ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” ಕಣ್ಣ ರೆಪ್ಪೆಯ ಮರೆಯಲ್ಲಿ,ಬಚ್ಚಿಟ್ಟ ಆಸೆಗಳ ಮೆರವಣಿಗೆ;ಜಗದ ಕಣ್ಣಿಗೆ ಕಾಣದಂತೆ,ಮೌನವಾಗಿಹ ಪಯಣ. ಸೂರ್ಯ ಸುಟ್ಟರೂ ಸರಿಯೇ,ಚಳಿ ಗಾಳಿ ಬೀಸಲಿ ಬಿಡು;ಮನದ ಮೂಲೆಯ ಗೂಡಿನಲ್ಲಿ,ಬೆಚ್ಚಗಿನ ನನ್ನ ಲೋಕವೊಂದು. ಕಾಲನ ಚಕ್ರ ಉರುಳಿದರೂ,ವಿಧಿಯ ಆಟ ಮುಂದುವರಿದರೂ;ಸಾವಿರ ಜನ ಬಂದು ಹೋದರೂ,ಕದಿಯಲಾರದ ಕನಸುಗಳು. ಬೆಳಕಿನ ಕಿರಣ ಮೂಡುವವರೆಗೆ,ಹಾದಿಯ ಗುರಿ ಮುಟ್ಟುವವರೆಗೆ;ನನ್ನ ಅಂತರಾತ್ಮದ ನಂಬಿಕೆ,ಯಾರು ಅಳಿಸಲು ಸಾಧ್ಯ? ಕನಸುಗಳು ಬಿಕರಿಗಲ್ಲಮಾರುಕಟ್ಟೆಯ ಮೂಟೆಯಲ್ಲಹೊತ್ತು ಹೊತ್ತಿಗೆ ಉಣ್ಣುವ ತುತ್ತಲ್ಲಕನಸುಗಳು ನನ್ನ ಭಾವ ಅಸ್ಮಿತೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಕದಿಯಲಾರದ ಕನಸುಗಳು” Read Post »

ಕಾವ್ಯಯಾನ

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” ನಿತ್ಯ ನಿರಂತರ ಕಾಯಕಯೋಗಿ ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕಚಲ್ಲುತಾ ಮೆಲ್ಲನೆ ಮೆಘಗಳಮಧ್ಯ ನುಸುಳುತಾ ಬರುತಿಹಏಳಿರಯ್ಯ ಎನ್ನ ಬಾಂಧವರೆ ಬರಿಬೆಳಕಲ್ಲವಿದು ಸತ್ಯದರ್ಶನಲೋಕಬೆಳಗುವ ನಿತ್ಯನಿಯಾಮಕಜಗದಕರೆಗೆ ಸದ್ದಿಲ್ಲದ ಬರುವವನಿತ್ಯನಿರಂತರ ಕಾಯಕಯೋಗಿಸಮಯದ ಪರಿಪಾಲಕ ಪರಂಜ್ಯೊತಿ… ಬೆಳಕಬೆಳಗಿಗೆ ಜಗವೇತೂಗುವದುಏರುಪೇರಿಲ್ಲದ ರಾಯಭಾರಿ ತೇಜಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವಕ್ಷಣ ಕ್ಷಣ ಅನುಕ್ಷಣ ಆದರನೀಯ ಚರಾಚರ ಜೀವರಾಶೀಗಳ ಜೀವದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆತರುಲತೆಗಳ ಹಸಿರ ಸಿಂಚನಭೂಮಾತೆಯ ಮಡಿಲತುಂಬುವ ಚೇತನ… ನಿಸ್ವಾರ್ಥ ಸೇವೆಯ ನಿತ್ಯನೂತನೀತಸ್ವಾರ್ಥಿ ಮನುಜ ಕಲಿಯಬೇಕಿದೆತಮಸೋಮಾ ಜ್ಯೊತಿರ್ಮಯ…ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….ಸತ್ಯವೇ ದೇವರು ಸತ್ಯವೇ ಬೆಳಕುಹೇ! ಮನುಜಾ ಬೆಳಕ ದಾರಿಯಲಿನಡೆ,ಬೆಳಕಿನಲಿ ಬೆರೆತು ಬೆಳಕಾಗು…. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” Read Post »

