ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….”

ಕಾವ್ಯ ಸಂಗಾತಿ ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ “ನನ್ನೊಲವೇ….” ನಿನ್ನ ಪ್ರೀತಿಯ ಹಂಸವೇ ನಾನುನಿನ್ನ ಮುಗುಳ್ನಗೆಯ ಬೆಳಕೇ ಚೆಂದನಮ್ಮ ಒಡನಾಟದ ಒಲವೇ ಅಂದ// ಎದೆಯ ಗೂಡಿನ ಉಸಿರೇ ನೀನುನಿನ್ನ ನೆರಳಲಿ ಬೆರೆತಿರುವೆ  ನಾನುಕಣ್ಣ ಸನ್ನೆಯ ಸವಿಯೇ ಹೊಸತುನಿನ್ನೋಲವ ಸುಖವೇ ಅಮೃತವು// ನನ್ನ ಬಾಳಿಗೆ ನೀನೇ ಬೆಳಕುನಿನ್ನ ಪ್ರೀತಿಯೇ ನನಗೆ ಬೆರಗುಕಾಲ ಕಳೆಯಲಿ ನಿನ್ನೊಡನೆ ನಡೆಯುತಜೀವ ಸಾಗಲಿ ನಿನ್ನನ್ನೇ ನಂಬುತ// ನೂರು ವಸಂತ ನಗುತಾ ಬಾಳುನನ್ನ ಪ್ರೀತಿಯ ಮುದ್ದಿನ ಜೇನುಹುಟ್ಟು ಹಬ್ಬದ ಶುಭಾಶಯಗಳುಕಣ್ಣಲ್ಲೇ ಮಾತನಾಡುವ ಜಾಣನಿಗೆ // ರುತಿ (ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ

ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….” Read Post »

ಕಾವ್ಯಯಾನ

ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ”

ಕಾವ್ಯ ಸಂಗಾತಿ ಸವಿತ “ಮೊಬೈಲೆಂಬ ಮಾರಿ” ಹಗುರವಾಗಲೆಂದು ಹೆಗಲೇರಿದ ಭಾರವನ್ನೆಲ್ಲ ನಾವಿಂದುಎ.ಆಯ್. ಬೆನ್ನ ಮೇಲೆ ಏರಿಸಿದ್ದೇವೆ . ಸಿಗಲಾರದ ಸುಖವನ್ನು ಆಧುನಿಕತೆಯ ಸೋಗಿನಲ್ಲಿ ನಾವು ನಮ್ಮಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ. ಸೆಣಸಾಡಿ ,ಗ್ರಹಣ ಹಿಡಿದ ಮನಸ್ಸನ್ನುಶೋಚನೀಯ ಸ್ಥಿತಿಯಲ್ಲಿ ಅದುಮಿಟ್ಟಿದ್ದೇವೆ. ದಿನದ ಕ್ಷಣ -ಕ್ಷಣಗಳನ್ನುಕಣ್ಣು ಕೆಂಪಾಗುವಂತೆ ಮೊಬೈಲ್ ಬಳಕೆಯಲ್ಲಿ ಬಳಸುತ್ತಿದ್ದೇವೆ. ದಣಿದಾಗಲೂ ಕಣ್ಣುಗಳಿಗೆ ಸಾಂತ್ವನ ಹೇಳದೆ ಇನ್ನೂಇನ್ನೂ ದುಡಿಸುತಿದ್ದೇವೆ. ಹೊಸ ವಿಷಯ, ಹೊಸ ಆಲೋಚನೆಗಳನ್ನು ಹೊಸ ಆಯಾಮದೊಳಗೆ ಪಡೆಯಲು ಸಂತೋಷವೇ!! ಆದರೆ….ಹಿಂದಿನ ಸಂಸ್ಕಾರ ಪರಂಪರೆಗಳನ್ನು ಸದ್ದಿಲ್ಲದೆ ಮಂಗಮಾಯ ಮಾಡುತ್ತಿದ್ದೇವೆ. ತಾಂತ್ರಿಕತೆ ಬೇಕು ಆಧುನಿಕತೆಯು ಬೆಳೆಯಲೇ ಬೇಕು ಆದರೆ ಇತಿಮಿತಿಗಳ ಲಕ್ಷ್ಮಣ ರೇಖೆಯೊಂದು ಇರಲೇಬೇಕು. ಬಾಲ ವೃದ್ಧಾದಿಗಳಿಂದ ಎಲ್ಲರೂ ತಮ್ಮ ಜೀವಿತದ ಸಮಯವನ್ನು ಈ ಒಂದು ಜಂಗಮ ವಾಹಿನಿಯಲ್ಲಿ ಕಳೆಯುತ್ತಿರುವುದಕ್ಕೆ ಆ ಭಗವಂತ ನಮ್ಮನ್ನು ಶಪಿಸುತ್ತಿರಬಹುದು. ದೇಹ ದಣಿಸು, ದುಡಿದು ತಿಂದು ಅಂತ್ಯವನ್ನು ಕಾಣಿರೆಂದು ಹುಟ್ಟಿಸಿದವನಿಗೆ ಈ ಮಾಯಾ ಜಗತ್ತು ಯಾಕಾದರೂ ಅಂಟಿಕೊಂಡಿದೆ ಅಂದುಕೊಳ್ಳುತ್ತಿರುವುದಂತುಮಹಾ ಸತ್ಯ ,ಸತ್ಯ !! ಸವಿತ

ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ” Read Post »

ಕಾವ್ಯಯಾನ

ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”

ಕಾವ್ಯ ಸಂಗಾತಿ ಅನ್ನಪೂರ್ಣ ಸು ಸಕ್ರೋಜಿ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”   *ಒಂದೇ ಪ್ರೀತಿಯ ಪಯಣದ* *ಮೂರು ಸುಂದರ ಅಧ್ಯಾಯಗಳು* ನನ್ನ ಅಪ್ಪ,ನನ್ನ ಮಕ್ಕಳ ಅಪ್ಪ,ನನ್ನ ಮೊಮ್ಮಕ್ಕಳ ಅಪ್ಪ. ಸಂಸ್ಕಾರವಂತ ನನ್ನಪ್ಪ ಮೂಲ ಬೇರುಸದ್ಗುಣವಂತ ನನ್ನ ಮಕ್ಕಳ ಅಪ್ಪ ಗುರುಬುದ್ಧಿವಂತರು ಮೊಮ್ಮಕ್ಕಳ ಅಪ್ಪಂದಿರುಸೌಭಾಗ್ಯವಂತೆ ನಾ ಕಂಡ ಪುರುಷರು|| ಅಪ್ಪ ಸುಂದರ ಭವಿಷ್ಯಬೀಜ ಬಿತ್ತಿದರುಪತಿಯು ಕನಸುಗಳಿಗೆ ರೆಕ್ಕೆ ಕಟ್ಟಿದರುಮಗ ಅಳಿಯಂದಿರು ಸಾಕಾರಿಸಿದರುಪುಣ್ಯವಂತೆ  ನಾ ಕಂಡ ಪುರುಷರು|| ನನ್ನಪ್ಪ ನೀತಿ ತ್ಯಾಗದ ಮಹಾಸಾಗರ,ಮಕ್ಕಳ ಅಪ್ಪ ಸತ್ಯ ಪ್ರೀತಿಯ ಆಗರಮೊಮ್ಮಕ್ಕಳ ಅಪ್ಪ ಜ್ಞಾನದ ಭಂಡಾರಭಾಗ್ಯವಂತೆ ಜೀವನ ಆನಂದಸಾಗರ|| ಸಂಸಾರದ ರಥ ಎಳೆಯುವ ಸಾರಥಿಪತ್ನಿಯ ಪ್ರೀತಿ ವಿಶ್ವಾಸದ ಸಂಗಾತಿಕುಟುಂಬ ಜವಾಬ್ದಾರಿಯ ಸತ್ಯವೃತಿಅಪ್ಪನೆಂದರೆ ನಿಷ್ಕಾಮಕರ್ಮಯೋಗಿ|| ಗಂಭೀರತೆ, ಸಮಾನತೆ ಏಕತೆ ಪ್ರತೀಕಮಮತೆಯ ಮಹಾಕಾವ್ಯದ ಸಂಕೇತವ್ಯಕ್ತವಾಗದ ಪ್ರೀತಿಯ ಮೌನ ಆರಕ್ಷಕಸೂರ್ಯನಂತೆ ಬೆಳಕನೀವ ನಾಯಕ| ಈ ದಿನ ವಿಶ್ವ ಅಪ್ಪಂದಿರ ಶುಭದಿನಮನಃಪೂರ್ವಕ ಶುಭ ಕೋರುವೆನುನಾ ಕಂಡ ಕಾಣುತ್ತಿರುವ ಪ್ರೀತಿ ಪಯಣಸುಂದರ ಮೂರು ಅಧ್ಯಾಯಗಳನ್ನು||  ಅನ್ನಪೂರ್ಣ ಸು ಸಕ್ರೋಜಿ* *ಪುಣೆ*

ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…” Read Post »

ಕಾವ್ಯಯಾನ

ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ”

ಕಾವ್ಯ ಸಂಗಾತಿ ಹಮೀದ್‌ ಹಸನ್‌ ಮಾಡೂರು “ನಮ್ಮಪ್ಪ” ಬೆಳಿಗ್ಗೆ ಎದ್ದು—–ಮನೆ ಬಿಟ್ಟು ಓಡುವನಿಜ ಯಜಮಾನನೇ ನಮ್ಮಪ್ಪ,!! ದುಡಿದು ನಿತ್ಯವೂ….ದನಿದು ಮನೆಗೆ ಬರುವನಿಜ ಮನೆದೊಡೆಯ ನಮ್ಮಪ್ಪ,!! ಶ್ರಮದ ಬೆವರ ಸುರಿಸಿ….ಕಷ್ಟ ಪರಿಶ್ರಮ ನಿತ್ಯ ಸಹಿಸಿದನಿಜ ಕರ್ಮಯೋಗಿಯೆ ನಮ್ಮಪ್ಪ,!! ಕುಟುಂಬ ಸಂಸಾರ…ಹೆಗಲಿಗೇರಿಸಿ ಹೊರಲಾರದಹೊಣೆ ಹೊತ್ತ ಸಾಧು ನಮ್ಮಪ್ಪ,!! ತನಗಾಗಿ ಸೂನ್ಯ….ತನ್ನವರಿಗಾಗಿ ತಾನು ಧನ್ಯನೆಂದತ್ಯಾಗಮಯಿ ಆ ಮಾಣಿಕ್ಯ ನಮ್ಮಪ್ಪ,!! ವೃದ್ಧಾಪ್ಯದಲಿ ಎಂದೂ…ಮರೆಯದಿರೋಣ ಆ ಹೆತ್ತವರ“ಮುತ್ತು ಮಾಣಿಕ್ಯ” ಸಮ ಅಪ್ಪಂದಿರ.!! ಹಮೀದ್ ಹಸನ್ ಮಾಡೂರು

ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ” Read Post »

ಕಾವ್ಯಯಾನ

ಜಯಂತಿ ಕೆ.ವೈ. ಕವಿತೆ “ಅಪ್ಪನೆಂದರೆ….”

ಕಾವ್ಯ ಸಂಗಾತಿ ಜಯಂತಿ ಕೆ.ವೈ. “ಅಪ್ಪನೆಂದರೆ….” ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗನಾನು ಕೈಗೂಸು!ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದುವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ ಅಪ್ಪನ ನೆನಪು ಕಾಡುವುದುಅಪ್ಪನ ಹೆಸರು ಲೇಟ್……ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!ಅಪ್ಪನೆಂದರೆ …….ಅಮ್ಮನ ನೆನಪಕೋಶಗಳಿಂದಹೊರಹೊಮ್ಮಿದ ಭಾವ!ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!ಮತ್ತೆನನಗುಸಿರುಕೊಟ್ಟವನು!!ಅಪ್ಪನೆಂದರೆ…. ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗನಾನು ಕೈಗೂಸು!ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದುವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ ಅಪ್ಪನ ನೆನಪು ಕಾಡುವುದುಅಪ್ಪನ ಹೆಸರು ಲೇಟ್……ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!ಅಪ್ಪನೆಂದರೆ …….ಅಮ್ಮನ ನೆನಪಕೋಶಗಳಿಂದಹೊರಹೊಮ್ಮಿದ ಭಾವ!ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!ಮತ್ತೆನನಗುಸಿರುಕೊಟ್ಟವನು!! ಜಯಂತಿ ಕೆ ವೈ

ಜಯಂತಿ ಕೆ.ವೈ. ಕವಿತೆ “ಅಪ್ಪನೆಂದರೆ….” Read Post »

ಕಾವ್ಯಯಾನ

ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು”

ಕಾವ್ಯ ಸಂಗಾತಿ ಗಾಯತ್ರಿ ರವಿ. ಹುಬ್ಬಳ್ಳಿ “ಗಾಂಧಿ ನೋಟು”  ಕಚೇರಿಯ ಖಜಾನೆಯಲ್ಲಿ ಗಾಂಧಿ ನೋಟಿನದೇ ದರ್ಬಾರು ಹೊಸ ನೋಟುಗಳು  ಬಂದರೆನೋಟವೆಲ್ಲ ಅವನೆಡೆಗೆ ಸೂಸುವ ನೋಟಿನ ಸುವಾಸನೆ  ಒಂದೇ ದಾರದಲ್ಲಿ ನೂರರ ಕಟ್ಟು ಈಗಷ್ಟೇ  ಜನ್ಮತಳೆದ ಎದ್ದೇಳಲು  ಓಲಾಡುವ ಎಳೆಗರುವಿನ  ನೊಸಲು  ಲೆಕ್ಕ ಒಪ್ಪಿಸುವಾಗ ಹೆಚ್ಚಿಗೆ ಬಂದರೆ ತಪ್ಪಿದೆ ಅಂತಲೇ ಅರ್ಥ  ಕಡಿಮೆಯಾದರೆ ಮತ್ತೆ ಮತ್ತೆ ಎಣಿಸುವ ಯಂತ್ರದ ಬಾಯಿಂದ ಹೊರಗೆ ಬರುವ  ಅಲ್ಲಿಯೂ ಸರಿಯಾಗಲಿಲ್ಲವೆಂದರೆ ಕೈಯಿಂದ ಒಂದೊಂದೇ ನೋಟನ್ನು ಎತ್ತಿ ಎತ್ತಿ ಹಾಕುವುದು  ಒಂದೊಮ್ಮೆಹರಿದ ನೋಟಿಗೆ  ಹಾಳೆಯ ತುಂಡರಿಸಿ ಹದವಾಗಿ ಹಚ್ಚಿ ಆಪರೇಷನ್ ಮಾಡಿದ್ದುಉಂಟು ಎಂದೂ ಕಳೆಗುಂದದ ನಗು ಅವನದು  ಮಾಸಿದ ಕಪ್ಪಾದ ಇಟ್ಟಲ್ಲೇ ಇಟ್ಟು ಧೂಳು ತಿಂದ ಕಮಟು ವಾಸನೆಯ ಮಳೆಯಲ್ಲಿ ತೋಯಿದ ಬಣ್ಣ ವಾಡಿದ ಬೆವರಲಿ ಬೆಂದಬರಿ ಮೈ ಕುಬೇರ  ಕೌಂಟರಿನಿಂದ  ಖಜಾನೆಗೆ ಬರುವಷ್ಟರಲ್ಲಿ ನಾಲ್ಕಾರು ಬಾರಿ ಎಣಿಸಿಕೊಳ್ಳುವ  ಸ್ಥಿರವಾಗಿ ನಿಲ್ಲದ ಪಾದರಸ  ಗಾಂಧಿ ನೋಟುಗಳೆಂದರೆ ಬರಿ ಸಂಖ್ಯೆಗಳಲ್ಲ ನೋಟಿನ ನೋಟದಲ್ಲೂ ಗಾಂಧಿಯ ಸತ್ಯಾನ್ವೇಷಣೆ. ಗಾಯತ್ರಿ ರವಿ. ಹುಬ್ಬಳ್ಳಿ

ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು” Read Post »

