ಕಾವ್ಯಯಾನ

ಕಾವ್ಯಯಾನ

ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ […]

ಹಾಸ್ಯ

ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ      ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು.      ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ […]

ಪುಸ್ತಕ ಸಂಗಾತಿ

ಹುಲಿಕಡ್ಜಿಳ ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ […]

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ರಾಜಕಾರಣದ ಈ ಜೀವನ ಥಳುಕೆನಿಸುತ್ತದೆ ಎಚ್ಚರದಿಂದಿರುಕುರ್ಚಿ ತಲ- ತಲಾಂತರವಾಗಿ ತಮಗೆ ದಕ್ಕ ಬೇಕೆನಿಸುತ್ತದೆ ಎಚ್ಚರದಿಂದಿರು ಬದಲಾವಣೆ ಇಲ್ಲಿನ ನಿಯಮ ಯಾವುದೂ ಶಾಶ್ವತವಲ್ಲಮೃಗಜಲಕ್ಕೆ ಬೆನ್ನಟ್ಟಿದ ಪಶುವಿನಂತಾಗುತ್ತದೆ ಎಚ್ಚರದಿಂದಿರು ಬಿತ್ತಲಿಕ್ಕೆ ಹೋದವರು ಹೆಗ್ಗಣ ಬಿಲವನ್ನು ತೋಡಿದರಂತೆದಾರಿ ತಪ್ಪಿಸುವ ಆಸೆ-ಆಮಿಷಗಳನ್ನು ಒಡ್ಡಲಾಗುತ್ತದೆ ಎಚ್ಚರದಿಂದಿರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬ ತರಬೇತಿಯುಂಟುಮನ ನಾಚಿಕೆ,ಮಾನ ತೊರೆದು ಕೊರಡಿನಂತಾಗುತ್ತದೆ ಎಚ್ಚರದಿಂದಿರು ನಿಜಕ್ಕೆ ಸಮಾಧಿ ಕಟ್ಟಿ ಸುಳ್ಳಿಗೆ ಕಲಶವೇರಿಸುತ್ತಾರೆ ‘ಚೆಲುವೆ’ನಿನ್ನನ್ನೇ ನೀನು ನಂಬದಂತೆ ಭ್ರಮೆ ಹುಟ್ಟಿಸಲಾಗುತ್ತದೆ ಎಚ್ಚರದಿಂದಿರು ********

ಪುಸ್ತಕ ಸಂಗಾತಿ

ಮಕ್ಕಳಿಗಾಗಿ ನೂರಾರು ಕವಿತೆಗಳು ಕವಿ: ಸೋಮಲಿಂಗ ಬೇಡರಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿಪುಟಗಳು: 220ಬೆಲೆ: ರೂ. 175/-ಪ್ರಕಟಿತ ವರ್ಷ: 2019ಕವಿಯ ದೂರವಾಣಿ: 9741637606 ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು […]

ಅನುವಾದ ಸಂಗಾತಿ

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ಮೂಲ: ನೋಷಿ ಗಿಲ್ಲಾನಿ(ಉರ್ದು) ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದುನಿನ್ನೊಡನೆ ಸ್ನೇಹ ಕುದುರಿಸುವಷ್ಟೇ! ಸ೦ಪೂರ್ಣ ಹೊಸ ಕಥೆಯೆ ಇರಬಹುದುದಯವಿಟ್ಟು ವಿಷಯಕ್ಕೆ ಬಾ. ಈ ನೆರಳುಗಳಲ್ಲಿ ನಾ ಮುಳುಗಬಹುದುದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ! ನಿನ್ನ ದುಃಖವನ್ನರಿಯದೇ ಇದ್ದರೂನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ. ಹೃದಯ ಹಿ೦ಡಿ ಕೊಡ ಬೇಕು ರಕ್ತ!ನೋಡು, ಬರೆಯ ಬೇಡ ಪದ್ಯ! ಈ ಎಲ್ಲ ಅರ್ಥಗಳನ್ನುನಿರಾಕರಿಸುವುದುಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ! *********** ಮೇಗರವಳ್ಳಿ ರಮೇಶ್

ಕಾವ್ಯಯಾನ

ಬೋಧಿಸತ್ವನೊಂದಿಗೆ ಯಶೋಧರೆ —(ಯಶೋಧರೆಯ ಸ್ವಗತ ) ಲಕ್ಷ್ಮೀ ಪಾಟೀಲ್ ಅರಮನೆಯ ನೆನಪಾಗಿ ಬಂದೆಯಾ ಸಿದ್ಧಾರ್ಥಹೇಳದೆ ಹೋದರೆ ಸಿಗುವುದೇ ಜ್ಞಾನೋದಯ?ನಮಿಸಲಾರೆ ಮಂಡಿಯೂರಿ ನಿನಗೆಲೋಕದ ಗುರುವೆಂದು ನನಗೀಗಲೂ ನೀ ಸಿದ್ಧಾರ್ಥ ಗಾಢ ನಿದ್ದೆಯ ತಡವದೆ ಆ ರಾತ್ರಿ ನೀ ಹೇಳದೆ ಹೋದೆನನ್ನ ಮುಂದಿನ ಕತ್ತಲೆ ಕಳೆದೆ ನಿದ್ರೆ ಜಾರಿಸಿದೆಇಲ್ಲೊಂದು ಜ್ಞಾನೋದಯಕ್ಕೆ !ಮನೆ -ಮನದಾಚೆಗೊಂದು ಮಿಣುಕು ದೀಪ ಉಳಿಸಿದೆಬುದ್ದ ನಿನಗೊಂದು ಕೃತಜ್ಞತೆ ನಾನು ಹೆಂಡತಿಯಾಗಿ ಉಳಿದಿಲ್ಲರಾಹುಲ ಮಗನಾಗಿ ಉಳಿದಿಲ್ಲನಿನ್ನ ಭಿಕ್ಕು ಸಂಘದಲ್ಲಿ ನಾವು ಬಿಕ್ಕುಗಳಲ್ಲಈ ಅರಮನೆಯಲ್ಲಿ ಹುಟ್ಟಿ ಬೆಳೆದ ನೀನೀಗಅರಮನೆಯ ಮುಂದೆ […]

