ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ ದೇವದುರ್ಗ ” ಯಾರದು?” ಒಲೆ ಮಣ್ಣಿನದುಮಣ್ಣು ಕೆರೆಸಾಲಿನದುಕೆರೆ ಗೌಡನದು ಹಸಿವಿಗಾಗಿ ರೊಟ್ಟಿರೊಟ್ಟಿಗಾಗಿ ಜೋಳಜೋಳಕ್ಕಾಗಿ ಹೊಲಹೊಲ ಗೌಡನದು ಎತ್ತು ಗೌಡನದುಬಂಡಿ ಗೌಡನದುಉತ್ತಿ ಬಿತ್ತಿದ ಹೊಲದ ಶ್ರಮ ನನ್ನದುಬೆಳೆಯ ಅಧಿಕಾರ ಗೌಡನದು ಬಾವಿ ಗೌಡನದುನೀರು ಗೌಡನದುಹೊಲ ಗದ್ದೆ ಗೌಡನದುಓಣಿ ಕೇರಿಗಳೆಲ್ಲ ಗೌಡನದುಗ್ರಾಮಹೋಬಳಿತಾಲೂಕುಜಿಲ್ಲೆರಾಜ್ಯಗೌಡನದುಹಾಗಾದರೆನನ್ನದೇನಿದೆ…? ಶಂಕರರಾವ ಉಭಾಳೆ ದೇವದುರ್ಗ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” ಅಂದೊಮ್ಮೆ ನನಗೆ ನಿನ್ನನ್ನು ಕಂಡುಮಾತಾಡೋ ಬಯಕೆ ಬಂದಿತ್ತು ಅಂದುಅಲ್ಲೆಲ್ಲೋ ನೀನು ಕಣ್ಮರೆಯಾಗಿ,ಸುಳಿವೊಂದು ಸಿಗದೆ ಕಣ್ಣೀರು ತಂದೆ ನಾ ನಿನ್ನ ಕರೆದು ಬಳಿ ಬಂದು ನಿಂದುನಿನ್ನ ಖುಷಿಯ ತಂದೆ ನಿನಗಾಗಿ ಇಂದುನಿನ್ನನ್ನು ಕರೆದು ಮಾತನಾಡೋ ಬಯಕೆ ನನಗಿತ್ತು ಅಂದು ಭಯವೆಲ್ಲ ಎಂದು ಆರೋಪ ಇರದ ಈ ರೂಪ ನಿನಗೆ ಕೊಡಬೇಕು ನಾನು ನಾನಿರುವವರೆಗೆಆ ನಿನ್ನ ನಗುವು ನನಗಾಗೆ ಇರಲು  ಸವಿಯುವೆ ನಾನು ಹಗಲು ಇರುಳು ನಗುವಲ್ಲಿ ಇರುವಂತ ಆ ನಿನ್ನ ಕನಸುಮಲ್ಲಿಗೆ ಹೂವಂತೆ ಅರಳುವ  ಸೊಗಸುಕೋಗಿಲೆ ಹಾಡು ನಾವಿರುವ ನಾಡುಇಂಪಾಗಿ ಕೇಳು ಈ ನನ್ನ ಹಾಡು ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” Read Post »

ಕಾವ್ಯಯಾನ

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ”

ಕಾವ್ಯ ಸಂಗಾತಿ ಹಮೀದ್ ಹಸನ್‌ ಮಾಡೂರು “ಜಿರಳೆ ದಂಗೆ ಸಾರಿದೆ” ಜಿರಳೆ ಬಂತಯ್ಯ ಜಿರಳೆಎಲ್ಲೆಡೆಯು ಗದ್ದಲ ಎಬ್ಬಿಸಿದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,! ದುಷ್ಟ ರಾಜಕೀಯ ನೀತಿಗೆಧರ್ಮ ರಾಜಕೀಯ ಕ್ರಾಂತಿಗೆಕೊಳಕು ಬಾಯಿಯ ಮತಿಭ್ರಾಂತಿಗೆಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,! ಯುವ ಜನಾಂಗದಶೋಷಿತ, ತುಳಿತಕ್ಕೊಳಗಾದಅಲ್ಪಸಂಖ್ಯಾತ,ನೊಂದವರಿಗಾದನ್ಯಾಯದ ಪರ ಹೋರಾಡ ಬಂದಿದೆ,! ಸರ್ವಾಧಿಕಾರಿಗಳ ಮಸ್ತಕನುಸುಳಿ ಮೆದಳಿಗೆ ನೋಯಿಸಿಸತ್ತಂತಿಹರನು ಇದೀಗ ಬಡಿದೆಬ್ಬಿಸಿನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,! ಕುರ್ಚಿಯಾಸೆಗೆಆಡಳಿತೆಯ ದುರಾಸೆಗೆಮನುಜ ಮನಸುಗಳ ಕೊಳಚೆಗೆದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ” Read Post »

