಷ್ಟು ಹೊತ್ತು ಬಾಗಿಕೊಂಡ ಹಾಗೆಬದುಕಿದರೆ.. ಹೀಗೆಆಹಾ! ಎನುವ ವಿಸ್ಮಯದ ಹೂವುಕೊಲುವವನ ಕೈಯಲ್ಲಿಇಬ್ಬರೂತಮ್ಮ ಕ್ರೂರತೆಯನ್ನುಮರೆತುನೋಡುವ ಚುಂಬಕದ ರೇವು ಆದಾಗ್ಯೂಗುಂಡುಗಳ ಸುರಿಮಳೆಯಲ್ಲಿನೆತ್ತರಿನ ಮಡುವಲ್ಲಿಲಾಭ – ನಷ್ಟಗಳ ಲೆಕ್ಕಾಚಾರವೆಲ್ಲಿ?ಗೊತ್ತುಂಟೆ….ಕ್ಷಣಕ್ಷಣಕ್ಕೂ ವಿಸ್ತರಿಸುವ ವಿಶ್ವದನಿತ್ಯ ಅನಂತ ಅವಿರ್ಭಾವದಚಿರನೂತನತೆಯ ಬ್ರಹ್ಮಾಂಡದ ಕೊನೆಯತನಕಬದುಕುವಹಂಬಲದಿಂದ ನಡೆಯುವ ನವನವೀನ ಕದನಗಳುಗಂಭೀರ ವಿಚಾರಗಳುವಾದವಿವಾದಗಳು ತರ್ಕ ವಿತರ್ಕಗಳುಹೂವು, ನೋವು, ನಲಿವುಗಳ ಶಿಲಾಶಾಸನಕಾಲ ವಿಶ್ರಮಿಸಿಕೊಳ್ಳಲು ಉಳಿಸಿದಒಂದು ಹಳೆಯ ಆಸನ ಈ ಕದನಗಳುಯುಗ ಯುಗಗಳ ಬಯಲಾಟಕೃತದಿಂದ ಕಲಿಯವರೆಗೆಜೀವದ ಹೂವುಗಳು ಪಾಠ ಕಲಿಯುವವರೆಗೆ..!!ನಡೆಯುತ್ತಲೇ ಇರುತ್ತವೆಯೇ…?! ಅನ್ನಪೂರ್ಣ ಪದ್ಮಸಾಲಿಕೊಪ್ಪಳ

ಅನ್ನಪೂರ್ಣ ಪದ್ಮಸಾಲಿ ಅವರ ಕವಿತೆ “ಹೂವು ಮತ್ತು ಕದನ” Read Post »

ಕಾವ್ಯಯಾನ

ತ್ಯಾಗರಾಜು.ಎನ್ ಅವರ ಕವಿತೆ “ನಾ ಮೀಸಲು”

ಕಾವ್ಯ ಸಂಗಾತಿ ತ್ಯಾಗರಾಜು.ಎನ್ “ನಾ ಮೀಸಲು“ ನೀ ಬಾ,ಬಾರದಿರು ಎನ್ನ ನೋಡಲುಎಂದೆಂದೂ ನೀನಿರುವೆ ಎನ್ಮನದಲಿ.ನೀ ಕಾದರೂ ಕಾಯದಿದ್ದರೂ,ಎನ್ಮನ ಕಾಯುತಿರುವುದು ಎಂದೆಂದಿಗೂ,ನಿನ್ನಗಲಿಕೆಯ ಮಧುರ ನೋವ ಮೀಯುತ,ನೀ ಅಂದು ಕೊಟ್ಟ ಸಿಹಿ ನೆನಪುಗಳ ಸವಿಯುತ.ನೀ ಎಂದು ಬರುವೆಯೋ ನಾ ಕಾಣೆ,ಬಂದು ಬರದಂತೆ ಹೊರಡುವುದೂ ನಾ ಮಾಣೆ,ನಾ ಬಲ್ಲೆನಾದರೂ ಕಾಯುವೆನುನಿನ್ನ ಬಿಸಿಯುಸಿರ ಔತಣಕೆ,ಬಿಸಿಯ ಕಾವುಗಳನೆಲ್ಲ ಸರಿಸಿಹಸಿಹಸಿದು ಕಾದಿರುವೆ.ನಿನ್ನೊಳಗಿನಂತರಾಳವ ಅರಿತೂಅರಸಿರುವೆ ಬಯಸಿರುವೆ.ಎನ್ಮನದೊಡೆಯ ಎನ್ಮವ ಅರಿವೆಯಾ,ಎನ್ನೊಡಲ ಸೇರುವಿಯೆಂದುಕಾದಿಹುದೀ ಮಡಿಲು.ನಿನ್ನ ತಲೆಯ ನೇವರಿಸಿಸರಿಸಿ ಎಲ್ಲ ನೋವುಗಳಅಪ್ಪಿಕೊಳಲರಸಿಹುದು.ಎಂದು ಬರುವೆಯೋ ಕಾಣೆಬರದೆ ಹೋಗುವುದೂ ಮಾಣೆನೀ ಬಂದರೂ ಬರದಿದ್ದರೂನಾ, ನನ್ನೊಳಗಿನ ಎಲ್ಲ ಭಾವಗಳೂಮೀಸಲು ನಿನಗೇ ಎಂದೆಂದಿಗೂ. ತ್ಯಾಗರಾಜು.ಎನ್

