ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಕಾವ್ಯ ಸಂಗಾತಿ “ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ ಬಿಕರಿಯಾದ ಪ್ರೀತಿ ಅಂದ್ರೆ ಗೊತ್ತೇನು!ಇದ್ದದ್ದೆಲ್ಲವನ್ನೂ ಕೊಟ್ಟುಒಂದು ನಗುವಿಗೆ ಕಾಯೋದುಅದು ಬರದಾಗ ಎದೆ ಖಾಲಿ ಆಗೋದು. ನಿನಗೊ ಪ್ರತಿ ಮಾತಿಗೂ ಅರ್ಥಕಂಡುಕೊಳ್ಳುವ ತವಕಅವರೊ ಪ್ರತಿ ಮಾತಿಗೂ ಬೆಲೆ ಕಟ್ಟಿದ್ರುನೀನು ಕಣ್ಣೀರಲ್ಲಿ ಹೆಸರು ಬರೆದೆಅವರು ಅದನ್ನ ಮಳೆಗೆ ಕೊಟ್ಟು ಹೋದ್ರು. ಒಲವಿನ ಪ್ರೀತಿ ಕೇಳಿದ್ದೇನು?ಸಿಗೋದು ಸುಳ್ಳಿನ ವ್ಯಾಪಾರ ಆಯ್ತು.ನಾನಿಲ್ಲವಾ ಎಂದಿದ್ದ ಕೈ,ಬಿಟ್ಟು ಹೋಗೋವಾಗ “ನಿನ್ನ ತಪ್ಪು”ಅಂದಿತ್ತು ಅದರಲ್ಲಿ ಅಚ್ಚರಿ ಏನಿಲ್ಲ. ಆದ್ರೂ ನಿನಗೆ ಗೊತ್ತಾ?ಬಿಕರಿಯಾದ ಪ್ರೀತಿ ನಿನ್ನನ್ನು ಚಿಕ್ಕದಾಗಿಸಲ್ಲಅದು ನಿನ್ನ ದೊಡ್ಡತನಕ್ಕೆ ಸಾಕ್ಷಿಯಾಕಂದ್ರೆ ಪ್ರೀತಿಸೋಕೆ ಧೈರ್ಯಬೇಕಲ್ಲವೆ ಮೋಸ ಮಾಡೋಕೆ ಅಲ್ಲ. ಅದಕೇಕೆ ಅಳುವೆ ಅಳುವುದಾದರೆಮನಸಾರೆ ಎದೆ ಹಗುರಾಗುವವರೆಗೆ ಅಳುಆಮೇಲೆ ಆ ಕಣ್ಣೀರನ್ನೇ ಶಕ್ತಿಮಾಡ್ಕೊಂಡು ಬಿಡು ಅದರಲ್ಲೆನಗೋದನ್ನ ಕಲಿತುಬಿಡು. ಬಿಕರಿಯಾದ ಪ್ರೀತಿಗೇಕೆ ಅಳುವೆನಿನ್ನನ್ನು ನಿಜವಾಗಿ ಪ್ರೀತಿಸೋಒಲವಿಗಾಗಿ ಕಾಯೋದಾ?ಕಾಯುವುದಾದರೆ ಇನ್ನೆಷ್ಟು ದಿನ.!?ಬರಬಹುದೆಂಬ ಊಹೆಯ ಬಿಟ್ಟು ಬಿಡು. ಊಹಿಸಿರೊದೆಲ್ಲವೂ ಇಲ್ಲಿ ನೈಜವಾಗಿನಡೆಯುವುದಿಲ್ಲ ಊಹೆಯೊಳುಬದುಕುತ್ತಿದ್ದರೆ ಅದು ಬದುಕಲ್ಲಬದುಕಿನ್ನು ಬಿಕರಿಯಾಗುವುದಕ್ಕಿಂತಮೊದಲೆ ನಿನ್ನ ನೀನು ಪ್ರೀತಿಸುವುದನ್ನಕಲಿತುಬಿಡು. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಕಾವ್ಯಯಾನ

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ”