ಕಾವ್ಯಯಾನ

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?”

ಕಾವ್ಯ ಸಂಗಾತಿ ರಘುಪ್ರಸಾದ ಮರಿಯಮ್ಮನಹಳ್ಳಿ   “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” ಈ ಹೊತ್ತಿನ ದಿನಗಳಲ್ಲಿ ನಿನ್ನ ಹಾಗೆ ಬದುಕಲುಂಟೆ ಗಾಂಧಿಕ್ಷಣ ಕ್ಷಣಕೂ ಹೊರಳಿಸುವ ನಾಲಗೆಗಳ ನಡುವೆಸತ್ಯವನ್ನೆ ಉಸಿರಾಡಿದಂತೆ ಬದುಕಲುಂಟೆ?!ಶತಾಯ ಗತಾಯ ಗಳಿಸುವ ಉಳಿಸುವಯೋಚನೆ ಯೋಜನೆಗಳ ನಡುವೆ ತಡವರಿಸುವ ನಾವುನಿನ್ನ ಹಾಗೆ ಅರೆಫಕೀರನಂತೆ ಬದುಕಲುಂಟೆ ಗಾಂಧಿ?! ಧರ್ಮಗಳಿಗೆ ಬಣ್ಣಬಳಿದು,ಜಾತಿಗೊಂದು ಮಠ ಕಟ್ಟಿ ಹೆಮ್ಮೆಯಿಂದ ಬೀಗುತಿರುವವರು ನಾವುನಿನ್ನ ಹಾಗೆ ಶ್ವೇತ ಭಾವದಿ ಬದಕುಲುಂಟೆ ಗಾಂಧಿ?!ಬೆರಳುಮಾಡುವುದನ್ನೆ ಗುರಿಯಾಗಿಸಿಕೊಂಡವರುಲೋಪಗಳ ಹುಡುಕುವುದರಲ್ಲೇ ಕಳೆದು ಹೋದವರುನಿನ್ನ ಸತ್ಯ ಪ್ರಯೋಗಗಳ ಅರ್ಥವ ತಿಳಿಯದೆ ಫೋಟೋ ಫ್ರೇಮಿನಲ್ಲಿ ಬಂಧಿಸಿಟ್ಟು ಪೂಜೆಗೈಯುವವರುನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಮೊದಲು ನೀನು ಬೆಲ್ಲವ ತ್ಯಜಿಸಿ ಆ ನಂತರಅದರ ವರ್ಜ್ಯದ ಬಗ್ಗೆ ಮಾತಾಡಿದೆ ಉಪನ್ಯಾಸ, ಭಾಷಣಗಳೆ ಇಂದು ಮುನ್ನೆಲೆಯಲ್ಲಿರುವಾಗನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?ಅನ್ಯರೆನಿಸಿದ ವಿದೇಶಿಗರಿಗೆ ಏಸುವಿನಂತೆ ಕಂಡನಿನ್ನ ನಿಲುವು ನಮಗಿನ್ನೂ ಅರ್ಥವಾಗದಿರುವಾಗ ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಗಾಂಧಿ ಎಂಬ ಹೆಸರೇ ಭಾರವಾದ ಈ ಹೊತ್ತಿನಲಿ“ಸರಳ ಜೀವನ ಉನ್ನತ ಚಿಂತನೆ”“ಸೇವೆಯ ಪ್ರತಿಫಲ ಸೇವೆಯೇ”ಎದೆಯೊಳಿಳಿಸಲಾಗದ ತತ್ವಗಳಾಗಿರುವಾಗ,ಈಶ್ವರ-ಅಲ್ಲಾ, ರಾಮ-ರಹೀಮ ಎಲ್ಲಾ ಒಂದೇಎಂದ ನಿನ್ನ ದೇಶದಲ್ಲಿ ಹೆಸರು, ಬಣ್ಣಗಳೇ ರಾರಾಜಿಸುತ್ತಿರುವಾಗನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಆದರೂ ಹತಾಶೆಯ ಮೀರುವೆನಿನ್ನಂತೆ  ಬದುಕಲಾಗದಿದ್ದರೂ ಆತ್ಮ ವಂಚನೆಯಲಿ ಬಳಲದಂತೆ ಬದುಕುವ ಸರಳ ಮಾರ್ಗವನ್ನು ಕಲಿತಿದ್ದೇನೆ.ಮತ್ತೆ ಮತ್ತೆ ನನ್ನೊಳಗೆ ನಿನ್ನ ಕರಗಿಸಿಕೊಳ್ಳುತ್ತೇನೆ.ನೀ ತೋರಿದ ಬದುಕಿನ ಸಂತಸದ ಸರಳ ನಡೆಯ ಕಂಡು ಪುಳಕಿತನಾಗುತ್ತೇನೆ.ಜೀವಿಸುತ್ತೇನೆ, ಜೀವನವನ್ನು ಸಂಭ್ರಮಿಸುತ್ತೇನೆ.  ರಘುಪ್ರಸಾದ ಮರಿಯಮ್ಮನಹಳ್ಳಿ  