ತ್ಯಾಗರಾಜು.ಎನ್ ಅವರ ಕವಿತೆ “ನಾ ಮೀಸಲು” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಸುಂದರ ಬಾಳಿಗೆ ಅಂದ ಅನುಭೂತಿಯೇ ಗೆಳೆತನಹಸಿರು ಹಂದರ ಹಾಕಿ ತಂಪೆರೆಯುವುದೇ ಗೆಳೆತನ ಕರೆಯದೆ ಬರುವ ನಿಜ ಆಪತ್ಬಾಂಧವನಿವನುಪ್ರತಿಕ್ಷಣಗಳಲಿ ಜೊತೆಯಲಿ ಇರುವುದೇ ಗೆಳೆತನ ನಡೆದ ಹಾದಿ ಬದಲಾಗಲುಬಹುದು ಬಾಳಿನಲಿಎಂದೂ ಬದಲಾಗದೆ ಉಳಿಯುವುದೇ ಗೆಳೆತನ ನಗುವಿನಲಿ ಅಳುವಿನಲಿ ಮೌನದಲೂ ಜೊತೆಗೆದೂರದಲ್ಲಿದ್ದರೂ ಮನವನಾಳುವುದೇ ಗೆಳೆತನ ಬಾಳ ದಾರಿಗಳು ಬಲು ದುಸ್ತರವಾಗಿವೆ ಸಾಕಿ,ಗುರುಗುಟ್ಟದೆ ಹೆಜ್ಜೆಗುರುತಾಗಿರುವುದೇ ಗೆಳೆತನ ಅಂಟೆ ತಂಟೆಗಳಿಲ್ಲದ ಪ್ರಾಮಾಣಿಕ ಹೃದಯಒಂಟಿತನವ ಕುಂತು ನೀಗಿಸುವುದೇ ಗೆಳೆತನ ನೋವಿನಲೂ ನವಿರಾದ ಭಾವಗಳ ಸಂಗಾತಿನಲಿವಿನ ಸವಿ ಸುಧೆ ಸುರಿಸುವುದೇ ಗೆಳೆತನ ಗೆಳೆತನಕ್ಕೆ ಒಂದು ದಿನವಿರಬಹುದು ವರುಷದಿಹಗಲಿರುಳೂ ನಿತ್ಯ ಹಸಿರಾಗಿರುವುದೇ ಗೆಳೆತನ ಜ್ಯೋತಿಯ ನೋವುಗಳಿಗೆ ಮದ್ದಿನ ಬರವಿಲ್ಲಮಂದ ಬೆಳಕಿರಲಿ ಸದಾ ಬೆಳಗುವುದೇ ಗೆಳೆತನ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” ಬೆಳಕಿನ ಹಾದಿಯಲಿನೀ ಜೊತೆಯಾಗಿ ನಡೆವೆ,ಕತ್ತಲೆಯ ಕೋಣೆಯಲಿಮೌನವಾಗಿ ಅಡಗುವೆ.ಸುಖದ ದಿನಗಳಲಿನೀಳವಾಗಿ ಬೆಳೆಯುವೆ,ಕಷ್ಟದ ದಿನಗಳಲಿನಿನ್ನೊಳಗೆ ಕರಗುವೆ.ಮೌನಕ್ಕೆ ಜಾರುವೆ ನಾ ನಕ್ಕರೆ ನೀ ನಗುವೆ ,ನಾ ಅತ್ತರೆ ನೀ ಮರುಗುವೆ .ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ,ಸಾಗುವೆ ನೀನು ನನ್ನಒಲವಿನ ದನಿ.ಬಿಸಿಲಿಗೆ ಬೆಂದುಮಳೆಗೆ ನೆನೆದುಚಳಿಯಲ್ಲಿ ಕೊರಗುವೆಒಳಗೆ ನೊಂದು ಜಗದ ಜನ ಕೈಬಿಟ್ಟರೂ ,ನೀನು ಜೊತೆ ಇದ್ದೆಪ್ರತಿ ಘಳಿಗೆ.ನನ್ನದೇ ಪ್ರತಿಬಿಂಬ,ನನ್ನದೇ ಒಡನಾಡಿ,ನೀನೇ ನನ್ನ ಪ್ರಾಣಸಾರ್ವಕಾಲಿಕ ಗೆಳೆಯ,ನಿತ್ಯ ಹಿಂಬಾಲಿಸುವಓ ನನ್ನ ನೆರಳು! ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” Read Post »