ಕಾವ್ಯಯಾನ

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನಂಜಿನ ಉಸಿರು” ಕಣ್ಣು ಬಿಟ್ಟ ಕ್ಷಣಗಳೆಲ್ಲಾಮಂಜಿನ ಹನಿಗಳೆಂದುಕೊಂಡಿದ್ದೆ;ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ.. *** ಅಸಮಾನೆತೆಯ ನೆತ್ತರುಕುಡಿದ ನೆಲ ಕುದಿಯುತ್ತಿದೆ;ತೂಗುವ ತೊಟ್ಟಿಲು ಮಸಣವಾಗುತ್ತಿದೆ. *** ವೈಷಮ್ಯ ಚಿಗುರೊಡೆದುನೆಲ ಕೆಂಪಾಗಿದೆಈಗ ನಂಜೇರಿ ಕಪ್ಪಾಯಿತು *** ನಮ್ಮೊಳಗೆ ಧರ್ಮದ ಅಮಲು ಏರಿದೆಅಸಮಾನತೆಯ ಕಸದಿಂದಒಡಲು ತುಕ್ಕು ಹಿಡಿದಿದೆ *** ನಯವಂಚಕರ ದುನಿಯಾಬದುಕ ಪಾತ್ರೆಯಲ್ಲಿಜಗದ ಐಕ್ಯತೆ ತಳ ಹತ್ತಿದೆ. *** ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;ಇನ್ನೂ, ಜಾತಿ ಜಾತಿಯದೋಂಬಿ ನಡೆಯದೇ ಇರುತ್ತದೆಯೇ *** ಬಿದ್ದ ಬೀಜವೂಮೊಳಕೆಯೊಡೆಯಲುನೆಲ ಉರಿವ ಕೆಂಡವಾಗಿದೆ *** ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ ನಾಮದೇವ ಕಾಗದಗಾರ Recipients

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು” Read Post »

ಕಾವ್ಯಯಾನ

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ”

ಕಾವ್ಯ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್‌ “ಬರಹದ ಗುಂಗಿನಲ್ಲಿ” ​ಬರಹದ ಗುಂಗಿನಲ್ಲಿ…​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತುಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತುಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತುದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ” Read Post »

ಕಾವ್ಯಯಾನ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ”

ಕಾವ್ಯ ಸಂಗಾತಿ ದಾನಮ್ಮ ಝಳಕಿ “ಕನಸಿನ ಅರಮನೆ” ರಾತ್ರಿಯ ಮೌನದ ಮಡಿಲಿನಲ್ಲಿಒಂದು ಕನಸು ಕಣ್ಣು ತೆರೆದಿತು,ಬಡ ಹೃದಯದ ಚಿಕ್ಕ ಗುಡಿಸಲಲ್ಲಿಅರಮನೆಯೊಂದು ಅರಳಿತು. ಕಲ್ಪನೆಯ ಕಲ್ಲು ಕಲ್ಲಿನಿಂದಕಟ್ಟಿದ ಮನದ ಮಂದಿರವು,ಆಶೆಗಳ ಹೊನ್ನಿನ ಕಿಟಕಿಯಿಂದಬೆಳಗಿತು ಬದುಕಿನ ಅಂತರವು. ಕಣ್ಣೀರ ಹನಿಯ ನೀರಿನಿಂದಲೇಬೇರು ಬಿಟ್ಟಿತು ಬಯಕೆಯ ಗಿಡ,ನೋವಿನ ಬೆಂಕಿ ದಾಟಿಬಂದಾಗಹೂವಾಯಿತು ಬದುಕಿನ ಹಾದಿ ಬಿಡ. ಬೆವರ ಹನಿಗಳ ಮುತ್ತುಗಳಿಂದಗೋಡೆಯ ಮೇಲೆ ಚಿತ್ರ ಬರೆದೆ,ಸಹನೆಯ ದೀಪ ಹಚ್ಚಿಕೊಂಡುಸಾವಿರ ಕತ್ತಲ ದಾರಿ ನಡೆದೆ. ಬಿರುಗಾಳಿಗಳು ಬಂದಾಗಲೂಮನದ ಬಾಗಿಲು ಮುಚ್ಚಲಿಲ್ಲ,ಸೋಲಿನ ನೆರಳು ಸುತ್ತಿದಾಗನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ. ಅರಮನೆ ಎಂದರೆ ಚಿನ್ನವಲ್ಲ,ಅದು ಮನದ ಮಹತ್ವದ ಗೃಹ,ಪ್ರೀತಿಯೇ ಅದರ ಸಿಂಹಾಸನ,ಮನುಜತ್ವವೇ ಅದರ ಸುಗಂಧ ಸುಭ್ರ. ಕನಸು ಎಂದರೆ ಕೇವಲ ನಿದ್ರೆ ಅಲ್ಲ,ಕನಸು ಎಂದರೆ ಜೀವದ ಜ್ಯೋತಿ,ಬಿದ್ದರೂ ಮತ್ತೆ ಎದ್ದು ನಿಲ್ಲುವಧೈರ್ಯದ ಅಮರ ಪ್ರೀತಿ. ಇಂದು ನಿಂತಿದೆ ಆ ಅರಮನೆಕಾಲದ ಮುಂದೆ ಗರ್ವವಾಗಿ,ನಿನ್ನೆ ಕಣ್ಣೀರಲಿ ತೇಲಿದ ಮನಸುಇಂದು ನಗುತ್ತಿದೆ ಹೂವಾಗಿ. ಜೀವನವೆಂಬ ವಿಶಾಲ ಭುವಿಯಲ್ಲಿಕನಸೇ ಮಾನವನ ರೆಕ್ಕೆ,ಕನಸಿನ ಅರಮನೆ ಕಟ್ಟಿದವನಿಗೆಆಕಾಶವೂ ಚಿಕ್ಕದಾದ ತೆಕ್ಕೆ. ಡಾ ದಾನಮ್ಮ ಝಳಕಿ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ” Read Post »