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” Read Post »

ಕಾವ್ಯಯಾನ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” ನೆರಳು ಬೆಳಕಿನಾಟಸದ್ದಿಲ್ಲದೇ ನಡೆದಿದೆಪ್ರಕೃತಿಯ ಸೊಬಗಲೂಹಣಾ ಹಣಿ ಗದ್ದಲವಿಲ್ಲದೆ ಸಾಗಿದೆ. ಬಗೆಯ ಆಕಾರಅನಂತ ಶಕ್ತಿಯ ಹೊದಿಕೆಬಾನಂಚಿನ ವರೆಗೂರಮ್ಯ ಮನೋಹರ. ಒಂದೊಮ್ಮೆ ಬಿಡುಗಡೆಸಿದ್ಧವಾಗಿಯೂ ಇದೆಆಶವಾದುವೂ ಜೊತೆ ಜೊತೆಗೆಹಂಬಲದ ದಿನಮಾನಗಳೂ ಇವೆ. ಹೊತ್ತು ಮುಳುಗುವ ಮುನ್ನಆಯ್ದುಕೊ ಮುತ್ತುಬಿತ್ತರಿಸಿ ಬಿಡು ಹಿಡಿದಿಟ್ಟ ಶಕ್ತಿಮತ್ತೇನಿದೆ ಮಮತೆ ಮಡಿಲು ಬಿಟ್ಟು ಮೆತ್ತನೆ ಹಾಸಿಗೆ ಹೊದಿಯುವ ಮುನ್ನಶೋಧಿಸಿ ಬಿಡು ರೋಧನೆಯ ಹತ್ತಿಕ್ಕಿಬೋಧನೆಯ ಅರಿವಿನ ಹೊನಲಲಿಚಿತ್ತ ಶುದ್ಧಿ ಮಾಡಿಕೋ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” Read Post »

ಕಾವ್ಯಯಾನ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು”