ಕಾವ್ಯಯಾನ

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು”

ಕಾವ್ಯ ಸಂಗಾತಿ ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ) “ಸ್ನೇಹ ದಿನಕ್ಕೊಂದಷ್ಟು ಸಾಲುಗಳು” ಸ್ನೇಹ ಅಂದ್ರೆ ಏನಂತಿರಾ?ಸ್ಕೂಲ್ ಬೆಲ್ ಹೊಡೆದ ತಕ್ಷಣ  “ಊಟ ತಂದ್ಯಾ?” ಅಂತ ಕೇಳೋದು. ಸ್ನೇಹ ಅಂದ್ರೆ ನೀನು ಫೇಲ್ ಆದಾಗ“ಪರವಾಗಿಲ್ಲ ಕಣೇ/ಣೋ” ಅಂತ  ನಿನಗಿಂತ ಜೋರಾಗಿ ಬೇಜಾರುಮಾಡಿಕೊಳ್ಳುವುದು.  ನೀನು ಪಾಸ್ ಆದಾಗ ನಿನಗಿಂತಜೋರಾಗಿ ಚಪ್ಪಾಳೆ ತಟ್ಟೋದು. ಸ್ನೇಹ ಅಂದ್ರೆ  ಅರ್ಧ ರಾತ್ರಿ “ನಿದ್ದೆ ಬರ್ತಿಲ್ಲ” ಅಂದ್ರೆ  ಎರಡು ಗಂಟೆ ಮಾತಾಡಿ “ಮಲ್ಕೊ” ಅಂತ ಹೇಳೋದು. ಜಗಳ ಆಡಿ, ಮತ್ತೆ ಐದುನಿಮಿಷದಲ್ಲಿ ತಪ್ಪಿರದಿದ್ದರೂ “ಸಾರಿ ಕಣೇ” ಅನ್ನೋದುಬೇಜಾರು ಮಾಡೋದೆ ಇರದು. ಅದು ರಕ್ತದ ಸಂಬಂಧ ಅಲ್ಲ,  ಆದ್ರೂ ರಕ್ತಕ್ಕಿಂತ ಗಟ್ಟಿ.  ಅದು ಮಾತಿನ ಒಪ್ಪಂದ ಅಲ್ಲ,  ಆದ್ರೂ ಮಾತಿಲ್ಲದೆ ಅರ್ಥ ಆಗೋ ಬಂಧ. ಸ್ನೇಹ ಇದ್ರೆ ಬದುಕು ಸುಲಭ.  ಬೀಳುವಾಗ ಹಿಡಿಯೋ ಕೈ,  ನಗುವಾಗ ಜೊತೆಗಿರುವ ನೆರಳು,  ಅಳುವಾಗ ಒರಗಲೊಂದು ಭುಜಕಣ್ಣೀರೊರೆಸುವ ನಿಷ್ಕಲ್ಮಶ ಹೃದಯಗಳು. ನಿನ್ನ ಬದುಕಲ್ಲಿ ಅಂತಹ ಒಬ್ಬ ಸ್ನೇಹಿತಇದ್ದಾನಾ?/ಳಾ?ಅವರಿಗೆ ಈಗಲೇ “ಥ್ಯಾಂಕ್ಸ್ ಕಣೆ/ಣೊ”ಅಂತ ಹೇಳ್ಬಿಡು ಮನಸಾರೆ ಶರಣೆಂದು ಬಿಡು.ಇಂದೊಂದಿನಕ್ಕೆ ಸೀಮಿತ ಅಲ್ಲ ಈ ಜನುಮ ಪ್ರತಿ ಜನುಮದಲ್ಲೂ ಜೊತೆಯಾದ ಸ್ನೇಹಕ್ಕೆ. ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು” Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” ಅಮ್ಮನ ಮಡಿಲ ಅಗಲಿಶಾಲೆಯಂಗಳದಿ ಕಾಲಿಟ್ಟಾಗನನ್ನಂತೆ ಅಳುವ ಅವನ ನೋಡಿಸಮಾನ ದುಃಖಿಗಳೆಂದು..ಗೆಳೆಯರನ್ನು ಕೂಡಿಸುತ್ತಾ ಹೋದೆವುಗೆಳೆತನದ ಅರ್ಥ ತಿಳಿದೆವು… ಶಾಲೆ.. ಕಾಲೇಜುಗಳಲ್ಲಿಪಾಠಗಳಿಗಿಂತಲೂ…ನಮ್ಮನ್ನು ಹಿಡಿದಿಟ್ಟಿದ್ದುಇದೇ ಬಾಂಧವ್ಯವಲ್ಲವೇ..