ಕಾವ್ಯಯಾನ

ಗೊರೂರು ಅನಂತ ರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತ ರಾಜು ಹನಿಗವನಗಳು ಗೊತ್ತೇ..? ಮಡದಿಯ ಹೆಸರಿನ ಮುಂದೆಗಂಡನ ಹೆಸರು ಏಕಿರುತ್ತದೆಯೋಚಿಸಿ ತುಸು ಹೊತ್ತುಮುಂದೆ ಮುಂದೆ ನಡೆಯುತ್ತಾನಲ್ಲಲಗೇಜ್ ಹೊತ್ತು ಗೊತ್ತಿಲ್ಲ.. ವರಾನ್ವೇಷಣೆಯಲ್ಲಿ ಜೋಡಿ ಚಪ್ಪಲಿ ಸವೆಸಿದ ಅಪ್ಪನಿಗೆತನ್ನ ಮಗಳ ಹಿಂದೆ ಹುಡುಗರುಹನ್ನೆರೆಡು ಚಪ್ಪಲಿ ಸವೆಸಿದ್ದುಗೊತ್ತಿಲ್ಲ.. ಗೊತ್ತೇ..? ದುರಂತ ಕಥೆ ಕಾದಂಬರಿಬರೆದು ಪ್ರಸಿದ್ಧನಾದಕತೆಗಾರನಿಗೆ ಸ್ಫೂರ್ತಿಅವನ ಹೆಂಡತಿ ಎಂಬುದುಗೊತ್ತೇ..? ಗೊತ್ತಿಲ್ಲ.. ಹುಡುಗರು ಚುಡಾಯಿಸ್ತಾರೆ ಅಂತಬಿಡ್ತಾರಾ ಹುಡುಗಿಯರುಧರಿಸೋದು ಮಿಡಿಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..! ಗೊರೂರು ಅನಂತರಾಜು 