ಕಾವ್ಯ ಸಂಗಾತಿ ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” ಅಗೋ ಆ ಆಕಾಶದಲ್ಲಿಮೋಡಗಳು ಚಲಿಸುವುದು ನಿಲ್ಲುವುದಿಲ್ಲ!ಯಾರ ಕಣ್ಣೀರಿದ್ದರು ಇಲ್ಲದಿದ್ದರುಮಳೆಯು ಬರುವುದು ನಿಲ್ಲುವುದಿಲ್ಲ! ಸ್ಮೃತಿಯ ಬಾಗಿಲ ಮೇಲೆಒಂದಾದ ಮೇಲೊಂದು ಋತುಗಳ ಬೆರಳುಗಳುಮುಚ್ಚಿದ ಗುರುತು ಬಿಡುವುದುನಿಲ್ಲುವುದಿಲ್ಲ! ನನಗೆ ಗೊತ್ತು ಈ ಕಾಲದ ಜಾತ್ರೆಯೊಳಗೆಹೃದಯ ತಪ್ಪಿಹೋಗುವುದು ನಿಲ್ಲುವುದಿಲ್ಲ!ಕೈಚೆಲ್ಲಿದ ಕ್ಷಣಗಳಿಗೆ ಇಲ್ಲಿಮತ್ತೆ ಹೆಸರು ಕೊಡಲಾಗುವುದಿಲ್ಲ! ಇಷ್ಟಾದರೂ ಹಾರಿ ಹೋದ ಹಕ್ಕಿಗಳರೆಕ್ಕೆಗಳ ಸದ್ದುನನ್ನ ಅಂತರಂಗದೊಳಗೆ ಉಳಿಯುವುದಿಲ್ಲ!ಅವು ಗೂಡಿನಲ್ಲಿ ಬಿಟ್ಟುಹೋದಬೆಚ್ಚಗಿನ ನಿಶ್ಶಬ್ದ ನನ್ನದಾಗುವುದಿಲ್ಲ!ಒಮ್ಮೆ ದೀಪ ಹಚ್ಚಿದ ಕೈಗಳುಮತ್ತೆ ಈ ಕತ್ತಲಿನಲ್ಲಿನನಗಾಗಿ ಬೆಳಕು ಹಂಚುವುದಿಲ್ಲ! ಈಗ ನೋಡಿ ಈ ಒಣಗಿದ ನದಿಯ ತಳದಲ್ಲಿಚಿಕ್ಕ ಜಲಧಾರೆಮೌನವಾಗಿ ಹುಟ್ಟಿ ಜಿನುಗುವುದುನಿಲ್ಲುವುದಿಲ್ಲ!ನಾ ಕಂಡರೂ ಕಾಣದಿದ್ದರೂನದಿ ಸಮುದ್ರದ ದಾರಿ ಬಿಟ್ಟು ಬರುವುದಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” Read Post »

ಕಾವ್ಯಯಾನ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು”