ಅದನ್ನು ಗುಣಿಸಿ ಗುಣಿಸಿವಿಶಾಲಾರ್ಥವ ನೀಡಿದೆವು… ಅದೇಕೋ.. ಜವಾಬ್ದಾರಿಯಮೂಸೆಯೊಳಗೆ..ಒತ್ತಡ,ಸಮಯದಭಾವ ಪದಗಳ ನೂಕಿಸ್ನೇಹ ಬಂಧವನು ಕಳೆಯುತ್ತಾ..ಅದರ ಸೊಗಸನು ಮನದ ಮೂಲೆಗೆ ತಳ್ಳಿಬಿಟ್ಟೆವು… ಇಳಿವಯಸ್ಸಿನ ಸಂಜೆಯೊಳುಅದೇ ಬಾಲ್ಯಾವಸ್ಥೆಯ ಸ್ನೇಹದ ನೆನಪುಮನಸ್ಸಿಗೆ ರಂಗು ತುಂಬಲು ಹಾತೊರೆಯುತ್ತದೆ..ಆದರೆ ಭಾಗಾಕಾರದ ಲೆಕ್ಕದಲಿ..ನಾವು ಶೇಷವಾಗಿರುತ್ತೇವೆ ಅಷ್ಟೇ…ಸ್ನೇಹವೂ ಒಂದು ಲೆಕ್ಕ..ಅಲ್ಲವೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಸ್ನೇಹದ ಹಬ್ಬ” ಅಮ್ಮನ ಪ್ರೀತಿ ಮಮತೆಯ ನೆರಳುಅಪ್ಪನು ಕೊಟ್ಟ ಧೈರ್ಯದ ಬೆಳಕುಶಾಲೆಯಿಂದಲೇ ಸಾವಿರಾರು ನೆನಪುಗೆಳೆಯರೇ ನೀವು ನಮ್ಮ ಸಂಪತ್ತುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಬೆಂಚು ಹಂಚಿ ಕೂತ ದಿನಗಳುಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳುಅಳುವಿನಲ್ಲೂ ನಗುವಿನಲ್ಲೂಜೊತೆಯಾಗಿ ನಿಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಆಟದ ಮೈದಾನದಿ ಓಡಿದವರುಸೋತಾಗಲೆಲ್ಲ ಕೈಹಿಡಿದವರುಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರುಅಂತರಂಗದ ಮಿತ್ರರೆ ನೀವೆಲ್ಲರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಪುಸ್ತಕಗಳ ಪಾಠಗಳನ್ನೆಲ್ಲ ಕಲಿತುಜೀವನದಿ ಸರಿದಾರಿಯಲ್ಲಿ ನಡೆದುಒಳ್ಳೆಯ ಮಾತುಗಳನ್ನು ಕಲಿತುಒಡನಾಡಿಯಾಗಿ ನಾವು ಬೆಳೆದವರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಮಳೆ ಬಂದಾಗಲೆಲ್ಲ ಛತ್ರಿಯಾದೆಸುಡುಬಿಸಿಲ ಧಗೆಗೆಲ್ಲ ನೆರಳಾದೆಕತ್ತಲಿಗೆ ಬೆಳಗೊ ದೀಪವಾದನೀವೆಂದು ಬದುಕಿನ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕಷ್ಟ ಬಂದಾಗ ಧೈರ್ಯ ತುಂಬಿನೋವು ಬಂದರೆ ಭುಜವ ನೀಡಿಬೀಳುವ ಕ್ಷಣಗಳಲ್ಲಿ ಕೈಹಿಡಿದುಭುಜಕ್ಕೆ ಭುಜವಾದ ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಜಾತಿ ಮತಗಳ ಗೋಡೆ ಮೀರಿಬೇಧ ಭಾವನೆಗಳ ದೂರ ಮಾಡಿಸ್ನೇಹ ಪ್ರೀತಿಯ ಸೇತುವೆ ಕಟ್ಟಿದಸೌಹಾರ್ದತೆ ಮೆರೆದ ಸ್ನೇಹಿತರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಗಿಡಮರಗಳ ಬೆಳೆಸುವ ಕೈಗಳಾಗಿನೀರು ಉಳಿಸುವ ಮನಗಳಾಗಿನಮ್ಮ ಭೂಮಿ ಕಾವಲುಗಾರರಾಗಿಜೊತೆಗೂಡಿ ಕಲಿತಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಸುಳ್ಳು ಹೇಳದಂತ ಸತ್ಯದ ಹಾದಿದುಷ್ಟತನ ದೂರ ಮಾಡುವ ನೀತಿಒಳ್ಳೆಯ ಬದುಕು ಕಟ್ಟುವ ದಾರಿತೋರಿದಂತ ಆತ್ಮಬಂಧು ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ನಿಮ್ಮ ನಗುವೆ ನಮ್ಮ ಸಂತೋಷನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷಜೀವನವೆಂಬ ನಿಲ್ಲದ ಪಯಣದಲ್ಲಿದಾರಿ ಮರೆಯದೆ ಜೊತೆಯಿರೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕೈ ಕೈ ಹಿಡಿದುಕೊಂಡು ಸಾಗೋಣಹೊಸ ಕನಸುಗಳನ್ನು ಸಾಧಿಸೋಣಸ್ನೇಹವೆಂಬ ಅಮೃತಧಾರೆಯಲ್ಲಿಸುಂದರ ಸಮೃದ್ಧ ಲೋಕ ಕಟ್ಟೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಸ್ನೇಹವೆಂದರೆ” ಸ್ನೇಹವೆಂದರೆ ಅದುದೈವ ಬೆಸೆದ ಬಂಧ ,ಜಾತಿ , ಗೋತ್ರ , ಮತ ,ಪಂಥ ಕೇಳದ ಅನುಬಂಧ. ಕೃಷ್ಣ – ಸುಧಾಮ , ಕರ್ಣ – ದುರ್ಯೋದನಚಿರ ಸ್ನೇಹಕೆ ಹೆಸರಾದವರುಸ್ನೇಹ ಎನ್ನುವ ಆಮ್ಲಜನಕನಮ್ಮನ್ನು ಬದುಕುಳಿಸುತ್ತದೆಸುಮಾರು ಬಾರಿ. ಸ್ನೇಹದ ನೌಕೆ ತೇಲುತಿರಲುಬಾಳ ಸಾಗರದಿ,ತೀರ ಸೇರುವ ಭರವಸೆಇರುವುದು ಯಾವಾಗಲೂ. ಸ್ನೇಹ ಒಂದು ಭಾವದ ಕೊಳಲ ದನಿಸದಾ ಕೇಳುವುದು ಇಂಪಾದ ನಿನಾದಸ್ನೇಹ ವೀಣೆ ಮಿಡಿಯುತಿರೆಅಪಸ್ವರದ ಭಯವೆಲ್ಲಿ. ಯಾವ ರಕ್ತ ಸಂಭಂದ ಇರದಿದ್ದರುನೋವಿಗೆ ಮರುಗುವಕರುಳ ಬಂಧವೆ ಅಲ್ಲದೆ ಇದ್ದರುಕರುಣೆ ತೋರುವುದೆ ಸ್ನೇಹ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ”