ಗೊರೂರು ಅನಂತ ರಾಜು ಅವರ ಹನಿಗವನಗಳು Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” ಆ ದಿನಗಳ ಸುತ್ತಓಡಾಡಿ ಕಳೆದುಹೋದ ಹಗಲಿಂದುಮುಕ್ತಾಯದ ಸಂಜೆಗೆಬಂದು ನಿಂತಂತಿದೆಬೆಳಕಿನ ಅರಿವಿಗೆಬಿಸಿಲಿನ ಕಿರಣಹರಡಿ ನಿಂತರವಿಗೊಂದು ಸತ್ಯಗೊತ್ತಿರುವಂತಿದೆಮೇಲಿಂದ ಕಾಣುವಸತ್ಯದ ನೆರಿಗೆಯಲ್ಲಿಕಾಣದ ನೋಟಗಳಸುಳ್ಳುಗಳು ಅಡಗಿದಂತಿದೆಹೊಸ ಹಾವ ಭಾವಮುಕ್ತಾಯದ ಸಂಜೆಗೆಇಂದು ಕಳೆಯಿತು ಹೀಗೆಉಳಿಯಬೇಕುನಾಳೆಯೆಂಬ ದುಂದುಭಿಸಂಜೆಗೆ ಬರುವಕನಸುಗಳಲ್ಲಿಭಾವ ಭವಿತದಚಿತ್ರ ಭಿತ್ತಿಯಲ್ಲಿಸುಪ್ತವಾದರೂ.  ನಾಗರಾಜ ಬಿ. ನಾಯ್ಕ 

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದುಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು” ಮಾತುಗಳೆಲ್ಲಸೋತು ಸುಮ್ಮನಾದಾಗನಿನ್ನ ಕಣ್ಣುಗಳ ಮೌನ ನಗುವೇನನ್ನ ಜೊತೆ ಮಾತನಾಡುತ್ತಿರುತ್ತದೆ! ಹೊರಗೆ ಸಂಜೆನಿಧಾನವಾಗಿ ಕತ್ತಲಾಗುತ್ತಿರಲುಒಳಗೆ ಮಾತ್ರನಿನ್ನ ನಗು ಬೆಳಕಾಗಿ ಉಳಿಯುತ್ತದೆ! ಕೈಯಲ್ಲಿದ್ದ ಪುಸ್ತಕತೆರೆದ ಹಾಗೆಯೇ ಇರುತ್ತದೆನಾವು ಮಾತ್ರಒಬ್ಬರ ಮನಸ್ಸನ್ನೊಬ್ಬರು ಓದುತ್ತಿರುತ್ತೇವೆ! ಹೋಗಬೇಕು ಎಂದುನೀನು ಎಷ್ಟೇ ಹೇಳಿದರೂನಿನ್ನ ಹೆಜ್ಜೆಗಳು ಮಾತ್ರನನ್ನ ಹತ್ತಿರವೇ ನಿಲ್ಲಲು ಬಯಸುತ್ತವೆ! ಕಿಟಕಿಯಾಚೆ ಗಾಳಿಪರದೆಗಳ ಜೊತೆ ಆಟವಾಡಿದಂತೆಅವಳ ಬೆರಳುಗಳುನನ್ನ ಕನಸುಗಳನ್ನು ನೇವರಿಸುತ್ತಿರುತ್ತವೆ! ಈ ಕ್ಷಣಕ್ಕೂಒಂದು ಜೀವ ಇದ್ದರೆಅದು ಖಂಡಿತನಮ್ಮಿಬ್ಬರ ನಡುವೆ ಉಸಿರಾಡುತ್ತಿರುತ್ತಿತ್ತು! ನನಗೆ ಗೊತ್ತುನಾಳೆ ದಿನ ಮತ್ತೆತಳುಕಿನ ಜಗತ್ತು ನಿನ್ನನ್ನು ಕದಿಯಬಹುದು!ಆದರೆ ಈ ಸಂಜೆಯಿರುಳು ಮಾತ್ರನೀನು ಸಂಪೂರ್ಣವಾಗಿ ನನ್ನವಳು! ಹುಚ್ಚ ನೀನು ಎಂದು ನಗುತ್ತಾತಲೆಯನ್ನ ನನ್ನ ಭುಜದ ಮೇಲೆ ಇಡುತ್ತೀಯನಾನು ಏನೂ ಹೇಳುವುದಿಲ್ಲಕೆಲವೊಮ್ಮೆ ಪ್ರೀತಿಗೆಬರೀ ಮಾತುಗಳಿಗಿಂತಮೌನದ ಆಲಿಂಗನವೇ ಅಗಾಧ ಭರವಸೆ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು” Read Post »

You cannot copy content of this page

Scroll to Top