ಕಾವ್ಯಸಂಗಾತಿ ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” ಅಮಾಯಕರ ಜೀವ ಹಿಂಡುವ ಅಧಿಕಾರಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರಮೆರೆದರು ತೋರಿಸಿ ಹಣದ ಅಹಂಕಾರಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ ಕೊನೆಗಾಲದ ನೋವ ನೀ ಅನುಭವಿಸುವೆಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿಬೆಳಕಾಗು ದೀನ ದಲಿತರ ಸೇವೆಯಲಿಕಾಯಕದಿ ಕೈಲಾಸ ನೋಡುವೆ ನೀನಿಲ್ಲಿದುರಹಂಕಾರದಿ ಮಣ್ಣು ಲೋಕದ ಬಯಲಲಿ ದುರಾಸೆಯ ಬದುಕಿನಲಿ ಮಾನವನ ಜೀವನಅತಿ ಆಸೆಯಲಿ ಮಾಡದಿರು ಮೋಸತನಕಾಣಬೇಕಿದೆ ನೂತನ ಜೀವನ ಪಾವನಲಂಚಾವತಾರದ ನೀಚ ರಕ್ಕಸರಿಗೆ ಈ ಕವನ ಡಾ.ಲತಾ ಎ. ಆರ್ ಬಾಳೆಹೊನ್ನೂರು

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಂಗಳ ಹೊಳಪು” ಹೂವಿನ ಪರಿಮಳ ಬಣ್ಣದಲ್ಲಿರದೆಸುಗಂಧವನೇ ಸೂಸುತಿದೆಸಹನೆಯ ತೊರೆದು ನಡೆಯಲು ಜಗದಲ್ಲಿಪ್ರೀತಿಯೇ ಸೋಲುತಿದೆ. ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ. ಕಂಗಳ ಹೊಳಪಿಗೆ ಮುತ್ತನು ಹುಡುಕಲುಮನಸ್ಸು ಕಡಲಾಳಕ್ಕೆ ಇಳಿಯುತಿದೆಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ. ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ. ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು” Read Post »

ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ -ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ಒಲವಮುಖಗಳು” 1ಹೊಳಿ ಮಗ್ಗುಲ ಕಲ್ಲುಚಿಗುರದು, ಒಣಗದುನೀನಿದ್ದೂ ನನ್ನಂತೆ..!2ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವುನಿನ್ನನ್ನೇ…ನಂಬಿದೆಮರದ ಕೊಂಬೆ ಬೇಕೀಗ…3ಸಿಮೆಂಟು ರೋಡೇ ಎರಡುತಿಂಗಳಿಗೆ ಸೀಳಿದೆ…ಒಲವಿಗೀಗವ್ಯಾಲಿಡಿಟಿ ಕಡಿಮೆ ಅಂತಿದ್ರಪ..4ಹಣದ ಹಿಂದೆ ಗಿರಕಿ ಹೊಡೆವಜಗತ್ತಿಗೆ ಒಲವಿನಭಾಷೆ ಹೊಸದು; ಕಾಗುಣಿತದ ಅರಿವಿಲ್ಲ5ಅವ್ವ ಮುನಿಸಿಕೊಂಡಾಗೆಲ್ಲಾಅಪ್ಪ ತುತ್ತು ಜಾಸ್ತಿ ಉಣ್ತಿದ್ದ;ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!6ಮಸಣ ದೂರ ಕಣೋ ಇಲ್ಲಿಂದಲೇ ಹೂಒಗೆವೆ ದಾರಿಯಲ್ಲಿಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..7ಬೆರಳು ಸೋಕದೆಯೂ ಒಲವ ಉಣಬಡಿಸಿದರಾಜಕುಮಾರನೆದುರುಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಒಲವಿನಾಸರೆ” ಬರಡು ಬಿರುಕು ನೆಲಕೆ   ,ನೀ ತಂದೆ ಪ್ರೀತಿಯಸ್ನೇಹ ಸಿಂಚನ.ಕತ್ತಲೆಯ ಹಾದಿಯಲಿ ಕೈಹಿಡಿದು,ಬೆಳಗಿಸಿದೆ ಒಲವಿನಶುಭ್ರ ಹಗಲನು. ಸೋತು ಕುಳಿತಾಗ ಸನಿಹ ಬಂದು,ನೀನಾದೆ ಒಲವಿನಾಸರೆ.ನಿನ್ನ ನಗುವಿನ ಮುಗ್ಧ ನೋಟಕೆ,ಕರಗುವುದು ಮನದ  ಬೇಸರ. ಮಾತುಗಳೇ ಇಲ್ಲದ ಮೌನದಲ್ಲೂ,ಭಾವನೆಗಳ ಅರಿತ ಜೀವ ನೀನು.ಕೋಟಿ ಜನ್ಮದಪುಣ್ಯದಂತೆ ಸಿಕ್ಕ,ನನ್ನ ಬಾಳಿನ ಬೆಳಕು ನೀನು.  ಇದ್ದು ಬಿಡು   ಜೊತೆಯಾಗಿ,ಕೊನೆಯವರೆಗೆಇರಲಿ ಈ ಪ್ರೀತಿಯ  ಭಾವ ಬಂಧನ.ನಿನ್ನೊಲವಿನ ಆಸರೆಯ ನೆರಳಲ್ಲೇ,ಸಾಗಲಿ ನನ್ನೀ ಜೀವನ.  ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ ಮೇಲೆಸ್ವರಗಳಿಂದ ಶಾಶ್ವತ ಅಚ್ಚು ಹಾಕಿದವಳು ಕೋಗಿಲೆ ಕರಗಿತುಎನ್ನುವುದುಕಾಲದ ಮಾತು ಮಾತ್ರ;ಆದರೆ ನಿನ್ನ ಗಾನ ಬೆಳಗಿನ ಮೊದಲಹಕ್ಕಿಯ ಕೂಗಿನಂತೆ,ಸಂಜೆಯ ಮೃದುವಾದಗಾಳಿಯಂತೆ,ಮಳೆಹನಿಯ ಸಂಗೀತದಂತೆ,ಭಕ್ತಿಯ ದೀಪದಜ್ಯೋತಿಯಂತೆಯುಗಯುಗಕೂ     ಮೊಳಗುತ್ತಲೇ ಇರುವುದು. ಓ ಗಾನಸರಸ್ವತಿಯೇ!ನಿನ್ನ ಕಂಠ ಮೌನವಾದರೂನಿನ್ನ ಸ್ವರ ಅಮರವಾಗಿದೆ;ನಿನ್ನ ದೇಹ ದೂರವಾದರೂನಿನ್ನ ಸಂಗೀತನಮ್ಮ ಉಸಿರಾಗಿದೆ. ಕೋಗಿಲೆ ಕರಗಲಿಲ್ಲ…ಜಾನಕಿ ರಾಗವಾಗಿಆಕಾಶದಲ್ಲಿ ಬೆರೆತಳು;ಭಾವವಾಗಿ ಮನಗಳಲ್ಲಿನೆಲೆಸಿದಳು;ಸಂಗೀತವಾಗಿ ಕಾಲಾತೀತಳಾದಳು. ನಿನ್ನ ಅಮರ ಗಾನಕ್ಕೆಶತಶತ ನಮನಗಳು. ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಣ್ಣ ನೋಟ” ರಾತ್ರಿ ನೀಲ ಗಗನದಲ್ಲೂ ಬಿಸೋ ಗಾಳಿ ಮಳೆಯಲ್ಲೂಚಂದಿರನು ಹೊಳೆಯುತಾನ.ನಿನ್ನ ಕಣ್ಣ ನೋಟದಾಂಗ ನನ್ನ ಹೃದಯ ಮಾತಿನಾಂಗಮನಸು ಸೇರಿ ಕನಸು ನೀಡುತಾವಾ… ಚುಕ್ಕಿ ಬೆಳಕ ಹೊಳಪಿನಲ್ಲೂ ಕಡಲ ತಟದ ತೀರದಲ್ಲೂಮನುಜ ಪ್ರೀತಿ ಕಾಣುತಾನಾ..ಒಲವ ಕಾಣೋ ಹೃದಯದಲ್ಲಿ ಮುತ್ತಿನಂತ ಮಾತಿನಲ್ಲಿನಗುವು ತಾನೇ ಮೂಡುತಾವ. ಬಳ್ಳಿ ಹೂವ ಕಾಣುವಾಗ ಮುಡಿಗೆ ತಾನೇ ಇರಿಸುವಾಗತನ್ನ ಚೆಲುವ ಬೀರುತಾವ…ಗೆಜ್ಜೆ ಶಬ್ದ ಮಾಡಿಕೊಂಡು ನೀಲ ಜಡೆಯ ಬೀಸಿಕೊಂಡುಬಿಂಕದಲ್ಲಿ ನಡೆಯುತಾವ… ಪಚ್ಚಾ ಪೈರು ಹುಲ್ಲಿನಲ್ಲೂ ಅರಳುತ್ತಿರುವ ಹೂವಿನಂತೆತನ್ನ ಸೊಗಸ ಚೆಲ್ಲುತಾವ..ಅವಳ ನಡೆಯ ನುಡಿಯಲ್ಲಿಸುಗಂಧ ಪರಿಮಳ ಬೀರುತಾವ… ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಕಥೆಗೆ ಒಂದು ಚಿತ್ರ……” ಚಿತ್ರ ಗೆರೆ ಬದುಕುಮೂರು ಒಂದು ಕಥೆಯ ದಾರಿಯಾರೋ ನಡೆದು ಹೋದಂತೆಇನ್ನಾರೋ ಹಿಂಬಾಲಿಸಿದಂತೆಕೆಲವು ಚಿತ್ರಗಳು ಮುಂದೆಓಡಿದಂತೆ ಕಾಲದ ಓಟಕ್ಕೆತೆಗೆವ ತರತರದ ಚಿತ್ರಗಳುಬಣ್ಣದ ಎಳೆಗಳ ಹೊದಿಕೆಕಾಣದ ಮುಖ ಪುಟಅಂದುಕೊಳ್ಳುವ ಸಲಿಗೆದೂರ ನಿಂತ ನಿಲುವುಹಸಿರಿನಿಂದ ಹುಟ್ಟಿದಸಸಿಯೊಂದು ಹಸಿರು ಹರಡಿಹಗೆರೆಗಳ ಚಿತ್ರಮೋಡದ ಮೇಲೊಂದು ಕುಳಿತಹನಿ ಮೋಡದ ಸನಿಹಚಿಟ್ಟೆ ಹೆಜ್ಜೆಯ ಗುರುತುಹಕ್ಕಿ ಗೂಡಿನ ಹಾಡುಮುಳುಗುವ ದಿಗಂತದಿಸಾಗುವ ಪುಟ್ಟ ದೋಣಿಹುಲ್ಲು ಹೊರೆಯ ನಡುವೆಮಗುವಿಗೆ ಕಟ್ಟಿಟ್ಟಅಮ್ಮನ ಹಸಿವೆಯ ರೊಟ್ಟಿಅಪ್ಪನ ಕಿಸೆಯಂಚಿನಲ್ಲಿಕುಳಿತ ಸೊಪ್ಪು ಕಟ್ಟಿನ ಬಾಕಿಯಾರಿಗೂ ಕಾಯದೇಹೊರಡುವ ಬಸ್ಸಿನ ಪಯಣದೂರ ದಾರಿಯ ನಡುವೆಇಳಿವ ಗುರುತಿಗೆಕಾಣುವ ಸಣ್ಣ ದಣಪೆಯಕೇಳದ ಕಥೆಗಳುಎಲ್ಲವೂ ವಾಸ್ತವದಚಿತ್ರದ ಕವಿತೆಗಳು ನಾಗರಾಜ ಬಿ. ನಾಯ್ಕ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……” Read Post »

You cannot copy content of this page

Scroll to Top