ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಜನಸಾಮಾನ್ಯರ
ಉಸಿರು ನಿಲ್ಲಿಸಿ
ದರ್ಪ ಮೆರೆದ
ನರನ ಮಾತು
ಮೌನವಾಗಿದೆ;

ಹಣದ
ಕಪಿಮುಷ್ಠಿಯಲಿ
ಹಂತಕರ ಸೃಷ್ಟಿಸಿ
ದ್ವೇಷವೆಂಬ ರೋಗದಿ
ಜೀವ ತೆಗೆದ
ಜೀವಿಯ
ಮುಖವಾಡ ಕಳಚಿದೆ;

ತೋಳ್ಬಲದ
ಕತ್ತಿಯ‌ ಅಂಚಿನಲಿ
ಹಣದಾಸೆ ತೋರಿಸಿ
ಕುರ್ಚಿಯ‌ ವ್ಯಾಮೋಹದಿ
ಪ್ರಾಣ ತೆಗೆದ
ವಿನಯದ
ದುರಹಂಕಾರ
ಮಣ್ಣಾಗಿದೆ;

ಕಾನೂನಿನ
ರಕ್ಷಕರೇ
ಅಪರಾಧಿಗಳ
ಆಮಿಷಕ್ಕೆ ಬಲಿಯಾಗಿ
ಸಹಾಯ ಹಸ್ತ
ಚಾಚಿದ
ಮೃಗಗಳ ಮೇಲೆ
ನ್ಯಾಯ ದೇವತೆಯ
ಕಣ್ಣು ಬಿದ್ದಿದೆ;

ಬಾಳಿ ಬದುಕಬೇಕಾದ
ಮುಗ್ದ ಯುವಕನನ್ನು
ದಬ್ಬಾಳಿಕೆಯ
ಕೆಂಡದಲಿ
ಕೊಲೆ ಮಾಡಿದ
ಕಟುಕರನ್ನು
ಕಾರಾಗೃಹ  ಕೈಬೀಸಿ
ಕರೆದಿದೆ;

ತೆರೆ ಹಿಂದಿನ
ಕುತಂತ್ರಗಳು ಕರಗಿ
ಹಣ ಅಧಿಕಾರ  ಪ್ರಭುತ್ವದ
ಕೈಗಳು
ಕಾನೂನಿನ ಕುಣಿಕೆಗೆ
ಸಿಲುಕಿ
ಸಂವಿಧಾನವು
ತನ್ನ ಅಭೇದ್ಯ
ಶಕ್ತಿಯನ್ನು
ನ್ಯಾಯದ ಚಾಟಿಯಲಿ
ಕರ್ಮವು
ಮರುಕಳಿಸಿದೆ;
ಡಾ.ಕಾಡಜ್ಜಿ ಮಂಜುನಾಥ

About The Author

1 thought on “ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ””

Leave a Reply

You cannot copy content of this page

Scroll to Top