ಕಾವ್ಯಯಾನ

ಮುಖವಾಡಗಳ ಕವಿತೆಗಳು  ಸುಜಾತಾ ರವೀಶ್ ಮುಖವಾಡ ಧರಿಸಿ ಧರಿಸಿ ಬೇಸರವೆನಿಸಿ ತೆಗೆಯಹೋದಳು ಒಂದು ದಿನ  ಎಳೆದರೂ ಇಲ್ಲ ತೊಳೆದರೂ ಇಲ್ಲ  ಚಾಕುವಿನಿಂದ ಕೆತ್ತಿದರೂ ಬರಲಿಲ್ಲ  ಕೊನೆಗೆ ಡಾಕ್ಟರ ಬಳಿ ಹೋದಾಗ ತೆಗೆಯಲಾಗದು ಜೀವಕಪಾಯ ಎಂದರು!  ಗತ್ಯಂತರವಿಲ್ಲ ಮಾಡುವುದೇನು?  ಸಾಯಲು ತೆಗೆದಿಡುವುದಾ ಬದುಕಲು ಹಾಕಿಕೊಳ್ಳುವುದಾ  ತೆಗೆದಿಟ್ಟು  ಸತ್ತು ಬದುಕುವುದಾಹಾಕಿಕೊಂಡು ಬದುಕಿ ಸಾಯುವುದಾನಿರ್ಧರಿಸಲಾಗುತ್ತಿಲ್ಲ ಅವಳಿಗೀಗ ಕಚೇರಿಯ ರಾಜಕಾರಣ ಕೆಲಸದ ಕಸಿವಿಸಿಚಿಟ್ಟೆನಿಸುವ ತಲೆನೋವು ಏನೋ ಒಂದು ಬೇಯಿಸಿಟ್ಟರೆ “ಥೂ..ಉಪ್ಪುಮಯ ಪಲ್ಯ ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “ ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರುಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ ಮಾತಿಗೇನು ಕಮ್ಮಿ ಇಲ್ಲ ಖಾರಕ್ಕೆ ಮೆಣಸಿನ […]

ಕಾವ್ಯಯಾನ

ಗಝಲ್ ರತ್ನರಾಯ ಮಲ್ಲ ಮನಸು ಮರುಗುತಿದೆ ಗಾಲಿಬ್ಕನಸು ಬಳಲುತಿದೆ ಗಾಲಿಬ್ ಒಂಟಿತನವು ಮನೆ ಮಾಡಿದೆತನುವು ಸೊರಗುತಿದೆ ಗಾಲಿಬ್ ಖಿನ್ನತೆಯು ಗೂಡು ಕಟ್ಟಿದೆಹೃದಯ ನರಳುತಿದೆ ಗಾಲಿಬ್ ಬುದ್ಧಿ ಮಂಕಾಗಿದೆ ಇಂದುಮನವು ಎಡವುತಿದೆ ಗಾಲಿಬ್ ಇರುಳಲಿ ಕುಳಿತಿಹನು ‘ಮಲ್ಲಿ’ಬದುಕು ಕರಗುತಿದೆ ಗಾಲಿಬ್ ********

ಕಾವ್ಯಯಾನ

ಹೂಗನಸು ಬಾಲಕೃಷ್ಣ ದೇವನಮನೆ ಹಿತವಾದ ಹೂಗನಸಲಿಸಂಚಾರಿ ಮಧುರ ಭಾವದುಂಬಿತಿಳಿಯಾದ ಬಾನಲ್ಲಿ ರೆಕ್ಕೆ ಹರಡಿಇಳೆಗೆ ಚಂದ್ರನನೇ ಹೊತ್ತುತಂದಿದೆ ಕತ್ತಲೆ ಮೈಗೆ ಮುಸ್ಸಂಜೆಬಳಿದ ರಂಗು ಹಾಗೇ ಉಳಿದಿದೆತಬ್ಬಿಕೊಳುವ ತೆರೆಯ ಆಟದಂಡೆಯಲಿ ಇನ್ನೂ ಮುಂದುವರಿದಿದೆ… ಎಲೆಯುದುರಿದ ಶಿಶಿರಕೆತಂಗಾಳಿ ಬೀಸಿ ಚೈತ್ರ ಬಂದಿದೆಹೂ ದಳದ ಮೇಲೆಇಬ್ಬನಿ ಸಾಲು ಸಂತೆ ತೆರೆದಿದೆ ಚಿಗುರು ಮೊಗ್ಗಿನ ಮನಸುಪರಿಮಳದ ಪಯಣ ಹೊರಟಿದೆತುಂತುರು ಹನಿಗಳ ಹಿಂಡು ರೆಪ್ಪೆ ತೆರೆದುಹೂಗನಸಿಗೆ ಬೆಳಕು ಹರಿದಿದೆ **********

Back To Top