ಕಾವ್ಯಯಾನ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” ಭೂಪಟದ ಗೆರೆಗಳಲಿರಕ್ತದ ಕಲೆಗಳ ಹಸಿವು,ಅಧಿಕಾರದ ಅಮಲಿಗೆಅನಾಥ ಮಗುವಿನ ಅಳುವೇ ನೈವೇದ್ಯ, ಉಕ್ಕಿನ ಹಕ್ಕಿಗಳ ಅಬ್ಬರಕೆಮಣ್ಣಾದವು ಬದುಕು,ಗೆಲುವಿನ ಪಟಾಕಿ ಅಡಿಯಲ್ಲಿಹೂತುಹೋದವು ಸಾವಿರ ಉಸಿರು, ತುತ್ತು ಅನ್ನದ ಪಾತ್ರೆಯಲಿಬೆಂದು ಹೋದವು ಮದ್ದು-ಗುಂಡು,ಮನೆಮಠದ ನೆನಪುಗಳಿಗೆಈಗ ಸ್ಮಶಾನವೇ ಕಡೆಯ ಉಡುಗೊರೆ, ದೇಶಪ್ರೇಮದ ಘೋಷಣೆಯಲಿಕಾಣದಾದವು ಒಲವಿನ ಕಣ್ಣು,ಯುದ್ಧದ ಬೂದಿಯಲಿ ಉಳಿದದ್ದುಬರಿಯ ಬೂದುಬಣ್ಣದ ಮಣ್ಣು, ಗಡಿ ದಾಟದ ಕನಸುಗಳಿಗೆಬಾಂಬುಗಳೇ ಅಂತಿಮ ವಿರಾಮ,ಗೆದ್ದವನ ಅಟ್ಟಹಾಸದಲಿಸತ್ತವನ ಹೆಸರಿಗಿಲ್ಲ ಆರಾಮ, ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,ಸಮಾಧಿಯ ಮೇಲೆ ನಿಂತು ನಗುತ್ತಿದೆ ಸಾಮ್ರಾಜ್ಯ;ಗೆದ್ದವನ ಇತಿಹಾಸದಲಿ ರಕ್ತದ ವಾಸನೆ,ಸತ್ತವನ ಮನೆಯಲಿ ಬರಿ ಗೋಡೆಯ ಮೌನ ರೋಧನೆ…. ನಾಮದೇವ ಕಾಗದಗಾರ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಮುಂಗಾರಿನ ಕರಿ ಮುಗಿಲು ಜಲಧಾರೆಯ ಸುರಿಸುತಿದೆ ನೋಡಾಇಳೆಯ ಮೊಗದಿ ನಗೆ ಮೊಗ್ಗು ಬಿರಿದು ಕಂಪು ಹರಡುತಿದೆ ನೋಡಾ ನೀಲಿ ಆಕಾಶದಿ ನೇಸರ ಮೂಡಿಸಿದ ಹೊಂಬಣ್ಣದ ಹೊನಲುಪ್ರಕೃತಿ ಮಡಿಲಲಿ ಮುಂಜಾವು ಪಕ್ಷಿಗಳ ಗಾನ ಕೇಳುತಿದೆ ನೋಡಾ ಒಲವಿನ ಚೈತ್ರ ಬರುವಿಗೆ ಬನವು ಹಸಿರುಟ್ಟು ಹೂ ಅರಳಿಸಿದೆನಿಸರ್ಗದ ಸೊಬಗು ಪ್ರೇಮಿಯ ಎದೆಯವೀಣೆ  ಮಿಡಿಯುತಿದೆ ನೋಡಾ ಧಾರಿಣಿಯ ಹೃದಯ ಸೂರ್ಯ ಕೋಪಕೆ ನಲುಗಿ ನರಳುತಿದೆ  ಮೌನದಿಬಿದ್ದ ಮಳೆಯ ರಭಸಕೆ ನದಿಯು ಕಡಲಾಗಿ ಮೊರೆಯುತಿದೆ ನೋಡಾ ಬೀಸುವ ಸುಳಿಗಾಳಿ ಪಾರಿಜಾತದ  ಪರಿಮಳ ತರುತಿದೆ ಸಂಜೆಇರುಳು ತಿರುಗುವ ತಿರೆಯಲಿ ಚಂದ್ರ ಪ್ರಭೆಯು ಕಾಣುತಿದೆ‌ ನೋಡಾ ( ಸಂಜು ಕೋಳೂರ ಹಳಿಯಾಳ ರಾಗಸಂಯೋಜನೆ ಮಾಡಿದ್ದಾರೆ ) ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹಸಿರು ತೇರು” ಹಸಿರು ತೇರು ಹೊರಟಿದೆ,ಭುವಿಯೆಲ್ಲ ಹಬ್ಬವಾಗಿದೆ;ಮರದ ನೆರಳು ಹರಡಿದೆ,ಮನದೊಳಗೆ ಮುದತಂದಿದೆ. ಗಿಡವ ನೆಟ್ಟು ಬೆಳಸೋಣ,ಗಿರಿಯ ಸೊಬಗು ಉಳಿಸೋಣ;ನದಿಯ ನಗುವು ಕೇಳೋಣ,ನಾಳೆಯ ಬದುಕು ಕಾಪಾಡೋಣ. ಎಲೆಯ ನಾದವು ವೀಣೆಯದು,ಹೂವಿನ ಪರಿಮಳ ಗೀತೆಯದು;ಹಕ್ಕಿಯ ಕಲರವ ವೇದವದು,ಪ್ರಕೃತಿಯ ಮಡಿಲೇ ಸ್ವರ್ಗವದು. ಮಳೆ ಸುರಿಯಲು ಕಾಡಿರಬೇಕು,ಕಾಡು ಬೆಳೆಯಲು ನಾವಿರಬೇಕು;ಉಸಿರು ಉಳಿಯಲು ಮರವಿರಬೇಕು,ಜಗವು ಉಳಿಯಲು ಹಸಿರಿರಬೇಕು. ಬನ್ನಿ ಎಲ್ಲರು ಕೈಜೋಡಿಸಿ,ಭೂಮಿತಾಯಿಯ ಪ್ರೀತಿಗೋಸ್ಕರ;ಹಸಿರು ತೇರನು ಎಳೆಯೋಣ,ಭವ್ಯ ಭವಿಷ್ಯವ ಕಟ್ಟೋಣ. ಹಸಿರು ನಮ್ಮ ಉಸಿರಾಗಲಿ,ಹಸಿರು ನಮ್ಮ ಹೆಸರಾಗಲಿ;ಹಸಿರು ತೇರು ಸಾಗುತಿರಲಿ,ಭುವಿಯೆಲ್ಲ ನಗುತಿರಲಿ. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು” Read Post »

ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….”

ಕಾವ್ಯ ಸಂಗಾತಿ ಆದಪ್ಪ ಹೆಂಬಾ “ಜಗದೊಡೆಯಮುನಿದರೇ….” ಇನಿತು ಮುನಿಯದೆಎನಿತು ದಣಿಯದೆನಗುತಲಿಹನು ನೇಸರಹೊನ್ನ ಬೆಳಕುಅರುಣ ಕಿರಣಚೆಲ್ಲುತಿಹನು ದಿನಕರ|| ಮತಿಹೀನ ಮನುಜಭೂಮಾತೆಯ ತನುಜಅಮ್ಮನೆಂಬುದ ನೋಡದೇಹೊನ್ನ ಮಣ್ಣನು ಅಗೆಯುತಲಿರುವೆಹಸಿರು ವನಸಿರಿಯ ಬಗೆಯುತಲಿರುವೆಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ|| ಜಗವ ಬೆಳಗುವಅವನ ಕಣ್ಣಿಗೇ ಮಣ್ಣಂತೆಕಾಣಲೊಲ್ಲದು ತಿಳಿಯಲೊಲ್ಲದುನಿಮ್ಮಗಳ ಕಪ್ಪು ರಂಗಿನಾಟಕೊಂಚ ತಾಳಿಪಾಪದ ಫಲ ಉಣ್ಣುವಿರಂತೆ|| ನೇಸರನೊಬ್ಬಮಹಾ ಮರೆಗುಳಿನಿತ್ಯ ಬರುವನುಎಲ್ಲವ ಮರೆತುಮತ್ತೆ ಮುಳುಗುವನುಬೇಸರದಿ ಮುನಿದು|| ಜಗದೊಡೆಯ ಮುನಿದರೆಉಳಿಗಾಲ ನಮಗಿಲ್ಲಯೋಚಿಸಿ ಮುಂದಡಿ ಇಡಿಮಿಂಚಿ ಹೋದರೆ ಕಾಲಚಿಂತಿಸಿಯೂ ಫಲವಿಲ್ಲ|| ಇಂದಿದೆಯೋಮುಂದಿದೆಯೋಎಂದಿದೆಯೋಮನುಕುಲದ ಮಾರಿಹೋಮತಿಳಿದೇಳು ಸಿಡಿದೇಳು ಕೂಗೇಳುತಡೆಯೋಣ ಭೂರಮೆಯ ನಾಶವನ್ನ|| ಆದಪ್ಪ ಹೆಂಬಾ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….” Read Post »

You cannot copy content of this page

Scroll to Top