ಕಾವ್ಯ ಸಂಗಾತಿ ವೆಂಕಟೇಶ್ ಈಡಿಗರ “ಮೌನ ಯಾನ” ಮೌನವದು ಸ್ಪಷ್ಟತೆ ಇಲ್ಲದಅನರ್ಥಗಳ ನಿರ್ಭಾವ  ಸ್ಥಿತಿಸಮ್ಮತಿಯೂ  ಅಲ್ಲದಅಸಮ್ಮತಿ ಸೂಚಿಸದ ದ್ವಂದ್ವ ನೀತಿ ಮನಸ್ಸು ಬಲವಾದಾಗ ಪ್ರತಿಕಾರದುರ್ಬಲವೆಂದರೆ ಅಂಗಿಕಾರಇಲ್ಲದಿರೆ ನಪುಂಸಕತೆಯ ನಿರಾಕಾರವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ ಮನದಿಂಗಿತಗಳನು ಬಲಿಕೊಟ್ಟುಒಳಬೇಗುದಿಯಲ್ಲಿ ಬೇಯುವನೋಯುವ ನಿಶಕ್ತ ರೂಪವದುತನ್ನತನವ ದಹಿಸಿಕೊಂಡು ಬಂದುದ್ದನ್ನುಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು ಜ್ಞಾನವೋ ಅಜ್ಞಾನವೋ ಎಂದರುಹಲುಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವದಿವ್ಯ ರೂಪ   ದೃಢತೆಯ ಅಪರೂಪಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ ಮೌನವದು  ವಿಶ್ವರೂಪಹೊಸ ಮನ್ವಂತರಕೆ ಮುನ್ನುಡಿಬರೆಯಲುಮೈದಾಳಿದ ಮಹಾ ಸಂಕಲ್ಪˌಇದಕಾಗಿ ಇರಬೇಕು ಆತ್ಮಬಲದಜ್ಞಾನದೀಪˌ  ಅದುವೇ ಅವನಜೀವನದ ಮುನ್ನಡೆಗೆ ದಾರಿದೀಪ ಮತಿಗೆಡದಿರಲಿ ಮನದ ಮೌನದೃತಿಗೆಡದೆ ಮುನ್ನಡೆಯಲಿ ಜ್ಞಾನಮೌನದಲ್ಲಿಯೂ ಧ್ಯಾನಸ್ಥನಾಗಿಬೆಳಗಲಿ ಲೋಕದೊಳಿತಿನ ಸುಜ್ಞಾನಉಳಿಸಿ ಬೆಳೆಸಲಿ ಮಾನ ಸಮ್ಮಾನಮೌನವೇ ಧ್ಯಾನವಾಗಿˌ ಜ್ಞಾನವಾಗಿಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ. ವೆಂಕಟೇಶ್ ಈಡಿಗರ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ” Read Post »

You cannot copy content of this page

Scroll to Top