ಕಾವ್ಯ ಸಂಗಾತಿ ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” ಯುಗಗಳು ಉರುಳಿದರೂ ಮರೆಯದ ಆಸರೆ,ಅಮ್ಮನ ಸೀರೆಯ ಆ ಒಂದು ಸೆರಗು;ಅದರೊಳು ಅಡಗಿತ್ತು ಜಗದೊಳಗಿನ ಮಮತೆ,ಕಣ್ಣೀರ ಒರೆಸುತ್ತಿದ್ದ ದಿವ್ಯ ಬೆರಗು. ಬಿಸಿ ಪಾತ್ರೆಗೆ ಹಿಡಿಕೆಯಾಗಿದ್ದ ಆ ತುದಿ,ಮಗುವಿನ ಮುಖದ ಮಸಿ ತೊಳೆಯುವ ನದಿ;ನಾಚಿಕೆಗೆ ಅಡಗುದಾಣ, ಚಳಿಗೆ ಹೊದಿಕೆ,ಅಮ್ಮನ ಸೆರಗೊಂದೇ ಬಾಳಿನ ಅಸ್ತಿತ್ವದ ನಂಬಿಕೆ. ಗಂಟು ಹಾಕಿದರೆ ಕಳೆದುದ ಕರುಣಿಸುವ ಮಾಯೆ,ಕಾಸು ಬಚ್ಚಿಟ್ಟ ಚಲಿಸುವ ಬ್ಯಾಂಕಿನ ಛಾಯೆ;ಸುಡುವ ಕಣ್ಣಿಗೆ ಉಸಿರಿನ ಬಿಸಿ ಒತ್ತುವ ಸಾಂತ್ವನ,ಆ ಸೆರಗಿನ ನೆರಳಲ್ಲೇ ಅರಳಿತ್ತು ಧನ್ಯ ಬಾಲ್ಯದ ಜಗತ್ತಿನ ಪಯಣ. ಆದರೆ… ಕಾಲದ ಚಕ್ರ ಉರುಳಿದೆ ಇಂದು,ಉಡುಗೆ ತೊಡುಗೆಯ ರೂಪ ಬದಲಾಗಿದೆ ಅಂದು;ಜೀನ್ಸಿನ ಜೇಬಲಿ ಜಾಗವಿಲ್ಲ ಆ ಸೆರಗಿಗೆ,ಆಧುನಿಕತೆಯ ಓಟದಲಿ ಕಳೆದುಹೋಯಿತೇ ಆ ನೆರಳಿಗೆ? ಬಟ್ಟೆಯ ಸೆರಗು ಇಲ್ಲದಿರಬಹುದು ಜೀನ್ಸಿನ ಅಂಚಿನಲ್ಲಿ,ಆದರೆ ಅಮ್ಮನ ಮಮತೆ ಎಂದೂ ಕಮ್ಮಿಯಾಗದು ನೆನಪಿನಲ್ಲಿ;ಸೆರಗಿನ ಗಂಟಿನ ಹಣವೀಗ ಬ್ಯಾಂಕಿನ ಖಾತೆಯಾಗಿದೆ,ಕಣ್ಣೀರ ಒರೆಸುತ್ತಿದ್ದ ಕೈಗಳು ಈಗ ಹೆಗಲಿಗೆ ಹೆಗಲು ನೀಡಿದೆ. ರೂಪ ಬದಲಾದರೂ ಕರುಳಿನ ಕುಡಿ ಪ್ರೀತಿ ಬದಲಾಗದು,ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಶ್ರಯ ಎಂದೂ ಮುಗಿಯದು;ಸೀರೆಯ ಸೆರಗಿಗೆ ತಲೆಬಾಗುತ್ತಲೇ ಇಂದಿನ ತಾಯ್ತನವನ್ನೂ ಗೌರವಿಸೋಣ,ಯುಗ ಯಾವುದೇ ಆದರೂ ಅಮ್ಮನ ಪ್ರೀತಿಯೇ ಜಗದ ಶಕ್ತಿ ಎನ್ನೋಣ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” ಸೂರ್ಯ ಉದಯಿಸುತ್ತಾನೆಈಗ ಕೋಳಿ ಕೂಗುವದಿಲ್ಲ.ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿರೈಲು ಬಸ್ ಆಟೋದಲ್ಲಿ ಪಯಣಕಾರ್ಖಾನೆಗೆ ಜನರ ಜಂಗುಳಿ.ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.ನಗುವುದೇ ಕಡಿಮೆ .ದುಗುಡು ತಳಮಳ ಆತಂಕ .ದೇಶದಲ್ಲಿ ಬರ ಬಡತನ ‘ಸುದ್ಧಿ ಮಾಧ್ಯಮಗಳ ಅಬ್ಬರ .ದಿನಸಿ ಅಂಗಡಿಯ ಮುಂದೆ ಸಾಲು.ಗುಡಿ ಮಸೀದೆ ಚರ್ಚು ಭಿಕ್ಷುಕರು.ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.ಕಳೆದುಕೊಂಡಿದ್ದೇವೆ ಜೀವ ಜಾಲವಕಾಣುತ್ತಿಲ್ಲ ಸಂತಸ  ನೆಮ್ಮದಿ ದಿನಗಳು.ಹುಡುಕುತ್ತಿರುವೆ ನನ್ನ ನಾನುಹೊಲದ ಗದ್ದೆಯ ಮಧ್ಯೆಅಚ್ಚ ಹಸುರಿನ ಪೈರುಕೆರೆ ತುಂಬಿದ ನೀರು .ಪಕ್ಷಿ ಇಂಚರ ಧ್ವನಿಯ ಕೊರಳು .ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ ಡಾ.ಶಶಿಕಾಂತ.ಪಟ್ಟಣ ಪುಣೆ

ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” Read Post »

ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಅಂತರ”

ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ.  ಎನ್.ಜಯಚಂದ್ರನ್ 

ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »

You cannot copy content of this page

Scroll to Top